Author: admin

ಮನದಲ್ಲಿ ಮಹತ್ವಾಕಾಂಕ್ಷೆ ಇದ್ದರೆ ಸಾಲದು. ಆ ದಿಶೆಯಲ್ಲಿ ಮುನ್ನುಗ್ಗಿ ಅದನ್ನು ತನ್ನದಾಗಿಸುವ ಎಂಟೆದೆಯ ಛಲ ಬೇಕಾಗುತ್ತದೆ. ಅಂಥಹ ಸಾಧನೆಯ ಮೂರ್ತಿ ಎಂಟೆದೆಯ ಬಂಟ ನಮ್ಮ ಸರ್ವೋತ್ತಮ ಶೆಟ್ಟಿ ಅವರು. ಮಟ್ಟಾರು ಪರಾರಿ ಸೂರಪ್ಪ ಹೆಗ್ಡೆ ಹಾಗೂ ಪರೀಕ ಸರಸ್ವತಿ ಹೆಗ್ಡೆ ದಂಪತಿಯರ ಸುಪುತ್ರ ಸರ್ವೋತ್ತಮ ಶೆಟ್ಟರು ಬದುಕು ಕಟ್ಟಿಕೊಂಡ ರೀತಿ ಇತರ ಉದ್ಯಮಶೀಲರಿಗೆ ಮಾದರಿಯಾಗಬಲ್ಲುದು. ಉಡುಪಿ ಜಿಲ್ಲೆಯ ಪರೀಕ ಎಂಬಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು ತನ್ನ ಸಾಧನೆ ಪರಿಶ್ರಮದಿಂದ ಇಂದು ಹುಟ್ಟಿದ ಕುಟುಂಬ ಮಾತ್ರವಲ್ಲ ಬಂಟ ಸಮುದಾಯವನ್ನೇ ಎತ್ತರದ ಬಿತ್ತರಕ್ಕೆ ಮುಟ್ಟಿಸಿದ ಮಹನೀಯರಿವರು. ಪೆರ್ಡೂರು ಮತ್ತು ಹಿರಿಯಡ್ಕಗಳಲ್ಲಿ ತನ್ನ ಪದವಿಪೂರ್ವ ಶಿಕ್ಷಣ ಮುಗಿಸಿ ಮುಂಬಯಿ ನಗರ ಸೇರಿ ಹೊಟೇಲುಗಳಲ್ಲಿ ದುಡಿದು ನಂತರ ಹೊಟೇಲು ನಡೆಸಿಕೊಂಡು ತನ್ನ ಜೀವನ ಯಾಪನೆ ಮಾಡತೊಡಗಿದರು. ನಂತರ ಓರ್ವ ಸೋಲಿಸಿಟರ್ ಕಛೇರಿಯಲ್ಲಿ ದುಡಿಯತೊಡಗಿದರು. ಆದರೆ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಮನದ ಇಚ್ಛೆಯನ್ನು ಪೂರ್ಣಗೊಳಿಸಲು ದುಡಿಯುತ್ತಿದ್ದಂತೆಯೇ ಕಾಲೇಜು ಸೇರಿ ಪದವಿ ಶಿಕ್ಷಣ ಮುಂದುವರಿಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ವಾಣಿಜ್ಯ…

