Author: admin

ಸಾಮಾನ್ಯ ಅರ್ಥದಲ್ಲಿ ಗ್ರಹಣ ಅಂದರೆ ಹಿಡಿಯುವುದು ಎಂದು. ಪಾಣಿ ಗ್ರಹಣ ಅಂದರೆ ಕೈ ಹಿಡಿಯುವುದು. ಆದರೆ ನಾವು ಸೂರ್ಯ ಚಂದ್ರರಿಗೆ ಗ್ರಹಣ ಹಿಡಿಯುವುದು (ಬಿಡುವುದು) ಎನ್ನುತ್ತೇವೆ. ರಾಹುಗ್ರಸ್ತ ಸೂರ್ಯ, ಚಂದ್ರ ಅಂತಲೂ ಹೇಳುತ್ತೇವೆ. ಮೋಹಿನಿಯ ರೂಪದಲ್ಲಿ ವಿಷ್ಣು ಸುರರಿಗೆ ಅಮೃತ ಬಡಿಸುವಾಗ, ಅಸುರನಾದ ಸ್ವರ್ಭಾನು ವೇಷ ಮರೆಸಿ ಸುರ ಪಂಕ್ತಿಯಲ್ಲಿ ಕುಳಿತು ಅಮೃತ ಸೇವನೆ ಮಾಡಿದನಂತೆ. ಅದನ್ನು ಸೂರ್ಯ ಚಂದ್ರರು ವಿಷ್ಣುವಿಗೆ ತಿಳಿಸಿದ ತಕ್ಷಣ ಆತ ಚಕ್ರದಿಂದ ಇವನ ತಲೆ ಕತ್ತರಿಸಿದ. ಆಮೃತ ಕುಡಿದ ದೆಸೆಯಿಂದಾಗಿ ಆತ ಸಾಯಲಿಲ್ಲ. ರುಂಡ ರಾಹುವಿನ ಹೆಸರಲ್ಲಿ, ಮುಂಡ ಕೇತವಿನ ಹೆಸರಲ್ಲಿ ಸೌರಮಂಡಲದಲ್ಲಿ ಸುತ್ತುತ್ತಾ ಸೂರ್ಯ ಚಂದ್ರರನ್ನು ಪೀಡಿಸುತ್ತಾರೆ. ರಾಹು ನವಗ್ರಹಗಳಲ್ಲಿ ಎಂಟನೆಯವನಂತೆ. ಎಂತಹ ಮೋಸ, ಸುರಾಸುರರು ಒಟ್ಟಾಗಿ ಸಮುದ್ರ ಮಂಥನ ಮಾಡಿ, ಬಂದ ಅಮೃತ ತಾವು ಮಾತ್ರ ಸೇವಿಸಿದ್ದಲ್ಲದೆ, ಕುಡಿದ ಒಬ್ಬ ಅಸುರರನ್ನು ನಾಶಗೊಳಿಸಿದರು. ಇಂತಹ ಒಂದು ಕಟ್ಟು ಪುರಾಣದ ಅಗತ್ಯ ಏತಕ್ಕೆ ಬಂತು? ತಿಳಿಯಲಾರೆ. ಖಗೋಳಶಾಸ್ತ್ರದ ಪ್ರಕಾರ ಭೂಮಿಯ ನೆರಳು ಚಂದ್ರನ ಮೇಲೆ…

