Author: admin
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಅಕ್ಟೋಬರ್ 28 ಮತ್ತು 29 ರಂದು ವಿಶ್ವ ಬಂಟರ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮಕ್ಕೆ ಬರುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಆಮಂತ್ರಿಸಿದರು. ಒಕ್ಕೂಟದಿಂದ ದಿನಾಂಕ 28.10.2023 ಮತ್ತು 29.10.2023 ರಂದು ಉಡುಪಿಯಲ್ಲಿ ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಲಿದ್ದು, ಈ ಹಿನ್ನೆಲೆಯಲ್ಲಿ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬೆಂಗಳೂರಿನಲ್ಲಿರುವ ಮುಖ್ಯಂಮತ್ರಿಯವರ ನಿವಾಸಕ್ಕೆ ತೆರಳಿ ಅವರನ್ನು ಆಹ್ವಾನಿಸಿದರು. ಸಿದ್ದರಾಮಯ್ಯರವರು ಒಕ್ಕೂಟದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ್ ರೈ, ನಂದ್ಯಪ್ಪ ಶೆಟ್ಟಿ ಗೌ. ಕಾರ್ಯದರ್ಶಿ ಬಂಟರ ಸಂಘ ಮೈಸೂರು, ಒಕ್ಕೂಟದ ನಿರ್ದೇಶಕ ಅಶೋಕ್ ಶೆಟ್ಟಿ ಬೆಳ್ಳಾಡಿ, ಪೋಷಕರಾದ ಗಿರೀಶ್ ಶೆಟ್ಟಿ ತೆಳ್ಳಾರ್, ಚಂದ್ರಹಾಸ್ ಶೆಟ್ಟಿ ರಂಗೋಲಿ, ಉಪೇಂದ್ರ ಶೆಟ್ಟಿ…
ನಿರಂತರವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡವರೂ ಸಹ ಸಿ.ಎ. ಯಂತಹ ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಶಕ್ತಿ ಹೆಚ್ಚಾಗುತ್ತದೆ ಹೊರತು, ಪಠ್ಯ ಕಲಿಕೆಗೆ ಯಾವುದೇ ತೊಡಕು ಉಂಟು ಮಾಡುವುದಿಲ್ಲ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಹೇಳಿದರು. ಮುಲ್ಲಕಾಡಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಯಕ್ಷಧ್ರುವ – ಯಕ್ಷ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಈ ಬಾರಿ ಸುಮಾರು 40 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಗತಿ ಆರಂಭಿಸಿದ್ದು, ಈ ವಿನೂತನ ಯೋಜನೆಯನ್ನು ಕಾವೂರು ಮುಲ್ಲಕಾಡು ಶಾಲೆಯಲ್ಲಿ ಆರಂಭಿಸಲಾಯಿತು. ಸಹ ಪಠ್ಯದಲ್ಲಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಮಾತುಗಾರಿಕೆ, ನಾಟ್ಯ, ಹಾಡುಗಾರಿಕೆ, ವೇಷಭೂಷಣದಂತಹ ಸಂಸ್ಕಾರಯುತ ವಿಷಯ, ವಿಚಾರಗಳು ಮಕ್ಕಳಿಗೆ ಸಿಗಲಿ ಎಂಬುದು ಈ ತರಬೇತಿಯ ಉದ್ದೇಶವಾಗಿದೆ. ಸ್ಥಳೀಯ ಕಾರ್ಪೊರೇಟರ್ ಗಾಯತ್ರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ…
ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ 2023 – 2025 ರವರೆಗೆ ನೂತನ ಜಿಲ್ಲಾ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಎಳ್ಳಂಪಳ್ಳಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ ಶಂಕರ್, ಸ್ಥಾಪಕಾಧ್ಯಕ್ಷ ಮಾಧವ ಸುವರ್ಣ ಎರ್ಮಾಳು, ಕಾರ್ಯಧ್ಯಕ್ಷರಾಗಿ ಭೋಜರಾಜ್ ಆರ್. ಕಿದಿಯೂರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಧನಂಜಯ ಕಾಂಚನ್ ಮಲ್ಪೆ, ಅಮಿತಾ ಗಿರೀಶ್ ಭಂಡಾರಿ ಉಡುಪಿ, ವಿಶ್ವನಾಥ್. ಕೆ ಅಮೀನ್ ಬಡಾನಿಡಿಯೂರು, ಅಶೋಕ್ ಕಾಂಚನ್ ಹಿರಿಯಡಕ, ವಿಠ್ಠಲ್ ಶೆಟ್ಟಿ ಬ್ರಹ್ಮಾವರ, ಅಪ್ಪಿ ಎಸ್. ಸಾಲ್ಯಾನ್ ಕಾಪು, ಚಂದ್ರಶೇಖರ್ ಶೆಟ್ಟಿ ಕುಂದಾಪುರ, ರಮಾದೇವಿ ಕುಕ್ಕಿಕಟ್ಟೆ, ಪ್ರವೀಣ್ ಪೂಜಾರಿ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಜಯಕರ ಪೂಜಾರಿ ಗುಲ್ವಾಡಿ, ಕಾರ್ಯದರ್ಶಿ ಶ್ರೀಕಾಂತ್ ಪ್ರಭು ಪಳ್ಳಿ, ಕೋಶಾಧಿಕಾರಿ ಭರತ್ ರಾಜ್ ಕೆ. ಎನ್. ಅಂಬಲಪಾಡಿ, ಜತೆ ಕೋಶಾಧಿಕಾರಿ ಕಿರಣ್ ಕುಂದರ್ ಮಲ್ಪೆ, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್ ಮಲ್ಪೆ, ವಿಜಯ ಕೊಡವೂರು, ಭಜನಾ ಪ್ರಮುಖ್ ಚಂದ್ರಶೇಖರ್ ಎರ್ಮಾಳು, ಮಹಿಳಾ ಸಮಿತಿ ಪದ್ಮಾ ಕಡಿಯಾಳಿ,…
ಮೇ 21 ಸಂಜೆ 7:30 ಐಲೇಸಾದಲ್ಲಿ ಯುವ ವಿಜ್ಞಾನಿ ಡಾ| ದಿನೇಶ್ ಶೆಟ್ಟಿ ಅವರಿಂದ ನೀರು ಜೀವಜಲ ಬೆಲೆ ಯಾಕಿಲ್ಲ ವಿಶಿಷ್ಠ ಜನ ಜಾಗೃತಿ ಕಾರ್ಯಕ್ರಮ
ಜೀವ ಜಲ ನೀರಿನ ಶುದ್ಧಿಕರಣ ಮತ್ತು ಅದರ ಪರಿಪೂರ್ಣ ಸಂರಕ್ಷೆಯ,ಸಂಸ್ಕರಣೆಯ ಬಗ್ಗೆ ಐಲೇಸಾ ದಿ ವಾಯ್ಸ್ ಆಫ್ ಓಶನ್(ರಿ) ಸಂಸ್ಥೆಯ ಜೂಮ್ ವೇದಿಕೆಯಲ್ಲಿ ವಿಶ್ವದ ಖ್ಯಾತ ಯುವ ವಿಜಾÐನಿ ಖಲೀಫಾ ವಿಶ್ವ ವಿದ್ಯಾಲಯದ ರಾಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕ ಡಾ| ದಿನೇಶ್ ಶೆಟ್ಟಿ ಕರ್ಕಿಯವರು ವಿಶದವಾಗಿ ತಿಳಿಸಿಕೊಡಲಿದ್ದಾರೆ. ಕಾರ್ಯಕ್ರಮವನ್ನು