Read More

ಯಾವುದೇ ಸಮಾಜ ಪರ ಸೇವಾ ಕಾರ್ಯಗಳಿಗೆ ನಾನು ನಿರಂತರ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿದ್ದೇನೆ. ಮುಂದೆಯೂ ನನ್ನ ಸಹಕಾರ ಸದಾ ಇರುತ್ತದೆ. ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿಯೊಂದಿಗೆ ನನ್ನ ಆತ್ಮೀಯ ಒಡನಾಟವಿದೆ. ಹಾಗೆಯೇ ಈ ಸಂಸ್ಥೆಯ ಎಲ್ಲಾ ಸದಸ್ಯರು ನನ್ನ ಆತ್ಮೀಯರಾಗಿದ್ದಾರೆ. ಇಂದು ವಿಶೇಷವಾಗಿ ಈ ಸಂಸ್ಥೆಯ ಸದಸ್ಯರು ಸೇರಿದಂತೆ ನನ್ನೆಲ್ಲಾ ಹಿತೈಷಿ ಸಮಾಜ ಬಾಂಧವರ ಆಶೀರ್ವಾದದಿಂದಾಗಿ ನಾನು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ ಎನ್ನಲು ಹೆಮ್ಮೆ ಪಡುತ್ತೇನೆ. ಇನ್ನು ಮುಂದೆಯೂ ಬಂಟರ ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ತುಂಬು ಹೃದಯದ ಸಹಕಾರ ಬೇಕಾಗಿದೆ. ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರಂತಹ ಸಂಘಟಕರು ನಮ್ಮೊಂದಿಗಿದ್ದರೆ ಯಾವುದೇ ಕಾರ್ಯವನ್ನು ಮಾಡಲು ಅಸಾಧ್ಯವಾಗದು ಎನ್ನುವ ಭರವಸೆಯೂ ನನ್ನಲ್ಲಿದೆ ಎಂದು ಮುಂಬಯಿ ಬಂಟರ ಸಂಘದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡ ಮಹೇಶ್ ಎಸ್. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಡಿ.3 ರ ಆದಿತ್ಯವಾರದಂದು ಘಾಟ್ಕೋಪರ್ ಪೂರ್ವದ ಕನ್ನಡ…

Read More

ನಮ್ಮ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜೀವನದಲ್ಲಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ನೀಡುವ ಗುರುಗಳನ್ನು ನಾವು ಸ್ಮರಿಸಿಕೊಂಡು ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ. ನಮ್ಮ ಬಂಟರ ಭವನದ ಚಾವಡಿಯಲ್ಲಿ ಗುರು ನಿತ್ಯಾನಂದ ಸ್ವಾಮಿ ಹಾಗೂ ಸಾಯಿಬಾಬಾರಿಗೆ ನಿತ್ಯ ಪೂಜೆಗಳನ್ನು ಸಲ್ಲಿಸುತ್ತಿದ್ದೇವೆ. ಜೀವನದಲ್ಲಿ ಸನ್ಮಾರ್ಗದ ದಾರಿ ತೋರಿಸುವವರೇ ಗುರುಗಳು. ಪೂಜ್ಯ ಗುರುಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು. ಪುಣೆ ಬಂಟರ ಸಂಘದ ದಕ್ಷಿಣ – ಪೂರ್ವ ಪ್ರಾದೇಶಿಕ ಸಮಿತಿ ವತಿಯಿಂದ ಜುಲೈ 3 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ನಡೆದ ಗುರು ಪೂರ್ಣಿಮೆ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ದಕ್ಷಿಣ ಪೂರ್ವ ಪ್ರಾದೇಶಿಕ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು . ನಂತರ ಪೂಜೆ…

