Author: admin

ವಿದ್ಯಾಗಿರಿ: ಇದು ಮಾಹಿತಿಯ ಯುಗ, ಇಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಆಕರ್ಷಣೆ ಪಡೆಯುತ್ತವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ವೇಣುಗೋಪಾಲ್. ಕೆ. ಆರ್ ಹೇಳಿದರು. ಅವರು ಮುಂಡ್ರುದೆಗುತ್ತು ಕೆ. ಅಮರನಾಥ್ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ನಡೆದ ಆಳ್ವಾಸ್ ತಾಂತ್ರಿಕ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.  ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ಹಾಗೂ ಮಾನವನ ಬುದ್ದಿಮತ್ತೆಯ ವ್ಯತ್ಯಾಸ ತಿಳಿಯಲು ಕಷ್ಟವಾಗಲಿದೆ. ಇದರಿಂದಾಗಿ ಮುಂದಕ್ಕೆ ಅನೇಕ ರೀತಿಯ ಅಪರಾಧಗಳು ಹೆಚ್ಚಾಗಲಿದೆ. ದೇಹದ ಸಮತೋಲನಕ್ಕೆ ಯೋಗ, ಮೆದುಳಿನ ಸೃಜನಶೀಲತೆಗೆ ಧ್ಯಾನ, ಪ್ರಾಣಾಯಾಮ, ಸರಿಯಾದ ಪ್ರಮಾಣದಲ್ಲಿ ಊಟ, ಸರಿಯಾದ ಸಮಯಕ್ಕೆ ನಿದ್ದೆ ಹಾಗೂ ಮಾಡುವ ಕಾರ್ಯದಲ್ಲಿ ಸಂಪೂರ್ಣ ಶ್ರದ್ಧೆ ಪಾಲಿಸುತ್ತಾನೋ ಆತ ಸಾಧನೆಯ ಮೆಟ್ಟಿಲುಗಳನ್ನು ಏರುವುದು ನಿಶ್ಚಯ ಎಂದರು ಮನುಷ್ಯನ ಜೀವನದಲ್ಲಿ ಜನನ ಹಾಗೂ ಮರಣದ ನಡುವೆ ಅವನಿಗಿರುವುದು ಸಮಯ ಮಾತ್ರ. ಹಾಗಾಗಿ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಜೀವನಕ್ಕೆ ನಿಜವಾದ ಅರ್ಥ ನಾವು ಇತರರಿಗಾಗಿ ಬದುಕಿದಾಗ ಬರುತ್ತದೆ. ಪರೋಪಕಾರದ ಗುಣವು ನಮ್ಮಲ್ಲಿಹೆಚ್ಚು…

