Author: admin

ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಜೆ.ಸಿ.ಐ ಪುತ್ತೂರು ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರವು ನಡೆಯಿತು. ಈ ಕಾರ್ಯಕ್ರಮವನ್ನು ಜೆ.ಸಿ.ಐ ಪುತ್ತೂರು ಪೂರ್ವಾಧ್ಯಕ್ಷರಾದ ಶಶಿರಾಜ್ ರೈರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆ.ಸಿ.ಐ ಪುತ್ತೂರು ಅಧ್ಯಕ್ಷರಾದ ಮೋಹನ್ ಕೆ ರವರು ವಿದ್ಯಾಮಾತಾ ಅಕಾಡೆಮಿಯು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಸಹಕಾರವಿದೆ. ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ತರಬೇತಿಯ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕರೆ ನೀಡಿದರು. ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ, ಜೆ.ಸಿ.ಐ ಪುತ್ತೂರಿನ ತರಬೇತಿ ವಿಭಾಗದ ಉಪಾಧ್ಯಕ್ಷರಾದ ಭಾಗ್ಯೇಶ್ ರೈರವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಸಿ.ಐ ಪುತ್ತೂರು ತರಬೇತಿ ವಿಭಾಗದ ನಿರ್ದೇಶಕ ಸುಪ್ರೀತ್.ಕೆ.ಸಿರವರು ವ್ಯಕ್ತಿತ್ವ ವಿಕಸನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ತರಬೇತಿಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾದ ಸಮಯ ಪಾಲನೆ ಇತ್ಯಾದಿಗಳ ಬಗ್ಗೆ ತರಬೇತಿಯನ್ನು ನೀಡಿದರು. ವಿದ್ಯಾಮಾತಾ ಅಕಾಡೆಮಿಯಲ್ಲಿ 2023ರ ಸಾಲಿನಲ್ಲಿ ತರಬೇತಿಯನ್ನು ಪಡೆದು ಎಚ್.ಡಿ.ಎಫ್.ಸಿ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್…

Read More

ಸಮಾಜದ ಸರ್ವ ವರ್ಗ ಗೌರವಿಸುವ ವೃತ್ತಿ ಅದು ಶಿಕ್ಷಕ ವೃತ್ತಿ. ಕಾರಣ ಒಂದು ಆರೋಗ್ಯವಂತ ಸಮಾಜ ತನ್ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಬಹುದೊಡ್ಡ ಪಾತ್ರ ಉತ್ತಮ ಶಿಕ್ಷಕರದ್ದು. ಇಂದಿನ ಮಕ್ಕಳು ನಾಳಿನ ಜನಾಂಗ ಅವರನ್ನು ಯೋಗ್ಯ ನಾಗರೀಕರನ್ನಾಗಿ ರಾಷ್ಟ್ರದ ಯೋಗ್ಯ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರಿಗಿದೆ. ಹೀಗೆ ತನ್ನ ವೃತ್ತಿ ಗೌರವ ಹಾಗೂ ಸಾಮಾಜಿಕ ಹೊಣೆಗಳನ್ನು ಅರ್ಥ ಮಾಡಿಕೊಂಡು ತನ್ನ ಜೀವನದ ಮೂರೂವರೆ ದಶಕಗಳ ಕಾಲ ಶಿಕ್ಷಣ ಕ್ಷೇತ್ರಕ್ಕೆ ಸಾರ್ಥಕ ಸೇವೆ ಸಲ್ಲಿಸಿ, ನಿವೃತ್ತರಾದ ಮೇಲೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯಸ್ತರದ ಪ್ರಶಸ್ತಿಗಳಿಗೆ ಭಾಜನರಾದ ಅಪರೂಪದ ನಿವೃತ್ತ ಶಿಕ್ಷಕ ಕೆ.ರವೀಂದ್ರ ರೈ. ಸಾಹಿತಿಯಾಗಿ, ಸಂಘಟಕರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ನಿರ್ವಾಹಕರಾಗಿ, ಕೃಷಿಕರಾಗಿ ಬಹುಮುಖಿ ಸಾಧನೆಯ ಮುಖಾಂತರ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ ಹರೇಕಳದ ರಾಮಕೃಷ್ಣ ಫ್ರೌಢ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ ಕೆ.ರವೀಂದ್ರ ರೈ ಅವರು ನಾಲ್ಕು ಗೋಡೆಗಳ ಮಧ್ಯೆ…

