Author: admin

ಸಂಘಟಕ, ಸಮಾಜ ಸೇವಕ, ಯುವ ಉದ್ಯಮಿ ರಾಕೇಶ್ ಶೆಟ್ಟಿ ಬೆಳ್ಳಾರೆ ಅವರು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕೋಶಾಧಿಕಾರಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿರುವ ರಾಕೇಶ್ ಶೆಟ್ಟಿ ಅವರು ಅತಿಥಿ ಎಂಬ ಸಸ್ಯಾಹಾರಿ ಹೋಟೆಲ್ ನ ಮಾಲಕರಾಗಿದ್ದಾರೆ. ತನ್ನ ಸರಳ ಶಿಸ್ತಿನ ಗುಣ ನಡತೆಯಿಂದ ಎಲ್ಲರೊಂದಿಗೆ ಬೆರೆತು ಸುಖ ದುಃಖ ಗಳಿಗೆ ಸದಾ ಬೆರೆಯುವ ಶ್ರೀಯುತರ ಸಾಧನೆ, ಸಮಾಜಸೇವೆಗೆ ಧರ್ಮಪತ್ನಿ ಪೆಲತ್ತೂರು ಸುನೀತಾ ಶೆಟ್ಟಿ ಹಾಗೂ ಪುತ್ರಿ ಶ್ರೀಖಾ, ಪುತ್ರ ಕವಿನ್ ರವರು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ.

Read More

ಕರ್ಮ ಕಾರ್ಯ ಮಾಡುವಾಗ ನಾನಲ್ಲ, ಸಮಾಜಕ್ಕಾಗಿ ಮಾಡುವವನು ಎಂಬ ಆತ್ಮ ಸ್ಮರಣೆ ನಮ್ಮಲ್ಲಿರಬೇಕು. ಕರ್ಮಫಲವನ್ನು ಅನುಭವಿಸುವವನು ಕೂಡಾ ನಾನಲ್ಲ. ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಯಾವುದೇ ಕಾರ್ಯ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಅದು ಸೃಷ್ಠಿಯ ನಿಯಮ. ಒಳ್ಳೆಯ ಕಾರ್ಯಕ್ಕೆ ಉತ್ತಮ ಫಲ ಸಿಕ್ಕಿಯೇ ಸಿಗುತ್ತದೆ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೆ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ದಿಯನ್ನು ಪಡೆಯಲು ಸಾದ್ಯ. ನಮ್ಮಲ್ಲಿರುವ ವಿವೇಕ ಚಿಂತನೆಯಿಂದ ಯಾವುದೇ ಪ್ರತ್ಯಾಪೇಕ್ಷೆ ಇಲ್ಲದೇ ಮಾಡುವ ಕಾರ್ಯವೇ ಶ್ರೇಷ್ಠವಾದುದು ಎಂದು ಮಣಿಪಾಲ್ ಹಾಸ್ಪಿಟಲ್ ನ ಕಾರ್ಯಾಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ನುಡಿದರು. ಬಂಟರ ಸಂಘ ಪುಣೆ ಇದರ ವಾರ್ಷಿಕೊತ್ಸವ ಸ್ನೇಹ ಸಮ್ಮಿಲನ ಸಮಾರಂಭವು ಜ 26ರಂದು ಬಾಣೇರ್ ನಲ್ಲಿರುವ ಪುಣೆ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ…

