Author: admin

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವರ್ತಿತ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜುಲೈ ಆವೃತ್ತಿಯ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‍ಸಿ ಹೋಮ್ – ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿಗಳನ್ನು ಪಡೆಯಬಹುದಾಗಿದೆ. ಸ್ನಾತಕೋತ್ತರ (ಪಿಜಿ)ದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕøತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲ್ಯೂ, ಎಂ.ಬಿ.ಎ-ಆನ್‍ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‍ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತುಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾಂ ಡ್ಯುಯೆಲ್ ಸ್ಪೆಷಲೈಜೇಷನ್ ( ಅಕೌಂಟಿಂಗ್ ಮತ್ತು ಫೈನಾನ್ಸ್/ಎಚ್‍ಆರ್ ಎಂ ಮಾರ್ಕೆಟಿಂಗ್…

Read More

ಮೂಡುಬಿದಿರೆ: ಈ ಭೂಮಿಯು ನಮಗಾಗಿಯೇ ನಿರ್ಮಿತವಾಗಿದೆ ಹಾಗೂ ನಮಗಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂಬ ಮನುಷ್ಯನ ಅಹಂ ಬಾವ ಹಾಗೂ ಮೂರ್ಖತನದ ಪರಮಾವಧಿಯಿಂದ ಜೀವ ವೈವಿಧ್ಯದ ಮೇಲೆ ಭರಿಸಲಾಗದ ನಷ್ಟ ಉಂಟಾಗುತ್ತಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ನುಡಿದರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‍ಸಿ) ಎನರ್ಜಿ ಆ್ಯಂಡ್ ವೆಟ್‍ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಹಾಗೂ ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕೆರೆ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿದ್ದ- ‘ಪ್ರೀ ಲೇಕ್ ಕಾರ್ಯಾಗಾರ’’ ವನ್ನು ಉದ್ಘಾಟಿಸಿ ಮಾತನಾಡಿದರು. ತಾನೇ ಬಲಿಯಾಗುತ್ತಿರುವುದರಿಂದ ಜಾಗೃತಿಯ ಮಂತ್ರ ಮನುಷ್ಯ ತನ್ನ ವರ್ತನೆಯ ಸಮಸ್ಯೆಯಿಂದಾಗಿ ಇಂದು ಪ್ರಕೃತಿಯ ಮೇಲೆ ಸವಾರಿ ಮಾಡುತ್ತಾ ಸಾಗಿದ್ದಾನೆ. ನಮ್ಮಲ್ಲಿರುವ ‘ಚಲ್ತಾ ಹೇ’ (ನಡಿತದೆ) ಎಂಬ ಉಡಾಫೆಯ ಮನೋಭಾವ ಸಮಸ್ಯೆಗೆ ಮೂಲ ಕಾರಣ. ಮನುಷ್ಯ, ಪ್ರಕೃತಿಯ ಭಾಗವಾಗಿರುವ ಉಳಿದ ಜೀವ ರಾಶಿಗೆ ಸಮಸ್ಯೆಯಾಗಿದೆಯೆಂದು ಜೀವ ವೈವಿಧ್ಯತೆಯ ಸಂರಕ್ಷಣೆಯ ಕುರಿತು ಕಾಳಜಿ ವಹಿಸುತ್ತಿಲ್ಲ, ಮನುಷ್ಯ ಸತ್ವಃ ತಾನೇ ಪ್ರಕೃತಿಯ ಮುನಿಸಿಗೆ ಇಡಾಗುತ್ತಿರುವುದರಿಂದ ಜಾಗೃತಿಯ ಮಂತ್ರ…

