Author: admin
ಬಂಟರ ಯಾನೆ ನಾಡವರ ಮಾತೃ ಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ನಾರೀಕೇಳ ಮಹಾಗಣಾಯಾಗವು ಸೆಪ್ಟೆಂಬರ್ ತಿಂಗಳ ತಾರೀಕು 7ರಿಂದ ಸೆಪ್ಟೆಂಬರ್ ತಿಂಗಳ ತಾರೀಕು 9ರವರೆಗೆ ಮಂಗಳೂರಿನ ‘ಓಂಕಾರ ನಗರ’, ಬಂಟ್ಸ್ ಹಾಸ್ಟೆಲ್ ಇಲ್ಲಿ ಜರಗಲಿದೆ ಎಂದು ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಡಾ ಆಶಾಜ್ಯೋತಿ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದಿನಾಂಕ 06.09.2024ರ ಶುಕ್ರವಾರ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಶ್ರೀ ರಾಮದಾಸ್ ಆಚಾರ್ ರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಲ್ ನ ‘ಓಂಕಾರ ನಗರ’ಕ್ಕೆ ಬರ ಮಾಡಿಕೊಳ್ಳುವುದು. ದಿನಾಂಕ 07.09.2024ರ ಬೆಳಿಗ್ಗೆ ಶನಿವಾರ 8.00 ಗಂಟೆಗೆ ಧ್ವಜರೋಹಣಾ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣಾ ಕಾರ್ಯಕ್ರಮ…
“ಬೇಗನೆ ಗುರುತಿಸುವಿಕೆ, ಸೂಕ್ತ ಚಿಕಿತ್ಸೆಯಿಂದ ಕ್ಯಾನ್ಸರ್ ಹಿಮ್ಮೆಟ್ಟಿಸಲು ಸಾಧ್ಯ” -ಡಾ. ಶಾಂತಾರಾಮ್ ಶೆಟ್ಟಿ
ತಪಸ್ಯ ಫೌಂಡೇಶನ್, ಎಲ್ ಸಿಐಎಫ್, ಲಯನ್ಸ್ ಇಂಟರ್ ನ್ಯಾಷನಲ್ ಮತ್ತು ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಆರೈಕೆ ಕಾರ್ಯಕ್ರಮ “ಶೌರ್ಯ” ಇದರ ಉದ್ಘಾಟನಾ ಸಮಾರಂಭ ಗುರುವಾರ ಬೆಳಗ್ಗೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ತಪಸ್ಯ ಫೌಂಡೇಶನ್ ಸ್ಥಾಪಕರಾದ ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಮಾತಾಡಿದ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ. ಅವರು, “ಮಕ್ಕಳಿಗೆ ಕ್ಯಾನ್ಸರ್ ಬಂದಾಗ ಅವರ ಇಡೀ ಕುಟುಂಬ ಅದರಲ್ಲಿ ಬಲಿಪಶು ಆಗುತ್ತದೆ. ಮಕ್ಕಳ ಕ್ಯಾನ್ಸರ್ ಆರೈಕೆಯನ್ನು ಮಾಡುತ್ತಿರುವ ತಪಸ್ಯ ಫೌಂಡೇಶನ್ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದೆ. ಲಯನ್ಸ್ ಸಂಸ್ಥೆ ಮನೆ ಮನೆಗೆ ಹೋಗಿ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿ ಅವರಿಗೆ ಔಷಧಿ ಸಹಿತ ಆರ್ಥಿಕ ಸಹಾಯವನ್ನು ಮಾಡುವಲ್ಲಿ ತಪಸ್ಯ ಫೌಂಡೇಶನ್ ನೆರವನ್ನು ನೀಡುತ್ತಿದೆ. ಕ್ಯಾನ್ಸರ್ ಯಾವ ಪ್ರಾಯದಲ್ಲಿ ಬೇಕಾದರೂ ಬರಬಹುದು. ಅದು ಗಂಭೀರ ಸ್ಥಿತಿ ತಲುಪಿದಾಗ ಮಾತ್ರ ಜನರು ಚಿಕಿತ್ಸೆ ಪಡೆಯುತ್ತಾರೆ.…
