Author: admin
ಪುಣೆ ಬಂಟ್ಸ್ ಅಸೋಸಿಯೇಷನ್ ನ ಹನ್ನೊಂದನೇ ವಾರ್ಷಿಕೊತ್ಸವ ಸಮಾರಂಭವು ಫೆಬ್ರವರಿ 3 ರಂದು ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನ ಬಂಟರ ಭವನ ಬಾಣೇರ್ ಇಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಹರೀಶ್ ಪೂಂಜಾರವರು, ನಮ್ಮ ಸಂಸ್ಕ್ರತಿ ಸಂಸ್ಕಾರವೇ ನಮ್ಮ ವೈಭವಕ್ಕೆ ಮೂಲ ಕಾರಣ. ಈ ಸಂಸ್ಕಾರದ ಮೂಲ ನಮ್ಮ ಪೂರ್ವಜರು ಹಿರಿಯರು ಹಾಕಿಕೊಂಡಿರುವ ಸಾಂಸಾರಿಕ, ಪ್ರಾಕೃತಿಕವಾದ ಆಚಾರ ವಿಚಾರಗಳ ಸಂಸ್ಕ್ರತಿಯಿಂದ ಬಂದಿದೆ. ನಮ್ಮವರು ಸಮಾಜವನ್ನು ಬೆಳೆಸಿದ ರೀತಿ ಕಲ್ಪನಾತೀತವಾದುದು. ಅದೇ ರೀತಿ ಇಂದಿನ ಯುವ ಜನತೆಗೆ ಶಕ್ತಿ ನೀಡಿ ಮುಂದೆ ತಂದು ಸಮಾಜ ಕಟ್ಟುವ ಕಾರ್ಯ ಆಗಬೇಕಾಗಿದೆ. ಯುವಕರ ಕಲ್ಪನೆಯಂತೆ ವಿಭಿನ್ನ ರೀತಿಯಲ್ಲಿ ಉದ್ಯಮ ಸೃಷ್ಟಿಯಾಗಿ ಉದ್ಯೋಗ ನೀಡುವ ಶಕ್ತಿ ಯುವಕರಲ್ಲಿ ಬರಲಿ. ಅದೇ ರೀತಿ ನಮ್ಮ ಶ್ರೀಮಂತ ಕಲೆ ಸಂಸ್ಕ್ರತಿಯನ್ನು ಉಳಿಸಿ ಬೆಳೆಸಿಕೊಂಡು ಬರುವ ನಾಯಕತ್ವ ಗುಣ ಕೂಡಾ ಯುವಕರಲ್ಲಿ ಮತ್ತು ಮಹಿಳೆಯರಲ್ಲಿ ಬರಲಿ. ಉತ್ತಮ ಕಾರ್ಯ ಮಾಡಿದರೆ ಸಮಾಜದಲ್ಲಿ ಗುರುತಿಸುತ್ತಾರೆ. ಇದೇ ದ್ಯೇಯ…
ವಿದ್ಯಾಗಿರಿ (ಮೂಡುಬಿದಿರೆ): ‘ಮಕ್ಕಳಿಗೆ ಶಾಲೆಯಲ್ಲಿ ಯಕ್ಷ ಶಿಕ್ಷಣವನ್ನೂ ನೀಡಬೇಕು’ ಎಂದು ಶಾಸಕ ಉಮಾನಾಥ್ ಎ. ಕೋಟ್ಯಾನ್ ಹೇಳಿದರು. ವಿದ್ಯಾಗಿರಿಯ ಮುಂಡ್ರೆದಗುತ್ತು ಅಮರನಾಥ ಶೆಟ್ಟಿ (ಕೃಷಿ ಸಿರಿ)ಸಭಾಂಗಣದಲ್ಲಿ ಮಂಗಳವಾರ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ- 2023-24’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಭಾವಂತ ಮತ್ತು ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ನೀಡಬೇಕು. ಈ ಸದುದ್ದೇಶದಿಂದ ಪಟ್ಲ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನಮ್ಮ ಜೀವನಕ್ಕೆ ಬೇಕಾದ ಅಮೂಲ್ಯ ವಿಷಯಗಳನ್ನು ಅರಿತುಕೊಳ್ಳಲು ಯಕ್ಷಗಾನ ಒಳ್ಳೆಯ ಮಾಧ್ಯಮ ಎಂದರು. ನಮ್ಮ ಪೂರ್ವಜರು ಅನಕ್ಷರಸ್ಥರಾಗಿದ್ದರೂ, ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ತಿಳಿದುಕೊಂಡು ಮಕ್ಕಳಿಗೆ ತಿಳಿಸುತ್ತಿದ್ದರು. ಏಕೆಂದರೆ ಅವರು ಯಕ್ಷಗಾನವನ್ನು ನೋಡಿ ಅದನ್ನು ಅನುಭವಿಸುತ್ತಿದ್ದರು ಎಂದು ವಿವರಿಸಿದರು. ಪೌರಾಣಿಕ ಕಥೆಗಳನ್ನು ಅರ್ಥ ಮಾಡಿಕೊಳ್ಳಲು ಯಕ್ಷಗಾನವು ಸಹಕಾರಿ. ಯಕ್ಷಧ್ರುವ ಪಟ್ಲ ಹಾಗೂ ಆಳ್ವಾಸ್…
ಜನ್ಮ ಭೂಮಿ ತುಳುನಾಡಿನ ಮಣ್ಣಿನ ಮಕ್ಕಳಾದ ತುಳುವರಾದ ತಾವೆಲ್ಲರೂ ಶಿವಾಜಿ ಮಹಾರಾಜರ ಪುಣ್ಯ ಮಣ್ಣು ಪುಣೆಯಲ್ಲಿ ನೆಲೆ ನಿಂತು ಉದ್ಯಮದ ಜೊತೆಯಲ್ಲಿ ತುಳು ಬಾಷೆ, ಕಲೆ ಸಂಸ್ಕ್ರತಿಯ ಬೆಳವಣಿಗೆಗೆ ನಿರಂತರ ಶ್ರಮಿಸುವ ನಿಮ್ಮ ಕಾರ್ಯ ಶ್ಲಾಘನೀಯ. ಪುಣೆಯಲ್ಲಿರುವ ತುಳುವರಿಗಾಗಿ ಏನಾದರು ಸೇವೆ ಮಾಡಬೇಕು, ನಮ್ಮಿಂದಾದ ಸಹಕಾರ ತುಳುವರಿಗೆ ಸಿಗಬೇಕು ಎಂದರಿತು ಸಂಘಟನೆಯನ್ನು ಕಟ್ಟಿ ಅದರ ಮುಖಾಂತರ ತುಳುವರಿಗೆ ಉಪಕಾರವಗುವಂಥಹ ಸ್ವಂತ ಕಟ್ಟಡವನ್ನು ಹೊಂದಬೇಕು ಎಂಬ ನಿಮ್ಮ ಹಂಬಲ ಆದಷ್ಟು ಬೇಗ ಈಡೇರಲಿ. ನನ್ನಿಂದಾದ ಅರ್ಥಿಕ ಸಹಾಯವನ್ನು ಘೋಷಿಸುತ್ತೇನೆ ಮತ್ತು ಯಾವ ಮಟ್ಟದಲ್ಲಿ ಸಹಾಯ ಸಿಗಬಹುದು ಎಂಬುದನ್ನು ಅರಿತು ಪ್ರಯತ್ನ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿರುವ ಎಲ್ಲಾ ಜಾತಿ ಧರ್ಮ ಪಂಗಡವನ್ನು ಒಟ್ಟು ಸೇರಿಕೊಂಡು ತುಳುವರ ಸೇವಕನಾಗಿ ದುಡಿದವ ನಾನು. ದೊಡ್ಡ ಕ್ಷೇತ್ರವಾದ ಬೆಳ್ತಂಗಡಿಗೆ ಅನುದಾನ ತರುವಲ್ಲಿ ಕೈ ಮೀರಿ ಶ್ರಮಿಸಿ ದುಡಿದಿದ್ದೇನೆ. ಪುಣೆ ತುಳುಕೂಟಕ್ಕೆ ಬರುವ ಯೋಗಾನುಯೋಗ ಸಿಕ್ಕಿದೆ. ತುಂಬಾ ಸಂತೋಷವಾಯಿತು. ನಿಮ್ಮ ಯೋಜಿತ ಕಾರ್ಯ ಯೋಜನೆಗಳು ಆದಷ್ಟು ಬೇಗ ಪರಿಪೂರ್ಣವಾಗಿ ತುಳುವರಿಗೆ…
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಫೆಬ್ರವರಿ 11ರಂದು ಕುಂದಾಪುರ ರೂರಲ್ ಮೆಡಿಕಲ್ ಕಾಲೇಜು ಕ್ರೀಡಾಂಗಣ, ಯುವ ಮೆರಿಡಿಯನ್ ಸಂಕೀರ್ಣ, ಕೋಟೇಶ್ವರ ಇಲ್ಲಿ ಭಾವೈಕ್ಯ ಬಂಟರ ಮಹಾಸಮಾಗಮ ಕಾರ್ಯಕ್ರಮ ನಡೆಯಲಿದೆ. ಇದು ಕುಂದಾಪುರ ಪರಿಸರದಲ್ಲಿ ನಡೆಯುತ್ತಿರುವ ಮೊದಲ ಬಂಟರ ಸಮಾವೇಶವಾಗಿದ್ದು, ವಿದೇಶಗಳನ್ನೂ ಒಳಗೊಂಡಂತೆ ಭಾರತದ ವಿವಿಧೆಡೆಗಳಲ್ಲಿ ನೆಲೆಸಿರುವ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಂಟ ಸಮುದಾಯ ಬಾಂಧವರು ಈ ಮಹಾಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಈ ಬಂಟರ ಮಹಾಸಮಾಗಮದ ಪ್ರಧಾನ ಸಂಚಾಲಕರಾಗಿ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಆಯ್ಕೆಯಾಗಿದ್ದು ಇವರು ಸಂಘದ ಉಪಾಧ್ಯಕ್ಷರಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ವಿದ್ಯಾರ್ಥಿವೇತನ ನಿರ್ವಹಣಾ ಸಮಿತಿ ಸಂಚಾಲಕರಾಗಿ, ಸಂಘದ ವತಿಯಿಂದ ಪ್ರಕಟಿಸಲಾಗುತ್ತಿರುವ ಯುವ ಚೈತನ್ಯ ಸಂಚಿಕೆಯ ಸಂಪಾದಕರಾಗಿ ವಿವಿಧ ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಂಟರ ಮಹಾಸಮಾಗಮದ ಅಂಗವಾಗಿ ಅಂದು ಬಂಟರ ಸಾಂಸ್ಕೃತಿಕ ಸಂಭ್ರಮ ಎಂಬ ರಾಷ್ಟ್ರ ಮಟ್ಟದ ವೈವಿಧ್ಯಮಯ ಸಮೂಹನೃತ್ಯ ಸ್ವರ್ಧೆ ನಡೆಯಲಿದೆ. ವಿದ್ಯಾದೀವಿಗೆ ಯೋಜನೆಯಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ…
ದುರ್ಗಾಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಭಯ ಸೇವಾ ಫೌಂಡೇಶನ್ ಅಧ್ಯಕ್ಷರಾದ ಎಂ ಬಿ ಉಮೇಶ್ ಶೆಟ್ಟಿಯವರು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಪ್ರತಿಕೆ ಇವರಿಂದ ಸಮಾಜ ಸೇವೆಗೆ ಕೊಡಲಾಗುವ 2024 ರ ಸಾಲಿನ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಬಂಟರ ಸಂಘದ ಮಾಜಿ ಕಾರ್ಯಕಾರಿ ಸದಸ್ಯರಾಗಿರುವ ಇವರು ಸಮಾಜಸೇವೆಗೆ ಪ್ರಸಿದ್ಧರಾಗಿದ್ದಾರೆ. ಈ ಪ್ರಶಸ್ತಿ ದೊರಕಲು ಜೊತೆಯಿದ್ದು ಸಮಾಜದ ಸೇವೆ ಮಾಡಲು ಪ್ರತಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಶುಭ ಹಾರೈಸಿದ ಕನ್ನಡ ನಾಡಿನ ಜನತೆಗೆ ಹಾಗೂ ಎಲ್ಲಾ ಆತ್ಮೀಯ ಬಂಧುಗಳಿಗೆ ಉಮೇಶ್ ಶೆಟ್ಟಿಯವರು ಧನ್ಯವಾದಗಳನ್ನು ಸಮರ್ಪಸಿದ್ದಾರೆ.
