Author: admin

ಕಲಾ ಕ್ಷೇತ್ರದಲ್ಲಿ ನಿರಂತರವಾಗಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಬಂಟ ಸಮಾಜದ ಹೆಮ್ಮೆಯ ಗರಿ ಶರತ್ ಆಳ್ವ ಕೂರೇಲು. ಕಲೆಯೆನ್ನುವುದು ಮುಗಿಯದ ಅಧ್ಯಾಯ. ತನ್ನಲ್ಲಿರುವ ಕಲಾ ಪ್ರತಿಭೆಯನ್ನು ಸಿಗುವ ಅವಕಾಶಗಳ ಮೂಲಕ ಹೊರಹೊಮ್ಮಿಸಿದರೆ ಉತ್ತಮ ಕಲಾವಿದನೆನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಮನದೊಳಗೆ ಅದೆಷ್ಟೇ ನೋವುಗಳಿದ್ದರೂ ತನ್ನೆದುರಿಗಿರುವ ಪ್ರೇಕ್ಷಕರ ನೋವನ್ನು ಮರೆಸುವಂತಹ ಅದ್ಭುತ ಶಕ್ತಿಯಿರುವುದು ಓರ್ವ ಕಲಾವಿದನಿಗೆ ಮಾತ್ರ. ಕಲಾ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ, ಕಲಾವಿದರಿಗಾಗಿ ತಂಡವನ್ನೂ ರಚಿಸಿ ಅನೇಕ ಪ್ರತಿಭಾವಂತರಿಗೆ ಕಲಾವಿದನ ಸ್ಪರ್ಶ ಕೊಟ್ಟು ಬೆಳೆಸುತ್ತಿರುವವರು ಶರತ್ ಆಳ್ವ ಕೂರೇಲು. 27-05-1989 ರಲ್ಲಿ ಸಂಕಪ್ಪ ಆಳ್ವ ಮತ್ತು ಯಮುನಾ ಆಳ್ವ ದಂಪತಿಗಳ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೂರೇಲಿನಲ್ಲಿ ಜನಿಸಿದ ಶರತ್ ತಮ್ಮ ಒಂದರಿಂದ ನಾಲ್ಕನೇ ತರಗತಿ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಟ್ಯಾರು, ಐದನೇ ತರಗತಿಯಿಂದ ಏಳನೇ ತರಗತಿ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರಿನಲ್ಲಿ ಪಡೆದು ತಮ್ಮ ಪ್ರೌಢ, ಕಾಲೇಜು ಹಾಗೂ…

Read More

ಜ್ಞಾನಾರ್ಜನೆಗೆ ಮುಕ್ತಾಯ ಎಂಬುದುವುದಿಲ್ಲ. ತಾನು ಮಹಾಜ್ಞಾನಿ ಎಂದು ಬೀಗುವುದು ಮೂರ್ಖತನ. ಎಲ್ಲವನ್ನು ತಿಳಿದವರು ಏನೂ ತಿಳಿಯದವರಂತೆ ಇರುತ್ತಾರೆ. ಅರೆಬರೆ ತಿಳಿದವನು ಮಹಾಜ್ಞಾನಿಯಂತೆ ವರ್ತಿಸುತ್ತಾನೆ. ಇದನ್ನು ತೊಡೆದು ಹಾಕುವ ಚಿಂತನೆ ಎಳೆಯ ಮಕ್ಕಳಲ್ಲಿ ಬೆಳೆಸಬೇಕು. ಅವರಲ್ಲಿ ಜ್ಞಾನಾರ್ಜನೆಯ ಹಸಿವು ಹುಟ್ಟಿಸುವ ಶಿಕ್ಷಣ ನೀಡಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಅವರ ತತ್ಕರ ಕಮಲ ಸಂಜಾತ ಪರಮಪೂಜ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನುಡಿದರು. ಅವರು ಯಡ್ಯಾಡಿ – ಮತ್ಯಾಡಿ ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ದುಶ್ಚಟಗಳ ಪಟ್ಟಿಗೆ ಹೊಸ ಸೇರ್ಪಡೆ : ಮನುಷ್ಯನ ಜೀವನದಲ್ಲಿ ಹಲವು ಬಗೆಯ ದುಶ್ಚಟಗಳಿವೆ. ಅದಕ್ಕೆ ಹೊಸದಾಗಿ ಈಗ ಸೇರ್ಪಡೆಗೊಂಡಿರುವುದು ಮೊಬೈಲ್ ಬಳಕೆ. ಆಗಾಧ ಜ್ಞಾನ ಸಂಗ್ರಹಿಸಬಹುದಾದ ಸಾಧನವಿಂದು ಕೆಟ್ಟ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಅದರಲ್ಲೂ ಮಕ್ಕಳು ಇದರ ಬೆನ್ನಹಿಂದೆ ಬಿದ್ದಿದ್ದಾರೆ. ಶಿಕ್ಷಣ ಸಂಸ್ಥೆಗಳು, ಪೋಷಕರು…

