Author: admin
ಬಂಟರ ಸಂಘ ಅಹ್ಮದಾಬಾದ್ ಗುಜರಾತಿನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಾರಾಯಣ ರೈ ಅವರು ಪುತ್ತೂರಿನಲ್ಲಿ ಕೊನೆಯುಸಿರೆಳೆದರು. ವಿಜಯಾ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸದಾ ಹಸನ್ಮುಖಿಯಾಗಿ ನೇರ ನಡೆ ನುಡಿ ಹೊಂದಿದ್ದ ಸಮಾಜ ಸೇವಕ ನಾರಾಯಣ ರೈ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
1) 83ನೇ ಅಖಿಲ ಭಾರತ ಅಂತರ್ ವಿವಿ ಮಹಿಳಾ ಅಥ್ಲೆಟಿಕ್ಸ್ ಕ್ರೀಡಾಕೂಟ. 2) ಮಂಗಳೂರು ವಿವಿ ಗಳಿಸಿದ 7 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆ. 3) 7ನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ಸ್. 4) ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ 33 ಕ್ರೀಡಾಪಟುಗಳ ತಂಡದಲ್ಲಿ 26 ಕ್ರೀಡಾಪಟುಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ವಿದ್ಯಾಗಿರಿ: ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಮುಕ್ತಾಯಗೊಂಡ 83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಹಿಳಾ ಕ್ರೀಡಾಕೂಟದಲ್ಲಿ 56 ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಪದಕ ಪಡೆದ ಎಲ್ಲ ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. 2 ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಆಳ್ವಾಸ್ ಕಾಲೇಜಿನ ಆರು ವಿದ್ಯಾರ್ಥಿನಿಯರು ಪಡೆದಿದ್ದಾರೆ. ಈ ಪೈಕಿ ಅಂಜಲಿ ಸಿ. ಎರಡು ಪದಕಗಳನ್ನು ಪಡೆದುಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭವಾನಿ ಯಾದವ್ ಉದ್ದ ಜಿಗಿತದಲ್ಲಿ ಚಿನ್ನ,…
ಬಿಲ್ಲು ಹಾಗೂ ಬಾಣ ಒಂದಕ್ಕೊಂದು ಸಂಬಂಧ ಇದ್ದಂತೆ, ಭಗವಂತ ಬಿಲ್ಲಾದರೆ, ಭಕ್ತರು ಬಾಣದಂತೆ. ಬಿಲ್ಲನ್ನು ಹೇಗೆ ಬೇಕಾದರೂ ಭಾಗಿಸಬಹುದು. ಆದರೆ ಬಾಣವನ್ನು ಗುರಿಯ ಕಡೆಗೆ ಇಡಬೇಕು. ಭಕ್ತರಾದ ನಾವು ಭಗವಂತನ ಪುಣ್ಯ ಕಾರ್ಯಕ್ಕಾಗಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಬಾಣದ ಗುರಿಯಂತೆ, ದಾನಿಗಳ ನೆರವಿನಿಂದ ಹಾಗೂ ಭಕ್ತರ ಸಹೃದಯದಿಂದ ಸಹಕಾರವನ್ನು ನೀಡಿದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಾಧ್ಯವೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡೆದ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಶ್ರೀ ಕೇಶವ ಕಾರ್ನವರು, ಶ್ರೀ ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ಧಾರ ಸಮಿತಿ…
