Author: admin

ಮೂಡುಬಿದಿರೆ: ರಾಜ್ಯದ ಎಲ್ಲ ಎಂಜಿನಿಯರಿಂಗ್  ಕಾಲೇಜುಗಳ ಅಂತಿಮ ವರ್ಷದ ಬಿ.ಇ. ವಿದ್ಯಾರ್ಥಿಗಳಿಗೆ ಸಿಎಸ್‍ಎಫ್‍ಎಸ್ (ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್) ತರಬೇತಿ ನೀಡುವ ಮಹತ್ವದ ಒಡಂಬಡಿಕೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಸೈಸೆಕ್(ಸೈಬರ್ ಸೆಕ್ಯುರಿಟಿ ಕರ್ನಾಟಕ) ಜನವರಿ 20ರಂದು ಬೆಂಗಳೂರಿನ ಸೈಸೆಕ್  ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯಲ್ಲಿ ಸಹಿ ಮಾಡಿದವು. ಈ ಮಹತ್ವದ ಒಡಂಬಡಿಕೆಗೆ ಸಹಿ ಮಾಡಿದ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಒಡಂಬಡಿಕೆಯನ್ನು ಮಾಡಿಕೊಂಡಿರುವ ಸೈಸೆಕ್ ಮತ್ತು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜನ್ನು ಅಭಿನಂದಿಸಿದರು. ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತಾರವಾಗಿ ರೂಪಿಸಿ. ಸರ್ಕಾರ ಸದಾ ಬೆಂಬಲ ನೀಡಲಿದೆ. ಈ ತರಬೇತಿ ಪಡೆದ ವಿದ್ಯಾರ್ಥಿಗಳು ಸೈಬರ್ ಸೆಕ್ಯುರಿಟಿಯಲ್ಲಿ ಉದ್ಯೋಗ ಪಡೆಯಬೇಕು ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದರು. ಸಿಎಸ್‍ಎಫ್‍ಎಸ್ ಕಾರ್ಯಕ್ರಮವು ಫೆಬ್ರುವರಿ 19ರಿಂದ ಮಾರ್ಚ್ 22ರ ವೆರೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಆವರಣದಲ್ಲಿ…

Read More

ವಿದ್ಯಾಗಿರಿ (ಮೂಡುಬಿದಿರೆ): ಜ್ಞಾನದ ವೃದ್ಧಿಯಲ್ಲಿ ಗ್ರಂಥಾಲಯದ ಪಾತ್ರ ಬಹಳ ಮಹತ್ತರ ಎಂದು ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ ಉಮೇಶ್ ನಾಯ್ಕ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಕರಿಗೆ ‘ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ’ ವಿಭಾಗ ಆಯೋಜಿಸಿರುವ ‘ಓಪನ್  ಅಕ್ಸೆಸ್ಸ್ ಇ – ರಿಸೋರ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು . ‘ಹಲವಾರು ಮಾಹಿತಿಗಳನ್ನು ನಾವು ಗ್ರಂಥಾಲಯದ ಮುಖಾಂತರ ಪಡೆದುಕೊಳ್ಳುತ್ತೇವೆ. ಕೆಲವು ಸಂದರ್ಭದಲ್ಲಿ ಮಾಹಿತಿ ಪಡೆಯಲು ಹಲವಾರು ಗ್ರಂಥಾಲಯಗಳಿದ್ದರೂ, ಎಲ್ಲಾ ಮಾಹಿತಿಗಳು ಲಭ್ಯವಾಗದೆ ಇರಬಹುದು. ಅಂತಹ ಸಮಯದಲ್ಲಿ ಇ-ಗ್ರಂಥಾಲಯ ಸಹಾಯಕ’ ಎಂದರು. ‘ಸಂಶೋಧನೆ ಮತ್ತು ಪ್ರಾಜೆಕ್ಟ್ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ಮಾಹಿತಿ ಗ್ರಂಥಾಲಯದಿಂದ ಸಿಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಓಪನ್‍ಆ್ಯಕ್ಸಸ್ ಇ ಲೈಬ್ರೆರಿ (ಮುಕ್ತ ಇ – ಗ್ರಂಥಾಲಯ) ಸಹಕಾರಿಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ‘ನಿಮ್ಮ ಗುರಿಯ…

