Author: admin
ದಿನಾಂಕ 13-8-2023 ರ ರವಿವಾರ ಯುವ ಬಂಟರ ಸಂಘ (ರಿ) ಕಂಬಳಕಟ್ಟ ಕೊಡವೂರು ಇವರ ಆಶ್ರಯದಲ್ಲಿ ನಡೆಯಲಿರುವ ‘ಆಟಿ ಒಂಜಿ ನೆಂಪು’ ಸಭಾ ಕಾರ್ಯಕ್ರಮದಲ್ಲಿ ಶ್ರೀ ಯಶ್ ಪಾಲ್ ಎ.ಸುವರ್ಣ (ಮಾನ್ಯ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ ) ಇವರ ಗೌರವ ಉಪಸ್ಥಿತಿಯಿದ್ದು, ಮುಖ್ಯ ಅತಿಥಿಯಾಗಿ ಶ್ರೀ ಬಿ ಜಯಕರ್ ಶೆಟ್ಟಿ ಇಂದ್ರಾಳಿ (ಪ್ರಧಾನ ಕಾರ್ಯದರ್ಶಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು) ಇವರು ಭಾಗವಹಿಸಲಿದ್ದಾರೆ. ಆಟಿ ತಿಂಗಳ ಮಹತ್ವದ ಬಗ್ಗೆ ಮಾತುಕತೆಯನ್ನು ಶ್ರೀಮತಿ ವಂದನಾ ರೈ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕರು ಜೇಸಿ ವಿದ್ಯಾಸಂಸ್ಥೆ ಕಾರ್ಕಳ) ಇವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂದಗಾಣಿಸಿ ಕೊಡಬೇಕು ಎಂದು ಶ್ರೀ ಶಿವಪ್ರಸಾದ್ ಶೆಟ್ಟಿ , ಮಜಲಮನೆ (ಅಧ್ಯಕ್ಷರು), ಶ್ರೀ ಪುಷ್ಪರಾಜ ಶೆಟ್ಟಿ, ಆದಿ ಉಡುಪಿ (ಪ್ರಧಾನ ಕಾರ್ಯದರ್ಶಿ), ಶ್ರೀ ರಮೇಶ್ ಶೆಟ್ಟಿ, ಮೂಡುಬೆಟ್ಟು (ಖಜಾಂಚಿ ) ಹಾಗೂ ಸರ್ವ ಸದಸ್ಯರು, ಪದಾಧಿಕಾರಿಗಳು ಕೋರಿದ್ದಾರೆ. ವಿ.…
ಮಾನವರಿಗೆ ಮದುವೆ ಒಂದು ಸಾಮಾಜಿಕ ಸದಾಚಾರ. ಮನುಷ್ಯನಿಗೆ ನಾಗರೀಕತೆ ತಿಳಿಯದ ಆ ಕಾಲಘಟ್ಟದಲ್ಲಿ ಸ್ತ್ರೀ – ಪುರುಷರ ಮಧ್ಯೆ ಮದುವೆಯೆನ್ನುವುದೇ ಇರಲಿಲ್ಲ. ಸಾಮಾನ್ಯ ಪ್ರಾಣಿಗಳಂತೆ ಇಚ್ಛಕಾಮುಕರಾಗಿ ಇರುತ್ತಿದ್ದರು. ಮಕ್ಕಳನ್ನು ಸಾಕುವುದು, ಬೆಳೆಸುವುದು ಕೇವಲ ಹೆಂಗಸರ ಕೆಲಸವಾಗಿತ್ತು. ಹೆಣ್ಣನ್ನು ಸಂಭೋಗ ಸುಖಕ್ಕೋಸ್ಕರ ಮಾತ್ರ ಗಂಡಸು ಉಪಯೋಗಿಸುತ್ತಿದ್ದ ಕಾಲವದು. ಹೆಣ್ಣನ್ನು ಬಲಾತ್ಕಾರವಾಗಿ ಅನುಭವಿಸುತ್ತಿದ್ದರು. ಪುರುಷರು ಹೆಣ್ಣಿಗಾಗಿ ತಮ್ಮ ತಮ್ಮೊಳಗೆ ಕಾದಾಡುತ್ತಿದ್ದರು. ಪುರುಷರ ಜೊತೆ ಕಾದಾಡುವ ಶಕ್ತಿಯಿಲ್ಲದ ಹೆಣ್ಣು ಅಸಹಾಯಕಳಾಗಿ ಪುರುಷರ ಕಾಮದಾಹಕ್ಕೆ ಬಲಿಯಾಗುತ್ತಿದ್ದಳು. ಹೆಣ್ಣಿಗೆ ರಕ್ಷಣೆಯೇ ಇರುತ್ತಿರಲಿಲ್ಲ. ಇದನ್ನು ಅರಿತ ಋಷಿ ಸಮೂಹ ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಕಟ್ಟಳೆಯನ್ನು ವಿಧಿಸಿದರು. ಅಲ್ಲಿಂದ ಹೆಣ್ಣಿಗೆ ರಕ್ಷಣೆಯ ಹಾದಿ ಸುಗಮವಾಯಿತು. ಸುಖ ಜೀವನಕ್ಕೆ ಹೆಣ್ಣು ಪಾದರ್ಪಣೆ ಮಾಡಿದಳು. ಸ್ತ್ರೀಯರನ್ನು ಪರಪುರುಷರ ಕಾಮಲಾಲಾಸೆಯಿಂದ ಕಾಪಾಡುವುದಕ್ಕಾಗಿ ಆ ಸಮಯದಲ್ಲಿ ಪಾತಿವೃತ್ಯ ಎಂಬ ಏಕಪುರುಷ ನಿಯಮವನ್ನು ಮಾಡಿದರು. ಈ ನಿಯಮದಿಂದಾಗಿ ಸ್ತೀಯರನ್ನು ಮನೆಯಲ್ಲಿ ಬಿಟ್ಟು ಪುರುಷ ಆಹಾರ ಸಂಪಾದನೆ ಮಾಡಿಕೊಂಡು ಬಂದು ರಕ್ಷಣೆ ನೀಡುವಂತಾಯಿತು. ಮುಂದೆ ಇದಕ್ಕೆ ಋಷಿಮುನಿಗಳು…
ಹಂಪಿ ಎಂದಾಕ್ಷಣ ರಾಜ ವೈಭವಗಳು ಕಣ್ಮಂದೆ ಎದ್ದು ಬರುತ್ತದೆ. ಇಂತಹ ಪಾರಂಪರಿಕ ತಾಣವನ್ನು ಸುತ್ತಾಡುವುದೇ ಒಂದು ಸೊಗಸು. ವಾರಂತ್ಯದಲ್ಲಿ ಪಯಣಿಸಲು ಹಂಬಲಿಸುವ ಮನಕ್ಕೆ ಖಂಡಿತವಾಗಿ ಎರಡು ದಿನ ಸುತ್ತಿ ನೋಡುವಷ್ಟು ಇಲ್ಲಿದೆ. ಅದರಲ್ಲೂ ಮುಖ್ಯವಾಗಿ ವಿರೂಪಾಕ್ಷ ದೇವಾಲಯದ ಕೌತುಗಳು ಅನೇಕ. ಮುಂಜಾನೆ ಸುಮಾರು 8 ಗಂಟೆಗೆ ಹಂಪಿಯ ಅಂಗಣ ತಲುಪಿದ್ದೇವು ನಾವು. ಬಿಸಿಲಿನಲ್ಲಿ ಇಲ್ಲಿ ತಿರುಗಾಟ ಕಷ್ಟ ಅಂತ ಬೇಗನೆ ಬಂದು ನೋಡಿದರೆ ನಮ್ಮ ಗೈಡ್ ಒಂದು ಕಡೆ ನಮ್ಮ ವಾಹನ ನಿಲ್ಲಿಸಿ ಹೇಳಿದರು, ಇಲ್ಲಿಂದಲೇ ನಡೆದು ಸಾಗಬೇಕು. ಹಾಗೆ ಅಂದದ್ದೆ ತಡ ಕಾಲ್ನಡಿಗೆಯಲ್ಲಿ ಸಾಗಲು ಕೆಲವರು ನಮ್ಮಿಂದ ಅಸಾಧ್ಯ ಎಂದು ವಾಹನದಲ್ಲೇ ಕುಳಿತಿದ್ದರು. “ಕಣ್ಣಿದ್ದರೆ ಕನಕಗಿರಿ, ಕಾಲಿದ್ದರೆ ಹಂಪಿ ಎಂದೂ ಹಂಪಿಯನ್ನು ನಡೆದು ನೋಡು. ಉಜ್ಜಯಿನಿಯನ್ನು ಕುಂತು ನೋಡು” ಎಂದು ಬಣ್ಣಿಸಿದ್ದು ನಿಜವಾಗಿಯೂ ಸತ್ಯದ ನುಡಿ. ಈ ಕಲಾತ್ಮಕತೆಯನ್ನು ಗುರುತಿಸುವ ಒಳಗಣ್ಣು ಬೇಕು. ಬಗೆದಷ್ಟು ದೊರಕುವ ಕೌತುಕ ಮೊಗೆದಷ್ಟೂ ಹೊಸತನ ಮೂಕ ವಿಸ್ಮಯಗೊಳಿಸುವ ಶಿಲ್ಪಕಲಾ ಬೆರಗು ಇಲ್ಲಿದೆ. ಆಚೆ ಈಚೆ…
ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಇದೀಗ ಯುವ ಬಂಟರ ಸಂಘ, ಕಂಬಳಕಟ್ಟ- ಕೊಡವೂರು ಇದರ ದಶಮಾನೋತ್ಸವದ ಪ್ರಯುಕ್ತ ಸಂಘ ವ್ಯಾಪ್ತಿಯ 25 ವರ್ಷದೊಳಗಿನ ಯುವಕ – ಯುವತಿಯರಿಗೆ ಬ್ಯಾಂಕಿಂಗ್ – ಫೈನಾನ್ಸ್, ಐಟಿ, ಏವಿಯೇಷನ್, ಟ್ರಾವೆಲ್ ಟೂರಿಸಂ, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಸಂದರ್ಶನ ಕಲೆಯೊಂದಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಿದೆ. ಈ ತರಬೇತಿ ಪಡೆಯಲು ಇಚ್ಛಿಸುವ 10 ಅಭ್ಯರ್ಥಿಗಳಿಗೆ ಶುಲ್ಕದ ಶೇ. 50% ಸ್ಕಾಲರ್ ಶಿಪ್ ನ್ನು ಉನ್ನತಿ ಕೆರಿಯರ್ ಅಕಾಡೆಮಿಯು ನೀಡಲಿದೆ. ಈ ತರಬೇತಿಯೊಂದಿಗೆ ಅಭ್ಯರ್ಥಿಗಳು ಆನ್ ಲೈನ್ ಬಿ.ಕಾಂ, ಬಿಬಿಎ, ಬಿಸಿಎ, ಬಿಎ ಪದವಿಯನ್ನು ಅಥವಾ ಎಂಕಾಂ, ಎಂಬಿಎ, ಎಂಸಿಎ, ಎಂಎ ಸ್ನಾತಕೋತ್ತರ ಪದವಿಯನ್ನು ಪಡೆಯಲು ಇಚ್ಛಿಸಿದಲ್ಲಿ ಯುಜಿಸಿ ಮಾನ್ಯತೆಯುಳ್ಳ ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಾದ ಜೈನ್ ಯೂನಿವರ್ಸಿಟಿ, ಬೆಂಗಳೂರು, ಹಿಂದೂಸ್ತಾನ್ ಯೂನಿವರ್ಸಿಟಿ, ಚೆನ್ನೈ, ವಿಜ್ಞಾನ್ ಯೂನಿವರ್ಸಿಟಿ,…
ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು ಮುನ್ನಡೆದು ಸಾಧಕರಾಗಿ ಕಾಣಸಿಗುವವರು ವಿರಳ. ಇಂತಹ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಡೊಂಬಿವಲಿ, ಥಾಣೆ, ಮುಂಬಯಿ ಪರಿಸರದಲ್ಲಿ ಸಮಾಜಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೇ ಅದು ಅಡ್ವೋಕೇಟ್ ಸುರೇಶ್ ಶ್ಯಾಮ ಶೆಟ್ಟಿಯವರು. ಎಡಗೈಯ್ಯಲ್ಲಿ ನೀಡಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವ ಮನೋಧರ್ಮವನ್ನು ರೂಡಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು. ಸಾಂತೂರ್ ಬಾಳಿಕೆ ಶ್ಯಾಮ ಶೆಟ್ಟಿಯವರ ಸುಪುತ್ರರಾಗಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರು ಉಡುಪಿ ಜಿಲ್ಲೆಯಲ್ಲಿ ಮುಗಿಸಿ ಡಿಗ್ರೀ ಹಾಗೂ…
ಬದುಕಿನ ಮೂಲ ಸಂಸ್ಕೃತಿಯಾಗಿರುವ ಕೃಷಿ ಮತ್ತು ಮಣ್ಣಿನ ಗುಣವನ್ನು ಮುಂದಿನ ಯುವ ಪೀಳಿಗೆಗೆ ಅರ್ಥವತ್ತಾಗಿ ಪರಿಚಯಿಸುವ ಕಾರ್ಯ ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಿದೆ ಎಂದು ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ಬಂಟರ ಸಂಘ ಸುರತ್ಕಲ್ ವತಿಯಿಂದ ನಡೆದ ಕೃಷಿ, ತೋಟಗಾರಿಕೆ ಮತ್ತು ಪಶು ಇಲಾಖೆ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ನಡೆದ ಸಾರ್ವಜನಿಕ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಬೆನ್ನುಲುಬು ಕೃಷಿಕರಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರ ಕೃಷಿಕರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅದರ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯಬೇಕು ಎಂದರಲ್ಲದೆ ಬಂಟರ ಸಂಘವು ಈ ನಿಟ್ಟಿನಲ್ಲಿ ಕೃಷಿಗೆ ಅತ್ಯಂತ ಮಹತ್ವ ನೀಡಿದ್ದು ಶ್ಲಾಘನೀಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಕ್ಕಾರ್ ಸಿರಿ ಕುರಲ್ ರೈತ ಸಂಸ್ಥೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಎಕ್ಕಾರು,…
ಕಡಂದಲೆ ಎಂದರೆ ನೆನಪಾಗುತ್ತಾರೆ ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು, ಗುತ್ತಿನ ಗತ್ತಿನ ಬಂಟ ಮನೆತನದ ಉದ್ಯಮಿಗಳು, ಶಿಕ್ಷಣ ತಜ್ಞರು. ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತ ತುಳುನಾಡಿನ ಪವಿತ್ರ ನೆಲ ತುಳುವ ತುಂಡರಸರು ವೈಭವದಿಂದ ಆಳಿದ ನೆಲ. ಇಲ್ಲಿನ ಕಡಂದಲೆ ಪರಾರಿ ಎಂಬ ಕೂಡು ಕುಟುಂಬದ ಬಂಟರ ಐತಿಹಾಸಿಕ ಹಿನ್ನೆಲೆಯ ಸದಸ್ಯರೆಲ್ಲರೂ ಮೇಧಾವಿಗಳು, ಕಾನೂನು ಜ್ಞಾನವುಳ್ಳ ನ್ಯಾಯ ತೀರ್ಮಾನ ಸಮರ್ಥರು, ಪರಿಶ್ರಮಿಗಳು, ಕೃಷಿ ಬೇಸಾಯ ನಿರತರು, ಕೆಲವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಅಂಥಹ ಪ್ರತಿಷ್ಠಿತ ಕುಟುಂಬದಲ್ಲಿ ಜನ್ಮ ತಾಳಿ ಇಂದು ಹತ್ತಾರು ಕ್ಷೇತ್ರಗಳಲ್ಲಿ ಶಾಶ್ವತ ಕೀರ್ತಿ ಪಡೆದ ಮಹನೀಯರಲ್ಲಿ ಆದರಣೀಯ ಕಡಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟರು ಕೂಡಾ ಒಬ್ಬರು. ಬೊಡಂತಿಲ ಪಡು ದಿವಂಗತ ಲೋಕಯ್ಯ ಶೆಟ್ಟಿ ಹಾಗೂ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀಮತಿ ಜಲಜಾ ಎಲ್ ಶೆಟ್ಟಿ ದಂಪತಿಯರ ಕೀರ್ತಿ ವರ್ಧನ ಸಂತಾನವಾಗಿ ಜನಿಸಿದ ಶೆಟ್ಟರು ಬಾಲ್ಯದ ದಿನಗಳಿಂದಲೇ ಆಳ ಚಿಂತನೆಯ ಹೊಳೆವ ಕಂಗಳ ಪ್ರತಿಭಾವಂತ ಬಾಲಕರಾಗಿದ್ದರು. ಪ್ರಕಾಶ್…
ಜೀವನ ಒಂದು ಸುಂದರವಾದ ಉದ್ಯಾನವನದಂತೆ. ಅದರಲ್ಲಿ ನಮ್ಮೆಲ್ಲರ ಪಾತ್ರ ಬಹುಮುಖ್ಯ. ಅಲ್ಲಿ ಮೊಳೆವ ಕಳೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದು ಹಾಕದಿದ್ದರೆ ಜೀವನ ಸೌಂದರ್ಯ ಹಾಳಾಗುತ್ತದೆ. ಮಾನವನ ಯೋಚನೆ, ಯೋಜನೆಯು ವಿಚಿತ್ರವಾದದು. ಸಾಕೆನಿಸದ ಸ್ವಪ್ರತಿಷ್ಠೆ, ಸ್ವಾರ್ಥ, ದುರಾಸೆಯನ್ನು ನಿಯಂತ್ರಿಸಲಾಗದೆ ಸುಲಭದಲ್ಲಿ ಸುಖ ಸೌಕರ್ಯ ಪಡೆಯುವ ಹಪಾಹಪಿಯಲ್ಲಿ ಕಿರುದಾರಿ, ಅಡ್ಡದಾರಿಯ ಓಟದಲ್ಲಿ ಅಮೂಲ್ಯವಾದುದು ಕಳೆದು ಹೋದದ್ದು ಗೊತ್ತೇ ಆಗುವುದಿಲ್ಲ. ಸುಖ, ಶಾಂತಿ ಮತ್ತೆಲ್ಲೋ ಯಾವುದರಲ್ಲೋ ಇರುವುದಿಲ್ಲ. ಅವರವರ ಮನಸ್ಸಿನಲ್ಲಿ ಅಡಗಿರುತ್ತದೆ. ಕೆಲವರಂತೂ ನಿರ್ದಾಕ್ಷಿಣ್ಯವಾಗಿ ನಕಾಲರಾತ್ಮಕ ಆಲೋಚನೆಗಳಿಂದ ತುಂಬಿರುತ್ತಾರೆ. ಸಂತೋಷಕರ ಜೀವನಕ್ಕಾಗಿ ಒಳ್ಳೆಯ ಆಲೋಚನೆಗಳನ್ನು ಮಾಡಿ ನಿರಂತರ ಆಶಾವಾದಿಗಳಾಗಿರೋಣ. ಕರ್ತವ್ಯದ ಬಗ್ಗೆ ಆಲೋಚಿಸಿ ಫಲಿತಾಂಶಗಳ ಮೇಲೆ ಆಧಾರವಾಗಿರಬೇಡಿ. ಯಾವುದೇ ಕೆಲಸದಲ್ಲಿ ಏಕಾಗ್ರತೆ ಎಷ್ಟು ಮುಖ್ಯವೋ ಕರ್ತವ್ಯ ನಿರ್ವಹಣೆ ಕೂಡ ಅಷ್ಟೇ ಮುಖ್ಯ. ಈ ಪ್ರಪಂಚಕ್ಕೆ ಒಡೆಯನಾದರೂ ಕೆಲವರು ಸಂತೋಷದಿಂದ ಇರುತ್ತಾರೆ ಅನ್ನೋ ಗ್ಯಾರಂಟಿ ಏನು ಇಲ್ಲ . ಸಂತೋಷ ಅಂತರಂಗದಲ್ಲಿ ಅಡಗಿದ ಒಂದು ಭಾವನೆ. ಅದರ ಇರುವಿಕೆಯನ್ನು ತಿಳಿದುಕೊಂಡು ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಪುಟ್ಟ…