Read More

ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಅಪರಿಮಿತ ಜ್ಞಾನ ಸಿದ್ಧಿಯಾಗುತ್ರದೆ. ಸಂಸ್ಕೃತ ಭಾಷೆಯ ಸಂಭಾಷಣೆಯಿಂದ ಮನಸ್ಸಿನ ಸ್ಥಿತಿ ಅತ್ಯಂತ ಶುದ್ಧವಾಗುತ್ತದೆ. ಸಂಸ್ಕೃತ ತಿಳಿದವರು ಎಲ್ಲರ ಜತೆ ಸಂಸ್ಕೃತದಲ್ಲೇ ಸಂಭಾಷಣೆ ಮಾಡುವ ಮೂಲಕ ಭಾಷೆಯನ್ನು ಎಲ್ಲೆಡೆ ಪಸರಿಸಲು ಪ್ರಯತ್ನಿಸಬೇಕು ಎಂದು ಸಂಸ್ಕೃತ ಭಾರತೀಯ ಅಖಿಲ ಭಾರತ ಸಹಶಿಕ್ಷಣ ಪ್ರಮುಖ ಡಾ. ಸಚಿನ್ ಕಠಾಳೆ ಹೇಳಿದ್ದಾರೆ. ಸಂಸ್ಕೃತ ಭಾರತೀ ಮಂಗಳೂರು ವತಿಯಿಂದ ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲ್ ನ ಶ್ರೀ ಸುಧೀಂದ್ರ ಸಭಾಭವನದಲ್ಲಿ ನಡೆದ ಸಂಸ್ಕೃತ ಮಹೋದಧಿ ಜನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಸಂಸ್ಕೃತದಲ್ಲಿದೆ. ಭಾರತದಲ್ಲಿ ಯಾವುದೆಲ್ಲ ಉತ್ತಮವಾದುದು ಇದೆಯೋ ಅದನ್ನು ರಕ್ಷಿಸಬೇಕು. ಯಾವುದು ಕೆಡುಕು ಬಯಸುತ್ತದೋ ಅದನ್ನು ನಾಶ ಮಾಡಬೇಕು. ಧರ್ಮ ಪಾಲನೆಯೇ ಧರ್ಮ ರಕ್ಷಣೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಸಂಸ್ಕೃತ ಭಾರತೀ ಅಧ್ಯಕ್ಷ ಎಂ. ಆರ್. ವಾಸುದೇವ ಮಾತನಾಡಿ, ಸಂಸ್ಕೃತ ಭಾಷೆಯು ಭಾರತೀಯ ಭಾಷೆಗಳಿಗೆ ತಾಯಿ ಸ್ಥಾನದಲ್ಲಿದೆ. ಎಲ್ಲಾ ಕಲೆಗಳಿಗೂ, ವಿಜ್ಞಾನಕ್ಕೂ ಸಂಸ್ಕೃತದ…

Read More

ವಿದ್ಯಾಗಿರಿ: “ಉತ್ತಮ ಸಮಾಜವನ್ನು ಕಟ್ಟುವುದರಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ, ಶಿಕ್ಷಕರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಇರಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಸಾಧ್ಯ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್  ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್‍ವತಿಯಿಂದ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿಯು ಶೈಕ್ಷಣಿಕ ಹಿನ್ನೆಲೆಯನ್ನು ಅವಲಂಬಿಸಿದೆಯೇ ಹೊರತು ಜಾತಿ ಧರ್ಮವನ್ನಲ್ಲ. ಪರಿಶಿಕ್ಷಣಾರ್ಥಿಗಳಾಗಿ ಮಕ್ಕಳಿಗೆ ಯಾವ ವಿಷಯವನ್ನು ಹೇಗೆ ಕಲಿಸಬೇಕು ಎಂಬುದನ್ನು ತಿಳಿಯುವುದು ಬಹು ಮುಖ್ಯ. ಇದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು. ಶಿಕ್ಷಕರು ತಾವು ಉತ್ತಮ ಆದರ್ಶಗಳನ್ನು ಪಾಲಿಸುತ್ತಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಸಮಾಜದ ಮಾದರಿ ಪ್ರಜೆಗಳಾಗಿ ರೂಪಿಸಲು ಸಾಧ್ಯ ಎಂದರು. ಶಿಕ್ಷಕರಿಗೆ ಮೊದಲು ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಇರಬೇಕು. ನಂತರ ವಿದ್ಯಾರ್ಥಿಗಳಿಗೆ ಅವುಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು. ಸ್ಕೌಡ್ಸ್ ಮತ್ತು ಗೈಡ್ಸ್ ನಮಗೆ ಸೌಹಾರ್ದತೆಯಿಂದ ಬದುಕಲು…

