Author: admin

ಒಂದು ಸಮಾಜದ ಸರ್ವತೋಮುಖ ಏಳಿಗೆಯಾಗಬೇಕಾದರೆ ಆ ಸಮಾಜದ ಶ್ರೀಮಂತ ವರ್ಗ ಆರ್ಥಿಕ ಬೆಂಬಲವನ್ನು ದುರ್ಬಲರ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕುಂದಾಪುರದ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ದಶಮ ಸಂಭ್ರಮದ ಪ್ರಯುಕ್ತ ನಡೆದ ವಿವಿಧ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ ಸಮಾಜದಲ್ಲಿ ಶೇ.80 ರಷ್ಟು ಬಡವರಿದ್ದಾರೆ. ಅವರ ಆರೋಗ್ಯ, ಶಿಕ್ಷಣ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಶ್ರೀಮಂತರು ಸಹಾಯ ಹಸ್ತ ಚಾಚಬೇಕು. ಕೋಟ್ಯಾಧೀಶರನ್ನು ಹುಡುಕಿ ಅವರ ಮನವೊಲಿಸಿ ಸಂಘಟನೆಗೆ ಆರ್ಥಿಕ ಬೆಂಬಲ ಪಡೆಯಬೇಕು. ಪ್ರತಿಭಾನ್ವಿತರಿಗೆ ಬೆಂಬಲ ನೀಡುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು. ಸಾಧಕರು ನಮಗೆ ಮಾರ್ಗದರ್ಶಕರಾಗುತ್ತಾರೆ. ಅವರ ದಾರಿಯಲ್ಲಿ ಯುವಕರು, ವಿದ್ಯಾರ್ಥಿಗಳು ಸಾಗಬೇಕು. ಸಂಘದಿಂದ ಸಹಾಯ ಪಡೆದವರು ಅದರ ನೂರು ಪಟ್ಟು ಸಾಧನೆ ಮಾಡಿ ಸಂಘಟನೆ ಮತ್ತು ಸಮಾಜದ ಋಣ ತೀರಿಸಬೇಕು. ಸಂಘಟನೆಗಳ ನಾಯಕತ್ವ ತೆಗೆದುಕೊಳ್ಳುವವರು ಸಮಾಜವನ್ನು ಮುನ್ನಡೆಸುವ ಜವಾಬ್ಧಾರಿ ತೆಗೆದುಕೊಳ್ಳಬೇಕು ಎಂದು…

Read More

“ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಬೇಕು. ತನ್ನ ಸಾಮರ್ಥ್ಯವನ್ನು ಸಮಾಜಕ್ಕೆ ಧಾರೆ ಎರೆಯುವ ರೀತಿ ಅವಳಿಗೆ ವಿದ್ಯಾಭ್ಯಾಸ ದೊರೆಯಬೇಕು. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಹೆತ್ತವರು ಮುಂದಾಗಬೇಕು. ಸರಕಾರಿ ಹುದ್ದೆಯಲ್ಲಿ ಬಂಟರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಐಎಎಸ್ ಪರೀಕ್ಷೆ ಬರೆಯಲು ಹಿಂದುಳಿದ ವರ್ಗಗಳ ಮೀಸಲಾತಿ ಕೇಂದ್ರ ಸರಕಾರದಿಂದ ಇದೆ ಆದರೆ ನಮ್ಮ ಬಂಟ ಸಮುದಾಯಕ್ಕೆ ಲಭ್ಯವಿಲ್ಲ. ಇದು ಅಗತ್ಯವಾಗಿ ಬೇಕಾಗಿದೆ. ಅದಕ್ಕಾಗಿ ನಮ್ಮ ಬಂಟ ಸಮಾಜ ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನ ಓಂಕಾರ‌ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತಾಡಿದರು. ವೇದಿಕೆಯಲ್ಲಿ ಮಂಗಳೂರು…

Read More

ನಾವು ತುಳುನಾಡಿನಿಂದ ಬಂದವರು. ನಮ್ಮ ಜನ್ಮಭೂಮಿಯ ಪರಂಪರೆ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಕರ್ಮಭೂಮಿಯ ಮುಂಬಯಿಯ ನಮ್ಮ ಕಲಾಭಿಮಾನಿಗಳು ಕಲೆಗೆ ಬೆಲೆ ನೀಡುವ ಆದರ್ಶಮಯ ವಿಚಾರವಂತರು. ಸಾಂಸ್ಕೃತಿಕ ಪರಂಪರೆಯನ್ನು, ಧಾರ್ಮಿಕ ಲೋಕವನ್ನು ಪ್ರತಿಬಿಂಬಿಸುವಂತಹ ಯಕ್ಷಗಾನದ ಅರಿವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮವರು ಇಂತಹ ಕಾರ್ಯಕ್ರಮಕ್ಕೆ ಬರುವಾಗ ಮಕ್ಕಳೊಂದಿಗೆ ಬಂದರೆ ಅಧ್ಯಾತ್ಮಿಕ ಚಿಂತನೆಗಳ ‌ಸ್ವರೂಪದ ಯಕ್ಷಗಾನದ ಕಲೆಯು ಅಜರಾಮವಾಗಿರಲು ಸಾಧ್ಯ ಎಂದು ಪೊವಾಯಿ ಕನ್ನಡ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್. ಜಿ. ಶೆಟ್ಟಿಯವರು ನುಡಿದರು. ಅವರು ಮೀರಾ ರೋಡ್ ಪೂರ್ವದ ಪೂನಮ್ ಸಾಗರ್ ಕಾಂಪ್ಲೆಕ್ಸ್ ನ ರಾಧಾಕೃಷ್ಣ ಬ್ಯಾಂಕೆಟ್ ಹಾಲ್ ನ ಸಭಾಂಗಣದಲ್ಲಿ ಅ.11ರಂದು ಸಂಜೆ ಸ್ವರ್ಗೀಯ ಶೇಖರ್ ವಿ. ಶೆಟ್ಟಿ ಬೆಳ್ಮಣ್ ಸಂಸ್ಮರಣಾ ಸಮಿತಿ ಆಯೋಜಿಸಿದ್ದ, ಡಿ. ಮನೋಹರ್ ಕುಮಾರ್ ಸಂಯೋಜನೆಯ, ದಿ. ಹರೀಶ್ ಜೆ.ಶೆಟ್ಟಿ ನಿಂಜೂರು ವೇದಿಕೆಯಲ್ಲಿ ಬೆಂಕಿನಾಥೇಶ್ವರ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು ಮಂಗಳೂರು ಮತ್ತು ಯಕ್ಷ ತುಳು ಪರ್ಬ ಇವರ…

Read More

ಜೀವನದಲ್ಲಿ ಯಶಸ್ಸು ಗಳಿಸಲು ಕ್ರೀಯಾಶೀಲತೆ, ಕರ್ತತ್ವ ಶಕ್ತಿ, ವಿಸ್ತಾರವಾದ ಜ್ಞಾನ, ಸ್ವಯಂ ನಿಯಂತ್ರಣ ಮೊದಲಾದ ಗುಣಗಳನ್ನು ಬೆಳಿಸಿಕೊಳ್ಳುವುದು ಅತ್ಯಗತ್ಯ. ವೃತ್ತಿ ಕೌಶಲ್ಯದೊಂದಿಗೆ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನವೂ ಅಗತ್ಯವಾಗಿದ್ದು, ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆ ನಿಟ್ಟಿನಲ್ಲೂ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಮಣಿಪಾಲ ಎಂಐಟಿಯ ಪ್ರೊ. ಡಾ. ರವಿರಾಜ್ ಶೆಟ್ಟಿ ಹೇಳಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಸಂಘದ ಕುಂತಳನಗರ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ಮುಂಬಯಿಯ ಆಲ್ ಕಾರ್ಗೋ ಲಾಜಿಸ್ಟಿಕ್ ಲಿ. ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕಾರ್ಯಕ್ರಮದ 9 ನೇ ಬ್ಯಾಚಿನ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಟ್ರಸ್ಟ್ ವತಿಯಿಂದ ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯೋಗ ಮೇಳ ಹಾಗೂ ಕಂಪ್ಯೂಟರ್ ತರಬೇತಿ ತರಗತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಈವರೆಗೆ 1300…

Read More

ಕೆಲವು ವರ್ಷಗಳ ಹಿಂದೆ ಕರಾವಳಿಯ ವಿವಿಧೆಡೆ ತೆಂಗಿನ ಮರಗಳಿಗೆ ಬಾಧಿಸಿದ್ದ ಕಪ್ಪು ತಲೆ ಕ್ಯಾಟರ್‌ಪಿಲ್ಲರ್‌ ಹುಳಗಳ ಕಾಟ ಮತ್ತೆ ಹಲವೆಡೆ ಕಾಣಿಸಿಕೊಂಡಿದೆ. 2005ರಲ್ಲಿ ಪಡುಬಿದ್ರಿ, ಮೂಲ್ಕಿ ಭಾಗ, 2016-17ರಲ್ಲಿ ಮುಡಿಪು, ಕಲ್ಲಾಪು, ತಲಪಾಡಿ ಹಾಗೂ ಕೇರಳದ ಗಡಿ ಪ್ರದೇಶದಲ್ಲಿ ಈ ರೋಗ ಹರಡಿತ್ತು. ಬಳಿಕ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಮಂಗಳೂರು ನಗರದಲ್ಲಿ ವ್ಯಾಪಕವಾಗಿದ್ದು, ಮರಗಳ ಗರಿ 2 ತಿಂಗಳುಗಳಿಂದ ಒಣಗುತ್ತಿರು ವುದನ್ನು ಕಂಡು ಜನ ಗಾಬರಿಗೊಂಡಿದ್ದಾರೆ. ನಗರದ ಅಶೋಕನಗರ, ಮಲರಾಯ ರೋಡ್‌, ಚಿಲಿಂಬಿಯ ಕೆಲವೆಡೆ ಇಡೀ ತೆಂಗಿನ ಮರಗಳೇ ಒಣಗಿ ಹೋಗಿವೆೆ. ಜಿಲ್ಲೆಯ ಇತರೆಡೆಗಳಲ್ಲಿ ವ್ಯಾಪಕವಾಗಿ ಹರಡಿಲ್ಲವಾದರೂ ಕೆಲವೊಂದು ಕಡೆ ಸಣ್ಣ ಪ್ರಮಾಣದಲ್ಲಿ ಇದು ಕಂಡು ಬರುತ್ತಿದೆ. ಗರಿಗಳ ಅಡಿಭಾಗದಲ್ಲಿ ಹುಳಗಳು ಸೇರಿಕೊಂಡು ದೊಡ್ಡ ಸಂಖ್ಯೆಯಲ್ಲಿ ವೃದ್ಧಿಸುತ್ತಾ ಗರಿಗಳನ್ನಿಡೀ ತಿಂದು ನಾಶ ಮಾಡುತ್ತವೆ. ಗರಿಗಳಲ್ಲಿ ಹರಿತ್ತು ಇಲ್ಲದೆ ಒಣಗಿಹೋಗುತ್ತವೆ. ಇಡೀ ಮರವೇ ಸಾಯುವಂತೆ ಕಾಣುತ್ತದೆ. ಸ್ಥಳೀಯರು ಇದನ್ನು ನುಸಿರೋಗ ಇರಬಹುದು ಎಂದು ಅಂದಾಜಿಸಿದ್ದರು. ಆದರೆ ಈ ಬಗ್ಗೆ…

Read More

ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ಸಂಸ್ಥೆಯಿಂದ ದಾವಣಗೆರೆಯಲ್ಲಿ ಶ್ರೀ ಪಂಜುರ್ಲಿ ಪ್ಯಾಲೇಸ್ ಮತ್ತು ಲೀಲಾವತಿ ಕಲ್ಯಾಣ ಮಂಟಪವನ್ನು ಮಾಜಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಉದ್ಘಾಟಿಸಿ, ಇಂತಹ ಹೋಟೆಲುಗಳು ದಾವಣಗೆರೆಗೆ ಬೇಕಾಗಿವೆ. ಪಂಜುರ್ಲಿ ಹೋಟೆಲಿನಲ್ಲಿ ಶುಚಿ ರುಚಿಯಾದ ತಿಂಡಿಯೊಂದಿಗೆ ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ ಈ ಹೋಟೆಲನ್ನು ಬಹಳ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಪಂಜುರ್ಲಿ ಹೊಟೇಲ್ಸ್ ಹುಬ್ಬಳ್ಳಿ, ಬೆಳಗಾವಿಯಲ್ಲಿ ಜನರ ಪ್ರೀತಿ ಪ್ರಶಂಸೆಗೆ ಪಾತ್ರವಾಗಿದ್ದು ಇಲ್ಲಿನ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂಧರ್ಭ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ನ ಸಂಸ್ಥಾಪಕರಾದ ರಾಜೇಂದ್ರ ವಿ ಶೆಟ್ಟಿ, ಪಾಲುದಾರರದ ಸಂದೀಪ್ ಆಳ್ವ, ಗಣೇಶ್ ಶೆಟ್ಟಿ, ರವಿಕಾಂತ ಶೆಟ್ಟಿ, ಶಶಿಕಾಂತ ಶೆಟ್ಟಿ, ರಾಜೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ರಂಜಿತ್ ಶೆಟ್ಟಿ, ಉದಯ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪಂಜುರ್ಲಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