Read More

ಅಗಣಿತ ಶ್ರಮ,ಅದಕ್ಕೆ ತಕ್ಕುದಾದ ತಯಾರಿ ಮತ್ತು ದೊರೆತ ಸಣ್ಣ ಕಾಯಕವನ್ನು ತನ್ನ ಕಾರ್ಯದಂತೆ ವಿಜೃಂಭಿಸಿ ನಡೆಯುವವನು ಬದುಕಲ್ಲಿ ಎಂದೂ ವಿರಮಿಸಲಾರ.ಅವನ ಹಿಂದಿನ ಶ್ರಮವೇ ಇಂದಿನ ಉತ್ತಮ ವ್ಯಕ್ತಿಯಾಗಿ,ಹಲವರಿಗೆ ಮಾದರಿಯಾಗಿ ಹಲವರಲ್ಲಿ ಒಬ್ಬನನ್ನಾಗಿಸುತ್ತದೆ. ಇನ್ಯಾರೋ ಬಿಟ್ಟ ಕಾರ್ಯ ನನಗೆ ದೊರೆತಿದೆ ಎಂದು ಅಸಹ್ಯ ಪಡದೆ,ಅದನ್ನೇ ನನ್ನ ಕಾರ್ಯವೆಂದು ಭಾವಿಸಿ ತಲ್ಲೀನನಾದಾಗ ಭದ್ರ ಗೆಲುವನ್ನು ಸಾಧಿಸಲು ಸಾಧ್ಯ..! ಯಾವತ್ತು ಒಬ್ಬನ ಗೆಲುವು ಅವನು ಮಾತ್ರ ಸಂಭ್ರಮಿಸುವಂತಿರಬಾರದು, ಅದು ಅವನ ಸುತ್ತಲಿನ ಜಗತ್ತು ಸಂಭ್ರಮಿಸುವಂತಿರಬೇಕು.ಆಗ ತನ್ನ ಪೂರ್ಣ ಪರಿಶ್ರಮದ ದಾರಿಗೆ ಒಂದು ರೀತಿಯ ಅರ್ಥ ದೊರೆದಂತಾಗುತ್ತದೆ..! ದೃಶ್ಯ ಮಾಧ್ಯಮದ ಬೃಹತ್ ವೇದಿಕೆಯಲ್ಲಿ ಹಲವಾರು ವರುಷಗಳ ಕಾಲ,ಸುದೀರ್ಘವಾಗಿ ನೆಲೆಯನ್ನು ಕಂಡುಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ! ಅದಕ್ಕೇ ತನ್ನದೇ ಆದ ವೃತ್ತಿ ಪರತೆ,ಕೆಲಸದ ಮೇಲಿನ ಹಿಡಿತ,ತೀಕ್ಷ್ಣ ಮಾತಿನ ಪ್ರಖರ,ಧ್ವನಿಯ ಗಡಸುತನ ಮತ್ತು ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಹದು ಬಸ್ತಿನಲ್ಲಿ ಇಡುವ ಚಾಕಚಕ್ಯತೆ ಅತೀ ಅಗತ್ಯವಾಗಿದೆ. ತನ್ನದೇ ಆದ ವಿಷಯವನ್ನು ಪ್ರಸ್ತಾಪಿಸುವ ರೀತಿ ಮತ್ತು ಎಲ್ಲರನ್ನು ಆ ವಿಷಯದ…

