Author: admin
ತುಳು ರಂಗಭೂಮಿ ಹಾಗೂ ಚಿತ್ರರಂಗದ ಮೇರು ನಿರ್ದೇಶಕ, ನಿರ್ಮಾಪಕ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವದೂತೆ ಗುಳಿಗೆ ನಾಟಕದಲ್ಲೇ ಮಗ್ನರಾಗಿದ್ದರು. ನಿರೀಕ್ಷೆಗೂ ಮೀರಿದ ಬೇಡಿಕೆಯಿಂದಾಗಿ ಅದ್ಭುತ ಯಶಸ್ಸು ಗಳಿಸಿರುವ ಶಿವದೂತೆ ಗುಳಿಗೆ ನಾಟಕವು ಸುಮಾರು 500 ಪ್ರದರ್ಶನಗಳ ಸನಿಹದಲ್ಲಿದೆ. ಆ ಮೂಲಕ ಎಲ್ಲರ ಗಮನವನ್ನೂ ತುಳು ರಂಗಭೂಮಿಯತ್ತ ಸೆಳೆದಿದ್ದಾರೆ. ಈ ನಾಟಕವು ಕನ್ನಡಕ್ಕೂ ಡಬ್ಬಿಂಗ್ ಆಗಿದ್ದು, ಮಲಯಾಳ, ಮರಾಠಿಯಲ್ಲೂ ಪ್ರದರ್ಶನ ಕಾಣಲಿದೆ. ದೇಶದ ಪ್ರಮುಖ ನಗರಗಳಲ್ಲಿ ದಿನವೊಂದರಲ್ಲೇ 2-3 ಪ್ರದರ್ಶನ ನೀಡಿ ಸುದ್ದಿಯಾಗಿದ್ದ ಈ ನಾಟಕವು ವಿದೇಶದಲ್ಲೂ ಭರ್ಜರಿ ಸದ್ದು ಮಾಡಿತ್ತು. ಈ ಎಲ್ಲ ಕಾರಣಗಳಿಂದ ಹೊಸ ನಾಟಕ ಪ್ರದರ್ಶನಕ್ಕೆ ಅವರಿಗೆ ಅವಕಾಶ ಸಿಗಲಿಲ್ಲ. ಎಲ್ಲರೂ ಶಿವದೂತ ಗುಳಿಗನನ್ನೇ ಕೇಳುವವರು. ಈಗ ಅವರ ಹೊಸ ನಾಟಕ “ಮೈತಿದಿ” ಪ್ರದರ್ಶನಕ್ಕೆ ಸಿದ್ಧವಾಗಿದೆ. ಇದನ್ನು ಹಿಂದೆಯೇ ರಚಿಸಿ ಸಿದ್ಧಪಡಿಸಿದ್ದ ವಿಜಯಕುಮಾರ್ ಅವರು ಗುಳಿಗನ ಕಾರಣದಿಂದ ಮುನ್ನೆಲೆಗೆ ತರಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೈತಿದಿಗೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟಂಬರ್ನಲ್ಲಿ ಈ ನಾಟಕ…
ಈ ವರ್ಷದ ಅತೀ ನಿರೀಕ್ಷಿತ ತುಳು ಸಿನಿಮಾ, ಗಿರಿಗಿಟ್ ಖ್ಯಾತಿಯ ಬಿಗ್ಬಾಸ್ ಚಾಂಪಿಯನ್ ರೂಪೇಶ್ ಶೆಟ್ಟಿ ನೇತೃತ್ವದ ತಂಡದ ಸರ್ಕಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಗಮನ ಸೆಳೆದಿರುವ ಪುತ್ತೂರಿನ ಬಹುಮುಖ ಪ್ರತಿಭೆ ರಚನಾ ರೈ ಅವರಿಗೆ ಸಿನಿಮಾ ರಂಗದಲ್ಲಿ ಉಜ್ವಲ ಭವಿಷ್ಯ ಇರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತಿದೆ. ಅವರ ಆಕರ್ಷಕ ದೇಹ ಸೌಂದರ್ಯ, ರೂಪ, ಅಭಿನಯ, ಬಹುಮುಖ ರಂಗದಲ್ಲಿ ತೋರಿಸುತ್ತಿರುವ ಕಲಾ ಪ್ರೌಢಿಮೆಗಳೆಲ್ಲವೂ ಅವರ ಭವಿಷ್ಯದ ದಾರಿಯನ್ನು ಉಜ್ವಲಗೊಳಿಸಲಿದೆ. ಎಳವೆಯಲ್ಲೇ ಕ್ಯಾಮರಾ ಎದುರಿಸಿದ್ದ ಅವರು ಅದೇ ಕಾರಣದಿಂದ ಸರ್ಕಸ್ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರೊಂದಿಗೆ ಕಿಂಚಿತ್ತೂ ಅಳುಕಿಲ್ಲದೆ ನಟಿಸಿ ಉತ್ತಮ ಪ್ರದರ್ಶನವನ್ನೂ ನೀಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಪತ್ರಿಕೋದ್ಯಮದಲ್ಲಿ ಪದವಿ ಮಾಡಿರುವ ಅವರು ಉತ್ತಮ ಭರತನಾಟ್ಯ ಕಲಾವಿದೆ, ಕ್ರೀಡಾಪಟು ಕೂಡ ಆಗಿರುವ ಇವರು ಪುತ್ತೂರಿನಲ್ಲೇ ಹುಟ್ಟಿ ಬೆಳೆದವರು. ಉಜಿರೆಯ ಎಸ್ಡಿಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ. ವೃತ್ತಿಪರ ಬ್ಯಾಂಡ್ಮಿಂಟನ್ ಮತ್ತು ಫುಟ್ಬಾಲ್ ಕ್ರೀಡಾಪಟು ಕೂಡ ಆಗಿರುವ ಅವರು ಉತ್ತಮ ಚಿತ್ರಕಲಾವಿದೆಯೂ ಆಗಿದ್ದಾರೆ. ಚಿತ್ರಕಲೆಯಲ್ಲಿ ರಾಜ್ಯ…
ಯುವನಟ ಪ್ರವೀರ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ “ಸೈರನ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ “ಸೈರನ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ “ಸೈರನ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಡಾಲಿ ಧನಂಜಯ್, ನಟಿ ಸ್ಪರ್ಶ ರೇಖಾ, ನಿರ್ದೇಶಕ ಎಎಂಆರ್ ರಮೇಶ್, ಪತ್ರಕರ್ತ ರಂಗನಾಥ್ ಭಾರಧ್ವಾಜ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, “ಸೈರನ್’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ನಟ ಪ್ರವೀರ್ ಶೆಟ್ಟಿ, “ಇದೊಂದು ಕಂಪ್ಲೀಟ್ ಆ್ಯಕ್ಷನ್ ಕಂ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಈ ಸಿನಿಮಾದಲ್ಲಿ ನಾನು ಇನ್ವೆಸ್ಟಿಗೇಟಿಂಗ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಸಮಾಜದಲ್ಲಿ ಇಂದು ನಡೆಯುತ್ತಿರುವ ಕೆಲವು ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.…
ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಎಂದರೆ ನಮಗೆ ನೆನಪಾಗೋದು ಅವರ ಸಾಹಿತ್ಯ, ಜನಪದ ಜ್ಞಾನ. ಸಾಹಿತಿಯಾಗಿ, ಅತ್ಯುತ್ತಮ ಸಂಘಟನಾ ಪಟುವಾಗಿ, ಸಮಾಜಸೇವಕರಾಗಿ ಅವರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ. ತುಳು ಬರಹಗಾರರಾಗಿ ಅವರು ತುಳುನಾಡಿನ ಪರಂಪರೆ ಶ್ರೇಷ್ಠತೆಗಳನ್ನು ಎತ್ತಿ ಹಿಡಿಯುವ ಕಾಯಕವನ್ನು ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಅಂಕಣಕಾರರಾಗಿದ್ದರು, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯೂ ಅವರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ 1926ರ ಮಾರ್ಚ್ 19ರಂದು ಲಕ್ಶ್ಮೀನಾರಾಯಣ ಆಳ್ವರು ಜನಿಸಿದರು, `ಏರ್ಯ ಬೀಡು’ ಎಂಬ ಪ್ರತಿಷ್ಠಿತ ಮಾತೃ ಮೂಲ ಪದ್ಧತಿಯ, ದೈವಾರಾಧನೆಯ, ಕೃಷಿ ಪ್ರಧಾನ ಬಂಟ ಮನೆತನಕ್ಕೆ ಸೇರಿದವರು. ತಾಯಿ ಸೋಮಕ್ಕ ಮತ್ತು ತಂದೆ ಸುಬ್ಬಯ್ಯ ಆಳ್ವ. ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಬಂಟ್ವಾಳದಲ್ಲಿ. ಅವರು ಹೈಸ್ಕೂಲು ಓದಿದ್ದು ಕೆನರಾ ಹೈಸ್ಕೂಲು ಮಂಗಳೂರಿನಲ್ಲಿ. ಸ್ವಾತಂತ್ರ್ಯ ಹೋರಾಟಗಳು ತೀವ್ರವಾಗಿದ್ದ ಕಾಲದಲ್ಲಿ ಹುಟ್ಟಿದ್ದರಿಂದ ಸ್ವಾತಂತ್ರ್ಯಪೂರ್ವದ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಹೋರಾಟಗಾರರ ಚಿಂತನೆಗಳು ಮತ್ತು…
ಆಳ್ವಾಸ್ನ ವರ್ಧಿತ ಜಲಜನಕ ಇಂಧನ ಕೋಶ’ ಕ್ಕೆ ಪೇಟೆಂಟ್ ಅನುಮೋದನೆ ಸುಸ್ಥಿರ ಭವಿಷ್ಯಕ್ಕಾಗಿ ಕ್ರಾಂತಿಕಾರಿ ಇಂಧನ: ಆಳ್ವಾಸ್ಎಂ ಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಿಂದ‘ವರ್ಧಿತ ಜಲಜನಕ ಇಂಧನ ಕೋಶ’
ಮೂಡುಬಿದಿರೆ: ‘ವರ್ಧಿತ ಜಲಜನಕ ಇಂಧನ ಕೋಶ’ (ಹೈಡ್ರೋಜನ್ ಫ್ಯುಯೆಲ್ ಸೆಲ್- ಎಚ್ಎಫ್ಸಿ) ತಂತ್ರಜ್ಞಾನಕ್ಕಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೊದಲ ಪೇಟೆಂಟ್ ಪಡೆದಿದ್ದು, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಾರಥ್ಯದಲ್ಲಿ ಪ್ರಾಧ್ಯಾಪಕ ಡಾ.ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಆವಿಷ್ಕಾರವು ಸಾಕಾರಗೊಂಡಿದೆ. ಪ್ರಾಧ್ಯಾಪಕ ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕರಾದ ಪ್ರೀತಮ್ ಕ್ಯಾಸ್ಟೆಲಿನೊ, ಜಯರಾಮ ಅರಸಳಿಕೆ, ಸತ್ಯನಾರಾಯಣ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಸೋಹನ್ ಪೂಜಾರಿ, ಸನ್ನಿ ರಾಮ್ನಿವಾಸ್ ಶರ್ಮಾ, ಪ್ರಶಾಂತ್ ಶೇಖರ್ ಪೂಜಾರಿ ಮತ್ತು ಚಿರಾಗ್ ಸತೀಶ್ ಪೂಜಾರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಪೇಟೆಂಟ್ (ಪೇಟೆಂಟ್ ಸಂಖ್ಯೆ -201941035383) ನಾವಿನ್ಯ ಆವಿಷ್ಕಾರವಾಗಿದ್ದು, ‘ಆಲ್ಟ್ರಾ ವಯಲೆಟ್ ಕಿರಣಗಳಿಗೆ ಅತ್ಯುತ್ತಮವಾಗಿ ತೆರೆದುಕೊಂಡ ನೆಫಿಯಾನ್ ಎಂಬ ಪೊರೆಯ ವರ್ಧಿತ ಕಾರ್ಯಕ್ಷಮತೆ ನೀಡುವ ಜಲಜನಕ ಇಂಧನ ಕೋಶ’ ವಾಗಿದೆ. (ಹೈಡ್ರೋಜನ್ ಫ್ಯುಯೆಲ್ ಸೆಲ್ಸ್ ಹ್ಯಾವಿಂಗ್ ಎನ್ಹ್ಯಾನ್ಸ್ಡ್ ಫರ್ಮಾರೆನ್ಸ್ ವಿದ್ ನಫೀಯಾನ್ ಪ್ರೊಟಾನ್ ಎಕ್ಸ್ಚೇಂಜ್ ಮೆಂಬ್ರೇನ್ ಆಪ್ಟಿಮಲ್ ಎಕ್ಸ್ಪೋಸ್ಡ್ ಟು ಆಲ್ಟ್ರಾವಯಲೆಟ್ ರೇಸ್). ಆಳ್ವಾಸ್ ಎಂಜಿನಿಯರಿಂಗ್ ಮತ್ತು…
ಮಕ್ಕಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ. ಸಮಾಜದ ಅನೇಕ ಮಂದಿ ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸ್ತ್ರೀ – ಪುರುಷರೆಂಬ ಬೇಧವಿಲ್ಲದೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಧನೆ ಇತರರಿಗೆ ಮಾದರಿಯಾಗಬೇಕು ಎಂದು ಉದ್ಯಮಿ, ಮೂಡಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಹೇಳಿದರು. ಅವರು ಬಂಟರ ಸಂಘ ವಾಮದಪದವು ವಲಯ ವತಿಯಿಂದ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ ನೇತೃತ್ವದಲ್ಲಿ ಆಲದಪದವು ನಿವೇಶನದಲ್ಲಿ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ತಾಲೂಕು ಮಟ್ಟದ ಹಗ್ಗಜಗ್ಗಾಟ ಮತ್ತು ವಲಯ ಮಟ್ಟದ ಆಟೋಟ ಸ್ವರ್ಧೆ ಬಂಟ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಮದಪದವು ವಲಯ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಅಮ್ಮು ರೈ ಹರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಇರಾ ವಲಯ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಬಾಲಾಜಿಬೈಲು ಶುಭ ಹಾರೈಸಿದರು. ಮಂಗಳೂರು ಬಂಟರ…
ದಿನಾಂಕ 13-8-2023 ರ ರವಿವಾರ ಯುವ ಬಂಟರ ಸಂಘ (ರಿ) ಕಂಬಳಕಟ್ಟ ಕೊಡವೂರು ಇವರ ಆಶ್ರಯದಲ್ಲಿ ನಡೆಯಲಿರುವ ‘ಆಟಿ ಒಂಜಿ ನೆಂಪು’ ಸಭಾ ಕಾರ್ಯಕ್ರಮದಲ್ಲಿ ಶ್ರೀ ಯಶ್ ಪಾಲ್ ಎ.