Read More

ಮೂಡುಬಿದಿರೆ: ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಅದು ದೇಶದ ರಕ್ಷಣೆಗಾಗಿ ಸಮರ್ಪಣೆಯಾದರೆ ಅದಕ್ಕಿಂತ ದೊಡ್ಡ ಹೆಮ್ಮೆ ಮತ್ತೊಂದಿಲ್ಲ ಎಂದು ಭಾರತೀಯ ನಿವೃತ್ತ ಸೇನಾಧಿಕಾರಿ ಹವಾಲ್ದಾರ ಯೋಗೀಶ್ ಪೂವಯ್ಯ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಡಾ. ಕೆ ಶಿವರಾಮ ಕಾರಂತ ವೇದಿಕೆಯಲ್ಲಿ ಚಿಗುರು ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಯೋಧನ ಮನ ಮೂರನೇ ಕಾರ್ಯಾಗಾರದಲ್ಲಿ ಮಾತನಾಡಿದರು. ಸೇನೆಯಲ್ಲಿ ನಾಯಕತ್ವವು ಬಹಳಮುಖ್ಯ. ನಾಯಕನಾಗಿ ತಂಡವನ್ನು ಮುನ್ನಡೆಸಿಕೊಂಡು ದೇಶವನ್ನು ಕಾಪಾಡುವುದು ಅವನ ಕರ್ತವ್ಯ. ಸೈನಿಕನಾಗ ಬೇಕಾದರೆ ದೇಹ ಬಲ ಒಂದೇ ಸಾಲದು. ಬುದ್ಧಿಬಲದ ಅವಶ್ಯಕತೆ ಕೂಡಾ ಬಹುಮುಖ್ಯ ಎಂದರು. ಯೋಧ ಮಾತ್ರವಲ್ಲದೆ ಪ್ರತಿ ಒಬ್ಬ ಪ್ರಜೆಯೂ ಕೂಡಾ ದೇಶದ ಬಗ್ಗೆ ಯೋಚಿಸಿದಾಗ ದೇಶವು ಸುರಕ್ಷಿತವಾಗಿ ಇರಲು ಸಾಧ್ಯ. ನಮ್ಮ ಸೈನಿಕರು, ನಾಡಿಗಾಗಿ ಕೆಲಸ ಮಾಡುತ್ತಾರೆ. ಆದಾಯಕ್ಕಾಗಿ ಎಂದು ಅಲ್ಲ. ಪ್ರತಿ ಒಬ್ಬ ಸೈನಿಕನಲ್ಲೂ ಮಾತೃಭೂಮಿಯ ರಕ್ಷಣೆಯ ಜವಾಬ್ದಾರಿ ಇರುತ್ತದೆ ಎಂದರು. ಆಳ್ವಾಸ್ ಕಾಲೇಜಿನ ಕುಲಸಚಿವ- ಮೌಲ್ಯಮಾಪನ ಡಾ ನಾರಾಯಣ ಶೆಟ್ಟಿ ಎನ್‍ಪಿ ಮಾತನಾಡಿ ಒಮ್ಮೆ ಸೈನಿಕ…

Read More

ದೇವಾಲಯಗಳಲ್ಲಿ ಪ್ರತಿಷ್ಠೆ ಮಾಡಿದ ವಿಗ್ರಹ ಮೂರ್ತಿ ಲಿಂಗಾದಿಗಳಿಗೆ ಪ್ರತಿ ಹನ್ನೆರಡು ವರ್ಷದಲ್ಲಿ ಒಮ್ಮೆ ಅಷ್ಠಬಂಧ ಬ್ರಹ್ಮಕಲಶ (ಕುಂಭಾಭಿಷೇಕ) ಮಾಡುತ್ತಾರೆ. ಒಮ್ಮೆ ಬ್ರಹ್ಮಕಲಶ ಮಾಡಿದರೆ ಮುಂದಿನ 12 ವರ್ಷದವರೆಗೆ ದೇವಸ್ಥಾನದ ಗುಡಿ ಗೋಪುರಗಳೆಲ್ಲಾ ಸುದೃಢವಾಗಿ ಇರಬೇಕು. ಅನಂತರ ವರ್ಷದ ಜಾತ್ರೆ ಮತ್ತು ಪರ್ವ (ಹಬ್ಬ)ಗಳ ಆಚರಣೆ ಮಾತ್ರ ನಡೆದು ಬರಬೇಕು. ಆದರೆ ತುಳುನಾಡಿನಲ್ಲಿ ಮಾತ್ರ ಕಳೆದ ಎರಡು ಮೂರು ದಶಕಗಳಿಂದೀಚೆಗೆ ಬ್ರಹ್ಮಕಲಶ ಮಾಡಿದ ದೇವಸ್ಥಾನಗಳಲ್ಲಿ ಅದರ ನೆನಪಿಗಾಗಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಎಂಬ ಹೆಸರಿನಿಂದ ಆಚರಿಸಲ್ಪಡುತ್ತದೆ. ಇಲ್ಲಿನ ದೇವಾಲಯಗಳೆಲ್ಲಾ ಆಗಮಶಾಸ್ತ್ರ ಆಧಾರದಲ್ಲಿ ನೆಲೆಯಾಗಿದೆ. ಆದರೆ ಶಾಸ್ತ್ರದಲ್ಲಿ ಪ್ರತಿಷ್ಠಾ ದಿನದ ಬಗ್ಗೆಯಾಗಲಿ, ಅದನ್ನು ಆಚರಿಸುವ ರೀತಿಯ ಬಗ್ಗೆಯಾಗಲೀ ವಿವರವೇ ಇಲ್ಲ ಎಂದು ಶಾಸ್ತ್ರ ಬಲ್ಲವರ ವಾದ. ಹೀಗಿರುವಾಗ ಅಶಾಸ್ತ್ರೀಯವಾದ ಈ ಆಚರಣೆ ಬಗ್ಗೆ ಆರೋಗ್ಯಪೂರ್ಣವಾದ ಚಿಂತನೆ ಅಗತ್ಯ ಇಲ್ಲವೇ? ಸನಾತನ ಧರ್ಮದ ಆಚರಣೆಗಳಲ್ಲಿ ಶ್ರದ್ಧಾಭಕ್ತಿ, ನಂಬಿಕೆ, ಧರ್ಮಪ್ರಶ್ನೆ, ಜನಜಾಗೃತಿ ಮತ್ತು ಆರೋಗ್ಯದ ರಹಸ್ಯ ಅಡಕವಾಗಿದೆ ಎನ್ನುತ್ತಾರೆ ಬಲ್ಲವರು. ವರ್ಷಂಪ್ರತಿ ಜಾತ್ರೆಯ ದಿವಸ ಬೆಳಗ್ಗೆ ಕ್ಷೇತ್ರ…

