Author: admin

ಕರ್ನಾಟಕ ಸಂಘ ಕತಾರ್‌ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ 2024 ನೇ ಸಾಲಿನ ವಾರ್ಷಿಕ ರಕ್ತದಾನ ಶಿಬಿರವನ್ನು ದೋಹಾದ ಎಚ್‌ಎಂಸಿಯ ಕತಾರ್‌ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ ಆಯೋಜಿಸಿತ್ತು. ಸಂಘದ ಉಪಾಧ್ಯಕ್ಷರಾದ ಕೆ ಎಸ್‌ ರಮೇಶ ಅವರು ಸಂಕ್ಷಿಪ್ತ ಸಭಾಕಾರ್ಯಕ್ರಮದ ಪ್ರಾರಂಭಿಕ ನುಡಿಗಳೊಂದಿಗೆ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಅವರನ್ನು ಪರಿಚಯಿಸಿ, ಆಹ್ವಾನಿಸಿದರು. ಅಧ್ಯಕ್ಷರಾದ ರವಿ ಶೆಟ್ಟಿಯವರು ನೆರೆದಿದ್ದ ಎಲ್ಲಾ ಗಣ್ಯರು ಮತ್ತು ದಾನಿಗಳನ್ನು ಸ್ವಾಗತಿಸಿ, ರಕ್ತವು ಎಷ್ಟು ಅಮೂಲ್ಯವಾದುದು “ತಾಯಿಯ ಕಣ್ಣೀರು ತನ್ನ ಮಗುವಿನ ಜೀವವನ್ನು ಉಳಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ರಕ್ತವು ಸಹಾಯ ಮಾಡುತ್ತದೆ’ ಎಂಬುದನ್ನು ಸೂಚಿಸುವ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಬಿಂದು ನಾಯರ್‌, ಇತರ ಗಣ್ಯರಾದ ಐಸಿಬಿಎಫ್‌ ಅಧ್ಯಕ್ಷ ಶಾನವಾಸ್‌ ಬಾವಾ, ಕರ್ನಾಟಕ ಟೋಸ್ಟ್‌ ಮಾಸ್ಟರ್ಸ್‌ ಅಧ್ಯಕ್ಷ ಉದಯ್‌ ಶೆಟ್ಟಿ ತಮ್ಮ ಭಾಷಣದಲ್ಲಿ ರಕ್ತದಾನದ ಪ್ರಮುಖ ಕೊಡುಗೆಗಳು ಮತ್ತು ಸಮಾಜದ ಮೇಲೆ ಅದರ ಪರಿಣಾಮವನ್ನು ವಿವರಿಸಿದರು. ಹಮದ್‌ ಮೆಡಿಕಲ್‌…

