Author: admin
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜನವರಿ 5 ರಿಂದ 7 ರವರೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಜರಗಲಿದ್ದು, ರಾಜ್ಯದ ಮೂವತ್ತು ಜಿಲ್ಲಾ ತಂಡ ಹಾಗೂ ಮುಂಬಯಿ ಮತ್ತು ಗಡಿನಾಡ ಕಾಸರಗೋಡು ತಂಡಗಳು ಭಾಗವಹಿಸಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರನ್ನು ಆಹ್ವಾನಿಸಲಾಯಿತು. ಐಕಳ ಹರೀಶ್ ಶೆಟ್ಟಿ ಅವರು ಬ್ರೋಶರ್ ನ್ನು ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಂಘ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಕ್ರೀಡೆಗೂ ಉತ್ತೇಜನ ನೀಡಿ ಪಂದ್ಯಾಟವನ್ನು ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ರಾಷ್ಟ್ರೀಯ ಪತ್ರಿಕಾ ಮಂಡಳಿಯ ಸದಸ್ಯ ಪಿ ಬಿ ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ.ಕ.ಮಂಗಳೂರು ಆಶ್ರಯದಲ್ಲಿ ಅ.28 ಮತ್ತು 29ರಂದು ಉಡುಪಿಯಲ್ಲಿ ನಡೆಯಲಿರುವ ‘ವಿಶ್ವ ಬಂಟರ ಸಮ್ಮೇಳನ -2023’ (ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ) ಆಮಂತ್ರಣ ಪತ್ರಿಕೆಯ ಬಿಡುಗಡೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ, ಬಂಟ ಸಮುದಾಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಯೋಚಿಸಿ ಯೋಜನೆಗಳನ್ನು ರೂಪಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ವಿವಿಧ ಕೋರ್ಸ್ ಗಳಿಗೆ ಪೂರಕವಾದ ತರಬೇತಿ ಕೇಂದ್ರಗಳನ್ನು ತೆರೆಯುವ ಕೈಂಕರ್ಯವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾಡಬೇಕಾಗಿದೆ ಎಂದರು. ರಾಜ್ಯ ಮೀಸಲಾತಿಯ 3 ಬಿ ಪಟ್ಟಿಯಲ್ಲಿ ಬಂಟರಿಗೂ ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶವಿದೆ. ಈ ಮಾನದಂಡದಡಿ ಅರ್ಜಿ ಸಲ್ಲಿಸಿದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೌಲಭ್ಯ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಬಂಟರ ಸಂಘಗಳ ಒಕ್ಕೂಟ ಕಾರ್ಯ ಪ್ರವೃತವಾಗಬೇಕು ಎಂದವರು…
‘43ನೇ ರಾಜ್ಯಮಟ್ಟದ ಕಬ್ಸ್- ಬುಲ್ಬುಲ್ಸ್ ಉತ್ಸವ’ದಲ್ಲಿ ಡಾ.ಎಂ. ಮೋಹನ ಆಳ್ವ ‘ಪಠ್ಯದಿಂದ ಜ್ಞಾನ, ಪಠ್ಯೇತರದಿಂದ ಮನಸ್ಸು’
