Author: admin

ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಖ್ಯಾತ ಮಕ್ಕಳ ತಜ್ಞ, ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಹಾಗೂ ಹೊರನಾಡ ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ಡಾ‌.ಸುಧಾಕರ ಶೆಟ್ಟಿ ಅವರಿಂದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಅಪೌಷ್ಟಿಕತೆ ನಿವಾರಣಾ ಶಿಬಿರವು ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಕ್ಷಯಧಾಮದಲ್ಲಿ ನಾಳೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ12 ರ ವರೆಗೆ ನಡೆಯಲಿರುವ ಈ ಶಿಬಿರದ ಪ್ರಯೋಜನವನ್ನು ಕಲ್ಲಬೆಟ್ಟು ಮತ್ತು ಆಸುಪಾಸಿನ ಗ್ರಾಮಗಳ ಮಕ್ಕಳು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ ಅವರು ತಿಳಿಸಿದ್ದಾರೆ.

Read More

ವಿದ್ಯಾಭ್ಯಾಸ ಮೆಕ್ಯಾನಿಕಲ್ ಎಂಜಿನಿಯರಿಂಗ್. ವೃತ್ತಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಟೊಯೊಟಾ ಕಂಪನೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್. ಆದರೆ ತುಡಿತ ಕರಾವಳಿಯ ಗಂಡು ಕಲೆ ಖ್ಯಾತಿಯ ಯಕ್ಷಗಾನದಲ್ಲಿ ಸುಸ್ಥಿರತೆ. ಇದಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿರುವವರು ಬೆಂಗಳೂರು ಬಂಟರ ಸಂಘದ ಮಾಜಿ ಕೋಶಾಧಿಕಾರಿ ಬಾರ್ಕೂರು ದೀಪಕ್ ಶೆಟ್ಟಿ. ಯಕ್ಷಗಾನ ಕ್ಷೇತ್ರದ ಆರ್ಥಿಕ ಸ್ಥಿತಿಗತಿಗಳ ಮೌಲ್ಯೀಕರಣ ಎನ್ನುವ ವಿಷಯದ ಕುರಿತು ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ. ಪಿ.ಎಚ್‌ಡಿ ಪದವಿ ನೀಡಿದೆ. ಇದಕ್ಕಾಗಿ ಯಕ್ಷಗಾನದ ಇತಿಹಾಸ, ಪೌರಾಣಿಕೆ ಹಿನ್ನಲೆ, ರೂಪಾಂತರವನ್ನು ಅಭ್ಯಸಿಸಿ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಹತ್ತಾರು ಹಿರಿಯ ಕಲಾವಿದರನ್ನು ಸಂದರ್ಶಿಸಿ, ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಸುಮಾರು 3 ತಲೆಮಾರಿನ ಅನುಭವವನ್ನು ಸಂಗ್ರಹಿಸಿದ್ದಾರೆ.ಮುಖ್ಯ ಉದ್ದೇಶ: ಆರ್ಥಿಕವಾಗಿ ಸದೃಢವಿದ್ದಾಗ ಕಲಾವಿದರು ಉಳಿಯುತ್ತಾರೆ. ಕಲಾ ಪ್ರಕಾರ ಉಳಿಯುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡುವ ಮುಖ್ಯ ಉದ್ದೇಶದಿಂದ ವಿಚಾರ ಮಂಡಿಸಿದ್ದಾರೆ. ಈ ಸುಸ್ಥಿರತೆಯಲ್ಲಿ ಕಲಾವಿದರು, ಮೇಳದ ಯಜಮಾನರು, ಸಂಘಟಕರು, ಪ್ರೇಕ್ಷಕರು ಹಾಗೂ…