ಚಿಣ್ಣರ ಬಿಂಬ ಮುಂಬಯಿ ಇದರ ಭಾಯಂದರ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ವರ್ಧೆಯು ಆ. 27 ರಂದು ಬೆಳಗ್ಗೆ 9.30 ರಿಂದ ಭಾಯಂದರ್ ಪೂರ್ವದ ಶಕ್ತಿನಗರ ಸೈಂಟ್ ಆಗ್ನೇಸ್ ಹೈಸ್ಕೂಲ್ ಸಭಾಗ್ರಹದಲ್ಲಿ ನಡೆಯಲಿದೆ. ಮಕ್ಕಳ ಪ್ರತಿಭಾ ಸ್ವರ್ಧೆ ಕಾರ್ಯಕ್ರಮವನ್ನು ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಅರುಣೋದಯ ಎಸ್.ರೈ ಬಿಳಿಯೂರುಗುತ್ತು ಉದ್ಘಾಟಿಸಲಿದ್ದಾರೆ. ಮೀರಾ- ಭಾಯಂದರ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಮೀರಾ- ಭಾಯಂದರ್ ಜತೆ ಕೋಶಾಧಿಕಾರಿ ರಮೇಶ ಎಂ.ಶೆಟ್ಟಿ ಸಿದ್ದಕಟ್ಟೆ, ಎಂಬಿಆರ್ ಗ್ಲೋಬಲ್ ಸರ್ವಿಸಸ್ ಪೈ. ಲಿ. ಮೈಂಡ್ ಸ್ಪೇಸ್ ನ ಸ್ಥಾಪಕ ವಿಜಯ್ ಬಾಲಕೃಷ್ಣ ರಾವ್, ಕರ್ನಾಟಕ ಮಹಾಮಂಡಲ ಮೀರಾ – ಭಾಯಂದರ್ ಸ್ಥಾಪಕ ಚಂದ್ರಶೇಖರ ವಿ. ಶೆಟ್ಟಿ, ಅರುಣ್ ಕಾಮರ್ಸ್ ಕ್ಲಾಸಸ್ ಭಾಯಂದರ್ ಸ್ಥಾಪಕ ಅರುಣ್ ಟಿ. ಪಕ್ಕಳ, ಮಾಟುಂಗಾ ಲಯನ್ಸ್ ಪಯೋನಿಯರ್ ಇಂಗ್ಲಿಷ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ…
ಆಟಿ ತಿಂಗಳ ಮಹತ್ವವನ್ನು ಕೇವಲ ಸಂಪ್ರದಾಯಿಕವಾಗಿ ಆಚರಿಸುವುದಕ್ಕಿಂತ ವರ್ಷವಿಡೀ ಅನುಸರಿಸಿದರೆ ಜೀವನದಲ್ಲಿ ಸಂತೋಷ ಕಾಣಬಹುದು. ಇಂದು ನಾವು ಪ್ರಾಕೃತಿಕ ತಿಂಡಿ ತಿನಿಸುಗಳನ್ನು ಬದಿಗಿಟ್ಟು ರಾಸಾಯನಿಕ ಬೆರಕೆಯ ತಿನಿಸುಗಳನ್ನು ಬಯಸುತ್ತಿದ್ದೇವೆ. ಆದರಿಂದ ವಿವಿಧ ತರದ ರೋಗ ರುಜಿನಗಳನ್ನು ಆಹ್ವಾನಿಸುತ್ತಿದ್ದೇವೆ. ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಪ್ರಾಕೃತಿಕ ತಿಂಡಿ ತಿನಿಸುಗಳನ್ನು ಪರಿಚಯಿಸುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ಬಂಟ್ಸ್ ಫೋರಮ್ ಮೀರಾ – ಭಯಂದರಿನ ಅಧ್ಯಕ್ಷ ಇನ್ನ ಚಂದ್ರಹಾಸ ಕೆ. ಶೆಟ್ಟಿ ನುಡಿದರು. ಅವರು ಬಂಟ್ಸ್ ಫೋರಮ್ ಮೀರಾ – ಭಾಯಂದರಿನ ಮಹಿಳಾ ವಿಭಾಗದ ಮುಂದಾಳತ್ವದಲ್ಲಿ ಆ.2 ರಂದು ಮೀರಾರೋಡ್ ಪೂರ್ವದ ಸುರಭಿ ಹೋಟೆಲಿನ ಸಭಾಗ್ರಹದಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಮಹಿಳಾ ವಿಭಾಗದ ಸದಸ್ಯೆಯರ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಂತೋಷ ವ್ಯಕ್ತಪಡಿಸಿ, ಮುಂದಿಗೂ ಇದೇ ರೀತಿಯಲ್ಲಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಹಕರಿಸಬೇಕು. ಇಂತಹ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಬೇಕು ಎಂದರು.…
