Author: admin
ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾಗಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಅವರನ್ನು ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಕೆ.ಪಿ ಹೇಮಂತರಾಜು ಆದ್ದೇಶಿಸಿದ್ದಾರೆ. ಆದೂರು ಏಳ್ನಾಡುಗುತ್ತು ಕಿಟ್ಟಣ್ಣ ರೈ ಮತ್ತು ಮೇಗಿನಗುತ್ತು ಸುಂದರಿ ರೈ ದಂಪತಿಯರ ಪುತ್ರನಾಗಿರುವ ಶಿವನಾಥ ರೈ ಮೇಗಿನಗುತ್ತು ಅವರು ಕಲ್ಪಣೆ ಸರ್ವೆ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ವೆ ಎಸ್ ಜಿಎಂ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಪಡೆದಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಇವರು ಭಕ್ತಕೂಡಿ ಶ್ರೀರಾಮ ಭಜನಾ ಮಂದಿರದಲ್ಲಿ 14 ವರ್ಷಗಳ ಕಾಲ ಅಧ್ಯಕ್ಷರಾಗಿ, ಮಂದಿರ ಪುನರ್ ನಿರ್ಮಾಣದ ರೂವಾರಿಯಾಗಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಸರಕಾರಿ ಪ್ರೌಢಶಾಲೆ ಕಲ್ಪಣೆ ಸರ್ವೆ ಇದರ ಕಾರ್ಯಾಧ್ಯಕ್ಷರಾಗಿ, ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ ರಂಗಮಂದಿರ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ…
“ಕೀರ್ತಿಕಾಮನೆ ಬೆನ್ನ ಹಿಡಿದು ಹೋದರೆ ಮನುಜ ತಂತಿ ಮೇಲಿನ ಆಟ, ಅದು ದೊಂಬರಾಟ ; ಹೂ ಅರಳಿ ನಗುವಂತೆ ಇರಲಿ ಸಹಜತೆ ಮನದಿ ದೂರವಿರು ಹೊಗಳಿಕೆಗೆ” – ಮುದ್ದು ರಾಮ ಒಬ್ಬೊಬ್ಬರ ಬದುಕು ಒಂದೊಂದು ರೀತಿ. ಒಬ್ಬರದು ಗಳಿಸಬೇಕು ಗಳಿಸಿದನ್ನು ಉಳಿಸಬೇಕು ಅದೇ ಬದುಕು ಅನ್ನುವುದಾದರೆ, ಇನ್ನೊಬ್ಬರದ್ದು ದುಡಿಯಬೇಕು ದುಡಿ ದುಡಿದು ಗಂಟು ಕಟ್ಟಿ ನನ್ನ ಕುಟುಂಬದವರ ಜೀವನ ಹಸನುಗೊಳಿಸಬೇಕು. ಮತ್ತೊಬ್ಬರದ್ದು ದುಡಿಯುತ್ತಿರಬೇಕು ದುಡಿ- ದುಡಿಯುತ್ತಾ ಬದುಕು ಕೊನೆಯಾಗಲಿ ಅನ್ನುವುದಾದರೆ, ಬೆರಳೆಣಿಕೆಯ ಜನರ ವಿಚಾರ ಮಾತ್ರ ಬೇರೆಯದೇ ಆಗಿರುತ್ತದೆ. ನಾನು ಶ್ರಮಿಕನಾಗಬೇಕು ನನಗಾಗಿಯಲ್ಲ ನನ್ನವರಿಗಾಗಿಯೂ ಅಲ್ಲ, ಕೇವಲ ನನ್ನ ಸುತ್ತ-ಮುತ್ತಲ ಸಮಾಜಕ್ಕಾಗಿ ದುಡಿಯಬೇಕು ಅನ್ನುವವರ ಒಂದು ವರ್ಗ ಇರುತ್ತದೆ. ಆ ವರ್ಗಕ್ಕೆ ಸೇರಿದವರ ಚಿಂತನೆಯೂ ನಮ್ಮ ಊಹೆಗೆ ನಿಲುಕದಾಗಿರುತ್ತದೆ. ಈ ಭೂಮಿಯಲ್ಲಿನ ಋಣ ಚಿರ ನಿದ್ರೆಗೆ ಜಾರುವ ತನಕ. ಇರುವಷ್ಟು ಕಾಲ ಕಷ್ಟ – ನೊಂದವರ ಬದುಕನ್ನು ಸಾಂತ್ವನಿಸಬೇಕು. ನಮ್ಮ ಆಸು-ಪಾಸಿನ ಸಮಾಜ ಪ್ರಗತಿ ಕಾಣಬೇಕು, ಊರು ಅಭಿವೃದ್ಧಿಯಾಗಬೇಕು, ಅಲ್ಲಿನ ಮಕ್ಕಳು…