Read More

ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ಅದು ಮಾನವನಾಗಲೀ ಮೃಗ ಪಕ್ಷಿಗಳಾಗಲೀ, ಸರೀಸೃಪವಾಗಲೀ ಇಲ್ಲವೇ ಮತ್ಸ್ಯವಾಗಲೀ ಪ್ರತಿಯೊಂದಕ್ಕೂ ಹಸಿವು ಇದ್ದೇ ಇದೆ. ಹಸಿವು ಇಲ್ಲದ ಜೀವಿಯೇ ಇಲ್ಲ. ಹಸಿವು ಇಲ್ಲದೇ ಇರುತ್ತಿದ್ದರೆ ಈ ಪ್ರಪಂಚವೇ ಇರುತ್ತಿರಲಿಲ್ಲ. ಕಾರಣ ಶರೀರ ಬದುಕಿರಲು ಶಕ್ತಿ ಬೇಕು. ಶಕ್ತಿಯನ್ನು ಪೂರೈಸಲು ಆಹಾರ ಬೇಕು. ಆಹಾರ ಬೇಕಾದರೆ ಹಸಿವು ಆಗಬೇಕು. ಆದ್ದರಿಂದಲೇ ಪ್ರತಿಯೊಂದು ಜೀವಿಗೂ ಪರಮಾತ್ಮನು ಹಸಿವನ್ನು ಕರುಣಿಸಿದ್ದಾನೆ. ಹಸಿವು ಪುಟ್ಟ ಮಗುವಿನಿಂದ ಹಿಡಿದು ಮುದಿತನದ ತನಕ ಇದ್ದೇ ಇರುತ್ತದೆ. ಹಸಿವನ್ನು ನೀಗಿಸುವ ಆಹಾರಕ್ಕಾಗಿ ಹೋರಾಟ ಮಾಡಲೇ ಬೇಕಾಗುತ್ತದೆ. ಹಸಿವಿನ ಬೇಗೆಯನ್ನು ಅನುಭವಿಸಿದವರೇ ಬಲ್ಲರು. ಫೋಟೋದಲ್ಲಿ ಹಸಿವಿನಿಂದ ಬಳಲುವ ಪುಟ್ಟ ಮಗುವು ನನ್ನ ಕೈಯಿಂದ ಯಾರಾದರೂ ಆಹಾರವನ್ನು ಕಿತ್ತುಕೊಳ್ಳುವರೋ ಎಂಬ ಗಾಬರಿಯಿಂದ ಆಹಾರದ ಬಟ್ಟಲನ್ನು ಹಿಡಿದುಕೊಂಡು ಓಡುತ್ತಿದೆ. ಆ ದೃಶ್ಯವನ್ನು ನೋಡುವಾಗ ನಮ್ಮ ಮನ ಕರಗುತ್ತದೆ. ಆ ಪುಟ್ಟ ಮಗುವಿನ ಕೈಯಿಂದ ಆಹಾರದ ಬಟ್ಟಲನ್ನು ಕಿತ್ತುಕೊಳ್ಳಲು ಕರಿಯ ಟೊಣಪನೊಬ್ಬನು ಬೆನ್ನಟ್ಟುತ್ತಿದ್ದಾನೆ. ಆ ಟೊಣಪನ ಮೇಲೆ ನನ್ನ ಹೊರತು!!! ಹೆಚ್ಚಿನವರಿಗೆ…