Read More

ವಿದ್ಯಾಗಿರಿ (ಮೂಡುಬಿದಿರೆ): ಲಕ್ಷಾಂತರ ಮಕ್ಕಳನ್ನು ಸತ್ಪ್ರಜೆ ಮಾಡುವ ಆಳ್ವಾಸ್, ವಿರಾಸತ್ ಹಾಗೂ ವಿವಿಧ ಮೇಳಗಳ ಮೂಲಕ ಎಲ್ಲರ ಹೃದಯದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಭಾರತ್ ಸ್ಕೌಟ್ಸ್-ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ. ಜಿ. ಆರ್. ಸಿಂಧ್ಯ ಶ್ಲಾಘಿಸಿದರು. ಇಲ್ಲಿನ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 29ನೇ ಆಳ್ವಾಸ್ ವಿರಾಸತ್ಅಂಗವಾಗಿ ಕೃಷಿಸಿರಿ ಆವರಣದಲ್ಲಿ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆಯಲಿರುವ ನಾಲ್ಕು ದಿನಗಳ ಪ್ರದರ್ಶನ ಹಾಗೂ ಮಹಾಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಳ್ವಾಸ್ ವಿರಾಸತ್ ಇಂದು ರಾಜ್ಯದಾದ್ಯಂತ ಮನೆಮಾತಾಗಿದೆ. ಡಾ.ಎಂ. ಮೋಹನ ಆಳ್ವ ಅವರು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಅದ್ವಿತೀಯ ನಾಯಕರಾಗಿದ್ದಾರೆ. ಪ್ರತಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಅವರ ಗುಣ ಹಾಗೂ ಶೈಕ್ಷಣಿಕ ಬದಲಾವಣೆಗೆ ತ್ವರಿತವಾಗಿ ಸ್ಪಂದಿಸುವ ರೀತಿ ಅನನ್ಯ ಎಂದರು. ಸ್ಕೌಟ್ಸ್ ಗೈಡ್ಸ್ ಒಳ್ಳೆಯ ವ್ಯಕ್ತಿಗಳನ್ನು ರೂಪಿಸುವ ಅಂತರ ರಾಷ್ಟ್ರೀಯ ಚಳವಳಿ, 200 ದೇಶಗಳಲ್ಲಿದೆ.…

Read More

ಮೀರಾ ಭಾಯಂದರ್ ಪರಿಸರದಲ್ಲಿ ಸಾಮಾಜಿಕ, ಧಾರ್ಮಿಕ ಸೇವೆಗಳನ್ನು ಮಾಡುತ್ತಾ ಸಂಘಟಕರಾಗಿ, ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ, ನವತರುಣ ಮಿತ್ರ ಮಂಡಳಿಯ ಗೌ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿರುವ ಬಳ್ಕುಂಜೆ ಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ (ಕೊಟ್ರಪಾಡಿ) ಅವರನ್ನು ಭಾರತೀಯ ಜನತಾ ಪಕ್ಷದ ದಕ್ಷಿಣ ಭಾರತೀಯ ಘಟಕ ಮೀರಾ ಭಾಯಂದರ್ ನ ಅಧ್ಯಕ್ಷರಾಗಿ ಮಹಾರಾಷ್ಟ್ರ ಬಿಜೆಪಿ ಸಮಿತಿಯು ಆಯ್ಕೆ ಮಾಡಿದೆ. ಆಯ್ಕೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಬಿಜೆಪಿ ಸಮಿತಿಯ ಪದಾಧಿಕಾರಿಗಳು, ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಮೀರಾ ಭಾಯಂದರ್ ನ ಮಾಜಿ ಬಿಜೆಪಿ ಎಂಎಲ್ ಎ ನರೇಂದ್ರ ಮೆಹ್ತಾ, ಮೀರಾ ಭಾಯಂದರ್ ನ ಬಿಜೆಪಿ ಅಧ್ಯಕ್ಷ ಕಿಶೋರ್ ಶರ್ಮಾ, ಮೀರಾ ಭಾಯಂದರ್ ನ ನಗರ ಸೇವಕ ಅರವಿಂದ ಆನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನರೇಂದ್ರ ಮೆಹ್ತಾ ಅವರ ಶಿಫಾರಸ್ಸಿನ ಮೇಲೆ ರವೀಂದ್ರ ಶೆಟ್ಟಿ ಕೊಟ್ರಪಾಡಿ ಅವರು ದ. ಭಾರತೀಯ ಘಟಕದ ಅಧ್ಯಕ್ಷರಾಗಿ…