ಬಂಟ್ಸ್ ಕತಾರ್ ವರ್ಣರಂಜಿತ ಮೆಗಾ ಸಾಂಸ್ಕೃತಿಕ ಪ್ರದರ್ಶನವು ಡಿಪಿಎಸ್ ಸಭಾಂಗಣದಲ್ಲಿ ನೆರೆದವರನ್ನು ಮಂತ್ರಮುಗ್ಧಗೊಳಿಸಿತು. ಬಂಟ್ಸ್ ಕತಾರ್ ನೂತನ ಆಡಳಿತ ಸಮಿತಿಯ ಅಡಿಯಲ್ಲಿ ಆಯೋಜಿಸಲಾದ ಮೆಗಾ ಕಲ್ಚರಲ್ ಶೋ-2024 ಅದ್ದೂರಿಯಾಗಿ ವರ್ಣರಂಜಿತ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರದರ್ಶಿಸಿತು. ಪ್ರಸಿದ್ಧ ಗಾಯಕರಾದ ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸರಿಗಮಪ ಖ್ಯಾತಿಯ ಸಾನ್ವಿ ಶೆಟ್ಟಿ ಅವರ ಲೈವ್ ಸಂಗೀತ ಕಾರ್ಯಕ್ರಮವು ಸುಂದರ ಸಂಜೆಯಲ್ಲಿ ಸಂಗೀತ ಲೋಕವನ್ನು ಸೃಷ್ಟಿಸಿತು. ಬಂಟ್ಸ್ ಕತಾರ್ ಸದಸ್ಯರಿಂದ ಯಕ್ಷಗಾನ “ನಾಟ್ಯ ವೈಭವ”, ವಿಶೇಷವಾಗಿ ಬಂಟ್ಸ್ ಕತಾರ್ನ ಸಣ್ಣ ಪುಟ್ಟ ತಂಡಗಳು ಚೆಲುವು ಮತ್ತು ವೃತ್ತಿಪರ ಸೊಬಗನ್ನು ಹೊರಹಾಕಿದವು. ಮೋಹನ್ ಎಡನೀರು ಮತ್ತು ಸಚಿನ್ ಎಡನೀರ್ ಅವರು ಬಹರೈನ್ ನಿಂದ ಆಗಮಿಸಿ ಯಕ್ಷಗಾನ ತಂಡಕ್ಕೆ ವೇಷಭೂಷಣ ಮತ್ತು ಮೇಕಪ್ ನೊಂದಿಗೆ ಸಹಾಯ ಮಾಡಿದರು. ಬಂಟ್ಸ್ ಕತಾರ್ ಸದಸ್ಯರು ಮತ್ತು ದೋಹಾ ಡ್ಯಾನ್ಸಿಂಗ್ ಸ್ಕ್ವಾಡ್ ತಂಡವು ಉತ್ಸಾಹಭರಿತ ಸಿನಿ ನೃತ್ಯ ಪ್ರದರ್ಶನಗಳು ಮತ್ತು ಆಕರ್ಷಕವಾದ ಅರೆ-ಶಾಸ್ತ್ರೀಯ ನೃತ್ಯಗಳೊಂದಿಗೆ ಸಭೆಯನ್ನು ರಂಜಿಸಿತು. ಕಿಕ್ಕಿರಿದ ಡಿಪಿಎಸ್…
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಪ್ರೊಫೆಸರ್ ಅಕ್ಷಯ ಆರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಅಕ್ಷಯ ಆರ್ ಶೆಟ್ಟಿ ಅವರು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜ್ ನ ಪ್ರಾಧ್ಯಾಪಕಿ. ಬಜಪೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆರ್ಗ, ಹಿಡಿ ಅಕ್ಕಿಯ ಧ್ಯಾನ ಸಹಿತ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಜೊತೆಗೆ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದ ಲೇಖನಗಳನ್ನೂ ಅವರು ಬರೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾ.17ರಂದು ಮುಂಬಯಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ ಹಾಗೂ ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ನಂದಾವರ ಇದರ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜಿ ಶೆಟ್ಟಿ ದಲಂದಿಲ ಇವರ ನೇತೃತ್ವದಲ್ಲಿ ನವಿ ಮುಂಬಯಿಯ ನ್ಯೂ ಪನ್ವೆಲ್ ಪೂರ್ವದ ಭಗತ್ ವಾಡಿಯ ಹೋಟೆಲ್ “ಸ್ಪೈಸ್ ವಾಡಿ” ಇಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತುಳು ಕನ್ನಡಿಗ ಅಭಿಮಾನಿಗಳೊಂದಿಗೆ ಸಮಾಲೋಚನೆ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪನ್ವೆಲ್ ಪರಿಸರದಲ್ಲಿ ಹಾಗೂ ಮುಂಬಯಿಯ ವಿವಿಧ ಸಮುದಾಯದ ಅನೇಕ ಗಣ್ಯರು ಉಪಸ್ಥಿತರಿದ್ದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭಿನಂದನಾ ಪೂರ್ವಕವಾಗಿ ಸ್ವಾಗತಿಸಿದರು. ಸ್ವಾಗತಿಸುತ್ತಾ ಪ್ರಾಥಮಿಕ ಮಾತುಗಳನ್ನಾಡಿದ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಭರವಸೆಯ ವ್ಯಕ್ತಿಯೊಬ್ಬರು ಇಂದು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರ ಸೌಭಾಗ್ಯ. ಮಿಲಿಟರಿಯಲ್ಲಿ ದೇಶ ರಕ್ಷಣೆಯ ಸೇವೆಗೈದು…
ಬದುಕೆಂಬ ಪಾತ್ರೆಯಲ್ಲಿ ಪ್ರೀತಿಯೊಂದನ್ನು ಬಿಟ್ಟು ಬೇರೇನನ್ನು ತುಂಬಿಸಿದರೂ ಅದು ನಮಗೇ ಮಾರಕ. ಬೇಡದ ನಕಾರಾತ್ಮಕ ಭಾವನೆಗಳಿಂದ ತುಂಬಿರುವ ಪಾತ್ರೆಯನ್ನು ಬರಿದಾಗಿಸಿ ಅದರಲ್ಲಿ ಪ್ರೀತಿ ತುಂಬಿಸೋಣ, ಪ್ರೀತಿಯನ್ನೇ ಇತರರಿಗೂ ಹಂಚೋಣ. ಐದು ವರ್ಷದ ಪುಟ್ಟ ಹುಡುಗನೊಬ್ಬ ತನ್ನ ಮೂರು ವರ್ಷದ ಪುಟಾಣಿ ತಂಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮುಂದೆ ಮುಂದೆ ಹೋಗುತ್ತಿದ್ದ ಹುಡುಗನಿಗೆ ತಂಗಿಯ ಹೆಜ್ಜೆ ನಿಧಾನವಾಗಿದ್ದು ಗೊತ್ತಾಯಿತು. ಆತ ತಿರುಗಿ ನೋಡಿದ. ತಂಗಿ ಯಾವುದೋ ಅಂಗಡಿ ಮುಂದೆ ನಿಂತು ಏನನ್ನೋ ತದೇಕವಾಗಿ ನೋಡುತ್ತಿದ್ದಳು. ಆತ ಹಿಂದಕ್ಕೆ ಬಂದು ನೋಡಿದ. ಅದೊಂದು ಗೊಂಬೆಗಳ ಅಂಗಡಿ. ‘ನಿಂಗೇನು ಬೇಕು?’ ಎಂದು ಅಣ್ಣ ಕೇಳಿದ. ಆ ಪುಟ್ಟ ಹುಡುಗಿ ಅಂಗಡಿಯಲ್ಲಿದ್ದ ದೊಡ್ಡ ಗೊಂಬೆಯತ್ತ ಬೊಟ್ಟು ಮಾಡಿ ತೋರಿಸಿ ‘ಅದು ಬೇಕು’ ಎಂದಳು. ಹುಡುಗ ಒಬ್ಬ ಜವಾಬ್ದಾರಿಯುತ ದೊಡ್ಡಣ್ಣನಂತೆ ಆಕೆಯ ಕೈ ಹಿಡಿದುಕೊಂಡು ಅಂಗಡಿಯತ್ತ ನಡೆದು ಆ ಗೊಂಬೆಯನ್ನೆತ್ತಿ ಅವಳ ಕೈಯಲ್ಲಿಟ್ಟ. ಖುಷಿಗೆ ಆಕೆಯ ಕಣ್ಣುಗಳರಳಿದವು. ಅಂಗಡಿಯ ಮಾಲೀಕ ಇವೆಲ್ಲವನ್ನು ಅಚ್ಚರಿಯಿಂದ ನೋಡುತ್ತಿದ್ದ. ಆ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಮತ್ತು ಬಂಟರ ಸಂಘ ಸುರತ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ “ಎಸ್ಸೆಸ್ಸೆಲ್ಸಿ ನಂತರ ಮುಂದೇನು” ವಿಚಾರದ ಕುರಿತು ಮಾಹಿತಿ ಕಾರ್ಯಕ್ರಮ ಶನಿವಾರ ಸಂಜೆ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು, “ಈಗಿನ ಪಠ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 100 ಅಂಕ ಗಳಿಸುವುದು ಕಷ್ಟವಲ್ಲ, ಆದರೆ ಮುಂದೆ ಬರಲಿರುವ ಪಿಯು ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಮೂಲ್ಯವಾಗಿದೆ. ಎನ್ ಸಿ ಆರ್ ಸಿಲೆಬಸ್ ನಲ್ಲಿ ಎಷ್ಟು ಅಂಕ ಪಡೆದರೂ ಮೆಡಿಕಲ್, ಡೆಂಟಲ್ ಅಥವಾ ಬೇರೆ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಮೆಡಿಕಲ್ ಸೀಟ್ ಪಡೆಯಬೇಕಾದರೆ ನೀಟ್ ನಂತಹ ಪೂರಕ ಪರೀಕ್ಷೆಗೆ ಹಾಜರಾಗಬೇಕು. ಮಕ್ಕಳಿಗೆ ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಒಂದನೇ ತರಗತಿಯಿಂದಲೇ ಪೂರಕ ಪರೀಕ್ಷೆ ತರಬೇತಿ ಆರಂಭವಾಗುತ್ತದೆ. ಇದು ಬೆಳೆಯುತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ನಮ್ಮ ಇಡೀ ದೇಶದಲ್ಲಿ ಇರುವುದು ಅಂದಾಜು ಎರಡೂವರೆ ಲಕ್ಷ ಸಿಎ, ಸಿಎಸ್…
ಕನ್ನಡ ವೆಲ್ಫೇರ್ ಸೊಸೈಟಿಯ ಜನಪ್ರಿಯತೆಯ ಹಿನ್ನಲೆಯಲ್ಲಿ ಸೊಸೈಟಿಯ ಮಹಿಳೆಯರ ಪಾತ್ರ ಮಹತ್ತರವಾಗಿದೆ. ನಮ್ಮ ಈ ಸಂಘದಲ್ಲಿ ಮಹಿಳೆಯರು ಎಲ್ಲಾ ಸಮಾಜಪರ ಸೇವಾ ಕಾರ್ಯಗಳಲ್ಲಿ ಸದಾ ಸಕ್ರಿಯವಾಗಿ ಕೆಲಸ ಮಾಡುವುದರಿಂದ ಸಂಸ್ಥೆಯು ಸದಾ ಕ್ರಿಯಾಶೀಲವಾಗಿರುವಂತಾಗಿದೆ. ನಮ್ಮ ಸಂಸ್ಥೆಯು ಮಹಿಳೆಯರ ಯಾವುದೇ ಕಾರ್ಯಕ್ರಮಕ್ಕೂ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಅವರ ಆತ್ಮ ವಿಶ್ವಾಸವು ಹೆಚ್ಚಿಸಬೇಕು ಎಂಬುದೇ ಕನ್ನಡ ವೆಲ್ಫೇರ್ ಸೊಸೈಟಿಯ ಉದ್ದೇಶವಾಗಿದೆ ಹಾಗೂ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ನ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ತಮ್ಮಅಭಿಮತವನ್ನು ವ್ಯಕ್ತಪಡಿಸಿದರು. ಅವರು ಮಾ.14ರ ಗುರುವಾರದಂದು ಸಂಜೆ ಘಾಟ್ಕೋಪರ್ ಪೂರ್ವದ ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಘಾಟ್ಕೋಪರ್ ಪೂರ್ವದಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಎಸ್. ಶೆಟ್ಟಿ (ಬಾಬಾ ಗ್ರೂಪ್ ) ಆಡಿಟೋರಿಯಂನಲ್ಲಿ ಜರಗಿದ ಜಾಗತಿಕ ಮಹಿಳಾ ದಿನಾಚರಣೆಯ…