Read More

ಮಂಗಳೂರು ಮಹಾನಗರಪಾಲಿಕೆಯ ಗುತ್ತಿಗೆದಾರರ ಕುಂದು ಕೊರತೆ ಮತ್ತು ಸಮಸ್ಯೆಯನ್ನು ಪರಿಶೀಲಿಸಲು ಮಹಾನಗರಪಾಲಿಕೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಯಿತು. ಸಭೆಯಲ್ಲಿ ಗುತ್ತಿಗೆದಾರರಿಗಾಗುವ ಸಮಸ್ಯೆಯನ್ನು ಕೇಳಿ ಇದಕ್ಕೆ ಸಮಜಾಯಿಷಿಕೆಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಅದರಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವೆ ಹಲವು ವಿಷಯಗಳ ಚರ್ಚೆ ನಡೆದಿದ್ದು ಹಲವಾರು ನ್ಯೂನತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಜರುಗಿಸಲು ಆದೇಶಿಸಲಾಯಿತು. ಸಭೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್, ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಪಟ್ಟಣ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೋಹಿತ್ ಅಮೀನ್, ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವರುಣ್ ಚೌಟ, ವಿಪಕ್ಷ ನಾಯಕರಾದ ಪ್ರವೀಣ್ ಚಂದ್ರ ಆಳ್ವ ಮತ್ತು ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆಗಳ ತರಬೇತಿಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಗೆ 2024 ರ ಸಾಲಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯು ಲಭಿಸಿದೆ. ಸವಣೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಸುಳ್ಯ ಶಾಸಕಿ ಕುಮಾರಿ ಭಾಗೀರತಿ ಮುರುಳ್ಯ ರವರು ಪ್ರಶಸ್ತಿಯನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರಿಗೆ ಪ್ರಧಾನ ಮಾಡಿದರು. ಹತ್ತು ಹಲವಾರು ಪ್ರಶಸ್ತಿಗಳೊಂದಿಗೆ ಕಳೆದ 2023 ರ ಸಾಲಿನ “ರಾಜ್ಯ ಶಿಕ್ಷಣ ಸೇವಾ ರತ್ನ”, “ಮಂದಾರ”, ಪ್ರಶಸ್ತಿಗಳೊಂದಿಗೆ ರಾಜ್ಯಮಟ್ಟದ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯನ್ನು ವಿದ್ಯಾಮಾತಾ ಅಕಾಡೆಮಿಯು ಮುಡಿಗೇರಿಸಿಕೊಂಡಿದೆ. ಕರಾವಳಿ ಭಾಗದಲ್ಲಿ 5 ವರ್ಷದಿಂದ 40 ವರ್ಷದ ವರೆಗಿನವರಿಗೆ ಉದ್ಯೋಗ ಕೌಶಲ್ಯತೆ, ಶಿಕ್ಷಣ ಮೌಲ್ಯ, ವಿವಿಧ ನೇಮಕಾತಿಗಳಿಗೆ ತರಬೇತಿ, ಖಾಸಗಿ ಉದ್ಯೋಗಗಳ ನೇರ ಸಂದರ್ಶನಗಳನ್ನು ಒಂದೇ…

