ಸಾರ್ವಜನಿಕ ಗಣೇಶೋತ್ಸವ ಓಂಕಾರನಗರ ಬಂಟ್ಸ್ ಹಾಸ್ಟೇಲ್ ಮಂಗಳೂರು ಇಲ್ಲಿ ನಡೆಯುವ ಗಣೇಶೋತ್ಸವ ಆಚರಣೆಯ ಪ್ರಯುಕ್ತ ಜುಲೈ 15 ರಂದು ಬುಧವಾರ ಬೆಳಿಗ್ಗೆ 7.30 ಕ್ಕೆ ಮಂಗಳೂರು ಶರವು ದೇವಸ್ಥಾನದ ಹತ್ತಿರವಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ (ಬಾಲಮ್ ಭಟ್ ರವರ ಮನೆ) ಗಣಪತಿ ವಿಗ್ರಹದ ಮುಹೂರ್ತ ನಡೆಯಲಿದೆ. ಸಮಾಜ ಬಾಂಧವರೆಲ್ಲರೂ ಆಗಮಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಸಿದ್ದಿವಿನಾಯಕ ಪ್ರತಿಷ್ಠಾನ (ರಿ) ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















































































