ಐಲೇಸಾದ ಅನಂತ್ ರಾವ್ ನಡೆಸಿಕೊಡಲಿದ್ದು ಕಾರ್ಯಕ್ರಮ ಮೇ 21 ಭಾನುವಾರ ಭಾರತದ ಸಮಯ ಸಂಜೆ 7:30 ಸಮಯ ಐಲೇಸಾದ ಜೂಮ್ ವೇದಿಕೆಯಲ್ಲಿ ನಡೆಯಲಿದೆ. ಅಸಕ್ತರು Meeting ID: 834 5783 5891, Passcode : ilesa. ಬಳಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೀವಜಲ ನೀರಿನ ಸಂರಕ್ಷಣೆಯಲ್ಲಿ ಭಾಗಿಯಾಗುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಲು ಇದು ಸದಾವಕಾಶ ಎಂದು ಐಲೇಸಾದ ಮೀಡಿಯಾ ಮತ್ತು ಮುಂಬೈ ಸಂಚಾಲಕ ಸುರೇಂದ್ರ ಕುಮಾರ್ ಮಾರ್ನಾಡು ತಿಳಿಸಿದ್ದಾರೆ. ಡಾ| ದಿನೇಶ್ ಶೆಟ್ಟಿ ಕರ್ಕಿಯವರ ಯಶೋಗಾಥೆ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಕೆರಾಡಿ ಬಿಡಿನ ಮನೆ ದಿವಂಗತ ಆನಂದ ಶೆಟ್ಟಿ ಮತ್ತು…
ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ತುಂಬೆ ವಲಳವೂರಿನಲ್ಲಿರುವ ಬಂಟವಾಳದ ಬಂಟರ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷ ಚಂದ್ರಹಾಸ ಡಿ ಶೆಟ್ಟಿ ಮಾತನಾಡಿ, ಬಂಟ ಸಮಾಜದ ಪ್ರತಿಯೊಬ್ಬರ ಸಹಕಾರದಿಂದ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ. ಇದು ಹುದ್ದೆ ಅಲ್ಲ ಜವಾಬ್ದಾರಿ ಎಂದು ನಂಬಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸಂಘದ ಕಡತವನ್ನು ಹಸ್ತಾಂತರಿಸಿ ಪದಗ್ರಹಣ ನೆರವೇರಿಸಿದರು. ನೂತನ ಸಮಿತಿಗೆ ಉಪಾಧ್ಯಕ್ಷರಾಗಿ ಡಾ ಪ್ರಶಾಂತ್ ಮಾರ್ಲ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಜತೆ ಕಾರ್ಯದರ್ಶಿ ರಂಜನ್ ಶೆಟ್ಟಿ ಅರಳ, ಕೋಶಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕೋಶಧಿಕಾರಿ ಪ್ರತಿಭಾ ರೈ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ಪಿ ರೈ, ಪದಾಧಿಕಾರಿಗಳಾದ ಸುಮಾ ನವೀನ್ ಶೆಟ್ಟಿ ಜ್ಯೋತಿ ಪಿ ಶೆಟ್ಟಿ, ಜಗದೀಶ್ ಶೆಟ್ಟಿ ಇರಾ ವೇದಿಕೆಯಲ್ಲಿದ್ದರು. ಕಳೆದ ಅವಧಿಯ ಉಪಾಧ್ಯಕ್ಷ ಕಿರಣ್…