Read More

ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಸಂಸ್ಕಾರಕ್ಕೆ ತನ್ನದೇ ಆದ ಮಹತ್ವವಿದೆ. ಹುಡುಗಿ ನೋಡುವ ಶಾಸ್ತ್ರದಿಂದ ಮೊದಲುಗೊಂಡು ವಿವಾಹ ನೆರವೇರಿಸಿ ಹುಡುಗಿಯನ್ನು ಗಂಡನ ಮನೆಗೆ ಕಳುಹಿಸುವ ತನಕವೂ ಆನೇಕ ವಿಧದ ಶಾಸ್ತ್ರಗಳು, ಕಟ್ಟಳೆಗಳು ಜಾರಿಯಲ್ಲಿವೆ. ನಿಶ್ಚಿತಾರ್ಥ ಮತ್ತು ಮೆಹೆಂದಿ ಶಾಸ್ತ್ರವೂ ಇದರಲ್ಲಿ ಪ್ರಾಮುಖ್ಯವಾದುದು. ಬೇರೆ ಬೇರೆ ಜಾತಿ, ವರ್ಣಗಳಲ್ಲಿ ಮತ್ತು ಪ್ರಾದೇಶಿಕವಾಗಿ ಕೆಲವು ಭಿನ್ನತೆಗಳಿರಬಹುದಾದರೂ ಒಟ್ಟಾರೆಯಾಗಿ ಈ ಕ್ರಿಯಗಳಿಗೂ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಎರಡೂ ಕಡೆಯ ಹಿರಿಯರಿದ್ದು ನಿಶ್ಚಿತಾರ್ಥವಾದ ಬಳಿಕ ಮದುವೆಗೆ ದಿನ ನಿಗದಿಪಡಿಸಲಾಗುತ್ತದೆ. ಮದುವೆಗೆ ಒಂದು ಅಥವಾ ಎರಡು ದಿನ ಮುಂಚಿತವಾಗಿ ನಡೆಯುವ ಒಂದು ವಿಶೇಷ ಸಮಾರಂಭವೇ ಮೆಹೆಂದಿ ಕಾರ್ಯಕ್ರಮ. ಮೆಹೆಂದಿಯನ್ನು ಅರೆದು ಸಿದ್ಧಪಡಿಸಿದ ನಂತರ ನಂಬಿದ ದೈವ ದೇವರಿಗೆ ದೀಪವಿಟ್ಟು ಎಲ್ಲರೂ ಸೇರಿ ಪ್ರಾರ್ಥನೆ ಸಲ್ಲಿಸಿದ ನಂತರ ಮನೆಯ ಚಾವಡಿಯಲ್ಲಿ ಅಥವಾ ಸೆಗಣಿ ಸಾರಿಸಿದ ಅಂಗಳದಲ್ಲಿ ತುಳಸಿಕಟ್ಟೆಯ ಎದುರು ಚಾಪೆ ಹಾಸಿ ವಧು ಅಥವಾ ವರನನ್ನು ಕುಳ್ಳಿರಿಸಿ ಬಂಧುಗಳು ಅಪ್ತರೆಲ್ಲ ಸೇರಿ ಸಂಭ್ರಮಿಸುತ್ತಿದ್ದ ಮೆಹೆಂದಿ ಕಾರ್ಯಕ್ರಮ ಸರಳ ಸಸ್ಯಾಹಾರಿ ಊಟದೊಂದಿಗೆ ಕೊನೆಗೊಳ್ಳುತ್ತಿತ್ತು.…

Read More

ವಿದ್ಯಾಗಿರಿ: ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಪ್ರಿಲ್ 5 ಮತ್ತು 6ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಖೋ-ಖೋ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದಿದೆ. ಪುರುಷರ ಫೈನಲ್ ಪಂದ್ಯದಲ್ಲಿ ಆತಿಥೇಯ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿದ ಆಳ್ವಾಸ್ ಕಾಲೇಜು ಸತತ 16ನೇ ಬಾರಿ ಚಾಂಪಿಯನ್ ಆಯಿತು. ಮಹಿಳೆಯರ ವಿಭಾಗದಲ್ಲೂ ಆತಿಥೇಯ ಕಾಲೇಜನ್ನು ಫೈನಲ್‍ನಲ್ಲಿ ಮಣಿಸಿದ ಆಳ್ವಾಸ್ ಕಾಲೇಜು ಮಹಿಳಾ ತಂಡವು 12ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿತು. ಒಟ್ಟು ಪುರುಷರ ವಿಭಾಗದಲ್ಲಿ 20 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 18 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಚಾಂಪಿಯನ್ ಶಿಪ್ ರೌಂಡ್ ನ ಫೈನಲ್   ಪಂದ್ಯಾಟದಲ್ಲಿ ಆಳ್ವಾಸ್ ಪುರುಷರ ತಂಡವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವನ್ನು ಮಣಿಸಿ ಸತತ 16ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು ವಿಜೇತ ತಂಡದ ಆಟಗಾರರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ…