Read More

ಬೆಂಗಳೂರು ಬಂಟರ ಸಂಘಕ್ಕೆ ಜುಲೈ 28 ರಂದು ನಡೆಯುವ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಯೂನಿವರ್ಸಲ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ ಜಪ್ತಿ ಸ್ಪರ್ಧೆ ಮಾಡುತ್ತಿದ್ದಾರೆ. ಬೆಂಗಳೂರು ಬಂಟರ ಸಂಘದಲ್ಲಿ 1994 ರಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿರುವ ಇವರು ಸಮರ್ಥ ಸಂಘಟರಾಗಿ ಗುರುತಿಸಿಕೊಂಡವರು. ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದು ಔದ್ಯೋಗಿಕ ಜೀವನಕ್ಕೆ ಕಾಲಿಟ್ಟು ಕಳೆದ 30 ವರ್ಷಗಳ ಸೇವಾ ಅನುಭವ ಇವರದ್ದಾಗಿದೆ. 1994 ರಲ್ಲಿ ಯುವ ವಿಭಾಗದ ಸದಸ್ಯನಾಗಿ ಸಂಘದ ಚಟುವಟಿಕೆಗಳಲ್ಲಿ ಸೇರ್ಪಡೆಯಾದ ಇವರು ಸಕ್ರೀಯ ಸದಸ್ಯರಾಗಿ ಸಂಘದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದರು. 2001-04ರಲ್ಲಿ ಯುವ ವಿಭಾಗದ ಕಾರ್ಯದರ್ಶಿಯಾಗಿ, 2004-06 ರಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ, ಕ್ರೀಡಾ ಸಮಿತಿ ಸಂಚಾಲಕರಾಗಿ, 2006-08 ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2008-10 ರ ವಿದ್ಯಾರ್ಥಿವೇತನ ಸಮಿತಿ ಸಂಚಾಲಕ, ಕ್ರೀಡಾ ಸಮಿತಿ ಸದಸ್ಯ ಮತ್ತು ಡೈರೆಕ್ಟರಿ ಸಮಿತಿ ಸಂಚಾಲಕರಾಗಿ ಸಂಘದಲ್ಲಿ…

Read More

ಮರ ಸಪಾಯಿ ಮಲ್ಪರೆ ಕಿಸುಲಿ ಇತ್ತಿಲೆಕ್ಕ, ಚೆಂಬು (metal) ನ್ ನಯಿಮನೆ ಮಲ್ಪರೆ ಅರ ಪಾಡುವೆರ್. ಹದ ಪಜ್ಜಿ ನೆಲ ‘ಅರೆ’ ದ್ ಸಪಾಯಿ ಮಲ್ಪುವ. ಅರೆಪುನ ಸಾಧನ (tool) ಅರ (file), ಕನ್ನಡೊಡುಲಾ ಅರ. ಕರ್ಬ, ಮಿಲಾವು (steel) ದ ಕತ್ತಿ, ಬಿಸತ್ತಿ, ಕತ್ತೆರಿಲೆನ ಬಾಯಿ (ಅಲಗು) ಪರ್ತೆ ಮಲ್ಪರೆ ಅರ ಪಾಡುವೆರ್ ಅತ್ತ್ ಡ ಅರೊಟು ತಿಕ್ಕುವೆರ್. ಅಂಚೆನೇ ಅಡ್ಡಮುರಿ, ಗರ್ಗಸ್ ಲೆಗ್ ಲಾ ಅರ ಪಾಡೊಂದು ಇಪ್ಪೊಡು. ಇಜ್ಜಿಡ ಐಕ್ಲೆನ ಕೂಲಿ ಬಡ್ಡ್ ಕಟ್ಟುಂಡು. ಮಿಲಾವು ಪಂಡ steel, ಕರ್ಬೊಗು ಅಂಗಾರ (carbon, ಕರಿ) ಬಿರಾದ್ ಮಲ್ಪುನು. ತುಲುತ ಸ್ಟೀಲ್ ಅವು ಮನ್ನ್ ಪತ್ತಂದಿನ ಮಿಲಾವು (Stainless Steel). ಕರ್ಬೊಗು ಒಂತೆ ಕ್ರೋಮಿಯಂ (11%,) ಬೊಕ್ಕ ಬಜೀ ಒಂತೆ ನಿಕ್ಕೆಲ್ ಪನ್ಪಿ ಮೂಲ ಧಾತು (element) ಲೆನ್ ಸೇರಾದ್, ತುಲುತ ಸ್ಟೀಲ್ ಮಲ್ಪುವೆರ್‌. ಬೆನ್ನಿದ ಬೇಲೆಗ್ ಗಲಸುನ ಕತ್ತಿನ್ ನಮ ಒಚ್ಚಿದ ಮರಟ್ ಕೂಟುವ. ಪಂಡ ಬೊರ್ಗಲ್ಲ್…