Read More

ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಜನಪ್ರಿಯತೆಯನ್ನು ಪಡೆದಿರುವ ಫಾರ್ಮ್ ಹೌಸ್ ರೆಸ್ಟೋರೆಂಟ್ ದುಬೈನ ಕನ್ನಡಿಗರಿಗೆ ಸವಿಯನ್ನು ನೀಡಲು ದುಬೈನಲ್ಲಿ ಇತ್ತೀಚೆಗೆ ಇದರ ಬ್ರಾಂಚ್ ಉದ್ಘಾಟನೆಗೊಂಡಿತು. ಮಾಂಸಹಾರಿ ಹಾಗೂ ಸಸ್ಯಹಾರಿ ತಿಂಡಿ ತಿನಿಸುಗಳಲ್ಲಿ ಖ್ಯಾತಿಯನ್ನು ಪಡೆದಿರುವ ಫಾರ್ಮ್ ಹೌಸ್ ದುಬೈಯ ಬರ್ ದುಬೈನಲ್ಲಿ ಬ್ರಾಂಚ್ ನ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಮಿ ಗ್ರೂಪ್ ಆಫ್ ಹೋಟೆಲ್ ನ ಆಡಳಿತ ನಿರ್ದೇಶಕ ರಾಜ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಗಣ್ಯತಿ ಗಣ್ಯರು ದೀಪವನ್ನು ಬೆಳಗಿಸಿ ಹೋಟೆಲನ್ನು ಉದ್ಘಾಟಿಸಿ ಫಾರ್ಮ್ ಹೌಸ್ ಹೋಟೆಲ್ ನ ಬಗ್ಗೆ ಕೊಂಡಾಡಿ ಶುಭವನ್ನು ಹಾರೈಸಿದರು. ಹೋಟೆಲ್ ನ ಮಾಲಕರಾದ ಹರೀಶ್ ಪಾಂಡು ಶೆಟ್ಟಿ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರನ್ನೂ ಸ್ವಾಗತಿಸಿದರು. ದುಬೈಯ ಗ್ರಾಹಕರಿಗೆ ಶುಚಿ – ರುಚಿಕರವಾದ ಮೀನು- ಮಾಂಸಗಳ ಸವಿಯನ್ನು ನೀಡಲು ತಯರಾಗಿ ನಿಂತಿರುವ ಈ…

Read More

ಕನ್ನಡ ಸಂಘ ಬಹರೈನ್ ನ ಅಧ್ಯಕ್ಷರಾದ ಶ್ರೀ ಅಮರನಾಥ ರೈ ಅವರು ಕರ್ನಾಟಕದ ಗೌರವಾನ್ವಿತ ಗೃಹ ಸಚಿವ ಡಾ ಜಿ ಪರಮೇಶ್ವರ ಅವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಅವರ ಕಚೇರಿಯಲ್ಲಿ ಭೇಟಿ ಮಾಡಿದರು ಮತ್ತು ಅವರ ಇತ್ತೀಚಿನ ಬಹರೈನ್ ಭೇಟಿಗಾಗಿ ಸಂಘ ಮತ್ತು ಸದಸ್ಯರ ಕೃತಜ್ಞತೆಯನ್ನು ತಿಳಿಸಿದರು. ಸಚಿವರ ಬಹರೈನ್ ಭೇಟಿಯ ಸಂದರ್ಭದಲ್ಲಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಅವರು ಚರ್ಚಿಸಿದರು. ಬಹರೈನ್ ನಲ್ಲಿ ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಉಳಿಸುವ ಮತ್ತು ಪ್ರಚಾರ ಮಾಡುವಲ್ಲಿ ಸಂಘ ಮತ್ತು ಸದಸ್ಯರ ಪ್ರಯತ್ನಗಳಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಂಘದ ಚಟುವಟಿಕೆಗಳಿಗೆ ತಮ್ಮ ಬೆಂಬಲದ ಭರವಸೆ ನೀಡಿದರು. ಭೇಟಿ ಸಂದರ್ಭದಲ್ಲಿ ಮಲ್ಲಾ ರೆಡ್ಡಿ ಹೆಲ್ತ್ ಸಿಟಿಯ ಪ್ರೊ ವೈಸ್ ಛಾನ್ಸಲರ್ ಡಾ ಪಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Read More