Read More

ಈ ಆದುನಿಕ ಯುಗದಲ್ಲಿ ಬದಲಾಗುತ್ತಿರುವ ದಿನಮಾನಗಳಲ್ಲಿ ನಮ್ಮ ಸಂಪ್ರದಾಯಗಳು ಮೂಲೆ ಸೇರಿ ನವ ನಾಗರೀಕತೆ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಮಧ್ಯೆಯೂ ನಮ್ಮ ಕೌಟುಂಬಿಕ ಸಮಾರಂಭಗಳು ದಿಕ್ಕು ತಪ್ಪದಂತೆ ಎಚ್ಚರಿಕೆ ವಹಿಸುತ್ತಲೇ ತಮ್ಮ ಮಕ್ಕಳ ನಿಶ್ಚಿತಾರ್ಥ, ಮೆಹೆಂದಿ, ವಿವಾಹ, ಅತಿಥಿ ಭೋಜನ ಸಮ್ಮಿಲನಗಳ ಪಾವಿತ್ರ್ಯ ಮಹತ್ವ ಕೆಡದಂತೆ ಆಚರಿಸಿಕೊಳ್ಳುತ್ತಾರೆ ಎಂಬುವುದಕ್ಕೆ ಮಹಾನಗರಿ ಮುಂಬಯಿಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮ ಸಾಕ್ಷಿಯಾಗಿದೆ. ಮಹಾನಗರಿಯ ಬಂಟ ಕುಟುಂಬವೊಂದು ತಮ್ಮ ಮಗನ ಮೆಹೆಂದಿ ಕಾರ್ಯಕ್ರಮದಲ್ಲಿ ಮುಂಬಯಿಯ ಜನಪ್ರಿಯ ಗಾಯಕ ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾ ಕಾರ್ಯಕ್ರಮ ಆಯೋಜಿಸಿದ್ದು, ಜಾತಿ ಬಾಂಧವರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಯಿತು. ವಿಜಯ್ ಶೆಟ್ಟಿ ಅವರ ಭಕ್ತಿ ಪ್ರಧಾನ ಹಾಡುಗಳು ಆಗಮಿಸಿದ್ದ ಬಂಧುಮಿತ್ರರ ಹರ್ಷೋದ್ಗಾರಗಳ ಮೂಲಕ ಪ್ರಸ್ತುತಗೊಂಡು ಅಲ್ಲಿ ಸೇರಿದ್ದ ಗಣ್ಯರು ಈ ಕಾರ್ಯಕ್ರಮ ಆಯೋಜಿಸಿದ ಕುಟುಂಬದ ಕುರಿತು ಮೆಚ್ಚುಗೆ ನುಡಿಗಳನ್ನಾಡಿದರು. ಇಂಥಹ ಆರೋಗ್ಯಕರ ಬೆಳವಣಿಗೆ ಮುಂದಿನ ದಿನಗಳಲ್ಲಿ ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು. ಒಟ್ಟಿನಲ್ಲಿ ಇದೊಂದು ಮಾದರಿ ಮೆಹೆಂದಿ ಕಾರ್ಯಕ್ರಮ…

Read More

ಮುಂಬಯಿ, ಸೆ.18: ನಾನೂ ಕೂಡಾ ಮುಂಬಯಿನಲ್ಲಿ ಕೈಗಾರಿಕೋದ್ಯಮಿ ಆಗಿದ್ದವನು. ಹಾಗಾಗಿ ನನಗೆ ಬಂಟರ ಮಿತ್ರರೇ ಜಾಸ್ತಿ ಆಗಿದ್ದಾರೆ. ಜಗತ್ತಿನ ಯಾವ ಮೂಲೆಗೂ ಹೋದಾಗಲೂ ಬಂಟರ ಪರಿಚಯಸ್ಥನಾಗುತ್ತೇನೆ. ಸ್ವೇಹತ್ವ ಬಂಟರ ಗುಣಧರ್ಮವಾಗಿದೆ ಆದುದರಿಂದ ಕನ್ನಡನಾಡು ಕಟ್ಟಲು ಮುಂಬಯಿವಾಸಿ ಬಂಟರ ಶಕ್ತಿ ಪಡೆಯಲು ಬಯಸುತ್ತಿದ್ದೇನೆ. ಜಗತ್ತಿನಲ್ಲಿ ಅತೀ ಹೆಚ್ಚು ಗೌರವವುಳ್ಳ ಬಂಟರು ಬಾಂಧವ್ಯಕ್ಕೆ ಬಲಿಷ್ಠರು. ಸದಾ ಭೃಹತ್ವತ್ವವನ್ನು ಯೋಚಿಸುವ ಬಂಟರು ಸಹೃದಯಿಗಳಾಗಿದ್ದಾರೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ತಿಳಿಸಿದರು. ಇಂದಿಲ್ಲಿ ಭಾನುವಾರ ಕುರ್ಲಾ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿನ ಕುಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ (ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್) ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ವಿಶ್ವ ಬಂಟರ ಸಮ್ಮಿಲನ-2022ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು. ನಳೀನ್‍ಕುಮಾರ್ ಕಟೀಲ್ ಮಾತನಾಡಿ ಉದ್ಯಮಶೀಲರಾಗಿ ಸಾಧಕರಾದ ಬಂಟರು ವಿಶ್ವ ಸುಂದರಿಯಿಂದ ವಿಶ್ವನಾಯಕರಾಗಿ ಬೆಳೆದವರಾಗಿದ್ದಾರೆ.…