Read More

ತುಳುನಾಡಿನ ಜನಪ್ರಿಯ ಕ್ರೀಡೆಗಳಲ್ಲಿ ಕಂಬಳ ಅತೀ ಪುರಾತನವಾದುದು. ಅಗಾಧ ಇತಿಹಾಸವನ್ನು ಹೊಂದಿರುವ ಕಂಬಳವು ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬದಲಾವಣೆ ಹೊಂದುತ್ತಿದ್ದರೂ ಇವತ್ತಿಗೂ ಕೂಡ ಅದೇ ಹಿಂದಿನ ಸೊಗಡನ್ನು ಕಾಪಾಡಿಕೊಂಡು ಬಂದಿದೆ. ಕಂಬಳವು ಬರೀ ಕ್ರೀಡೆಯಲ್ಲ ತುಳುನಾಡಿನ ಜನರ ಕೃಷಿಯ ಸಂಕೇತವಾಗಿದೆ. ಕೆಸರು ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಈ ಕಂಬಳವು ಕ್ರೀಡೆಗಿಂತ ಹೆಚ್ಚಾಗಿ ಒಂದು ಕಲೆ ಎಂದೇ ಹೇಳಬಹುದು. ಈ ಕಲೆಯನ್ನು ಪ್ರಾರಂಭಿಸಿದ ಕೀರ್ತಿ ನಮ್ಮ ಹಿರಿಯರಿಗೆ ಸಲ್ಲುತ್ತದೆ. ಮೊದಲೆಲ್ಲ ಕೃಷಿ ಮಾಡುವ ಗದ್ದೆಯಲ್ಲೇ ಕಂಬಳ ನಡೆಯುತ್ತಿತ್ತು. ಆದರೆ ಪ್ರಸ್ತುತ ಗದ್ದೆಗಳು ಕಾಣ ಸಿಗುವುದೇ ಕಡಿಮೆಯಾದ ಕಾರಣ ಕಂಬಳಕ್ಕಾಗಿಯೇ ಬೇಕಾಗಿ ವಿಶೇಷ ಕರೆಯನ್ನು (ಕೆಸರಿನ ಗದ್ದೆಯನ್ನು) ನಿರ್ಮಿಸುತ್ತಾರೆ. ಗದ್ದೆಯ ಮಣ್ಣು, ಮರಳು ಮಣ್ಣು ನೀರು ಹಾಕಿ ಇದನ್ನು ತಯಾರು ಮಾಡುತ್ತಾರೆ. ಕೋಣಗಳು ಓಡಿಸಲು ತಯಾರು ಮಾಡುವ ಸ್ಥಳವನ್ನು ಪಂಥ್‌ ಎಂದು ಹಾಗೂ ಓಡಿ ಬಂದ ಕೋಣವು ಮುಕ್ತಾಯಕ್ಕೆ ತಲುಪುವ ಗೆರೆಯನ್ನು ಮಂಜೊಟ್ಟಿ ಎಂದು ಕರೆಯುತ್ತಾರೆ. ಕೋಣಗಳ ವಯಸ್ಸಿನ ಆಧಾರದ ಮೇಲೆ…

Read More

ಹೋಟೆಲ್ ಕ್ಷೇತ್ರದ ಕುರಿತ ಬೇಡಿಕೆಗಳನ್ನು ಬಜೆಟ್‌ ಹಿನ್ನೆಲೆಯಲ್ಲಿ ಮರು ಪರಿಶೀಲಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ಮನವಿ ಮಾಡಿಕೊಂಡಿದೆ. ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು ಹೋಟೆಲಿಗರ ನಿಯೋಗದೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಹೋಟೆಲ್‌ ಕ್ಷೇತ್ರದ ಪರವಾಗಿ ಈ ಬೇಡಿಕೆಗಳನ್ನು ಮರು ಪರಿಶೀಲಿಸಿ ಎಂದು ಅವರು ಕೋರಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಬೇಡಿಕೆಗಳು : ಕರ್ನಾಟಕವು 300 ಕಿ.ಮೀ. ಕರಾವಳಿಯನ್ನು ಹೊಂದಿದೆ. ಕರ್ನಾಟಕ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಹಣವನ್ನು ನಿಯೋಜಿಸಿ. ಇದು ಹೆಚ್ಚಿನ ಉದ್ಯೋಗಗಳನ್ನು ಮತ್ತು ಆದಾಯವನ್ನು ಸೃಷ್ಟಿಸುತ್ತದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದು. ಅಲ್ಲದೆ, ಪ್ರಸ್ತುತ ಒಂದೇ ಟ್ರ್ಯಾಕ್ ಇರುವುದರಿಂದ ದೀರ್ಘಾವಧಿಯ ಬೇಡಿಕೆ ಮುಂದುವರಿಸಲು ಟ್ರ್ಯಾಕ್ ದ್ವಿಗುಣಗೊಳಿಸುವ ಅಗತ್ಯವಿದೆ. ಮಂಗಳೂರು ಮತ್ತು ಕಾರವಾರದ ನಡುವೆ ದೇಶೀಯ ವಿಮಾನ ನಿಲ್ದಾಣ‌ ನಿರ್ಮಾಣದ ಅಗತ್ಯವಿದೆ. ಆದಾಯ ತೆರಿಗೆ…

Read More

ಒಳ್ಳೆಯ ಕೆಲಸವನ್ನು ಮಾಡುವುದರ ಮೂಲಕ ಜನರ ಪ್ರೀತಿ ಗಳಿಸಿದ ವ್ಯಕ್ತಿಯ ಆತ್ಮವು ಅವರು ಗತಿಸಿದ ಅನಂತರ ದೇವರ ಪಾದ ಸೇರಿ ದೇವರು ಆ ಆತ್ಮವನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಜನರಲ್ಲಿದೆ. ರಮಾನಂದ ಶೆಟ್ಟಿ ಹಾಗೂ ಅಶ್ವಿ‌ನಿ ಆರ್‌. ಶೆಟ್ಟಿ ತಮ್ಮ ದುಡಿಮೆಯಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವ ಮೂಲಕ ಸೇವೆ ಮಾಡಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಹೇಳಿದರು. ಜುಲೈ 29ರಂದು ಅಂಬಾಗಿಲಿನ ಅಮೃತ್‌ ಗಾರ್ಡನ್‌ ಸಭಾಂಗಣದಲ್ಲಿ ರಮಾನಂದ ಶೆಟ್ಟಿ ಹಾಗೂ ಅಶ್ವಿ‌ನಿ ಆರ್‌ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಹುಟ್ಟು ಸಾವಿನ ಮಧ್ಯೆ ಮಾಡಿದ ಸೇವೆಯಿಂದ ಕೀರ್ತಿ ಉಳಿಯಲಿದೆ ಎಂದು ಬಡಗಬೆಟ್ಟು ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅಶ್ವಿ‌ನಿ ಮಾಣಿಕ್ಯ ಒಡಹುಟ್ಟಿದವರಿಗಿಂತಲೂ ಒಡನಾಡಿಯವರೊಂದಿಗೆ ಹೇಗೆ ಬದುಕಬೇಕೆಂದು ಮಾನವ ಕುಲಕ್ಕೆ ತಿಳಿಸಿಕೊಟ್ಟವರು ಅಶ್ವಿ‌ನಿ. ಅವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ನಮ್ಮೆಲ್ಲರಲ್ಲಿ ಸಂಚಲನ ಮೂಡಿಸಿದ…

Read More

“ನೋವಿದ್ದವರು ನಗಬಾರದೆಂದಿಲ್ಲ ನಗುವವರಲ್ಲಿ ನೋವಿಲ್ಲಾ ಎಂದರ್ಥವಲ್ಲ ನೋವ ನುಂಗಿ ನಕ್ಕು ಹಗುರಾಗಿಸುವುದೇ ಜೀವನ”. ಹೌದು, ಕಷ್ಟ ಯಾರಿಗಿಲ್ಲ ಹೇಳಿ. ಕಷ್ಟ ಎನ್ನುವುದು ಮನುಷ್ಯರನ್ನು ಬಿಡಿ ಮೂಕ ಪ್ರಾಣಿಗಳು ಸೇರಿದಂತೆ ಜಲಾಚರ ಜೀವಿಗಳನ್ನು ಬಿಟ್ಟಿಲ್ಲ. ಅದರಲ್ಲೂ ತಮ್ಮ ನೋವುಗಳನ್ನು ಅದುಮಿಟ್ಟುಕೊಂಡು ಇನ್ನೊಬ್ಬರನ್ನು ನಗಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಅದೂ ಒಂದು ದೈವದತ್ತ ಕೊಡುಗೆ ಎಂದೇ ಹೇಳಬಹುದು. ಇಷ್ಟೆಲ್ಲಾ ವಿಚಾರಗಳನ್ನು ನಾನು ಹೇಳಲು ಕಾರಣವೂ ಇದೆ. ನಾನೀಗ ಹೇಳಲು ಹೊರಟಿರುವುದು ನಮ್ಮೂರು ರೆಂಜಾಳದ ಬಸ್ ಕಂಡೆಕ್ಟರೊಬ್ಬರ ಕತೆಯನ್ನು. ಇಷ್ಟಕ್ಕೂ ಈ ಅಪರಿಚಿತ ಕಂಡೆಕ್ಟರ್ ಆ ಬಸ್ನ ಪ್ರಯಾಣದ ಸಂದರ್ಭದಲ್ಲಿ ನಮಗಂತೂ ನೀಡಿದ ಖುಷಿಯಂತೂ ನಾವು ಆ ಬಸ್ ಮತ್ತು ಆ ಕಂಡೆಕ್ಟರ್ನ ಅಪ್ಪಟ ಅಭಿಮಾನಿಯಾಗುವಂತೆ ಮಾಡಿತು. ಆ ಬಸ್ಸಿನ ಹೆಸರು “ಸುನೀಲ್” ಮೊಟಾರ್ಸ್. ರೆಂಜಾಳದಿಂದ ಬೆಳ್ಳಂಬೆಳಗ್ಗೆ 8 ಗಂಟೆಗೆ ಹೊರಡುವ ಈ ಬಸ್ನಲ್ಲಿ ಸೀಟು ಹಿಡಿಯುವುದೆ ಒಂದು ರೀತಿಯ ಹರ ಸಾಹಸ. ಈ ಕೊರೊನಾ ಎಂಬ ಮಹಾಮಾರಿ ಒಕ್ಕರಿಸಿದ ಬಳಿಕ ನಮ್ಮೂರಿನ ಬಸುಗಳಿಗೆ ಬರ…