Read More

ಮೂಡುಬಿದಿರೆ: ಶಿಕ್ಷಣದ ಜೊತೆಗೆ ಕೌಶಲ ವೃದ್ಧಿಯು ಬಹಳ ಮುಖ್ಯ ಎಂದು ನವದೆಹಲಿಯ ಎಐಸಿಟಿಇ ಅಧ್ಯಕ್ಷ ಪ್ರೊ.ಟಿ. ಜಿ. ಸೀತಾರಾಮ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಶನಿವಾರ ನಡೆದ ತಂತ್ರಜ್ಞಾನ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಈಗ ಅಮೃತ ಕಾಲದಲ್ಲಿ ಇದ್ದೇವೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಎಂಜಿನಿಯರಿಂಗ್ ಮತ್ತು ನಿರ್ವಹಣಾ ವಲಯದ ಪಾತ್ರ ಪ್ರಮುಖವಾದದ್ದು ಎಂದರು. ಸಂಶೋಧನೆ, ಆವಿಷ್ಕಾರ, ಉದ್ಯಮಶೀಲತೆ, ಸ್ಟಾರ್ಟ್‍ಅಪ್‍ಗಳ ಪ್ರಚುರತೆಯಿಂದ ವಿಕಸಿತ ಭಾರತದ ಹಾದಿ ಸುಲಭ. ಇವುಗಳ ಜೊತೆಯಲ್ಲಿ ತಂತ್ರಜ್ಞಾನ ಹಾಗೂ ನಿರ್ವಹಣೆಯಿಂದ ಭಾರತವು ವಿಶ್ವಗುರು ಆಗಲು ಸಾಧ್ಯ ಎಂದರು. ಭಾರತದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್‍ಗಳಿದ್ದು, ಪ್ರಪಂಚದಲ್ಲೆ ಮೂರನೇ ಅತೀ ದೊಡ್ಡ ಸ್ಟಾರ್ಟ್ ಅಪ್ ರಾಷ್ಟ್ರ ಎನಿಸಿಕೊಂಡಿದೆ. ಬಹುಶಿಸ್ತೀಯ ಸಂಶೋಧನಾ ಅನ್ವೇಷಣೆಯಿಂದಾಗಿ ನಮ್ಮ ದೇಶದ ಐಐಟಿಗಳು ಜಾಗತಿಕ ಮಟ್ಟದ ಗುಣಮಟ್ಟವನ್ನು ತಲುಪುವಂತಾಗಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 1.25 ಮಿಲಿಯನ್ ಇಂಜಿನಿಯರಿಂಗ್ ಪದವೀಧರರು ಶಿಕ್ಷಣ ಮುಗಿಸುತ್ತಾರೆ. ಕಾಲೇಜುಗಳು ಶಿಕ್ಷಣ ಹಂತದಲ್ಲಿ ಕೌಶಲ್ಯದ…

Read More

ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣೀಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.9 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೃಢಕಲಶಾಭಿಷೇಕ ನಡೆಯಲಿದೆ. ದೇವಸ್ಥಾನದಲ್ಲಿ ಬೆಳಿಗ್ಗೆ 8.30ರಿಂದ ದೇವತಾ ಪ್ರಾರ್ಥನೆ ಮಹಾಗಣಪತಿ ಹೋಮ, ಕಲಶ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ದೃಢಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ದೇವಸ್ಥಾನದಲ್ಲಿ ಪ್ರತೀ ತಿಂಗಳ ಸಂಕಷ್ಠಿಯಂದು ಮಹಾಗಣಪತಿ ಹೋಮ, ಸಂಕ್ರಮಣದಂದು ರಾತ್ರಿ ವಿಶೇಷ ರಂಗಪೂಜೆ, ಪ್ರತೀ ತಿಂಗಳ ಷಷ್ಠಿಯಂದು ಮಧ್ಯಾಹ್ನ ಷಷ್ಠಿ ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಅಲ್ಲದೇ ಭಕ್ತಾಧಿಗಳು ಇಚ್ಚಿಸಿದ ದಿನಗಳಲ್ಲಿ ಶ್ರೀ ದೇವರಿಗೆ ಕಾರ್ತಿಕ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಆಶ್ಲೇಷ ಬಲಿ, ಶ್ರೀ ಶನೀಶ್ವರ ಪೂಜೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿದೆ. ಭಕ್ತಾಧಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.