Read More

ಶಿರ್ವ ಪದವು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಿರ್ವ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ರತನ್ ಕುಮಾರ್ ಶೆಟ್ಟಿಯವರ ಅಭಿನಂದನಾ ಸಮಾರಂಭವು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ಶಿರ್ವ ಪದವು ಸಮಾಜ ಮಂದಿರದಲ್ಲಿ ನಡೆಯಿತು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ ಮತ್ತು ಸುನಾಲಿನಿ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಮಾತನಾಡಿ ಯುವ ಕಾರ್ಯಕರ್ತ ರತನ್ ಶೆಟ್ಟಿಯವರ ಅಧಿಕಾರವಧಿಯಲ್ಲಿ ಗ್ರಾಮವು ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲಿ. ಗ್ರಾಮದ ಜನತೆಗೆ ಉತ್ತಮ ಸೇವೆ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಗ್ರಾ.ಪಂ. ಸದಸ್ಯ ನವೀನ್ ಕುಮಾರ್, ನಂದಳಿಕೆ ಚಾವಡಿ ಮನೆಯ ಸುಹಾಸ್ ಹೆಗ್ಡೆ, ಶಿರ್ವ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಉದ್ಯಮಿಗಳಾದ ಸುಧೀರ್ ಶೆಟ್ಟಿ ಅಟ್ಟಿಂಜ, ರಾಜೇಶ್ ಶೆಟ್ಟಿ ಶಬರಿ, ರಾಜೇಶ್ ಪೂಜಾರಿ ಭಾಗವಹಿಸಿದ್ದರು. ಶೇಖರ ಶೆಟ್ಟಿ ನಡಾಯಿ, ನವೀನ್ ಶೆಟ್ಟಿ ಗಂಗೆಜಾರು, ರಮೇಶ್ ಶೆಟ್ಟಿ ಕಡಂಬು,…

Read More

ಬೆಳಗಾವಿ ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟವು ಸಿ.ಪಿ.ಈಡ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಉತ್ತರ ವಿಭಾಗದ ಶಾಸಕರಾದ ಆಸಿಪ್ ಶೇಟ್ ಕ್ರೀಡೋತ್ಸವವನ್ನು ಉದ್ಘಾಟಿಸಿ, ಬಂಟ ಸಮಾಜದ ಕಾರ್ಯವೈಖರಿ, ನಿರಂತರ ಶ್ರಮ, ಅವಿರತವಾದ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡೋತ್ಸವದ ವಿವಿಧ ವಿಭಾಗಗಳಲ್ಲಿ ಕ್ರಿಕೆಟ್, ವಾಲಿಬಾಲ್, ತ್ರೋ ಬಾಲ್, ಹಗ್ಗ ಜಗ್ಗಾಟ, ರನ್ನಿಂಗ್ ರೇಸ್ ಇನ್ನಿತರ ಸ್ಪರ್ಧೆಗಳು ಇದ್ದವು. ಪುರುಷರು, ಮಹಿಳೆಯರು, ಮಕ್ಕಳು ಅತೀ ಉತ್ಸಾಹದಿಂದ ಭಾಗವಹಿಸಿದರು. ಕ್ರೀಡೋತ್ಸವದಲ್ಲಿ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾದ ವಿಠ್ಠಲ ಎಸ್ ಹೆಗಡೆ, ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಸನ್ನ ಶೆಟ್ಟಿ, ಕಾರ್ಯದರ್ಶಿ ಚೇತನ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಆನಂದ್ ಎನ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕ್ರೀಡಾ ಸಮಿತಿಯ ಉಳ್ತೂರು ಸಂತೋಷ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಕೀರ್ತಿಪ್ರಸಾದ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾದ ಪ್ರಭಾಕರ್ ಶೆಟ್ಟಿ, ಹಿರಿಯ ಸದಸ್ಯರಾದ ಉದಯ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ…

Read More

ವಿದ್ಯಾಗಿರಿ: ಸಜ್ಜಾದ ‘ಸಿರಿ ಸೊಬಗಿನ ಸಾಂಸ್ಕೃತಿಕ ನಗರಿ’ ವಿದ್ಯಾಗಿರಿ (ಮೂಡುಬಿದಿರೆ): ಸಾಂಸ್ಕೃತಿಕ ಸಿರಿ-ಸೊಬಗಿನ, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ, ಕಣ್ಮನಗಳಿಗೆ ರಸದೌತಣ ನೀಡುವ, ಪ್ರತಿ ವರ್ಷವೂ ವಿಭಿನ್ನ ಹಾಗೂ ಅನನ್ಯವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ಗೆ ವಿದ್ಯಾಗಿರಿ ಸಜ್ಜಾಗಿದೆ. ಅಬಾಲವೃದ್ಧರಾಗಿ ಸರ್ವರ ಪಂಚೇಂದ್ರಿಯಗಳಿಗೆ ರಸದೌತಣ ನೀಡುವ, ಮನ ತಣಿಸುವ ವಿರಾಸತ್, ಈ ಬಾರಿ ಡಿ.14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿವೆ. ಸಮೀಪದ ಕೃಷಿಸಿರಿ ವೇದಿಕೆ ಸೇರಿದಂತೆ ಆವರಣದಲ್ಲಿ ‘ಸಪ್ತ ಮೇಳ’ಗಳ ಸಂಗಮವು ಜನರಿಗೆ ಖುಷಿ ನೀಡಿದರೆ, ದೀಪಾಲಂಕಾರ, ಕಲಾಕೃತಿಗಳು, ಪುಷ್ಪ- ಫಲಗಳಿಂದ ನಂದನವನವೇ ಸೃಷ್ಟಿಯಾಗಿದೆ.‘ನೋಡಲೆರಡು ಕಣ್ಣು ಸಾಲದಮ್ಮಾ…’ ಎಂದು ವಿದ್ಯಾಗಿರಿಯು ಕೈ ಬೀಸಿ ಕರೆಯುತ್ತಿದೆ. ವಿದ್ಯಾಗಿರಿ ‘ಸಿರಿ ಸೊಬಗಿನ ಸಾಂಸ್ಕೃತಿಕ ನಗರಿ’ಯೇ ಎಂಬ ಅಚ್ಚರಿ ಮೂಡುವಂತಿದೆ. ರಥಾರತಿ:ಈ ಬಾರಿಯ ವಿರಾಸತ್‍ನ ವಿಶೇಷ ‘ರಥಾರತಿ’. ಮುಖ್ಯ ವೇದಿಕೆಯ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ ‘ವಿಶ್ವ ಬಂಟರ ಸಮ್ಮೇಳನ -2023’ ರ ಪ್ರಯುಕ್ತ ಅ.28 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ ‘ವಿಶ್ವ ಬಂಟರ ಕ್ರೀಡಾ ಕೂಟ ‘ ಹಾಗೂ ಅ.29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಒಕ್ಕೂಟದಿಂದ ಅ.28 ರಂದು ಶನಿವಾರ ಮತ್ತು ಅ.29 ರಂದು ರವಿವಾರ ಉಡುಪಿಯಲ್ಲಿ ವಿಶ್ವ ಬಂಟರ ಕ್ರೀಡಾ ಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ತಾರೆಯರು, ಅಂತಾರಾಷ್ಟ್ರೀಯ…

Read More

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉದ್ಯೋಗವನ್ನರಸಿಕೊಂಡು ಬಂದ ತುಳು ಕನ್ನಡಿಗರು ಸಮಾಧಾನಕರ ಉದ್ಯೋಗ ಗಿಟ್ಟಿಸಿಕೊಂಡ ಮೇಲೆ ಅಲ್ಲಿಗೇ ಸುಮ್ಮನಾಗುವುದಿಲ್ಲ. ಸದಾ ಉತ್ತಮ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಈ ಮಾತು ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ವ್ಯಾಪಾರ ವ್ಯವಹಾರಗಳಿರಲಿ, ಮನರಂಜನೆಯ ಕ್ಷೇತ್ರಗಳಿರಲಿ ಅಥವಾ ವೈದ್ಯಕೀಯ, ತಾಂತ್ರಿಕ, ಕೈಗಾರಿಕಾ ವಿಭಾಗಗಳೇ ಇರಲಿ ತಾವು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಆರ್ಥಿಕ ಭದ್ರತೆ ಹೊಂದುವವರೆಗೂ ಸಾಧನೆ ಮುಂದುವರಿಯುತ್ತದೆ. ಇನ್ನು ಕೆಲವು ಪದವೀಧರ ಯುವಕರು ತಮ್ಮ ಶಿಕ್ಷಣ ಅರ್ಹತೆಗಳಿಗೆ ಸರಿ ಹೊಂದುವ ಸಾಕಷ್ಟು ಆದಾಯ ವರಮಾನ ತರುವ ಉದ್ಯೋಗ, ಸಿಕ್ಕಿದ ಮೇಲೆ ತಮಗೆ ಬಾಲ್ಯದಿಂದಲೂ ಇದ್ದ ಆಸಕ್ತಿ ಹವ್ಯಾಸಗಳಿಗೆ ಸೂಕ್ತ ವೇದಿಕೆ ಸಿಕ್ಕುವ ನಿರೀಕ್ಷೆ ಹೊಂದಿರುತ್ತಾರೆ. ಸಿಕ್ಕಿತೆಂದರೆ ಅದನ್ನು ಇನ್ನಷ್ಟು ಬೆಳೆಸಿಕೊಂಡು ನಗರದ ಏಕತಾನತೆಯ ಬದುಕು ಬೇಸರ ತರದಂತೆ ತಮ್ಮ ಹವ್ಯಾಸಗಳಲ್ಲಿ ಆನಂದ ಕಾಣುತ್ತಾರೆ.. ಇನ್ನು ಕೆಲವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಿಕೊಂಡು ಸ್ನಾತಕೋತ್ತರ ಪಿ ಎಚ್ ಡಿ ಅಧ್ಯಯನ ಸಂಶೋಧನೆ ನಡೆಸಿ ಯಶಸ್ಸು ಸಂಪಾದಿಸಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ವಿಶೇಷ…

Read More

ಅಖಿಲ ಭಾರತ ತುಳು ಒಕ್ಕೂಟದ ಸಭೆಯು ಒಕ್ಕೂಟದ ಅಧ್ಯಕ್ಷರಾದ ಎ ಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ನಡೆಯಿತು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿಗಳಾದ ಕರುಣಾಕರ್ ಶೆಟ್ಟಿಯವರು ಉಳ್ಳಾಲ ತಾಲೂಕು ಸಮಿತಿಯ ರಚನೆ ಬಗ್ಗೆ ಮಾಹಿತಿ ನೀಡಿ, ಪ್ರಥಮವಾಗಿ ಓರ್ವ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದರು. ಅದರಂತೆ ಕೆ. ಟಿ ಸುವರ್ಣರ ಸೂಚನೆಯಂತೆ ನಿವೃತ್ತ ಮುಖ್ಯ ಉಪಾಧ್ಯಾಯರಾದ ಕೆ. ರವೀಂದ್ರ ರೈ ಅವರನ್ನು ಅಧ್ಯಕ್ಷರನ್ನಾಗಿ, ಆನಂದ ಕೆ ಅಸೈಗೋಳಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿತು. ನಂತರ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಶಿವರಾಮ ಶೆಟ್ಟಿ ಹಾಗೂ ವಿಜೇತ್ ಮಂಜನಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಭಾಧ್ಯಕ್ಷರಾದ ಎ.ಸಿ…

Read More

ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಉದ್ಯಮಿ, ದಾನಿ ಹಾಗೂ ಸಮಾಜ ಸೇವಕ ಎಂ.ಆರ್. ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಶ್ರೀಯುತ “ಬಂಜಾರ ಗೋಲ್ಡ್ ಪಿಂಚ್ ಕೊರಂಗ್ರಪಾಡಿ ಪ್ರಕಾಶ್ ಕೆ ಶೆಟ್ಟಿ” ಅವರು 25 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಮಾರ್ಗದರ್ಶಿಗಳಾದ ಶ್ರೀಯುತ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ಶ್ರೀಯುತ ಉಪೇಂದ್ರ ಶೆಟ್ಟಿ ಮತ್ತು ಭಾರತಿ ಶೆಟ್ಟಿ ಅವರ ಮುಖಾಂತರ ಶ್ರೀಯುತ ಪ್ರಕಾಶ್ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿದರು. ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಪ್ರಕಾಶ್ ಶೆಟ್ಟಿ ಅವರಿಗೆ ಕಟ್ಟಡದ ಬಗ್ಗೆ ಮಾಹಿತಿಯನ್ನು ಅಧ್ಯಕ್ಷರು ನೀಡಿದರು. ನಂತರ ಪ್ರಕಾಶ್ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ದೇಶ ವಿದೇಶದಲ್ಲಿರುವ ಸಮಸ್ತ ಬಂಟರ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಾ ಹಾಗೂ ಬಂಟರ ಸಮುದಾಯದ…