Read More

ತುಳು ರಂಗಭೂಮಿಯಲ್ಲಿ ಇದೀಗ ಹೊಸತನದ ಗಾಳಿ ತುಸು ಬಿರುಸಾಗಿಯೇ ಬೀಸುತ್ತಿದೆ!. ಹಾಸ್ಯಮಯ ನಾಟಕಗಳನ್ನೇ ನೆಚ್ಚಿಕೊಂಡಿದ್ದ ಹಲವು ನಾಟಕ ತಂಡಗಳು ಪ್ರಸ್ತುತ ಪೌರಾಣಿಕ, ಜಾನಪದ, ಐತಿಹಾಸಿಕ ನಾಟಕಗಳನ್ನೂ ಪ್ರದರ್ಶಿಸುವ ಮೂಲಕ ತುಳು ರಂಗಭೂಮಿಯಲ್ಲಿ ಹೊಸ ಸಂಚಲನವನ್ನುಂಟು ಮಾಡುತ್ತಿವೆ. ಅದೇ ಸಿದ್ಧಸೂತ್ರದ, ಒಂದೇ ಶೈಲಿಯ ನಾಟಕಗಳಿಗೆ ಒಗ್ಗಿಹೋಗಿದ್ದ ಇಲ್ಲಿನ ಪ್ರೇಕ್ಷಕರು ಹೊಸ ಅಲೆಯ ನಾಟಕಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಿರುವುದು ತುಳು ರಂಗಭೂಮಿಯ ಹೊಸ ಬೆಳವಣಿಗೆಯಾಗಿದೆ. ತುಳುನಾಡಿನ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರವಾಗಿ  ನಡೆಯುತ್ತಿರುವ ಉತ್ಸವ, ಜಾತ್ರೆ, ಬ್ರಹ್ಮಕಲಶ, ನೇಮೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಇಂತಹ ನಾಟಕಗಳು ಅಪಾರ ಬೇಡಿಕೆ ಪಡೆಯುತ್ತಿವೆ. ತುಳು ನಾಟಕ ರಂಗದ ಅತ್ಯಂತ ಯಶಸ್ವಿ ಸಂಘಟಕ ಎಂಬ ಹೆಗ್ಗಳಿಕೆ ಹೊಂದಿರುವ ಕಿಶೋರ್‌ ಡಿ.ಶೆಟ್ಟಿ ಅವರು ಇಂತಹ ವಿಶಿಷ್ಟ ಹಾಗೂ ಮೌಲ್ಯಯುತವಾದ ನಾಟಕಗಳನ್ನು ಸಾದರ ಪಡಿಸುವ ಮಹತ್ವಾಕಾಂಕ್ಷೆಯಿಂದ ಹುಟ್ಟು ಹಾಕಿರುವ ಸಂಸ್ಥೆ “ಶ್ರೀ ಲಲಿತೆ” ತಂಡ. ಈ ನಾಟಕ ತಂಡ ಪ್ರದರ್ಶಿಸಿದ ʻಕಟೀಲ್ದಪ್ಪೆ ಉಳ್ಳಾಲ್ದಿʼ ಪೌರಾಣಿಕ ನಾಟಕ ದೇಶ- ವಿದೇಶಗಳಲ್ಲಿ ಪ್ರದರ್ಶನಗೊಂಡು ಕಲಾಭಿಮಾನಿಗಳ ಅಪಾರ ಮೆಚ್ಚುಗೆಗೆ…

