Author: admin
ಕನ್ನಡ ಸೇವಾ ಸಂಘ ಪೊವಾಯಿ ಇದರ ಸದಸ್ಯರು, ಅಧ್ಯಕ್ಷ ನ್ಯಾಯವಾದಿ ಆರ್ ಜಿ ಶೆಟ್ಟಿ, ಶ್ರೀಮತಿ ಪ್ರಶಾಂತಿ ಡಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ ಇವರ ನೇತೃತ್ವದ ನಿಯೋಗವು ”ಸಲಾಂ ಬಾಲ ಆಶ್ರಮ”ಕ್ಕೆ ಸಂಘದ ರಜತ ಮಹೋತ್ಸವ ನಿಮಿತ್ತ ಭೇಟಿ ನೀಡಿ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ನೋಟ್ ಬುಕ್ ಹಾಗೂ ಇನ್ನಿತರ ಪಠ್ಯ ಪರಿಕರಗಳನ್ನು ನೀಡಿದರು. ಪೊವಾಯಿ ಕನ್ನಡ ಸೇವಾ ಸಂಘವು ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ತುಳು ಕನ್ನಡ ಭಾಷೆ, ಸಂಸ್ಕೃತಿಯನ್ನು ಮಹಾರಾಷ್ಟ್ರದಲ್ಲಿ ಉಳಿಸಿ ಬೆಳೆಸುವಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ.
ಮೂಡುಬಿದಿರೆ: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಪದವಿ ಪೂರ್ವ ಶಿಕ್ಷಣ-ಮುಕ್ತ ಸಮ್ಮೇಳನ ಸಮಾರೋಪ ಸಮಾರಂಭವು ಆಳ್ವಾಸ್ನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಪ್ಮಾದ ರಾಜ್ಯ ಕಾರ್ಯದರ್ಶಿ ನರೇಂದ್ರ ಎಲ್ ನಾಯಕ್, ಈ ಸಮ್ಮೇಳನದ ಮೂಲಕ ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಕಾಲೇಜುಗಳ ಜವಾಬ್ದಾರಿ, ಎದುರಿಸುತ್ತಿರುವ ಸವಾಲುಗಳ ಕುರಿತು ವಿಸ್ತ್ರತವಾಗಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರದೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳು ಇಡಬೇಕಾದ ಹೆಜ್ಜೆ ಹಾಗೂ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಅವಕಾಶ ಲಭಿಸಿದೆ ಎಂದರು. ಕುಪ್ಮಾ ರಾಜ್ಯ ಸಮಿತಿ ಗುರುತಿಸಲ್ಪಟ್ಟ ಜಿಲ್ಲಾವಾರು ಸಂಯೋಜಕರು ಜಿಲ್ಲಾ ಮಟ್ಟದಲ್ಲಿ ಹತ್ತು ಸದಸ್ಯರುಗಳನ್ನೊಳಗೊಂಡ ಜಿಲ್ಲಾ ಕಾರ್ಯಕಾರಿಣಿ ಸಮಿತಿಯನ್ನು ಸಂಯೋಜನೆ ಮಾಡಿ 30 ದಿನಗಳೊಳಗೆ ರಚಿಸಿ ವರದಿಯನ್ನು ನೀಡುವುದಾಗಿ ನಿರ್ಧರಿಸಲಾಯಿತು. ಕುಪ್ಮಾದ ಮೊದಲ ಸಮ್ಮೇಳನ ಯಶಸ್ವಿಯಾಗಿ…