ಮುಂಬಯಿ ವಿಶ್ವವಿದ್ಯಾಲಯವು ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಎಂ.ಎ. ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕನ್ನಡ ವಿಭಾಗದ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿ ಅವರು ಸರ್ವಾಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ನೂತನ ಪಠ್ಯ ಕ್ರಮದಂತೆ ಸವಿತಾ ಅರುಣ್ ಶೆಟ್ಟಿ ಅವರು ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ “ಬೆಳಕಿಂಡಿ (ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯ ಅವಲೋಕನ )” ಎಂಬ ಸಂಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾನಿಲಯಕ್ಕೆ ಸಾದರ ಪಡಿಸಿರುತ್ತಾರೆ. ಅವರು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದಿಂದ ಕೊಡಮಾಡುವ ‘ವ್ಯಾಸರಾಯ ಬಲ್ಲಾಳ ಶ್ರೇಷ್ಠ ವಿದ್ಯಾರ್ಥಿ’ ಚೊಚ್ಚಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನ ಬೋಳ ಗ್ರಾಮದವರಾದ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ಸ್ನಾತಕ ಪದವಿಯನ್ನು ಪಡೆದಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ನಂದಿಕೂರು ಹೊಸಮನೆ ದಿ. ಪಾಂಡು ಎಂ. ಶೆಟ್ಟಿ ಮತ್ತು ಬೋಳ ಕುರೇದು ದಿ. ಜಾನಕಿ ಶೆಡ್ತಿ ಅವರ ಪುತ್ರಿ ಹಾಗೂ ನವಿಮುಂಬಯಿಯ ಉದ್ಯಮಿ ಅರುಣ್ ಶೆಟ್ಟಿ ಅವರ ಪತ್ನಿ. ಮುಂಬಯಿ ವಿವಿ ಕೊಡಮಾಡುವ…
ಐಕಳ ಶ್ರೀ ಹರೀಶ್ ಶೆಟ್ಟಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಎಂಬ ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದು ಇಂದು ವಿಶ್ವ ವಿಖ್ಯಾತರಾಗಿದ್ದಾರೆ. ಕಾರಣ ಐಕಳ ಹರೀಶ್ ಶೆಟ್ಟಿ ಅವರ ಅಸಾಧಾರಣ ಸಂಘಟನಾ ಚಾತುರ್ಯ, ಅಪ್ರತಿಮ ಸಂಘ ನೇತೃತ್ವ ಹಾಗೂ ದೂರಾಲೋಚನೆಯ ಕಾರ್ಯಪಟುತ್ವ. ಎರಡು ಗುತ್ತು ಮನೆತನಗಳ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದ್ದ ರಾಮಣ್ಣ ಶೆಟ್ಟಿ ದೇವಕಿ ಶೆಟ್ಟಿ ದಂಪತಿಯರಿಗೆ ಪುತ್ರನಾಗಿ ಜನಿಸಿದ ಐಕಳ ಅವರು ಬಾಲ್ಯದ ದಿನಗಳಿಂದಲೇ ವಿಶಿಷ್ಟ ಗುಣ ಸ್ವಭಾವವನ್ನು ಹೊಂದಿದ್ದು ಓರಗೆಯ ಮಕ್ಕಳಿಗಿಂತ ಭಿನ್ನವಾಗಿ ಗುರುತಿಸಲ್ಪಡುತ್ತಿದ್ದರು. ಆಕರ್ಷಕ ಕಂಗಳ ಗುಂಗುರು ಕೂದಲಿನ ಗೌರವ ವರ್ಣದ ಐಕಳ ಅವರು ಸ್ಫುರದ್ರೂಪಿಯಾಗಿದ್ದರು. ಬೆಳೆಯುತ್ತಿದ್ದಂತೆ ಹುಡುಗರ ಗುಂಪಿಗೆ ಮುಖಂಡನಾಗಿ, ಆಟ ಪಾಠಗಳೆರಡರಲ್ಲೂ ಮುಂದಿದ್ದು ಶಿಕ್ಷಕ ವರ್ಗದ ಪ್ರೀತಿಗೆ ಪಾತ್ರರಾಗಿದ್ದರು. ತನ್ನ ದೇಹ ಸೌಷ್ಠವವನ್ನು ಕಾಪಾಡುವುದರಲ್ಲಿ ಮೊದಲ ಆದ್ಯತೆ ನೀಡುತ್ತಿದ್ದ ಕಾರಣ ಕಾಲೇಜು ಮೆಟ್ಟಿಲು ಹತ್ತುವ ವೇಳೆಗೆ ಮಧ್ಯಮ ಆಳ್ತನ ಆಕರ್ಷಕ ಮೈಕಟ್ಟು. ಮುಖದಲ್ಲಿ ಮಿನುಗುವ ಆತ್ಮ ವಿಶ್ವಾಸದ ಮಂದಹಾಸದಿಂದ ಚಿತ್ರ ನಟರೊಬ್ಬರನ್ನು ಹೋಲುತ್ತಿದ್ದರು.…
ಬೆಳಪು, ಎಲ್ಲೂರು ಮತ್ತು ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ 1948ರಲ್ಲಿ ಸ್ಥಾಪಿತವಾದ ಬೆಳಪು ವ್ಯವಸಾಯ ಸಹಕಾರಿ ಸಂಘವು ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಅಮೃತ ಮಹೋತ್ಸವದ ಸವಿನೆನಪಿಗಾಗಿ ಉಚ್ಚಿಲದಲ್ಲಿ ನಿರ್ಮಿಸಲಾದ ನೂತನ ಸಹಕಾರಿ ಮಹಲ್ ನ ಉದ್ಘಾಟನೆ ಮತ್ತು ಸಹಕಾರಿ ಧುರೀಣ ಡಾ. ಎಂ.ಎನ್. ಆರ್ ಅವರಿಗೆ ಸಹಕಾರಿ ಧ್ರುವ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 2 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಉಚ್ಚಿಲದಲ್ಲಿ ನಿರ್ಮಿಸಲಾಗಿರುವ ಸಂಘದ ನವೀಕೃತ ಶಾಖೆ ಮತ್ತು ನೂತನ ಸಹಕಾರಿ ಮಹಲ್ ಕಟ್ಟಡ ಹಾಗೂ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಕಾನ್ಪರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ…
ಇಂಧನ ಶಕ್ತಿಯು ಪ್ರತೀ ದೇಶದ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರವನ್ನು ನಿರ್ವ ಹಿಸುತ್ತಿದೆ. ವಿಶ್ವದ ಹಲವಾರು ದೇಶಗಳು ತಮ್ಮ ತಮ್ಮ ಇಂಧನ ಕ್ಷೇತ್ರವನ್ನು ಬಲಪಡಿಸುವಲ್ಲಿ ನಿರತವಾಗಿವೆ. ಅದರಲ್ಲೂ ಜೈವಿಕ ಇಂಧನಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಿರುವ ದೇಶಗಳು ಹೊಸ ತಂತ್ರಜ್ಞಾನದ ಮೂಲಕ ಜೈವಿಕ ಇಂಧನವನ್ನು ವೃದ್ಧಿಸಲು ಯೋಜನೆಗಳನ್ನು ರೂಪಿಸಿವೆ. ಪ್ರಪಂಚದಾದ್ಯಂತ ಜೈವಿಕ ಇಂಧನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತೀ ವರ್ಷ ಆಗಸ್ಟ್ 10ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸ ಲಾಗುತ್ತದೆ. ಏನಿದು ಜೈವಿಕ ಇಂಧನ? ಏನಿದರ ಪ್ರಯೋಜನ? ಈ ನಿಟ್ಟಿನಲ್ಲಿ ಭಾರತದ ಯೋಜನೆಗಳೇನು? ಎನ್ನುವುದರ ಮಾಹಿತಿ ಇಲ್ಲಿದೆ. ಜೈವಿಕ ಇಂಧನ ಎಂದರೆ? ಸಸ್ಯ, ಕೃಷಿ ತ್ಯಾಜ್ಯ, ಪ್ರಾಣಿ ತ್ಯಾಜ್ಯ ಹಾಗೂ ಇತರ ಸಾವಯವ ಪರಿಕರಗಳಿಂದ ದೊರೆಯುವ ಇಂಧನವೇ ಜೈವಿಕ ಇಂಧನ. ಈ ಇಂಧನಗಳನ್ನು ಪಳೆಯುಳಿಕೆ ಇಂಧನಗಳ ಪರ್ಯಾಯವಾಗಿ ಬಳಸಬಹುದಾಗಿದೆ. ಯಾಕೆ ಮಹತ್ವ? ಆರೋಗ್ಯಯುತ ಪರಿಸರ ನಿರ್ಮಾಣದಲ್ಲಿ ಜೈವಿಕ ಇಂಧನ ಸಹಕಾರಿಯಾಗಿದೆ. ಇವು ನವೀಕರಿಸಬಹುದಾದ ಇಂಧನ ಮೂಲಗಳಾಗಿವೆ. ಇವುಗಳಿಂದ ಇಂಗಾಲದ ಹೊರಸೂಸುವಿಕೆ ಯನ್ನು…
ಪ್ರಕೃತಿಯ ಸಮತೋಲನಕ್ಕೆ ಪರಿಸರ ರಕ್ಷಣೆ ಪೂರಕ. ಪರಿಸರವನ್ನು ನಾವು ಅವಲಂಬಿಸಿದ್ದೇವೆಯೇ ಹೊರತು ಅದು ನಮ್ಮನ್ನು ಅವಲಂಬಿಸಿಲ್ಲ ಎಂಬುದನ್ನು ಮೊದಲು ಗಮನಿಸಿಕೊಳ್ಳಬೇಕು. ಭೂರಮೆಯ ಒಡಲು ವಿಸ್ಮಯಗಳ ಆಗರ ಆದರೆ ಮಾನವನ ಅತಿ ಆಸೆಯಿಂದ ಪ್ರಕೃತಿಯ ಮೇಲಿನ ವಿಧ್ವಂಸಕ ಕೃತ್ಯಗಳು ಮಿತಿ ಮೀರಿ ಅಕ್ರಮಣವಾಗುತ್ತಿದ್ದು ಎಲ್ಲವನ್ನೂ ಸಹಿಸಿಕೊಂಡ ಭೂಮಿ ಜೀವರಾಶಿಗಳನ್ನು ಕಾಪಾಡಿಕೊಂಡು ಬರುತ್ತಿದೆಯಾದರೂ ಒಂದಲ್ಲ ಒಂದು ರೂಪದಲ್ಲಿ ಅವತರಿಸಿ ಬುದ್ದಿ ಕಲಿಸಿತು, ಈಗಿಂದಲೇ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವತ್ತ ಚಿತ್ತಹರಿಸಬೇಕಾದ ಅಗತ್ಯವಿದೆ. ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಲೇ ಇದ್ದು ಅಭಿವೃದ್ಧಿಯ ಹೆಸರಿನಲ್ಲಿ ಸ್ವಾರ್ಥ ಸಾಧನೆಗೆ ಹೊರಟಿದ್ದೇವೆ ಎನ್ನುವುದರ ಅರಿವಿಲ್ಲದೆ ಇಡುತ್ತಿರುವ ಹೆಜ್ಜೆಗಳು ನಿಸರ್ಗದ ಪರಿಸ್ಥಿತಿ ಕೆಡಲು ಕಾರಣವಾಗಿದೆ. ಪ್ರಕೃತಿ ಮುನಿದಾಗ ಮಾನವ ಬಹುದೊಡ್ಡ ಸವಾಲು ಎದುರಿಸಲೇಬೇಕಾಗುತ್ತದೆ. ಪ್ರಕೃತಿಯ ಸಮತೋಲನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಾಕೃತಿಕ ಅನಾಹುತಗಳು ಖಂಡಿತ. ಇಂದು ಭೌತಿಕ, ಜೈವಿಕ ಹಾಗೂ ಭೌಗೋಳಿಕ ಪರಿಸರದ ಆರೋಗ್ಯ ಕೆಟ್ಟಿದ್ದು, ಕುಡಿವ ನೀರು ಸೇವಿಸುವ ಗಾಳಿ, ನಡೆದಾಡುವ ಭೂಮಿ ಮಲಿನಗೊಂಡಿದೆ. ಸಮತೋಲನ ತಪ್ಪಿದ ಪರಿಸರದಿಂದ ಮುಂದಾಗಬಹುದಾದ…