Author: admin

ಬಂಟರ ಯಾನೆ ನಾಡವರ ಮಾತೃ ಸಂಘ ಕಾರ್ಕಳ ತಾಲೂಕು ಸಮಿತಿ, ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘ ಹಾಗೂ ಯುವ ಬಂಟರ ಸಂಘ ಕಾರ್ಕಳ ಇವರ ಜಂಟಿ ಸಹಯೋಗದಲ್ಲಿ ದಿನಾಂಕ ಜೂನ್ 13 ರಂದು ನಡೆಯುವ ಆಟಿಡೊಂಜಿ ಬಂಟ ಕೂಟದ ಪೂರ್ವಭಾವಿ ಸಭೆಯು ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಕಳ ತಾಲೂಕಿನ ಸಂಚಾಲಕರಾದ ವಿಜಯ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಕಳ ತಾಲೂಕು ಬಂಟರ ಸಂಘದ ಸಂಚಾಲಕರಾದ ವಿಜಯ ಶೆಟ್ಟಿ, ಮಹಿಳಾ ಬಂಟ ಸಂಘದ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ರವಿ ಶೆಟ್ಟಿ ಕುಕ್ಕುಂದೂರು, ಕೃಷ್ಣರಾಜ ಶೆಟ್ಟಿ, ಅವಿನಾಶ್ ಶೆಟ್ಟಿ, ಚೇತನ್ ಶೆಟ್ಟಿ ಹಾಗೂ ಮತ್ತಿತರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ತುಳುನಾಡಿನ ಅಸ್ಮಿತೆಯ ಚಳುವಳಿಯಾದ ತುಳುವ ಮಹಾಸಭೆ ತನ್ನ ಶತಮಾನೋತ್ಸವದ ಸಂಧರ್ಭದಲ್ಲಿ ಹೊಸ ಚಟುವಟಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಇಂತಹ ಸಂಧರ್ಭದಲ್ಲಿ ಭಾನುಮತಿ ಶೆಟ್ಟಿ ಕಕ್ವಗುತ್ತು ಅವರನ್ನು ತುಳುವ ಮಹಾಸಭೆ ಮೂಲ್ಕಿ ತಾಲೂಕು ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ. ಭಾನುಮತಿ ಶೆಟ್ಟಿ ಅವರು ಜರ್ಮನಿಯ ಕೋಲೋನ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆದು, ಪ್ರವಾಸೋದ್ಯಮದಲ್ಲಿ ಡಿಪ್ಲೋಮಾ ಪೂರೈಸಿದ ನಂತರ 39 ವರ್ಷಗಳ ಕಾಲ ಜರ್ಮನಿಯಲ್ಲಿ ವಾಸವಿದ್ದು, ತಮ್ಮದೇ ಆದ ಟ್ರಾವೆಲ್ ಏಜೆನ್ಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ವಿದೇಶದಲ್ಲಿದ್ದರೂ ಅವರು ತುಳು ಭಾಷೆ ಮತ್ತು ಸಂಸ್ಕೃತಿಗೆ ಅತ್ಯಂತ ಪ್ರಾಮುಖ್ಯತೆ ನೀಡುತ್ತಾ, “ಅಟಿಲ್ ಮಲ್ಪುಲೆ ತುಳು ಕಲ್ಪುಲೆ” ಎಂಬ ಯೂಟ್ಯೂಬ್ ಚಾನೆಲ್ ಮುಖಾಂತರ ತುಳುನಾಡಿನ ಪರಂಪರೆಯನ್ನು ಜಾಗೃತಗೊಳಿಸುತ್ತಿದ್ದಾರೆ. ಕಡಲಾಯೆರೆಡ ತುಳುವೆರು ಸಂಘದ ಸದಸ್ಯೆಯಾಗಿರುವ ಅವರು, ನಿವೃತ್ತಿಯಾದ ನಂತರ ಈಗ ಮುಲ್ಕಿ ತಾಲೂಕಿನ ಏಳು ಹಳ್ಳಿಗಳನ್ನು ಒಳಗೊಂಡ ಮೂಲ್ಕಿ ತಾಲೂಕು ಸಂಜೀವಿನಿ ಒಕ್ಕೂಟ (ರಿ)ದ ಅಧ್ಯಕ್ಷೆ ಆಗಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ, ಲಯನ್ಸ್ ಕ್ಲಬ್ ಹಾಗೂ ಮೂಲ್ಕಿ ರೋಟರಿ ಕ್ಲಬ್ ನಲ್ಲೂ…