Read More

ರೋಟರಿ ಸಂಸ್ಥೆ ಒಂದು ವಿಶ್ವವಿದ್ಯಾನಿಲಯವಿದ್ದಂತೆ ಎಂದು ಹುಣಸೂರು ರೋಟರಿ ಪದಗ್ರಹಣ ಅಧಿಕಾರಿ ರೋ ಎಂಪಿಎಫ್ ಬಿ.ಶೇಖರ್ ಶೆಟ್ಟಿ ಬಣ್ಣಿಸಿದರು. ಹುಣಸೂರು ರೋಟರಿ ಸಂಸ್ಥೆಯ 2024-25 ನೇ ಸಾಲಿನ ನೂತನ ಅಧ್ಯಕ್ಷ, ಕೆ.ಪಿ. ಪ್ರಸನ್ನ, ಕಾರ್ಯದರ್ಶಿ ಹೆಚ್.ಆರ್. ಕೃಷ್ಣ ಕುಮಾರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ, ರೋಟರಿ ಸಂಸ್ಥೆ ಎಂದರೆ ಸೇವೆ, ಒಡನಾಟ, ಪ್ರೀತಿ, ಸ್ನೇಹ, ತ್ಯಾಗ, ಸಮಗ್ರತೆ, ಏಕತೆ, ನಾಯಕತ್ವಕ್ಕೆ ಮತ್ತೊಂದು ಹೆಸರು. ಕಟ್ಟ ಕಡ್ಡೆಯ ಹಾಗೂ ಮುಂದಿನ ಪೀಳಿಗೆಯವರೆಗೂ ಸೇವೆ ಸಲ್ಲಿಸುವ ಅವಕಾಶ ನೀಡುವುದು ರೋಟರಿ ಸಂಸ್ಥೆಯ ಧ್ಯೇಯವಾಗಿದೆ. ವಿಶ್ವ ಬಾತೃತ್ವ ಸಮಗ್ರತೆ, ಏಕತೆ, ವೈವಿಧ್ಯತೆ ರೋಟರಿ ಸಂಸ್ಥೆಯ ವಿಶೇಷ. ಪ್ರಪಂಚದಾದ್ಯಂತ 1.2 ಮಿಲಿಯನ್, ಭಾರತದಲ್ಲಿ 1.40 ಲಕ್ಷ ಸದಸ್ಯರಿರುವ ವಿಶ್ವದ ದೊಡ್ಡ ಸಂಸ್ಥೆ ಇದಾಗಿದೆ. ಇಂತಹ ಸಂಸ್ಥೆಯ ಸದಸ್ಯರಾಗಿರುವುದು ಹೆಮ್ಮೆಯ ವಿಷಯ, ಹಾಗೂ ಸಂಸ್ಥೆಯು ತನ್ನ ಅತ್ಯುತ್ತಮ ಕಾರ್ಯಗಳಿಂದ ಪ್ಲಾಟಿನಂ ಪ್ರಶಸ್ತಿ ಪಡೆದಿರುವುದು ಅದ್ಭುತ ಸಾಧನೆ ಎಂದು ಕೊಂಡಾಡಿದರು. ಅಧಿಕಾರ ಸ್ವೀಕರಿಸಿದ ರೋಟರಿ ಕೆ.ಪಿ. ಪ್ರಸನ್ನ ಮಾತನಾಡಿ,…

Read More

ದಾವಣಗೆರೆಯ ಪ್ರತಿಷ್ಠಿತ “ದಾವಣಗೆರೆ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್” ನ 2024-25 ನೇ ಸಾಲಿನ ಪ್ರಥಮ ಕಾರ್ಯಕಾರಿ ಮಂಡಳಿ ಸಭೆಯು ಪಿ.ಬಿ ರಸ್ತೆಯಲ್ಲಿರುವ ಶ್ರುತಿ ಮೋಟಾರ್ಸ್ ಹಿಂಭಾಗದ, ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ಕಾರ್ಯದರ್ಶಿ, ಕರಾವಳಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸಿಎ ಉಮೇಶ ಶೆಟ್ಟಿ ಅವರನ್ನು ಸಂಘದ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆ ಮಾಡಲಾಯಿತು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾ ಪೋಷಕರಾಗಿರುವ ಉಮೇಶ್ ಶೆಟ್ಟಿಯವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ.

Read More

ಅಂಬಲ್ಪಾಡಿ ಪರಿಸರದಲ್ಲಿರುವ ಭಾಸ್ಕರ್ ಶೆಟ್ಟಿ ಮತ್ತು ಅರುಣ ಶೆಟ್ಟಿ ದಂಪತಿಯವರ ಮನೆಯು ತುಂಬಾ ಅಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಬಂಟರ ಯಾನೆ ನಾಡವರ ಮಾತೃಸಂಘ (ರಿ) ಉಡುಪಿ ತಾಲೂಕು ಸಮಿತಿಯ ನಿಕಟಪೂರ್ವ ಸಂಚಾಲಕರಾದ ಜಯರಾಜ್ ಹೆಗ್ಡೆಯವರ ನೇತೃತ್ವದಲ್ಲಿ, ಪಳ್ಳಿ ನಟರಾಜ್ ಹೆಗ್ಡೆ, ಮನೋಹರ್ ಶೆಟ್ಟಿ ಅಂಬಲ್ಪಾಡಿ ಹಾಗೂ ಈಗಿನ ತಾಲೂಕು ಸಮಿತಿಯ ಸಂಚಾಲಕರಾದ ಶಿವಪ್ರಸಾದ್ ಹೆಗ್ಡೆ, ಉಪ ಸಂಚಾಲಕರಾದ ಕೋಡು ದಿನೇಶ್ ಹೆಗ್ಡೆ ಹಾಗೂ ತಾಲೂಕು ಸಮೀತಿಯ ಸದಸ್ಯರು ಹಾಗೂ ಊರ ಮತ್ತು ಪರ ಊರ ದಾನಿಗಳ ಸಹಕಾರದಿಂದ ಭಾಸ್ಕರ್ ಶೆಟ್ಟಿ ದಂಪತಿಯವರಿಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ಕಿದಿಯೂರು ಪಂಚಾಯತ್ ನ ಪ್ರಥಮ ಪ್ರಜೆ ಸುಜಾತ ಶೆಟ್ಟಿಯವರು ದೀಪ ಬೆಳಗಿಸಿ, ಮನೆಯ ಕೀ ಕೊಡುವ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ ಬೀಡಿ ಮಾಲಕರಾದ ಶಶಿಕಾಂತ್ ಶೆಣೈ, ನಗರಸಭೆಯ ಸದಸ್ಯರಾದ ಹರೀಶ್ ಶೆಟ್ಟಿ, ತಾಲೂಕು ಸಮಿತಿಯ ಸದಸ್ಯರುಗಳಾದ ಮಿಥುನ್ ಹೆಗ್ಡೆ, ಪ್ರಸಾದ್ ಹೆಗ್ಡೆ ಮಾರಳಿ ದಂಪತಿ, ಸುಭಾಸ್ ಬಲ್ಲಾಳ್, ಶ್ರೀಧರ್…

Read More

ಇದು ‘ಕಾಂತಾರ’ ಅಲ್ಲ. ಆದರೆ ಅದಕ್ಕಿಂತಲೂ ಏನೋ ಒಂದು ವಿಭಿನ್ನತೆ ಇದರಲ್ಲಿದೆ. ಕಾಂತಾರ ಸಿನಿಮಾ ಬರುವ ಮೊದಲೇ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ‘ಧರ್ಮ ದೈವ’ ಕಿರುಚಿತ್ರ ಬಿಡುಗಡೆಯಾಗಿತ್ತು ಹಾಗೂ ಕಿರುತೆರೆಯಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಇದೇ ಕಿರುಚಿತ್ರದ ಹೆಸರನ್ನೇ ಇಟ್ಟುಕೊಂಡು ಬೆಳ್ಳಿತೆರೆಯ ಮೇಲೆ ತರಲು ಹೊರಟ ‘ಧರ್ಮ ದೈವ’ ಮಾಯೋದ ಬೊಲ್ಪು ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಡೀ ಚಿತ್ರವನ್ನು ಗಮನಿಸುತ್ತಾ ಹೋದರೆ ನಮಗೆ ಎಲ್ಲಿಯೂ ದೈವದ ಪಾತ್ರದ ದರ್ಶನ ಆಗುವುದಿಲ್ಲ. ಅರ್ಥಾತ್ ದೈವವನ್ನು ತೆರೆಯ ಮೇಲೆ ಕಾಣಿಸುವ, ಕುಣಿಸುವ ಪ್ರಯತ್ನವನ್ನು ಇಲ್ಲಿ ನಿರ್ದೇಶಕರು ಮಾಡಿಲ್ಲ. ಅದರ ಬದಲಾಗಿ ಬಹಳ ಸೊಗಸಾಗಿ ದೈವ ದರ್ಶನ ಮಾಡಿಸಿದ್ದಾರೆ. ಅದು ಹೇಗೆ ಸಾಧ್ಯವಾಗಿದೆ ಎಂಬುದನ್ನು ನೋಡಬೇಕಾದರೆ ನೀವು ಸಿನೆಮಾ ನೋಡಲೇಬೇಕು. ಸಿನಿಮಾದ ಮೊದಲರ್ಧ ಕೊಂಚ ಬೋರ್ ಹೊಡೆಸಿದರೂ ಇಂಟರ್ ವಲ್ ಬಳಿಕ ನಮ್ಮಲ್ಲಿ ಏನೋ ಕಾತುರತೆ ಮೂಡಿಸುತ್ತದೆ. ಮುಂದೇನಾಗಬಹುದು ಎಂಬ ಕುತೂಹಲವನ್ನು ಸಿನಿಮಾ ಉಳಿಸಿಕೊಂಡು ಹೋಗುತ್ತದೆ. ತುಳುನಾಡಿನ ಜನರು…