Read More

ವಿದ್ಯಾಗಿರಿ: ಪ್ರಸಕ್ತ ವರ್ಷದಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ ಎಂದು ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಶೇಕಡಾ ೧೪.೯೬% ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ ಶೇಕಡ ೬೮.೦೩ ಫಲಿತಾಂಶ ಗಳಿಸಿದೆ. ಆಳ್ವಾಸ್ ಕಾಲೇಜಿನ ೧೪೭ ವಿದ್ಯಾರ್ಥಿಗಳಲ್ಲಿ ೧೦೦ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವರ್ಷದಲ್ಲಿ ಆಳ್ವಾಸ್‌ನ ೪೨ ವಿದ್ಯಾರ್ಥಿಗಳು ಸಿಎ ಫೈನಲ್‌ನಲ್ಲಿ, ೩೦ ವಿದ್ಯಾರ್ಥಿಗಳು ಸಿಎ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸಿಎಯ ಪ್ರತಿ ಹಂತದಲ್ಲೂ ಉತ್ತಮ ಫಲಿತಾಂಶ ಪ್ರಕಟವಾಗಿದೆ. ಸುಮೀತ್ ವರ್ಧಮಾನ್ ರೂಗೆ(೩೦೪), ಶಿವಪ್ರಸಾದ್ (೨೯೫), ರ‍್ಯನ್ ಕಾರ್ಯಪ್ಪ ಎ(೨೮೭), ಶಿವಶೇಷ್ ಕೆ ಆರ್(೨೮೩), ಹರೀಶ್ ಕುಲಕರ್ಣಿ(೨೮೩), ಕನ್ಯಾ ಪ್ರಭು(೨೮೧), ಗಿರೀಶ್ ಚಂದ್ರಪ್ಪ (೨೭೭), ಆಕಾಶ್ ಜೆ ಭಟ್ (೨೭೬), ಹಿತೇಶ್ ಎಂ ಎಸ್(೨೭೩), ದಿನೇಶ್ ಎನ್(೨೬೮), ಸಾಹುನ್ ಪಿಂಟೋ(೨೬೭), ವೈಷ್ಣವಿ ಯು.ಕೆ(೨೬೧), ನಿಧಿ ಆರ್.ಕೆ (೨೬೦), ಯಶಸ್ವಿನಿ ಸತ್ಯ ನಾಯ್ಕ(೨೬೦),…

Read More

ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಸಿಎ ಅಶೋಕ್ ಶೆಟ್ಟಿಯವರು ಶಂಕರ್ ಶೆಟ್ಟಿ ವಿರುದ್ಧ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಪ್ತಿ ಸಂತೋಷ್ ಶೆಟ್ಟಿ ಶೆಟ್ಟಿ ಮತ್ತು ಮಹಿಳಾ ಉಪಾಧ್ಯಕ್ಷೆಯಾಗಿ ಕಾಂತಿ ಶೆಟ್ಟಿ ಆಯ್ಕೆ ಆಗಿದ್ದಾರೆ. ಗೌರವ ಕಾರ್ಯದರ್ಶಿಯಾಗಿ ವಿಜಯ್ ಶೆಟ್ಟಿ ಹಾಲಾಡಿ, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ ಸಿ ರೈ, ಖಜಾಂಚಿಯಾಗಿ ಅಶೋಕ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಉಮೇಶ್ ಕುಮಾರ್ ಶೆಟ್ಟಿ, ರಮೇಶ್ ಜಿ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಅಜಿತ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ನಿರಂಜನ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಅಜಿತ್ ವಿ ಶೆಟ್ಟಿ, ರವೀಂದ್ರ ಶೆಟ್ಟಿ, ಯೋಗ್ಯ ಎಲ್ ರೈ, ಶಕುಂತಲಾ ಶೆಟ್ಟಿ, ಶೋಭಾ ಶೇಖ, ಸುನೀಲ್ ಕುಮಾರ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಗೀತಾ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಆಶ್ಚರ್ಯ ಮೂಡಿಸಿದ ಕಾಂತಿ ಶೆಟ್ಟಿ ಗೆಲುವು : ಈ ಸಲದ ಚುನಾವಣೆಯಲ್ಲಿ ಮಹಿಳಾ ಉಪಾಧ್ಯಕ್ಷೆ ಸ್ಥಾನಕ್ಕೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಸಿಎ ಅಶೋಕ್ ಶೆಟ್ಟಿ ಬಣದಿಂದ…

Read More

ಆಟಿ ತಿಂಗಳ ಆಚರಣೆಗಳು ಮೂಲ ನಂಬಿಕೆಯಿಂದ ಕೂಡಿದೆ. ಆಟಿ ತಿಂಗಳ ನೆನಪು, ಅಂದಿನ ಆಚರಣೆಗಳನ್ನು ನೆನಪು ಮಾಡುವ ಕೆಲಸ ಅಗತ್ಯವಾಗಿ ನಡೆಯಬೇಕು ಎಂದು ಕದ್ರಿ ನವನೀತ ಶೆಟ್ಟಿ ಹೇಳಿದರು. ಅವರು ಬಂಟರ ಸಂಘ ಮೂಲ್ಕಿ ಇಲ್ಲಿನ ಮಹಿಳಾ ವಿಭಾಗದ ವತಿಯಿಂದ ನಡೆದ ಆಟಿದ ತಮ್ಮನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಆಟಿದ ತಮ್ಮನ ಕಾರ್ಯಕ್ರಮ ಉದ್ಘಾಟಿಸಿದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಮೂಲ್ಕಿ ಬಂಟರ ಸಂಘ ಆಟಿ ಆಚರಣೆ ಮೂಲಕ ಹಿಂದಿನ ಆಟಿ ದಿನ ನೆನಪು ಮಾಡುತ್ತಿರುವುದು ಅಭಿನಂದನೀಯ. ಗ್ರಾಮೀಣ ಪ್ರದೇಶದ ಹಿಂದಿನ ಬದುಕು ಯುವ ಸಮಾಜಕ್ಕೆ ತೋರ್ಪಡಿಸುವ ಕಾರ್ಯ ನಿರಂತರ ನಡೆಯಬೇಕು ಎಂದರು. ಕದ್ರಿ ನವನೀತ ಶೆಟ್ಟಿ ಮತ್ತು ಲೋಲಾಕ್ಷಿ ನಾರಾಯಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಲೋಲಾಕ್ಷಿ ಶೆಟ್ಟಿ,…