Read More

ಕಾಟುಕುಕ್ಕೆ ಗ್ರಾಮದ ಅರೆಕ್ಕಾಡಿಯಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ಅತೀ ಪ್ರಾಚೀನ ಅರೆಕ್ಕಾಡಿ ಶ್ರೀ ಧೂಮಾವತಿ ಪರಿವಾರ ದೈವಸ್ಥಾನ ಜೀರ್ಣೋದ್ದಾರ ಕಾರ್ಯದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಏಳು ಪ್ರತಿಷ್ಠಿತ ಮನೆತನಗಳ ನೇತೃತ್ವದಲ್ಲಿ ಆರಾಧನೆ ನಡೆಸಲಾಗುತ್ತಿದ್ದ ದೈವ ಸಾನಿಧ್ಯದಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಆರಾಧನೆ ಪರ್ವಗಳು ತಟಸ್ಥಗೊಂಡಿದ್ದು ನಾಡಿನ ಸುಭೀಕ್ಷೆಗಾಗಿ ಊರವರ ನೇತೃತ್ವದಲ್ಲಿ ದೈವಸ್ಥಾನವನ್ನು ನವೀಕರಿಸಿ ನಿರ್ಮಿಸಲು ನಿಶ್ಚಯಿಸಲಾಗಿದ್ದು ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವ ಹಾಗೂ ಊರವರ ಸಹಭಾಗಿತ್ವದಲ್ಲಿ ಬಾಲಾಲಯ ಪ್ರತಿಷ್ಠಾ ಕಾರ್ಯ ಸಾನಿಧ್ಯ ಪರಿಸರದಲ್ಲಿ ನೆರವೇರಿತು. ತಂತ್ರಿ ಸಹಾಯಕ, ಆರ್ಚಕ ಶ್ರೀಧರ ಭಟ್ ವಾರಿಕ್ಕಾಡ್ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲುಗುತ್ತು, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಜಿ.ಕೆ.ಭಟ್ ಪೂವಾಳೆ, ಗೌರವ ಸಲಹೆಗಾರ ನಾರಾಯಣ ಮಯ್ಯ, ನಾರಾಯಣ ಮವ್ವಾರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ, ವಕೀಲ ಚಂದ್ರಮೋಹನ್, ಗೋಪಾಲ ಮಣಿಯಾಣಿ ಕೋಲಾಯಗುತ್ತು, ಮಹಿಳಾ ವಿಭಾಗದ ಅಧ್ಯಕ್ಷೆ ಸುಶೀಲ ವಿ.ಕೆ., ಸಾಹಿತಿ ರಾಜಶ್ರೀ ಟಿ. ರೈ ಪೆರ್ಲ, ಸುಬ್ರಹ್ಮಣ್ಯ…