Read More

‘ಈ ಹಿಂದೆ ನಾನು ಬೆಂಗಳೂರಿಗೆ ಆಗಾಗ್ಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದೆನು. ಮದ್ಯ, ಗುಟ್ಕಾ, ಸಿಗರೇಟು ಇತ್ಯಾದಿ ವ್ಯಸನಿಗಳು ನನ್ನ ಬಳಿ ಕುಳಿತುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ನನ್ನ ಪಕ್ಕದ ಆಸನವನ್ನೂ ಕಾಯ್ದಿರಿಸಿಕೊಳ್ಳುತ್ತಿದೆನು. ವ್ಯಸನಿಗಳು ಕುಳಿತರೆ ನನಗೆ ನಿದ್ದೆ ಬರುತ್ತಿರಲಿಲ್ಲ’ ಎಂದು ಡಾ.ಎಂ. ಮೋಹನ ಆಳ್ವ ಹೇಳಿದರು. ‘ಆದರೆ, ಆಗ ನನಗೆ ಬಹುವಾಗಿ ಕಾಡುತ್ತಿದ್ದ ವಿಚಾರವು ವ್ಯಸನಿಗಳ ಕುಟುಂಬಸ್ಥರ ಪರಿಸ್ಥಿತಿ. ವ್ಯಸನಿಯ ಪತ್ನಿ ಹೇಗೆ ಹಾಸಿಗೆ ಹಂಚಿಕೊಳ್ಳಬೇಕು. ಮಕ್ಕಳು ಹೇಗೆ ಜೊತೆಗಿರಬೇಕು? ಎಂಬುದೇ ಮನಸ್ಸಿಗೆ ನೋವುಂಟು ಮಾಡುತ್ತಿತ್ತು’ ಎಂದು ಖೇದ ತೋಡಿಕೊಂಡರು. ವ್ಯಸನ ಮುಕ್ತರೇ ಸ್ವಸ್ಥ ಸಮಾಜದ ರಾಯಭಾರಿಗಳು: ಡಾ. ಅಶೋಕ ದಳವಾಯಿ ಬದುಕು ಗೆದ್ದವರ ‘ಪುನರ್ಜನ್ಮ ಕೌಟುಂಬಿಕ ಸಮ್ಮಿಲನ’. ವಿದ್ಯಾಗಿರಿ: ಶುಭ್ರ ಶೋಭಿತ ಮೊಗದಲ್ಲಿ ಮಂದಹಾಸ, ಬಾಚಿದ ಕೂದಲು, ಶ್ವೇತವರ್ಣದ ಪಂಚೆ- ಅಂಗಿ, ಮೇಲೊಂದು ಶಾಲು, ವರ್ಣಮಯ ಸೀರೆ, ಸಂಭ್ರಮದ ಸಿಂಗಾರ, ಹಣೆಯಲ್ಲೊಂದು ಅಧ್ಯಾತ್ಮದ ಕಳೆ, ಅಚ್ಚುಕಟ್ಟಾದ ಧಿರಿಸು, ನಡಿಗೆಯಲ್ಲಿ ಗಾಂಭಿರ್ಯ, ಮನ ತುಂಬಿದ ಪ್ರೀತಿ, ಆತ್ಮವಿಶ್ವಾಸದ ನೋಟ. ಅದು ಅಕ್ಷರಶಃ ಬದುಕಿನ…