ಪರಸ್ಪರ ಸಹಕಾರದಿಂದಲೇ ಸಂಘಟನೆಗಳು ಬೆಳೆಯಲು ಸಾಧ್ಯ. ಸಂಘಟನೆಗಳನ್ನು ಬಳಪಡಿಸುವ ಮೂಲಕ ಕಾರ್ಯ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಶಮಿಸಬೇಕು ಎಂದು ಹಿರಿಯ ಲೆಕ್ಕ ಪರಿಶೋಧಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಮಿತ್ರವೃಂದ ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕರಾವಳಿಯಿಂದ ತುಮಕೂರಿಗೆ ಬಂದು ಉದ್ದಿಮೆ, ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಮಂದಿ ತುಮಕೂರಿನ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು. ಸಂಘಟನೆಯ ಬೆಳವಣಿಗೆಗೆ ಎಲ್ಲರೂ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು. ಸಂಘಟನೆಯ ಅಭಿವೃದ್ಧಿಯಿಂದಷ್ಟೇ ಸಮಾಜದ ಅಭಿವೃದ್ಧಿ ಸಾಧ್ಯ. ಮಿತ್ರವೃಂದ ನಡೆಸುತ್ತಿರುವ ವಿವಿಧ ಸಮಾಜಪರ ಚಟುವಟಿಕೆ ಈ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮ ಬೀರಲಿವೆ ಎಂದರು. ಕ್ರೀಡಾಕೂಟದ ಅಂಗವಾಗಿ ವಿವಿಧ ವಯೋಮಾನದ ಕ್ರೀಡಾಸಕ್ತರಿಗೆ ಆಟೋಟ ಸ್ವರ್ಧೆ ನಡೆಸಲಾಯಿತು. ಓಟ, ವೇಗದ ನಡಿಗೆ, ಗುಂಡು ಎಸೆತ, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ಅನೇಕ ಸಾಂಪ್ರದಾಯಿಕ ಸ್ವರ್ಧೆಗಳಲ್ಲಿ ದಕ್ಷಿಣ ಕನ್ನಡದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಉದ್ಯಮಿ ಎಚ್.ಜಿ.…
ಜೀವನದಲ್ಲಿ ಪ್ರತೀ ಬಾರಿಯೂ ಸೋಲುವ ವ್ಯಕ್ತಿ ಗೆಲ್ಲುವ ನಿರೀಕ್ಷೆಯನ್ನು ಬಿಟ್ಟುಬಿಡುತ್ತಾನೆ. ಆದರೆ ಸೋಲು ಗೆಲುವು ಎರಡು ಸಮಾನ. ಎರಡನ್ನೂ ಸ್ವೀಕರಿಸಿ ಜೀವನ ನಡೆಸುವುದು ಬಹುಮುಖ್ಯ. ಸೋಲು ಶಾಶ್ವತವಲ್ಲ, ಗೆಲುವು ಅಂತಿಮವೂ ಅಲ್ಲ. ಮೊದಲು ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು. ನಂಬಿಕೆ ಎನ್ನುವುದು ಜಯದ ಮೊದಲ ಮೆಟ್ಟಿಲು. ಮುಂದೊಂದು ದಿನ ನನ್ನ ದಿನವೂ ಬಂದೇ ಬರುತ್ತದೆ ಎಂದು ಬಲವಾದ ನಂಬಿಕೆ ಇಟ್ಟು ಜೀವನ ನಡೆಸಬೇಕು. ನಮಗೆಲ್ಲ ತಿಳಿದ ಹಾಗೆ ದ್ರೋಣಾಚಾರ್ಯರು ಹಕ್ಕಿಯ ಕಣ್ಣಿಗೆ ಬಾಣ ಹೊಡೆಯಲು ಹೇಳಿದಾಗ ಅಲ್ಲಿ ಅನೇಕ ವೀರಾನುಪುರುಷರು ಇದ್ದರು. ಹಾಗೆ ಅರ್ಜುನನೂ ಇದ್ದ, ಆದರೆ ಅಲ್ಲಿ ಹಕ್ಕಿಯ ಕಣ್ಣನ್ನು ಭೇದಿಸಿದ್ದು ಮಾತ್ರ ಅರ್ಜುನ. ಯಾಕೆಂದರೆ ಆ ಗುರಿಯ ಸ್ಪಷ್ಟತೆ ಅವನಿಗೆ ಇತ್ತು. ಜೀವನದಲ್ಲಿ ಗುರಿ, ಗುರು ಎಲ್ಲವೂ ಅಗತ್ಯ. ಗುರುವಿನ ಮಾರ್ಗದರ್ಶನ ಅತ್ಯಂತ ಅಗತ್ಯ. ದೇವನೂರು ಮಹದೇವರು ಹೇಳಿದ ಹಾಗೆ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ನಾಳೆ ಫಲ ಕೊಟ್ಟೇ ಕೊಡುತ್ತದೆ. ಭೂಮಿಗೆ ಬಿದ್ದ…
ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ನೇತೃತ್ವದಲ್ಲಿ ಫೆ. 3ರಂದು ಐಕಳಬಾವ ಕಂಬಳ ಜರಗಲಿದೆ. ಕಂಬಳವನ್ನು ನಿರಂತರವಾಗಿ ಆಯೋಜಿಸುವ ನಿಟ್ಟಿನಲ್ಲಿ 1 ಕೋಟಿ ರೂ.ಗಳ ಶಾಶ್ವತ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಕಂಬಳ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಬೆಳಗ್ಗೆ 8.30ಕ್ಕೆ ಧಾರ್ಮಿಕ ವಿಧಿಯೊಂದಿಗೆ ಕಂಬಳ್ಳೋತ್ಸವ ಆರಂಭಗೊಳ್ಳಲಿದೆ. ಪೂರ್ವಾಹ್ನ 11ಕ್ಕೆ ಐಕಳಬಾವ ಕುಟುಂಬಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಡಾ| ಕೆ.ಪಿ.ಕೆ. ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅದಾನಿ ಫೌಂಡೇಶನ್ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಕಂಬಳ ಕರೆಗಳನ್ನು ಉದ್ಘಾಟಿಸುವರು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತ ಆಸ್ರಣ್ಣ ಶುಭಾಶಂಸನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭಾಗವಹಿಸಲಿದ್ದಾರೆ. ಸಂಜೆಯ ಸಭಾ ಕಾರ್ಯಕ್ರಮವನ್ನು ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಡಾ| ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ…