Read More

ವಿದ್ಯಾಗಿರಿ: ಮನಸ್ಸು ಸ್ವಚ್ಛವಾದರೆ ಮಾತ್ರ ನಮ್ಮ ಸಮಾಜ ಸ್ವಚ್ಛವಾಗಲು ಸಾಧ್ಯ ಎಂದು ಮಂಗಳೂರಿನ ರಾಮಕೃಷ್ಣ ಮಿಷನ್‍ನ ‘ಸ್ವಚ್ಛ ಭಾರತ’ ಮಿಷನ್‍ನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ನುಡಿದರು.  ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಚಿಗುರು ವಿದ್ಯಾರ್ಥಿ ವೇದಿಕೆಯ ವತಿಯಿಂದ ‘ಸ್ವಚ್ಛ ಭಾರತ ನಿರ್ಮಾಣದಲ್ಲಿ ಸ್ವಚ್ಛ ಮನಸ್ಸು’’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಚ್ಛತೆಯ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ, ಇತರರು ಎಸೆದ ಕಸವನ್ನು ಎತ್ತುವುದರಿಂದ ನಮ್ಮಲ್ಲಿ ನಾವು ಕಸ ಎಸೆಯುವ ಪ್ರವೃತ್ತಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿ ನಾಗರೀಕ, ಸಮಾಜದಲ್ಲಿ ಸ್ವಚ್ಛತೆಗೆ ಅತೀ ಹೆಚ್ಚು ಮಹತ್ವವನ್ನು ನೀಡಬೇಕಿದೆ. ಪುರಾತನ ನಾಗರೀಕತೆಗಳಾದ ಹರಪ್ಪ ಹಾಗೂ ಮೊಹೆಂಜೊದಾರೋದಲ್ಲಿ ಸ್ವಚ್ಛತೆಗೆ ನೀಡಿದ ಮಹತ್ವವನ್ನು ಕಾಣಬಹುದು ಎಂದರು. ಎಲ್ಲರೂ ನಮ್ಮವರು ಎನ್ನುವ ವಿವೇಚನೆ ನಮ್ಮಲ್ಲಿ ಮೂಡಿದರೆ ಮಾತ್ರ ನಮ್ಮ ಮನಸ್ಸು ಸ್ವಚ್ಛವಾಗಲು ಸಾಧ್ಯ. ಈ ಕಾರ್ಯಕ್ರಮವೂ ಬಸವಣ್ಣನವರ ಜಯಂತಿಯಂದೇ ನಡೆದಿರುವುದು ಅತ್ಯಂತ ಸಂತಸ ಉಂಟುಮಾಡಿದೆ. ರಜೆಯನ್ನು ತ್ಯಜಿಸಿ ಕಾರ್ಯಕ್ರಮದಲ್ಲಿ ಸೇರುವ ಮೂಲಕ  ಬಸವಣ್ಣನವರ ಕಾಯಕವೇ ಕೈಲಾಸ ತತ್ವಕ್ಕೆ ಈ…

Read More

ಮಂಗಳೂರು: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಆಯೋಜಿಸಿರುವ ಐದನೇ ಆವೃತ್ತಿಯ ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮವು ಶನಿವಾರದಂದು ನಗರದ ಫೀಜಾ ಬೈ ನೆಕ್ಸಸ್ ನಲ್ಲಿ ಆರಂಭಗೊಂಡಿತು. ಓಷನ್ ಪರ್ಲ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ನ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ಶ್ರೀ ದುರೈ ಅರುಣ್ ಪ್ರಶಾಂತ್ ಸೆಲ್ವಂ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ಸಹಾಯಕ ನಿರ್ದೇಶಕ ಶ್ರೀ ರೋಷನ್ ಕೋಲಾರ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ದುರೈ, ಚಾಕೋಲೇಟ್ ಎಂದರೆ ಕೇವಲ ಒಂದು ಆಹಾರ ಉತ್ಪನ್ನವಲ್ಲ; ಅದೊಂದು ಭಾವನೆ. ಜೊತೆಗೆ ಜೀವನದ ಒಂದು ಅವಿಭಾಜ್ಯ ಅಂಗ. ಯುವ ಜನತೆ ಜೀವನದಲ್ಲಿ ಮೌಲ್ಯಗಳನ್ನು ಗುರುತಿಸಿಕೊಂಡು ಅವನ್ನು ಅಳವಡಿಸಿಕೊಂಡರೆ ಯಶಸ್ಸು ಅಸಾಧ್ಯವಲ್ಲ. ನಿಟ್ಟೆ ವಿಶ್ವವಿದ್ಯಾಲಯವು ನಗರದ ಯುವ ಬೇಕರ್ ಗಳನ್ನು ಗುರುತಿಸಿ ಉತ್ತೇಜಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಹೇಳಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ಸಹಾಯಕ ನಿರ್ದೇಶಕ ಶ್ರೀ ರೋಷನ್ ಕೋಲಾರ ಮಾತನಾಡಿ, 'ಚಾಕೋಲೇಟ್ ಒತ್ತಡ…

