Author: admin
ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಧನೆ ಜೆಇಇ ಮೈನ್ಸ್ ಫಲಿತಾಂಶ: 53 ವಿದ್ಯಾರ್ಥಿಗಳಿಗೆ 95ಕ್ಕೂ ಅಧಿಕ ಪಸರ್ಂಟೈಲ್
ವಿದ್ಯಾಗಿರಿ: ಜೆಇಇ ಮೈನ್ಸ್ ಫೆಸ್-1 ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆ ಮಾಡಿದ್ದಾರೆ. 53 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 95 ಪಸರ್ಂಟೈಲ್ಗಿಂತ ಅಧಿಕ ಅಂಕ ಪಡೆದಿದ್ದಾರೆ. ವಿದ್ಯಾರ್ಥಿ ಎಚ್.ಆರ್. ರಜತ್ 99.271023 ಪರ್ಸಂಟೈಲ್ (ಭೌತಶಾಸ್ತ್ರ- 97.2200028, ರಸಾಯನಶಾಸ್ತ್ರ- 97.1516355 ಹಾಗೂ ಗಣಿತ- 99.537079) ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ ಪ್ರಶಾಂತ್ ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ ಪಡೆಯುವುದರ ಜೊತೆಗೆ ಒಟ್ಟು 98.7993863 ಪರ್ಸಂಟೈಲ್ ಪಡೆದಿರುತ್ತಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ಸೇರಿದಂತೆ ಮೂರು ವಿಷಯಗಳಲ್ಲಿ 98 ಪಸರ್ಂಟೈಲ್ಗಿಂತ ಅಧಿಕ ಒಂಬತ್ತು ವಿದ್ಯಾರ್ಥಿಗಳು, 97 ಪಸರ್ಂಟೈಲ್ಗಿಂತ ಅಧಿಕ 19 ವಿದ್ಯಾರ್ಥಿಗಳು ಪಡೆದಿದ್ದಾರೆ. ವಿದ್ಯಾರ್ಥಿಗಳಾದ ರಜತ್ ಮತ್ತು ಪ್ರಶಾಂತ್ ಜೊತೆ ದರ್ಶನ್ಕುಮಾರ್ ತಲ್ಲೊಳ್ಳಿ (98.6175507), ನಮಿತಾ ಎ.ಪಿ. (98.5761436), ಪ್ರೀತಮ್ ಎಂ. (98.1895688), ಪ್ರಜ್ವಲ್ ಡಿ.ಎಸ್. (98.1603894), ನವೀನ್ ಬಿ. ಸೋಲಂಕಿ (98.0893667), ಪುನೀತ್ ಎಸ್. (98.079865) ಮತ್ತು ರೋಹಿತ್ ಕುಮಾರ್ ಎಲ್.…
ಉಡುಪಿಯಲ್ಲಿ ನಾಡವರೆಂದು, ದ.ಕ. ದಲ್ಲಿ ಬಂಟರೆಂದು ಕರೆದರೂ, ಈಗಲೂ ಈ ಜಿಲ್ಲೆ ಭಾವನಾತ್ಮಕವಾಗಿ ಒಂದೇ ಆಗಿದೆ. ಬ್ಯಾಂಕ್ ಅಥವಾ ಉದ್ಯಮ ಆರಂಭಿಸಿ, ಸಮುದಾಯದ ಇನ್ನಷ್ಟು ಯುವಕರಿಗೆ ಕೆಲಸ ಕೊಡುವ ಕಾರ್ಯ ಆಗಲಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು. ಕೋಟೇಶ್ವರದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮದ ಭಾಗವಾಗಿ ಆಯೋಜಿಸಿದ “ಭಾವೈಕ್ಯ” ಬಂಟರ ಮಹಾ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂಬಯಿ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು. ದಿ| ಯಡ್ತರೆ ನರಸಿಂಹ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಸ್ವೀಕರಿಸಿದ ಎಂಆರ್ಜಿ ಸಮೂಹ ಸಂಸ್ಥೆ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಬಂಟ ಸಮಾಜದವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಆ ಋಣ ನನ್ನ ಮೇಲಿದೆ. ಅದಕ್ಕಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತಿದ್ದೇನೆ ಎಂದರು. ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಕಾಸರಗೋಡಿನಿಂದ ಶಿರೂರುವರೆಗಿನ ಬಂಟರೆಲ್ಲರೂ ಒಂದೇ. ಅವರ ಕೀರ್ತಿ…
ಸರಳತೆ ಮತ್ತು ಸಂಘಟನ ಚತುರತೆಯ ಮೂಲಕ ಹೃದಯ ಶ್ರೀಮಂತಿಕೆ ಮೆರೆದ ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಅವರು ಪೆರ್ಡೂರಿನ ಆಸ್ತಿಯಾಗಿದ್ದು ಅವರ ಮುಂದಾಳತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭವ್ಯವಾದ ಸಮುದಾಯ ಭವನ ತಲೆ ಎತ್ತಿ ನಿಂತಿರುವುದು ಶ್ಲಾಘನೀಯ ಎಂದು ಬೆಂಗಳೂರು ಎಂಆರ್ಜಿ ಗ್ರೂಪ್ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.ಬಂಟರ ಸಂಘ ಪೆರ್ಡೂರು ಮಂಡಲದಿಂದ ನಿರ್ಮಾಣಗೊಂಡ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಭಾಭವನವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಮಾತನಾಡಿ, ಈ ಭವನ ಕೇವಲ ಬಂಟ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಸಮುದಾಯದವರಿಗೂ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು. ಪ್ರತಿ ಮನೆಗೆ ಭೇಟಿ ನೀಡಿ ಅವರ ಸಹಭಾಗಿತ್ವವನ್ನು ಪಡೆದು ಭವನವನ್ನು ನಿರ್ಮಾಣ ಮಾಡಿದ ಸೂಡರು ಮಾದರಿಯಾಗಿದ್ದಾರೆ ಎಂದು ಅತಿಥಿಗೃಹ ಉದ್ಘಾಟಿಸಿದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಅತೀ…
ರೈ ಸುಮತಿ ಎಜ್ಯುಕೇಶನ್ ಟ್ರಸ್ಟ್ ಮೀರಾ ಭಯಂದರ್ : ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳ 17 ನೇಯ ವಾರ್ಷಿಕೋತ್ಸವ