ಮೂಡುಬಿದಿರೆ: ‘ಪಠ್ಯದ ಜ್ಞಾನದ ಜೊತೆ ಪಠ್ಯೇತರ ಚಟುವಟಿಕೆ ಮೂಲಕ ಮನಸ್ಸು ಕಟ್ಟಿದಾಗ ಅತ್ಯುತ್ತಮ ನಾಗರಿಕನಾಗಲು ಸಾಧ್ಯ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡುಬಿದಿರೆ ಘಟಕವು ನಗರದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಂಡ ‘43ನೇ ರಾಜ್ಯಮಟ್ಟದ ಕಬ್ಸ್- ಬುಲ್ಬುಲ್ಸ್ ಉತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ, ವಿಜ್ಞಾನ, ಗಣಿತ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯ ಇರಲಿ, ಅವು ನೀಡುವ ಜ್ಞಾನ ಬುದ್ಧಿಗೆ ಮಾತ್ರ. ಮನುಷ್ಯನಿಗೆ ಜ್ಞಾನ, ಬುದ್ಧಿಯ ಜೊತೆ ಮನಸ್ಸು ಬೇಕು ಎಂದರು. ನಮ್ಮ ದೇಶದ ದೊಡ್ಡ ಶಕ್ತಿಯೇ ಯುವಶಕ್ತಿ. ಅಮೇರಿಕಾ ಭೌಗೋಳಿಕವಾಗಿ ದೊಡ್ಡ ದೇಶವಾದರೂ, ಕಡಿಮೆ ಜನಸಂಖ್ಯೆ ಹೊಂದಿದೆ. ನಮ್ಮ ದೇಶದಲ್ಲಿ 1 ರಿಂದ 12 ತರಗತಿಯಲ್ಲಿ 39 ಕೋಟಿ ಮಕ್ಕಳು ಇದ್ದಾರೆ. 18 ರಿಂದ…
ಬಂಟ ಸಮಾಜ ಬಾಂಧವರ ಐಕ್ಯಮತ ಒಗ್ಗಟ್ಟಿನಿಂದ ಪುಣೆಯಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ಬಂಟರ ಸಂಘದ ಸ್ಥಾಪನೆಯಾಗಿ ಸಂಘದ ಸ್ಥಾಪಕರಿಂದ ಹಿಡಿದು ಸಮಾಜದ ಹಿರಿಯರು, ದಾನಿಗಳು, ಸೇವಾಕರ್ತರು, ಪ್ರೋತ್ಸಾಹಕರು, ಮಹಿಳೆಯರು, ಯುವ ಸಂಘಟನೆಯ ಸಹಕಾರದಿಂದ ಬೆಳೆದು ಬಂದು ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ಸಂಸ್ಥೆಯ ಬೆನ್ನೆಲುಬಾಗಿ ನಿಂತು ಸಮಾಜದ ಅಭಿವೃದ್ದಿಗಾಗಿ, ಸಂಘಟನೆಗಾಗಿ ದುಡಿದವರು ಬಹಳಷ್ಟು ನಮ್ಮ ಹಿರಿಯರಿದ್ದಾರೆ. ಪರಿಶ್ರಮದಿಂದ ಫಲ ಪ್ರಾಪ್ತಿ ಎಂಬಂತೆ ಕೆಲವು ವರ್ಷಗಳ ಹಿಂದೆ ನಮ್ಮ ನೇತೃತ್ವದಲ್ಲಿ ಹೆಮ್ಮೆಯ ಭವ್ಯ ಬಂಟರ ಭವನ ನಿರ್ಮಾಣ ಆಗಿ, ಇದೀಗ ಇದೇ ಭವನದಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸುವ ಭಾಗ್ಯ ನಮಗೆ ಒದಗಿ ಬಂದಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು. ಡಿ 5ರಂದು ಪುಣೆ ಬಂಟರ ಭವನದ ಪ್ರತಿಭಾ ದಯಾಶಂಕರ್ ಶೆಟ್ಟಿ ಕಾನ್ಫರೆನ್ಸ್ ಹಾಲ್ ನಲ್ಲಿ ಜರಗಿದ ಬಂಟರ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ…
ಪತ್ರಕರ್ತ, ವರದಿಗಾರ ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರಿಗೆ “ವಿಶ್ವ ಮಾಧ್ಯಮ ಭೂಷಣ ರಾಷ್ಟ್ರೀಯ ಪ್ರಶಸ್ತಿ -2022” ಪ್ರಕಟ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿಮನೆ, ಪತ್ರಕರ್ತ, ವರದಿಗಾರರಾದ, ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರಿಗೆ ವಿಶ್ವದರ್ಶನ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ ಮತ್ತು ಪ್ರಜಾ ದರ್ಶನ ಕನ್ನಡ ಮಾಧ್ಯಮ ಸಂಸ್ಥೆಯ ಕೊಡ ಮಾಡುತ್ತಿರುವ ಬೆಂಗಳೂರು ಬ್ಯೂರೋ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪತ್ರಕರ್ತರಿಗೆ ನೀಡುವ 2022-2023 ಸಾಲಿನ “ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ- 2022” ಘೋಷಣೆಯಾಗಿದೆ. ವಿಶ್ವದರ್ಶನ ಮಾಧ್ಯಮ ಸಂಸ್ಥೆಯ ಸಂಪಾದಕರಾದ ಎಸ್ ಎಸ್ ಪಾಟೀಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಒಟ್ಟು 165 ಹೆಚ್ಚು ಸಾಧಕರನ್ನು ಗುರುತಿಸುವ ವಿನೂತನ ಕಾರ್ಯಕ್ರಮವು ಇದಾಗಿದೆ. ಹೀಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರು ಆಯ್ಕೆಯಾಗಿರುವುದು ಸಂಸ್ಥೆ ಹೆಮ್ಮೆಯಿಂದ ದೃಢಪಡಿಸಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ದಿನಾಂಕ 22-09-2022 ರಂದು ಗುರುವಾರ ಬೆಳಿಗ್ಗೆ…
ಆಳ್ವಾಸ್ ರೋಸ್ಟ್ರಮ್ಸ್ ಕ್ಲಬ್ನಲ್ಲಿ ವಿಚಾರವಾದಿ ನರೇಂದ್ರ ನಾಯಕ್ ‘ಅವೈಜ್ಞಾನಿಕ ಚಿಂತನೆಯೇ ದೇಶಕ್ಕೆ ಅಪಾಯಕಾರಿ’
ಮೂಡುಬಿದಿರೆ: ‘ಹಾನಿ ಮಾಡದ, ವೈಜ್ಞಾನಿಕವಾದ ವೈಯಕ್ತಿಕ ನಂಬಿಕೆಗಳು ತಪ್ಪಲ್ಲ. ಆದರೆ, ಮೂಢನಂಬಿಕೆ ದೇಶಕ್ಕೆ ಅಪಾಯಕಾರಿ’ ಎಂದು ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ಸ್ ಕ್ಲಬ್ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ‘ವೈಜ್ಞಾನಿಕ ಮನೋಧರ್ಮದ ಅಭಿವೃದ್ಧಿ ಹಾಗೂ ಸಂವಿಧಾನದ 51(ಎಎಚ್ವಿಧಿ) ವಿಚಾರ ಸಂಕಿರಣದಲ್ಲಿ ಅವರು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಜಗತ್ತಿನಲ್ಲಿ ಎಲ್ಲವೂ ಪ್ರಕೃತಿ ನಿಯಮ ಅನುಸಾರ ನಡೆಯುತ್ತವೆ. ಆದರೆ, ಅದನ್ನು ಮೀರಿದ ‘ಪವಾಡ’ ಮಾಡುವವರ ಕುರಿತು ಸಾಕಷ್ಟು ಪ್ರಶ್ನೆಗಳಿವೆ’ ಎಂದರು. ‘ಪ್ರತಿ ವ್ಯಕ್ತಿಯ ನಂಬಿಕೆ ಪ್ರಕಾರ ಅವರ ದೇವರ ವ್ಯಾಖ್ಯಾನವೂ ವಿಭಿನ್ನ. ಹೀಗಾಗಿ, ದೇವರನ್ನು ವಿವಿಧ ಧರ್ಮ, ಪ್ರದೇಶ, ನಂಬಿಕೆಯ ಜನರು ವಿಭಿನ್ನವಾಗಿ ಚಿತ್ರಿಸುತ್ತಾರೆ. ಅದೇ ರೀತಿಯಲ್ಲಿ ಸಂಸ್ಕೃತಿಯೂ ಕಾಲ, ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ’ ಎಂದ ಅವರು, ‘ನೀವು ಯಾವುದನ್ನು ಒಪ್ಪಿಕೊಳ್ಳಬೇಕಾದರೂ, ಪೂರಕ ಸಾಕ್ಷ್ಯವನ್ನು ಪರಿಶೀಲಿಸಿಕೊಳ್ಳಿ’ ಎಂದರು. ‘ನಮ್ಮ ದೇಶದಲ್ಲಿ ಅತ್ಯಂತ ಬುದ್ಧಿವಂತರು ಇದ್ದಾರೆ. ಆದರೆ, ವೈಜ್ಞಾನಿಕ…