Read More

ಬಂಟ್ಸ್ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷಸ್ಥಾನ ಬಲುದೊಡ್ಡ ಜವಾಬ್ದಾರಿ. ಸದಸ್ಯರೆಲ್ಲರ ಸಹಕಾರ ಮತ್ತು ಶ್ರೀದೇವರ ಆಶೀರ್ವಾದದಿಂದ ಈ ಸ್ಥಾನವನ್ನಲಂಕರಿಸಿದ ನಾನು ಅದೃಷ್ಟಶಾಲಿ. ಸಂಘಕ್ಕೆ ಸ್ಥಾಪನಾಕರ್ತರಾಗಿ ಅಧ್ಯಕ್ಷರಾಗಿ ಸಂಘವನ್ನು ಈ ತನಕ ಮುನ್ನಡಿಸಿದ ಎಲ್ಲರ ಸೇವೆಯನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಅವರ ಸೇವೆಗಳನ್ನು ಮನವರಿಸುವೆ. ಸದ್ಯ ೧೪೦ ಸದಸ್ಯ ಸಂಪುಟದ ಸಂಘದ ಸಾರಥ್ಯ ನನ್ನ ಪಾಲಿಗೆ ಒಲಿದಿದ್ದು ನನ್ನ ಭಾಗ್ಯ. ಬಂಟ್ಸ್ ಸಂಘದ ಅಧ್ಯಕ್ಷಸ್ಥಾನ ಅಂದರೆ ಪೂರ್ಣಾವಧಿಯ ಕೆಲಸ ಇದ್ದಂತೆ. ಸಹೃದಯಿ ದಾನಿಗಳ ಸಹಯೋಗದಿಂದಲೇ ಸಂಘ ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣವಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು. ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಬಂಟರ ಸಂಘದ ೯೬ನೇ ವಾರ್ಷಿಕ ಮಹಾಸಭೆಗೆ ದೀಪಹಚ್ಚಿ ಚಾಲನೆಯನ್ನಿತ್ತು ಸ್ವಾಗತಿಸಿ ಪ್ರಸ್ತಾವನೆಗೈದು ಸಭಾಧ್ಯಕ್ಷತೆ ವಹಿಸಿ ಪ್ರವೀಣ್ ಶೆಟ್ಟಿ ಮಾತನಾಡಿ ಬಂಟ್ಸ್ ಸಂಘ ಎಂದಿಗೂ ಸಮಯ…

Read More

ಮಂಗಳೂರಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿ ಅತ್ಯುನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ. ಬಿ. ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವು ದಿನಾ0ಕ 01.09.2024ರ0ದು ಮ0ಗಳೂರಿನ ಉರ್ವ ಸೆಂಟನರಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಐ.ಎಸ್.ಆರ್ ಅಂಡ್ ಸಿ.ಆರ್.ಎಲ್‍ನ ಉಪಾದ್ಯಕ್ಷರು ಹಾಗೂ ಮಾಜಿ ಉಪಕುಲಪತಿಗಳಾಗಿರುವ ಪೆÇ್ರ. ಡಾ| ಸತೀಶ್ ಕುಮಾರ್ ಭಂಡಾರಿಯವರು ಪಾಲ್ಗೊಂಡಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ, ತನ್ನ 78ನೇ ವಯಸ್ಸಿನಲ್ಲಿ ಸಂಘವನ್ನು ಸ್ಥಾಪಿಸಲು ಮುಂದಾಳತ್ವ ವಹಿಸಿ ಆರಂಭಿಕ 20 ವರ್ಷಗಳ ಕಾಲ ಸಂಘವನ್ನು ಅಧ್ಯಕ್ಷರಾಗಿ ಮುಂದುವರೆಸಿ ಸಂಘದ ಬೆಳವಣಿಗೆಗೆ ಉತ್ತಮ ಅಡಿಪಾಯವನ್ನು…

