Author: admin

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಸಹಿತ ಮಹಾ ಗಣಪತಿ ಗ್ರಾಮದ ಆರಾಧ್ಯ ದೇವರಾಗಿದ್ದರೂ ಗ್ರಾಮದ ಯಾವುದೇ ಮನೆಗಳಲ್ಲಿ ಗಣಪತಿ ಫೋಟೋ ಇಡುವಂತಿಲ್ಲ. ಗಣಹೋಮ ಮಾಡುವಂತಿಲ್ಲ. ಚೌತಿ ಹಬ್ಬ ಆಚರಿಸುವಂತಿಲ್ಲ. ಪೆರ್ಣಂಕಿಲ ಗ್ರಾಮದ ಗಡಿ ವ್ಯಾಪ್ತಿಯೊಳಗಿರುವ ಈ ವಿಶಿಷ್ಟ ಸಂಪ್ರದಾಯ ಇಂದಿಗೂ ಪಾಲನೆಯಾಗುತ್ತಿದೆ. ಬಡವನಿರಲಿ, ಶ್ರೀಮಂತನಿರಲಿ ಮನೆಗಳಲ್ಲಿ ಆಡಂಭರಕ್ಕೆ ಅವಕಾಶವಿಲ್ಲದೆ, ಕ್ಷೇತ್ರ ದೇವತೆಯನ್ನು ಮರೆಯದೆ ಎಲ್ಲರೂ ಭಕ್ತರ ನೆಲೆಯಲ್ಲಿ ದೇವಳಕ್ಕೆ ಬರಬೇಕು. ತಮ್ಮ ಕಷ್ಟ ನೋವು ಹೇಳಿಕೊಳ್ಳಬೇಕೆನ್ನುವುದೇ ಇದರ ಹಿಂದಿರುವ ತತ್ವವಾಗಿದೆ. ಪೆರ್ಣಂಕಿಲ ಗ್ರಾಮದ ಮನೆಗಳಲ್ಲಿ ಎಮ್ಮೆಯನ್ನೂ ಸಾಕುವಂತಿಲ್ಲ. ಭಕ್ತನೊಬ್ಬ ದನದ ಹಾಲೆಂದು ಹೇಳಿ ಎಮ್ಮೆ ಹಾಲು ತಂದು ಕೊಟ್ಟಿದ್ದನ್ನು ದೇವರಿಗೆ ಅಭಿಷೇಕ ಮಾಡಿದ್ದು ಮರುದಿನ ಎಮ್ಮೆ ಸತ್ತಿತು. ಆ ಬಳಿಕ ಪೆರ್ಣಂಕಿಲ ಗ್ರಾಮದಲ್ಲಿ ಎಮ್ಮೆ ಸಾಕುವಂತಿಲ್ಲ. ಕೊಡಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪೆರ್ಣಂಕಿಲ ಗ್ರಾಮದಲ್ಲಿ 400 ಮನೆ,1,841 ಜನರಿದ್ದಾರೆ. ದೇವಳದಲ್ಲಿ ಜಾತ್ರೆಗೆ ಕೊಡಿ ಏರಿದ ಮೇಲೆ ಪೆರ್ಣಂಕಿಲ ಗ್ರಾಮದಿಂದ ಯಾವುದೇ ದಿಬ್ಬಣ ಹೊರಡಬಾರದು (ಬೇರೆ ಊರಿಂದ ದಿಬ್ಬಣದಲ್ಲಿ ಹೊರಟು ಬರುತ್ತಾರೆ). ಮನೆಗಳಲ್ಲಿ…