ಹಸಿರು ಸಿರಿಯ ನಿಸರ್ಗ ಸೌಂದರ್ಯಕ್ಕೆ ಹೆಸರು ಪಡೆದ ಪ್ರಾಕೃತಿಕ ಆಕರ್ಷಣೆಗಳಿಂದ ಜನಮನ ಸೂರೆಗೊಳ್ಳುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ದಿನಾಂಕ 6..2..1975 ರಂದು ಹಳ್ನಾಡು ಕೆಳಮನೆ ನಾರಾಯಣ್ ಶೆಟ್ಟಿ ಹಾಗೂ ಕನಕ ನಾರಾಯಣ ಶೆಟ್ಟಿ ದಂಪತಿಗಳಿಗೆ ಮುದ್ದು ಮಗನಾಗಿ ಜನಿಸಿದ ಮಂಜುನಾಥ್ ಶೆಟ್ಟರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತನ್ನ ಹುಟ್ಟೂರಲ್ಲೇ ಪೂರೈಸಿ, ಭವಿಷ್ಯ ಜೀವನಕ್ಕೊಂದು ಭದ್ರ ನೆಲೆಯ ಹುಡುಕಾಟದಲ್ಲಿ 1994 ರಲ್ಲಿ ಮಾಯಾನಗರಿ ಮುಂಬಯಿಗೆ ಬಂದು ಅಂಧೇರಿಯ ಟಿ.ಸಿ.ಎಸ್ ಕ್ಯಾಂಟೀನ್ ನಲ್ಲಿ ದುಡಿಯುತ್ತಲೇ ತಮ್ಮ ಶಿಕ್ಷಣವನ್ನೂ ಮುಂದುವರಿಸಿದರು. ಮುಂಬಯಿ ನಗರದ ಪ್ರತಿಷ್ಠಿತ ಸಿದ್ಧಾರ್ಥ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ ಶ್ರೀಯುತರು ಫಾಸ್ಟ್ ಟ್ರ್ಯಾಕ್ ವರ್ಲ್ಡ್ ವೈಡ್ ಪ್ರೈವೇಟ್ ಲಿಮಿಟೆಡ್ ಎಂಬ ತನ್ನದೇ ಆದ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರತಿಷ್ಠಿತ ಡಿ.ಟಿ.ಡಿ.ಸಿ ಕೊರಿಯರ್ ಸಂಸ್ಥೆಯ ಮೂಲಕ ಮುಂಬಯಿಯ ಹಲವಾರು ಕಡೆ ತಮ್ಮ ಸಂಸ್ಥೆಯ ಶಾಖೆಗಳನ್ನು ತೆರೆಯುವ ಮೂಲಕ ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿದರು. ಉದ್ಯಮದಲ್ಲಿ ಯಶಸ್ಸು ಸಂಪಾದಿಸಿ…
ಕೆಲವು ದಶಕಗಳ ಹಿಂದೆ ಖಿನ್ನತೆ ಎನ್ನುವ ಮಾನಸಿಕ ಅನಾರೋಗ್ಯ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಜೀವನ ಪ್ರಶಾಂತ ನದಿಯಂತೆ ಹರಿಯುತ್ತಿದ್ದ ಆ ಕಾಲದಲ್ಲಿ ಎಲ್ಲರ ಬಳಿಯೂ ಸಮಯ ಇತ್ತು, ಯೋಚಿಸುವುದಕ್ಕೆ, ಎಲ್ಲರ ಜತೆಗೆ ಒಡಗೂಡಿ ಕಾಲ ಕಳೆಯುವುದಕ್ಕೆ, ಕಷ್ಟ ಸುಖಗಳನ್ನು ಹಂಚಿಕೊಳ್ಳುವುದಕ್ಕೆ ವ್ಯವಧಾನ ಇತ್ತು. ಬಹುತೇಕ ಎಲ್ಲರೂ ದೈಹಿಕ ಶ್ರಮದ ದುಡಿಮೆ ನಡೆಸಿ ಉಣ್ಣುವವರು. ಹಾಗಾಗಿ ದೈಹಿಕ – ಮಾನಸಿಕ ಆರೋಗ್ಯ ಚೆನ್ನಾಗಿತ್ತು. ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಒಂದು ಬಿಟ್ಟು ಇನ್ನೊಂದಿಲ್ಲ. ಅವು ಒಂದರೊಳಗೆ ಇನ್ನೊಂದು ಹಾಸು-ಹೊಕ್ಕು ನಾವು ಆಧುನಿಕರಾದಂತೆ, ಕುಳಿತು ಮಾಡುವ ಕೆಲಸ ಹೆಚ್ಚಿದಂತೆ, ಬಾಹ್ಯ ಜಗತ್ತಿನ ಮೇಲೆ ಅವಲಂಬನೆ ವೃದ್ಧಿಸಿದಂತೆ ಖಿನ್ನತೆಗೆ ಒಳಗಾಗುವುದು ಕೂಡ ಅಧಿಕವಾಗಿದೆ ಎನ್ನಿಸುವುದಿಲ್ಲವೆ? ಎಲ್ಲರಿಗೂ ಖಿನ್ನತೆಯು ಒಂದು ಅನಾರೋಗ್ಯದ ಸ್ವರೂಪದಲ್ಲಿ ಕಾಡದೆ ಇದ್ದರೂ ಬಹುತೇಕ ಮಂದಿ ಒಂದಲ್ಲ ಒಂದು ಕಾರಣದಿಂದ ಆಗಾಗ ಖಿನ್ನರಾಗುತ್ತಾರೆ. ಪುಟ್ಟ ಮಕ್ಕಳನ್ನು ನೋಡಿ, ಅವರು ಸದಾ ಆನಂದ ತುಂದಿಲರಾಗಿಯೇ ಇರುತ್ತಾರೆ. ನೀವು ಬೈದರೆ ಅವರು ಸ್ವಲ್ಪ ಹೊತ್ತು ದುಃಖಿಸಬಹುದು.…
ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ: ಸುರತ್ಕಲ್ ಬಂಟರ ಸಂಘದ ಕ್ರೀಡಾಕೂಟದಲ್ಲಿ ಐಕಳ ಹರೀಶ್ ಶೆಟ್ಟಿ
ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಹಯೋಗದೊಂದಿಗೆ ವಾರ್ಷಿಕ ಕ್ರೀಡಾಕೂಟವು ರವಿವಾರ ಬೆಳಗ್ಗೆ ಸುರತ್ಕಲ್ ಗೋವಿಂದ ದಾಸ ಕಾಲೇಜ್ ಮೈದಾನದಲ್ಲಿ ಜರುಗಿತು. ಕ್ರೀಡಾಜ್ಯೋತಿ ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನೆ ನೆರವೇರಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಬಂಟ ಸಮುದಾಯದ ವಿದ್ಯಾರ್ಥಿಗಳು ಇಂದು ಕ್ರೀಡೆ ಮಾತ್ರವಲ್ಲದೇ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಿಗೆ ಸಿಗುವ ಪ್ರೋತ್ಸಾಹ ಕಡಿಮೆಯಿದೆ. ಸರಕಾರ ಮತ್ತು ಸಾಮಾಜಿಕ ಸಂಘಟನೆಗಳು ಎಷ್ಟು ಸಹಾಯ ಕೊಟ್ಟರೂ ಸಾಲದು. ಯಾಕೆಂದರೆ ಇಂದು ಖರ್ಚು ವೆಚ್ಚಗಳು ಜಾಸ್ತಿಯಾಗಿವೆ. ಆದ್ದರಿಂದ ಎಲ್ಲರೂ ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ. ಈ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯೋಣ” ಎಂದರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಮಾತನಾಡಿ, “ಸುರತ್ಕಲ್ ಭಾಗದಲ್ಲಿ ಬಂಟ ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹತ್ತಾರು…
ಡಾಕ್ಟ್ರೆ ಮಗುವಿಗೆ ಜ್ವರ.. ತುಂಬಾ ಸುಡ್ತಾ ಇದಾನೆ… ಇದು ನಾವು ದಿನನಿತ್ಯ ಹಲವಾರು ಬಾರಿ ಕೇಳುವಂತಹ ವಾಕ್ಯ. ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಜ್ವರದಿಂದ ಬಳಲಿದವರೇ. ಆದರೆ ಕಾರಣ ಒಬ್ಬೊಬ್ಬರಲ್ಲೂ ಬೇರೆಯೇ. ಜ್ವರ ಎಂಬುದೊಂದು ರೋಗವಲ್ಲ. ಅದೊಂದು ರೋಗ ಲಕ್ಷಣ. ದೇಹದಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಮಗೆ ತಿಳಿಸುವ ರಕ್ಷಣ ವಿಧಾನ. ಮನುಷ್ಯನ ದೇಹ ಸೋಂಕಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸುವ ಹೋರಾಟದ ಸಂಕೇತ. ಸಾಧಾರಣವಾದ ವೈರಲ್ ಜ್ವರದಿಂದ ಹಿಡಿದು, ಯಾವ ಪರೀಕ್ಷೆಗಳಲ್ಲೂ ಸುಳಿವು ಕೊಡದ, ಯಾವ ಚಿಕಿತ್ಸೆಗೂ ಬಗ್ಗದ ಜ್ವರಗಳು ಕೂಡ ಇವೆ. ಮಕ್ಕಳಲ್ಲಿ ಜ್ವರ ಸರ್ವೇ ಸಾಮಾನ್ಯ. ಕಾರಣಗಳು ಹಲವಾರು. ಕೆಲವು ಮುಖ್ಯ ಕಾರಣಗಳೆಂದರೆ, 1. ವೈರಸ್ ಜ್ವರ 2. ಡೆಂಗ್ಯೂ 3. ಟೈಫಾಯ್ಡ 4. ಮಲೇರಿಯಾ 5. ಮೂತ್ರದ ಸೋಂಕು 6. ನ್ಯುಮೋನಿಯ ಶಾಲೆಗೆ ಹೋಗುವ ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿ ಬರುವಂಥದ್ದು ವೈರಲ್ ಫೀವರ್. ಶೀತ, ಕೆಮ್ಮು, ವಾಂತಿ, ಭೇದಿಗಳಿಂದ ಪ್ರಾರಂಭವಾಗಿ, ಜ್ವರವಾಗಿ 3-4 ದಿನ…