Read More

ರೋಟರಿ ಜಿಲ್ಲೆ 3181 ರ ವಲಯ -1 ರ ನೂತನ ಸಹಾಯಕ ಗವರ್ನರ್ ಆಗಿ ಪತ್ರಕರ್ತ, ರಂಗ ಸಂಘಟಕ ಶರತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ರಂಗ ನಟ, ಯಕ್ಷಗಾನ ಕಲಾವಿದ, 26 ವರ್ಷಗಳಿಂದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು ರಂಗಭೂಮಿ ಸಂಘಟನೆಗೆ 2005 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹುಟ್ಟೂರು ಸಂಕಲಕರಿಯ ವಿಜಯಾ ಯುವಕ ಸಂಘ, ಸಂಕಲಕರಿಯ ಹಾಲು ಉತ್ಪಾದಕರ ಸಂಘ, ಮುಲ್ಕಿ ವಲಯ ಪತ್ರಕರ್ತರ ಸಂಘ, ಕಿನ್ನಿಗೋಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಐಕಳ ಪೊಂಪೈ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು ವಿದ್ಯಾರ್ಥಿ ಸಂಘ, ಕಿನ್ನಿಗೋಳಿ ರೋಟರಾಕ್ಟ್ ಗಳಲ್ಲಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಿನ್ನಿಗೋಳಿ ರೋಟರಿಯ ಶತಮಾನೋತ್ಸವ ಸಾಲಿನ ವಲಯ ಕಾರ್ಯದರ್ಶಿಯಾಗಿ…

Read More

ಐಲೇಸಾ ದಿ ವಾಯ್ಸ್ ಆಫ್ ಓಶಿಯನ್ ವತಿಯಿಂದ ‘ನಂದಾದೀಪ ಸಂದೀಪ’ ವಿಶೇಷ ಕಾರ್ಯಕ್ರಮವು ಜುಲೈ 14 ರಂದು ಬೆಳಗ್ಗೆ 10 ರಿಂದ ಅಪರಾಹ್ನ 1 ರ ವರೆಗೆ ಬೆಂಗಳೂರಿನಲ್ಲಿರುವ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮನೆಯಲ್ಲಿ ನಡೆಯಲಿದೆ. ದೇಶಕ್ಕೋಸ್ಕರ ಬಲಿದಾನಗೈದವರನ್ನು ಸ್ಮರಿಸುವ ಉದ್ದೇಶದಿಂದ ಸಂದೀಪ ನೀನು ನಮ್ಮ ಆತ್ಮಸ್ಥೈರ್ಯದ ನಂದಾದೀಪ ಎಂದು ಆ ಧೀರನ ಮನೆಯಲ್ಲಿ ಹೆತ್ತವರ ಧ್ವನಿಗೆ ನಮ್ಮ ಧ್ವನಿ ಬೆಸೆಯುವ ಕಾರ್ಯಕ್ರಮವನ್ನು ಐಲೇಸಾ ಹಮ್ಮಿಕೊಳ್ಳಲು ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳಾದ ಅತ್ರಾಡಿ ಸುರೇಶ್ ಹೆಗ್ಡೆ ಮತ್ತು ರಮೇಶ್ ಬಿ. ಪಾಲ್ಗೊಳ್ಳಲಿದ್ದಾರೆ. ಹಿರಿಯ ಸಾಹಿತಿಗಳು, ಮಿಲಿಟರಿಯವರು, ಶ್ರೇಷ್ಠ ಹಾಡುಗಾರರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅನಂತ್ ರಾವ್ (9686321393), ಸೂರಿ ಮಾರ್ನಾಡ್ (9324280156), ಶಾಂತಾರಾಮ್ ಶೆಟ್ಟಿ (9916129570) ಅವರನ್ನು ಸಂಪರ್ಕಿಸುವಂತೆ ಟೀಮ್ ಐಲೇಸಾ ವಕ್ತಾರ ಸುರೇಂದ್ರ ಶೆಟ್ಟಿ ಮಾರ್ನಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More