Author: admin
ಫೆ. 19ರಂದು ಮುಂಬಯಿಯಲ್ಲಿ ಚಿಣ್ಣರಬಿಂಬದ ಇಪ್ಪತ್ತನೆಯ ವಾರ್ಷಿಕ ಮಕ್ಕಳ ಉತ್ಸವ ಪ್ರತಿಭಾ ಸ್ಪರ್ಧೆ, ಸಾಂಸ್ಕೃತಿಕ ಉತ್ಸವದ ಉದ್ಘಾಟನ ಕಾರ್ಯಕ್ರಮ
ಮುಂಬಯಿ:- ಚಿಣ್ಣರಬಿಂಬದ ಇಪ್ಪತ್ತನೆಯ ವರ್ಷದ ಮಕ್ಕಳ ಉತ್ಸವವು ದಿನಾಂಕ 19/2/2023ರ ಭಾನುವಾರದಂದು ಬೆಳಿಗ್ಗೆ 10ರಿಂದ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ.ಟಿ.ಭಂಡಾರಿ ಸಭಾಂಗಣದಲ್ಲಿ ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಕ್ಕಳ ಉತ್ಸವವನ್ನು ಶ್ರೀ ಸಿ.ಟಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ ಮುಂಬಯಿ ಸಂಸದರಾದ ಮಾನ್ಯ ಶ್ರೀ ಗೋಪಾಲ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಆರ್.ಜಿ ಗ್ರೂಪ್ ಇದರ ಸಂಸ್ಥಾಪಕ ಕಾರ್ಯಾಧ್ಯಕ್ಷರಾಗಿರುವ ಶ್ರೀ ಕೆ. ಪ್ರಕಾಶ್ ಶೆಟ್ಟಿ ಇವರು ಆಗಮಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಅಧ್ಯಕ್ಷರಾಗಿರುವ ಶ್ರೀ ಐಕಳ ಹರೀಶ್ ಶೆಟ್ಟಿ, ವಿ.ಕೆ ಗ್ರೂಪ್ನ ಆಡಳಿತ ನಿರ್ದೇಶಕರಾಗಿರುವ ಕೆ.ಎಂ.ಶೆಟ್ಟಿ, ರಾಕ್ಷಿ ಡೆವಲಪರ್ಸ್ ಪ್ರೈ.ಲಿ ಇದರ ನಿದೇಶಕರಾಗಿರುವ ಶ್ರೀ ರಾಜೇಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ನಿರ್ದೇಶಕರಾಗಿರುವ ಪ್ರವೀಣ್ ಭೋಜ ಶೆಟ್ಟಿ, ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾಗಿರುವ ಶ್ರೀ ಆನಂದ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ನಿನ…
ದಿನಾಂಕ:04/06/1960ರಂದು ಇವರ ಜನನವಾಯಿತು. ಇವರು ಬಾಲ್ಯದಲ್ಲಿಯೇ ಹೆಚ್ಚಾಗಿ ಯಕ್ಷಗಾನದ ಬಗ್ಗೆ ಆಸಕ್ತಿಯುಳ್ಳವರಿಗಿದ್ದು, ನಂತರ ಮಧುರಾದಿ ರಸಗಳ ಸಮಾಪಾಕವಾಗಿ ಸೌಂದರ್ಯ ಶ್ರೀಮಂತಿಗೆಯಿಂದ ಸುಶೋಭಿತವಾಗಿ ಯಕ್ಷಗಾನದ ಯಾರ ಅನೂಕರಾಣೆಯು ಇಲ್ಲದೆ ತನ್ನದೇ ಶೈಲಿಯಿಂದ ಯಕ್ಷಗಾನಕ್ಕೆ ತನ್ನದ್ದೆ ಆದ ಕೊಡುಗೆಯನಿತ್ತವರು. ಮೇಳವನ್ನು ಸೇರುವ ಮೊದಲು