Read More

ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಪದವಿ ಪ್ರಧಾನ ಕಾರ್ಯಕ್ರಮವನ್ನು ಇತ್ತೀಚಿಗೆ ವಿಶೇಷವಾಗಿ ನಡೆಸಲಾಯಿತು. ಕಾಲೇಜಿನ ವಿವಿಧ ವಿಭಾಗದ ಪದವಿ ಪಡೆದ ನೂರಾರು ವಿದ್ಯಾರ್ಥಿಗಳನ್ನು ಮಹತ್ವದ ಶೈಕ್ಷಣಿಕ ಮೈಲಿಗಲ್ಲಾಗಿ ಗುರುತಿಸಲಾಯಿತು. ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನಾರಾಯಣ ಸ್ವಾಮಿಯವರು ಸ್ವಂತ ಜೀವನ ಮಾದರಿ ಮತ್ತು ಸಾರ್ವಜನಿಕ ಸೇವೆಗಳ ಬಗ್ಗೆ ಉದಾಹರಣೆ ನೀಡುವ ಮೂಲಕ ಸಮಗ್ರತೆ, ಪರಿಶ್ರಮದ ಮೌಲ್ಯದ ಬಗ್ಗೆ ಒತ್ತಿ ಹೇಳಿದರು. ಸಂಸ್ಥೆಯ ಅಧ್ಯಕ್ಷರಾದ ಆರ್ ಉಪೇಂದ್ರ ಶೆಟ್ಟಿಯವರು ಶಿಸ್ತಿನ ಮಹತ್ವ, ಸಮಗ್ರ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಸ್ಥೆಯ ಬದ್ಧತೆ ಬಗ್ಗೆ ಮಾತನಾಡಿದರು. ಪದವೀಧರರು ಜವಾಬ್ದಾರಿ ನಮ್ರತೆಯಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಜಪ್ತಿ ಸಂತೋಷ ಶೆಟ್ಟಿ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಶೈಕ್ಷಣಿಕ ಶ್ರೇಷ್ಠತೆ, ಸಹಪಠ್ಯ ಕೊಡುಗೆಗಳಿಗಾಗಿ ಅತ್ಯುತ್ತಮ ಸಾಧಕರಿಗೆ ಪದಕ, ವಿಶೇಷ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಯುಸಿಸಿ ಸ್ಪರ್ಧಾತ್ಮಕ ಕಪ್…

Read More

ಮುಂಬಯಿಯ ಹೋಟೆಲು ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ವಸಾಯಿ ಡ್ರೀಮ್ ಲ್ಯಾಂಡ್ ಹೊಟೇಲ್ಸ್ ನ ಆಡಳಿತ ನಿರ್ದೇಶಕ ರತ್ನಾಕರ ಎಂ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಮಹಾ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ.ಇವರು ಈ ಹಿಂದೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಮುಂದೆ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದಯೆ ಇವರ ಮತ್ತು ಇವರ ಕುಟುಂಬದ ಮೇಲೆ ಸದಾ ಇರಲಿ ಎಂದು ಹಾರೈಸಿ, ಒಕ್ಕೂಟದ ಪರವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