ಬಂಟರ ಹೆಸರಿನಲ್ಲಿಯೇ ಒಂದು ಶಕ್ತಿ ಸಂಘಟನೆ ಇದೆ. ಯಾವುದು ಅಸಾಧ್ಯವೋ ಅದನ್ನು ಸಾಧಿಸಿ ತೋರಿಸುವ ಗುಣ ಬಂಟರಲ್ಲಿದೆ. ಮುಂಬಯಿ ಬಂಟರ ಸಂಘ ಮಾಡುತ್ತಿರುವ ಸಮಾಜ ಸೇವೆ ಅನನ್ಯವಾದುದು. ದುಡಿದ ಹಣ ಸಮಾಜದ ಹಿತಕ್ಕೆ ಬಳಸಿದರೆ ಸಮಾಧಾನ, ಸಂತೃಪ್ತಿ ಎರಡೂ ಇದೆ. ಸಮಾಜ ಸೇವೆಯೇ ದೇವರ ಸೇವೆ. ಶ್ರದ್ದಾ ಭಕ್ತಿಯಿಂದ ಆ ಕೆಲಸ ಬದುಕಿದಷ್ಟು ಕಾಲ ಪ್ರಾಮಾಣಿಕವಾಗಿ ಮಾಡಿದರೆ ಸಾಕ್ಷಾತ್ಕಾರವಾಗಿ ಎಲ್ಲರ ಸಹಕಾರ ಸಿಗುತ್ತದೆ. ಮುಂಬಯಿ ಬಂಟರ ಸಂಘ ಸಮಾಜ ಬಾಂಧವರ ಅಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ 9 ಪ್ರಾದೇಶಿಕ ಸಮಿತಿ ಹೊಂದಿದ್ದು, ಪ್ರಾದೇಶಿಕ ಸಮಿತಿಯ ಆಧಾರದಿಂದ ತನ್ನ ಕಾರ್ಯಾ ಚಟುವಟಿಕೆಗಳನ್ನು ಸಮಾಜ ಬಾಂಧವರಿಗೆ ತಲುಪಿಸುವಂತೆ ಮಾಡುತ್ತಿದೆ. 2009 ರಲ್ಲಿ ಬಂಟರ ಧೀಮಂತ ನಾಯಕ ಆಗಿನ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ವಸಾಯಿ ದಹಾಣು ಸಮಿತಿಯ 2023-2026ರ ಅವಧಿಯ ನೂತನ ಕಾರ್ಯಾಧ್ಯಕ್ಷರಾಗಿ ಕೊಡುಗೈ ದಾನಿ, ನಗುಮೊಗದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಹಾಗೂ ಪದಾಧಿಕಾರಿಗಳು,…
ಗೋವಾ ಬಂಟರ ಸಂಘದ 24 ನೇ ವಾರ್ಷಿಕ ಮಹಾಸಭೆ ಹಾಗೂ ಪರಿವಾರ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮವು ಫೆಬ್ರವರಿ 4 ರ ಆದಿತ್ಯವಾರ ಬೆಳಗ್ಗೆ 9.00 ಗಂಟೆಗೆ ಲಕ್ಷ್ಮೀ ಎಂಪಾಯರ್ ಹೋಟೆಲ್, ಮಡ್ ಗಾಂವ್ ರೈಲ್ವೆ ಸ್ಟೇಷನ್ ಎದುರುಗಡೆ, ಗೋವಾ ಇಲ್ಲಿ ಜರಗಲಿದೆ. ಅಂದು ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಉಪಸ್ಥಿತಲಿರುವರು. ವಿಭಿನ್ನ ರೀತಿಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯದ ಮೂಲಕ ಸಮಾಜ ಭಾಂಧವರ ಏಳಿಗೆಗೆ ಶ್ರಮಿಸುತ್ತಿರುವ ಗೋವಾ ಬಂಟರ ಸಂಘವು ಅಧ್ಯಕ್ಷರಾದ ಶಶಿಧರ ನಾಯ್ಕ್ ರ ದಕ್ಷ ಅಧ್ಯಕ್ಷತೆಯಲ್ಲಿ ಹಾಗೂ ಪದಾಧಿಕಾರಿಗಳ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಬೆಳಿಗ್ಗೆ 8.30 ರಿಂದ 9.00 ರವರೆಗೆ ಉಪಹಾರ, ಅತಿಥಿಗಳ ಸ್ವಾಗತ ಭಾಷಣ, ಕಾರ್ಯದರ್ಶಿಯವರಿಂದ ವರದಿ ವಾಚನ ಹಾಗೂ ವಾರ್ಷಿಕ ಲೆಕ್ಕ ಮಂಡನೆ, ಎಸ್.ಎಸ್., ಎಚ್. ಎಸ್. ಸಿ ಹಾಗೂ ಪದವೀಧರ ಮಕ್ಕಳಿಗಾಗಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ಸಮಾಜದ ಸಾಧಕರ ಗುರುತಿಸುವಿಕೆ, ಅತಿಥಿ ಗಣ್ಯರಿಗೆ ಸನ್ಮಾನ, ಮಧ್ಯಾಹ್ನ…