Author: admin
ಒಡ್ಡೂರು ಫಾರ್ಮ್ಸ್ ನಲ್ಲಿ ನಿರ್ಮಾಣಗೊಂಡ ಹಸಿ ತ್ಯಾಜ್ಯದಿಂದ ಬಯೋ ಸಿ.ಎನ್.ಜಿ. ಉತ್ಪಾದನೆ ಮಾಡುವ ಘಟಕ ಒಡ್ಡೂರು ಎನರ್ಜಿಯನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲ್,ಮಂಗಳೂರು ಉತ್ತರ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಉಪಸ್ಥಿತರಿದ್ದರು. ಬಯೋ ಗ್ಯಾಸ್ ಉತ್ಪಾದನೆ, ಗೊಬ್ಬರ ಉತ್ಪಾದನೆಗೆ ಸಬ್ಸಿಡಿ, ಸವಲತ್ತು ನೀಡಲಾಗುವುದು, ಅವುಗಳನ್ನು ಬ್ರಾಂಡಿಂಗ್ ಮಾಡುವ ಕಾರ್ಯಕ್ಕೆ ಕೇಂದ್ರ ಪ್ರೋತ್ಸಾಹ ನೀಡಲಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ವತಿಯಿಂದ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮಿಲನ ನಡೆಯಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಐಕಳ ಹರೀಶ್ ಶೆಟ್ಟಿ ಮಾತನಾಡಿದರು. ಅಕ್ಟೋಬರ್ 28 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಕ್ರೀಡಾಕೂಟ ಜರಗಲಿದೆ. ಅಕ್ಟೋಬರ್ 29 ರಂದು ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ನಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಮಾಜ ಬಾಂಧವರನ್ನು ಒಂದೇ ಸೂರಿನಡಿಯಲ್ಲಿ ಸೇರಿಸುವ ಉದ್ದೇಶದಿಂದ ವಿಶ್ವ ಬಂಟರ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಮಿತಿಗಳನ್ನು ರಚಿಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದಲ್ಲಿ ಯುವಕ ಯುವತಿಯರನ್ನು ಸೇರಿಸಿ ಯುವ ವಿಭಾಗ ಸಮಿತಿಯನ್ನು…
ಅಂತರಂಗ ಸಾಧನೆಗೆ ಬೇಕು ಶ್ರೀರಂಗ ಅವನಲ್ಲಿ ಇಡಬೇಕು ನಿಜವಾದ ಸಂಗ ಪ್ರೀತಿಯಿಂದ ಕರೆಯುವ ರಂಗಾ ರಂಗ ಆಗ ನೆಲೆಯುವನು ಹೃದಯದಲಿ ದಯಾರಂಗ! ! ಅಂತರ್ಯಾಮಿ ಎಂದು ಅವನ ಹೆಸರು ಅವನೇ ನಮ್ಮ ಜೀವನದ ಉಸಿರು ನಾಮಗಳು ಸಾವಿರ ಒಬ್ಬನೇ ದೇವರು ದೇವರೇ ನಮ್ಮ ಜೀವನದ ಬೇರು! ! ಬಹಿರಂಗ ವಿಷಯ ಅವನದೇ ಮಾಯೆಯು ಬರುವ ಸುಖ: ದುಃಖ ಅವನದೇ ಕೃಪೆಯು ಬಯಕೆಗಳ ರಾಶಿಯನ್ನು ಹೊರುವ ಅಜ್ಞಾನಿಯು ಕ್ಷಣದಲ್ಲಿ ಬಿಡಬಹುದು ಆಗಿ ನೀ ಜ್ಞಾನಿಯು! ! ಜೀವನ ಆಸಕ್ತಿ ಮುಕ್ತಿ ಆಗಿರಬೇಕು ನಿತ್ಯಾ ನಿತ್ಯ ವಸ್ತು ವಿವೇಕ ಬೇಕೇಬೇಕು ಗುರುವೇ ಜೀವನದ ದಿವ್ಯ ಬೆಳಕು ಅಂತರಂಗ ಸಾಧನೆಗೆ ಗುರುವೇ ಬೇಕು! ! -ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ
ಮುಂಬಯಿ, (ಆರ್ಬಿಐ) ಫೆ.28 :ಗುರುಪುರ ಗೋಳಿದಡಿಗುತ್ತಿಗೆ ಹತ್ತಿರದ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳಲಿರುವ ದಕ್ಷಿಣ ಭಾರತದಲ್ಲೇ ಪ್ರಪ್ರಥಮವೆನ್ನಲಾದ ಶ್ರೀ ಗುರು ಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಕೆತ್ತನೆ ಕಾರ್ಯಕ್ಕೆ ಭಾನುವಾರ(ಫೆ. 26) ಚಾಲನೆ ನೀಡಲಾಯಿತು. ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಉಷಾ ಹಾಗೂ ಮಕ್ಕಳ ಸಮಕ್ಷಮದಲ್ಲಿ, ಪಾವಂಜೆಯ ಶ್ರೀ ನಿರಂಜನ್ ಭಟ್ ಮತ್ತು ಅಮೆರೇಶ್ ಭಟ್ ಅವರ ಪೌರೋಹಿತ್ಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ಬೆಳ್ತಂಗಡಿಯ ಶಿಲ್ಪಿ ವೆಂಕಟೇಶ್ ಆಚಾರ್ಯ ಅವರಿಗೆ ಕಾಲಭೈರವನ ಏಕಶಿಲಾಮೂರ್ತಿ ಕೆತ್ತನೆ ಕೆಲಸ ವಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ(ಎಸಿ) ಗುರುಪ್ರಸಾದ್, ಗುತ್ತು ಮನೆತನದ ಯಜಮಾನರು, ಗಡಿಕಾರರು, ಗಣ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಮೂರ್ತಿ ವಿಶೇಷ : ತಳಪಾಯದಿಂದ 5 ಹಂತದಲ್ಲಿ ಒಟ್ಟು 20 ಅಡಿ ಎತ್ತರದಲ್ಲಿ ಶಿಲಾಪೀಠ ನಿರ್ಮಾಣಗೊಳ್ಳಲಿದ್ದು, ಈ ಪೀಠದ ಮೇಲೆ 22 ಅಡಿ ಎತ್ತರದ ಆರು ಕೈಗಳ ಮಹಾಕಾಲೇಶ್ವರನ ಭವ್ಯ ಏಕಶಿಲಾ ಮೂರ್ತಿ ಸ್ಥಾಪನೆಯಾಗಲಿದೆ. ಬಯಲು…
ಬಂಟರ ಸಂಘ ಉಡುಪಿ ವತಿಯಿಂದ ಮಿಸ್ ಇಂಡಿಯಾ ಗೆದ್ದ ಸಿನಿ ಶೆಟ್ಟಿ ಅವರಿಗೆ ಅಮ್ಮಣ್ಣಿ ರಾಮಣ್ಣ ಆಡಿಟೋರಿಯಂ ಉಡುಪಿಯಲ್ಲಿ ಸನ್ಮಾನ ಕಾರ್ಯಕ್ರಮ ನೆರೆದ ಜನಸ್ತೋಮದೊಂದಿಗೆ ಬಹಳ ವಿಜೃಂಭನೆಯಿಂದ ನಡೆಯಿತು. ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಮೂಲದ ಇನ್ನಂಜೆ ಸದಾನಂದ ಶೆಟ್ಟಿ ಅವರ ಸುಪುತ್ರಿ ಸಿನಿ ಶೆಟ್ಟಿ ಮಿಸ್ ಇಂಡಿಯ ಆಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ವಹಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿನಿ ಶೆಟ್ಟಿ ಅವರು, “ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ. ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ನನಗೆ ಸಂತೋಷವಾಗಿದೆ. ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ ಎಂದು ಹೇಳಿದರು. ಉಡುಪಿ ಬಂಟರ ಸಂಘದ ಸಂಚಾಲಕ ಜಯರಾಜ್ ಹೆಗ್ಡೆ, ಇಂದ್ರಾಳಿ ಜಯಕರ್ ಶೆಟ್ಟಿ, ಉದ್ಯಮಿ,…
ಬಂಟರ ಸಂಘ ( ರಿ ) ಸುರತ್ಕಲ್ ಇದರ ವತಿಯಿಂದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಹೈನುಗಾರಿಕೆ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕೃಷಿಕರಿಗೆ ದೊರಕುವ ವಿವಿಧ ಯೋಜನೆ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ಫೆಬ್ರವರಿ 20ರಂದು ಭಾನುವಾರ ಸಂಜೆ 4 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹಿತಿ ಶಿಬಿರವನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ ಶೆಟ್ಟಿ ಸುರತ್ಕಲ್, ಎಕ್ಕಾರ್ ರೈತ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಎಕ್ಕಾರ್ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಅಬ್ದುಲ್ ಬಸೀರ್ ( ಕೃಷಿ ಅಧಿಕಾರಿ ಸುರತ್ಕಲ್) ಯುಗೇಂದ್ರ ( ಸಹಾಯಕ ತೋಟಗಾರಿಕ ಅಧಿಕಾರಿ ಸುರತ್ಕಲ್) ಡಾ! ಸುರೇಶ್ ( ಸಹಾಯಕ ನಿರ್ದೇಶಕರು ಪಶುಇಲಾಖೆ ಸುರತ್ಕಲ್) ಇವರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಕೃಷಿ,…
ಕೇಂದ್ರದ ಸಾಮಥ್ರ್ಯ ನಿರ್ಮಾಣ ಆಯೋಗ (ಮಾನವ ಸಂಪನ್ಮೂಲ)ದ ಸದಸ್ಯ ಡಾ.ಬಾಲಸುಬ್ರಹ್ಮಣ್ಯಂ ‘ಖಾಸಗಿ ಲಾಭದಲ್ಲೂ ಸಮಾಜದ ಒಳಿತಿರಲಿ’
ಮೂಡುಬಿದಿರೆ: ‘ಸಾರ್ವಜನಿಕ ಒಳಿತಿನೊಂದಿಗೆ ಖಾಸಗಿ ಲಾಭವನ್ನು ಬಯಸಿದಾಗ ಸಮಾಜದ ಅಭ್ಯುದಯ ಸಾಧ್ಯ’ ಎಂದು ಕೇಂದ್ರದ ಸಾಮಥ್ರ್ಯ ನಿರ್ಮಾಣ ಆಯೋಗ(ಮಾನವ ಸಂಪನ್ಮೂಲ)ದ ಸದಸ್ಯ ಡಾ. ಆರ್. ಬಾಲಸುಬ್ರಹ್ಮಣ್ಯಂ ಅಭಿಪ್ರಾಯ ಪಟ್ಟರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ‘ರೋಸ್ಟ್ರಮ್ – ದಿ ಸ್ಪೀಕರ್ಸ್ ಕ್ಲಬ್ ಸೋಮವಾರ ಹಮ್ಮಿಕೊಂಡ ‘ಟೀಮ್ ಇಂಡಿಯಾ ಫಾರ್ ಎ ನ್ಯೂ ಇಂಡಿಯಾ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನಾವು ಪ್ರಮುಖವಾಗಿ ಮೂರು ಬಿಕಟ್ಟನ್ನು ಎದುರಿಸುತ್ತಿದ್ದೇವೆ. ಅಗತ್ಯಕ್ಕಿಂತ ಹೆಚ್ಚು ಬಳಕೆಯ ಕಾರಣ ಪರಿಸರದ ಮೇಲಿನ ದುಷ್ಪರಿಣಾಮ, ಹೆಚ್ಚಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹಾಗೂ ಪ್ರಚಾರ ಪ್ರಿಯತೆಯ ಪರಿಣಾಮದ ಸ್ವಯಂ ಬಿಕ್ಕಟ್ಟು. ಇವುಗಳನ್ನು ಎಚ್ಚರಿಕೆಯಿಂದ ಪರಿಹರಿಸಿಕೊಳ್ಳಬೇಕಾಗಿದೆ’ ಎಂದು ಅವರು ವಿವರಿಸಿದರು. ‘ಅಭಿವೃದ್ಧಿಯನ್ನು ಕೇವಲ ವಿಜ್ಞಾನ, ತಂತ್ರಜ್ಞಾನ ಹಾಗೂ ಆರ್ಥಿಕತೆಯ ಪರಿಭಾಷೆಯಲ್ಲಿ ವಿಶ್ಲೇಷಿಸಬೇಡಿ. ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲದ ಪಾತ್ರ ಮಹತ್ತರ. ಒಬ್ಬ ಉತ್ತಮ ಉದ್ಯೋಗಿ ಮತ್ತು ಸಂಸ್ಥೆ ನಡುವಣ ಹಣ, ಬಾಂಧವ್ಯ, ಕಲಿಕೆ ಹಾಗೂ ಹೆಮ್ಮೆಯ ಸಂಬಂಧ ಬಹುಮುಖ್ಯ…
ಮುಂಬಯಿಯ ಹೆಸರಾಂತ ತೆರಿಗೆ ಸಲಹೆಗಾರ, ಜನಪ್ರಿಯ ಸಂಘಟಕ, ಸಾಮಾಜಿಕ ಚಿಂತಕ, ಸಾಹಿತ್ಯ ಪ್ರೇಮಿ, ಕಲಾಪೋಷಕ, ಮಹಾದಾನಿ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಯಶಸ್ಸಿನ ಹಾದಿಯಲ್ಲಿ ನಡೆದು ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಸಮಸ್ತ ಬಂಟ ಸಮಾಜದ ಮುಂದೆ ಇಡಲು ಇಚ್ಛಿಸುತ್ತಿದ್ದೇವೆ. ಇತಿಹಾಸ ಪ್ರಸಿದ್ಧ ಎಲ್ಲೂರು ಕ್ಷೇತ್ರ ಶ್ರೀಮಹತೋಭಾರ ವಿಶ್ವೇಶ್ವರ ದೇವರು ನೆಲೆನಿಂತ ಪುಣ್ಯ ಸ್ಥಳ. ಇಲ್ಲಿನ ಮಲ್ಲಬೆಟ್ಟು ಪರಾರಿ ಭೋಜ ಶೆಟ್ಟಿ ಹಾಗೂ ಅಜೆಕಾರು ಮೂಲದ ಪ್ರತಿಷ್ಠಿತ ಮನೆತನದ ಶ್ರೀಮತಿ ನಳಿನಾ ಶೆಟ್ಟಿ ದಂಪತಿಗೆ ಮುದ್ದಿನ ಮಗನಾಗಿ ಜನಿಸಿದ ಪ್ರವೀಣ್ ಶೆಟ್ಟಿ ತನ್ನ ಬಾಲ್ಯದ ದಿನಗಳಿಂದಲೇ ಪ್ರತಿಭಾವಂತರು. ಕನ್ನಡ ಸಾಹಿತ್ಯ, ಯಕ್ಷಗಾನ ಅವರ ಆಸಕ್ತಿಯ ವಿಷಯಗಳು. ಪ್ರವೀಣ್ ಶೆಟ್ಟಿ ಅವರ ತೀರ್ಥರೂಪರು ಇರಂದಾಡಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಓರ್ವ ಆದರ್ಶ ಶಿಕ್ಷಕರಾಗಿ ಪರಿಶ್ರಮಿ ಕೃಷಿಕರಾಗಿದ್ದ ಭೋಜ ಶೆಟ್ಟಿಯವರು ತನ್ನ ಶಿಸ್ತು, ಸಿದ್ಧಾಂತ ಬದ್ಧ ಜೀವನ ಶೈಲಿ, ತನ್ನ ದಿಟ್ಟ ನೇರ ನಡೆ ನುಡಿಗಳಿಂದ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ ದಿನಾಂಕ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮಿಲನದ ಪ್ರಯುಕ್ತ ನಡೆಯಲಿರುವ ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಕರಪತ್ರವನ್ನು ದಿನಾಂಕ 15/09/2023ರಂದು ಬೆಂಗಳೂರಿನ ಬಂಟರ ಸಂಘದಲ್ಲಿ ಅಧ್ಯಕ್ಷರಾದ ಶ್ರೀಯುತ ಎಂ ಮುರಲೀಧರ ಹೆಗ್ಡೆಯವರು ಬಿಡುಗಡೆ ಮಾಡಿದರು. ಜಾಗತಿಕ ಸಂಘಗಳ ಒಕ್ಕೂಟದ ಅದ್ಯಕ್ಷರಾದ ಶ್ರೀ ಐಕಳ ಹರೀಶ ಶೆಟ್ಟಿಯವರು ಕಾರ್ಯಕ್ರಮದ ವಿವರ ನೀಡಿ ಬೆಂಗಳೂರಿನ ಸಮಸ್ತ ಬಂಟರನ್ನು ಕಾರ್ಯಕ್ರಮಕ್ಕೆ ಪ್ರಿತಿಪೂರ್ವಕವಾಗಿ ಆಹ್ವಾನಿಸಿದರು. ಶ್ರೀ ಅಜಿತ್ ಶೆಟ್ಟಿ ಉಳ್ತೂರು ಇವರು ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಸಮಿತಿ ಸಂಚಾಲಕರಾದ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿಯವರು ಕಾರ್ಯಕ್ರಮದ ರೂಪುರೇಷೆ, ನಿಯಮಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಬೆಂಗಳೂರು ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ…
ಮೂಲ್ಕಿ ಬಂಟರ ಸಂಘದ ವತಿಯಿಂದ ಮೂಲ್ಕಿ ಬಂಟರ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ, ಆಟಿದ ತಮ್ಮನ ಅದ್ದೂರಿ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಮಂಗಳೂರು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಆಡಳಿತ ನಿರ್ದೇಶಕ ಡಾ ಎ. ಸದಾನಂದ ಶೆಟ್ಟಿಯವರಿಗೆ 2023-24 ನೇ ಸಾಲಿನ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನಿಸಿ ಗೌರವಿಸಲಾಯಿತು. ಮೂಲ್ಕಿ ಬಂಟರ ಸಂಘದ 2022-24ನೇ ಸಾಲಿನ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ ಹಾಗೂ ಆಟಿದ ತಮ್ಮನದ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಧಕರ ನೆಲೆಯಲ್ಲಿ ಕರುಣಾಕರ ಶೆಟ್ಟಿ ಉಳೆಪಾಡಿ ಮುಗೇರಬೆಟ್ಟು ( ಕೃಷಿ ಕ್ಷೇತ್ರ ), ಸಾಯಿನಾಥ ಶೆಟ್ಟಿ ಮುಂಡ್ಕೂರು ( ಶಿಕ್ಷಣ ಕ್ಷೇತ್ರ ), ಡಾ. ಹರಿಪ್ರಸಾದ್…