ಸುಮಾರು 96 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಆಂಡ್ ರೀಡಿಂಗ್ ರೂಮ್ ಸೊಸೈಟಿ ಇದರ ದ್ವೈವಾರ್ಷಿಕ ಮಹಾಸಭೆ ನಡೆಯಿತು. ಅಧ್ಯಕ್ಷ ಚಿತ್ತರಂಜನ್ ಹೆಗ್ಡೆ ಹರ್ಕೂರು ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಕಾಳಾವರ ವಾಚಿಸಿದರು. 2024 -26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸುಭಾಷ್ ಚಂದ್ರ ಶೆಟ್ಟಿ ಸೌಕೂರು, ಉಪಾಧ್ಯಕ್ಷರಾಗಿ ಸುಧೀರ್ ಶೆಟ್ಟಿ ಕೆಂಚನೂರು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಹಿಲಿಯಾಣ, ಜೊತೆ ಕಾರ್ಯದರ್ಶಿಯಾಗಿ ಕೆ. ಸೂರ್ಯಕಾಂತ, ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಹೆಗ್ಡೆ ಶಾನಾಡಿ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಬೆಟ್ಟಿನ್ ಮತ್ತು ವಾಚನಾಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್. ಸದಾನಂದ ಶೆಟ್ಟಿ, ಸುಧೀರ್ ಕುಮಾರ ಶೆಟ್ಟಿ ಮಾರ್ಕೋಡು, ಸಂತೋಷ್ ಕುಮಾರ್ ನೂಜಾಡಿ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ತಮ್ಮಯ್ಯ ದೇವಾಡಿಗ ಮತ್ತು ಸುಂದರ ಶೆಟ್ಟಿ ದಾಸರಬೆಟ್ಟು ಸರ್ವಾನುಮತದಿಂದ ಆಯ್ಕೆಯಾದರು. ಬಿ. ಆರ್. ಶಾಲೆಯ ಪ್ರತಿಭಾವಂತ…
ಮೂಡುಬಿದಿರೆ: ಸಂಗ್ರಹಿಸಿದ ವಸ್ತುಗಳನ್ನು ಕೊಡುಗೆ ನೀಡುವುದು ಅಂತಕರಣದಿಂದ ಮಾಡುವ ದಾನ. ಸಂಗ್ರಹ ಹಾಗೂ ದಾನದ ಹಿಂದಿನ ಮೌಲ್ಯ ಮಹತ್ತರ' ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಗ್ರಂಥಾಲಯ ವಿಭಾಗವು ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮೆಸಪಟೋಮಿಯದಲ್ಲಿ ಮೊದಲ ಗ್ರಂಥಾಲಯ ಸ್ಥಾಪನೆಯಾಯಿತು ಎಂದು ಇತಿಹಾಸ ತಿಳಿಸಿದ ಅವರು, ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಹೆಚ್ಚಾಗುತ್ತಾರೆ. ಆದರೆ, ಗ್ರಂಥಾಲಯ ಕಟ್ಟಿದರೆ ವಿದ್ವಾಂಸರು ಹುಟ್ಟುತ್ತಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಮಾತನ್ನು ನೆನಪಿಸಿದರು. ಪುಸ್ತಕಕ್ಕೆ ಮರಣ ಇಲ್ಲ. ಫುಸ್ತಕಗಳು ಜ್ಞಾನ ನೀಡುವ ದೇಗುಲ. ಜಾತಿ, ಧರ್ಮ ಮೀರಿದ ದೇವಾಲಯವೇ ಗ್ರಂಥಾಲಯ. ನಾಗರಿಕತೆ ಇತಿಹಾಸವೇ ಗ್ರಂಥದಲ್ಲಿವೆ. ಓದು ವ್ಯಕ್ತಿ ಬೆಳವಣಿಗೆಗೆ ಪೂರಕ ಎಂದರು. ದೇಶದ ಮೊದಲ ಗ್ರಂಥಾಲಯದಲ್ಲಿ ನಮ್ಮ ಸುರತ್ಕಲ್ನ ಮಹಿಳೆಯೊಬ್ಬರು ಸೇವೆ ಸಲ್ಲಿಸಿದ್ದರು' ಎಂದು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಂಥಾಲಯ…
ಸೆ. 05 ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿಯ ಯು. ಕಮಲ ಬಾಯ್ ಹೈಸ್ಕೂಲಿನ ನಿವೃತ್ತ ಶಿಕ್ಷಕ ಎನ್. ಎಮ್. ಪೂಜಾರಿ ಆಗಮಿಸಿದ್ದರು. ಅವರು ಶಿಕ್ಷಕರಿಗೆ ಶುಭ ಹಾರೈಸಿ ಮಾತನಾಡಿ ಮಕ್ಕಳ ನಿಜವಾದ ಹಿತೈಶಿಗಳು ಶಿಕ್ಷಕರು ಮತ್ತು ಹೆತ್ತವರು. ಅವರು ನೀಡುವ ಶಿಕ್ಷೆಯಲ್ಲಿ ಒಳ್ಳೆಯ ಉದ್ದೇಶವಿರುತ್ತದೆ. ಅವರನ್ನು ಎಷ್ಟು ಗೌರವಿಸುತ್ತೇವೆ, ಪ್ರೀತಿಸುತ್ತೇವೆ ಅಷ್ಟು ಚೆನ್ನಾಗಿ ನಾವು ಬೆಳೆಯುತ್ತೇವೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ತಂದೆ-ತಾಯಿಯರು ನಮ್ಮ ಮೊದಲ ಗುರುಗಳಾಗಿದ್ದು ಅವರ ಆಶೀರ್ವಾದದೊಂದಿಗೆ ಅವರ ಮಾತನ್ನು ಪಾಲಿಸಬೇಕು ಅದೇ ರೀತಿ ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ತೋರುವವರು. ಅವರನ್ನು ಸದಾ ಗೌರವಿಸಿ ಸ್ಮರಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಶಿಕ್ಷಕರಿಂದ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ ಶಿಕ್ಷಕ ಮಕ್ಕಳಲ್ಲಿರುವಕೌಶಲ್ಯಗಳನ್ನು ಗುರುತಿಸಿ ಅದನ್ನು ಉತ್ತೇಜಿಸಿ ಸಮಾಜಕ್ಕೆ ಅತ್ಯುತ್ತಮ ಪ್ರಜೆಯನ್ನು ನೀಡುತ್ತಾನೆ. ಒಬ್ಬ ಶಿಕ್ಷಕನಾಗಿ ನನಗೆ ಹೆಮ್ಮೆಯಾಗುತ್ತಿದೆ ಎಂದರು.…
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಥಾಪಕಾಧ್ಯಕ್ಷ ಕೆ. ಬಿ ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ
ಮಂಗಳೂರಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿ ಅತ್ಯುನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ. ಬಿ. ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವು ದಿನಾ0ಕ 01.09.2024ರ0ದು ಮ0ಗಳೂರಿನ ಉರ್ವ ಸೆಂಟನರಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಐ.ಎಸ್.ಆರ್ ಅಂಡ್ ಸಿ.ಆರ್.ಎಲ್ನ ಉಪಾದ್ಯಕ್ಷರು ಹಾಗೂ ಮಾಜಿ ಉಪಕುಲಪತಿಗಳಾಗಿರುವ ಪ್ರೊ. ಡಾ| ಸತೀಶ್ ಕುಮಾರ್ ಭಂಡಾರಿಯವರು ಪಾಲ್ಗೊಂಡಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ, ತನ್ನ 78ನೇ ವಯಸ್ಸಿನಲ್ಲಿ ಸಂಘವನ್ನು ಸ್ಥಾಪಿಸಲು ಮುಂದಾಳತ್ವ ವಹಿಸಿ ಆರಂಭಿಕ 20 ವರ್ಷಗಳ ಕಾಲ ಸಂಘವನ್ನು ಅಧ್ಯಕ್ಷರಾಗಿ ಮುಂದುವರೆಸಿ ಸಂಘದ ಬೆಳವಣಿಗೆಗೆ ಉತ್ತಮ ಅಡಿಪಾಯವನ್ನು…
ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2024 ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ಗೆ 63 ಪದಕ ರಾಜ್ಯ ಮಟ್ಟದ ಸ್ಪರ್ಧೆಗೆ ಆಳ್ವಾಸ್ನಿಂದ 90 ವಿದ್ಯಾರ್ಥಿಗಳು ಭಾಗಿ