Read More

ಜೀವನದ ಕೊನೆಯುಸಿರು ಇರುವವರೆಗೂ ಕ್ಯಾನ್ಸರ್ ರೋಗಿಗಳನ್ನು ಗೌರವದಿಂದ ಕಾಣುವುದೇ ಉಪಶಾಮಕ ಆರೈಕೆ ವಾರ್ಡಿನ ಉದ್ದೇಶವಾಗಿದೆ. ತಪಸ್ಯ ಫೌಂಡೇಷನ್ ಹಮ್ಮಿಕೊಂಡಿರುವ ಮಾನವೀಯತೆಯ ಕಾರ್ಯಕ್ಕೆ ಯೆನೆಪೋಯ ಸಂಸ್ಥೆ ಸದಾ ಬೆಂಬಲಿಸುತ್ತದೆ ಎಂದು ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ. ವಿಜಯ್ ಕುಮಾರ್ ಅಭಿಪ್ರಾಯಪಟ್ಟರು. ಅವರು ತಪಸ್ಯ ಫೌಂಡೇಷನ್, ಲಯನ್ಸ್ ಇಂಟರ್‌ನ್ಯಾಷನಲ್ ೩೧೭ಡಿ ಆಶ್ರಯದಲ್ಲಿ ನರಿಂಗಾನದ ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ತಾತ್ಕಾಲಿಕ ಉಪಶಾಮಕ ಆರೈಕೆ ವಾರ್ಡನ್ನು ಉದ್ಘಾಟಿಸಿ ಮಾತನಾಡಿದರು. ಕ್ಯಾನ್ಸರ್ ರೋಗದ ನೈಸರ್ಗಿಕ ಇತಿಹಾಸವನ್ನು ಬದಲಾಯಿಸದೇ ರೋಗ ಲಕ್ಷಣಗಳಿಗೆ ಕಂಡುಕೊಳ್ಳುವ ಪರಿಹಾರ, ತೊಡಕುಗಳ ನಿವಾರಣೆ ವಾರ್ಡಿನ ಮೂಲಕ ಸಾಧ್ಯ. ಕ್ಯಾನ್ಸರ್ ರೋಗಿಗಳು ಮನೆ ಮಂದಿಯಿಂದ ತಿರಸ್ಕರಿಸಲ್ಪಡುವಾಗ, ಸಲಹಲು ಅಸಾಧ್ಯವಾದಂತಹ ರೀತಿಯಲ್ಲಿ ಇರುತ್ತಾರೆ. ಅಂತಹವರನ್ನು ಗೌರವದಿಂದ ಕಾಣಲು ತಪಸ್ಯ ಫೌಂಡೇಷನ್ ಮುಡಿಪು ಭಾಗದಲ್ಲಿ ನಿರ್ಮಿಸುವ ಕೇಂದ್ರಕ್ಕೆ ಸಹಕಾರ ಅಗತ್ಯ . ಯೆನೆಪೋಯ ಸಂಸ್ಥೆ ತಪಸ್ಯ ಫೌಂಡೇಷನ್ ಸದಾ ಜತೆಗಿದೆ ಎಂದರು. ೩೧೭ಡಿ ಪಾಸ್ಟ್ ಮಲ್ಟಿಪಲ್ ಕೌನ್ಸಿಲ್ ಚೇರ್‌ಪರ್ಸನ್ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ,…