Zee ಕನ್ನಡದ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದ್ದು, ಆರಂಭದಿಂದ ಇಲ್ಲಿವರೆಗೂ ಪ್ರೇಕ್ಷಕರ ಪ್ರೀತಿ ಪಡೆದುಕೊ‌ಂಡಿದೆ. ಗಂಡನಿಂದ ವಂಚಿಳಾದ ಹೆಣ್ಣು ಕುಗ್ಗದೇ ಜೀವನ ಕಟ್ಟಿಕೊಂಡ ಕಥೆ. ಛಲವೊಂದಿದ್ದರೆ ಸಾಕು ಸಾಧಿಸಿ ತೋರಿಸಬಹುದು ಎಂಬುಸನ್ನು ಸಾಬೀತುಪಡಿಸಿದ‌ ಕಥೆಯೇ ಪುಟ್ಟಕ್ಕನ ಮಕ್ಕಳು. ಜೆ.ಎಸ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ, ಜೀ ಕನ್ನಡದಲ್ಲಿ 13ನೇ ಡಿಸೆಂಬರ್ 2021 ರಿಂದ ಪ್ರಸಾರವಾದ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಹೆಣ್ಣು ಮಕ್ಕಳ ಹೆತ್ತೋಳೂ ಎಲ್ಲ ದೇವರಿಗೂ ದೊಡ್ಡೋಳು ಎಂಬ ಶೀರ್ಷಿಕೆ ಗೀತೆಯಿಂದಲೇ ಎಲ್ಲರ ಮನಸೆಳೆದು, ಮೊದಲ ವಾರದ ರೇಟಿಂಗ್ ನಲ್ಲಿ 13.5 ಟಿ.ವಿ.ಆರ್ ಗಳಿಸಿ ಇಡೀ ಭಾರತದಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಧಾರಾವಾಹಿ ಎಂಬ ದಾಖಲೆ ಸೃಷ್ಟಿಸಿತು. ಆರೂರು ಜಗದೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಚಿತ್ರೀಕರಣಗೊಂಡ ಮೊದಲ ಕಂತುಗಳು ‘ಸಣ್ಣ ಪರದೆಯ ದೊಡ್ಡ ಸಿನಿಮಾ’ ಎಂಬ ಮನ್ನಣೆ ಗಳಿಸಿದವು. ನಿರ್ಮಾಪಕಿ ಸ್ಮಿತಾ ಜೆ ಶೆಟ್ಟಿಯವರ, ಜೆ ಎಸ್ ಪ್ರೊಡಕ್ಷನ್ಸ್ ಸಂಸ್ಥೆಯು ‘ಶುಭ ವಿವಾಹ, ಜೋಡಿ ಹಕ್ಕಿ, ಜೊತೆ…

Read More

ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯು ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜೂನ್ 12 ರಂದು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ತಾಲೂಕು ಬಂಟರ ಜನಗಣತಿಯ ಪ್ರಗತಿ ಪರಿಶೀಲನೆ ಮತ್ತು ಗ್ರಾಮ ಸಮಿತಿ ರಚನೆಯ ಬಗ್ಗೆ ಚರ್ಚಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಧಕರನ್ನು ಗೌರವಿಸುವ ಬಗ್ಗೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಸರಕಾರಿ ನಾಮನಿರ್ದೇಶನ ಸದಸ್ಯರು, ಲಯನ್ಸ್ ಗವರ್ನರ್ ಹರಿಪ್ರಸಾದ್ ರೈ ಅವರನ್ನು ಗೌರವಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪುತ್ತೂರು ತಾಲೂಕು ಬಂಟ ಉದ್ಯಮಿಗಳ ಸಮಾಗಮ ನಡೆಸುವ ಬಗ್ಗೆ ಚರ್ಚಿಸಲಾಯಿತು. ಆರ್ಥಿಕವಾಗಿ ತೀರ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷದ ದತ್ತು ಸ್ವೀಕಾರದ ಬಗ್ಗೆ, ಹೊಸ ಸದಸ್ಯರ ಸೇರ್ಪಡೆ ಹಾಗೂ ಆರ್ಥಿಕ ಸಹಾಯ ಹಸ್ತದ ಅರ್ಜಿಗಳ ಪರಿಶೀಲನೆ ಹಾಗೂ ‘ಮರೆಯಲಾರದ ಬಂಟರು’ ಪುಸ್ತಕ ಪ್ರಕಟಣೆ ಬಗ್ಗೆ ಸಭೆಯಲ್ಲಿ…