Read More

ಲಯನ್ಸ್ ಕ್ಲಬ್ ಬನ್ನಾಡಿ – ವಡ್ಡರ್ಸೆ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಜುಲೈ 27 ರಂದು ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನದಲ್ಲಿ ಜರಗಿತು. ಮಾಜಿ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ ಪದಪ್ರಧಾನ ನೆರವೇರಿಸಿ ಮಾತನಾಡಿ, ಜಿಲ್ಲೆಯ ಅತ್ಯುತ್ತಮ ಕ್ಲಬ್ ಗಳಲ್ಲಿ ಬನ್ನಾಡಿ ವಡ್ಡರ್ಸೆ ಕೂಡಾ ಒಂದು ಲಯನ್ಸ್ ನ ನೀತಿ ನಿಯಮಗಳನ್ನು ಪಾಲಿಸಿಕೊಂಡು ಶಿಸ್ತು, ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದೆ ಎಂದರು. ಕ್ಲಬ್ ನ ನೂತನ ಅಧ್ಯಕ್ಷರಾಗಿ ಬಿ. ಪ್ರವೀಣ್ ಹೆಗ್ಡೆ, ಕಾರ್ಯದರ್ಶಿಯಾಗಿ ಬನ್ನಾಡಿ ಆಶಿತ್ ಕುಮಾರ್ ಶೆಟ್ಟಿ, ಖಜಾಂಚಿಯಾಗಿ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಅಈಜಿಕಾರ ಸ್ವೀಕರಿಸಿದರು. ಈ ಸಂದರ್ಭ 2023-2024 ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಡ್ಡರ್ಸೆ ಪ್ರೌಢಶಾಲೆಯ ಶ್ರಾವ್ಯ, ಅನುಪ್ರಿಯಾ ಹಾಗೂ ಕಾವಡಿ ಶಾಲೆಯ ಸ್ವಸ್ತಿಕ್ ಜೋಗಿ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಲಾಯಿತು. ಹಿರಿಯರಾದ ಸೀತಾರಾಮ ಶೆಟ್ಟಿ ಕಲ್ಕಟ್ಟೆ, ಶೀನಪ್ಪ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕಾವಡಿ, ಶಿವರಾಮ ಶೆಟ್ಟಿ…

Read More

ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಹಾಗೂ ರೋವರ್ ರೇಂಜರ್ಸ್ ಘಟಕದ ಘಟಕದ ವತಿಯಿಂದ ಕಾರ್ಕಳದ ಮಿಯ್ಯಾರು ಗ್ರಾಮದಲ್ಲಿ ‘ಕೆಸರಾಟ ಪಾಠ’ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಿಯ್ಯಾರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಾಧವ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಿಯ್ಯಾರು ಗ್ರಾಮಕ್ಕೂ ಎನ್‌ಎಸ್‌ಎಸ್ ಚಟುವಟಿಕೆಗಳಿಗೂ ಅವಿನಾಭಾವ ನಂಟಿದೆ. ಈ ಗ್ರಾಮದಲ್ಲಿ ಹೆಚ್ಚಿನ ಎನ್‌ಎಸ್‌ಎಸ್ ಕ್ಯಾಂಪ್‌ಗಳು ನಡೆಯುತ್ತವೆ. ಈ ಕರ‍್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜೀವನ ಪಾಠ ಲಭಿಸಲಿ ಎಂದು ಹಾರೈಸಿದರು. ಆಳ್ವಾಸ್ ವಿದ್ಯಾ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೆಸರಾಟದ ಮಹತ್ವ ಹಾಗೂ ಕೃಷಿಯ ಮಹತ್ವವನ್ನು ತಿಳಿಸಿದರು. ವಿವಿಧ ಆಟಗಳಲ್ಲಿ ತಾವೂ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕೆಸರಾಟ ಪಾಠದ ಅಂಗವಾಗಿ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್, ೧೦೦ ಮೀಟರ್ ಓಟ, ೪೦೦ಮೀಟರ್ ರಿಲೇ, ಪಿರಮಿಡ್ ರಚಿಸುವುದು, ನಿಧಿ ಹುಡುಕುವುದು, ಮಡಕೆ ಒಡೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗದ್ದೆಯನ್ನು ಒದಗಿಸಿದಂತಹ ರಾಜೇಶ್ ಹಾಗೂ ಸಹಕಾರವನ್ನು…

Read More