Read More

ಭಾರತವಲ್ಲದೇ ಜಗತ್ತಿನ ಇನ್ಯಾವುದೇ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ರಾಜ ಪ್ರಭುತ್ವವನ್ನು ವಿರೋಧಿಸಿದ ಪ್ರಜೆಗಳು ಬದುಕುಳಿದ ಕುರುಹುಗಳು ಕಾಣ ಸಿಗುವುದೇ ಇಲ್ಲ. ರಾಜನೇ ಪ್ರತ್ಯಕ್ಷ ದೇವರು. ಆತನಲ್ಲಿ ದೋಷ ಕಾಣುವುದೇ ಮಹಾಪರಾಧ ಎನ್ನುವಂತಹ ಅಲಿಖಿತ ಶಾಸನಗಳ ಅಡಿಯಲ್ಲಿಯೇ ಜಗತ್ತಿನ ಇನ್ನಿತರ ನಾಗರೀಕತೆಗಳು ಬೆಳೆದವು. ಅಲ್ಲಿ ಜನಸಾಮಾನ್ಯರ ಪ್ರತಿರೋಧದ ಸ್ವರಗಳನ್ನಾಗಲಿ, ರಾಜ ಶಾಸನದ ವಿಮರ್ಶೆ ಎಂಬ ಅಭಿವ್ಯಕ್ತಿ ಸ್ವಾತಂತ್ರ್ಯದ ಹುಚ್ಚು ಕಲ್ಪನೆಯನ್ನಾಗಲಿ ಊಹಿಸುವುದೇ ಬಾಲಿಶತನ. ಆದರೆ ಭಾರತದ ಮಹಾಕಾವ್ಯಗಳಲ್ಲಿ ದೈವತ್ವವನ್ನು ಪಡೆದ ಮಹಾಪುರುಷರೂ ಪ್ರಶ್ನಾತೀತರಲ್ಲ. ಆ ಮಹಾಪುರುಷರೆಲ್ಲ ತಮ್ಮನ್ನು ಪ್ರಶ್ನಿಸಿದ ಜನ ಸಾಮಾನ್ಯನನ್ನೂ ತಮ್ಮ ಜೊತೆ ಉಳಿಸಿ ಬೆಳೆಸಿದರು. ಇಲ್ಲದಿದ್ದರೆ ಶ್ರೀ ರಾಮಚಂದ್ರನೆಂಬ ಅಖಂಡ ಆರ್ಯಾವರ್ತದ ಅನಭಿಷಿಕ್ತ ಸಾರ್ವಭೌಮನನ್ನು, ಒಬ್ಬ ಸಾಮಾನ್ಯ ಅಗಸ ಪ್ರಶ್ನಿಸಿದ ಜಗತ್ತಿನ ಬೇರೆ ಯಾವುದೇ ದೇಶಗಳಲ್ಲಾಗಿದ್ದರೆ, ಅಂತಹ ಅಪವಾದ ಹೊರಿಸಿದ ಅಗಸನ ರುಂಡವನ್ನೇ ಚೆಂಡಾಡಿ ಬಿಡುತ್ತಿದ್ದರು. ಆದರೆ ಶ್ರೀರಾಮಚಂದ್ರನ ಜೊತೆ ಒಬ್ಬ ಜುಜುಬಿ ಅಗಸ, ತ್ರೇತಾಯುಗದಿಂದ ಕಲಿಯುಗದವರೆಗೂ ಉಳಿದುಕೊಂಡು ಬಂದ..ಆ ಮೂಲಕ ಕೊಟ್ಯಾಂತರ ಜನರ ವಿಮರ್ಶೆಗೆ ವಸ್ತುವಾದ. ಜೊತೆಗೆ ಭಾರತದಂತ…

Read More

ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ “ದುಬೈ ಗಡಿನಾಡ ಉತ್ಸವ-2023” ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದ ಕೆ.ಎನ್.ಆರ್.ಐ ಫಾರಂನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಮಾತನಾಡುತ್ತಾ, ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೋಡಿ ತುಂಬ ಸಂತೋಷವಾಯಿತು. ಯುಎಇಯಲ್ಲಿ ಇರುವ ಗಡಿನಾಡಿನ ಕನ್ನಡಿಗರ ತಾಕತ್ತು ಏನೆಂಬುದನ್ನು ಕಳೆದ ವರ್ಷದಿಂದ ಯುಎಇಯ ಕನ್ನಡಿಗರಿಗೆ ತೋರಿಸಿಕೊಟ್ಟಿದ್ದೀರಿ. ಯುಎಇಯಲ್ಲಿ ಇರುವ ಕನ್ನಡಿಗರ ಒಂದೇ ಒಂದು‌ ಆಶಯ ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಮಾಡೋದು ಹಾಗೂ ಗಡಿನಾಡಿನ ಅನಿವಾಸಿ ಕನ್ನಡಿಗರ ಕಷ್ಟ ಕಾರ್ಪಣ್ಯ ಬಗ್ಗೆ ‌ಸರಕಾರ ಎಚ್ಚೆತ್ತುಕೊಳ್ಳುವಂತಹ ಕಾರ್ಯಕ್ರಮ ಮಾಡುತಿದ್ದೀರಿ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಈ ವರ್ಷ ಹಾಗೂ ಮುಂದೆಯೂ ನಡೆಯುವ ಗಡಿನಾಡಿನ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಮತ್ತು ನನ್ನ ಸಂಸ್ಥೆಯ ಸಭಾಂಗಣದಲ್ಲಿ ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ…