Read More

ಕೆಲವು ವರ್ಷಗಳ ಹಿಂದೆ ಭಜನಾ ಮಂದಿರಗಳಾಗಲಿ, ಭಜನಾ ಸಂಘಗಳಾಗಲಿ ಇರಲಿಲ್ಲ. ದಾಸರೇಣ್ಯರು ಊರೂರು ಪರಿವ್ರಾಜಕರಾಗಿ (ನಿತ್ಯ ಸಂಚಾರಿ) ಗುಡಿಯ ದೇವರನ್ನು ತಮ್ಮ ಹೃದಯ ಮಂದಿರದಲ್ಲಿ ನೆಲೆಗೊಳಿಸಿ ಮಧುಕರ ವೃತ್ತಿ (ಜೇನುನೋಣಗಳಂತೆ) ಭಕ್ತಿ ಭಾವವನ್ನು ಪಸರಿಸಿದ್ದರು. ಇವರ ಭಕ್ತಿ ಶ್ರದ್ಧೆಗೆ ಗುಡಿಯ ಮುಂಭಾಗದಲ್ಲಿ ನಡೆಯುತ್ತಿದ್ದ ಯಾಗ, ಯಜ್ಞ, ಹೋಮ ಹವನಗಳೊಂದಿಗೆ ಹಾಲು ಜೇನಿನ ಅಭಿಷೇಕ ಸುರಿಯುತ್ತಿದ್ದರೂ ಹಿಂಭಾಗದಲ್ಲಿ ಮೈಮರೆತು ಹಾಡುತ್ತಿದ್ದ ಭಜನಾ ನೃತ್ಯಕ್ಕೆ ತುಳುನಾಡಿನಲ್ಲಿ ದೇವರ ವಿಗ್ರಹವೇ ತಿರುಗಿ ನಿಲ್ಲಲಿಲ್ಲವೇ? ಅದುವೇ ಭಜನೆಯ ಮಹತ್ವ. ಭಜನೆ ಹಾಗೂ ಭಜಕರಲ್ಲಿ ಮೇಲು ಕೀಲು, ಬಡವ ಬಲ್ಲಿದ, ಬ್ರಾಹ್ಮಣ ದಲಿತ, ಪಂಡಿತ ಪಾಮರ ಎಂಬ ತಾರತಮ್ಯವಿಲ್ಲ. ಒಟ್ಟಿಗೆ ಕುಳಿತು ಸರ್ವ ನಾಮದಲ್ಲಿ ಏಕ ದೇವರನ್ನು ಕಾಣುವುದು ಭಜನೆಯಲ್ಲಿ ಮಾತ್ರ. ದೇವಸ್ಥಾನದಲ್ಲಿ ದೇವರ ಸ್ಥಾನ ಗರ್ಭಗುಡಿಯಾದರೆ, ಭಜನಾ ಮಂದಿರದಲ್ಲಿ ದೇವರ ಸ್ಥಾನ ಭಜಕನ ಹೃದಯದಲ್ಲಿ ಎಂಬ ಭಾವ. ಸಾಕ್ಷಿಗಾಗಿ ಒಂದು ದೀಪ. ತುಳುನಾಡಿನಲ್ಲಿ ಭಜನಾ ಮಂದಿರದ ಉಗಮ 1970 ರ ನಂತರ ಆಗಿದೆ. ಕೃಷಿ ಕಾರ್ಮಿಕರು ಆ…