Read More

ಪನ್ವೇಲ್ ನ ಪ್ರಸಿದ್ಧ ಕ್ರೀಡಾ ಸಂಸ್ಥೆ ಕರಾವಳಿ ಸ್ಪೋರ್ಟ್ಸ್ ಮತ್ತು ಎಜುಕೇಶನಲ್ ಟ್ರಸ್ಟ್ (ರಿ.) ಇದರ 12 ನೇ ವಾರ್ಷಿಕೋತ್ಸವ ಸಮಾರಂಭವು ನ್ಯೂ ಪನ್ವೇಲ್ ಪಶ್ಚಿಮ ಖಾಂದ ಕಾಲೊನಿಯ ಬಿಜೆಪಿ ಜನ ಸಂಪರ್ಕ ಕಾರ್ಯಾಲಯದ ಸಭಾಂಗಣದಲ್ಲಿ ಧಾರ್ಮಿಕ ಹಾಗೂ ಸನ್ಮಾನ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು. ಅದೇ ದಿನ ಪ್ರಧಾನಿ ನರೇಂದ್ರ ಮೋದಿಯವರಿಂದ ಅಯೋಧ್ಯೆಯಲ್ಲಿ ರಾಮಮಂದಿರದ ಮಹಾ ಉದ್ಘಾಟನಾ ಕಾರ್ಯಕ್ರಮವು ಜರಗಿದ ಹಿನ್ನಲೆಯಲ್ಲಿ ಕರಾವಳಿ ನಿರ್ವಹಣಾ ತಂಡವು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲಿಗೆ ಸಂಪೂರ್ಣವಾಗಿ ಧಾರ್ಮಿಕ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಿತ್ತು. ಕರಾವಳಿ ಸ್ಪೋರ್ಟ್ಸ್ ಮತ್ತು ಎಜುಕೇಶನಲ್ ಟ್ರಸ್ಟ್ ನ ಗೌರವಾಧ್ಯಕ್ಷ ಮಹಾಬಲ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕಾಳಿಕಾಂಬಾ ವಿನಾಯಕ ಟ್ರಸ್ಟ್ (ರಿ.) ಅಧ್ಯಕ್ಷ ಸಿಎ ಶ್ರೀಧರ ಆಚಾರ್ಯ ಮುಖ್ಯ ಅತಿಥಿಯಾಗಿ ಹಾಗೂ ಡಾ. ಆರತಿ ಮಲಿಕ್, ಎಂ.ಡಿ., (ಪ್ಯಾಥೋ), ಆರತಿ ಮಲಿಕ್ ಲ್ಯಾಬ್, ನ್ಯೂ ಪನ್ವೇಲ್ ಮತ್ತು ಡಾ. ಸ್ವಾತಿ ಲಿಖಿತೆ, ಎಂಬಿಬಿಎಸ್, ಡಿಸಿಎಚ್ (ಲಿಖಿತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,…