ಶಿವಮೊಗ್ಗ ಕುವೆಂಪು ವಿ. ವಿ. ಯಿಂದ ಗೌರವ ಡಾಕ್ಟರೇಟ್ ಪಡೆದ ಇಂಟರ್ ನ್ಯಾಷನಲ್ ಬಂಟ್ಸ್ ಟ್ರಸ್ಟ್ ಸ್ಥಾಪಕಾಧ್ಯಕ್ಷರಾದ ಡಾ. ಅತ್ತೂರು ಸದಾನಂದ ಶೆಟ್ಟಿ ಅವರಿಗೆ ಅಭಿನಂದನೆ ಸಮಾರಂಭ ಕಾರ್ಯಕ್ರಮ ಬಂಟರ ಸಂಘ ಜಪ್ಪು ಮಾರ್ನಮಿಕಟ್ಟೆ ವತಿಯಿಂದ ನಗರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ನಯನಾ ಪಿ. ಶೆಟ್ಟಿ ಸ್ವಾಗತಿಸಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪೂರ್ಣಿಮಾ ಎನ್. ಶೆಟ್ಟಿ, ರೇಖಾ ಆರ್. ನಾಯರ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಕಾರ್ಯಕ್ರಮ ಜರುಗಿತು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ದೇವಿಚರಣ್ ಶೆಟ್ಟಿ ಉದ್ಯಮಿ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ರೂವಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಕದ್ರಿ ನವನೀತ್ ಶೆಟ್ಟಿ ತುಳು ವಿದ್ವಾಂಸ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸರಿತಾ ಎಸ್. ಶೆಟ್ಟಿ , ಕೋಶಾಧಿಕಾರಿ ಕೆ. ಗೋಪಿನಾಥ್ ಶೆಟ್ಟಿ ಉಪಸ್ಥಿತರಿದ್ದರು. ನಿಖಿಲ್ ಶೆಟ್ಟಿ ವಂದಿಸಿ, ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯುವ ವಿಶ್ವ ಬಂಟರ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ವಿಶ್ವ ಬಂಟರ ಸಮ್ಮೇಳನದಲ್ಲಿ ನಡೆಯುವ ವಿಶ್ವ ಬಂಟರ ಕ್ರೀಡೋತ್ಸವ ಮತ್ತು ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿಶ್ವದಲ್ಲಿರುವ ಬಂಟರನ್ನು ಒಂದೇ ಚಪ್ಪರದಡಿಯಲ್ಲಿ ಸೇರಿಸುವ ಪ್ರಯತ್ನದಲ್ಲಿ ವಿಶ್ವ ಬಂಟರ ಸಮ್ಮಿಲನ ನಡೆಯಲಿದೆ. ಸಮ್ಮೇಳನದಲ್ಲಿ ಸ್ವಾಮೀಜಿಗಳು, ರಾಜಕೀಯ ನೇತಾರರು, ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ…