Author: admin

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ವಿಶೇಷ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಲಸೋಪರ ಗ್ಯಾಲಕ್ಸಿ ಅಂಡ್ ರೀಜೆನ್ಸಿ ಗ್ರೂಪ್ ಆಫ್ ಹೋಟೆಲ್ಸ್ ಇದರ ಆಡಳಿತ ನಿರ್ದೇಶಕ ಶ್ರೀ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರನ್ನು ಒಕ್ಕೂಟದ ಮಹಾ ಪೋಷಕರಾಗಿ ಸೇರ್ಪಡೆ ಗೊಂಡಿದ್ದಾರೆ. ನಮ್ಮ ಹೆಮ್ಮೆಯ ಬಂಟ ಸಮಾಜದ ಸುಪುತ್ರ ಶ್ರೀ ಶಶಿಧರ ಕೆ. ಶೆಟ್ಟಿಯವರು ಇತ್ತೀಚೆಗೆ ತಮ್ಮ 25ನೆ ವರ್ಷದ ವೈವಾಹಿಕ ಜೀವನದ ಸಂಭ್ರಮ ಆಚರಿಸಿದ್ದರು. ಮುಂಬಯಿ ಬಂಟರ ಸಂಘದಲ್ಲೂ ಸಕ್ರಿಯರಾಗಿರುವ ಶ್ರೀಯುತರು ಬಂಟ ಸಮಾಜದ ಏಳಿಗೆಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.

Read More

ಅಯೋಧ್ಯೆ ಎನ್ನುವುದು ಸಾಮಾನ್ಯ ದರೋಡೆಕೋರರಿಗೆ, ಕಳ್ಳ ಕಾಕರಿಗೆ ನೀಡಲು ಏನನ್ನೂ ಅಂದರೆ ಅಂತಸ್ತನ್ನು ಹೊಂದಿರಲಿಲ್ಲ. ಇಲ್ಲಿ ಇದ್ದದ್ದು ಹಿಂದೂಗಳ ಶ್ರದ್ಧೆ ಮಾತ್ರ. ಯಾವುದೇ ರಾಜ್ಯವನ್ನು ವಶಕ್ಕೆ ಪಡೆಯಬೇಕೆಂದರೆ ಅದರ ಆಡಳಿತದ ಮುಖ್ಯ ಕೇಂದ್ರವಾದ ರಾಜಧಾನಿಯನ್ನು ವಶಕ್ಕೆ ಪಡೆದರೆ ಸಾಕು ಎನ್ನುವುದು ಈಗಿನ ಯುದ್ಧನೀತಿಯಲ್ಲವೇ? ಹಾಗೆಯೇ ಇಡೀ ಅಯೋಧ್ಯೆ. ಅಯೋಧ್ಯೆಯ ರಾಮಮಂದಿರ ಹಿಂದೂಗಳಿಗೆ ಏಕೆ ಬಹುಮುಖ್ಯ? ಅಲ್ಲೇ ಏಕೆ ಮಂದಿರ ನಿರ್ಮಾಣ ಮಾಡಬೇಕು? ದೇವರು ಎಲ್ಲ ಕಡೆ ಇದ್ದಾನೆ ಎಂದ ಮೇಲೆ ಎಲ್ಲಿ ಬೇಕಾದರೂ ಮಂದಿರ ನಿರ್ಮಾಣ ಮಾಡಬಹುದಲ್ಲವೇ? ಇಂತಹ ಪ್ರಶ್ನೆಗಳು ಹೊಸದೇನಲ್ಲ. ಅಯೋಧ್ಯೆಯ ಹೋರಾಟ ಆರಂಭವಾದಂದಿನಿಂದಲೂ ಅನೇಕರು ಈ ಪ್ರಶ್ನೆ ಕೇಳುತ್ತಲೇ ಬರುತ್ತಿದ್ದಾರೆ. ಅಸಲಿಗೆ ಈ ಪ್ರಶ್ನೆಗಳು ಎದುರಾದದ್ದು, ಹಿಂದುಗಳು ಶಕ್ತಿವಂತರಾಗಲು, ಒಗ್ಗಟ್ಟಾಗಲು ಆರಂಭವಾದ ನಂತರದಲ್ಲಿ ಎನ್ನುವುದು ಗಮನಾರ್ಹ. ಭಾರತದಲ್ಲಿ ಶತಮಾನಗಳಿಂದಲೂ ಹಿಂದೂ-ಮುಸ್ಲಿಂ ದಂಗೆ ನಡೆಯುತ್ತಿವೆ ಎಂದು ಅನೇಕ ಬಾರಿ ಕೇಳಿರುತ್ತೇವೆ. ಅಸಲಿಗೆ ಹೆಚ್ಚಿನ ಬಾರಿ ನಡೆದಿರುವುದು ಮುಸ್ಲಿಂ ದಂಗೆಗಳು, ಆಕ್ರಮಣಗಳು ಮಾತ್ರವೆ. ಆಗೆಲ್ಲ ಸುಮ್ಮನಿದ್ದ ನಮ್ಮ ಬುದ್ಧಿಜೀವಿ ವರ್ಗವು, ಮುಸ್ಲಿಂ…