Read More

ಬದುಕು ಕಟ್ಟಿಕೊಳ್ಳುವ ಸವಾಲಿನ ನಡುವೆ ಬೆಂಗಳೂರಿನಲ್ಲಿ ಟೆಕ್ನಿಶಿಯನ್ ಆಗಿ ದುಡಿಯುತ್ತಿದ್ದ ಯುವಕ ಆರ್. ರಾಜೇಶ್ ಶೆಟ್ಟಿ ಇಂದು ದೇಶದ ಉದ್ದಗಲ ವ್ಯಾಪಿಸಿರುವ ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯ ಕೋಟ್ಯಂತರ ವಹಿವಾಟಿನ ಯಶಸ್ವಿ ಉದ್ಯಮಿ. ಸಂಸ್ಥೆ ರಜತ ಸಂಭ್ರಮದಲ್ಲಿರುವಾಗಲೇ ಐತಿಹಾಸಿಕ ಅಯೋಧ್ಯೆಯ ಶ್ರೀರಾಮ ಮಂದಿರದ ಸಮಗ್ರ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಹೊಣೆ ಅವರ ಬಳಗಕ್ಕೆ ಲಭಿಸಿದೆ. ಇವರು ಕರಾವಳಿ ಕರ್ನಾಟಕದ ದ. ಕ. ಜಿಲ್ಲೆಯ ಮೂಡಬಿದಿರೆಯವರು. ಸಾಫ್ಟ್ ವೇರ್ ಎಂಜಿನಿಯರಿಂಗ್ ಆಗಬೇಕೆಂದಿದ್ದ ರಾಜೇಶ್, ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪೂರೈಸಿ ಅಲ್ಲೇ ಟೆಕ್ನಿಷಿಯನ್ ಆಗಿ ಬದುಕು ಕಟ್ಟಿಕೊಳ್ಳಲು ಒದ್ದಾಡಿದರು. ತಾನಿದ್ದ ಕಂಪನಿಯಲ್ಲಿ ಕೆಲಸ ಇನ್ನೇನು ಕಾಯಂ ಆಗುತ್ತದೆ ಎನ್ನುವಷ್ಟರಲ್ಲೇ ಮೇಲಾಧಿಕಾರಿಯ ಒತ್ತಡಕ್ಕೆ ಕಟ್ಟು ಬಿದ್ದು ತನ್ನದೇ ಸಂಸ್ಥೆ ತೆರೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು ಬದುಕಿಗೇ ಹೊಸ ತಿರುವು ನೀಡಿತು. ಅಂದು ಒತ್ತಡಕ್ಕೆ ಸಿಲುಕಿ ಸ್ಥಾಪಿಸಿದ್ದ ಶಂಕರ್ ಹೆಸರಿನ ಸಂಸ್ಥೆ ಇಂದು ಶಂಕರ್ ಎಲೆಕ್ಟ್ರಿಕಲ್ಸ್ ಸರ್ವೀಸಸ್ ಇಂಡಿಯಾ ಪ್ರೈ. ಲಿ. ಎಂಬ ಬೃಹತ್ ಸಂಸ್ಥೆಯಾಗಿ…

Read More

ವಿಶ್ವದರ್ಶನ ಕನ್ನಡ ದಿನಪತ್ರಿಕೆ ಮತ್ತು ಪ್ರಜಾ ದರ್ಶನ ಪತ್ರಿಕೆಯ ಮಾಧ್ಯಮ ಸಹಯೋಗದಲ್ಲಿ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಧಾರವಾಡದ ರಂಗಾಯಣ ಸಭಾಭವನದಲ್ಲಿ ವಿಜ್ರಂಭಣೆಯಿಂದ ಜರುಗಿತು. ಕಾರ್ಯಕ್ರಮವು ದೇವರ ಸ್ತುತಿಯೊಂದಿಗೆ ದೀಪ ಬೆಳಗುವುದರೊಂದಿಗೆ ಉದ್ಘಾಟನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ. ಭಾವೈಕ್ಯತೆಯ ಸಂಗಮವಾಗಿ ಸಂಸ್ಕೃತಿಯ ನೆಲೆಬೀಡು ಹುಬ್ಬಳ್ಳಿಯು ಮುಖ್ಯ ತಾಣ. ಬಹುಸಂಖ್ಯಾತರು ವಾಸಿಸುವ ನಿಸರ್ಗ ರಮಣೀಯ ತಾಣ. ಕವಿಶ್ರೇಷ್ಠರು, ಮಠಮಂದಿರಗಳು, ದಾಸ, ಸಾಹಿತ್ಯ ಶ್ರೇಷ್ಠ, ಸಂಸ್ಕೃತಿಯ ನೆಲೆಬೀಡು, ಮಠಾಧೀಶರ ತವರೂರಾದ ಹುಬ್ಬಳ್ಳಿಯ ರಮಣೀಯ ತಾಣದಲ್ಲಿ ಸಾಹಿತ್ಯ ಸಿಂಚನವಾದ “ಎಸ್. ಎಸ್ ಪಾಟೀಲ್ ಅವರ ಸಾರಥ್ಯದಲ್ಲಿ ಜಗತ್ತಿನಾದ್ಯಂತ ಪ್ರಸರಣ ಹೊಂದುತ್ತಿರುವ “ವಿಶ್ವದರ್ಶನ ಕನ್ನಡ ದಿನಪತ್ರಿಕೆ” ವರುಷ ಪೂರೈಸಿದ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮದ ಅನಾವರಣ ನಡೆಯಿತು. ಇಂದಿನ ದಿನಮಾನಸದಲ್ಲಿ ಪತ್ರಿಕೆಗಳ ಶ್ರಮ ಬೆಟ್ಟದಷ್ಟಿದೆ. ಪತ್ರಿಕೆಯ ಓದುಗರ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಇರುವಂತಹ ಅಪಾರ ಜ್ಞಾನ ಹೊಂದಿರುವ ತಂದೆ-ತಾಯಿಗಳು ಮಕ್ಕಳಿಗೆ ಶೈಕ್ಷಣಿಕ ಮತ್ತು ಸಾಹಿತ್ಯ ಪರವಾದಂತಹ…