ರೈ ಸುಮತಿ ಎಜ್ಯುಕೇಶನ್ ಟ್ರಸ್ಟ್ ಮೀರಾ ಭಯಂದರ್ ವತಿಯಿಂದ ಇತ್ತೀಚೆಗೆ ತನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳ 17 ನೇ ವಾರ್ಷಿಕ ಉತ್ಸವವನ್ನು ನೆರವೇರಿಸಿತು. ಭಯಂದರ್ ನ ಆನಂದ ದಿಘೆ ಮೈದಾನದಲ್ಲಿ ಸಂಜೆ 5 ಗಂಟೆಯಿಂದ ನಡೆದ ಈ ಉತ್ಸವದಲ್ಲಿ ಸಂಸ್ಥೆಯ ಕೆ.ಎಸ್. ಮೆಹ್ತಾ ಜೂನಿಯರ್ ಕಾಲೇಜ್, ಆದರ್ಶ್ ನಿಕೇತನ್ ಸ್ಕೂಲ್ ಸಮೂಹ ಸಂಸ್ಥೆಗಳ ಅಧೀನತೆಯ ಸೈಂಟ್ ಅಗ್ನೇಸಿಯಸ್ ಸ್ಕೂಲ್ ನ ಸಾವಿರಾರು ವಿದ್ಯಾರ್ಥಿಗಳು ಈ ಮಹೋತ್ಸದಲ್ಲಿ ಪಾಲ್ಗೊಂಡಿದ್ದರು. ಅತಿಥಿಗಳಾಗಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಆಡಳಿತ ನಿರ್ದೇಶಕರಾದ ರವಿ ಶೆಟ್ಟಿ, ಭಯಂದರ್ ನವಘರ್ ಪೋಲಿಸ್ ಠಾಣೆಯ ನಿರೀಕ್ಷಕ ಧೀರಜ್ ಕೊಹ್ಲಿ, ಬಂಟರ ಸಂಘ ಮುಂಬಯಿ ಇದರ ಗೌರವ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಉದ್ಯಮಿ ಭಾಸ್ಕರ್ ಶೆಟ್ಟಿ, ಮಾಜಿ ನಗರ ಸೇವಕ ಪ್ರವೀಣ್ ಪಾಟೀಲ್, ಐಯರ್ ಇಂಡಿಯಾದ ಪೈಲೆಟ್ ಅಭಿ ಭಂಡಾರಿ, ಯಸ್. ಎನ್. ಕಾಲೇಜಿನ ಛೇರ್ಮನ್ ರೋಹಿದಾಸ್ ಪಾಟೀಲ್, ಮಾಜಿ ನಗರ ಸೇವಕರುಗಳಾದ…
ಆಳ್ವಾಸ್ ಎಂಬಿಎಯಲ್ಲಿ ಯುವ ಉದ್ಯಮಶೀಲತಾ ಶೃಂಗಸಭೆಯಲ್ಲಿ ಕರ್ಣ ಬೆಳೆಗೆರೆ ‘ಮನಸ್ಸು, ದೇಹ, ಹೃದಯ ಸಮರ್ಪಿಸಿದಾಗ ಯಶಸ್ಸು’
ವಿದ್ಯಾಗಿರಿ: ಮನಸ್ಸು, ದೇಹ ಹಾಗೂ ಹೃದಯವನ್ನು ಸಮರ್ಪಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಅವುಗಳಿಂದ ನಿಮ್ಮ ಆಂತರಿಕ ಸಾಮಥ್ರ್ಯ ಹೆಚ್ಚಳವಾಗುತ್ತದೆ ಎಂದು ಬೆಂಗಳೂರಿನ ಪ್ರಾರ್ಥನಾ ಶಾಲೆ ಕರ್ಣ ಬೆಳೆಗೆರೆ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸ್ನಾತಕೋತ್ತರ ವ್ಯವಹಾರ ಆಡಳಿತ ವಿಭಾಗದ ‘ಎಂಬಿಎ ಆಗಮನ 2024ರ’ ಸಲುವಾಗಿ ಉದ್ಯಮಶೀಲತಾ ಅಭಿವೃದ್ಧಿ ಕೋಶ (ಇಡಿಸಿ)ದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ಯುವ ಉದ್ಯಮ ಶೀಲತಾ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ಮ್ಯಾನೇಜ್ಮೆಂಟ್ ಆಫ್ ಬಿಸಿನೆಸ್ ಆಡ್ಮಿಸ್ಟ್ರೇಷನ್ (ಎಂಬಿಎ)ಗೆ ಹೊಸ ವ್ಯಾಕ್ಯನ ನೀಡಿದ ಅವರು, ಮೈಂಡ್, ಬಾಡಿ, ಆರ್ಟ್ (ಹಾರ್ಟ್) ಸರಿಯಾದ ಮಿಳಿತವೇ ಉನ್ನತಿಗೆ ರಹದಾರಿ. ಉತ್ತಮ ಸಂವಹನ ಕಲೆ ಇದ್ದಾಗ ಉದ್ಯಮದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಅವಕಾಶಗಳು ಅಪರಿಮಿತ. ಯುವಜನತೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಜೀವನದಲ್ಲಿ ಏರುಪೇರು ಸಾಮಾನ್ಯ. ಅಂತಹ ಸಮಸ್ಯೆಗಳಿಂದ ಮೇಲೆ ಬರಲು ಯತ್ನಿಸಬೇಕು. ನನಗೆ ನನ್ನ ಅಪ್ಪ ಯಾವಾಗಲೂ ಹೇಳುತ್ತಿದ್ದರು. ‘ನಿನಗೆ ಏಕೆ ಕರ್ಣ ಎಂದು ಹೆಸರಿಟ್ಟಿದ್ದೇನೋ ಗೊತ್ತಿಲ್ಲ. ನೀನು ಕುಂಭಕರ್ಣ’…
