Author: admin
ಬಂಟರ ಸಂಘ ಕಾವೂರು ವತಿಯಿಂದ ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯಲ್ಲಿ ಕಾವೂರು ಬಂಟರ ಸಮುದಾಯ ಭವನದ ಭೂಮಿ ಪೂಜೆ ಮತ್ತು ಬಂಟರ ಸಂಘದ ಆಡಳಿತ ಕಚೇರಿ ಹಾಗೂ ಬಯಲು ರಂಗಮಂದಿರದ ಉದ್ಘಾಟನೆ ಬುಧವಾರ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಬಂಟ ಎಂದರೆ ಸುರಕ್ಷಕ ಎಂಬ ಅರ್ಥವಿದೆ. ಹಾಗಾಗಿಯೇ ಧರ್ಮ- ಸಂಕೃತಿಗಳನ್ನು ಉಳಿಸುವ ಜವಾಬ್ದಾರಿ ಬಂಟ ಸಮಾಜಕ್ಕೆ ಇದೆ. ಈ ಸಮುದಾಯ ಭವನ, ವಿದ್ಯಾರ್ಥಿ ಭವನ ನಿರ್ಮಾಣವೂ ಈ ಉದ್ದೇಶಕ್ಕೆ ಪೂರಕವಾಗಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಾವೂರು ಬಂಟರ ಸಂಘ ಅದ್ಬುತ ಕಾರ್ಯ ಮಾಡುತ್ತಿದೆ. ಇಷ್ಟು ದೊಡ್ಡ ನಿವೇಶನ ಬೇರೆಲ್ಲೂ ಸಿಕ್ಕಿಲ್ಲ. ಈಗಾಗಲೇ ರಂಗ ಮಂದಿರವನ್ನು ಪೂರ್ಣಗೊಳಿಸಿದ್ದಾರೆ. ಎರಡು ವರ್ಷದಲ್ಲಿ ಸಮುದಾಯ ಭವನ ಪೂರ್ಣಗೊಳಿಸುವ ಗುರಿ ಇರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್…
ಸಂಘಟನೆಯಲ್ಲಿ ಉತ್ತಮ ನಾಯಕತ್ವ ಉಳ್ಳ ನಾಯಕರು ಇದ್ದಾಗ ಅಭಿವೃದ್ದಿ ಮತ್ತು ಎಲ್ಲವೂ ಸುಸಾಂಗವಾಗಿ ಶ್ರೇಷ್ಠ ಮಾರ್ಗದಲ್ಲಿ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂದು ಮುಂಬಯಿ ಉದ್ಯಮಿ ತೋನ್ಸೆ ಆನಂದ ಶೆಟ್ಟಿ ಅವರು ಹೇಳಿದರು. ಮೂಲ್ಕಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗುವ ತೋನ್ಸೆ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಗೆ ಶಿಲಾನ್ಯಾಸ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶಾಲ ಹೃದಯದ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಕೆ ಪ್ರಕಾಶ್ ಶೆಟ್ಟಿ ಬಂಟ ಸಮಾಜದ ಸ್ತಂಬಗಳು. ವಿಶಾಲ ಹೃದಯದ ಅವರಿಬ್ಬರೂ ಯುಗ ಪುರುಷರು. ಸಮಾಜದ ಅಭಿವೃದ್ದಿಯಲ್ಲಿ ಅವರಿಬ್ಬರ ಕೊಡುಗೆ ದೊಡ್ಡದಿದೆ. ಐಕಳ ಹರೀಶ್ ಶೆಟ್ಟಿ ಅವರಿಗೆ ಕನಸಿದೆ. ತಾನು ಕೈಗೊಳ್ಳುವ ಕೆಲಸ ಇದೇ ರೀತಿ ಆಗಬೇಕೆಂದು, ಆ ನಿಟ್ಟಿನಲ್ಲಿ ಅವರು ಕಾರ್ಯ ಪ್ರವೃತ್ತರಾಗುತ್ತಾರೆ. ಐಕಳ ಬಂಟ ಸಮಾಜದ ಓರ್ವ ಶ್ರೇಷ್ಠ ನಾಯಕರಾಗಿದ್ದಾರೆ ಎಂದರು. ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮವನ್ನು ಬಪ್ಪನಾಡು ದೇಗುಲದ…