Read More

ಕುಂದಾಪುರ : “ಸ್ಥಿರತೆ ಹಾಗೂ ಹೊಣೆಗಾರಿಕೆಯಿಂದ ಲೆಕ್ಕ ಪರಿಶೋಧಕರಾಗಿ” ಎಂದು ಘೋಷಿಸುತ್ತಾ, ಕುಂದಾಪುರ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ/ಸಿ.ಎಸ್ ತರಗತಿಗಳನ್ನು ದಿನಾಂಕ 03-09-2024ರಂದು ಗಣಪತಿ ಸ್ತುತಿ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಎಲ್ಲಾ ಗೌರವಾನ್ವಿತ ಅತಿಥಿ ಮಹಾಶಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಈ ಸುಂದರ ಕಾರ್ಯಕ್ರಮವನ್ನು ಉದ್ಘಾಟಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಲೆಕ್ಕ ಪರಿಶೋಧಕರು ಹಾಗೂ ಸಿ.ಎಸ್ ತಜ್ಞರಾದ ಪ್ರದೀಪ್ ಜೋಗಿ ಚೇರ್ಮನ್ ಆಫ್ ಐ.ಸಿ.ಎ.ಐ, ಉಡುಪಿ ಇವರು ಸಿ.ಎ/ಸಿ.ಎಸ್ ತರಗತಿಗಳ ಪುನಶ್ಚೇತನ ಕಾರ್ಯಕ್ರವiದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಲೆಕ್ಕ ಪರಿಶೋಧನೆಯ ಬಗ್ಗೆ ಮಾಹಿತಿಯ ಜೊತೆಗೆ ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳು ಮತ್ತು ಪೂರ್ವ ತಯಾರಿಯ ಕುರಿತು ಅರಿವು ಮೂಡಿಸುವ ಬಗ್ಗೆ ಮಾತನಾಡುತ್ತಾ ನಿರಂತರ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಮುಂದುವರೆದಲ್ಲಿ ಸಿ.ಎ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತಿರ್ಣರಾಗಬಹುದು ಎಂದರು. ಪ್ರತಿಯೊಬ್ಬರಲ್ಲೂ ಸಾಮಥ್ರ್ಯ ಇದೆ, ಆತ್ಮವಿಶ್ವಾಸದ ಕೊರತೆಯಿಂದ ನಾವು ಬೇರೆ…

Read More

ಬಂಟ್ಸ್ ಕತಾರ್ ಆಡಳಿತ ಮಂಡಳಿಯು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಕತಾರ್ ನಲ್ಲಿ ಮೊದಲ ಬಾರಿಗೆ ಆಗಸ್ಟ್ 15 ರಂದು ಕತಾರಿನ ಲಯನ್ ಗಾರ್ಡನ್ ಕ್ಲಬ್ ಹೌಸ್ ನಲ್ಲಿ ಬಹಳ ವಿಜೃಂಭಣೆಯಿಂದ ಆಯೋಜಿಸಿತ್ತು. ಜತೆ ಕಾರ್ಯದರ್ಶಿ ಚಿದಾನಂದ ರೈಯವರು ನೆರೆದ ಸದಸ್ಯರನ್ನು ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಂಪ್ರದಾಯದಂತೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕತಾರ್ ನಲ್ಲಿ ನೆಲೆಸಿರುವ ಎಲ್ಲರ ಒಗ್ಗೂಡುವಿಕೆಯಿಂದ ಇಂತಹ ವಿನೂತನ ಕಾರ್ಯಕ್ರಮದ ಮುಖಾಂತರ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಕತಾರ್ ನಲ್ಲಿ ಪರಿಚಯಿಸಲು ಸಾಧ್ಯವೆಂದು ಅಧ್ಯಕ್ಷರಾದ ನವೀನ ಶೆಟ್ಟಿ ಇರುವೈಲ್ ರವರು ಅಭಿಪ್ರಾಯಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸೌರಭ್ ಶೆಟ್ಟಿಯವರು ವಿಶಿಷ್ಟ ರೀತಿಯಲ್ಲಿ ಆಟಿ ತಿಂಗಳ ಮಹತ್ವವನ್ನು ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸ್ಥಾಪಕಾಧ್ಯಕ್ಷರಾದ ಡಾ| ಮೂಡಂಬೈಲ್ ರವಿ ಶೆಟ್ಟಿ ಹಾಗೂ ಮಾಜಿ ಅಧ್ಯಕ್ಷರಾದ ನವನೀತ್ ಶೆಟ್ಟಿಯವರು ಮಾತನಾಡಿ, ವಿನೂತನವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಪರಿಚಯಿಸಿದ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಪ್ರಶಂಸಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಟಿ ತಿಂಗಳ ವಿಶಿಷ್ಟ ರೀತಿಯ…