Read More

ಉಡುಪಿ ಕವಿ ಮುದ್ದಣ ಮಾರ್ಗದ ಸನಿಹದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠದ ಮೊದಲ ಮಹಡಿಯಲ್ಲಿ ಸುಮಾರು 2 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಬಾಲ ಭೋಜನಾಲಯ ಮತ್ತು ಧ್ಯಾನ ಮಂದಿರದ ಲೋಕಾರ್ಪಣೆ ಶುಕ್ರವಾರ ಮಂದಿರ ಮಠದಲ್ಲಿ ನಡೆಯಿತು. ಮಂದಿರ ಮಠದ ಮ್ಯಾನೇಜಿಂಗ್ ಟ್ರಸ್ಟಿ ಕೆ.ಕೆ. ಆವರ್ಸೇಕರ್ ಮುಂಬಯಿ ಅವರು ಉದ್ಘಾಟಿಸಿ, ಮನುಷ್ಯರಾದ ನಾವು ಕೇವಲ ನಿಮಿತ್ತ ಮಾತ್ರ, ಎಲ್ಲವೂ ಪರಮಾತ್ಮನ ಇಚ್ಛೆಯಂತೆಯೇ ನೆರವೇರುತ್ತದೆ. ಕಲಿಯುಗದಲ್ಲಿ ಪವಾಡ, ಕಾರಣಿಕತೆಯಿಂದ ಮೆರೆಯುತ್ತಿರುವ ಶ್ರೀ ನಿತ್ಯಾನಂದ ಸ್ವಾಮಿಯ ಇಚ್ಛೆಯಂತೆ ಭಕ್ತರಿಗೆ ಅನುಕೂಲವಾಗುವ ಬಾಲಭೋಜನಾಲಯ, ಧ್ಯಾನ ಮಂದಿರ ನಿರ್ಮಾಣಗೊಂಡಿದೆ ಎಂದು ಆಶಯ ವ್ಯಕ್ತಪಡಿಸಿದರು. ಮಂದಿರ ಮಠದ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಕೆ. ಮೋಹನಚಂದ್ರನ್ ನಂಬಿಯಾರ್ ಮಾತನಾಡಿ, ಮಂದಿರ ಮಠದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದಂತೆ, ಕಾರಣೀಕತೆಯೂ ವೃದ್ಧಿಸುತ್ತಿದೆ ಎಂದರು. ಶಾಸಕ ಯಶ್‌ಪಾಲ್ ಎ. ಸುವರ್ಣ ಶುಭಾಶಂಸನೆಗೈದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮುಂಬಯಿ ಉದ್ಯಮಿಗಳಾದ ಸುರೇಂದ್ರ ಕಲ್ಯಾಣಪುರ, ನಾಗೇಶ್…