Read More

ವಿಮಾನ ಪತನಗೊಂಡು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ನಿಜಕ್ಕೂ ದುಃಖದ ಸಂಗತಿ. ಅಹಮದಾಬಾದಿನಿಂದ ಲಂಡನ್ನಿಗೆ ಹೊರಟಿದ್ದ ವಿಮಾನವಿದು. ಬಹಳ ಸುದೀರ್ಘ ಹಾರಾಟವಾದ್ದರಿಂದ ಬಹುಶಃ ವಿಮಾನದ ಫ್ಯೂಲ್ ಟ್ಯಾಂಕ್ ಭರ್ತಿಯಾಗಿತ್ತು, ತಾಪಮಾನ ಸುಮಾರು 40 ಡಿಗ್ರಿಯಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದ ಎಲಿವೇಶನ್ ಸುಮಾರು ಇನ್ನೂರು ಅಡಿ, ವಿಮಾನ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು ಮತ್ತು 645 ಅಡಿಯೆತ್ತರಕ್ಕೆ ಏರಿತ್ತು ಎಂಬುದು ತಜ್ಞರ ಅಭಿಪ್ರಾಯ. ಅಹಮದಾಬಾದ್ ವಿಮಾನ ನಿಲ್ದಾಣ ಹಕ್ಕಿಗಳ ಉಪಟಳಕ್ಕೆ ಕುಖ್ಯಾತ ಬಹುಶಃ ಹಕ್ಕಿಗಳು ಏಕಕಾಲಕ್ಕೆ ವಿಮಾನದ ಎಂಜಿನ್ಗೆ ಸಿಲುಕಿ ವಿಮಾನ ಆಗಸಕ್ಕೆ ಏರಲಾಗದೆ ಪತನಗೊಂಡಿದೆ ಎಂಬುದು ಮೇಲ್ನೋಟ ಕಾಣುತ್ತಿದೆ. ತಜ್ಞರು ಗಮನಿಸುತ್ತಿರುವ ಮತ್ತೊಂದು ವಿಷಯವೇನು ಅಂದ್ರೆ ವಿಮಾನ nose dive ಮಾಡಿಲ್ಲ. (ಮೂತಿ ಕೆಳಗೆ ಮಾಡಿ ವಿಮಾನ ಬಿದ್ದಿಲ್ಲ, ಕಾಗದದ ವಿಮಾನ ಗಾಳಿಯಲ್ಲಿ ತೇಲುವಂತೆ ತೇಲಿ ಬಿದ್ದಿದೆ) ವಿಮಾನ ಒಂದು shallow decent ನಲ್ಲಿತ್ತು. ವಿಮಾನ ನಿಲ್ದಾಣದ ಸುತ್ತಮುತ್ತ ವಿಶಾಲ ಬಯಲು ಇದ್ದಿದ್ದರೆ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಬಹುದಿತ್ತೇನೋ? ಅಥವಾ ಕಟ್ಟಡದ…