Read More

ಪಾಳುಬಿದ್ದ ಮೂಲ ತರವಾಡು ಮನೆಯನ್ನು ಜೀರ್ಣೋದ್ದಾರಗೊಳಿಸುವ ಮೊದಲು ಒಂದು ಜ್ಯೋತಿಷ್ಯ ಪ್ರಶ್ನೆ ಅಗತ್ಯವಿದೆ. ಕಾರಣ ಕುಟುಂಬದ ಧರ್ಮದೈವಗಳು, ನಾಗ ಸಾನಿಧ್ಯ, ಪ್ರೇತಾತ್ಮಗಳ ಸದ್ಗತಿಯ ಬಗ್ಗೆ ತಿಳಿಯಬೇಕಾಗಿದೆ. ಅದಕ್ಕಾಗಿ ಯೋಗ್ಯ ಜ್ಯೋತಿಷ್ಯರನ್ನು ಹುಡುಕಿ ಕುಟುಂಬದ ಹಿನ್ನಲೆಯನ್ನು ತಿಳಿದ ಹಿರಿಯರನ್ನು ಸೇರಿಸಿ, ಚರ್ಚಿಸಿ ದೈವಜ್ಞರು ನೀಡಿದ ಪರಿಹಾರದಂತೆ ಹೊಸ ತರವಾಡು ಮನೆ, ದೈವಸ್ಥಾನ ಭಂಡಾರ ಮತ್ತು ನಾಗ ಪ್ರತಿಷ್ಠೆಗಳನ್ನು ಕರ್ಮಜ್ಞಾನಿಗಳಾದ ಆಚಾರ್ಯ (ತಂತ್ರಿ)ರಿಂದ ಶುದ್ಧ ಕ್ರಿಯಾದಿ ಕರ್ಮಗಳನ್ನು ಮಾಡಿಸುವುದು, ದೈವಗಳಿಗೆ ನೇಮ ಕೊಟ್ಟು ವರ್ಷಂಪ್ರತಿ ಸೂಚಿಸಿದ ಪರ್ವಗಳನ್ನು ತಂಬಿಲಗಳನ್ನು ಮಾಡಿಸಿಕೊಂಡು ಬರುವುದು. ಇದು ನಮ್ಮ ಹಿರಿಯರು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ಧತಿ ಆದರೆ ಈಗ ಕೆಲವು ಕುಟುಂಬಸ್ಥರು ಮೇಲೆ ಸೂಚಿಸಿದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರ್ತಿಗೊಳಿಸಿ, ಬ್ರಹ್ಮಕಲಶಾದಿಗಳನ್ನು ಮಾಡಿಸಿ, ಮಾಡಿದ್ದು ಸರಿಯಾಗಿದೆಯೇ ಎಂದು ತಿಳಿಯಲು ಮತ್ತೊಬ್ಬ ಜ್ಯೋತಿಷ್ಯರ ಮೊರೆ ಹೋಗಿ ಪ್ರಶ್ನೆ ಇರಿಸುವುದು ಸಾಮಾನ್ಯವಾಗಿದೆ. ಅಲ್ಲಿ ನೀವು ಮಾಡಿದ ಯಾವ ಕಾರ್ಯಗಳೂ ಸರಿಯಾಗಿಲ್ಲ. ದೈವಸ್ಥಾನ, ನಾಗಪ್ರತಿಷ್ಠೆಗಳಲ್ಲೂ ದೋಷವಿದೆ. ಪ್ರೇತಾತ್ಮಗಳಿಗೆ ಮೋಕ್ಷವಾಗಿಲ್ಲ ಕರ್ಮದೋಷವಿದೆ. ಕೂಡಲೇ ಅಷ್ಠಮಂಗಲ…

Read More

ಮುಂಬಯಿಯಲ್ಲಿ ನೆಲೆಸಿರುವ ತುಳು ಕನ್ನಡಿಗರ ಮಹಾ ಸಮಾವೇಶವು ಎಪ್ರಿಲ್ 7 ರಂದು ರಂದು ಸಂಜೆ 5 ರಿಂದ ಥಾಣೆ ಪಶ್ಚಿಮ ವರ್ತಕ್ ನಗರದ ಪೋಕ್ರಾಣ್ ರೋಡ್, ನಂಬರ್ -1ರ ಕ್ಯಾಡ್ ಬರಿ ಕಂಪೆನಿ ಎದುರಿನ ರೇಮಂಡ್ ಗಾರ್ಡನ್ ನಲ್ಲಿ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪನ್ವೇಲ್ ಮಹಾನಗರ ಪಾಲಿಕೆಯ ಮಾಜಿ ಸಭಾಪತಿ, ಬಿಜೆಪಿ ನಾಯಕ, ಸಮಾಜ ಸೇವಕ, ಸಂಘಟಕ ಸಂತೋಷ್ ಜಿ. ಶೆಟ್ಟಿ ನೇತೃತ್ವದಲ್ಲಿ ಮುಂಬಯಿಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಹಾಗೂ ಕಾಸರಗೋಡು ಲೋಕಸಭಾ ಕ್ಷೇತ್ರದ ಬಂಧುಗಳನ್ನು ಒಂದುಗೂಡಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಮೂರು ಲೋಕಸಭಾ ಕ್ಷೇತ್ರಗಳ ವಿವಿಧ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು. ಸಮಾವೇಶದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್…