Read More

ರಂಗಚಾವಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇವರ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ, ರಂಗಚಾವಡಿ ಪ್ರಶಸ್ತಿ 2023 ಪ್ರದಾನ ಸಮಾರಂಭ ಡಿಸೆಂಬರ್ 3 ರಂದು ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. 2023 ರ ಸಾಲಿನ ರಂಗಚಾವಡಿ ಪ್ರಶಸ್ತಿಯನ್ನು ಖ್ಯಾತ ನಾಟಕ ರಚನೆಕಾರ – ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮವನ್ನು ಮುಂಬಯಿ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ ಡಾ ಸಂಜೀವ ದಂಡಕೇರಿ, ಕಟೀಲು ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಎಂ ಶೆಟ್ಟಿ ಕಟೀಲು, ತೆರಿಗೆ ಹಣಕಾಸು ನಿರ್ಧರಣೆ ಮತ್ತು ಅಫೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ವರುಣ್ ಚೌಟ, ಬಂಟರ…

Read More

ಹೌದು ಧರೆಯಲ್ಲಿ ಮಿಂಚಬೇಕಿದ್ದ ನಕ್ಷತ್ರವೊಂದು ಸ್ವರ್ಗದ ಪಾಲಾಗಿದೆ. ಸೂರ್ಯನು ಬೇಸರದಿ ಮೋಡದ ಮರೆಗೆ ಸರಿದು ಹೋಗಿದ್ದಾನೆ. ಹೊರಗಡೆ ದೋ ಎನ್ನುವ ಮಳೆಯ ನಡುವೆ “ಪ್ರಕಾಶ” ಕೂಡ ಮರೆಯಾಗಿದ್ದಾನೆ. ನಿಜ.. ಆಕಾಶವೂ ಕೂಡ ಇಂದು ಬಿಕ್ಕಿ ಬಿಕ್ಕಿ ಅಳುತ್ತಿದೆ. ಮರಣವನ್ನು ಯಾರೂ ನೋಡಿಲ್ಲ. ಬಹುಶಃ ಅದು ಸುಂದರವಾಗಿರಬಹುದು.. ಏಕೆಂದರೆ, ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತುಬಿಡುತ್ತಾರೆ. ನಿನಗೆ ಅದನ್ನು ನೋಡುವ ಆಸೆಯಾಯಿತೆ ? ಆದರೆ ನೀ ಹೋಗುವಾಗ ನಿನ್ನ ಮುದ್ದಿನ ಮಗಳು ಕುಶಿಯ ಮುಖ ನಿನ್ನ ಎದುರು ಬರಲಿಲ್ಲವೇ? ಆಕೆ ಕರೆಯುವ ಪಪ್ಪ ಎಂಬ ಮುದ್ದಿನ ಧ್ವನಿ ಕೂಡ ಕೇಳಿಸಲಿಲ್ಲವೇ? ತುಂಬಿದ ಸಂಸಾರದ ಹೊಣೆಗಾರಿಕೆಯ ಅರಿವಿರಲಿಲ್ಲವೇ? ನಿನ್ನ ಹಿಂದೆ ನಿನ್ನ ಹೆಗಲಾಗಿ ನಿಂತಿರುವ ಸಿಬ್ಬಂದಿಗಳ ಅಣ್ಣ ಎಂಬ ಕರೆ ಕೇಳಲಿಲ್ಲವೇ? ನಿನ್ನ ಒಡಹುಟ್ಟಿದವರ ಮಮತೆ ನಿನ್ನನ್ನು ಕಟ್ಟಿ ಹಾಕಲಿಲ್ಲವೇ? ಜೀವಕ್ಕೆ ಜೀವ ನೀಡುವ ನಿನ್ನ ಗೆಳೆಯರ ನಗು ನಿನಗೆ ಕೇಳಿಸಲಿಲ್ಲವೇ? ನಿನ್ನ ಇಷ್ಟದ ಬಿರಿಯಾನಿಯ ಸ್ವಾದದ ನೆನಪು ಬರಲಿಲ್ಲವೇ? ನೀನೇ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಕಾರ್ಯಕ್ರಮ ಮೂಲ್ಕಿ ಬಳಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಪ್ರವೀಣ ಭೋಜ ಶೆಟ್ಟಿ ಆಡಳಿತ ಕಚೇರಿಯ ಆವರಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಸಭಾಪತಿ ಯು.ಟಿ. ಖಾದರ್ ಅವರು, “ನಮ್ಮ ದೇಶ ಬಲಿಷ್ಠವಾಗಲು ನಾವು ಶಾಸಕರು, ಮಂತ್ರಿಗಳು ಬಲಿಷ್ಠರಾದರೆ ಸಾಲದು, ಎಸಿ ರೂಮ್ ನಲ್ಲಿ ಕೂತ ಅಧಿಕಾರಿಗಳು ಬಲಿಷ್ಠರಾದರೆ ಸಾಲದು, ಕ್ಲಾಸ್ ರೂಮಲ್ಲಿ ಕೂತಿರುವ ವಿದ್ಯಾರ್ಥಿಗಳು ಜ್ಞಾನದಲ್ಲಿ ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾದಂತೆ. ಮಕ್ಕಳು ಬಡತನದಲ್ಲಿ ಹುಟ್ಟಿ ಬೆಳೆಯಬಹುದು, ಆದರೆ ಇಂತಹ ಸಂಘಟನೆಗಳು ಹಮ್ಮಿಕೊಳ್ಳುವ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡು ಸಮಾಜಕ್ಕೆ ನಿಮ್ಮಿಂದಾದ ಸೇವೆ ಸಲ್ಲಿಸಬೇಕು. ಬಂಟ ಸಮಾಜ ಎಲ್ಲಾ ಜಾತಿ, ಧರ್ಮದ ಜನರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಸಮಾಜ. ಭೂ ಮಸೂದೆಯಲ್ಲಿ ಆಸ್ತಿ ಪಾಸ್ತಿ ನಷ್ಟವಾದರೂ ವಿಚಲಿತರಾಗದೆ ಎದ್ದು ನಿಂತವರು ಬಂಟರು” ಎಂದರು. ಬಳಿಕ ಮಾತಾಡಿದ ಒಕ್ಕೂಟದ ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ…

Read More

ಪುಣೆ ಬಂಟರ ಸಂಘದ ಯುವ ವಿಭಾಗದಿಂದ ಸಮಾಜ ಬಾಂಧವರಿಗಾಗಿ ಆಯೋಜಿಸಿದ ವಾರ್ಷಿಕ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯು ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಗ್ರೀನ್ ಬಾಕ್ಸ್ ಟರ್ಫ್ಸ್, ಭಂಡಾರ್ಕಾರ್ ರೋಡ್, ಪುಣೆ ಇಲ್ಲಿ ನಡೆಯಿತು . ಪಂದ್ಯಾಟದಲ್ಲಿ ಕಟೀಲ್ ವಾರಿಯರ್ಸ್ ಪ್ರಶಸ್ತಿಯನ್ನು ಜಯಿಸಿದ್ದು 25000 ನಗದು ಹಾಗೂ ಟ್ರೋಪಿಯನ್ನು ಪಡೆದುಕೊಂಡಿತು. ದೇಹು ರೋಡ್ ಬಿ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡು 15000 ನಗದು ಹಾಗೂ ಟ್ರೋಪಿಯನ್ನು ಪಡೆದುಕೊಂಡಿತು. ಬೆಳಗ್ಗೆ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಪುಣೆ ಕೊನೊಟ್ ಬೋಟ್ ಕ್ಲಬ್ ಇದರ ಅಧ್ಯಕ್ಷರಾದ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸಂದರ್ಭ ಅತಿಥಿಗಳಾಗಿ ರಾಷ್ಟ್ರೀಯ ಮಹಿಳಾ ಆಯೋಗ ನವದೆಹಲಿ ಇದರ ಸದಸ್ಯರಾದ ಶ್ಯಾಮಲಾ ಕುಂದರ್, ಪುಣೆ ಮಹಾನಗರ ಪಾಲಿಕೆಯ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷೆ ಮಂಜುಶ್ರೀ ಖರ್ಡೆಕರ್ ಉಪಸ್ಥಿತರಿದ್ದರು. ಸಂಜೆ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಇವರ…