Read More

ತುಳುನಾಡ ಪೌಂಡೇಶನ್ ಪುಣೆ ಹಾಗೂ ಕನ್ನಡ ಮಾಧ್ಯಮ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳ ಜಂಟಿ ಆಯೋಜನೆಯಲ್ಲಿ ಡಾ. ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲಿನ ತಳ ಮಹಡಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಸಂಘದ ಸಲಹಾ ಸಮಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ ನಿಟ್ಟೆ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಒಂದು ಪುಣ್ಯದ ಕಾರ್ಯವಾಗಿದೆ. ರಕ್ತದಾನದ ಮೂಲಕ ಎಷ್ಟೋ ಜನರ ಜೀವವನ್ನು ಉಳಿಸಬಹುದಾಗಿದೆ. ವಿಜ್ಞಾನ ಯುಗದಲ್ಲಿ ಯಾವುದೇ ಪದಾರ್ಥಗಳನ್ನು ಕೃತಕವಾಗಿ ತಯಾರಿಸಬಹುದು. ಆದರೆ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದುದರಿಂದ ರಕ್ತದಾನ ಶ್ರೇಷ್ಠವಾದ ದಾನವಾಗಿದೆ ಎಂದರು. ಸಂಘದ ಗೌರವಾಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಸ್ವಾಗತಿಸಿ ಮಾತನಾಡಿ, ರಕ್ತದಾನ ಶ್ರೇಷ್ಠವಾದ ಮಹಾದಾನವಾಗಿದೆ. ಸಮಾಜದ ಜನರ ಬದುಕಿಗೆ ನೆರವಾಗುವ ಇಂತಹ ಕಾರ್ಯಗಳು ನಡೆಯುತ್ತಿರಲಿ. ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಮಾಧ್ಯಮ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕ ವೃಂದಕ್ಕೂ ವಂದನೆಗಳು ಎಂದರು. ಕನ್ನಡ ಮಾಧ್ಯಮ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆಯವರು ಮಾತನಾಡಿ, ನಮ್ಮ ಶಾಲೆಯ ಹಿರಿಯ…

Read More

ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆನುವಂಶಿಕ ಮೊಕ್ತೇಸರರನ್ನಾಗಿ ಉದ್ಯಮಿ ಅರುಣ್‌ ಕುಮಾರ್‌ ಶೆಟ್ಟಿ ಅವರನ್ನು ನೇಮಿಸಿ ರಾಜ್ಯ ಧಾರ್ಮಿಕ ಪರಿಷತ್ತು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ ಹೊರಡಿಸಿದೆ. 52 ವರ್ಷಗಳಿಗಿಂತಲೂ ಅಧಿಕ ಕಾಲ ಅರುಣ್‌ ಶೆಟ್ಟಿ ಅವರೇ ಈ ದೇವಸ್ಥಾನದ ಆಡಳಿತ ನಡೆಸುತ್ತಿದ್ದರು. ಖಾಸಗಿ ಆಡಳಿತದಲ್ಲಿದ್ದ ದೇವಸ್ಥಾನ ದತ್ತಿ ಇಲಾಖೆಯ ಅಧೀನಕ್ಕೆ ಒಳಪಟ್ಟು, ಬಳಿಕ ಆದಾಯದಲ್ಲಿ “ಎ’ ಶ್ರೇಣಿಯಲ್ಲಿ ಗುರುತಿಸಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆನುವಂಶಿಕ ಮೊಕ್ತೇಸರರು ಎಂದು ತಮ್ಮ ಮನೆತನವನ್ನು ಘೋಷಿಸಬೇಕೆಂದು ಅವರು ಇಲಾಖೆಗೆ ಮನವಿ ಮಾಡಿದ್ದರು. 10 ವರ್ಷಗಳ ಬಳಿಕ ಈ ಬಗ್ಗೆ ಆದೇಶ ಹೊರಬಿದ್ದಿದ್ದು ಈ ದೇವಾಲಯಕ್ಕೆ ಆನುವಂಶಿಕ ಮೊಕ್ತೇಸರರನ್ನು ನೇಮಕ ಮಾಡುವ ವಿಚಾರದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲೆಂದೇ ಅ. 13ರಂದು 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ ಮೊದಲ ಸಭೆ ಸೇರಿತ್ತು. ಅದರಲ್ಲಿ ವಿಸ್ತೃತ ಚರ್ಚೆ ನಡೆದು, ಅಭಿಪ್ರಾಯಗಳ ಮಂಡನೆಯಾಗಿ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ…

