Author: admin
ಈ ಸೃಷ್ಟಿಯಲ್ಲಿ ಮಾನವ ಶರೀರ ಉಳಿದೆಲ್ಲ ಜೀವ ಸಂಕುಲಗಳಿಗಿಂತ ಭಿನ್ನ ಮತ್ತು ಶ್ರೇಷ್ಠವಾಗಿದೆ. ಈ ಮಾನವ ಜನ್ಮ ಬರಬೇಕಾದರೆ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರಬೇಕು. ಹೀಗೆ ಹಿಂದಿನ ಜನ್ಮದ ಪುಣ್ಯಫಲದಿಂದ ಬಂದಂತಹ ಈ ಮಾನವನ ಜನ್ಮವನ್ನು ವ್ಯರ್ಥವಾಗಿ ಹಾಳು ಮಾಡದೆ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಜೀವನದಲ್ಲಿ ಸುಖ-ಕಷ್ಟ ಎರಡು ಇರಬೇಕು. ಕೇವಲ ಸುಖವೇ ಇದ್ದರೆ ಕಷ್ಟದ ಅರಿವು ಗೊತ್ತಾಗದು. ಜೀವನ ದುದ್ದಕ್ಕೂ ಕಷ್ಟವೇ ಇದ್ದರೂ ಮಾನವ ಜೀವನ ಸಾರ್ಥಕ ಎನಿಸದು. ಸುಖ- ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವಿರಬೇಕು. ಸುಖ- ಕಷ್ಟಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇರುತ್ತವೆ. ಕಷ್ಟಗಳು ಮಾನವನಿಗೆ ಬಾರದೆ ಮರಕ್ಕೆ ಬರುತ್ತದೆಯೇ ಎಂದು ಹೇಳುವ ವಾಡಿಕೆ ಇದೆ. ಮುಖ್ಯವಾಗಿ ಮಾನವನಿಗೆ ವಿಪರೀತ ಸಾಲದ ಹೊರೆ, ಮಾನಸಿಕ ಖನ್ನತೆ, ಬಡತನ, ಪರೀಕ್ಷೆಯಲ್ಲಿ ಅನುತ್ತೀರ್ಣ, ಉತ್ತೀರ್ಣನಾದರೂ ಉತ್ತಮ ಅಂಕಗಳನ್ನು ಪಡೆಯಲಿಲ್ಲವೆಂಬ ಬೇಸರ, ವಿವಾಹವಾಗದಿರುವುದು, ಸಂತಾನಭಾಗ್ಯ ಇಲ್ಲದಿರುವುದು, ವಾಸಿಯಾಗದ ಕಾಯಿಲೆ, ಪ್ರೀತಿ ಪ್ರೇಮವೆಂಬ ನಾಟಕ, ವಿಪರೀತ ದುಶ್ಚಟಗಳ ಅಭ್ಯಾಸ, ವಿದ್ಯಾವಂತನಾದರೂ ನಿರುದ್ಯೋಗಿ ಯಾಗಿರುವುದು,…
ಕೇಸರಿ ಮಯವಾದ ಕಾವೂರು ರಸ್ತೆ, ಎಲ್ಲೆಡೆ ಹಾರಾಡಿದ ಬಿಜೆಪಿ ಧ್ವಜ. ಕೇಸರಿ ಪೇಟ, ಶಾಲು ಹಾಕಿದ ಕಾರ್ಯಕರ್ತರಿಂದ ಜೈಕಾರ ಘೋಷಣೆ. ರಸ್ತೆಯುದ್ದಕ್ಕೂ ಹುಲಿ ವೇಷ ಕುಣಿತದ ಅಬ್ಬರ. ಇದು ಮಂಗಳವಾರ ಡಾ. ಭರತ್ ಶೆಟ್ಟಿ ವೈ. ಅವರು ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕಂಡು ಬಂದ ಉತ್ಸಾಹ. ಡಾ. ಭರತ್ ಶೆಟ್ಟಿ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆಗೂ ಮುನ್ನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಬಳಿಕ ದೇವಸ್ಥಾನದಿಂದ ಕಾವೂರು ಮೈದಾನದವರೆಗೆ ಬೃಹತ್ ಕಾರ್ಯಕರ್ತರ ಪಾದೆ ಯಾತ್ರೆಯ ಜತೆ ಸಾಗಿ ಬಂದು ಬಳಿಕ ಸುಮಾರು 2.20ಕ್ಕೆ ನಾಮಪತ್ರ ಸಲ್ಲಿಸಿದರು. ಕ್ಷೇತ್ರದ ವಿವಿಧೆಡೆಯಿಂದ ಆಗಮಿ ಸಿದ ಕಾರ್ಯಕರ್ತರು, ನಾಯಕರು, ದೇವರ ಪ್ರಸಾದ, ಹೂವು ತಂದು ಶಾಸಕರಿಗೆ ನೀಡಿ ವಿಜಯೀಭವ ಎಂದು ಹರಸುತ್ತಾ ಇದ್ದುದು ಕಂಡು ಬಂತು. ಸಾವಿರಾರು ಕಾರ್ಯಕರ್ತರು ಶಿಸ್ತುಬದ್ಧವಾಗಿ ನಡೆಯುತ್ತಾ ಹುಲಿ ವೇಷದ ಕುಣಿತಕ್ಕೆ ನೃತ್ಯದ ಹೆಜ್ಜೆ ಹಾಕುತ್ತಾ ಬಿರು ಬಿಸಿಲನ್ನು ಲೆಕ್ಕಿಸದೆ ತಮ್ಮ…
ಆರಾಧನೆ, ಪುರಾತನ ಇತಿಹಾಸ, ಅಲ್ಲಿನ ಯತಿ ವರ್ಯರು ಅಥವಾ ಧರ್ಮಾಧಿಕಾರಿಗಳ ಶ್ರದ್ಧೆಯಿಂದ ಪ್ರತಿಯೊಂದು ಕ್ಷೇತ್ರ ಗುರುತಿಸಲ್ಪಡುತ್ತದೆ ಎಂದು ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಗುರು ಶಿವಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಅವರು ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾ ಪರಮೇಶ್ವರೀ ದೇಗುಲದಲ್ಲಿ ಕ್ಷೇತ್ರದ ವಾಯವ್ಯ ಭಾಗದ ಪುರಾತನ ಆಲಡೆ ಸಾನ್ನಿಧ್ಯಗಳ ಪುನಃ ಪ್ರತಿಷ್ಠಾಪನಾಂಗ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾ ಮಹಾಯಾಗ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪಳ್ಳಿ ಅಡಪಾಡಿಯಲ್ಲಿ ನಡೆದ ಕ್ಷೇತ್ರ ನಿರ್ಮಾಣ ಇಲ್ಲಿನ ಧರ್ಮದರ್ಶಿ ಪುಂಡಲೀಕ ನಾಯಕ್ ಅವರ ಶ್ರಮದ ಪರಿಣಾಮ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಅಡಪಾಡಿಯಲ್ಲಿ ಧಾರ್ಮಿಕ ಚಿಂತನೆ ನಡೆಯುತ್ತಿದೆ ಎಂದರು. ಸಚಿವ ಸುನಿಲ್ ಕುಮಾರ್, ಜೋತಿಷ ವಿ| ಪ್ರಸನ್ನ ಆಚಾರ್ಯ, ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್, ಶಾಸಕ ರಘುಪತಿ ಭಟ್, ಮಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ…