Read More

ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಹಾಗೂ ಓಣಿಮಜಲು ದಿವಂಗತ ಜಗನ್ನಾಥ್ ಶೆಟ್ಟಿಯವರ ಸೊಸೆ ಶ್ರೀಮತಿ ಜಯಂತಿ ಜೆ. ಶೆಟ್ಟಿ ಮತ್ತು ಉನ್ನತ ಅಲಂಕೃತ ಅಧಿಕಾರಿ ಮತ್ತು ನಿವೃತ್ತ ಸಿ.ಅರ್.ಪಿ.ಎಫ್ ಪೋಲಿಸ್ ಮಹಾನೀರಿಕ್ಷಕ ಶ್ರೀ ಜಯಾನಂದ ಶೆಟ್ಟಿ ಇವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಪುಣೆ ಬಂಟರ ಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜಯಾನಂದ ಶೆಟ್ಟಿ ಹಾಗೂ ಜಯಂತಿ ಶೆಟ್ಟಿ ದಂಪತಿಗಳನ್ನು ಪುಣೆ ಬಂಟರ ಸಂಘದ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಹೂಹಾರ ಹಾಕಿ ಶುಭಾಶಯ ಕೋರಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಪುಣೆ ಕರ್ನಾಟಕ ಸಂಘದ ಅಧ್ಯಕ್ಷ ಕುಶಾಲ್ ಹೆಗ್ಡೆ, ಪುಣೆ ತುಳುಕೂಟ ಅಧ್ಯಕ್ಷ ದಿನೇಶ್ ಎ ಶೆಟ್ಟಿ, ಪುಣೆ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್.ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ವರದಿ :…

Read More

ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮುಂಬಯಿ ಇದರ 40 ನೇ ವಾರ್ಷಿಕ ಮಹಾಸಭೆಯು ಜೂಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಅಸೋಸಿಯೇಷನ್ ನ ಅಧ್ಯಕ್ಷ ಸಿ.ಎ ಸುರೇಂದ್ರ ಕೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಾರ್ಥನೆಯೊಂದಿಗೆ ಮಹಾಸಭೆಗೆ ಚಾಲನೆ ನೀಡಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ ಅವರು ಗತ ಸಾಲಿನ ಮತ್ತು ವಾರ್ಷಿಕ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ವಿಶ್ವನಾಥ್ ಎಸ್. ಶೆಟ್ಟಿ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ವೇದಿಕೆಯಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಡಿ.ಕೆ. ಶೆಟ್ಟಿ, ಗೌರವ ಪ್ರದಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ಜತೆ ಕಾರ್ಯದರ್ಶಿ ಗುಣಕರ್ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷೆ ದೃಶ್ಯಾ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದರು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ…