Read More

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಎಂದು ನಿಶ್ಚಯಿಸಿದ್ದು, ಆ ಪ್ರಯುಕ್ತ ಎಪ್ರಿಲ್ 9 ರ ಮಂಗಳವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಸರಿಯಾಗಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿಯವರು ಹೇಳಿದ್ದಾರೆ. ಅವರು ದೇವಳದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಪುವಿನ ಅಮ್ಮನ ದೇಗುಲದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಾಡಬಹುದೆಂದು ನಿಶ್ಚಯಿಸಿದ್ದರೂ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಹಾಗೂ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಭಾಗವಹಿಸಲು ತೊಂದರೆಯಾಗುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೇ ಜೂನ್ 12 ರಿಂದ ದಕ್ಷಿಣಾಯಣ ಪ್ರಾರಂಭವಾಗುವುದರಿಂದ ಪ್ರತಿಷ್ಠೆಗೆ ಸೂಕ್ತವಾದ ದಿನಗಳು ಲಭ್ಯವಾಗಿರುವುದಿಲ್ಲ. ಆದುದರಿಂದ ಅಭಿವೃದ್ಧಿ ಸಮಿತಿಯು ಕ್ಷೇತ್ರದ ಪ್ರಧಾನ ತಂತ್ರಿಗಳಾದ…

Read More

ಒರ ಜಡ್ಡ್ ದ ಕಂಡೊಲೆನ ಬರಿತ ತೋಡುಡು ಕುಂಟು ಅರ್ದೊಂದು ಇತ್ತೆರ್ ಎನ್ನಪ್ಪೆ. ಯಾನ್ ದಂಡೆಡ್ ಕುದೊಂದು ಪೊಲ್ಲೆ ಪಾತೆರೊಂದು ಇತ್ತೆ. ಅಪಗ ಮರಟೊಂಜಿ ಮಂಗೆ (ದಿ) ಬಂಜಿಗ್ ಅಮತ್ ಪತೊಂದಿ ಕಿನ್ನಿದೊಟ್ಟುಗು ಎಂಕಲೆನ್ ತೂದು ಕುಲ್ಯಾಟ್ಟದ್ ‘ಟೆರ್ರೆಂಕ್’ ಪಂಡ್. ಅಪಗ ಎನ್ನಪ್ಪೆಗ್ ಒಂಜಿ ಕತೆ ನಿನೆಪಾಂಡ್‌. ಸೀತೆ,‌ ಅವ್ವೆ ನಮ್ಮ ರಾಮನ ಕೈ ಪತಿನ ಬುಡೆದಿ. ಏರಾ ಮಡ್ಡೆಲೆ ದಾದನ ಪಂಡೆಗೆ, ಇಂಬೆ ತನ್ನ ಕಾರಡಿಯೇ ತನ್ಕ್ ತೋಜಂದಿನ, ಪೊರ್ತಿಂಗೊಲ್ದ ಬುಡೆದಿನಿ ಮಲ್ಲ ಕಾಡ್ ಡ್ ಬುಡಿಯೆ ಮೆಲ್ಲ, ಮಲ್ಲ ಮುರ್ಗೊಲೆನ ಬಾಯಿಗ್ ಬೂರಡ್ ಪಂದಾ ದಾನ್ಯ. ಆಲೆಗೊಂತೆ ಐಸ ಇತ್ಂಡ್, ವಾಲ್ ಮುಕಿ ರುಸಿಕುಲು ತೂದು, ಆರೆನ ಗುಡ್ಚಿಲ್ ಗ್ ಲೆಸೊಂದು ಪೋಯೆರ್‌‌. ದಿನ ದಿಂಜಿದ್, ಒರ್ಂಬ ತಿಂಗೊಲು ಪತ್ತ್ ದಿನ ಕರಿನಗ ಆನ್ ಬಾಲೆ ಪೆತ್ತೊಲು. ಬಾಲೆಗ್ ಲವೆ ಪಂದ್ ಪುದರ್ ದೀಯೆರ್. ಪೆತ್ತಿ ಪದಿನಾಜನೆ ಅಮೆ ಕಲೆವರೆ, ಸೀತೆ ಬಾಲೆದ ಮಡೆಕುಂಟು, ಪಜೆ ಪತೊಂದು ತೋಡುಗು…

Read More