ಇವರಿಂದಲೇ ಸ್ಥಾಪಿತವಾದ “ಶ್ರೀ ವೀರಭದ್ರೇಶ್ವರ ಕಲಾ ಸಂಘ” ಇದು ಅವರ ನಿರ್ದೇಶನದಲ್ಲಿ ಯಶಸ್ವಿ ಕಂಡಿತ್ತು. ನಂತರ ಬದುಕನ್ನು ಕಟ್ಟಿಕೊಳ್ಳುದಕ್ಕಾಗಿ ಆಯ್ಕೆಮಾಡಿಕೊಂದದ್ದು ಯಕ್ಷಗಾನ ಮೇಳ. ಯಕ್ಷರಂಗದ ಬೀಷ್ಮನೆಂದೇ ಖ್ಯಾತರಾದ ಎಂ. ಎಂ. ಹೆಗ್ಡೆಯವರ ಸಂಚಾಲಕತ್ವದ ಮಾರಣಕಟ್ಟೆ ಮೇಳವನ್ನು ಸೇರಿಕೊಂಡರು ಇವರು ಮಾರಣಕಟ್ಟೆ ಮೇಳದಲ್ಲಿ ಹೆಸರಾಂತ ಆಗ್ರಾಮನ್ಯ ಕಲಾವಿದರಾದ ಐರಬೈಲು ಆನಂದ ಶೆಟ್ಟಿ, ನಾಗೂರು ಶ್ರೀನಿವಾಸ, ದೇವಾಡಿಗ, ಮೊಳಹಳ್ಳಿ ದಿ||ಹೆರಿಯ ನಾಯ್ಕ, ಏಳಬೇರು ಶೇಖರ್ ಶೆಟ್ಟಿ ಮುಂತಾದವರೊಂದಿಗೆ ರಂಗವನ್ನು ಹಂಚಿಕೊಂಡಿದ್ದಾರೆ. ಇವರು “ಕೌರವ”,”ದ್ರೋಣ”, ವಿಕ್ರಮ”, “ಕೋಲಮುನಿ”, “ಕಮಲಭೂಪ” ಮುಂತಾದ ಪಾತ್ರಗಳನ್ನು ಪಾರಂಪರಿಕ ಪರಿದಿಯಲ್ಲಿ ಪ್ರಸ್ತುತ ಪಡಿಸುವ ರಂಗ ತಾದ್ಯಾತ್ಮ ಶ್ಲಾಘನೀಯವಾದದ್ದು. ಇವರು ಬಾಳಸಂಗಾತಿಯಾಗಿ ಪಾರ್ವತಿ ಎನ್ನುವವರ ಕೈಹಿಡಿದು ಇವರ ದಾಂಪತ್ಯದ ಪ್ರತೀಕವಾಗಿ ಪ್ರತ್ವಿರಾಜ್,…
ರಥಸಪ್ತಮಿ ಭೂಮಿಯ ಸಕಲ ಜೀವರಾಶಿಗಳ ಚಟುವಟಿಕೆಗೆ ಕಾರಣನಾದ ಪ್ರತ್ಯಕ್ಷವಾಗಿ ಕಾಣುವ ಸೂರ್ಯದೇವರ ಹಬ್ಬ. ಭಾರತೀಯ ಪಂಚಾಗ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು. ಇದೆ ಫೆಬ್ರವರಿ 7ರಂದು ಸೂರ್ಯನು ತನ್ನ ಹಳೆಯರಥವನ್ನು ಬಿಟ್ಟು ಹೊಸರಥ ಹತ್ತುವ ದಿನ. ರಥ ಸಪ್ತಮಿಯ ದಿನ ಸೂರ್ಯೊದಯದ ಸಮಯದಲ್ಲಿ ನದಿ, ಸಮುದ್ರದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ ನೀಡಿದರೆ ಸಕಲಪಾಪ ಹಾಗೂ ದುಃಖ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ರಥ ಸಪ್ತಮಿಯ ಆಚರಣೆಯ ಹಿಂದೆ ಬಲವಾದ ವೈಜ್ಞಾನಿಕ ಕಾರಣವಿದೆ.ಆರೋಗ್ಯಕ್ಕೆ ಸೂರ್ಯನ ಶಾಖ ಹಾಗೂ ಜೀವಿಗಳಲ್ಲಿ ಹೊಸತನ ಮೂಡಲು ಸಹಾಯಕವಾಗುವ ಸೂರ್ಯ ಕಿರಣಗಳಲ್ಲಿ ಹೇರಳ ವಿಟಮಿನ್ ಡಿ ಇದೆ. ಯೋಗಾಸಗಳಲ್ಲಿ ಮೊದಲ ಪ್ರಾಶಸ್ತ್ಯ ವೂ ಸೂರ್ಯ ನಮಸ್ಕಾರಕ್ಕೆ. ಆದಿತ್ಯ ಹೃದಯ ಸೋತ್ರಪಾರಾಯಣ ಇಂದಿಗೂ ನಂಬಿದವರಿಗೆ ಇಂಬು ನೀಡುವಂತಹದ್ದು. ಸೂರ್ಯ ಉಪಾಸನೆಯಿಂದ ಸಾಂಬ ಎಂಬವ ತನ್ನ ಕುಷ್ಠರೋಗವನ್ನು ಗುಣ ಮಾಡಿಕೊಂಡು ಇಲ್ಲಿ ಸೂರ್ಯ ನು ಸಾಂಬನಿಗೆ ಪ್ರತ್ಯಕ್ಷನಾಗಿದ್ದ ದಿನವೆ ರಥ ಸಪ್ತಮಿ. ದಕ್ಷಿಣಾಯಣ ಮುಗಿದು ಸೂರ್ಯ…
ವೃತ್ತಿಪರ ಶ್ರೇಷ್ಠತೆ ಉತ್ತೇಜಿಸಲು ಐಬಿಸಿಸಿಐ ಶ್ರಮಿಸುತ್ತಿದೆ : ಕೆ.ಸಿ.ಶೆಟ್ಟಿ (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ನ.23: ಉದ್ಯಮವನ್ನು ಪ್ರಾರಂಭಿಸುವ ಮೊದಲು ಕೆಲವು ವ್ಯವಹಾರ ಅನುಭವ ಪಡೆದು ಉದ್ಯಮದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದ್ಯೆ. ಉದ್ಯಮಶೀಲತೆ ಮತ್ತು ವೃತ್ತಿಪರ ಶ್ರೇಷ್ಠತೆಯನ್ನು ಉತ್ತೇಜಿಸಲು ಐಬಿಸಿಸಿಐ ಗಮನಾರ್ಹ ಪಾತ್ರ ವಹಿಸುತ್ತದೆ. ನಮ್ಮಲ್ಲಿನ ಉದ್ಯಮಶೀಲರ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ವಂತಕ್ಕೆ ಲಾಭೋದ್ದೇಶವಿಲ್ಲದ ಐಬಿಸಿಸಿಐ ಉದ್ಯಮಶೀಲರ ಸರ್ಕಾರೇತರ ಸಂಸ್ಥೆ ಇದಾಗಿದೆ. ಉದ್ಯಮಿಗಳು ಮತ್ತು ಉದ್ಯಮ, ವ್ಯಾಪಾರ, ವ್ಯವಹಾರಗಳ ಸಮನ್ವಯಕವಾಗಿ ಇದು ಶ್ರಮಿಸುತ್ತಿದ್ದು, ಯುವ ಉದ್ಯಮಿಗಳಲ್ಲಿ ವ್ಯವಹಾರ ಸಾಮರ್ಥ್ಯ ನಿರ್ಮಾಣ ಮತ್ತು ಉದ್ಯಮಗಳ ವೇಗವರ್ಧಕಗಳೊಂದಿಗೆ ಅವಕಾಶ ಸಂಪರ್ಕಿಸಲು ಮಾರ್ಗದರ್ಶನ ನೀಡುತ್ತದೆ ಎಂದು ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಐಬಿಸಿಸಿಐ) ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಸಿ.ಶೆಟ್ಟಿ (ಕುತ್ಪಾಡಿ ಚಂದ್ರ ಶೆಟ್ಟಿ) ತಿಳಿಸಿದರು. ಕಳೆದ ಬುಧವಾರ ಸಂಜೆ ಅಂಧೇರಿ ಪೂರ್ವದಲ್ಲಿನ ಸಾಕಿನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್ನ ಸಭಾಗೃಹದಲ್ಲಿ ಐಬಿಸಿಸಿಐ ಸಂಸ್ಥೆ ಆಯೋಜಿಸಿದ್ದ ಜ್ಞಾನ ಶೃಂಗಸಭೆ-2ರ ಅಧ್ಯಕ್ಷತೆ ವಹಿಸಿ…