Read More

ಮೂಡುಬಿದಿರೆ: ಇತ್ತೀಚೆಗೆ ವಿಯೆಟ್ನಾಂನಲ್ಲಿ ಜರುಗಿದ ಎರಡನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಫ್‌ನಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯ 8 ಯೋಗಪಟುಗಳು ಭಾರತ ದೇಶವನ್ನು ಪ್ರತಿನಿಧಿಸಿ 8 ಚಿನ್ನದ ಪದಕವನ್ನು ಜಯಿಸುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲಿ 8 ಅಂತರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿಯನ್ನು ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು. ಸಬ್‌ಜ್ಯೂನಿಯರ್ ವಿಭಾಗದಲ್ಲಿ ಯಶಿಕ ಹಾಗೂ ಚಂದನ – ತಾಳಬದ್ದ ಯೋಗಾಸನದಲ್ಲಿ ಚಿನ್ನ, ಕೋಮಲ – ಕಲಾತ್ಮಕ ಯೋಗಾಸನದಲ್ಲಿ ಚಿನ್ನದ ಪದಕ ಪಡೆದರು. ಜ್ಯೂನಿಯರ್ ಹುಡುಗರ ವಿಭಾಗದಲ್ಲಿ ಪ್ರಜ್ವಲ್ – ಕಲಾತ್ಮಕ ಯೋಗಾಸನ ಹಾಗೂ ಪೃಥ್ವಿಚಾರ್ – ಸಂಪ್ರದಾಯಿಕ ಯೋಗಾಸನದಲ್ಲಿ ಚಿನ್ನದ ಪದಕ ಪಡೆದರು. ಜ್ಯೂನಿಯರ್ ಹುಡುಗಿಯರ ವಿಭಾಗದಲ್ಲಿ ಹಿಮಜ – ಸಂಪ್ರದಾಯಿಕ ಯೋಗಾಸನ ಹಾಗೂ ಅನನ್ಯ ಗುರವ್ – ಕಲಾತ್ಮಕ ಯೋಗಾಸನದಲ್ಲಿ ಚಿನ್ನ, ಸೀನಿಯರ್ ಹುಡುಗಿಯರ ವಿಭಾಗದಲ್ಲಿ ನಿರ್ಮಲ ಸುಭಾಷ್ ಕೊಡ್ಲಿಕರ್ – ಸಂಪ್ರದಾಯಿಕ ಯೋಗಾಸನದಲ್ಲಿ ಚಿನ್ನದ ಪದಕ ಪಡೆಯುವುದರ ಮೂಲಕ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದರು. ಪದಕ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ…

Read More

ವ್ಯಕ್ತಿತ್ವ ವಿಕಸನ ಮತ್ತು ತರಬೇತಿಯ ಅಂತಾರಾಷ್ಟ್ರೀಯ ಸಂಸ್ಥೆಯಾದ ಜೇಸಿಐನ ವಲಯ 15 ಮಧ್ಯಂತರ ಸಮ್ಮೇಳನದಲ್ಲಿ 53 ವರ್ಷಗಳ ಇತಿಹಾಸವಿರುವ ವಲಯದ ಅತ್ಯಂತ ದೊಡ್ಡ ಜೆಸಿಐ ಘಟಕವಾಗಿರುವ ಜೆಸಿಐ ಪುತ್ತೂರಿಗೆ 2025ರ ಸಾಲಿನಲ್ಲಿ ಡ್ರಗ್ಸ್ ಮುಕ್ತ ಪುತ್ತೂರು ಜಾಗೃತಿ ಕಾರ್ಯಕ್ರಮಗಳು, ವಿವಿಧ ವಿಶೇಷ ತರಬೇತಿ ಶಿಬಿರಗಳ ಆಯೋಜನೆಗಾಗಿ ವಿವಿಧ ಪ್ರಶಸ್ತಿಗಳ ಗೌರವ ಲಭಿಸಿದೆ. ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನವನ್ನು ಜೆಸಿಐ ಬೆಳ್ಮಣ್ಣು ಘಟಕವು ಜೂನ್ 8ರಂದು ಕಾರ್ಕಳ ನಿಟ್ಟೆಯ ಸನ್ಮಾನ್ ರೆಸಿಡೆನ್ಸಿಯಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಜೆಸಿಐ ಪುತ್ತೂರು ಘಟಕಕ್ಕೆ ಔಟ್ ಸ್ಟ್ಯಾಂಡಿಂಗ್ ಸ್ಪೆಷಲ್ ಪ್ರಾಜೆಕ್ಟ್ ಅವಾರ್ಡ್, ಔಟ್ ಸ್ಟ್ಯಾಂಡಿಂಗ್ ಲೋಕಲ್ ಆರ್ಗಾನೈಸೆಷನ್ ರನ್ನರ್ ಅವಾರ್ಡ್, ಡೈಮಂಡ್ ಲೋ ಅವಾರ್ಡ್ ದೊರಕಿದೆ. ಪ್ರಶಸ್ತಿಗಳನ್ನು ಜೆಸಿಐ ವಲಯ 15ರ ಅಧ್ಯಕ್ಷರಾದ ಜೆಸಿ ಅಭಿಲಾಷ್, ವಲಯ ಉಪಾಧ್ಯಕ್ಷರಾದ ಜೆಸಿ ಸುಹಾಸ್ ಮರಿಕೆರವರು ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಭಾಗ್ಯೇಶ್ ರೈ ಅವರಿಗೆ ಪ್ರಧಾನ ಮಾಡಿದರು. ಜೆಸಿಐ ಪುತ್ತೂರು ಘಟಕದ ಜಂಟಿ ಕಾರ್ಯದರ್ಶಿ ಜೆಸಿ ರಂಜಿನಿ ಶೆಟ್ಟಿ,…