ದೇಶದಲ್ಲಿ ಕಳೆದೊಂದು ದಶಕದಿಂದೀಚೆಗೆ ತೀವ್ರ ಚರ್ಚೆಗೀಡಾಗಿರುವ ಸಮಾನ ನಾಗರಿಕ ಸಂಹಿತೆ(ಯುಸಿಸಿ) ಜಾರಿ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರದಲ್ಲಿನ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿ ಯುಸಿಸಿ ಜಾರಿಗೆ ಈ ಹಿಂದಿನಿಂದಲೂ ಒಲವು ತೋರುತ್ತಲೇ ಬಂದಿದೆ. ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಗಳಲ್ಲಿ ಯುಸಿಸಿ ಜಾರಿಯನ್ನು ಪ್ರಸ್ತಾವಿಸುತ್ತಲೇ ಬಂದಿದೆ. ಕಳೆದೆರಡೂ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಗಳಿಸಿ ಮೈತ್ರಿ ಸರಕಾರದ ನೇತೃತ್ವ ವಹಿಸಿರುವುದರಿಂದ ಯುಸಿಸಿ ಜಾರಿಯ ಪರವಾಗಿರುವವರು ಸರಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿರುವ ಹೊರತಾಗಿಯೂ ಕೇಂದ್ರ ಸರಕಾರ ಹೆಚ್ಚಿನ ಆತುರ ತೋರದೆ ಭಾರೀ ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತ ಬಂದಿದೆ. ಯುಸಿಸಿ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕಳೆದ ವರ್ಷ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ದೇಶದಲ್ಲಿರುವ ಬೇರೆ ಬೇರೆ ಧರ್ಮ, ಪಂಗಡಗಳಿಗೆ ಸೇರಿದ ಜನರು ಆಸ್ತಿ, ವಿವಾಹಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನುಗಳನ್ನು ಅನುಸರಿಸುವುದು ದೇಶದ ಏಕತೆಗೆ…
ಅದು 20ನೇ ಶತಮಾನ!, ಚಿಗುರು ಮೀಸೆಯ ಯವ್ವನದ ದಿನ. ಕಾಲೇಜಿನ ಮೆಟ್ಟಿಲನ್ನು ಹತ್ತಿ ವಿದ್ಯಾಸರಸ್ವತಿಯನ್ನು ಒಲಿಸುವ ಸಂಧರ್ಭ, ಬಿಸಿ ರಕ್ತದ ಸಮಯ, ಎಲ್ಲದಕ್ಕೂ ಸಿದ್ದವಿದ್ದ ಹೊತ್ತು. ಹೀಗೆ ಕಾಲೇಜಿನ ದಿನಗಳಲ್ಲಿ ಪರಿಚಯವಾದ ಒಬ್ಬ ಅತೀ ಹತ್ತಿರದ ಗೆಳೆಯನ ಬಗ್ಗೆ ಇಂದಿನ ಲೇಖನ. ಸುದೃಡ ವ್ಯಕ್ತಿತ್ವ, ಮುಖದಲ್ಲಿ ಮಂದಹಾಸ, ಎಲ್ಲವನ್ನೂ ಗೆಲ್ಲುವ ಉತ್ಸಾಹ, ಹೀಗೆ ಮೊದಲ ಭೇಟಿಯಲ್ಲೇ ಡಿಫರೆಂಟ್ ಇಂಪ್ರೆಷನ್ ಮೂಡಿಸಿ ಪರಿಚಯವಾದ ಗೆಳೆಯನೇ ಮಿಥುನ್ ರೈ. ಹೌದು ! ನನ್ನ ಹಾಗೂ ಮಿಥುನ್ ರೈ ಗೆಳೆತನ ಇಂದು ನಿನ್ನೆಯದಲ್ಲ, ಕಾಲೇಜಿನ ದಿನಗಳಿಂದ ಮಿಥುನ್ ರೈಯ ಏಳು ಬೀಳುಗಳನ್ನು ಬಹಳ ಹತ್ತಿರದಿಂದ ನೋಡಿದವ ನಾನು. ಬಹಳ ಸರಳ ವ್ಯಕ್ತಿ, ಶ್ರೀಮಂತ ಮನೆತನದಿಂದ ಹುಟ್ಟಿ ಬಂದರೂ ಗೆಳೆತನ ಎಂಬ ವಿಚಾರ ಬಂದಾಗ ಎಲ್ಲರೊಂದಿಗೂ ಮೇಲು ಕೀಳು ಎಂಬ ಭೇಧ ಭಾವವಿಲ್ಲದೆ ಬೆರೆಯುವ ಗುಣ. ತನ್ನವರಿಗೊಂದು ಸಮಸ್ಯೆ ಎಂದರೆ ಮೊದಲು ನಿಲ್ಲುವ ಮನಸ್ಸು ! ಮಿಥುನ್ ರೈ ಎಲ್ಲಿಯ ಮಟ್ಟಿಗೆ ಡೌನ್ ಟು ಅರ್ಥ್ ವ್ಯಕ್ತಿಯೆಂದರೆ…
ಐತಿಹಾಸಿಕ, ಜಗತ್ಪ್ರಸಿದ್ದಿ ಶ್ರವಣಬೆಳಗೊಳದ ವಿಂಧ್ಯಗಿರಿ ತಾಣ ಅಪಾಯದ ಅಂಚಿನ ಮರೀಚಿಕೆ….! ಕಣ್ಣಿದ್ದು ಕುರುಡಾದ ಪುರಾತತ್ವ ಇಲಾಖೆ…! ಸಹಸ್ರಾರು ವರ್ಷಗಳ ಹಿಂದಿನ ದಂತಕಥೆ ನೆಲಸಮದ ಭೀತಿಯಲ್ಲಿ…..! ಬಾಹುಬಲಿ ನೆಲೆಸಿರುವ ಬೆಟ್ಟದಿಂದ ಜಾರಿದೆ ಬೃಹದಾಕಾರದ ಕಲ್ಲುಗಳು, ಪುರಾತತ್ವ ಇಲಾಖೆ, ಅಧಿಕಾರಿಗಳು ಮೌನ….!? – ಕೆ. ಸಂತೋಷ ಶೆಟ್ಟಿ, ಮೊಳಹಳ್ಳಿ ಕುಂದಾಪುರ, ಉಡುಪಿ ಜಿಲ್ಲೆ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು) ಐತಿಹಾಸಿಕ ಪುರಾಣ ಪ್ರಸಿದ್ಧ ವಿಂಧ್ಯಗಿರಿ ಬೆಟ್ಟ ಕುಸಿಯುವ ಭೀತಿಯಲ್ಲಿದೆ. ಸಾವಿರ ಸಾವಿರ ಭಕ್ತರು ದಿನನಿತ್ಯ ವಿಂಧ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿ ಪ್ರವಾಸ ತಾಣದ ಅನುಭವ ಪಡೆದುಕೊಳ್ಳುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಜೀವಕ್ಕೆ ಕುತ್ತು ತರುವ ಭೀತಿ ಎದುರಾಗುತ್ತಿದೆ.ಅದು ವಿಶ್ವ ವಿಖ್ಯಾತ ತಾಣ.. ರಾಷ್ಟ್ರೀಯ ಸ್ಮಾರಕ ಎಂದು ಕೇಂದ್ರ ಸರ್ಕಾರದಿಂದ ಗುರ್ತಿಸಿಕೊಂಡಿರುವ, ಅಹಿಂಸಾ ಮೂರ್ತಿ ಬಾಹುಬಲಿ ಸ್ವಾಮಿ ನೆಲೆಸಿರೋ ಪುಣ್ಯ ಕ್ಷೇತ್ರ (shravanabelagola). ನಿತ್ಯ ಸಹಸ್ರಾರು ಭಕ್ತರು ಬಂದು ಇಲ್ಲಿನ ಬಾಹುಬಲಿ ಏಕ ಶಿಲಾ ವಿಗ್ರಹ ನೋಡಿ ಪುಳಕಿತರಾಗುತ್ತಾರೆ. ಇಂತಹ ಪುಣ್ಯ ಕ್ಷೇತ್ರವನ್ನ ಕೇಂದ್ರ ಪುರಾತತ್ವ…
ಜು.23; ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಮಹಾರಾಷ್ಟ್ರ ಘಟಕದಿಂದ ‘ಜಾನಪದ ಕಲೆಯ ಬೆಳವಣಿಗೆ, ಉತ್ತರದಲ್ಲಿ-ದಕ್ಷಿಣದಲ್ಲಿ’ ವಿಷಯದ ಸಂವಾದ
ಮುಂಬಾಯಿ, ಜು.13: ಕರ್ನಾಟಕ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ , ಅದನ್ನು ಇಂದಿನಿಂದ ಮತ್ತು ಮುಂದಿನ ಜನಾಂಗಕ್ಕೆ ತಿಳಿಯ ಪಡಿಸಿ ಬಾವೀ ಜನಾಂಗಕ್ಕೆ ಹಸ್ತಾಂತರಿಸುವ ̧ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು ಇದರ ಮಹಾರಾಷ್ಟ್ರ ಘಟಕವು ಇದೇ ಜು.೨೩ನೇ ಶನಿವಾರ ̧ಸಂಜೆ ೩.