ಮೂರ್ನಾಲ್ಕು ದಶಕಗಳ ಹಿಂದೆ “ಗುಜರಿಗೆ ಹಾಕುವುದು’ ಎಂಬ ಪರಿಕಲ್ಪನೆಯೇ ಇರಲಿಲ್ಲ. ದಿನಬಳಕೆಯಲ್ಲಿ ಇದ್ದುದು ಕೆಲವೇ ಕೆಲವು ಪ್ಲಾಸ್ಟಿಕ್ ವಸ್ತುಗಳು. ಯಾವುದನ್ನೇ ಆದರೂ ಅದರ ಪೂರ್ಣ ಬಾಳಿಕೆಯ ವರೆಗೆ ಉಪಯೋಗಿಸುವುದು ಮತ್ತು ಆ ಬಳಿಕ ಅದನ್ನು ಬೇರಾವುದಾದರೂ ರೂಪದಲ್ಲಿ ಮರುಬಳಕೆ ಮಾಡುವುದು. ಒಂದು ಅಂಗಿಯನ್ನು ತೆಗೆದುಕೊಂಡರೆ, ಅದು ಪೇಟೆಗೆ ಧರಿಸುವ ಯೋಗ್ಯತೆಯನ್ನು ಕಳೆದುಕೊಂಡ ಮೇಲೆ ಮನೆಯಲ್ಲಿ ಧರಿಸುವುದು. ಆ ಬಳಕೆಗೂ ಹಳತಾದ ಬಳಿಕ ನೆಲ ಒರೆಸಲು ಅಥವಾ ನಾಯಿಗೆ ಮಲಗುವುದಕ್ಕಾಗಿ ಅಡಿಗೆ ಹಾಸಲು ಉಪಯೋಗ. ಪ್ರತಿಯೊಂದು ವಸ್ತುವೂ ಹೀಗೆಯೇ. ಈಗಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ದಿನವೊಂದಕ್ಕೆ ಎಷ್ಟು ಪ್ಲಾಸ್ಟಿಕ್ ವಸ್ತುಗಳು ನಮ್ಮ ಮನೆಯೊಳಕ್ಕೆ ಬರುತ್ತವೆ ಎಂಬುದನ್ನು ಒಂದು ಕ್ಷಣ ಕಣ್ಮುಚ್ಚಿ ಧ್ಯಾನಿಸಿ ನೋಡಿ. ಕ್ಯಾರಿ ಬ್ಯಾಗ್, ಹಾಲಿನ ತೊಟ್ಟೆ, ಜ್ಯೂಸ್ ಬಾಟಲಿ, ಸ್ಟ್ರಾ, ವಿವಿಧ ವಸ್ತುಗಳ ಪ್ಯಾಕಿಂಗ್, ತಿಂಡಿ ತಿನಿಸುಗಳ ಪೊಟ್ಟಣಗಳು… ಹೀಗೆ ಒಂದು ದಿನಕ್ಕೆ ಕಿಲೋಗಟ್ಟಲೆ ಪ್ಲಾಸ್ಟಿಕ್ ಮನೆಯೊಳಗೆ ಬಂದು ಬೀಳುತ್ತದೆ. ಹಿಂದೆ ಪೆನ್ನಿನ ರೀಫಿಲ್ ಖಾಲಿಯಾದರೆ ಹೊಸ ರೀಫಿಲ್ ಹಾಕುತ್ತಿದ್ದೆವು.…
ದೆಹಲಿ ಕರ್ನಾಟಕ ಸಂಘದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ದೆಹಲಿ ಘಟಕ ಮತ್ತು ಸುಳ್ಯದ ಬೆಳ್ಳಾರೆಯ ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ ‘ಯಕ್ಷಧ್ರುವ ಪಟ್ಲ ಸಂಭ್ರಮ-2023’ನ್ನು ದಿನಾಂಕ 30-09-2023ರಂದು ಹಿರಿಯ ಕಲಾವಿದ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಸಂಪೂರ್ಣ ಕಲೆಗಾರಿಕೆಯನ್ನು ಯಕ್ಷಗಾನದಲ್ಲಿ ಮಾತ್ರ ಕಾಣಲು ಸಾಧ್ಯ. ಅದೊಂದು ಅದ್ಭುತ ಲೋಕ. ಇಂದು ಯಕ್ಷಗಾನ ಕೇವಲ ದೇಶ ಮಾತ್ರವಲ್ಲ, ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ತಾವು ಮಾತ್ರ ಬೆಳೆಯದೆ ತಮ್ಮೊಂದಿಗಿರುವವರನ್ನೂ ಬೆಳೆಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಷನ್ ಮೂಲಕ ಹತ್ತಾರು ಪ್ರತಿಭೆಗಳು ಹೊರಬರುವಂತೆ ಮಾಡಿದ್ದಾರೆ” ಎಂದು ಹೇಳಿದರು. ವಿಶೇಷ ಅತಿಥಿಯಾಗಿ ಪಾಲ್ಗೊಂಡ ಜಮ್ಮು-ಕಾಶ್ಮೀರ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಹಿರಿಯಡ್ಕ, “ಇಂದಿನ ಮಕ್ಕಳಿಗೆ ನಾವು ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಕಲಿಸಬೇಕು. ಪಟ್ಲ ಸತೀಶ್ ಶೆಟ್ಟಿ ಅವರಿಗೆ ಹಾಡುಗಾರಿಕೆಯ ದೈವಿಕ ಶಕ್ತಿ ಒಲಿದಿದೆ. ಒಂದು ಜನಸಮೂಹವನ್ನೇ ಸೆಳೆಯುವಂತಹ ಅದ್ಭುತ ಸಾಮರ್ಥ್ಯವನ್ನು ಅವರಿಗೆ ದೇವರು ಕಲ್ಪಿಸಿದ್ದಾನೆ.…
ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಮೂಡಿ ಮರೆಯಾಗುವ ಅಣಬೆಯ ವೈವಿಧ್ಯತೆಗೆ ಲೆಕ್ಕವಿಟ್ಟವರಿಲ್ಲ. ಕೆಲವರಿಗೆ ಇದು ಸ್ವಾದಿಷ್ಟ ಖಾದ್ಯ ಮೂಲ. ಇನ್ನು ಕೆಲವರಿಗೆ ಆಹಾರವಾಗಿ ಬಳಕೆಯಲ್ಲಿಲ್ಲ, ಬಹುದೂರ. ನನ್ನ ಅಕ್ಕನ ಮಗ ಹರೀಶ್ ರೈ ಎರಡು ವಿಶಿಷ್ಟ ಅಣಬೆಗಳನ್ನು ಪರಿಚಯಿಸಿದ. ಒಂದು ; ಅಡಿಕೆ ಅಣಬೆ. ಅಡಿಕೆ ಸಿಪ್ಪೆಯನ್ನು ಅಂಗಳದಲ್ಲೂ ತೆಂಗು, ಅಡಿಕೆಯ ಬುಡದಲ್ಲೋ ರಾಶಿ ಹಾಕಿದರೆ ಅದು ಅಲ್ಲೇ ಕುಮೆದು ಸ್ವಲ್ಪ ಕಪ್ಪಾದ ಮೇಲೆ ಮಲ್ಲಿಗೆ ಮೊಗ್ಗಿನಂತಹ ಪುಟ್ಟ ಅಣಬೆ ಬಿಡುತ್ತದೆ . ಸಂಜೆ ಐದರ ಹೊತ್ತಿಗೆ ಇಂಥ ಸಿಪ್ಪೆ ರಾಶಿಯನ್ನು ಸ್ವಲ್ಪ ಬಿಡಿಸಿ ನೋಡಿ .ಆಗ ತಾನೇ ಮೂಡಿದ ಮೊಗ್ಗು ಅಣಬೆ ಯತೇಚ್ಛವಾಗಿ ಸಿಗುತ್ತೆದೆ. ಇಂಥ ಅಣಬೆಯ ಆಯುಷ್ಯ ಬಹಳ ಕಡಿಮೆ. ಎರಡು ಗಂಟೆಯ ಒಳಗಡೆ ಅದು ವ್ಯಂಜನವಾಗಿ ಮಾರ್ಪಡಬೇಕು. ಸ್ವಾದಿಷ್ಟ ರುಚಿ. ಮತ್ತೆ ಮತ್ತೆ ಬೆಳೆದು ಬಳಸಬಹುದಾದ ಒಂದು ರೀತಿ ಅಣಬೆ ಕೃಷಿ ಎಂದೇ ಪರಿಗಣಿಸಿ ಬಳಸಬಹುದಾದ ಮೂಲವಿದು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಳೆಗಾಲ ಪೂರ್ವದಲ್ಲಿ ಅಡಿಕೆ ಸುಲಿದು ಅಂಗಳಕ್ಕೆ ಹುಲ್ಲು ಬರದ…
ಸಹಕಾರಿ ಸಂಘಗಳ ಕ್ಷೇತ್ರದ ಧುರೀಣ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಹುಟ್ಟು ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಭಾಗವಹಿಸಿ ಶ್ರೀ ಎಂ ಎನ್ ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದರು. ಐಕಳ ಹರೀಶ್ ಶೆಟ್ಟಿಯವರ ಸಮಾಜಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ನೆರವು ನೀಡಿದರು. ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿಯ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರಾದ ನಾಡೋಜ ಡಾ. ಜಿ ಶಂಕರ್, ಮೀನುಗಾರಿಕಾ ಮಹಾಮಂಡಲದ ಶ್ರೀ ಯಷ್ಪಾಲ್ ಸುವರ್ಣ, ಖ್ಯಾತ ಪತ್ರಕರ್ತ ಶ್ರೀ ಮನೋಹರ ಪ್ರಸಾದ್ ಅವರುಗಳು ಉಪಸ್ಥಿತರಿದ್ದರು. For more Kannada News refer Karnataka Times