Read More

ವೀರ ಕೇಸರಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸೇವಾ ಸಂಸ್ಥೆ. ಕಳೆದ 45 ವರ್ಷಗಳಿಂದ ತಡಂಬೈಲ್ ಪರಿಸರದಲ್ಲಿ ವೀರಕೇಸರಿ ಸೇವಾ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜಪರ ಕೆಲಸ ಮಾಡಿ ಶ್ಲಾಘನೆಗೆ ಪಾತ್ರವಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ನಿಕಟಪೂರ್ವ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ತಿಳಿಸಿದರು. ಮಾರಿಪೂಜಾ ಮಹೋತ್ಸವದ ಅಂಗವಾಗಿ ಮಾರಿಗುಡಿ ಶ್ರೀ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ನಡೆದ ವೀರಕೇಸರಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಶಶಿಧರ ಪಡುಬಿದ್ರೆ ಮಾತನಾಡಿ, ವೀರ ಕೇಸರಿ ಸಂಸ್ಥೆಯಿಂದ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆದಿರುವುದರಿಂದ ಪರಿಸರದ ನಾಗರಿಕರಿಗೆ ಅನುಕೂಲವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮ‌ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಉದ್ಯಮಿ ರಮೇಶ್ ರಾವ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಟ್ರಸ್ಟಿ ಸಹನಾ ರಾಜೇಶ್ ರೈ, ಸಮಾಜ ಸೇವಕಿ ಶಾಂತಾ, ಮಹಾಬಲ ಪೂಜಾರಿ ಕಡಂಬೋಡಿ, ಲಕ್ಷ್ಮೀನಾರಾಯಣ ಭಟ್,…

Read More

ನಮ್ಮ ನಾಡಿನಲ್ಲಿ ಅದೆಷ್ಟೋ ವೈದ್ಯರು ವಿವಿಧ ಬಗೆಯ ರೋಗಿಗಳ ಆರೋಗ್ಯ ಕಾಳಜಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೇವಲ ಹಣ ಸಂಪಾದನೆ ಮಾತ್ರ ತಮ್ಮ ವೃತ್ತಿಯ ಲಕ್ಷ್ಯವಲ್ಲವೆಂದು ಸಾಬೀತು ಪಡಿಸಿ ಜನರ ಪ್ರೀತಿ ವಿಶ್ವಾಸ ಗೆದ್ದಿದ್ದಾರೆ. ಅಂಥವರ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಶೆಟ್ಟಿ ಅವರನ್ನು ಹೆಸರಿಸಬಹುದು. ಡಾ ಸುಧಾಕರ್ ಶೆಟ್ಟಿಯವರು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸಮಸ್ಯೆಗಳಿಗೆ ಸದಾ ಪರಿಹಾರ ಕಾರ್ಯಗಳಲ್ಲಿ ತಕ್ಷಣ ಸ್ಪಂದಿಸುತ್ತಾರೆ. ಬಡವರು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಸೇವೆಯಲ್ಲಿ ಸುಖ ಕಾಣುವ ಇವರು ಆಧುನಿಕ ರೀತಿಯ ವೈದ್ಯೋಪಚಾರಗಳಿಂದ ವಂಚಿತರಾಗಿರುವ ಪ್ರದೇಶದ ಜನರ ಬಗ್ಗೆ ಅತೀವ ಕಾಳಜಿ ವಹಿಸುತ್ತಾ ಜನರ ಗಮನ ಸೆಳೆಯುತ್ತಿದ್ದಾರೆ. ಇದೀಗ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಆರೋಗ್ಯ ಕುರಿತಂತೆ ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ಸೂಕ್ತ ಚಿಕಿತ್ಸೆ, ವ್ಯವಸ್ಥೆ ಮಾಡುವಂಥಹ ಒಂದು ನವೀನ ಅಭಿಯಾನವನ್ನು ಡಾ. ಸುಧಾಕರ್ ಶೆಟ್ಟರು ಹಮ್ಮಿಕೊಂಡಿದ್ದು ವೇಣೂರಿನ ಬಜ್ರೆ…

Read More

ವಿದ್ಯಾಗಿರಿ: ಯಾವುದೇ ಉತ್ತಮ ಕಾರ್ಯವು ಎಲ್ಲರಿಗೆ ತಲುಪುವುದು ಬಹುಮುಖ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಆದಿ ದ್ರಾವಿಡ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಸಮಗಾರ ಸಮಾಜ, ಮರಾಟಿ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಪಾಣಾರ ಅಜಲಯಾನೆ ನಲಿಕೆಯವರ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲಾ ಪರವನ್ ಸಮಾಜ ಸುಧಾರಕರ ಸಂಘ(ರಿ.) ಹಂಡೆಲು, ಪುತ್ತಿಗೆ ಮೂಡುಬಿದಿರೆ, ಮುಗೇರ ಸಮುದಾಯ ಮತ್ತು ಕೊರಗ ಸಮುದಾಯ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವಾಗ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ…