ಸುವರ್ಣ (ಮಾನ್ಯ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ ) ಇವರ ಗೌರವ ಉಪಸ್ಥಿತಿಯಿದ್ದು, ಮುಖ್ಯ ಅತಿಥಿಯಾಗಿ ಶ್ರೀ ಬಿ ಜಯಕರ್ ಶೆಟ್ಟಿ ಇಂದ್ರಾಳಿ (ಪ್ರಧಾನ ಕಾರ್ಯದರ್ಶಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು) ಇವರು ಭಾಗವಹಿಸಲಿದ್ದಾರೆ. ಆಟಿ ತಿಂಗಳ ಮಹತ್ವದ ಬಗ್ಗೆ ಮಾತುಕತೆಯನ್ನು ಶ್ರೀಮತಿ ವಂದನಾ ರೈ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕರು ಜೇಸಿ ವಿದ್ಯಾಸಂಸ್ಥೆ ಕಾರ್ಕಳ) ಇವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂದಗಾಣಿಸಿ ಕೊಡಬೇಕು ಎಂದು ಶ್ರೀ ಶಿವಪ್ರಸಾದ್ ಶೆಟ್ಟಿ , ಮಜಲಮನೆ (ಅಧ್ಯಕ್ಷರು), ಶ್ರೀ ಪುಷ್ಪರಾಜ ಶೆಟ್ಟಿ, ಆದಿ ಉಡುಪಿ (ಪ್ರಧಾನ ಕಾರ್ಯದರ್ಶಿ), ಶ್ರೀ ರಮೇಶ್ ಶೆಟ್ಟಿ, ಮೂಡುಬೆಟ್ಟು (ಖಜಾಂಚಿ ) ಹಾಗೂ ಸರ್ವ ಸದಸ್ಯರು, ಪದಾಧಿಕಾರಿಗಳು ಕೋರಿದ್ದಾರೆ. ವಿ.…
ಮಾನವರಿಗೆ ಮದುವೆ ಒಂದು ಸಾಮಾಜಿಕ ಸದಾಚಾರ. ಮನುಷ್ಯನಿಗೆ ನಾಗರೀಕತೆ ತಿಳಿಯದ ಆ ಕಾಲಘಟ್ಟದಲ್ಲಿ ಸ್ತ್ರೀ – ಪುರುಷರ ಮಧ್ಯೆ ಮದುವೆಯೆನ್ನುವುದೇ ಇರಲಿಲ್ಲ. ಸಾಮಾನ್ಯ ಪ್ರಾಣಿಗಳಂತೆ ಇಚ್ಛಕಾಮುಕರಾಗಿ ಇರುತ್ತಿದ್ದರು. ಮಕ್ಕಳನ್ನು ಸಾಕುವುದು, ಬೆಳೆಸುವುದು ಕೇವಲ ಹೆಂಗಸರ ಕೆಲಸವಾಗಿತ್ತು. ಹೆಣ್ಣನ್ನು ಸಂಭೋಗ ಸುಖಕ್ಕೋಸ್ಕರ ಮಾತ್ರ ಗಂಡಸು ಉಪಯೋಗಿಸುತ್ತಿದ್ದ ಕಾಲವದು. ಹೆಣ್ಣನ್ನು ಬಲಾತ್ಕಾರವಾಗಿ ಅನುಭವಿಸುತ್ತಿದ್ದರು. ಪುರುಷರು ಹೆಣ್ಣಿಗಾಗಿ ತಮ್ಮ ತಮ್ಮೊಳಗೆ ಕಾದಾಡುತ್ತಿದ್ದರು. ಪುರುಷರ ಜೊತೆ ಕಾದಾಡುವ ಶಕ್ತಿಯಿಲ್ಲದ ಹೆಣ್ಣು ಅಸಹಾಯಕಳಾಗಿ ಪುರುಷರ ಕಾಮದಾಹಕ್ಕೆ ಬಲಿಯಾಗುತ್ತಿದ್ದಳು. ಹೆಣ್ಣಿಗೆ ರಕ್ಷಣೆಯೇ ಇರುತ್ತಿರಲಿಲ್ಲ. ಇದನ್ನು ಅರಿತ ಋಷಿ ಸಮೂಹ ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಕಟ್ಟಳೆಯನ್ನು ವಿಧಿಸಿದರು. ಅಲ್ಲಿಂದ ಹೆಣ್ಣಿಗೆ ರಕ್ಷಣೆಯ ಹಾದಿ ಸುಗಮವಾಯಿತು. ಸುಖ ಜೀವನಕ್ಕೆ ಹೆಣ್ಣು ಪಾದರ್ಪಣೆ ಮಾಡಿದಳು. ಸ್ತ್ರೀಯರನ್ನು ಪರಪುರುಷರ ಕಾಮಲಾಲಾಸೆಯಿಂದ ಕಾಪಾಡುವುದಕ್ಕಾಗಿ ಆ ಸಮಯದಲ್ಲಿ ಪಾತಿವೃತ್ಯ ಎಂಬ ಏಕಪುರುಷ ನಿಯಮವನ್ನು ಮಾಡಿದರು. ಈ ನಿಯಮದಿಂದಾಗಿ ಸ್ತೀಯರನ್ನು ಮನೆಯಲ್ಲಿ ಬಿಟ್ಟು ಪುರುಷ ಆಹಾರ ಸಂಪಾದನೆ ಮಾಡಿಕೊಂಡು ಬಂದು ರಕ್ಷಣೆ ನೀಡುವಂತಾಯಿತು. ಮುಂದೆ ಇದಕ್ಕೆ ಋಷಿಮುನಿಗಳು…