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಚನಿಲ ತಿಮ್ಮಪ್ಪ ಶೆಟ್ಟಿಯವರು ನ.10ರಂದು ಮಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಡಾ. ಎಂ.ಕೆ.ಪ್ರಸಾದ್, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಚನಿಲ ತಿಮ್ಮಪ್ಪ ಶೆಟ್ಟಿಯವರು ಬಿಜೆಪಿಯ ಸಕ್ರಿಯ ನಾಯಕರಾಗಿದ್ದು ಗ್ರಾಮ ಸಮಿತಿಯಿಂದ ಜಿಲ್ಲಾ ಸಮಿತಿಯ ತನಕ ಪಕ್ಷದಲ್ಲಿ ಅನ್ಯಾನ್ಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಡಿ.ವಿ.ಸದಾನಂದ ಗೌಡ ಅವರು ವಿಧಾನ ಸಭೆಗೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿಯೇ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿ ಬಿಜೆಪಿ ಗೆಲುವಿಗೆ ಕಾರಣಕರ್ತರಾಗಿದ್ದ…
ಕಡಲ ತೀರ ಸ್ವಚ್ಛತೆಯನ್ನು ಮಾಡುವ ಮೂಲಕ ನಾವು ಮುಂದಿನ ಯುವ ಪೀಳಿಗೆಗೆ ಮಾದರಿಯಾದಂತಹ ಕಾರ್ಯವನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಸಹ ದೇವರು ಕೊಟ್ಟಂತಹ ಪ್ರಕೃತಿಯೆಂಬ ಪವಿತ್ರ ಸ್ವತ್ತಿನ ಪಾಲಕರು. ಇದರ ರಕ್ಷಣೆಯ ಹೊಣೆ ನಮ್ಮದು ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಹೇಳಿದರು. ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅರಣ್ಯ ಇಲಾಖೆ ಕುಂದಾಪುರ ವಲಯ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ಎಫ್ಎಸ್ಎಲ್ ಇಂಡಿಯಾ, ಭಂಡಾರ್ಕಾರ್ಸ್ ಕಾಲೇಜಿನ ಎನ್ಸಿಸಿ ಬೆಟಾಲಿಯನ್ ಹಾಗೂ ರೆಡ್ಕ್ರಾಸ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೋಡಿ ಬೀಚ್ನಲ್ಲಿ ರವಿವಾರ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾ| ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್. ಮಾತನಾಡಿ, ಪರಿಸರ ದಿನಾಚರಣೆ ಹಾಗೂ ತಂಬಾಕು ನಿಷೇಧ ಒಂದಕ್ಕೊಂದು ಪೂರಕವಾದಂತಹ ಕಾರ್ಯಕ್ರಮ. ಪರಿಸರಕ್ಕೆ ಆಗುತ್ತಿರುವ…
ಸುರತ್ಕಲ್ ಬಂಟರ ಸಂಘದ ನಿರ್ದೇಶಕರು ಹಾಗೂ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಗಂಗಾಧರ್ ಶೆಟ್ಟಿ ಅವರು ವಿಧಿವಶರಾಗಿದ್ದಾರೆ.