Read More

ಬಂಟರ ಸಂಘ ಬಂಟ್ವಾಳ ಮತ್ತು ಮುಂಬಯಿಯ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಸಂಸ್ಥೆಯ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಅವರ ಸಹಯೋಗದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿ ಬಂಟ್ವಾಳ ತಾಲೂಕಿನ ಸರ್ವ ಸಮಾಜದ ಸುಮಾರು 1,750 ವಿದ್ಯಾರ್ಥಿಗಳಿಗೆ 52 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ಬ್ರಹ್ಮರಕೋಟ್ಲುವಿನಲ್ಲಿರುವ ಬಂಟ್ವಾಳ ಬಂಟರ ಭವನದಲ್ಲಿ ವಿತರಿಸಲಾಯಿತು. ಕಾರ್ಯಕ್ರಮವನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭ ಮುಂಬಯಿ ಬಂಟರ ಸಂಘ ನಡೆಸುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ವಿವರಿಸಿದ ಅವರು, ನೆರವು ಅಗತ್ಯವುಳ್ಳ ಕುಟುಂಬವನ್ನು ದತ್ತು ಪಡೆಯುವುದು, ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಮೂಲಕ ನೇರವಾಗಿ ವಿದ್ಯಾ ಸಂಸ್ಥೆಗಳಿಗೆ ಫೀಸ್ ಪಾವತಿ ಮಾಡುವುದು. ಮೊದಲಾದ ಶಿಕ್ಷಣದ ಕುರಿತು ಕಾಳಜಿ ಮೂಲಕ ಬಂಟರ ಸಂಘ ಸಮಾಜಕ್ಕೆ ನೆರವಾಗುತ್ತಿದೆ ಎಂದು ಅವರು ಹೇಳಿದರು. ದೇಶ ಕಟ್ಟಲು ಪೂರಕ : ಯು.ಟಿ.ಖಾದರ್ ಈ ಸಂದರ್ಭ ವಿಧಾನ ಸಭಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರನ್ನು…

Read More

ಮುಂಬಯಿ, ಆ.07: ದೊಡ್ಡಮಟ್ಟದ ಕೃಷಿ ಕ್ರಾಂತಿ ಯೋಜನೆಯೊಂದಿಗೆ ಶಾಸಕ ರಘುಪತಿ ಭಟ್ ರಾಜ್ಯದಲ್ಲಿ ಸಮೂಹ ಕೃಷಿ ಮಾಡಿದ ಪರಿಕಲ್ಪನೆ ರಾಷ್ಟ್ರಕ್ಕೇ ಮಾದರಿಯಾಗಿದೆ. ಇವರ ಪರಿಕಲ್ಪನೆ ದೇಶದ ಎಲ್ಲಾ ರೈತರು ಸ್ವೀಕರಿಸಿ ಭಾರತವನ್ನು ಕೃಷಿಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು. ಎಂದೆರಡು ದಶಕಗಳ ಬಳಿಕ ನಮ್ಮ ರಾಷ್ಟ್ರದ ಕೃಷಿ ಕ್ರಾಂತಿ ಬಗ್ಗೆ ಅಧ್ಯಾಯನ ಮಾಡಿದಾಗ ನಿಜವಾಗಿಯೂ ರಘುಪತಿ ಭಟ್ ಅವರ ಹೆಸರು ಮೇಲ್ತುದಿಯಲ್ಲಿರಲಿದೆ. ರಾಷ್ಟ್ರದ 75 ವರ್ಷಗಳ ಇತಿಹಾಸ ಕಂಡಾಗ ಹಿಂದೆ ನಾವು ಕೃಷಿ ಪ್ರಧಾನ ಆಹಾರಗಳನ್ನು ಆಮದು ಮಾಡುತ್ತಿದ್ದು ಇತ್ತೀಚಿ ವರ್ಷಗಳಿಂದ ರಫ್ತು ಮಾಡುತ್ತಿದ್ದೇವೆ ಇದೇ ರಾಷ್ಟ್ರದ ಕೃಷಿಕ್ಷೇತ್ರದ ಹಸಿರು ಕ್ರಾಂತಿಯಾಗಿದೆ. ಜಾಗತಿಕ ಸಮಸ್ಯೆಗಳೇ ಕೃಷಿಕರ ಸಂಕಷ್ಟಕ್ಕೆ ಕಾರಣವಾಗಿದ್ದರೂ ಇಂದು ಭಾರತೀಯ ಕೃಷಿಕರು ಲಾಭದಲ್ಲಿದ್ದಾರೆ. ಅಂದೋಲನದಿಂದ ದೇಶವು ವಿನಾಶದತ್ತ ಸಾಗುತ್ತಿದ್ದು ಇದರ ನಿವಾರಣೆ ಕೃಷಿ ಪ್ರಧಾನವೇ ಮದ್ದು ಆಗಿದೆ. ಜಾಗ ಒದಗಿಸಿದ ಜನರ ವಿಶ್ವಾಸಕ್ಕೆ ವಂದಿಸುವೆ. ಇದು ವಿಶ್ವಾಸದ ಭರವಸೆ ಆಗಿದೆ ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ…

Read More