ಜನಪದದಲ್ಲಿ ಹಾಡುಗಳದ್ದೇ ಸಿಂಹಪಾಲು. ಇದು ಹಳ್ಳಿಯ ಜನರ ಸಂಗೀತ. ಇದು ವೇದ ಕಾಲದಷ್ಟು ಪುರಾತನವಾದುದು. ಇಂತಹ ಜನಪದವು ಮನುಕುಲದ ಜೀವನವಾಗಿತ್ತು. ಕನ್ನಡ ಸಾಹಿತ್ಯ ರತ್ನ ಗರ್ಭಿತ ಕಡಲಿಗೆ ಸಮಾನ. ಈ ಸಾಹಿತ್ಯದಲ್ಲಿ ಹುದುಗಿದ ಸಂಪತ್ತನ್ನು ಹೆಕ್ಕಿ ತೆಗೆದು ಬೆಳಕಿಗೆ ತರುವ ಕೆಲಸ ನಾವು ಮಾಡಬೇಕಾಗಿದೆ. ಹೊಸ ಪೀಳಿಗೆಯಲ್ಲಿ ಆಸಕ್ತಿ ಮತ್ತು ಆದ್ಯತೆಗಳು ಬದಲಾಗುತ್ತಿದ್ದು ಜನಪದ ಗೀತೆಗಳು ತೆರೆಮರೆ ಸರಿಯುತ್ತಿದೆ. ಇಂತಹ ಕಾಲ ಘಟ್ಟದಲ್ಲಿ “ಸೃಜನಾದಲ್ಲಿ” ಜನಪದಕ್ಕೆ ಮಹತ್ವ ಕೊಟ್ಟಿದ್ದು ಸ್ತುತ್ಯವಾಗಿದೆ. ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದಲ್ಲಿ ಸಾಹಿತ್ಯ ವಿಮರ್ಶೆ, ಕೃತಿ ಲೋಕಾರ್ಪಣೆ ಜನಪದ ಹಾಡುಗಳ ಪ್ರಸ್ತುತಿ ಕಾರ್ಯಕ್ರಮವು ಮೈಸೂರು ಅಸೋಸಿಯೇಷನ್ ನ ಮೊದಲ ಮಹಡಿಯ ಕಿರು ಸಭಾಗೃಹ, ಬಾವುಧಾಜಿ ರಸ್ತೆ, ಮಾಟುಂಗಾ ಪೂರ್ವ ಮುಂಬಯಿ ಇಲ್ಲಿ ಫೆಬ್ರವರಿ 17 ರ ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷತೆಯನ್ನು ಪದ್ಮಜಾ ಮಣ್ಣೂರ ವಹಿಸಿಕೊಂಡು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ…
2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಇವರ ಸಮಾಜಮುಖಿ ಕೆಲಸವನ್ನು ಗುರುತಿಸಿ ಫೆಬ್ರವರಿ 18 ರಂದು ದುಬಾಯಿಯಲ್ಲಿ ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ “ವಿಶ್ವಮಾನ್ಯ ಪ್ರಶಸ್ತಿ 2024” ನೀಡಿ ಗೌರವಿಸಲಾಯಿತು. ಹೃದಯವಾಹಿಣಿ ಕರ್ನಾಟಕ ಮಂಗಳೂರು ಮತ್ತು ಸೆಂಟ್ ಸಾಂಸ್ಕೃತಿಕ ಸಂಸ್ಥೆ ಯುಎಇ ಜಂಟಿ ಆಶ್ರಯದಲ್ಲಿ ನಡೆದ 17 ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಎರಡನೇ ದಿನದ ಕಾರ್ಯಕ್ರಮದ ದುಬಾಯಿಯ ಫಾರ್ಚೂನ್ ಪ್ಲಾಝ ಹೋಟೆಲ್ ನಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಇದರ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಮಾಜ ಸೇವಕರಾದ ಮಿತ್ರಂಪಾಡಿ ಜಯರಾಮ ರೈಯವರಿಗೆ “ವಿಶ್ವಮಾನ್ಯ 2024” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತಿಥಿಗಳಾಗಿ ಲೆಫ್ಟಿನೆಂಟ್ ಜನರಲ್ ಅಂಬ್ಯಾಸಿಡರ್ ಡಾ. ಡೆವಿಡ್ ಪ್ರ್ಯಾಂಕ್ ಫೆರ್ನಾಂಡೀಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಈಡನ್ ಗ್ಲೋಬಲ್ ಸ್ಕೂಲ್ ನ ಅಧ್ಯಕ್ಷರಾದ ಅಶ್ರಫ್ ಶಾಮಂತೂರು,…
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ತುಳುನಾಡ ಜಾತ್ರೆ, ಒಡಿಯೂರು ರಥೋತ್ಸವ ಅಂಗವಾಗಿ ನಡೆದ ‘ಸಿರಿಧಾಮ’ ತುಳು ಸಾಹಿತ್ಯ ಸಮ್ಮೇಳನದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞರಾದ ಡಾ.ಸುಧಾಕರ ಶೆಟ್ಟಿ ಅವರು ‘ತುಳುನಾಡಿನಲ್ಲಿ ಮಕ್ಕಳ ಅಪೌಷ್ಟಿಕತೆಯಿಂದಾಗುವ ಆತಂಕ, ಅದರ ಪತ್ತೆ ಹಾಗೂ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಒಡಿಯೂರು ಕ್ಷೇತ್ರದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ವಿರಾರ್ ಶಂಕರ ಶೆಟ್ಟಿ, ಒಡಿಯೂರು ಸೌಹಾರ್ದ ಸೊಸೈಟಿ ಅಧ್ಯಕ್ಷ ಸುರೇಶ್ ರೈ ಹಾಗೂ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. || ಶ್ರೀ ಗುರುದತ್ತಾತ್ರೇಯೋ ವಿಜಯತೇ ||
ನಿತ್ಯಾನಂದ ಶೆಟ್ಟಿ ಸಂಸ್ಥಾಪಿತ ಸಂಸ್ಥೆ ಈಗ ಗ್ರಾಹಕರ ಆಕರ್ಷಣೆ ಕೇಂದ್ರ. ಸಾಮಾನ್ಯ ಉಪಯೋಗದ ಪಾದರಕ್ಷೆಗಳಿಂದ ಪ್ರಾರಂಭಗೊಂಡು ವಿಶೇಷ ಸಂದರ್ಭಗಳಲ್ಲಿ ಧರಿಸುವ ಆಕರ್ಷಣೆಯ ಪಾದರಕ್ಷೆಗಳು ಶೆಟ್ಟಿ ಅವರ ಶೋರೂಮುಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರ ಅನುಕೂಲತೆಗೆ ಬೇಕಾಗುವ ಎಲ್ಲಾ ವಯೋಮಾನದ ಸಾಮಾನ್ಯ ಜನರಿಂದ ಆರಂಭಗೊಂಡು ಸಿನೇಮಾ ತಾರೆಯರು ಅಪೇಕ್ಷೆ ಪಡುವ ಅಪರೂಪದ ಸಂಗ್ರಹಗಳ ಮಳಿಗೆ ಆರ್ಟಿಸೋನ್ ಇಂದು ಕರ್ನಾಟಕ ಮಾರಾಟ ವಹಿವಾಟು ಸಂಸ್ಥೆಗಳಲ್ಲೇ ಪ್ರತಿಷ್ಠಿತ ಸ್ಥಾನ ಪಡೆದಿದೆ. ವಿವಿಧ ಕಾರಣಗಳಿಂದ ದೈಹಿಕ ಆಂಗಿಕ ವಿಕಲತೆಗಳಿರುವ ಪಾದಗಳಿಗೂ ಸರಿಹೊಂದುವ ಪಾದರಕ್ಷೆಗಳನ್ನು ಹೊಂದಿಸಿ ಕೊಡುವ ಅಪರೂಪದ ಆರ್ಟಿಸೋನ್ ಪಾದರಕ್ಷೆ ಮಾರಾಟ ಸಂಸ್ಥೆಗಳಲ್ಲಿ ವಿಭಿನ್ನ ಆಕರ್ಷಣೆಯಾಗಿದ್ದು ಮಾರುಕಟ್ಟೆಯಲ್ಲಿ ದಿನೇ ದಿನೇ ಇದರ ಬೇಡಿಕೆ ಹೆಚ್ಚುತ್ತಲೇ ಇದೆ. ಇದೀಗ ಈ ಸಂಸ್ಥೆ ರಾಜ್ಯ ಗಡಿ ಮೀರಿ ಸದ್ದು ಮಾಡುತ್ತಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ನಿರಂತರ ಬೇಡಿಕೆ ಇರುವ ಆರ್ಟಿಸಾನ್ ರಾಷ್ಟ್ರವ್ಯಾಪಿ ಬೇಡಿಕೆಯ ಉತ್ಪನ್ನವಾಗುವ ದಿನ ದೂರವಿಲ್ಲ. ಆಕರ್ಷಕ ವರ್ಣ ವಿನ್ಯಾಸಗಳ ವೈವಿಧ್ಯಮಯ ಗಾತ್ರ ಆಕೃತಿಗಳ ಕಲಾತ್ಮಕ ಪಾದರಕ್ಷೆಗಳು ಆಧುನಿಕ ವಸ್ತ್ರ…
ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.9ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಉತ್ಸವ ಸಮಿತಿ ಗೌರವ ಅಧ್ಯಕ್ಷರಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೂಡಂಬೈಲು ಡಾ.ರವಿ ಶೆಟ್ಟಿ ನೇಸರ ಕಂಪ, ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೂಡಂಬೈಲು ರವಿ ಶೆಟ್ಟಿಯವರ ಉಪಸ್ಥಿತಿಯಲ್ಲಿ ದೇವಳದ ವಠಾರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜಯಪ್ರಸಾದ ಅಂಬಟ, ಉಮೇಶ್ ಗೌಡ ಗುತ್ತಿನಪಾಲು, ಶೇಷಪ್ಪ ಶೆಟ್ಟಿ ಪೋನೋಣಿ, ಗಣೇಶ್ ಗೌಡ ಪಜಿಮಣ್ಣು, ಉಮೇಶ್ ಅಂಬಟ, ಧನಂಜಯ ಕುಲಾಲ್ ಮುಂಡೂರು, ಗೌರವ ಸಲಹೆಗಾರರಾಗಿ ಭಾಸ್ಕರ ಆಚಾರ್ ಹಿಂದಾರ್, ಮುರಳೀಧರ ಭಟ್ ಬಂಗಾರಡ್ಕ, ವೆಂಕಟೇಶ್ ಅಯ್ಯಂಗಾರ್ ಹಿಂದಾರ್, ಪ್ರಸನ್ನ ಭಟ್ ಪಂಚವಟಿ, ಸುಧೀರ್ ಶೆಟ್ಟಿ ನೇಸರ ಕಂಪ, ಬಾಲಕೃಷ್ಣ ಕಣ್ಣಾರಾಯ ಬನಾರಿ, ಹೆಗ್ಗಪ್ಪ ರೈ ಪೊನೋಣಿ, ವಿಠಲ ಭಟ್ ನೀರೋಡಿ, ಶ್ರೀ ರಂಗ ಶಾಸ್ತಿ ಮಣಿಲ, ಶ್ರೀಕಾಂತ್ ಆಚಾರ್ ಹಿಂದಾರ್, ಅಶೋಕ್ ಕುಮಾರ್ ಪುತ್ತಿಲ,…