Read More

“ಹೋಮಕ್ಕೆ ಹಾಕಲು ಕಡಿಮೆ ದರದ ತುಪ್ಪ ಕೊಡಿ ” ಯಾವುದೇ ಅಂಗಡಿಯಲ್ಲೂ ಕೇಳಿ ಬರುವ ಮಾತಿದು. ದೇವರ ದೀಪಕ್ಕೂ ಇದೇ ತುಪ್ಪ. ದೇವರಿಗೆ ಈ ತುಪ್ಪ ನಡೆಯುತ್ತಾ? ಹೌದು, ದೇವರಿಗೆ ಭಕ್ತಿಯಿಂದ ಏನೇ ಸಮರ್ಪಿಸಿದರೂ ಆತ ಸ್ವೀಕರಿಸುತ್ತಾನೆ. ಕಣ್ಣಪ್ಪನ ಮಾಂಸ ಸ್ವೀಕರಿಸಿದ್ದ ಆತ. ಹಲವಾರು ಕಡೆ ಮದ್ಯ ಮಾಂಸ ಸಿಗರೇಟಿನ ನೈವೇದ್ಯ ಪದ್ಧತಿ ಕೂಡ ಇವೆ. ಆದರೆ ಹಾಗಂತ ತೀರಾ ದನದ ಮಾಂಸದ ತುಪ್ಪ ಕೊಟ್ಟರೆ? ಗೊತ್ತಿಲ್ಲದೇ ಕೊಟ್ಟರೆ ಏನೂ ತೊಂದರೆ ಇಲ್ಲ ಅಂದುಕೊಂಡು ನಮ್ಮ ಮನಸ್ಸಿಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತೇವೆ. ಆದರೆ ಒಳಗಿಂದೊಳಗೆ ನಮಗೆ ಗೊತ್ತಿಲ್ಲದೇ ಇಲ್ಲ. ತುಪ್ಪದ ದರ ಹೊರಗೆ ಐನೂರು ರೂಪಾಯಿ ತನಕ ಇದೆ. ಆದರೆ ದೇವರಿಗೆ ಅರ್ಪಿಸುವ ತುಪ್ಪ 125 ರಿಂದ 200 ರೂಪಾಯಿ ಕೇಜಿ. ಸ್ವಾಮಿ ಅಯ್ಯಪ್ಪ ಇರುಮುಡಿ ಸಲುವಾಗಿ ಲಕ್ಷಾಂತರ ಕೇಜಿ ತುಪ್ಪ ನವೆಂಬರ್ ನಿಂದ ಜನವರಿ ತನಕ ಬರುತ್ತದೆ. ಇದರಲ್ಲಿ ಇರುವುದು ದನದ ಕೊಬ್ಬು. ಎಲುಬು ಮತ್ತು ವನಸ್ಪತಿ. ಸುವಾಸನೆ ಬರಲು…

Read More

ಮುಂಬಯಿ ಧುನಿಯಾದಲ್ಲಿ ತುಳುಕನ್ನಡಿಗರಲ್ಲಿ `ಬಂಟ ಕುಲಭೂಷಣ’ ಮುಂಬಯಿ ತುಳುಕನ್ನಡಿಗರ ನೆಚ್ಚಿನ `ಯಜಮಾನ ಎಂ.ಡಿ ಶೆಟ್ಟಿ’ ಎಂದೇ ಜನಜನಿತ ಮೂಳೂರು ದೇಜು ಶೆಟ್ಟಿ (95) ಅವರು  ಸೋಮವಾರ (ಜು.10) ಬಾಂದ್ರಾ ಪಶ್ಚಿಮದ ಎಸ್.ವಿ ರೋಡ್‍ನಲ್ಲಿನ ವಿಜಯ್ ರಾಜ್ ಅಪಾರ್ಟ್‍ಮೆಂಟ್ ನಿವಾಸದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಮೂಳೂರು ಮನೆತನದವರಾಗಿದ್ದ ಮೃತರು 1973ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಇಂದಿರಾ ಬ್ರಿಗೇಡ್ ಇದರ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡರು. 1977ರಲ್ಲಿ ವಿಶ್ವದ ಹೆಸರಾಂತ ಬಂಟ ಸಮಾಜದ ಸಂಸ್ಥೆಯಾದ ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಚುನಾಯಿತರಾಗಿ ಸಂಸ್ಥೆಯನ್ನು ಪ್ರತಿಷ್ಠಿತ ಮಟ್ಟಕ್ಕೆ ಬೆಳಿಸಿದ್ದು ಇಂದಿಗೂ ಬಂಟ ಸಮಾಜದ ಹಿರಿಯ ಮುತ್ಸದ್ಧಿ ಆಗಿಯೇ ಉಳಿದಿರುವರು. ವರ್ಲಿಯಲ್ಲಿನ ನಿತ್ಯಾನಂದ ರಾತ್ರಿ ಹೈಸ್ಕೂಲು ಇದನ್ನು ಬಂಟ್ಸ್ ಸಂಘಕ್ಕೆ ಸೇರ್ಪಡೆ, ಬಂಟರ ಭವನದಲ್ಲಿ ಸ್ವಾಮಿ ಮುಕ್ತಾನಂದ ಸಭಾಗೃಹ ಮತ್ತು ಮಹಿಳಾ ವಿಭಾಗದ ರಚನೆ, ಬಂಟರ ಸಂಘದ ಮುಖವಾಣಿ ಬಂಟರವಾಣಿ ಪ್ರಕಾಶನ, 2006ರಲ್ಲಿ ಸ್ಥಾಪಿತ ಬಂಟ್ಸ್ ಉನ್ನತ ಶಿಕ್ಷಣ ಯೋಜನೆ,…

Read More