ಬಂಟರ ಚಾವಡಿ ಪರ್ಕಳ (ರಿ) ಇದರ ಮುಂದಾಳತ್ವದಲ್ಲಿ ಮುಂಬಯಿಯ ಆಲ್ ಕಾರ್ಗೋ ಲಾಜಿಸ್ಟಿಕ್ ನವರು ಕೊಡಮಾಡುವ ದಿಶಾ ವಿದ್ಯಾರ್ಥಿವೇತನ ಸಮಾರಂಭವು ಪರ್ಕಳ ಸುರಕ್ಷಾ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ತಾರಾನಾಥ ಹೆಗ್ಡಯವರ ಅಧ್ಯಕ್ಷತೆಯಲ್ಲಿ ಬಹಳ ಅಚ್ಚುಕಟ್ಟಾಗಿ ಜರಗಿತು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಮತ್ತು ಶ್ರೀ ಸವಿಸ್ತಾರ ಆಳ್ವ (senior Executive, Allcargo Logistics Ltd) ಉಪಸ್ಥಿತರಿದ್ದರು. ವಿವಿಧ ಶಾಲೆಯ 350 ವಿದ್ಯಾರ್ಥಿಗಳಿಗೆ ಸುಮಾರು 13,00,000 ರೂಪಾಯಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ಶ್ರೀ ಜಯರಾಜ್ ಹೆಗ್ಡೆ, ಕಾರ್ಯಧ್ಯಕ್ಷ ಶ್ರೀ ವಸಂತ ಶೆಟ್ಟಿ ಚೆನ್ನಿಬೆಟ್ಟು, ಪ್ರಧಾನ ಕಾರ್ಯದರ್ಶಿ ಶ್ರೀ ವಸಂತ ಶೆಟ್ಟಿ ಹಿರೇಬೆಟ್ಟು, ಕೋಶಾಧಿಕಾರಿ ಶ್ರೀ ದಿನಕರ ಶೆಟ್ಟಿ ಹೆರ್ಗ, ಸಂಘಟನಾ ಕಾರ್ಯದರ್ಶಿ ಶುಭಕರ ಶೆಟ್ಟಿ ಕಬ್ಯಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರು ವಿದ್ಯಾರ್ಥಿಗಳಿಂದ ‘ನಶಮುಕ್ತ ಭಾರತ’ ಪ್ರತಿಜ್ಞೆಯನ್ನು ಮಾಡಿಸಿದರು. ಕೋಶಾಧಿಕಾರಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ಪ್ರಧಾನ…

Read More

ಭಾರತದ ಭವ್ಯ ಪರಂಪರೆ ಬಿಂಬಿಸುವ ರಾಷ್ಟ್ರಧ್ವಜ ಹಾರಿಸುವ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ದೇಶ ಪ್ರೇಮದ ಭಾವಾನಾತ್ಮಕ ಜಾಗೃತಿ ಮತ್ತು ಐಕತ್ಯೆಯ ಪ್ರಾಮಾಣಿಕ ಸದ್ದುದೇಶ ಮೂಡಿಸಲು ಸ್ವಾತಂತ್ರ್ಯ ಅಮೃತ ‌ಮಹೋತ್ಸವ ನಿಮಿತ್ತ ‌ ಕಳೆದ ವರ್ಷ ಪ್ರಾರಂಭವಾದ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನವು ಈ ವರ್ಷದ ಅಗಸ್ಟ್ 13 ರಿಂದ 15 ರ ವರೆಗೆ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರಧ್ವಜ (ಹರ್ ಘರ್ ತಿರಂಗಾ )ಹಾರಾಡಲಿದೆ. ದೇಶದ ನಾಗರಿಕರು ಸ್ವಾತಂತ್ರ್ಯಕ್ಕಾಗಿ ಯೋಧರ ತ್ಯಾಗ ಮತ್ತು ಬಲಿಧಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ದೇಶದ ಸಮಗ್ರತೆ, ಸಾಮರಸ್ಯ ಸಮಾನತೆಗಳನ್ನು ಹಾಗೂ ರಾಷ್ಟ್ರಧ್ವಜದಲ್ಲಿರುವ ಚಕ್ರ ಮತ್ತು ಬಣ್ಣಗಳು ತ್ಯಾಗ ಧೈರ್ಯ, ಸತ್ಯ, ಶಾಂತಿ, ಸಮೃದ್ದಿ, ಪ್ರಗತಿ ಮತ್ತು ಪ್ರಕೃತಿ ಇವುಗಳ ಮಹತ್ವದ ಅರಿವಿನ್ನೊಂದಿಗೆ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಹರ್ ಘರ್ ತಿರಂಗಾ ಅಭಿಯಾನ ಈ ವರ್ಷವೂ ಆಚರಣೆಯಲ್ಲಿದೆ. ಈ ಪರಿಕಲ್ಪನೆಯ ಬಗ್ಗೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದವರು ಹುಬ್ಬಳ್ಳಿ ನಿವಾಸಿ ದೀಪಕ್ ಪರಶುರಾಮ ಬೋಚಗೇರಿ‌ ಎಂಬುದು‌ ಕನ್ನಡಿಗರಿಗೆ ಹೆಮ್ಮೆ.…

Read More