Read More

ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನೆ ನೀಡುವಂತಹ ಕೌಟುಂಬಿಕ ಅನುಭವ ಬೇರೆ ಯಾವುದೇ ಸಂಘಟನೆ ನೀಡಲಾರದು ಎಂದು ಮೂಡುಬಿದರೆ ಶ್ರೀ ಧವಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೋಅಜಿತ್ ಪ್ರಸಾದ್ ಅಭಿಪ್ರಾಯಪಟ್ಟರು. ಅವರು ಶಿವರಾಮ ಕಾರಂತ ವೇದಿಕೆಯಲ್ಲಿ, ಶನಿವಾರ ಆಳ್ವಾಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಸಮುದಾಯದ ಸಾಮರ್ಥ್ಯವನ್ನು ಸರಿಯಾಗಿ ಬಳೆಸಿಕೊಳ್ಳಲು ಆರಂಭಗೊಂಡಿದ್ದೇ ರಾಷ್ಟ್ರೀಯ ಸೇವಾ ಯೋಜನೆ ಮೂಲಕ. 1969 ರಲ್ಲಿ ಎನ್.ಎಸ್.ಎಸ್ ಶುರುವಾದಾಗ ಅಂದಿನ ಯುವಕರ ಪ್ರಮುಖ ಆಕರ್ಷಣೆ ಎನ್‍ಎಸ್‍ಎಸ್ ಆಗಿತ್ತು. ಸಾಮಾಜಿಕ ಕಳಕಳಿ, ಬದ್ಧತೆ ಮತ್ತು ಉತ್ತರದಾಯಿತ್ವದ ಗುಣಗಳನ್ನು ಎನ್.ಎಸ್.ಎಸ್ ನೀಡುತ್ತದೆ. ವ್ಯಕ್ತಿತ್ವ ವಿಕಸನವೆಂದರೆ ದೌರ್ಬಲ್ಯಗಳನ್ನು ಕಡಿಮೆಗೊಳಿಸಿ ಧನಾತ್ಮಕ ಚಿಂತನೆಯನ್ನು ಹೆಚ್ಚಿಸಿಕೊಳ್ಳುವುದಾಗಿದೆ. ಜೀವನವೆಂದರೆ ನಮಗಾಗಿ ಬದುಕೋದಲ್ಲ. ಇತರರ ಜೊತೆಗೆ ಬದುಕುತ್ತಾ, ಬೆಳೆಯುತ್ತಾ ಹೋಗುವ ವಿಶ್ವ ಪ್ರಜ್ಞೆ. ಆಗ ಮಾತ್ರ ನಮ್ಮಲ್ಲಿ ಸಮಷ್ಟಿ ಮನೋಭಾವ ಬೆಳೆಯಲು ಸಾಧ್ಯ ಎಂದರು. ಎನ್.ಎಸ್.ಎಸ್. ಸ್ವಯಂಸೇವಕನ ಪ್ರಾಥಮಿಕ ಅರ್ಹತೆಯೇ 120 ಘಂಟೆಗಳ ಕಾರ್ಯಕ್ರಮದಲ್ಲಿ ಕ್ರಿಯಾತ್ಮಕವಾಗಿ ಭಾಗಿಯಾಗುವುದರ ಜೊತೆಗೆ…

Read More

ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ 2024 – 25ನೇ ಸಾಲಿನ ಬಿ.ಕಾಂ. ಆರನೇ ಸೆಮಿಸ್ಟರ್‍ನ ಎಲ್ಲಾ ವಿಷಯಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಡಿ ಶೆಟ್ಟಿ ಪೂರ್ಣ ಅಂಕ ಗಳಿಸಿದ್ದಾಳೆ. ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಇದು ದಾಖಲೆಯಾಗಿದೆ. ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್-2, ಇನ್‍ವೆಸ್ಟ್‍ಮೆಂಟ್ ಮ್ಯಾನೆಜ್‍ಮೆಂಟ್, ಅಡ್ವಾನ್ಸ್ಡ್ ಫೈನಾನ್ಶಿಯಲ್ ಮ್ಯಾನೆಜ್‍ಮೆಂಟ್, ಇನ್‍ಕಂ ಟ್ಯಾಕ್ಸ್ ಲಾ ಆ್ಯಂಡ್ ಪ್ರಾಕ್ಟೀಸ್ 2, ಮ್ಯಾನೆಜ್‍ಮೆಂಟ್ ಅಕೌಂಟಿಂಗ್, ಅಸೆಸ್‍ಮೆಂಟ್ ಆಫ್ ಪರ್ಸನ್ಸ್ ಅದರ್ ದೆನ್ ಇಂಡಿವಿಜ್ಯುವಲ್ಸ್ ಆ್ಯಂಡ್ ಫೈಲಿಂಗ್ ಐಟಿಆರ್ಸ್, ಹಾಗೂ ಮಿನಿ ಪ್ರಾಜೆಕ್ಟ್ ವಿಷಯಗಳಲ್ಲಿ ಪೂರ್ಣಾಂಕ ಗಳಿಸಿದ್ದಾಳೆ. ಅವಳ ಒಟ್ಟಾರೆ ಸರಾಸರಿ ಅಂಕವು ಶೇಕಡಾ 95.54 ಇದೆ. ಕಾಲೇಜಿನ ಕ್ಯಾಂಪಸ್ ಸಂದರ್ಶನದಲ್ಲಿ ಟಿಸಿಎಸ್ ಕಂಪೆನಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾಳೆ. ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯಳಾಗಿದ್ದಳು. ಮೂಡುಬಿದಿರೆ ದರೆಗುಡ್ಡೆ ನಿವಾಸಿಗಳಾದ ದಿನೇಶ ಶೆಟ್ಟಿ ಹಾಗೂ ಜಯಶ್ರೀ ಶೆಟ್ಟಿ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಶ್ಲಾಘಿಸಿದ್ದಾರೆ.