Read More

ಹಣಕಾಸು ಕ್ಷೇತ್ರದಲ್ಲಿ ಇಡೀ ವಿಶ್ವ ಕುತೂಹಲದಿಂದ ಗಮನಿಸುತ್ತಿರುವ ವ್ಯಕ್ತಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್ ಕೆ ಶೆಟ್ಟಿಯವರು ಜೀವವಿಮಾ ಕ್ಷೇತ್ರದ ಸಲಹೆಗಾರರಾಗಿ ಮುಂಬಯಿ ನಗರ ಮಾತ್ರವಲ್ಲದೇ ವಿಶ್ವದ ನಲವತ್ತೆರಡು ರಾಷ್ಟ್ರಗಳಲ್ಲಿ ಪರಿಚಿತರಿರುವ ಪ್ರಪ್ರಥಮ ಭಾರತೀಯ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದ ಬಂಟ ಜನಾಂಗದ ಹೆಮ್ಮೆಯ ಪುತ್ರ. ಘನ ಮಹಾರಾಷ್ಟ್ರ ಸರಕಾರದ ಮಾನ್ಯ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕಿಶ್ಯಾರಿ ಅವರು ರಾಜಭವನದಲ್ಲಿ ಆರ್ ಕೆ ಶೆಟ್ಟಿಯವರನ್ನು ಗೌರವಿಸಿದ್ದಾರೆ ಎಂದಾದರೆ ಅವರ ಘನತೆ ಪ್ರಸಿದ್ಧಿಗೆ ಬೇರೆ ಸಾಕ್ಷಿ ಬೇಕೆ?!. ಮಾನ್ಯ ಆರ್ ಕೆ ಶೆಟ್ಟರು ವಿಶ್ವ ಮಟ್ಟದ ಪ್ರತಿಷ್ಠಿತ ಎಂ.ಡಿ.ಆರ್.ಟಿ. ಇದರ ಸದಸ್ಯತನ ಪಡೆದುದನ್ನು ಗಮನಿಸಿದರೆ ಜೀವವಿಮಾ ಕ್ಷೇತ್ರದ ಅವರ ಅಪ್ರತಿಮ ಸಾಧನೆ ಕುರಿತು ಯೋಚಿಸಬಹುದು. ವಿಶ್ವ ಪ್ರಸಿದ್ಧ ಎಂ.ಡಿ.ಆರ್.ಟಿ ಸಂಸ್ಥೆಯ ರೀಜನಲ್ ಛೇರ್ಮನ್ ಹುದ್ದೆಗೇರಿರುವ ಪ್ರಥಮ ಭಾರತೀಯ ಹಾಗೂ ಎಂಬತ್ತೆರಡು ವರ್ಷಗಳ ಇತಿಹಾಸದಲ್ಲೇ ಮೊದಲಿಗ. ಈ ಅಧಿಕಾರ ವಿಶ್ವದ ನಲವತ್ತೆರಡು…

Read More

ದೇಸಿ ಹಾಗೂ ಇತಿಹಾಸಿಕವಾದ ಕಂಬಳ ಕ್ರೀಡೆಗೆ ಹೆಚ್ಚಿನ ಸಹಕಾರ ಕೊಡಲಾಗುವುದು. ಈ ನಿಟ್ಟಿನಲ್ಲಿ 20 ಕಂಬಳಗಳಿಗೆ ತಲಾ 5ಲಕ್ಷ ರೂ. ಗಳಂತೆ 1 ಕೋಟಿ ರೂ. ಸಹಾಯ ಧನವನ್ನು ಈ ಹಿಂದಿನಂತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ -ನಮ್ಮ ಕಂಬಳ’ದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಅವರು ಮಾತನಾಡಿ, ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸುತ್ತೇವೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎಂದರು. ದ. ಕ. ದ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ : ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದ್ದು, ಅಲ್ಲಿನ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ. ಕರಾವಳಿಯ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಸಾವಿರಾರು…