ಪ್ರತಿಷ್ಠಿತ ಡಾ. ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ 2022-2023 ನೇ ಸಾಲಿನ ವಿಕಾಸ ಪುಸ್ತಕ ಪುರಸ್ಕಾರವನ್ನು ಯುವ ಪತ್ರಕರ್ತ, ಲೇಖಕ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರಿಗೆ ಮಾ. 16 ರಂದು ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ ವಿದ್ಯಾನಗರಿಯ ತಿಲಕ್ ಭವನದ ಭೂಗೋಳ ವಿಭಾಗದ ಸಭಾಗೃಹದಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರಧಾನ ಮತ್ತು ಕೃತಿ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿಸಲಾಯಿತು. ಡಾ. ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ, ಹಿರಿಯ ಸಾಹಿತಿ ಡಾ. ವಿಶ್ವನಾಥ್ ಕಾರ್ನಾಡ್ ಅವರ ಉಪಸ್ಥಿತಿ ಹಾಗು ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಸಿದ್ಧ ಜನಪದ ವಿದ್ವಾಂಸ, ಸಾಹಿತಿ ಡಾ. ಕಾಳೇಗೌಡ ನಾಗವಾರ, ಹಿರಿಯ ತಂತ್ರಜ್ಞ ಮತ್ತು ಅನುವಾದಕ ವೆಂಕಟ್ರಾಜ್ ಅವರು ಪಾಲ್ಗೊಂಡು ಡಾ. ದಿನೇಶ್ ಶೆಟ್ಟಿಯವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ, ಗೌರವ ಗ್ರಂಥ, ನಗದು ಬಹುಮಾನದೊಂದಿಗೆ ಪುರಸ್ಕಾರವನ್ನು ಪ್ರಧಾನಿಸಿ…
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ನ್ಯಾಯವಾದಿಯಾಗಿ ತುಳು ಸಾಹಿತಿ, ತುಳು ನಾಟಕ ರಚನೆಕಾರರಾಗಿ, ನಟರಾಗಿ, ತುಳು ಸಂಘಟಕರಾಗಿ ಗುರುತಿಸಿಕೊಂಡಿರುವ ಕುಂಬ್ರ ದುರ್ಗಾಪ್ರಸಾದ್ ರೈಯವರು ಈ ಹಿಂದೆಯೂ 3 ವರ್ಷಗಳ ಕಾಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ತುಳು ಕೂಟದ ಅಧ್ಯಕ್ಷರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಕಾವು, ಪರ್ಪುಂಜ, ಕುಂಬ್ರ ಮತ್ತು ಪುತ್ತೂರಿನಲ್ಲಿ ತುಳು ಸಮ್ಮೇಳನವನ್ನು ಆಯೋಜನೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಸವಣೂರಿನಲ್ಲಿ ನಡೆದ ವಿಶ್ವ ತುಳುವೆರೆ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪುತ್ತೂರು ತಾಲೂಕಿನ ಸ್ವಾಗತ ಸಮಿತಿಯ ಪದಾಧಿಕಾರಿಯಾಗಿ, ಒಡಿಯೂರು ತುಳು ತೇರ್ ಒಯಿಪುಗ ಇದರ ಪುತ್ತೂರು ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಇವರ ಕಾಲೇಜು ದಿನಗಳಲ್ಲಿ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ತುಳು ಕೂಟ ಆರಂಭಿಸಿದ…