ಮೂಡುಬಿದಿರೆ: ಜನಪ್ರಿಯತೆಗೆ ಸರಳ ಮಾರ್ಗವಿದೆ, ಆದರೆ ಸಾಧನೆಗಲ್ಲ. ಸಾಧನೆ ಸತತ ಪ್ರಯತ್ನದ ಫಲ ಎಂದು ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು. ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಮೂಡುಬಿದಿರೆಯ ಭಾರತ್ ಸೈಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು. ನಿಮ್ಮನ್ನು ಕರೆಯುತ್ತಿರುವ ಜಗತ್ತಿಗೆ ತಯಾರಾಗಿ, ಬರೀ ಪರೀಕ್ಷೆಗಳಿಗಲ್ಲ. ಶಿಕ್ಷಣದ ಪ್ರತಿ ಹಂತವು ಪ್ರಮುಖವಾದರೂ, ಶಿಕ್ಷಣ ಮುಗಿಸಿ ನಾವು ಸಾಗುವ ವೃತ್ತಿ ಕ್ಷೇತ್ರದಲ್ಲಿನ ನಮ್ಮ ಕ್ಷಮತೆ ನಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಹಾಗಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂತು ಎಂದಾಗ ಹೆಚ್ಚಿನ ಆತ್ಮವಿಶ್ವಾಸವೂ ಬೇಡ, ಕಡಿಮೆ ಬಂತೆಂದು ಕುಗ್ಗುವಿಕೆಯು ಸಲ್ಲ. ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿರಬೇಕು. ಯಾವಾಗ ನಮ್ಮ ಹವ್ಯಾಸವೇ ನಮ್ಮ ಕೆಲಸವಾಗುತ್ತದೆಯೋ ಅಂದು ಯಶಸ್ಸು ನಮ್ಮದಾಗುತ್ತದೆ. ಎಲ್ಲರೂ ಖುಷಿ ಪಡಲು ವಾರದ ಕೊನೆಯ ದಿನವನ್ನು ಬಯಸುತ್ತಾರೆ, ಜೀವನ ಎಂದಿಗೂ ಒಂದೇ ದಿನಕ್ಕೆ…
ಕುಂದಾಪುರದ ಕೊರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡಕ್ಕೆ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ 12 ಜೊತೆ ಶೂ ವಿತರಿಸಿದರು. ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಕಬಡ್ಡಿ ಜಿಲ್ಲಾ ಮಟ್ಟದಲ್ಲಿ ಜಯಗಳಿಸಿ ನವೆಂಬರ್ ಮಂಡ್ಯದಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸಲು ತಂಡದ ಆಟಗಾರರಿಗೆ ಪ್ರಾಯೋಜಿತ 12 ಜೊತೆ ಕಬಡ್ಡಿ ಶೂಗಳನ್ನು ನೀಡಿದರು. ಈ ಸಂದರ್ಭ ಕಬಡ್ಡಿ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯು ಸೀಮಿತ ವಿದ್ಯಾರ್ಥಿಗಳನ್ನು ಹೊಂದಿರುವ ಗ್ರಾಮೀಣ ಸರ್ಕಾರಿ ಶಾಲೆಯಾದರೂ ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದೆ. ವಿಭಾಗೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಗೆಲ್ಲಲು ನಿಮ್ಮ ಅತ್ಯುತ್ತಮವಾದ ಆಟವನ್ನು ಆಡಿ. ನಿಮ್ಮಲ್ಲಿ ದೃಢತೆ ಮತ್ತು ಶಿಸ್ತು ಇರಲಿ. ಅದಕ್ಕಿಂತ ಹೆಚ್ಚಾಗಿ ನೀವು ಆಟವನ್ನು…