Read More

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ಪ್ರತಿ ವರ್ಷದಂತೆ ಜಿಲ್ಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈಜು ಮತ್ತು ಲಾನ್ ಟೆನಿಸ್ ನಲ್ಲಿ ಬೇಸಗೆ ತರಬೇತಿ ಶಿಬಿರವನ್ನು ಎಪ್ರಿಲ್ 1 ರಿಂದ ಮೇ 31ರವರೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಉದ್ಘಾಟಿಸಿ ಮಕ್ಕಳು ತಮ್ಮ ರಜಾ ದಿನಗಳನ್ನು ಇಂತಹ ಶಿಬಿರದಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯವಾದ ಸಮಯವನ್ನು ಸದುಪಯೋಗಗೊಳಿಸಬೇಕು. ಕ್ರೀಡೆಯು ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮವನ್ನು ಕಲಿಸುವುದಲ್ಲದೇ ಅವರ ಜೀವನದ ಯಶಸ್ಸಿಗೂ ಕೂಡ ಕಾರಣವಾಗುತ್ತದೆ ಎಂದರು. ಮುಖ್ಯ ಅತಿಥಿ ಆರೂರು ಶ್ರೀ ವಿಷ್ಣುಮೂರ್ತಿ ಪ್ಯೂಯೆಲ್ಸ್ ಮತ್ತು ಸರ್ವಿಸಸ್ ನ ಮೂಲಕ ಶ್ರೀಧರ್ ವಿ. ಶೆಟ್ಟಿ ಶುಭ ಕೋರಿದರು. ಕ್ಲಬ್ ನ ಅಧ್ಯಕ್ಷ ಎ. ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಂ. ಚಂದ್ರಶೇಖರ್ ಹೆಗ್ಡೆ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ವಿಕ್ರಂ ಪ್ರಭು ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯದರ್ಶಿ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ವಂದಿಸಿದರು. ಪದಾಧಿಕಾರಿಗಳು, ಕಾರ್ಯಾಕಾರಿ ಸಮಿತಿಯ ಸದಸ್ಯರು, ಪೋಷಕರು…

Read More

‘ಪೆತ್ತನೊಂಜಿ ಪಿದಾಯಿ ಕೊನೊದು ಮೇಪುಗು ಕಟ್ಟ್’ ಪಂಡೆರ್ ಅಪ್ಪೆ. ಪೆತ್ತದ ಕೆಕ್ಕಿಲ್ ಗ್ ಅಲಸ್ ಬಲ್ಲ್ ಪಾಡ್ದ್ , ಕೊನೊದು ಕಿದೆ ಬಾಕಿಲ್ದ ಬೀಜದ ತಯಿಕ್ ಕಟ್ ದ್, ಪಾರ್ ಬತ್ತ್ ದ್ ಕತೆ ಪುಸ್ತಕ ಪತ್ ದ್ ಕುಲ್ಲಿಯೆ. ಎನ್ನಪ್ಪೆ ಜಾಲ್ ದ ಕೋಡಿಗ್ ಪೋದು ತೂಯಿನಾರ್ “ನಂಕ್ ದತ್ತ್ ಕಯಿ ಪೀಂಕನ್ ಗ್ ಮುಟ್ಟ. ಮೂಜಿ ದಿನೊಡ್ದಿಂಚಿ ಕೊನೊದ್ ಆ ಬೀಜದ ತೈಕ್ ಅಕ್ಕುಡುವ ಅತ್ತಾ, ಅಲ್ಪ ದಾದ ಅವು ಮೂತಾಯಿದ ಮನ್ನ್ ಗರ್ಪುನಾ?” ಪಂದ್, ಪೆತ್ತನ್ ಬುಡ್ದ್ ಅಕರ ಕುಲೆಂಜಿಗ್ ದೇರೊಂದು ಪೋಯೆರ್. ಒವುಲ ಒಂಜಿ ಸುಲಬೊಡು ಕಯಿಕ್ ತಿಕಿನ ವಸ್ತ್ ಲೆನ್ ಗಲಸುವ ನಮ. ಮುಟ್ಟದ ಅಂಗಡಿಡ್ದ್ ಸಾಮಾನ್ ಕನಪ. ಗಿಲೀಟ್ (ಮದನ ಕಯಿ)ಡ್ ಅತ್ತ್ ಡ ಅಜೆಟ್ ಪಾಡ್ದಿನ (ಮೆಯಿಕ್ ಪಾಡ್ದ್ ಗೆತ್ತ್ ದೀಯಿನ) ಅಂಗಿ ಕುಂಟು ತಿಕ್ಕಾವೊಂಬ. ಇಂಚ ಪೂರಾ ಸುಲಬೊಡು ಬೇಲೆ ಸುದಾರ್ಪೆರೆ ತೂಪ. ಸುಕ ನಾಡುವ. ಉಂದೆನೇ ಅಬ್ಬೇಸ (ಅಭ್ಯಾಸ…