Read More

2022ನೇ ಸಾಲಿನ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ (MCh) ಪ್ರವೇಶ ಪರೀಕ್ಷೆ ಸರ್ಜರಿ ವಿಭಾಗದಲ್ಲಿ ಕುಂದಾಪುರದ ಅತೀಶ್ ಬಿ. ಶೆಟ್ಟಿ ದೇಶದಲ್ಲೇ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಸರ್ಜನ್ ಡಾ. ಬಾಲಕೃಷ್ಣ ಶೆಟ್ಟಿ ಹಾಗೂ ಸುನಿತಾ ಶೆಟ್ಟಿ ಕಂದಾವರ ಅವರ ಪುತ್ರರಾದ ಅತೀಶ್ ಬಿ. ಶೆಟ್ಟಿ ಅವರು ಬ್ರಹ್ಮಾವರ ಲಿಟಲ್ ರಾಕ್ ಸ್ಕೂಲಿನಲ್ಲಿ ಪಿಯುಸಿ ತನಕದ ವಿದ್ಯಾಭ್ಯಾಸ ಪೂರೈಸಿ, ಸಿಇಟಿಯಲ್ಲಿ 13ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಬಳಿಕ ಕೆಎಂಸಿ ಮಣಿಪಾಲದಲ್ಲಿ ಎಂಬಿಬಿಎಸ್, ಬೆಂಗಳೂರಿನ ಬಿಎಂಸಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್ ಪದವಿಯನ್ನು ಮುಗಿಸಿ ಆಗಸ್ಟ್ ತಿಂಗಳಲ್ಲಿ ‘ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್’ ಪರೀಕ್ಷೆ ಬರೆದಿದ್ದರು.

Read More

ತುಳುನಾಡ ಫೌಂಡೇಶನ್ ಪುಣೆ ವತಿಯಿಂದ ಭಾರತೀಯ ಸೇನಾ ದಿನಾಚರಣೆಯನ್ನು ಖಡ್ಕಿಯಲ್ಲಿರುವ ಭಾರತೀಯ ಸೇನಾ ಪಾರ್ಶ್ವವಾಯು ಪುನರ್ವಸತಿ ಕೇಂದ್ರದಲ್ಲಿ ನಿವೃತ್ತ ಸೇನಾ ಯೋಧರೊಂದಿಗೆ ಆಚರಿಸಲಾಯಿತು. ಈ ಸಂದರ್ಭ ದೇಶಭಕ್ತಿ ಗೀತೆಯ ಹಾಡುಗಳೊಂದಿಗೆ ವೈವಿಧ್ಯಮಯ ಸಂಗೀತ ರಸಮಂಜರಿ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ ನಡೆಯಿತು. ನಿವೃತ್ತ ಸೇನಾ ಯೋಧರೊಂದಿಗೆ ಭೋಜನವನ್ನು ಮಾಡಲಾಯಿತು. ಈ ಸಂದರ್ಭ ತುಳುನಾಡ ಪೌಂಡೇಶನ್ ಪುಣೆ ಇದರ ಗೌರವಾಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಇದು ಎರಡನೇ ಸಾಮಾಜಿಕ ಕಾರ್ಯಕ್ರಮವಾಗಿದೆ. ಸಂಸ್ಥೆಯ ಸ್ಥಾಪನೆಯ ದಿನ ಪುಣೆಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಇಂದು ಭಾರತೀಯ ಸೇನಾ ದಿನಾಚರಣೆಯನ್ನು ಭಾರತ ಸೇನಾ ಪಾರ್ಶ್ವಾಯು ಪುನರ್ವಸತಿ ಕೇಂದ್ರದಲ್ಲಿ ನಿವೃತ್ತ ಸೇನಾ ಯೋಧರೊಂದಿಗೆ ಬೆರೆತು ಆಚರಿಸುತ್ತಿರುವುದು ಬಹಳಷ್ಟು ಸಂತೋಷ ತಂದಿದೆ. ಇಲ್ಲಿ ಅವರೊಂದಿಗೆ ಕಳೆದ ಕ್ಷಣಗಳು ಬಹಳಷ್ಟು ಉತ್ತಮ ಅನುಭವಗಳನ್ನು ನೀಡಿದೆ. ಸಂಸ್ಥೆಯ ವತಿಯಿಂದ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಸಂಸ್ಥೆಯ ಅಧ್ಯಕ್ಷರಾದ…

Read More

ವಿದ್ಯಾಗಿರಿ: ಆರು ನೂತನ ಕೂಟ ದಾಖಲೆಗಳು, 440ಕ್ಕೂ ಅಧಿಕ ಅಂಕಗಳ ಅಂತರದ ಜಯದೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‍ಷಿಪ್ ಸಮಗ್ರ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಮುಡಿಗೇರಿಸಿಕೊಂಡಿದ್ದು, ಸತತ 21ನೇ ಬಾರಿಗೆ ಚಾಂಪಿಯನ್‍ಶಿಪ್ ಪಡೆದ ಕೀರ್ತಿಗೆ ಪಾತ್ರವಾಯಿತು. ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಚಾಂಪಿಯನ್‍ಷಿಪ್‍ನ ಪುರುಷರ ವಿಭಾಗದಲ್ಲಿ 259 ಹಾಗೂ ಮಹಿಳೆಯರ ವಿಭಾಗದಲ್ಲಿ 247 ಅಂಕ ಪಡೆದ ಆಳ್ವಾಸ್ ಒಟ್ಟು 506 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆಯಿತು. ಪುರುಷರ ವಿಭಾಗದಲ್ಲಿ 50 ಅಂಕ ಪಡೆದ ಉಜಿರೆಯ ಎಸ್‍ಡಿಎಂ ಕಾಲೇಜು ಹಾಗೂ ಮಹಿಳೆಯರವಿಭಾಗದಲ್ಲಿ 56 ಅಂಕ ಪಡೆದ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮದರ್ಜೆಕಾಲೇಜು ರನ್ನರ್‍ಅಫ್ ಪ್ರಶಸ್ತಿಗಳನ್ನು ಪಡೆದವು. ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 22 ಚಿನ್ನ 15 ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿ ಒಟ್ಟು 40 ಹಾಗೂ ಮಹಿಳಾ ವಿಭಾಗದಲ್ಲಿ 22 ಚಿನ್ನ, 13 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ 37…