Read More

ವಿದ್ಯಾಗಿರಿ (ಮೂಡುಬಿದಿರೆ): ವಿಜಯನಗರದ ಕೊಟ್ಟೂರಿನಲ್ಲಿ ಜನವರಿ 19 ರಿಂದ 21ರ ವರೆಗೆ ನಡೆದ ರಾಜ್ಯ ಮಟ್ಟದ ಪುರುಷರ ಹಾಗೂ 18 ವರ್ಷ ವಯೋಮಿತಿ ಒಳಗಿನ ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡವು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡವು ಪ್ರಥಮ ಸ್ಥಾನ ಪಡೆದಿದ್ದರೆ, ದಾವಣಗೆರೆಯ ಡಿವೈಇಎಸ್ ಕಾಲೇಜು ದ್ವಿತೀಯ, ಬೆಂಗಳೂರಿನ ವೈಪಿಎಸ್‍ಸಿ ಕಾಲೇಜು ತೃತೀಯ ಹಾಗೂ ಭದ್ರಾವತಿಯ ಸರ್ ಎಂ. ವಿ. ಕಾಲೇಜು ಚತುರ್ಥ ಸ್ಥಾನವನ್ನು ಪಡೆದಿದ್ದಾರೆ ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಕಾವೇರಿ ಕಪಿಲ ತಂಡವು ಪ್ರಥಮ ಸ್ಥಾನ ಪಡೆದಿದ್ದು, ಆಳ್ವಾಸ್ ತಂಡವು ದ್ವಿತೀಯ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಬೆಂಗಳೂರಿನ ಬಿಸಿವೈಎ ತೃತೀಯ ಹಾಗೂ ಖ್ಯಾತನಹಳ್ಳಿಯ ಕೆಕೆಓ ತಂಡ ನಾಲ್ಕನೇ ಸ್ಥಾನ ಪಡೆಯಿತು. ಆಳ್ವಾಸ್ ತಂಡದ ಆಟಗಾರರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಮಾನವ ಸಂಘ ಜೀವಿಯಾಗಿದ್ದು, ಒಂದಲ್ಲ ಒಂದು ಬಗೆಯ ಸಂಘಟನೆ ಮೂಲಕ ಸಮಾಜಕ್ಕೆ ಸೇವಾ ಕಾರ್ಯ ಮಾಡುವ ಸಂಕಲ್ಪದೊಂದಿಗೆ ಪ್ರಸಿದ್ದಿಗೆ ಬರುತ್ತಾನೆ. ಸಂಘಟನೆ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕಾಗಿ ಸೇವಾ ಕಾರ್ಯ ಮಾಡುವ ಅರ್ಪಣಾ ಭಾವನೆ ನಮ್ಮಲ್ಲಿರಬೇಕು. ರಚನಾತ್ಮಕ ಸಂಬಂಧಗಳನ್ನು ಕೂಡಿಕೊಂಡು ಪರಸ್ಪರ ವ್ಯಕ್ತಿಗತ ಪರಿಚಯ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಂಘ ಸಂಸ್ಥೆಗಳ ಮಹತ್ವ ಬಹಳಷ್ಟಿದೆ. ಇದಕ್ಕೆ ಮಾದರಿ ಎಂಬಂತೆ ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಂಘಟನಾ ಸಾಮರ್ಥ್ಯ ತೋರಿ ಬರುತ್ತದೆ. ಸಮಾಜ ಬಾಂಧವರನ್ನು ಮತ್ತು ಯುವ ಶಕ್ತಿಯನ್ನು ಕೂಡಿಕೊಂಡು ಬಂಟ ಸಮಾಜ ಮಾಡುವ ಯಾವುದೇ ಕಾರ್ಯ ಕ್ಷೇತ್ರದ ಸಾಧನೆ ಮತ್ತು ಉದ್ಯಮ ಕ್ಷೇತ್ರದ ಸಾಧನೆ ಮೆಚ್ಚುವಂತಹದು. ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಕ್ರೀಡೆ, ಕಲೆ ಮತ್ತು ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕರ್ತವ್ಯ ಪಾಲಕರದ್ದು. ಇದರಿಂದ ವ್ಯಕ್ತಿತ್ವ ವಿಕಸನಗೊಂಡು, ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮತ್ತು ದೇಶ ಸೇವೆಯಲ್ಲಿ ಭಾಗಿಗಳಾಗುವಂತೆ ಮಾಡಬೇಕಾಗಿದೆ. ಬಂಟ್ಸ್ ಅಸೋಸಿಯೇಷನ್ ತಮ್ಮ ಸಮಾಜದ ಸೇವಾ ಕಾರ್ಯಗಳಿಗೆ ಮತ್ತು…

Read More

ಅಪ್ರತಿಮ ಪ್ರತಿಭೆಯನ್ನು ಮೈಗೂಡಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಛಲಗಾರ, ಸರ್ವಧರ್ಮ ಕಲಾಭಿಮಾನಿಗಳ ಆಂತರ್ಯವನ್ನು ಮುಟ್ಟಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಂಡು ಕಲಾಮಾತೆಯ ಸೇವೆಗೈಯುತ್ತಿರುವ ನಿಷ್ಠಾವಂತ ಕಲಾವಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ. ತನ್ನ ತಂದೆಯಿಂದಲೇ ಬಳುವಳಿಯಾಗಿ ಬಂದ ಕಲೆಗೆ ನಿಷ್ಠಾವಂತನಾಗಿ ನಿಂತು ಸಾಧನೆಯ ಶಿಖರವೇರಿ ಸಾಧಕರಿಗೆ ಸ್ಪೂರ್ತಿ ನಮ್ಮ ಇವತ್ತಿನ ಸಾಧಕರ ಹಾದಿಯ ಅತಿಥಿ. ಇವರ ಜೀವನವು ಬಾಲ್ಯದಿಂದಲೇ ಸುಖೀ ಕುಟುಂಬವಾಗಿದೆ. ಯಾವುದೇ ಕಷ್ಟಗಳಿಂದ ಸೋತವರಲ್ಲ ಇನ್ನೊಬ್ಬರನ್ನು ಸೋಲೋಕು ಬಿಟ್ಟವರಲ್ಲ ಆತ್ಮೀಯ ಮನಸ್ಸಿನ ಅದ್ಭುತ ಸಾಧಕ. ಯಕ್ಷಗಾನ,ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ ಬೆಟ್ಟಂಪಾಡಿಯಲ್ಲಿ ದಿ| ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ದಂಪತಿಯ ಎಂಟು ಮಂದಿ ಮಕ್ಕಳಲ್ಲಿ ಮೂರನೆಯವರಾಗಿ…