ಆತಿಥ್ಯ ಹಾಗೂ ಸಮಾಜಮುಖಿ ಚಟುವಟಿಕೆಯಲ್ಲಿ ರಾಜ್ಯದ ಗಮನ ಸೆಳೆದ ಪೆರ್ಡೂರು ಬಂಟರ ಸಂಘ ಅತ್ಯಾಕರ್ಷಕ ಸಮುದಾಯ ಭವನ ನಿರ್ಮಾಣ ಮಾಡುವುದರ ಜತೆಗೆ ಪೆರ್ಡೂರಿನ ಬಂಟರ ಮಾಹಿತಿಯುಳ್ಳ ಸಂಚಿಕೆಯನ್ನು ಬಿಡುಗಡೆ ಮಾಡಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅದಾನಿ ಗ್ರೂಪ್ನ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು. ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ. ಶಾಂತಾರಾಮ ಸೂಡ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು, ಕೋಶಾಧಿಕಾರಿ ಪ್ರಮೋದ್ ರೈ ಪಳಜೆ, ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ಕುತ್ಯಾರುಬೀಡು, ಮಹೇಶ್ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ, ಸುರೇಶ್ ಹೆಗ್ಡೆ, ಪ್ರಕಾಶ್ ಶೆಟ್ಟಿ, ದಿನೇಶ್ಚಂದ್ರ ಶೆಟ್ಟಿ, ರಾಜ್ಕುಮಾರ್ ಶೆಟ್ಟಿ, ಶಿವರಾಮ ಶೆಟ್ಟಿ, ಸರಳ ಎಸ್. ಹೆಗ್ಡೆ, ಭಾರತಿ ಶ್ರೀಧರ್ ಶೆಟ್ಟಿ, ಪ್ರೇಮಲತಾ ಎಸ್. ಹೆಗ್ಡೆ ಮೊದಲಾದವರಿದ್ದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ: ಸತತ ಎರಡನೇ ವರ್ಷವೂ ಪ್ರಥಮ ರ್ಯಾಂಕ್ ಹೋಮಿಯೋಪಥಿ: ಆಳ್ವಾಸ್ಗೆ 115 ರ್ಯಾಂಕ್
ವಿದ್ಯಾಗಿರಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ 16 ಹಾಗೂ ವಿಷಯವಾರು 97 ಸೇರಿದಂತೆ 115 ರ್ಯಾಂಕ್ ಗಳನ್ನುಪಡೆದಿದ್ದಾರೆ. ಹೋಮಿಯೋಪಥಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮೀನುಮುರಳಿ ಪ್ರಥಮ ರ್ಯಾಂಕ್ ಪಡೆದರೆ, ಸಾರಾ ಸಹ್ಲಾ ಐದನೇ ರ್ಯಾಂಕ್ ಪಡೆದಿದ್ದಾರೆ. ಆ ಮೂಲಕ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಸತತ ಎರಡನೇ ವರ್ಷವೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಥಮ ರ್ಯಾಂಕ್ ಜೊತೆಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಪ್ರಥಮ ವರ್ಷದ ಬಿಎಚ್ಎಂಎಸ್-ಸೆಪ್ಟೆಂಬರ್ 2018 (ಹೋಮಿಯೋಪಥಿ ವೈದ್ಯಕೀಯ ವಿಜ್ಞಾನ ಪದವಿ)ನಲ್ಲಿ ಮೀನು ಮುರಳಿ 5ನೇ ಹಾಗೂ ಅಶ್ನಿ ವಿ. ಸುವರ್ಣ 10ನೇ ರ್ಯಾಂಕ್ ಪಡೆದಿದ್ದಾರೆ. ದ್ವಿತೀಯ ಬಿಎಚ್ಎಂಎಸ್ (ಸೆಪ್ಟೆಂಬರ್ 2019)ನಲ್ಲಿ ಮೀನುಮುರಳಿ ಪ್ರಥಮ ಹಾಗೂ ಮಹಾಝಕಾರಿಯಾ ಪಣಕ್ಕಲ್ ತೃತೀಯ, ಸಾರಾಸಹ್ಲಾ ಐದನೇ ಹಾಗೂ ಶಿಲ್ಪಾ ಸಿವದಾಸ್ ಮತ್ತು ಗ್ರೀಷ್ಮಾಗಣೇಶ್ ಏಳನೇ, ಸ್ಪೂರ್ತಿ ಮತ್ತು ಅಶ್ನಿ ಸುವರ್ಣ 8ನೇ, ಅನಘಾ ಎಸ್.ಎಂ. 10ನೇ ರ್ಯಾಂಕ್ ಪಡೆದಿದ್ದಾರೆ. ತೃತೀಯ ಬಿಎಚ್ಎಂಎಸ್…
ಆಳ್ವಾಸ್ ಕಾಲೇಜಿನಲ್ಲಿ ವಲ್ಕನ್ ಅಕಾಡೆಮಿ ವೆಬ್ಸೈಟ್, ಉತ್ಪನ್ನಗಳ ಅನಾವರಣ ‘ಬದುಕು ನಿರ್ಧರಿಸುವ ಗುಣಮಟ್ಟದ ಶಿಕ್ಷಣ’
ವಿದ್ಯಾಗಿರಿ: ‘ಶಿಕ್ಷಣ ಎಲ್ಲರಿಗೂ ದೊರೆಯಲೇಬೇಕಾದ ಮೂಲಭೂತ ಹಕ್ಕು. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಯ ಬದುಕನ್ನು ನಿರ್ಧರಿಸುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ವಲ್ಕನ್ ಅಕಾಡೆಮಿ ಹಮ್ಮಿಕೊಂಡಿದ್ದ ವೆಬ್ಸೈಟ್ ಹಾಗೂ ಉತ್ಪನ್ನಗಳ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿದ್ಯಾಥಿಗಳು ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗಿರಲು ಸಾಧ್ಯ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾತ್ವಿಕ್ ಈ ಮೂಲಕ ಪ್ರಯತ್ನಿಸಿದ್ದಾರೆ’ ಎಂದರು. ಸ್ವಯಂಭೂ ಸಂಸ್ಥಾಪಕ ಡಾ.ಸಂಗೀತಾ ಜಿ. ಕಾಮತ್ ಮಾತನಾಡಿ, ‘ವಲ್ಕನ್ ಅಕಾಡೆಮಿ ಪ್ರಯತ್ನವು ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಯ ಸಮಸ್ಯೆಗೆ ಪರಿಹಾರವಾಗಲಿದೆ’ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಇಂಗ್ಲಿಷ್ ಕಲಿಕೆ ಸುಲಲಿತಗೊಳಿಸಲು ಪ್ರಯತ್ನಿಸುವುದು ಅಭಿನಂದನೀಯ’ ಎಂದರು. ವಲ್ಕನ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಸಾತ್ವಿಕ್ ಕೆ.ಜೆ, ‘ಜ್ಞಾನವಂತರು ಇದ್ದಾರೆ. ಆದರೆ, ಕೆಲಸದ ಕುರಿತು ಪ್ರೀತಿ ಅವಶ್ಯ. ವೃತ್ತಿಪರ ಹಾಗೂ ವ್ಯಾವಹಾರಿಕ ಇಂಗ್ಲಿಷ್ ಅಭಿವೃದ್ಧಿಗೆ ಇದು…
ಫೆ. 10 ರಂದು ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಶೀರ್ವಚನ ಕಾರ್ಯಕ್ರಮ ನೆರವೇರಿತು. ಎಮ್. ಜಿ. ಎಮ್. ಕಾಲೇಜ್ನ ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಸಾಮಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಹತ್ತನೇ ತರಗತಿಯಿಂದ ಬೀಳ್ಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ದೀಪವನ್ನು ನೀಡಿ ಹಾರೈಸಿ ಮಾತನಾಡಿ ಅನುಭವಗಳು ನಮ್ಮ ಜೀವನದ ಶ್ರೇಷ್ಠ ಶಿಕ್ಷಕ. ಹೇಡಿಗಳಿಗೆ ಈ ಭೂಮಿಯ ಮೇಲೆ ಬದುಕಲು ಅರ್ಹತೆಗಳಿಲ್ಲ, ಬರುವುದನ್ನೆಲ್ಲಾ ಎದುರಿಸಿ ಧೈರ್ಯವಾಗಿ ಮುನ್ನಡೆಯಬೇಕು. ನಮ್ಮನ್ನು ಹೊಗಳದೆ ಇತರರನ್ನು ತೆಗಳದೆ ಹೊಂದಾಣಿಕೆಯಿಂದ ಜೀವನವನ್ನು ನಡೆಸಬೇಕೆಂದರು. ಜಿ ಎಮ್ನ ಹಳೆ ವಿದ್ಯಾರ್ಥಿ, ಸೈಬರ್ ಭದ್ರತಾ ಸಲಹೆಗಾರ ಪ್ರಿತ್ವೇಶ್ ಕೆ ಮಾತನಾಡಿ ಇದು ನನಗೆ ಹೆಮ್ಮೆಯ ಕ್ಷಣ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವೇ ನನ್ನ ಸಾಧನೆಯ ಅಡಿಗಲ್ಲು. ಸೋಲಿನ ಪಾಠದೊಂದಿಗೆ ನಮ್ಮ ಗುರಿಯ ಕಡೆಗೆ ಗಮನ ಹರಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಕಲಿಕೆಯಲ್ಲಿ ಮುಂದಿರುವುದು ಮಾತ್ರವೇ ದೊಡ್ಡ ಸಾಧನೆಯಲ್ಲ, ಜೀವನದಲ್ಲಿ…
ಮೂಡುಬಿದಿರೆ: ಸ್ಥೂಲಕಾಯತೆಯು ಹೆಚ್ಚುವರಿ ದೇಹದ ಕೊಬ್ಬಿನಿಂದ ಗುರುತಿಸಲ್ಪಟ್ಟ ದೀರ್ಘಕಾಲದ ಸ್ಥಿತಿಯಾಗಿದೆ. ಇದು ಕೇವಲ ಸೌಂದರ್ಯ ಖಾಯಿಲೆಯಲ್ಲ. ಇದರಿಂದಾಗಿ ಆರೋಗ್ಯ ಸಂಬಂಧಿತ ಅಪಾಯಗಳಾದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಖಾಯಿಲೆಗಳು, ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯದ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ ಎಂದು ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುರೇಖ ಪೈ ತಿಳಿಸಿದರು. ನಿರಾಮಯ ಆಸ್ಪತ್ರೆಯ ತಂಡದಿಂದ ಮೂಡಬಿದಿರೆಯ ಸಹಕಾರಿ ಸೇವಾ ಸಂಘ ಸಹಯೋಗದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ಸ್ಥೂಲಕಾಯ ಮಾಹಿತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸ್ಥೂಲಕಾಯ ಚಿಕಿತ್ಸೆಯು ಹಿತಮಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಯನ್ನು ಒಳಗೊಂಡಿರುತ್ತದೆ. ಸ್ಥೂಲಕಾಯತೆಯ ಪ್ರಮುಖ ಕಾರಣವನ್ನು ಪರೀಕ್ಷಿಸಿ ಆಯುರ್ವೇದ ಚಿಕಿತ್ಸಾ ವಿಧಾನವಾದ ಪಂಚಕರ್ಮ ಹಾಗೂ ಇನ್ನಿತರ ಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ದೇವಸ್ಥಾನದ ಪ್ರದಾನ ಅರ್ಚಕರಾದ…