Read More

ಲೇಖಕಿ, ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಅಕ್ಷಯ ಆರ್. ಶೆಟ್ಟಿಯವರ ಎರಡು ಕೃತಿಗಳ ಲೋಕಾರ್ಪಣೆ ಗುರುವಾರ ನಗರದ ಪತ್ರಿಕಾಭವನದಲ್ಲಿ ಜರುಗಿತು. ಕೃತಿ ಬಿಡುಗಡೆ ನೆರವೇರಿಸಿ ಮಾತಾಡಿದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಚಿನ್ನಪ್ಪ ಗೌಡ ಅವರು, “ತುಳು ಭಾಷೆಯಲ್ಲಿ ತುಳು ಸಂಸ್ಕೃತಿಯನ್ನು ಶೋಧನೆ ಮಾಡುವಂತಹ ಕಾರ್ಯ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಶ್ಲಾಘನೀಯ ವಿಚಾರ. ತುಳು ನಾಟಕಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಅಕ್ಷಯ ಶೆಟ್ಟಿಯವರು ಹಿಂದೆ ದೆಂಗ ಅನ್ನುವ ಕಾದಂಬರಿ ಬರೆದಿದ್ದಾರೆ. ಈಗ ಪೆರ್ಗ ಅನ್ನುವ ತುಳು ನಾಟಕವನ್ನು ತುಳು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಹಿಡಿ ಅಕ್ಕಿಯ ಧ್ಯಾನ ಕವನ ಸಂಕಲನ ಕೂಡಾ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿದೆ. ಪೆರ್ಗ ಅಂದ್ರೆ ತುಳು ಭಾಷೆಯಲ್ಲಿ ಗೆಲುವು, ಆಕಸ್ಮಿಕವಾಗಿ ಸಿಗುವ ಸಂಪತ್ತು ಅನ್ನುವ ಅರ್ಥವಿದೆ. ಒಂದು ನಿಧಿಯ ಹುಡುಕಾಟದ ಹಿಂದಿನ ಶೋಧ ಮತ್ತು ಅದರ ಸುತ್ತಲಿನ ಸನ್ನಿವೇಶಗಳನ್ನು ಬಹಳ ಚೆನ್ನಾಗಿ ಲೇಖಕಿ ನಿರೂಪಿಸಿದ್ದಾರೆ. ಲೇಖಕಿ ಇನ್ನಷ್ಟು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡಲಿ” ಎಂದು ಶುಭ ಹಾರೈಸಿದರು.…

Read More

ಕಳೆದ ಹಲವು ವರ್ಷಗಳಿಂದ ಬಂಟ್ಸ್ ಫೋರಮ್ ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ತಿಂಗಳ ಪ್ರತೀ ಸಂಕ್ರಮಣದಂದು ಕಚೇರಿ ಅಥವಾ ಸದಸ್ಯರ ಮನೆಗಳಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಸಂಸ್ಥೆಯ ಸದಸ್ಯರು ಪ್ರತಿಯೊಂದು ಕಾರ್ಯಕ್ರಮಕ್ಕೂ ಒಗ್ಗಟ್ಟಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಸದಸ್ಯರ ಒಮ್ಮತದಿಂದ ಪ್ರಸ್ತುತ ವರ್ಷದಲ್ಲಿ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಿದ್ದಾರೆ. ಸಂಸ್ಥೆಗೆ ಚ್ಯುತಿ ಬಾರದಂತೆ ಕಾರ್ಯವನ್ನು ನಿಭಾಯಿಸಿ ಮುನ್ನಡೆಸುವ ನಿರ್ಧಾರದಿಂದ ಕೊಟ್ಟ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಇಂದಿನ ತನ್ನ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಕಾರ್ಯಕ್ರಮವು ಸರ್ವ ಸದಸ್ಯರ ಸಹಕಾರದಿಂದ ವಿಜೃಂಭಣೆಯಿಂದ ಜರಗಿದೆ. ಕಾರ್ಯಕ್ರಮದ ಯಶಸ್ಸಿಗೆ ಹಾಗೂ ಸಂಸ್ಥೆಯ ಪ್ರಗತಿಗೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಬಂಟ್ಸ್ ಫೋರಮ್ ನ ನೂತನ ಅಧ್ಯಕ್ಷ ಉದಯ ಎಮ್ ಶೆಟ್ಟಿ ಮಲಾರಬೀಡು ನುಡಿದರು. ಅವರು ಮೀರಾ – ಭಾಯಂದರ್ ರಸ್ತೆಯಲ್ಲಿರುವ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ಅಶ್ವಿನಿ ( ಕ್ರಾಸ್ ಹೋಟೆಲ್ಸ್ ) ಸಭಾಗೃಹದಲ್ಲಿ ಬಂಟ್ಸ್ ಫೋರಮ್ ಮೀರಾ- ಭಾಯಂದರ್ ಆಯೋಜಿಸಿದ್ದ ವಾರ್ಷಿಕ ಭಜನಾ ಮಂಗಳೋತ್ಸವ ಕಾರ್ಯಕ್ರಮದ…

Read More