Author: admin
ಜನವರಿ 7 ರಂದು ಏಕ ವಿಂಶತಿ ವರ್ಷದ ಮಕ್ಕಳ ವಾರ್ಷಿಕ ಪರ್ವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಸಂಭ್ರಮಾಚರಣೆಯಲ್ಲಿ ಚಿಣ್ಣರ ಬಿಂಬ
ಮಾನವೀಯ ಮೌಲ್ಯಗಳಿಲ್ಲದ ಮನುಷ್ಯ ಚಿಗುರೊಡೆಯದ ಕೊರಡಿನಂತೆ, ಬರಡಾದ ಬಂಜರು ಭೂಮಿಯಂತೆ, ಘಮವಿಲ್ಲದ ಹೂವಿನಂತೆ, ಎಲೆಗಳಿಲ್ಲದ ಬೋಳು ವೃಕ್ಷದಂತೆ..! ಹೌದು, ಘಮವಿಲ್ಲದ ಹೂವಿನಲ್ಲಿ ಪರಿಮಳವನ್ನು ಆಘ್ರಾಣಿಸಲು ಸಾಧ್ಯವೇ? ಬೋಳು ವೃಕ್ಷದಲ್ಲಿ ನಿಸರ್ಗದ ಸೊಬಗನ್ನು ಆಸ್ವಾದಿಸಬಹುದೇ? ಬಂಜರು ಭೂಮಿಯಲ್ಲಿ ಸೃಷ್ಟಿಯ ಚೆಲುವನ್ನು ಸವಿಯಲು ಸಾಧ್ಯವೇ ? ಖಂಡಿತಾ ಸಾಧ್ಯವಿಲ್ಲ…! ಹಾಗೆಯೇ ಒಬ್ಬ ವಿದ್ಯಾವಂತನಾಗಿದ್ದು ಹಣವಂತನಾಗಿದ್ದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದರೂ ಕೂಡಾ ಆತನಲ್ಲಿ ಉತ್ತಮ ನಡವಳಿಕೆಗಳು, ಸಂಸ್ಕಾರವು ಇಲ್ಲದಿದ್ದರೆ ಆತನು ಮೃಗಗಳಿಗೆ ಸಮಾನ. ಮಾನವೀಯ ಮತ್ತು ನೈತಿಕ ಮೌಲ್ಯಗಳು ಒಬ್ಬ ವ್ಯಕ್ತಿಯ ಬದುಕನ್ನು ಸುಂದರವಾಗಿಸುವುದಲ್ಲದೆ ಸಮಾಜದಲ್ಲಿ ಗೌರವ, ಘನತೆ ವೃದ್ಧಿಸಿ ಆತನನ್ನು ಉಚ್ಚ ಮಟ್ಟಕ್ಕೇರಿಸುತ್ತದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಮಿಳಿತವಾದರೆ ಮಾತ್ರ ಅವರು ಸದ್ಗುಣ ಸಂಪನ್ನರಾಗಬಹುದು. ಇವನ್ನೆಲ್ಲಾ ಮನಗಂಡು ಮಕ್ಕಳಿಗಾಗಿ ಸಂಸ್ಕೃತಿ ಸಂಸ್ಕಾರವನ್ನು ತಿಳಿಸಿ ಅವರನ್ನು ಉತ್ತಮ ಮನುಷ್ಯರನ್ನಾಗಿ ಮಾಡಬೇಕೆಂಬ ಹಿತಾಸಕ್ತಿಯಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ಚಿಣ್ಣರ ಬಿಂಬ. ಅಂತಹ ಒಂದು ವಿಶೇಷವಾದ ಶಿಕ್ಷಣವನ್ನು ನೀಡುವ ಗುರುಕುಲದಂತೆ ಕೆಲಸ ಮಾಡಿ ಇದು ಮಾನ್ಯತೆ ಪಡೆಯುತ್ತದೆ. ಚಿಣ್ಣರ ಬಿಂಬವು…
ದೇಶದಲ್ಲಿ ಉಳಿತಾಯಕ್ಕೆ ಬದಲಾಗಿ ವೈಯಕ್ತಿಕ ಸಾಲ ಪಡೆಯುತ್ತಿರುವ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಇದು ಸುಸ್ಥಿರ ಆರ್ಥಿಕ ಬೆಳವಣಿಗೆಯ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯಲ್ಲ. ಇದಕ್ಕೆ ನಿಯಂತ್ರಣ ಹೇರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮತ್ತು