Read More

“ಇರೋದು ಒಂದೇ ಬದುಕು, ನಮ್‌ ಇಷ್ಟದಂಗೆ ನಾವ್‌ ಬಾಳ್ಬೇಕು, ಎಲ್ಲದ್ರಲ್ಲೂ ಎಲ್ಲದಕ್ಕೂ ಹೊಂದಾಣಿಕೆ ಮಾಡ್ಕೊಂಡ್‌ ಬಾಳಕಾಗಲ್ಲ. ಎಷ್ಟು ದಿನ ಇರ್ತಿವೋ ಗೊತ್ತಿಲ್ಲ! ಎಲ್ಲದಕ್ಕೂ ಅನುಸರಿಸಿಕೊಂಡು ಹೋಗು ಅನ್ನೋ ಮಾತನ್ನೇ ಓಬಿರಾಯನ ಕಾಲದಿಂದಲೂ ಕೇಳಿ-ಕೇಳಿ ಸಾಕಾಗಿದೆ. ನನಗೆ ಸ್ವತಂತ್ರ ಬೇಕು, ನನ್ನ ಬದುಕು ನನ್ನ ನಿರ್ಧಾರ ಅಷ್ಟೇ!’. ಇತ್ತೀಚಿನ ದಿನಗಳಲ್ಲಿ ತನ್ನದೇ ಬದುಕು ಕಟ್ಟಿಕೊಳ್ಳಲು ಹಂಬಲಿಸುವ ಮಕ್ಕಳು ಹೇಳುವ ಮಾತುಗಳಿವು. ಸ್ವ-ಇಚ್ಛೆಯ ಬದುಕಿನ ಹಂಬಲ ಅವರದು. ಆದರೆ ಹಿರಿಯರು ಹೇಳುವ ಕಿವಿಮಾತು, “ನೋಡಿ ಮಕ್ಕಳೇ ನೀವು ಬೆಳೆಯುತ್ತಿದ್ದೀರಿ, ಸ್ವಲ್ಪ ತಗ್ಗಿ ಬಗ್ಗಿ ನಡೆಯಬೇಕು, ಯಾರನ್ನೂ ಎದುರು ಹಾಕಿಕೊಳ್ಳಬಾರದು. ನೀವಂತೂ ನಿಮ್ಮದೇ ರೂಲ್ಸ್ ರೆಗ್ಯುಲೇಷನ್ಸ್ ಅಂತ ಫಾಲೋ ಮಾಡಿ, ಸುಮ್ನೆ ಇಲ್ಲ ಸಲ್ಲದ್ದರ ಬಗ್ಗೆ ದಾವಂತ ಪಡುತ್ತೀರಿ’ ಎನ್ನುವುದು ಸರ್ವೇಸಾಮಾನ್ಯ ವಿಷಯವಾಗಿ ಹೋಗಿದೆ. ಅದರಲ್ಲೂ ಮದುವೆಯಾಗಿ ಹೋಗುವ ಹೆಣ್ಣು ಮಕ್ಕಳ ಪಾಲಿಗೆ ಹೊಂದಾಣಿಕೆಯ ಮಹಾಮಂತ್ರವನ್ನು ಪಠಿಸಿಯೇ ಕಳಿಸುವುದು. ನಮಗೆಲ್ಲಾ ಗೊತ್ತಿರುವಂತೆ ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಬೆರೆತು ಬಾಳಬೇಕಾದುದು ಬದುಕಿನ ನಿಯಮ. ಆದರೆ ಹೊಂದಿಕೊಂಡು…

Read More