Read More

ಆಕೆಗೆ ಅಂದು 20ರ ಹರೆಯ. ಹಾಗೂ ಹೀಗೂ ಡಿಗ್ರಿ ಕಂಪ್ಲೀಟ್‌ ಆಯ್ತು. ಮುಂದೇನು ಅನ್ನೋದು ಅವಳ ಪ್ರಶ್ನೆಯಾಗಿತ್ತು. ಅಷ್ಟರಲ್ಲೇ ದೂರದ ಊರಿನಿಂದ ಒಂದು ಕೆಲಸ ಅವಳನ್ನರಸಿಕೊಂಡು ಬಂತು. ಆದರೆ ಒಬ್ಬಳೇ ಹೋಗುವುದು ಆಕೆಗೆ ಸ್ವಲ್ಪ ಸವಾಲಾಗಿತ್ತು. ಗೊತ್ತಿಲ್ಲದ ಭಾಷೆ, ಪರಿಚಯವಿಲ್ಲದ ಜನ, ಹೊಸ ಊರು ಹೇಗೋ ಏನೋ ಎಂಬ ಭಯ ಆಕೆಯ ಮನಸ್ಸಲ್ಲಿತ್ತು. ಆದರೆ ಮನೆಯಲ್ಲಿನ ಆರ್ಥಿಕ ಸಮಸ್ಯೆ ಆಕೆಯನ್ನು 800 ಕಿ.ಮೀ. ದೂರದ ಊರಿಗೆ ಕೊಂಡೊಯ್ದಿತು. ಅದೊಂದು ದೊಡ್ಡ ಆಫೀಸ್‌. ಸಾವಿರಾರು ಜನ ಉದ್ಯೋಗಿಗಳು. ಸಣ್ಣಪುಟ್ಟ ಕಚೇರಿಗಳನ್ನು ನೋಡಿದ್ದ ಅವಳಿಗೆ ಮೊದಲನೇ ಸಲ ಅಷ್ಟು ದೊಡ್ಡ ಆಫೀಸ್‌ ಕಂಡು ತಲೆ ತಿರುಗಿದಂತಾಗಿತ್ತು. ಮನಸ್ಸಲ್ಲೇ ಧೈರ್ಯ ಮಾಡಿ ಪ್ರವೇಶಿಸಿದಳು. ಕೆಲಸ ಕಲಿಯಲು ಶುರು ಮಾಡಿದಳು. ಹೀಗೆ ನೋಡ ನೋಡುತ್ತಿದ್ದಂತೆ ಆರು ತಿಂಗಳು ಕಳೆದೇ ಬಿಟ್ಟಿತ್ತು. ನಗುನಗುತ್ತಾ ಎಲ್ಲರ ಜತೆ ಮಾತನಾಡುತ್ತಿದ್ದ ಆಕೆಗೆ ಅಲ್ಲಿ ಇಬ್ಬರು ಅಣ್ಣಂದಿರು ಸಿಕ್ಕರು. ಯಾವುದೇ ಪ್ರಣಯ ಪ್ರೀತಿ ಅಂತ ಹೋಗದ ಆ ನಿಷ್ಕಲ್ಮಶ ಜೀವಕ್ಕೆ ಈ ಅಣ್ಣಂದಿರ…

Read More