ಸುರತ್ಕಲ್ ಬಂಟರ ಸಂಘದ ನಿರ್ದೇಶಕರು ಹಾಗೂ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಗಂಗಾಧರ್ ಶೆಟ್ಟಿ ( ಪಲ್ಲವಿ ಸುರತ್ಕಲ್ ) ಅವರು ವಿಧಿವಶರಾಗಿದ್ದಾರೆ. ಎಲ್ಲರೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಗಂಗಾಧರ್ ಶೆಟ್ಟರ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಪೂಂಜಾ, ಜಗನ್ನಾಥ ಶೆಟ್ಟಿ ಬಾಳ, ಸಮಾಜ ಸೇವಕ ಸತೀಶ್ ಶೆಟ್ಟಿ ಮುಂಚೂರು ಕೆಳಗಿನಮನೆ ಇವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ನಾಯಕ ಕ್ಯಾ. ಬೃಜೇಶ್ ಚೌಟ ಅವರು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬೃಜೇಶ್ ಚೌಟ ಅವರು ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ಹೆಸರು ಮಾಡಿ ಸೇನೆಗೆ ಸೇರ್ಪಡೆಯಾಗಿದ್ದರು. ಯುಪಿಎಸ್ಸಿ ಆಯೋಜಿಸುವ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ ಪರೀಕ್ಷೆ ಹಾಗೂ ಎಸ್ಎಸ್ ಬಿ ಇಂಟರ್ವ್ಯೂನಲ್ಲಿ ತೇರ್ಗಡೆಗೊಂಡು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂ ಸೇನೆಯ ಪ್ರತಿಷ್ಠಿತ 8 ಗೋರ್ಖಾ ರೈಫಲ್ಸ್ ನ 7 ನೇ ಬೆಟಲಿಯನ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2011 ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳಿದ್ದ ಬೃಜೇಶ್ ಚೌಟ ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 2013 ರಲ್ಲಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2016 ರಿಂದ 19 ರವರೆಗೆ…
ಆಳ್ವಾಸ್ ಕಾಲೇಜಿನಲ್ಲಿ ಸ್ವಯಂ ಸೇವಕರ ದಿನ ಕುರಿತ ವಿಶೇಷ ಉಪನ್ಯಾಸ ‘ಸೇವಾ ಮನೋಭಾವ ಕಟ್ಟಿಕೊಟ್ಟ ವಿವೇಕಾನಂದರು’
ವಿದ್ಯಾಗಿರಿ: ‘ನಮ್ಮ ದೇಶದಲ್ಲಿ ಸೇವೆ ಎಂಬುದನ್ನು ವಿಭಿನ್ನವಾಗಿ ಕಟ್ಟಿಕೊಟ್ಟವರು ಸ್ವಾಮಿ ವಿವೇಕಾನಂದರು’ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಸ್ವಯಂ ಸೇವಕರ ದಿನ-2023ರ ಅಂಗವಾಗಿ ಆಳ್ವಾಸ್ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಕಾಲೇಜಿನ ಚಿಗುರು ವಿದ್ಯಾರ್ಥಿ ವೇದಿಕೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಭಾರತದಲ್ಲಿ ಇನ್ನೊಬ್ಬರಿಗೆ ನಿಸ್ವಾರ್ಥದಿಂದ ಮಾಡುವ ಸಹಾಯಕ್ಕೆ ಸೇವೆ ಎಂದು ಕರೆದರೆ, ವಿದೇಶಗಳಲ್ಲಿ ಇದನ್ನು ಸಾಮಾಜಿಕ ಚಟುವಟಿಕೆ ಎಂದು ಗುರುತಿಸುತ್ತಾರೆ. ಯಾವಾಗ ನಿರೀಕ್ಷೆಗಳು ಶೂನ್ಯವಾಗುತ್ತೋ, ಆಗ ಮಾಡುವ ಸಾಮಾಜಿಕ ಚಟುವಟಿಕೆ ಸೇವೆಯಾಗಿ ಗುರುತಿಸಿಕೊಳ್ಳುತ್ತದೆ’ ಎಂದರು. ‘ಭಗವಂತ ಗರ್ಭಗುಡಿಯಲ್ಲಿ ಇರೋದಿಲ್ಲ, ವ್ಯಕ್ತಿಗಳ ಹೃದಯದಲ್ಲಿರುತ್ತಾನೆ. ಪರಬ್ರಹ್ಮ ಸ್ವರೂಪಿ ಆನಂದ ನೀಡುವ ಏಕೈಕ ಕ್ರಿಯೆ ಸೇವೆ. ಇತರರ ದುಃಖಕ್ಕೆ ಸ್ಪಂದಿಸಿದಾಗ ಸಿಗುವ ಸಂತೋಷ ನಮ್ಮ ಕಷ್ಟಕ್ಕೆ ಸ್ಪಂದಿಸಿದಾಗಲೂ ಸಿಗುವುದಿಲ್ಲ’ ಎಂದರು. ‘ಜೀವ ಸೇವೆಯನ್ನು ಯಾರು ಮಾಡುತ್ತಾರೋ ಅವರು ಶಿವ ಸೇವೆಯನ್ನು ಮಾಡಿದ ಹಾಗೆ. ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಹೃದಯಕ್ಕೆ ಅದ್ಭುತ ಆನಂದ ಸಿಗುತ್ತೆ. ಆತ್ಮಕ್ಕೆ ಆನಂದ ಸಿಗುವುದು ಸೇವೆಯಿಂದ…
ಗುಣಮಟ್ಟ ಶುದ್ಧತೆ ಹಾಗೂ ಆರೋಗ್ಯಕರ ಕೋಳಿ ಮಾಂಸಕ್ಕೆ ಹೆಸರಾಗಿರುವ ಲೈಫ್ ಲೈನ್ಸ್ ಟೆಂಡರ್ ಚಿಕನ್ ನ 43 ನೇ ಶಾಖೆ ಮಂಗಳೂರಿನ ಯೆಯ್ಯಾಡಿ ಜಂಕ್ಷನ್ ನಲ್ಲಿ ಆರಂಭಗೊಂಡಿತು. ಮಳಿಗೆಯನ್ನು ಉದ್ಘಾಟಿಸಿದ ಭಾರತ್ ಬೀಡಿ ವರ್ಕ್ಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಸುಬ್ರಾಯ ಎಂ. ಪೈ ಮಾತನಾಡಿ, ಲೈಫ್ ಲೈನ್ಸ್ ಚಿಕನ್ ಆರೋಗ್ಯದ ಕೋಳಿ ಮಾಂಸವನ್ನು ವಿತರಿಸಿ ಜನ ಮೆಚ್ಚುಗೆ ಗಳಿಸಿದೆ. ಕರಾವಳಿ ಮೂಲದ ಕಿಶೋರ್ ಕುಮಾರ್ ಹೆಗ್ಡೆ ಚಿಕ್ಕಮಗಳೂರಿನಲ್ಲಿ ಉದ್ಯಮ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ಇದೀಗ ಹುಟ್ಟೂರಿನಲ್ಲಿಯೂ ಮಳಿಗೆ ಆರಂಭಿಸಿ ಜನತೆಗೆ ಆರೋಗ್ಯಕರ ಕೋಳಿ ಮಾಂಸ ವಿತರಣೆಗೆ ಮುಂದಾಗಿದ್ದಾರೆ. ಜನತೆ ಅವರನ್ನು ಪ್ರೋತ್ಸಾಹಿಸಲಿದ್ದಾರೆ ಎಂದು ಶುಭ ಹಾರೈಸಿದರು. ಲೈಫ್ ಲೈನ್ಸ್ ಫೀಡ್ಸ್(ಇಂಡಿಯಾ) ಪೈ.ಲಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೆ.ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ಬೆಂಗಳೂರು, ಹಾಸನ, ಕೊಡಗು,ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರಿನಲ್ಲಿ ಶಾಖೆ ಇದ್ದು ಕೊಲ್ಕತ್ತಾ, ಗೋವಾ, ಕೇರಳ, ಭೂತಾನ್ ಸೇರಿದಂತೆ ದೇಶದ ಹಲವೆಡೆ ಲೈಫ್ ಲೈನ್ ಚಿಕನ್ ಒದಗಿಸಲಾಗುತ್ತಿದೆ. ಭೂತಾನ್…