ಮೂಡುಬಿದಿರೆ: ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಸಂಸ್ಥೆಯ ವತಿಯಿಂದ ನಡೆದ ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ನ ವಿದ್ಯಾರ್ಥಿಗಳು 25 ಚಿನ್ನ, 18 ಬೆಳ್ಳಿ, 20 ಕಂಚು ಒಟ್ಟು 63 ಪದಕಗಳನ್ನು ಪಡೆದುಕೊಂಡರು. ಸಪ್ಟಂಬರ್ 14 ರಿಂದ 17 ರವರೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕಿರಿಯರ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ನಿಂದ ಕಿರಿಯರ ವಿಭಾಗದಲ್ಲಿ 60 ವಿದ್ಯಾರ್ಥಿಗಳು ಹಾಗೂ ಹಿರಿಯರ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 90 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಆಳ್ವಾಸ್ ಸ್ಪೋರ್ಟ್ಸ್ ಕ್ಷಬ್ನ್ನು ಪ್ರತಿನಿಧಿಸಲಿದ್ದಾರೆ. ಫಲಿತಾಂಶ : 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ಚಕ್ರವರ್ತಿ- ತ್ರಯತ್ಲನ್ ಸಿ (ಪ್ರಥಮ), ಚಿರಾಗ್- ತ್ರಯತ್ಲನ್ ಸಿ (ದ್ವಿತೀಯ), ಆದಿತ್ಯ- ತ್ರಯತ್ಲನ್ ಸಿ (ದ್ವಿತೀಯ), ಅಮರೇಶ್- ತ್ರಯತ್ಲನ್ ಎ (ಪ್ರಥಮ), ಕೌಶಿಕ್- ತ್ರಯತ್ಲನ್ ಎ…
ಗುರು ಬ್ರಹ್ಮ, ಗುರು ವಿಷ್ಣು ಗುರು ದೇವೋ ಮಹೇಶ್ವರ ಎನ್ನುವಂತೆ ಶಿಕ್ಷಕರಿಗೆ ಸಮಾಜದಲ್ಲಿರುವಂತಹ ಸ್ಥಾನಮಾನ ಎಂಥವರನ್ನು ಕೂಡ ಸಂಭ್ರಮಿಸುತ್ತದೆ. ವಿದ್ಯಾರ್ಥಿಗಳನ್ನು ಪ್ರಜ್ಞಾವಂತರಾಗಿ ಮಾಡಿ ಶೈಕ್ಷಣಿಕ ಬುನಾದಿಯಲ್ಲಿ ತಳಗಟ್ಟಿನವರೆಗೂ ಪ್ರಬಲನಾಗಿ ತೋರ್ಪಡಿಸುವ ಶಕ್ತಿ ಇರುವುದು ಗುರುಗಳಿಗೆ ಮಾತ್ರ. ಬಿದ್ಕಲ್ ಕಟ್ಟೆ ಕೆಪಿಎಸ್ ನ ಉಪ ಪ್ರಾಂಶುಪಾಲರಾದ ಎಂ ಕರುಣಾಕರ ಶೆಟ್ಟಿಯವರು ಅವರು ಅಗ್ರಪಂತಿಯಲ್ಲಿ ನಿಲ್ಲುತ್ತಾರೆ. ಸರಳ ಸಜ್ಜನ ಮೃದು ಸ್ವಭಾವದ ಇವರ ವ್ಯಕ್ತಿತ್ವ ಎಂಥವರನ್ನು ಕೂಡಾ ಆಕರ್ಷಿಸಿ ಬಿಡುತ್ತದೆ. ಯಾವ ಪ್ರಶಸ್ತಿಯ ಹಿಂದೆ ಬಿದ್ದವರಲ್ಲ. ಇಂತಹ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿ ಅಂತ ಅಧಿಕಾರಿಗಳನ್ನು ಕೇಳಿದವರಲ್ಲ. ಆದರೂ ಸಜ್ಜನ ಶಿಕ್ಷಕರಾಗಿ, ಉತ್ತಮ ಕಾರ್ಯನಿರ್ವಹಣೆ ಕಂಡುಕೊಂಡ ಕರುಣಾಕರ ಶೆಟ್ಟಿಯವರು ಇತರ ಶಿಕ್ಷಕರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಶಿಕ್ಷಕರ ಕಾರ್ಯನಿರ್ವಹಣೆ :- ಶ್ರೀಯುತರು ಉಡುಪಿ ಜಿಲ್ಲೆಯ ಆವರ್ಸೆಯ ಸರಕಾರಿ ಪ್ರೌಢಶಾಲೆಯಲ್ಲಿ 1994 ರಿಂದ ಕನ್ನಡ ಅಧ್ಯಾಪಕರಾಗಿ ತಮ್ಮ ಸೇವೆಯನ್ನು ಆರಂಭಿಸಿ 1998 ರಂದು ಕೆಪಿಎಸ್ ಬಿದ್ಕಲ್ ಕಟ್ಟೆಗೆ ವರ್ಗಾವಣೆಗೊಂಡು ದಿನಾಂಕ 9.11.2020 ರಂದು ಅದೇ ಸಂಸ್ಥೆಯ ಉಪ…
ನಿಜಕ್ಕೂ ನಾನು ಬಹು ಕಾಲದಿಂದ ಈ ಬಗ್ಗೆ ಆಲೋಚಿಸುತ್ತಲೇ ಇದ್ದೇನೆ. ಮುಖ್ಯವಾಗಿ ಈ ಹೆಣ್ಣು ಮಕ್ಕಳು ತಾವು ತೋರಬಾರದ ಅಂಗಾಗಗಳನ್ನು ತೋರಿಸುವ ಉದ್ದೇಶವಾದರೂ ಏನು? “Skin tight with skin colour” ನ ಪ್ಯಾಂಟ್ ಹಾಕುವ ಉದ್ದೇಶವಾದರೂ ಏನು? ಒಮ್ಮೆ ಆಲೋಚಿಸಿ. (ಬಟ್ಟೆ ಹಾಕದಂತೆ ಕಾಣಬೇಕು ಎಂದಲ್ಲವೇ) ಅಥವಾ ಅದರಿಂದ ಅವರಿಗಾಗುವ ಬೇರೆ ಲಾಭವೇನು? ಈ ಪ್ರಶ್ನೆ ಎಷ್ಟು ಸಮಂಜಸವೋ ಗೊತ್ತಿಲ್ಲ. ಇದು ನನ್ನ ವೈಯಕ್ತಿಕ ಮನದ ಮಾತು. ಕ್ಷಮಿಸಿ. ಆದರೆ ಇದು ಬಹುಕಾಲದಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ? ಇಲ್ಲಿ ಅವರ ಅಂತಸ್ತು, ಹುದ್ದೆ, ಮನೆತನ, ಪದವಿ ಇದೆಲ್ಲದ್ದಕ್ಕಿಂತ ಆಕೆ ಒಬ್ಬಳು ಹೆಣ್ಣು ಎಂಬುದು ಮುಖ್ಯವಾಗುತ್ತದೆ. ಮರ್ಯಾದೆ ಅನ್ನುವುದು ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದ್ದು, ಸತ್ಯವೂ. ಆದರೆ ಅದರ ಇತಿಮಿತಿ ಬೇರೆಬೇರೆ. ಗಂಡಿಗೆ ಮತ್ತು ಹೆಣ್ಣಿಗೆ ದೇವರು ಕೊಟ್ಟ ಭಿನ್ನವಾದ ದೇಹಕ್ಕೆ ಬೇಕು ಬೇಕಾದಲ್ಲಿ ಮುಚ್ಚುವ ಮತ್ತು ಎಲ್ಲಿ ಕಾಣಬೇಕೋ ಅಲ್ಲಿ ಕಾಣಿಸುವಂತೆ ಇರಿಸುವ ಹಕ್ಕಿದೆ. ಆದರೆ ನಾಗರಿಕ ಸಭ್ಯತೆಯ…
‘ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನವಿಂದು ಮಹಾನಗರ ಮುಂಬಯಿಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಇದಕ್ಕೆ ಪ್ರತಿ ವರ್ಷವೂ ತವರೂರಿನಿಂದ ಬಂದು ಬಯಲಾಟ ಮತ್ತು ತಾಳಮದ್ದಳೆಗಳ ಮೂಲಕ ನಮ್ಮನ್ನು ರಂಜಿಸುವ ಹೆಸರಾಂತ ಯಕ್ಷಗಾನ ಕಲಾವಿದರೇ ಮುಖ್ಯ ಕಾರಣವಾಗಿದ್ದಾರೆ. ಆದರೆ ಅವರನ್ನು ಕರೆ ತಂದು ಮುಂಬಯಿಯಲ್ಲಿ ಯಕ್ಷಗಾನ ಹವಾ ಮೂಡಿಸಿದ ಬಲುದೊಡ್ಡ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟರಂತಹ ಕಲಾ ಸಂಘಟಕರಿಗೆ ಸಲ್ಲುತ್ತದೆ’ ಎಂದು ಮುಲುಂಡ್ ಬಂಟ್ಸ್ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ ಹೇಳಿದರು. ಅಜೆಕಾರು ಕಲಾಭಿಮಾನಿ ಬಳಗದ 23 ನೇ ವರ್ಷದ ಸರಣಿ ತಾಳಮದ್ದಳೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ತಂಡದ ಎಲ್ಲಾ ಕಲಾವಿದರನ್ನು ಮುಲುಂಡ್ ಬಂಟ್ಸ್ ವತಿಯಿಂದ ಗೌರವಿಸಲಾಯಿತು. ತವರೂರ ಹಿರಿಯ ಅರ್ಥಧಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವರ್ಷಂಪ್ರತಿ ಎರಡು ತಂಡಗಳಾಗಿ ಮುಂಬಯಿ…