Read More

ಪ್ರಸ್ತುತ ದಿನಮಾನಗಳಲ್ಲಿ ಸಮಾಜ ಸುಧಾರಕರ, ಮಹನೀಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ ಅವರ ತತ್ವಾದರ್ಶಗಳನ್ನು ಮರೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ವಿಷಾದಿಸಿದರು. ಕೃಷ್ಣಮೂರ್ತಿ ಪುರಂನ ನಮನ ಕಲಾಮಂಟಪದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು- ಚಾಮರಾಜನಗರ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಕಾಯಕದಲ್ಲಿ ನಿಷ್ಠೆ ತೋರಿಸುವ ಐವರಿಗೆ ಕಾಯಕ ಶ್ರೇಷ್ಠ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. 12 ನೇ ಶತಮಾನದಲ್ಲಿಯೇ ಸಮಾನತೆಗಾಗಿ ಕ್ರಾಂತಿ ಮಾಡಿದ ಬಸವಣ್ಣನವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ್ದರು. ಇಂದು ಅದೇ ಮೀಸಲಾತಿ ಮತಗಳಿಕೆಯ ಆಸ್ತ್ರವಾಗಿದೆ. ಕೆಲವೇ ಕುಟುಂಬಗಳ ಸ್ವತ್ತಾಗಿದ್ದ ಇದು ನ್ಯಾಯವಲ್ಲ. ಮೀಸಲಾತಿ ಆರ್ಹ ಬಡವರಿಗೆ ತಲುಪಬೇಕು. ಮತ ಗಳಿಕೆಗಾಗಿ ಜಾತಿಯ ವಿಷ ಬೀಜ ಬಿತ್ತುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದರು. ಮೈಸೂರು ವಿಶ್ವವಿದ್ಯಾನಿಲಯ ಸರ್ ಎಂ. ಜಿ. ಬಸವರಾಜ ಮಾತನಾಡಿ, ರೈತರು ಕೆಟ್ಟ ದಾರಿಗೆ…

Read More

ಎಕ್ಸ್‌ಲೆಂಟ್‌ ಮತ್ತು ಲಿಟ್ಲ್‌ ಸ್ವಾರ್‌ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತ್ವಿತಾ ಪಿ. ಶೆಟ್ಟಿ ಎಸ್.ಎಸ್.ಎಲ್.ಸಿ -2024 ಪರೀಕ್ಷೆಯಲ್ಲಿ 625ಕ್ಕೆ 621 ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ 5ನೇ ರ‍್ಯಾಂಕ್ ಮತ್ತು ಕುಂದಾಪುರ ತಾಲೂಕಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ, 10 ಸಾವಿರ ನಗದು ಬಹುಮಾನ ನೀಡುವುದರ ಮೂಲಕ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಐ.ಎ.ಎಸ್. ಅಧಿಕಾರಿಯಾಗುವ ಆಸೆ: ಈ ಸಂದರ್ಭದಲ್ಲಿ ಮಾತನಾಡಿದ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಪ್ರತ್ವಿತಾ ಪಿ. ಶೆಟ್ಟಿ ಮುಂದೆ ಯು.ಪಿ.ಎಸ್.ಸಿ. ಪರೀಕ್ಷೆ ಬರೆದು ಐ.ಎ.ಎಸ್ ಅಧಿಕಾರಿಯಾಗುವ ಆಸೆಯಿದೆ ಎನ್ನುತ್ತಾ, ನಮ್ಮ ಶಾಲೆಯ ಶಿಕ್ಷಕರು ನಮ್ಮೊಂದಿಗೆ ಸಂಜೆ 6 ರ ನಿಂತು ನಿರಂತರ ತರಬೇತಿ ನೀಡಿರುವುದರಿಂದ ಈ ಅಂಕ ಗಳಿಸಲು ಸಹಕಾರಿಯಾಯಿತು ಎಂದರು. ಎಮ್.ಎಮ್.ಹೆಗ್ಡೆ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎಮ್. ಮಹೇಶ ಹೆಗ್ಡೆ ಶುಭ ಹಾರೈಸಿದರು. ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ರಮೇಶ್…

Read More

ದಕ್ಷಿಣ ಕನ್ನಡ ಸಂಸದ, ಕರ್ನಾಟಕದ ಬಿಜೆಪಿಯ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರು ಶಾಲು ಮತ್ತು ಪುಷ್ಪಗುಚ್ಛ ನೀಡಿ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಂಬೈಯ ಕಾರ್ಯದರ್ಶಿ ಮೋಹನ ಗೌಡ ಮತ್ತು ಬ್ಯಾಂಕ್ ನ ಆಡಳಿತ ಮಂಡಳಿ, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More