ಹಂಪಿ ಎಂದಾಕ್ಷಣ ರಾಜ ವೈಭವಗಳು ಕಣ್ಮಂದೆ ಎದ್ದು ಬರುತ್ತದೆ. ಇಂತಹ ಪಾರಂಪರಿಕ ತಾಣವನ್ನು ಸುತ್ತಾಡುವುದೇ ಒಂದು ಸೊಗಸು. ವಾರಂತ್ಯದಲ್ಲಿ ಪಯಣಿಸಲು ಹಂಬಲಿಸುವ ಮನಕ್ಕೆ ಖಂಡಿತವಾಗಿ ಎರಡು ದಿನ ಸುತ್ತಿ ನೋಡುವಷ್ಟು ಇಲ್ಲಿದೆ. ಅದರಲ್ಲೂ ಮುಖ್ಯವಾಗಿ ವಿರೂಪಾಕ್ಷ ದೇವಾಲಯದ ಕೌತುಗಳು ಅನೇಕ. ಮುಂಜಾನೆ ಸುಮಾರು 8 ಗಂಟೆಗೆ ಹಂಪಿಯ ಅಂಗಣ ತಲುಪಿದ್ದೇವು ನಾವು. ಬಿಸಿಲಿನಲ್ಲಿ ಇಲ್ಲಿ ತಿರುಗಾಟ ಕಷ್ಟ ಅಂತ ಬೇಗನೆ ಬಂದು ನೋಡಿದರೆ ನಮ್ಮ ಗೈಡ್ ಒಂದು ಕಡೆ ನಮ್ಮ ವಾಹನ ನಿಲ್ಲಿಸಿ ಹೇಳಿದರು, ಇಲ್ಲಿಂದಲೇ ನಡೆದು ಸಾಗಬೇಕು. ಹಾಗೆ ಅಂದದ್ದೆ ತಡ ಕಾಲ್ನಡಿಗೆಯಲ್ಲಿ ಸಾಗಲು ಕೆಲವರು ನಮ್ಮಿಂದ ಅಸಾಧ್ಯ ಎಂದು ವಾಹನದಲ್ಲೇ ಕುಳಿತಿದ್ದರು. “ಕಣ್ಣಿದ್ದರೆ ಕನಕಗಿರಿ, ಕಾಲಿದ್ದರೆ ಹಂಪಿ ಎಂದೂ ಹಂಪಿಯನ್ನು ನಡೆದು ನೋಡು. ಉಜ್ಜಯಿನಿಯನ್ನು ಕುಂತು ನೋಡು” ಎಂದು ಬಣ್ಣಿಸಿದ್ದು ನಿಜವಾಗಿಯೂ ಸತ್ಯದ ನುಡಿ. ಈ ಕಲಾತ್ಮಕತೆಯನ್ನು ಗುರುತಿಸುವ ಒಳಗಣ್ಣು ಬೇಕು. ಬಗೆದಷ್ಟು ದೊರಕುವ ಕೌತುಕ ಮೊಗೆದಷ್ಟೂ ಹೊಸತನ ಮೂಕ ವಿಸ್ಮಯಗೊಳಿಸುವ ಶಿಲ್ಪಕಲಾ ಬೆರಗು ಇಲ್ಲಿದೆ. ಆಚೆ ಈಚೆ…
ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಇದೀಗ ಯುವ ಬಂಟರ ಸಂಘ, ಕಂಬಳಕಟ್ಟ- ಕೊಡವೂರು ಇದರ ದಶಮಾನೋತ್ಸವದ ಪ್ರಯುಕ್ತ ಸಂಘ ವ್ಯಾಪ್ತಿಯ 25 ವರ್ಷದೊಳಗಿನ ಯುವಕ – ಯುವತಿಯರಿಗೆ ಬ್ಯಾಂಕಿಂಗ್ – ಫೈನಾನ್ಸ್, ಐಟಿ, ಏವಿಯೇಷನ್, ಟ್ರಾವೆಲ್ ಟೂರಿಸಂ, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಸಂದರ್ಶನ ಕಲೆಯೊಂದಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಿದೆ. ಈ ತರಬೇತಿ ಪಡೆಯಲು ಇಚ್ಛಿಸುವ 10 ಅಭ್ಯರ್ಥಿಗಳಿಗೆ ಶುಲ್ಕದ ಶೇ. 50% ಸ್ಕಾಲರ್ ಶಿಪ್ ನ್ನು ಉನ್ನತಿ ಕೆರಿಯರ್ ಅಕಾಡೆಮಿಯು ನೀಡಲಿದೆ. ಈ ತರಬೇತಿಯೊಂದಿಗೆ ಅಭ್ಯರ್ಥಿಗಳು ಆನ್ ಲೈನ್ ಬಿ.ಕಾಂ, ಬಿಬಿಎ, ಬಿಸಿಎ, ಬಿಎ ಪದವಿಯನ್ನು ಅಥವಾ ಎಂಕಾಂ, ಎಂಬಿಎ, ಎಂಸಿಎ, ಎಂಎ ಸ್ನಾತಕೋತ್ತರ ಪದವಿಯನ್ನು ಪಡೆಯಲು ಇಚ್ಛಿಸಿದಲ್ಲಿ ಯುಜಿಸಿ ಮಾನ್ಯತೆಯುಳ್ಳ ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಾದ ಜೈನ್ ಯೂನಿವರ್ಸಿಟಿ, ಬೆಂಗಳೂರು, ಹಿಂದೂಸ್ತಾನ್ ಯೂನಿವರ್ಸಿಟಿ, ಚೆನ್ನೈ, ವಿಜ್ಞಾನ್ ಯೂನಿವರ್ಸಿಟಿ,…