Read More

ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಆರ್ಥಿಕ ರಂಗದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಪ್ರತಿಷ್ಠಿತ ಸ್ಥಾನಮಾನದೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಸೊಸೈಟಿ ಸ್ಥಾಪನೆಯಾದಾಗಿನಿಂದ ಈವರೆಗಿನ ಕಾರ್ಯಾಧ್ಯಕ್ಷರು, ನಿರ್ದೇಶಕ ಮಂಡಳಿ ಮತ್ತು ಸಕಲ ಸಮಿತಿ ಸದಸ್ಯರ ಸೇವೆಯನ್ನು ಮರೆಯುವಂತಿಲ್ಲ. ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಸೊಸೈಟಿಯು ಮಹಾನಗರದಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿ ನಿಂತಿದೆ ಎಂದು ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ಹೇಳಿದರು. ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಆಗಸ್ಟ್ 31ರಂದು ಜರಗಿದ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 36 ನೇಯ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಹಿತದೃಷ್ಟಿ ಮುಂದಿಟ್ಟುಕೊಂಡು ಬೆಳೆದಿರುವ ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯ ವ್ಯಾಪ್ತಿಯು ಮುಂಬಯಿ ಮಹಾನಗರ ಹಾಗೂ ಉಪನಗರ ಸಾಕಿನಾಕ, ಥಾಣೆ, ವಸಾಯಿ, ವಾಶಿ, ಕಲ್ಯಾಣ್, ಪುಣೆ, ನಾಸಿಕ್, ರಾಯಗಢ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ನಿರಂತರ ಉತ್ತಮ ಸೇವೆ ನೀಡುವುದರೊಂದಿಗೆ…

Read More

ಸಹಕಾರಿ ಕ್ಷೇತ್ರದ ಮೂಲಕ ಸರಕಾರದ ಅನೇಕ ಅನುದಾನಗಳು ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಹಕಾರ ಸಂಘಗಳು ರೈತರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತವೆ. ಆದ್ದರಿಂದ ಸಹಕಾರ ಕ್ಷೇತ್ರ ಗ್ರಾಮೀಣ ಜನರ ಭರವಸೆಯ ಕ್ಷೇತ್ರವಾಗಿದೆ ಎಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಸೆಪ್ಟೆಂಬರ್ 1 ರಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಡಿಯಾಲ ಶಾಖಾ ಕಟ್ಟಡದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೊಡಿಯಾಲ ಶಾಖೆಗೆ ಸ್ಥಳ ಮಂಜೂರಾತಿ ಮಾಡಿಸಿದ ಹಿರಿಯ ಸಹಕಾರಿ ಧುರೀಣ ದಿವಂಗತ ಪಿ. ಭಾಸ್ಕರ ರೈಯವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಂಘದ ನೂತನ ಸಭಾಂಗಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎನ್. ಮನ್ಮಥ ಉದ್ಘಾಟಿಸಿದರು. ಗ್ರಾಹಕ ಸೇವಾ ಕೇಂದ್ರವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್. ರೈ ಉದ್ಘಾಟಿಸಿದರು. ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಿ. ವಿಜಯ…

Read More