Author: admin
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಐಕಳ ಹರೀಶ್ ಶೆಟ್ಟಿಯವರು ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದು, ಆ ಮೂಲಕ ಬೇರೆಲ್ಲಾ ಜಾತಿ ಸಂಘಟನೆಗಳಿಗೆ ನಿಗಮ ಮಾಡಿ ಸ್ಥಾನಮಾನ ನೀಡುವುದಾದರೆ ಬಂಟ ಸಮಾಜವನ್ನು ಕಡೆಗಣಿಸುವ ಉದ್ದೇಶವಾದರೂ ಏನು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಟ ಸಮಾಜಕ್ಕೂ ನಿಗಮದ ಅಗತ್ಯತೆ ಇದ್ದು ಸಮಾಜಕ್ಕೆ ಮನ್ನಣೆ ನೀಡದಿದ್ದಲ್ಲಿ ಪೂರ ಬಂಟ ಸಮಾಜ ಒಂದಾಗಿ ಮುಂಬರುವ ಚುನಾವಣೆಯಲ್ಲಿ ಸಮಾಜದ ಶಕ್ತಿಯನ್ನು ತೋರಿಸಿ ಕೊಡುತ್ತೇವೆ ಎಂದು ಐಕಳ ಹರೀಶ್ ಶೆಟ್ಟಿಯವರು ನೀಡಿದ ಹೇಳಿಕೆಗೆ ಇಡೀ ಬಂಟ ಸಮಾಜ ಬದ್ಧವಾಗಿದೆ ಎಂದು ಹೇಳ ಬಯಸುತ್ತೇನೆ. ಸರಕಾರಿ ನೌಕರಿ, ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣದಲ್ಲಿ ಬಂಟ ಸಮಾಜ ಹಿಂದುಳಿಯಲು ಸರಕಾರದ ಈ ನೀತಿಯೇ ಕಾರಣವಾಗಿದೆ. ಬಂಟ ಸಮಾಜದಲ್ಲಿ ಉಳ್ಳವರು ಬಹಳಷ್ಟು ಜನರು ಇದ್ದಾರೆ, ಆದರೆ ಒಪ್ಪತ್ತಿನ ಊಟಕ್ಕೂ ಪರಿತಪಿಸುವ ಬಹಳಷ್ಟು ಜನ ಬಂಟ ಬಾಂಧವರೂ ಇದ್ದಾರೆ. ನಮ್ಮ ಸಮಾಜದಲ್ಲಿ ಶಾಸಕ ಸಂಸದರಾದವರು ತಮ್ಮ ಜಾತೀಯ ಸಂಘಟನೆಯನ್ನು ಬಲಪಡಿಸುವತ್ತ, ಸಮಾಜವನ್ನು…
ಕಾರ್ಕಳದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೂಡಬಿದಿರೆ ವಲಯದ ಯುವ ಬಂಟರು ಅತೀ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವುದರ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಾರ್ಕಳ ಯುವ ಬಂಟರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಮೂಡಬಿದಿರೆ ಯುವ ಬಂಟರ ಸಂಘವು ವಾಲಿಬಾಲ್ – ಪ್ರಥಮ, ತ್ರೋ ಬಾಲ್ – ಪ್ರಥಮ, ನೃತ್ಯ ಸ್ಪರ್ಧೆ – ತೃತೀಯ ಸ್ಥಾನವನ್ನು ಪಡೆದುಕೊಂಡು ಬಂಟ ಸಮಾಜದ ಪ್ರಶಂಸೆಗೆ ಪಾತ್ರವಾಯಿತು. ಯುವ ಬಂಟರ ಸಂಘದ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ಮನೋಜ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ, ಪ್ರ ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಉಪಾಧ್ಯಕ್ಷರಾದ ರಮೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಶೃತಿ ಶೆಟ್ಟಿ, ಆದರ್ಶ್ ಶೆಟ್ಟಿ, ಸುಧೀರ್ ಶೆಟ್ಟಿ, ದೀಪಕ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಯುವಶಕ್ತಿ ನಿಜವಾದ ರಾಷ್ಟ್ರಶಕ್ತಿ ಎಂಬ ಘೋಷ ವಾಕ್ಯವನ್ನು ಆಗಾಗ ಉಲ್ಲೇಖಿಸುವ ನಮ್ಮ ನೆಚ್ಚಿನ ಪ್ರಧಾನಮಂತ್ರಿ ಮೋದೀಜಿಯವರ ಮಹಾದಿಚ್ಛೆಗೆ ಬಲ ತುಂಬುವ ಮಹಾನ್ ಕಾರ್ಯನಿರತ ರಾಕೇಶ್ ಅಜಿಲರ ಸಾಧನೆಯ ಕತೆ ನಿಜಕ್ಕೂ ರೋಚನೀಯ. ಅಜಿಲರು ಆರಿಸಿದ ಕ್ಷೇತ್ರ ಹಣ ಸಂಪಾದನೆಯದಲ್ಲ. ಆದರೆ ಅದೆಷ್ಟೋ ರಾಷ್ಟ್ರಪ್ರೇಮಿ ಯುವಕರಿಗೆ ಯೋಗ್ಯ ತರಬೇತಿ ನೀಡಿ NCC ಮತ್ತು ARMY ಗೆ ಆಯ್ಕೆಯಾಗಲು ಬೇಕಾಗುವ ಶಿಸ್ತು, ಆತ್ಮಸ್ಥೈರ್ಯ, ಕಷ್ಟ ಸಹಿಷ್ಣುತೆ, ದೇಹಬಲ ಹಾಗೂ ರಾಷ್ಟ್ರ ಪ್ರೇಮದ ತೇಜಸ್ಸು ತುಂಬುವ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ನೆನೆಸಿಕೊಂಡರೆ ಯಾರಿಗಾದರೂ ಅಭಿಮಾನ ಮೂಡದೇ ಇರದು. ರಾಕೇಶ್ ಅಜಿಲರು ಕವತ್ತಾರು ಬೈಲಗುತ್ತು ರಮೇಶ್ ಅಜಿಲ ಹಾಗೂ ಪಾಂಡ್ಯಾರು ಬರ್ಪಾಣಿ ಪ್ರಮೀಳಾ ಅಜಿಲ ದಂಪತಿಯರಿಗೆ ಹಿರಿಯ ಪುತ್ರನಾಗಿ ಜನಿಸಿದರು. ಹಾಸನದ ಕಡ್ಲೂರು ಎಂಬಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಮುಂದೆ STDP ಕಟೀಲು ಹಾಗೂ ಪೂರ್ಣ ಪ್ರಜ್ಞ ಅದಮಾರು ಇಲ್ಲಿ ಶಿಕ್ಷಣ ಮುಂದುವರಿಸಿದರು. ಪದವಿ ಪೂರ್ವ ತರಗತಿಯ ಹನ್ನೆರಡನೆ ತರಗತಿಯ ಇತಿಹಾಸ ವಿಷಯದಲ್ಲಿ ರಾಜ್ಯಕ್ಕೆ ಮೂರನೇ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿ ಬಳ್ಕುಂಜೆ ನಿವಾಸಿ ಗುಲಾಬಿಯವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದು ಅವರಿಗೆ ಮನೆ ನಿರ್ಮಾಣಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕನ್ನು ಗುಲಾಬಿಯವರಿಗೆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಉಪಸ್ಥಿತರಿದ್ದರು.
ಜೀವನ ಎಂಬ ದೋಣಿಗೆ ಸೂಕ್ತ ದಿಗ್ಸೂಚಿಯ ಅಗತ್ಯತೆ ಇದ್ದು, ಇತರರ ಸಲಹೆ ಸೂಚನೆ ಪಡೆದು ವಿದ್ಯಾರ್ಜನೆ ಗಳಿಸಿದರೆ ಯಶಸ್ಸು ಗಳಿಸಲು ಸಾಧ್ಯ ಎಂದು ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ರೈ ಅವರು ಹೇಳಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಿಕ್ಸೂಚಿ ಭಾಷಣ ಮಾಡಿದ ರಾಮಕೃಷ್ಣ ಪದವಿ ಕಾಲೇಜ್ ನ ಪ್ರಾಂಶುಪಾಲ ಪ್ರೊ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಷಯಗಳಲ್ಲೂ ಸಕ್ರಿಯರಾಗಿದ್ದರೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ ಎಂದರು. ಮುಖ್ಯ ಅತಿಥಿ ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಾತನಾಡಿ ವಿದ್ಯಾರ್ಥಿಗಳು ದೂರದರ್ಶಿತ್ವ ಹೊಂದಿ, ಸತತ ಪರಿಶ್ರಮ ಪಡೆಯಬೇಕು ಎಂದರು.…