Read More

ಮನದಲ್ಲಿ ಮಹತ್ವಾಕಾಂಕ್ಷೆ ಇದ್ದರೆ ಸಾಲದು. ಆ ದಿಶೆಯಲ್ಲಿ ಮುನ್ನುಗ್ಗಿ ಅದನ್ನು ತನ್ನದಾಗಿಸುವ ಎಂಟೆದೆಯ ಛಲ ಬೇಕಾಗುತ್ತದೆ. ಅಂಥಹ ಸಾಧನೆಯ ಮೂರ್ತಿ ಎಂಟೆದೆಯ ಬಂಟ ನಮ್ಮ ಸರ್ವೋತ್ತಮ ಶೆಟ್ಟಿ ಅವರು. ಮಟ್ಟಾರು ಪರಾರಿ ಸೂರಪ್ಪ ಹೆಗ್ಡೆ ಹಾಗೂ ಪರೀಕ ಸರಸ್ವತಿ ಹೆಗ್ಡೆ ದಂಪತಿಯರ ಸುಪುತ್ರ ಸರ್ವೋತ್ತಮ ಶೆಟ್ಟರು ಬದುಕು ಕಟ್ಟಿಕೊಂಡ ರೀತಿ ಇತರ ಉದ್ಯಮಶೀಲರಿಗೆ ಮಾದರಿಯಾಗಬಲ್ಲುದು. ಉಡುಪಿ ಜಿಲ್ಲೆಯ ಪರೀಕ ಎಂಬಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು ತನ್ನ ಸಾಧನೆ ಪರಿಶ್ರಮದಿಂದ ಇಂದು ಹುಟ್ಟಿದ ಕುಟುಂಬ ಮಾತ್ರವಲ್ಲ ಬಂಟ ಸಮುದಾಯವನ್ನೇ ಎತ್ತರದ ಬಿತ್ತರಕ್ಕೆ ಮುಟ್ಟಿಸಿದ ಮಹನೀಯರಿವರು. ಪೆರ್ಡೂರು ಮತ್ತು ಹಿರಿಯಡ್ಕಗಳಲ್ಲಿ ತನ್ನ ಪದವಿಪೂರ್ವ ಶಿಕ್ಷಣ ಮುಗಿಸಿ ಮುಂಬಯಿ ನಗರ ಸೇರಿ ಹೊಟೇಲುಗಳಲ್ಲಿ ದುಡಿದು ನಂತರ ಹೊಟೇಲು ನಡೆಸಿಕೊಂಡು ತನ್ನ ಜೀವನ ಯಾಪನೆ ಮಾಡತೊಡಗಿದರು. ನಂತರ ಓರ್ವ ಸೋಲಿಸಿಟರ್ ಕಛೇರಿಯಲ್ಲಿ ದುಡಿಯತೊಡಗಿದರು. ಆದರೆ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಮನದ ಇಚ್ಛೆಯನ್ನು ಪೂರ್ಣಗೊಳಿಸಲು ದುಡಿಯುತ್ತಿದ್ದಂತೆಯೇ ಕಾಲೇಜು ಸೇರಿ ಪದವಿ ಶಿಕ್ಷಣ ಮುಂದುವರಿಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ವಾಣಿಜ್ಯ…

Read More