೦೦ ಗಂಟೆಯಿಂದ ಬಂಟರ ಸಂಘ ಮುಂಬಾಯಿ ಇದರ ಅನೇಕ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿನ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಸಭಾ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು(ರಿ.) ಬೆಂಗಳೂರು ಮಹಾರಾಷ್ಟ್ರ ಘಟಕ ಇದರ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿಇವರ ಅಧ್ಯಕ್ಷತೆಯಲ್ಲಿ ಮುಂಬಾಯಿ ಮಹಾನಗರದಲ್ಲಿನ ಜನತೆಗೆ ‘ಜಾನಪದ ಕಲೆಯ ಬೆಳವಣಿಗೆ, ಉತ್ತರದಲ್ಲಿ-ದಕ್ಷಿಣದಲ್ಲಿ’ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಘಟಕದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀನಿವಾಸ ಸಪಲ್ಯ ಇವರು ‘ಜಾನಪದ ಕಲೆಯ ದಕ್ಷಿಣ ಕನ್ನಡದ ನಡಿಗೆ’ ಬಗ್ಗೆ ಮತ್ತು ಹಿರಿಯ ಲೇಖಕಿ ಲಲಿತ ಅಂಗಡಿ ಇವರು ‘ಉತ್ತರ ಕನ್ನಡದಲ್ಲಿ ಬೆಳೆಯುತ್ತಿರುವ ಜಾನಪದ ಕಲೆ’ ಬಗ್ಗೆ…
ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಕೆ ಶೆಟ್ಟಿ ಆಯ್ಕೆ.
ಜೀರ್ಣೋದ್ದಾರಗೊಳ್ಳಲಿರುವ ಮೂಡಬಿದಿರೆಯ ಶಿರ್ತಾಡಿ ವಾಲ್ಪಾಡಿ ಗ್ರಾಮಗಳ ಅರ್ಜುನಾಪುರದ ಸುಮಾರು 1000 ವರ್ಷಗಳ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಪುಣೆಯ ಉದ್ಯಮಿ, ಸಮಾಜಸೇವಕ ನಾರಾಯಣ ಕೆ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ನಾರಾಯಣ ಶೆಟ್ಟಿಯವರು ಪುಣೆಯಲ್ಲಿ ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಓಡಿಯೂರು ಶ್ರೀಗಳ ಷಷ್ಟಬ್ದ ಸಂಭ್ರಮ ಪುಣೆ ಸಮಿತಿಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಶ್ರೀ ಗುರುದೇವಾ ಸೇವಾ ಬಳಗ ಪುಣೆ, ಪುಣೆ ಬಂಟ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿಯೂ ಪ್ರಸ್ತುತ ಹಲವಾರು ಸಂಘ ಸಂಸ್ಥೆಗಳಿಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪುರಾತನ ಹಾಗೂ ಕಾರಣೀಕದ ಕ್ಷೇತ್ರವಾಗಿದೆ. ದ್ವಾಪರ ಯುಗದಲ್ಲಿ ಅರ್ಜುನನು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರಿಂದ ಇಲ್ಲಿಗೆ ಅರ್ಜುನಾಪುರ ಎಂಬ ಹೆಸರು ಬಂದಿದೆ ಎನ್ನುವ ಪ್ರತೀತಿಯಿದೆ.ಜೀರ್ಣಾವಸ್ಥೆಯಲ್ಲಿರುವ ದೇವಾಲಯದೊಳಗೆ ಲಿಂಗರೂಪಿಯಾದ ಶಿವನು ಭಕ್ತರ ಬೇಡಿಕೆಯನ್ನು ಈಡೇರಿಸಿಕೊಂಡು ಬರುತ್ತಿದ್ದು ಸುತ್ತಮುತ್ತಲಿನ ಊರಿನ ಗ್ರಾಮಸ್ಥರಿಗೆ ಈ ದೇವಾಲಯವೇ ಭಕ್ತಿಯ ಆರಾಧನಾ ಕೇಂದ್ರವಾಗಿದೆ. ಇದೀಗ ದೇವಸ್ಥಾನದ ಜೀರ್ಣೋದ್ದಾರಕ್ಕೆ ಊರ ಪರವೂರ ಮಹನೀಯರು ಸೇರಿಕೊಂಡು ಸಂಕಲ್ಪ…