Read More

ಪ್ರಸ್ತುತ ಕಾಡುತ್ತಿರುವ ಸರ್ವವ್ಯಾಪಿ ಸಮಸ್ಯೆಯು ನಮ್ಮ ಕೆಲಸದ ವಿಧಾನ, ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುವ ರೀತಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡುತ್ತಿರುವ ರೀತಿ, ನಮ್ಮ ಸ್ನೇಹಿತರ ಜೊತೆ, ಆತ್ಮೀಯರ ಜೊತೆ ನಮ್ಮ ವರ್ತನೆ – ಹೀಗೆ ಹಲವು ಹತ್ತು ವಿಷಯಗಳಲ್ಲಿ ಬದಲಾವಣೆ ತಂದಿದೆ, ಕೆಲವೇ ಕೆಲವರು ಈ ಸ್ಥಿತ್ಯಂತರ ಶಾಶ್ವತವಲ್ಲವೆಂದು ನಂಬಿ, ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರ ವ್ಯವಹಾರಗಳು ಅವನತಿ ಹಂತದಲ್ಲಿವೆ. ಇ-ಕಾಮರ್ಸ್ ಉದ್ಯಮ ಅರಳುತ್ತಿದೆ. ಆದರೆ ಪ್ರವಾಸೋಧ್ಯಮ ಭಯಾನಕ ಕುಸಿತ ಕಂಡಿದೆ. ಪ್ರಕೃತಿಯನ್ನು ಅರ್ಥ ಮಾಡಿಕೊಂಡರೆ ನಾವು ಅನೇಕ ವಿಷಯಗಳನ್ನು ಕಲಿಯಬಹುದು. ಪ್ರಕೃತಿಯಲ್ಲಿ ಸರಳತೆ, ಸಂಕೀರ್ಣತೆ ಎರಡು ಮೇಳೈಸಿವೆ. ಉಳಿವಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದರೂ ಪ್ರಪಂಚದ ಜೀವಿಗಳಲ್ಲಿ ಹೊಂದಾಣಿಕೆಯಿದೆ. ಜೀವನ ಎಲ್ಲರಿಗೂ ಒಂದೇ ಬಗೆಯ ಅವಕಾಶಗಳನ್ನು ನೀಡುತ್ತದೆ. ಅವುಗಳನ್ನು ಬಳಸಿಕೊಳ್ಳುವುದು ಒಬ್ಬ ವ್ಯಕ್ತಿಯ ಮನೋರೂಡಿಯನ್ನು ಅವಲಂಬಿಸಿದೆ. ಸ್ಥಿರವಾದ ಮನಸ್ಥಿತಿ ಹೊಂದಿರುವ ಒಂದು ಗುಂಪಿನ ಜನರು ತಮ್ಮ ಸಾಮರ್ಥ್ಯ ಸ್ಥಿರವಾಗಿದೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ನಂಬುತ್ತಾರೆ. ಆದರೆ ಪರಿಸ್ಥಿತಿಗೆ ತಕ್ಕಂತೆ…

Read More