Read More

ಒಮ್ಮೆ ಗಣೇಶ ಇಲಿಯ ಮೇಲೆ ಸಂಚಾರ ಮಾಡುತ್ತಾ ಚಂದ್ರಲೋಕಕ್ಕೆ ಬರುತ್ತಾನೆ. ಚಂದ್ರನೋ ಸರ್ವಾಂಗ ಸುಂದರ. ಅವನಿಗೆ ತನ್ನ ಸೌಂದರ್ಯದ ಮೇಲೆ ಅಪಾರ ಮಮತೆ. ವಿಕಟ ರೂಪನಾದ ಗಣಪನನ್ನು ಕಂಡು ಅಪಹಾಸ್ಯ ಮಾಡುತ್ತಾನೆ. ಜೋರಾಗಿ ನಗುತ್ತಾನೆ. ಗಣಪನಿಗೆ ಅಪಮಾನವಾಗುತ್ತದೆ. ಚಂದ್ರನಿಗೆ ಹೀಗೆ ಶಾಪ ನೀಡುತ್ತಾನೆ, ಎಲೈ ಚಂದ್ರ ನೀನು ಸೌಂದರ್ಯ ಮದದಿಂದ ಬೀಗುತ್ತಿದ್ದೀಯಾ ಮೂರ್ಖ ಅದಕ್ಕೆ ತಕ್ಕ ಫಲವನ್ನು ಅನುಭವಿಸು ನೀನೆಲ್ಲಾ ಗರ್ವ, ಅಜ್ಞಾನಕ್ಕೆ ಕಾರಣವಾದ ಸೌಂದರ್ಯ ಕುಂದಿ ಹೋಗಲಿ. ‘ಭಾದ್ರಪದ ಶುದ್ಧ ಚೌತಿಯಂದು ನಿನ್ನನ್ನು ನೋಡುವವರು ಅಪವಾದಕ್ಕೆ ಗುರಿಯಾಗಲಿ’ ಎಂದು ಶಪಿಸುತ್ತಾನೆ. ಶಾಪಗ್ರಸ್ತನಾದ ಕೂಡಲೇ ಚಂದ್ರನ ಅಹಂಕಾರ ಇಳಿದು ಹೋಗುತ್ತದೆ. ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಗಣೇಶನ ಮುಂದೆ ಭಯ ಭಕ್ತಿಗಳಿಂದ ಕೈ ಮುಗಿದು ನಿಂತು ‘ಸ್ವಾಮಿ, ನನ್ನ ಅಜ್ಞಾನವನ್ನು ಕ್ಷಮಿಸಿ ಬಿಡು ನನಗೆ ಕೊಟ್ಟ ಶಾಪವನ್ನು ಹಿಂತೆಗೆದುಕೊಂಡು ಉತ್ತರಿಸು ಎಂದು ಬೇಡಿಕೊಳ್ಳುತ್ತಾನೆ. ಗಣೇಶ ಚಂದ್ರನನ್ನು ಕ್ಷಮಿಸಿ, ‘ಚೌತಿಯ ದಿನ ನಿನ್ನನ್ನು ನೋಡಿ ಮಿಥ್ಯಾಪವಾದಕ್ಕೆ ಗುರಿಯಾದವರು ಶುದ್ಧ ಬಿದಿಗೆಯ ದಿನ ನಿನ್ನ…

Read More