ನಮ್ಮ ಟಿವಿ ವಾಹಿನಿಯು ಆಯೋಜಿಸುವ ಬಲೇ ತೆಲಿಪಾಲೆ 10 ನೇ ಆವೃತ್ತಿಯನ್ನು ನಮ್ಮ ಸಂಘದ ಭವನದಲ್ಲಿ ಆಯೋಜಿಸಲು ಅವಕಾಶ ನೀಡಿದ ವಾಹಿನಿಯ ಆಡಳಿತ ನಿರ್ದೇಶಕರಾದ ಡಾ. ಶಿವಶರಣ್ ಶೆಟ್ಟಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಳು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸುವಲ್ಲಿ ನಿಸ್ವಾರ್ಥ ಭಾವದಿಂದ ಶ್ರಮಿಸುತ್ತಿರುವ ಸಂಸ್ಥೆ ಇದಾಗಿದ್ದು ಇವರು ಮಾಡುತ್ತಿರುವ ಕಾರ್ಯಕ್ರಮಕ್ಕೆ ಸಹಕಾರ ನೀಡುವುದಕ್ಕೆ ಹೆಮ್ಮೆಯೆನಿಸುತ್ತಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು. ಅವರು ಫೆ 26 ರಂದು ಪುಣೆ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ನಡೆದ ನಮ್ಮ ಟಿವಿ ವಾಹಿನಿಯ ಬಲೇ ತೆಲಿಪಾಲೆ ಸೀಸನ್ 10 ರ ಸ್ಪರ್ಧಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ಟಿವಿ ವಾಹಿನಿಯು ಬಲೇ ತೆಲಿಪಾಲೆ ಎನ್ನುವ ವಿನೂತನ ಪರಿಕಲ್ಪನೆಯ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಿ ಜನರನ್ನು ರಂಜಿಸುವ ಕಾರ್ಯಕ್ರಮಗಳಿಗೆ ಮುನ್ನುಡಿಯನ್ನು ಬರೆದಿದ್ದು ತದ…
ಕುಂದಾಪುರ ಮೂಲದ ಸಿದ್ಧಾಪುರದ ಕಡ್ರಿ ಜಯಕರ್ ಶೆಟ್ಟಿ ಯವರು ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿರುವ ಜಯಕರ್ ಶೆಟ್ಟಿಯವರು ಮೊಗೆಬೆಟ್ಟು ಪ್ರೇಮಾ ಶೆಟ್ಟಿ ಮತ್ತು ಸಿದ್ದಾಪುರದ ಕಡ್ರಿ ಗೋವಿಂದ ಶೆಟ್ಟರ ಸುಪುತ್ರ. ವೃತ್ತಿಯಲ್ಲಿ ಪ್ರಖ್ಯಾತ ದಂತವೈದ್ಯರಾಗಿದ್ದು ಹಲವು ವರ್ಷಗಳಿಂದ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ವೃತ್ತಿ ನಿರತರಾಗಿದ್ದಾರೆ. ಜಯಕರ್ ಶೆಟ್ಟಿಯವರು ಈ ಗೌರವಾನ್ವಿತ ಹುದ್ಧೆಯಲ್ದಿ ಯಶಸ್ಸನ್ನು ಕಾಣಲಿ ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತೇವೆ.
ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು, ಮುನ್ನಡೆದು ಸಾಧಕರಾಗಿ ಕಾಣಸಿಗುವವರು ವಿರಳ. ಇಂತವರ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಹುಬ್ಬಳ್ಳಿ ಧಾರವಾಡ ಪರಿಸರದಲ್ಲಿ ವೃತ್ತಿಯಲ್ಲಿ ನಿಪುಣರಾಗಿ, ಸಮಾಜಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೆ ಅದು ಸಿ.ಎ. ಎಸ್.ಬಿ.ಶೆಟ್ಟಿ ಯವರು. ಎಡಗೈಯಲ್ಲಿ ನೀಡಿದ್ದು ಬಲಗೈಗೆ ತಿಳಿಯಬಾರದು ಎನ್ನುವ ಮನೋಧರ್ಮವನ್ನು ರೂಢಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು. ಶ್ರೀ. ಸಿ.ಎ. ಎಸ್. ಬಿ. ಶೆಟ್ಟಿಯವರು 1975 ರಲ್ಲಿ ತಮ್ಮ ಲೆಕ್ಕಪರೀಶೋಧನಾ ವೃತ್ತಿಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿ, ಹುಬ್ಬಳ್ಳಿ ಧಾರವಾಡ ಬಂಟರ…
ನಮ್ಮ ಬಂಟ ಬಾಂಧವರು ತಮ್ಮ ಸಂಸಾರ ನಿರ್ವಹಣೆಯ ಜೊತೆ ಜೊತೆಗೇ ಸಮಾಜ ಸೇವೆ, ಕಲಾಪೋಷಣೆ ಮಾಡುತ್ತಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಾ ತಮ್ಮ ಪ್ರಸಿದ್ಧಿ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಂಡು ಸಮಾಜದ ಆದರ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ಅಂಥವರಲ್ಲಿ ಹೊಟೇಲ್ ಉದ್ಯಮಿ, ಕಲಾಪ್ರೇಮಿ, ಸಮಾಜ ಸೇವಕ ಕರ್ನೂರು ಶಂಕರ ಆಳ್ವರೂ ಒಬ್ಬರು. ಇವರೊಬ್ಬ ನಯವಿನಯ ತುಂಬಿದ ಸಜ್ಜನರು. ತಾನು ನುಡಿದಂತೆ ನಡೆವ ಸತ್ಯನಿಷ್ಠರು. ತುಂಬಾ ಯೋಚಿಸಿ ಮಾತನಾಡುವವರು. ಯಾರೊಬ್ಬರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸುತ್ತಾರೆ. ಯಕ್ಷಗಾನ, ಸಮಾಜ ಸೇವೆ, ಧಾರ್ಮಿಕ ಚಟುವಟಿಕೆಯ ಕ್ಷೇತ್ರಗಳಲ್ಲಿ ಪ್ರಚಲಿತವಿರುವ ಹೆಸರುಗಳಲ್ಲಿ ಇವರೂ ಒಬ್ಬರು. ಇವೆಲ್ಲವುದಕ್ಕೆ ಕಲಶ ಪ್ರಾಯವೆಂಬಂತೆ ಕಲಾ ಸಂಘಟನೆಗಳಿಗೆ ಧಾರ್ಮಿಕ ಕ್ಷೇತ್ರಗಳಿಗೆ ಉದಾರ ಮನಸ್ಸಿನಿಂದ ಗುಪ್ತದಾನ ನೀಡುವ ಪುಣ್ಯಾತ್ಮರು. ಇವರ ವ್ಯಕ್ತಿತ್ವ ಜನಮಾನ್ಯವಾದುದು. ಅಹಮಿಕೆಯ ಲವಲೇಶವೂ ಇಲ್ಲದ ಸಹಜ ಸರಳ ಹಾಗೂ ಹೇಳಬೇಕಾದುದನ್ನು ಸ್ಪಷ್ಟವಾಗಿ ಯಾವುದೇ ಮುಜುಗರವಿಲ್ಲದೆ ಹೇಳುವವರು. ಆಳ್ವರು ಒಬ್ಬ ಸರಸ ಭಾಷಣಗಾರ. ತಾಳಮದ್ದಳೆ ಯಕ್ಷಗಾನ ಕ್ಷೇತ್ರಗಳ ವಾಗ್ಮಿ. ಹವ್ಯಾಸಿ ಕಲಾವಿದ. ಇವರ ಕೆಲವು ಪಾತ್ರಗಳನ್ನು ಪಾತ್ರದ ಠೀವಿ ಹೆಜ್ಜೆಗಳನ್ನು…
ಅರಮನೆ ಮೈದಾನ ಗೇಟ್ ಸಂಖ್ಯೆ 9 ರಲ್ಲಿರುವ ಗ್ರೀನ್ಸ್ ಹಾಲ್ ನಲ್ಲಿ ಕಂಬಳ ಸಮಿತಿ (ರಿ), ಬೆಂಗಳೂರು ಇದರ ಗೌರವ ಅಧ್ಯಕ್ಷರಾಗಿರುವ ಶ್ರೀ ಕೆ ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ “ಬೆಂಗಳೂರು ಕಂಬಳ – ನಮ್ಮ ಕಂಬಳ” ದ ಸಭೆ ನಡೆಯಿತು. ಕಂಬಳ ಸಮಿತಿ (ರಿ), ಬೆಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷರಾಗಿರುವ ಶ್ರೀ ಗುರುಕಿರಣ್ ಶೆಟ್ಟಿ, ಉಪಾಧ್ಯಕ್ಷರಾಗಿರುವ ಶ್ರೀ ಗುಣರಂಜನ್ ಶೆಟ್ಟಿ, ಸಂಘಟನಾ ಅಧ್ಯಕ್ಷರುಗಳಾದ ಶ್ರೀ ಉಮೇಶ್ ಶೆಟ್ಟಿ ಹಾಗೂ ಶ್ರೀ ಉಪೇಂದ್ರ ಶೆಟ್ಟಿಯವರು ಮತ್ತು ಇತರರು ಉಪಸ್ಥಿತರಿದ್ದರು.
ಪುಣೆ : ದಕ್ಷಿಣ ಪ್ರಾದೇಶಿಕ ಸಮಿತಿಯವರು ಉತ್ತಮ ವ್ಯಕ್ತಿತ್ವದ ಸರಳ ಸಜ್ಜನ ವ್ಯಕ್ತಿಯನ್ನು ಆರಿಸಿ ಸನ್ಮಾನಿಸಿದ್ದಾರೆ. ನನ್ನ ಜೊತೆ ಸುಮಾರು ವರ್ಷಗಳಿಂದ ಅಜಿತ್ ಹೆಗ್ಡೆ ಯವರು ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡುತಿದ್ದಾರೆ. ಅವರ ಕಾರ್ಯ ವೈಖರಿಯಲ್ಲಿ ನನಗೆ ಬೆಂಬಲ ಮತ್ತು ಸಂಪೂರ್ಣ ಸಹಕಾರ ಸಿಕ್ಕಿದೆ. ಅಚ್ಚುಕಟ್ಟಾಗಿ ಕಾರ್ಯ ಯೋಜನೆಗಳನ್ನು ಮಾಡುವ ಮೂಲಕ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ಸಹೋದರನಂತಿರುವ ಅಜಿತ್ ಹೆಗ್ಡೆಯವರು ಈ ಸನ್ಮಾನಕ್ಕೆ ಅರ್ಹರು. ನಮ್ಮಲ್ಲಿ ಎರಡು ಪ್ರಾದೇಶಿಕ ಸಮಿತಿಗಳಿದ್ದು ಉತ್ತಮ ನಿಸ್ವಾರ್ಥ ಸೇವೆಗಳ ಮೂಲಕ ಪ್ರೀತಿಗೆ ಪಾತ್ರವಾಗಿವೆ, ಈ ಸಮಿತಿಗಳು ನನ್ನ ಎರಡು ಕೈಗಲಿದ್ದಂತೆ ಮತ್ತು ಅನೆ ಬಲವನ್ನು ತಂದು ಕೊಟ್ಟಿವೆ. ಅವರ ಕೆಲಸ ಕಾರ್ಯಗಳನ್ನು ನಾನು ಅಭಿನಂದಿಸುತ್ತೇನೆ, ಇನ್ನಷ್ಟು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಅನುಗ್ರಹ ಸಿಗಲಿ ಎಂದು ದೇವರಲ್ಲಿ ಬೇಡಿಕೊಳುತ್ತೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ನುಡಿದರು. ಪುಣೆ ಬಂಟರ ಸಂಘದ ದಕ್ಷಿಣ ಪೂರ್ವ ವಲಯ ಪ್ರಾದೇಶಿಕ ಸಮಿತಿ…
ಪ್ರಸವಿಸಿದ ತಾಸಿನೊಳಗಾಗಿ ತಾಯಿ ತನ್ನ ಪ್ರಥಮ ಸ್ತನ್ಯವನ್ನು ಶಿಶುವಿಗೆ ಕುಡಿಸುವುದು ಅತ್ಯಂತ ಆವಶ್ಯಕವಾಗಿದೆ. ಪ್ರಥಮ ಸ್ತನ್ಯ ಎಂದರೇನು?, ಅದನ್ನು ಮಗುವಿಗೆ ಕುಡಿಸುವುದರ ಆವಶ್ಯಕತೆ ಮತ್ತು ಅದು ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಎಷ್ಟು ಪ್ರಯೋಜನಕಾರಿ?, ಪ್ರಥಮ ಸ್ತನ್ಯ ಕುಡಿಸದಿದ್ದರೆ ಶಿಶುಗಳ ಬೆಳವಣಿಗೆಯ ಮೇಲಾಗುವ ಪರಿಣಾಮಗಳೇನು?… ಎಂಬೆಲ್ಲ ವಿಷಯಗಳ ಬಗೆಗೆ ಮಕ್ಕಳ ತಜ್ಞರು ಇಲ್ಲಿ ಸಮಗ್ರವಾಗಿ ಬೆಳಕು ಚೆಲ್ಲಿದ್ದಾರೆ. ಭಾರತದಲ್ಲಿ ಆಯುರ್ವೇದ ವೈದ್ಯರು 18ನೇ ಶತಮಾನ ದಲ್ಲಿಯೇ(ಪಾಶ್ಚಾತ್ಯ ತಜ್ಞರಿ ಗಿಂತಲೂ ಎಷ್ಟೋ ಮೊದಲೇ) ಜಾನುವಾರು ಗಳ ಪ್ರಥಮ ಸ್ತನ್ಯ (ಕೊಲೊಸ್ಟ್ರಮ್) ಹಾಲನ್ನು ಅನೇಕ ಸೋಂಕು ಗುಣಪಡಿಸಲು ಬಳಕೆ ಮಾಡುತ್ತಿದ್ದರು ಎನ್ನುವುದು ಗಮನಾರ್ಹ. ಮಹಿಳೆಯು ಮಗುವನ್ನು ಪ್ರಸವಿಸಿದ ಕೂಡಲೇ ಆಕೆಯಲ್ಲಿ ಉತ್ಪತ್ತಿಯಾಗುವ ಹಾಲಿಗೆ ಪ್ರಥಮ ಸ್ತನ್ಯ (ಕೊಲೊಸ್ಟ್ರಮ್) ಎನ್ನುತ್ತಾರೆ. ಚಿನ್ನದ ವರ್ಣ ಹಾಗೂ ದಪ್ಪವಾಗಿ ಇರುವುದರಿಂದ ಇದನ್ನು ದ್ರವರೂಪದ ಚಿನ್ನವೆಂದೂ ಕರೆಯುತ್ತಾರೆ. ಪ್ರೊಟೀನ್, ಇಮ್ಯುನೋ ಗ್ಲೋಬ್ಯುಲಿನ್ಗಳಿಂದ ಸಮೃದ್ಧವಾಗಿರುವ ದ್ರವವಿದು. ಮಗು ಹುಟ್ಟಿದ ಒಂದು ಗಂಟೆಯೊಳಗೆ ಇದನ್ನು ನವಜಾತ ಶಿಶುವಿಗೆ ಊಡಿಸಬೇಕು. ಇದರಿಂದ ಮಗುವಿನ ಆರೋಗ್ಯವೂ…