ತುಳು ಚಿತ್ರರಂಗದ ಭರವಸೆಯ ಯುವನಟ, ಪಿಲಿ ತುಳು ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ಚಿತ್ರದ ಕಥೆಯನ್ನೂ ಬರೆದ ಭರತ್ ಭಂಡಾರಿ ನಟನೆಯ ಪಿಲಿ ತುಳು ಸಿನಿಮಾ ಮುಂಬಯಿಯಾದ್ಯಂತದ 9ನೇ ಪ್ರದರ್ಶನವು ಜೂನ್ 18 ರಂದು ಕನಕಿಯ ಮೂವಿಮೆಕ್ಸ್ ಥಿಯೇಟರ್ ನಲ್ಲಿ ತೆರೆ ಕಂಡಿತು. ಬಹು ಜನರ ಬೇಡಿಕೆಯಂತೆ ಏಕ ಕಾಲಕ್ಕೆ 2 ಪರದೆಯಲ್ಲಿ ಪ್ರದರ್ಶನ ಕಂಡ ಸಾಹಸ, ಪ್ರೇಮ, ಹಾಸ್ಯ, ಲವಲವಿಕೆಯಿಂದ ಕೂಡಿದ ಈ ಪಿಲಿ ಪ್ರದರ್ಶನದ ಶುಭಾರಂಭದ ನಿಮಿತ್ತ ನಡೆದ ಸರಳ ಸಮಾರಂಭಕ್ಕೆ ವಿಶೇಷ ಗಣ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಮಾತನಾಡುತ್ತಾ ನಾಯಕ ನಟ ಭರತ್ ಭಂಡಾರಿಯವರ ಇದು ಮೊದಲ ತುಳು ಸಿನೆಮಾ. ಯುವ ಹಾಗೂ ಪ್ರತಿಭಾವಂತನ ಈ ಸಾಹಸಕ್ಕೆ ಇನ್ನೂ ಹೆಚ್ಚಿನ ಜನಮನ್ನಣೆ ಪ್ರಾಪ್ತಿಯಾಗಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ವಿವಿಧ ಚಲನಚಿತ್ರಗಳು ತೆರೆ ಕಾಣಲಿ ಎಂದು ಶುಭ ಹಾರೈಸಿದರು. ಗಣ್ಯ ಅತಿಥಿಯಾಗಿ ಆಗಮಿಸಿದ ಐಕಳ ಹರೀಶ್ ಶೆಟ್ಟಿಯವರು ಚಿತ್ರರಂಗದಲ್ಲಿ…
ಮುಂಬಯಿ (ಆರ್ಬಿಐ), ಮೇ. 27: ಬರಹಗಾರರಿಗೆ ಅಸಕ್ತಿ ಮತ್ತು ಸೃಜನಶೀಲತೆ ಇದ್ದರೆ ಉತ್ತಮ ಬರಹಗಾರ ಆಗಲು ಸಾಧ್ಯ. ಇದನ್ನು ತರಬೇತಿ ಪಡೆದು ಗಳಿಸಲು ಸಾಧ್ಯವಿಲ್ಲ. ಇಂತಹ ಕಲೆ ದೈವದತ್ತವಾಗಿ ಬಂದಿರುತ್ತದೆ ಅದಕ್ಕೆ ಪ್ರೋತ್ಸಾ ನೀಡುವ ಕಾರ್ಯ ಎಳವೆಯಲ್ಲಿ ಹೆತ್ತವರಿಂದ ಆಗಬೇಕು ಅಶ್ವಿತಾ ಶೆಟ್ಟಿ ಇಂತಹ ಅವಕಾಶವನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬರಹಗಾರ್ತಿಯಾಗಿ ಬೆಳೆಯಲು ಅವಕಾಶವಿದ್ದು, ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಕರ್ನಾಟಕ ಹೈಕೋರ್ಟ್ನ ನ್ಯಾಯಾದೀಶ ಎಸ್.ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟರು. ಬೆಂಗಳೂರಿನ ಟೋಟಲ್ ಕನ್ನಡ ಮತ್ತು ಐಲೇಸಾ ದಿ ವಾಯ್ಸ್ ಆಫ್ ಓಸಿಯನ್ ಸಂಸ್ಥೆಯ ಸಹಯೋಗದಲ್ಲಿ ಮುಂಬಯಿಯ ಯುವ ಲೇಖಕಿ ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ `ಮರ್ಸಿಡಿಸ್ ಬೆಂಜ್ನ ಹಿಂದೆ“ಶನಿವಾರ ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿ ಯುವ ಬರಹಗಾರ್ತಿಯ ಚೊಚ್ಚಲ ಕೃತಿ ದೇವಸ್ಥಾನದಲ್ಲಿ ಬಿಡುಗಡೆ ಶ್ಲಾಘನೀಯ ಎಂದ ಅವರು ಸಾಹಿತಿಗಳ ಕೊಡುಗೆ ಸಮಾಜ ಗುರುತಿಸದಿರುವುದು ಖೇದಕರ ಎಂದರು. ಮಂಗಳೂರು…