ಕೆಲವು ಆರ್ಥಿಕ ತಜ್ಞರು ಹೇಳಿದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಆರ್ಬಿಐಯೇ ಅಂಗಳಕ್ಕೆ ಇಳಿದಿದೆ. ಅತಿಯಾದ ಸಾಲ ನೀಡುವಿಕೆಗೆ ಅಂಕುಶ ಹಾಕಿದೆ. ಇದರಿಂದ ಸಾಮಾನ್ಯ ಸಾಲಗಾರರಿಗೆ ಏನಾಗಲಿದೆ. ಇದುವರೆಗೆ ಸುಲಭದಲ್ಲಿ ಸಿಗುತ್ತಿದ್ದ ವೈಯಕ್ತಿಕ ಸಾಲ ಇನ್ನು ಆ ರೀತಿ ಸಿಗುವುದಿಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರದ್ದು. ಮೊದಲನೆಯದಾಗಿ ಆರ್ಬಿಐ ಇಂತಹ ಒಂದು ಕ್ರಮಕ್ಕೆ ಮುಂದಾಗಿದ್ದಾದರೂ ಏಕೆ ಎಂಬುದಾಗಿ ವಿಶ್ಲೇಷಿಸುವು ದಾದರೆ, ದೇಶದಲ್ಲಿ ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು (ಎನ್ಬಿಎಫ್ಸಿ) ಬೇಕಾಬಿಟ್ಟಿಯಾಗಿ ಸಾಲ ನೀಡಿರುವುದು. ಇದು ಅತಿಯಾದರೆ ಒಂದಲ್ಲ ಒಂದು ರೀತಿಯಲ್ಲಿ ಅಪಾಯಕ್ಕೆ ದಾರಿಯಾಗುತ್ತದೆ. ಸಾಲ ನೀಡುವ ಇಂತಹ ಸಂಸ್ಥೆಗಳು ಉಳಿಯುವುದು ಮತ್ತು ಒಟ್ಟಾರೆ ದೇಶದ ಹಣಕಾಸು ಸಂಸ್ಥೆಗಳು ಸುಸ್ಥಿರವಾಗಿರಬೇಕಾದರೆ ಇಂತಹ ನಿಯಮ ಅನಿವಾರ್ಯ ಎಂಬುದು ಆರ್ಬಿಐ…
ರಸ್ತೆ ಸುರಕ್ಷತೆ ಎಂಬುದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಕಡಿವಾಣ ಹಾಕುವುದು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಬಲುದೊಡ್ಡ ಸವಾಲಾಗಿದೆ. ಈ ಸಂಬಂಧ ಜಾಗತಿಕ ರಸ್ತೆ ಸುರಕ್ಷತೆಗಾಗಿನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಜೀನ್ ಟಾಡ್ ಅವರೂ ಆತಂಕ ವ್ಯಕ್ತಪಡಿಸಿದ್ದು, ಪ್ರತಿನಿತ್ಯ ವಿಶ್ವಾದ್ಯಂತ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕೈಗೊಳ್ಳುತ್ತಿರುವ ಕ್ರಮಗಳು ಪರ್ಯಾಪ್ತವಾಗಿಲ್ಲ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಪ್ರತೀ ವರ್ಷ ವಿಶ್ವಾದ್ಯಂತ 13 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವ ಪ್ರತೀ ಹತ್ತು ಮಂದಿಯಲ್ಲಿ 9 ಮಂದಿಯ ಜೀವವನ್ನು ಉಳಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಮಕ್ಕಳು ಮತ್ತು 5-29 ವರ್ಷದೊಳಗಿನವರ ಸಂಖ್ಯೆಯೇ ಅಧಿಕ ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ. ಇದೇ ವೇಳೆ ಭಾರತದಲ್ಲಿ ಪ್ರತೀ…
ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಆಹಾರ್ ತನ್ನ ಬಹು ನಿರೀಕ್ಷೆಯ ಶೂನ್ಯ ಕಮಿಷನ್ ಆಧಾರಿತ ಫುಡ್ ಡೆಲಿವರಿ ಆ್ಯಪ್ “ವಾಯು’ ವನ್ನು ಅಂಧೇರಿ ಪೂರ್ವದ ಫೈವ್ ಸ್ಟಾರ್ ಹೊಟೇಲ್ ಲೀಲಾದಲ್ಲಿ ಬಿಡುಗಡೆಗೊಳಿಸಿತು. ಆಹಾರ್ ಮತ್ತು ಹೊಟೇಲ್ ಉದ್ಯಮದ ಇತರ ಪ್ರಮುಖ ಸಂಘಗಳ ಬೆಂಬಲದೊಂದಿಗೆ ಪುಣೆಯ ಪ್ರಮುಖ ತಂತ್ರಜ್ಞಾನ ಕಂಪೆನಿಯಾದ ಡೆಸ್ಟೆಕ್ ಹೊರೇ ಕಾದಿಂದ ನುರಿತ ಸೀರಿಯಲ್ ಟೆಕ್ ಉದ್ಯಮಿಗಳಾದ ಅನಿರುದ್ಧ ಕೋಟ್ಗಿರೆ ಮತ್ತು ಮಂದರ್ ಲಾಂಡೆ ಅವರು ವಾಯು ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ನಟ, ಅನುಭವಿ ಹೊಟೇಲ್ ಉದ್ಯಮಿ ಸುನೀಲ್ ಶೆಟ್ಟಿ ಅವರನ್ನು ಆ್ಯಪ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಆಹಾರ್ ಅಧ್ಯಕ್ಷ ಸುಕೇಶ್ ಶೆಟ್ಟಿ ಮಾತಾನಾಡಿ, ಸಾಂಪ್ರದಾಯಿಕವಾಗಿ ನಮ್ಮ ಪೂರ್ವಜರು ತಮ್ಮದೇ ಆದ ರೀತಿಯಲ್ಲಿ ವ್ಯವಹಾರವನ್ನು ಮಾಡಿದರು. ತಮ್ಮ ಸಂಸ್ಥೆಗಳ ಖ್ಯಾತಿಯನ್ನು ಸಂಪೂರ್ಣ ಕಠಿನ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ನಿರ್ಮಿಸಿದರು. ಅದೇ ರೀತಿ ಕಿರಿಯ ತಲೆಮಾರುಗಳು ಸಹ ಅನೇಕ ನವೀನತೆಗಳೊಂದಿಗೆ ಸಮಂಜಸವಾದ ಬೆಲೆಯಲ್ಲಿ ರುಚಿಕರವಾದ ಆರೋಗ್ಯಕರ ಆಹಾರವನ್ನು ಒದಗಿಸುವ…
ಕನ್ನಡ ಸೇವಾ ಸಂಘದ ಕಟ್ಟಡದ ಎದುರಿನ ಮಾರ್ಗದ ಚೌಕಕ್ಕೆ ಪೇಜಾವರ ಶ್ರೀಗಳ ಹೆಸರನ್ನು ಮುಂಬಯಿ ನಗರ ಪಾಲಿಕೆಯ ನಗರ ಸೇವಕಿ ಶ್ರೀಮತಿ ಅಶ್ವಿನಿ ಆಶೋಕ್ ಮಾಟೆಕರ್ ಇವರ ಶಿಫಾರಸ್ಸಿನಂತೆ ಅನಾವರಣ ಗೊಳಿಸಿತು. ಚೌಕ ಉದ್ಘಾಟನೆಯನ್ನು ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಆರ್ ಜಿ ಶೆಟ್ಟಿಯವರು ತೆಂಗಿನ ಕಾಯಿ ಹೊಡೆದು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಗರ ಸೇವಕಿಯ ಪತಿ ಅಶೋಕ್ ಮಾಟೆಕರ್ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ನಾಣಯರ ಗರಡಿ ಪ್ರಭಾಕರ ಶೆಟ್ಟಿ, ಕಯ್ಯಾರ ಗುತ್ತು ರಮೇಶ್ ಡಿ ರೈ, ಸುಧಾಕರ ಜಿ ಪೂಜಾರಿ, ಕಾರ್ಯದರ್ಶಿ ನಾಗರಾಜ ಗುರುಪುರ, ಕೋಶಾಧಿಕಾರಿ ಸಂದೇಶ ಶೆಟ್ಟಿ ಬೆಳ್ಳೆ, ರಾಜೇಶ್ ಆರ್ ಪೂಜಾರಿ, ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷೆ ಪ್ರಶಾಂತಿ ಡಿ ಶೆಟ್ಟಿ, ಮಹಿಳಾ ವಿಭಾಗದ ಸಲಹೆಗರಾದ ಶ್ರೀಮತಿ ಶೈಲ ಎಸ್ ಶೆಟ್ಟಿ. ಶ್ರೀಮತಿ ಜ್ಯೋತಿ ಆರ್ ಜಿ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಶ್ರೀಮತಿ ರೇಖಾ…
ನಿಟ್ಟೆ ವಿಶ್ವವಿದ್ಯಾಲಯದ ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂಲ್ಕಿ ಜೀವನ್ ಕೆ. ಶೆಟ್ಟಿ
ನಿಟ್ಟೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ ಸುಮಾರು 21000 ಸದಸ್ಯರಿದ್ದ ಹಳೆ ವಿದ್ಯಾರ್ಥಿ ಸಂಘ Wenamitaa ಇದರ 2023-25 ರ ಸಾಲಿನ ನೂತನ ಅಧ್ಯಕ್ಷರಾಗಿ ಮೂಲ್ಕಿ ಶ್ರೀ ಜೀವನ್ ಕೆ. ಶೆಟ್ಟಿಯವರು ದಿನಾಂಕ 30-12-2023 ರಂದು ನಿಟ್ಟೆ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಜೀವನ್ ಕೆ. ಶೆಟ್ಟಿ ಇವರು 1996 ರಲ್ಲಿ Bachelor in Civil Engineer (B.E.) ಹಾಗೂ 2015ರಲ್ಲಿ Master of Construction Technology (M.Tech) ನಲ್ಲಿ ಪದವಿ ಪಡೆದಿರುತ್ತಾರೆ. 1996 ರಿಂದ 1998 ರವರೆಗೆ NRAM ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ (ACEM) ನ ಸ್ಥಾಪಕಾಧ್ಯಕ್ಷರಾಗಿ, ಇಂಡಿಯನ್ ರೋಡ್ ಕಾಂಗ್ರೆಸ್ (IRC) ನವದೆಹಲಿ ಇದರ ಖಾಯಂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಿರಂಜನ್ ಚಿಪ್ಲೋಂಕರ್, ಡೈರೆಕ್ಟರ್ ಗಳಾದ ಯೋಗೀಶ್ ಹೆಗ್ಡೆ, ಪ್ರಸನ್ನ…
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಅವರಿಗೆ ಸಹಕಾರ ಇಲಾಖೆ ನೀಡುವ ರಾಜ್ಯಮಟ್ಟದ “ಸಹಕಾರ ರತ್ನ” ಪ್ರಶಸ್ತಿಯನ್ನು ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಮೋನಪ್ಪ ಶೆಟ್ಟಿ ಅವರ 4 ದಶಕಗಳಿಗೂ ಹೆಚ್ಚು ಅವಧಿಯ ಸಹಕಾರ ಕ್ಷೇತ್ರದಲ್ಲಿನ ಸೇವೆ ಹಾಗೂ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಸಮಗ್ರ ಪ್ರಗತಿಯನ್ನು ಪರಿಗಣಿಸಿ ರಾಜ್ಯ ಸರಕಾರ “ಸಹಕಾರ ರತ್ನ” ಪ್ರಶಸ್ತಿ ನೀಡಿದೆ. ಸಹಕಾರ ಸಚಿವ ಎನ್. ರಾಜಣ್ಣ, ಜವುಳಿ, ಕಬ್ಬು, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಿರಿಯ ಸಹಕಾರಿ ಮುಖಂಡ ಶಿವಾನಂದ ಎಸ್, ಅಬಕಾರಿ ಸಚಿವ ತಿಮ್ಮಾಪುರ್, ರಾಜ್ಯ ಸಹಕಾರಿ ಫೆಡರೇಶನ್ ಅಧ್ಯಕ್ಷ ಮಾಜಿ ಸಚಿವ ಜಿ.ಟಿ. ದೇವೇಗೌಡ, ಸಂಸದ ರಮೇಶ್ ಜಿಗಜಿಣಗಿ, ಸಂಸದ ಪಿ.ಸಿ. ಗದ್ದಿಗೌಡರ ಉಪಸ್ಥಿತರಿದ್ದರು
ಹಬ್ಬಗಳ ಆಚರಣೆ ಕೇವಲ ಧಾರ್ಮಿಕತೆಗಳಿಗಷ್ಟೇ ಸೀಮಿತವಾಗಿರದೆ ಜೀವನದ ಸ್ವಾರಸ್ಯ ಹಾಗೂ ಪ್ರೀತಿ – ಬಾಂಧವ್ಯದ ಸಂಕೇತವೂ ಹೌದು. ಸಮೂಹ ಹಾಗೂ ಕುಟುಂಬದ ಹಿತ ಚಿಂತನೆಯು ಹಬ್ಬಗಳ ಮುಖ್ಯ ಆಶಯ. ಕುಟುಂಬ ಸಾಮರಸ್ಯದ ಪ್ರತೀಕವಾಗಿ ಬೆಳೆದು ಬಂದ ಹಬ್ಬ ರಕ್ಷಾಬಂಧನ. ಶ್ರಾವಣ ಮಾಸ ಪ್ರಾರಂಭವಾಗುತ್ತಲೇ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಹುಣ್ಣುಮೆಯ ದಿನ ಆಚರಿಸುವ ಸೋದರ – ಸೋದರಿಯರ ಪವಿತ್ರ ಸಂಬಂಧವನ್ನು ಬೆಸೆಯುವ ಸಾಂಪ್ರದಾಯಿಕ ಹಬ್ಬ ರಕ್ಷಾಬಂಧನ ಅಥವಾ ರಾಖಿ ಹಬ್ಬ. ಪರಂಪರಾಗತವಾಗಿ ಆಚರಿಸಿಕೊಂಡು ಬರುವ ಹಬ್ಬ ಹರಿ ದಿನಗಳಲ್ಲಿ ಹಿರಿಯರು ಕೌಟುಂಬಿಕ ಬಾಂಧವ್ಯದ ಬೆಸುಗೆಗೆ ಕಂಡುಕೊಂಡ ಸಂಪ್ರದಾಯಗಳ ಆಚರಣೆಯ ಸಂಬಂಧಗಳನ್ನು ಗಟ್ಟಿಗೊಳಿಸಿವೆ. ಆತ್ಮೀಯ ಭ್ರಾತೃ ಸಂಬಂಧವನ್ನು ಭಾವ ಬಂಧದ ಮೂಲಕ ಬಂದಿಸುವ ಹಬ್ಬವೇ ರಕ್ಷಾ ಬಂಧನ. ಸಹೋದರರ ಯೋಗ ಕ್ಷೇಮ ಹಾರೈಸಿ, ತಮ್ಮ ರಕ್ಷಣೆಯ ಭಾರವನ್ನು ನೆನಪಿಸುವ ಹಬ್ಬವಿದು. ಅಣ್ಣ – ತಂಗಿಯರ ಬಾಂಧವ್ಯದ ಅನುಪಮ ಸಂಕೇತವಾಗಿರುವ ರಕ್ಷಾ ಬಂಧನದಂದು ಸಹೋದರಿಯರು ಸಹೋದರರ ಕೈಗೆ ರಾಖಿ ಕಟ್ಟುವುದೇ ಈ ಹಬ್ಬದ…
ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆಯಲ್ಲಿ ಮುರಳೀಧರ ಹೆಗ್ಡೆ ಅವರ ತಂಡ ಗೆಲುವು ಸಾಧಿಸಿದೆ. ಒಟ್ಟು 68 ಬೂತ್ ಗಳಲ್ಲಿ ನಡೆದ ಮತದಾನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೃಥ್ವಿರಾಜ್ ರೈ ಕೆ ಬಿ ವಿರುದ್ಧ ಮುರಳೀಧರ್ ಹೆಗ್ಡೆ ಅವರು ಸ್ಪರ್ಧಿಸಿ 5,000 ಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಡಾ ಜಗದೀಶ್ ವಿ ಶೆಟ್ಟಿ, ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾಂಜಲಿ ಡಿ ಅಜಿಲ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಆನಂದರಾಮ ಶೆಟ್ಟಿ, ಸಹಕಾರ್ಯದರ್ಶಿ ಸ್ಥಾನಕ್ಕೆ ಶ್ಯಾಮಲಾ ಶೆಟ್ಟಿ, ಖಜಾಂಚಿ ಸ್ಥಾನಕ್ಕೆ ಅಮರನಾಥ್ ಶೆಟ್ಟಿ ಅವರುಗಳು ಸ್ಪರ್ಧಿಸಿ ಭರ್ಜರಿ ಗೆಲುವನ್ನು ಕಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರವಿಂದ ಶೆಟ್ಟಿ, ಜಯಶ್ರೀ ಸಿ ರೈ, ಕೀರ್ತನ್ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ, ಸಿ ಎ ಕಿಶೋರ್ ಶೆಟ್ಟಿ, ಮಾಲತಿ ಜೆ ಶೆಟ್ಟಿ, ನಿರಂಜನ್ ಶೆಟ್ಟಿ, ರಮೇಶ್ ಶೆಟ್ಟಿ, ಸದಾನಂದ ಸುಲಯ, ಸಂದೀಪ್ ಶೆಟ್ಟಿ, ಸತೀಶ್ ಕುಮಾರ್ ಶೆಟ್ಟಿ, ಶೋಭಾ ಶೇಖ,…
ಪಿಎಚ್ ಡಿ ಪದವಿ ಪಡೆದ ಡಾ. ಸುಧಾರಾಣಿ ಶೆಟ್ಟಿ ಅವರಿಗೆ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯಿಂದ ಸನ್ಮಾನ ಸಮಾರಂಭ ಜರಗಿತು. ಬಂಟರ ಭವನದಲ್ಲಿ ನಡೆದ ಇಡ್ಯಾ ಗ್ರಾಮದ ವಲಯ ಸಂಘಟನಾ ಕಾರ್ಯಕ್ರಮದಲ್ಲಿ ಸುಧಾರಾಣಿ ಅವರು ಪಿಎಚ್ ಡಿ ಪದವಿ ಪೂರೈಸಿದ ಹಿನ್ನಲೆಯಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿಯವರು ವಹಿಸಿದ್ದರು. ಸುಧಾರಾಣಿ ಶೆಟ್ಟಿಯವರು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ಈಗ ಪಿಎಚ್ ಡಿ ಪದವಿಯನ್ನು ಪೂರೈಸಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾರಾಣಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮನೆಯ ವಾತಾವರಣ ಮಹಿಳಾ ವೇದಿಕೆಯ ಸಂಘಟನೆಯಲ್ಲಿ ಕಾಣಬಹುದು ಎಂದರು. ಇದೇ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಮಹಿಳಾ ವೇದಿಕೆಯ ಜತೆ ಕಾರ್ಯದರ್ಶಿ, ಜೆಸಿಐಯ ಅಂತರಾಷ್ಟ್ರೀಯ ತರಬೇತುದಾರೆ ರಾಜೇಶ್ವರಿ ಡಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಶೆಟ್ಟಿ ಸಂಘಟನೆಯ ಕುರಿತು ಕಾರ್ಯಾಗಾರ ನಡೆಸಿದರು. ಸಂಘಟನೆಯ…