ಬಡವರಿಗೆ ಹಾಗೂ ಅವಕಾಶ ವಂಚಿತರಿಗೆ ಸುಸ್ಥಿರ ಹಾಗೂ ಗೌರವಯುತ ಜೀವನಾಧಾರವನ್ನು ಒದಗಿಸುವ ಜವಾಬ್ದಾರಿ ಇರುವ ಎಲ್ಲ ರಾಷ್ಟ್ರಗಳಲ್ಲಿ ಸಹಜವಾಗಿ ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣ ಕ್ರಮಗಳ ಆವಶ್ಯಕತೆಯನ್ನು ಕಂಡುಕೊಳ್ಳಲಾಗಿದೆ. ಹಸಿದವನಿಗೆ ಬದುಕು ಕಟ್ಟಕೊಳ್ಳಲು ಪೂರಕ ಕ್ರಮಗಳನ್ನು ಯೋಚಿಸಿ, ಯೋಜನೆಗಳನ್ನು ಕೈಗೊಳ್ಳಬೇಕಾ ದುದು ಕಲ್ಯಾಣ ರಾಜ್ಯದ ಪರಿಕಲ್ಪನೆಯ ಪ್ರಜಾಪ್ರಭುತ್ವದ ಜವಾಬ್ದಾರಿಯೂ ಹೌದು. ಹಸಿದವನಿಗೆ ಮೀನು ನೀಡಿದರೆ ಒಂದು ದಿನದ ಹಸಿವನ್ನು ತಣಿಸಿದಂತೆ. ಅವನಿಗೆ ಮೀನು ಹಿಡಿಯುವ ಕಲೆಯನ್ನು ಕಲಿಸಿಕೊಟ್ಟರೆ ಅವನಿಗೆ ಬದುಕು ಕೊಟ್ಟಂತೆ ಎಂಬ ಪ್ರಾಜ್ಞರ ನುಡಿ ನಮಗೆ ದಾರಿದೀಪವಾಗಬೇಕು. ಹಸಿದವನಿಗೆ ಬದುಕು ಕಟ್ಟಿಕೊಳ್ಳುವ ಕಲೆಯನ್ನು ಕಲಿಸಬೇಕಾಗಿದೆ ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಬಡವರಾದರೂ ಸ್ವಾವಲಂಬಿಗಳಾಗಿ, ಸ್ವಾಭಿಮಾನಿಗಳಾಗಿ ಬೆಳೆಯುವಂತೆ ಮಾಡಿದಾಗ ಸೇರ್ಪಡೆಯುಳ್ಳ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇತಿಹಾಸದಿಂದ ಪಾಠ ಕಲಿಯಬೇಕು ಅತ್ಯಂತ ಸುಂದರ ಮತ್ತು ರಮಣೀಯವಾದ ಪ್ರಕೃತಿ ತಾಣಗಳಿಗೆ ಮತ್ತು ವಿಶ್ವ ಸುಂದರಿಯರ ತಾಣವಾದ ವೆನೆಜುವೆಲಾ ಏಕಾಏಕಿ 1970ರಲ್ಲಿ ಪ್ರಪಂಚದ ಅತ್ಯಂತ 20 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಸುಲಭವಾಗಿ ಅಧಿಕಾರಕ್ಕೆ ಬರಬೇಕೆಂಬ…
ಬನ್ನಾಡಿ ಗ್ರಾಮದ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ 2022-25ರ ಸಾಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಇವರು ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿಯಾಗಿ ಪ್ರಭಾಕರ ಪೂಜಾರಿ ಉಪ್ಲಾಡಿ ಬಡಾಬೆಟ್ಟು, ಕೋಶಾಧಿಕಾರಿಯಾಗಿ ಉಪ್ಲಾಡಿ ಶ್ರೀಧರ್ ಆರ್ ಶೆಟ್ಟಿ ಹಾಗೂ ಸದಸ್ಯರಾಗಿ ಉಪ್ಲಾಡಿ ಗೋಪಾಲಕೃಷ್ಣ ಭಟ್, ಉಪ್ಲಾಡಿ ವೆಂಕಟರಮಣ ಭಟ್, ಶಿವಾನಂದ ನಾೈರಿ ಬಡಾಬೆಟ್ಟು, ದಿನೇಶ ತೆಂಕಬೆಟ್ಟು, ಚೈತ್ರಾ ಬಡಾಬೆಟ್ಟು ಮತ್ತು ಪಲ್ಲವಿ ಬಡಾಬೆಟ್ಟು ಇವರನ್ನು ಮುಂದಿನ 3 ವರ್ಷಗಳ ಅವಧಿಗೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ, ಸಹಾಯಕ ಆಯುಕ್ತರು (ಪ್ರಭಾರ), ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಉಡುಪಿ ಜಿಲ್ಲೆ ಇವರು ಆದೇಶಿಸಿರುತ್ತಾರೆ.