ಕುಂದಾಪುರ ತಾಲ್ಲೂಕಿನ ಕಂಡ್ಲೂರು ಸರಕಾರಿ(ಕನ್ನಡ) ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ ಇವರು BAS ಕಂಪೆನಿಯ ಶೂ ವಿತರಿಸಿದರು. ಈ ಸಂದರ್ಭ ಶ್ರೀ ಕನ್ನಿಕಾ ಎಜ್ಯುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷ ಗೌರಿ ಶ್ರೀಯಾನ್, ಅಂಪಾರು ವಲಯದ ಸಿ.ಆರ್.ಪಿ ರಾಘವೇಂದ್ರ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ಮೊಗವೀರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನಾ ಶೆಟ್ಟಿ, ಶಿಕ್ಷಕ ವರ್ಗದ ರೇಖಾ, ವೀಣಾ, ಜ್ಯೋತಿ, ಜ್ಯೋತಿ ಗ್ಲಾಡಿಸ್, ರವಿ, ನಾಗರಾಜ್, ಸುನೀತಾ, ಲಲಿತಾ, ಚಂದ್ರ, ಬಸವ ನಾಯಕ್, ಹರ್ಷ ಕೋಟೇಶ್ವರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಪುಣೆ : ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಮಹಿಳಾ ವಿಭಾಗದ ವತಿಯಿಂದ ನಿಗ್ಡಿಯಲ್ಲಿರುವ ಹೋಟೆಲ್ ಪುಣೆ ಗೇಟ್ ಸಭಾಂಗಣದಲ್ಲಿ “ಆಟಿಡೊಂಜಿ ತಮ್ಮನ” ಎನ್ನುವ ವಿಶಿಷ್ಟ ತುಳುನಾಡ ಸಂಪ್ರದಾಯವನ್ನು ಸಾರುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಇವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ ಶೆಟ್ಟಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಯಲ್ ಕೊನೊಟ್ ಬೋಟ್ ಕ್ಲಬ್ ಅಧ್ಯಕ್ಷರಾದ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ,ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಬಹಳ ಕಷ್ಟದ ದಿನಗಳಾಗಿತ್ತು. ಆಟಿ ತಿಂಗಳಲ್ಲಿ ವಿಶೇಷವಾಗಿ ಆರೋಗ್ಯಕ್ಕೆ ಪೂರಕವಾದ ಪ್ರಕೃತಿದತ್ತವಾದ ಆಹಾರ ಪದಾರ್ಥಗಳನ್ನು ಸೇವಿಸುವ ಪರಿಪಾಠವಿತ್ತು. ಅಂತಹ…
ಮೂಡಬಿದ್ರೆ ಯುವ ಕಾಂಗ್ರೆಸ್ ವತಿಯಿಂದ ಬೆಳುವಾಯಿ ಅಂಬೂರಿ ನಿವಾಸಿಗಳಾದ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನಾಗರಾಜ್ ಶೆಟ್ಟಿ ಅವರಿಗೆ ದೆಹಲಿಯ ಎಂಪೈರ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನವಾಗಿದ್ದು ಮತ್ತು ಇವರ ಸಹೋದರರಾದ ಮಧ್ವರಾಜ್ ಶೆಟ್ಟಿ ಇವರು ಕೂಡ ಮಂಗಳೂರು ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಿ ಮತ್ತು ಗೌರವ ಡಾಕ್ಟರೇಟ್ ಪ್ರದಾನವನ್ನು ಪಡೆದುಕೊಂಡ ಇಬ್ಬರು ಸಾಧಕರನ್ನು ಗುರುತಿಸಿ ಅವರ ಸ್ವಗೃಹದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು ಹಾಗೂ ಅವರ ಸಾಧನೆಗೆ ಮತ್ತಷ್ಟು ದೇವರ ಆಶೀರ್ವಾದ ಒದಗಿ ಬರಲಿ ಎಂದು ಹಾರೈಸಲಾಯಿತು.