ವಿದ್ಯಾಗಿರಿ (ಮೂಡುಬಿದಿರೆ): ‘ಯುವಜನತೆಗೆ ಸೂಕ್ತ ಪ್ರಾತಿನಿಧ್ಯ ದೊರೆಯದ ಕಾರಣ ನಿರುದ್ಯೋಗ ಮತ್ತಿತ್ತರ ಸಮಸ್ಯೆಗಳು ಉಲ್ಬಣಿಸುತ್ತಿವೆ. ರಾಜಕೀಯದಲ್ಲಿ ಯುವಜನತೆಗೆ ಸಮಾನ ಹಾಗೂ ಸಮರ್ಪಕ ಪ್ರಾತಿನಿಧ್ಯ ನೀಡಬೇಕು’ ಎಂದು ಲೇಖಕ ಸುಧಾಂಶು ಕೌಶಿಕ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ತಾವು (ಸುಧಾಂಶು ಕೌಶಿಕ್) ಬರೆದ ‘ದ ಫ್ಯೂಚರ್ ಈಸ್ ಅವರ್ಸ್’ ಕೃತಿಯ ಸ್ಥಳೀಯ ಅನಾವರಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದೇಶದ ಹಿರಿಯ ನಾಯಕರನ್ನು ನಾವು ಯುವ ಪ್ರತಿನಿಧಿ ಎನ್ನುತ್ತೇವೆ. ಆದರೆ, ನಿಜವಾಗಿಯೂ ಯುವಜನತೆಗೆ ಪ್ರಾತಿನಿಧ್ಯ ನೀಡಿದ್ದೇವೆಯೇ? ಎಂದು ಪ್ರಶ್ನಿಸಿದ ಅವರು, ಕೂದಲು ಬಿಳಿಯಾದರೆ ಮಾತ್ರ ಬುದ್ಧಿವಂತರಲ್ಲ. ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರು 21ರಿಂದ 24 ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಕೇವಲ ವಯಸ್ಸಿನಿಂದ ಯಾರನ್ನೂ ಅಳೆಯಬಾರದು ಎಂದರು. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿರುವ ಮೇಲ್ವರ್ಗ, ಸುಶಿಕ್ಷಿತ, ದೊಡ್ಡ ಮನೆತನ, ಮೇಲ್ಜಾತಿ, ಎತ್ತರದ ವ್ಯಕ್ತಿ ಎಂಬಿತ್ಯಾದಿ ಆದ್ಯತೆ- ಸವಲತ್ತುಗಳನ್ನು ನಾನು ಹೊಂದಿದ್ದೆ. ಆದರೆ,…
ಸಿಲ್ವರ್ ಪಾರ್ಕ್, ಮೀರಾರೋಡ್ ಪೂರ್ವದ ನಿವಾಸಿ ಶ್ರೀ ದುರ್ಗಾ ಭಜನಾ ಮಂಡಳಿಯ ಗೌರವ ಅಧ್ಯಕ್ಷ ಹಾಗೂ ಸ್ಥಳೀಯ ಹಲವಾರು ಸಂಘ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆಗೈದ ಯಕ್ಷಗಾನ ಪ್ರೇಮಿ ಮತ್ತು ಸಂಘಟಕ ಸಂಜೀವ ಶೆಟ್ಟಿ(63) ಅವರು ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ಫೆ.19 ರ ಸೋಮವಾರದಂದು ನಿಧನರಾದರು. ಮೂಲತಃ ಕಾಸರಗೋಡು ಜಿಲ್ಲೆಯ ಹೇರೂರಿನ ಕಂಗ್ವ ಮನೆಯವರಾಗಿದ್ದ ಮೃತರು, ಪತ್ನಿ ಯೋಗಿತಾ ಶೆಟ್ಟಿ, ಪುತ್ರ ಪ್ರತೀಕ್, ಪುತ್ರಿ ಪ್ರಿಯಾಂಕಾ, ಮೂವರು ಸಹೋದರಿಯರು, ಆರು ಮಂದಿ ಸಹೋದರರು ಸೇರಿದಂತೆ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಗೌರವ ಸಂಪಾದಕ ಅರುಣ್ ಶೆಟ್ಟಿ ಎರ್ಮಾಳ್ ಹಾಗೂ ವ್ಯವಸ್ಥಾಪಕ ಸಂಪಾದಕ ರಂಜಿತ್ ಶೆಟ್ಟಿ ತೀವ್ರ ಸಂತಾಪ ಸೂಚಿಸಿದ್ದಾರೆ.
ನಾಲ್ಕು ದಶಕಗಳಿಗೂ ಅಧಿಕ ಸಮಯದಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಕಳೆದ ವರ್ಷ 2023 ರಲ್ಲಿ ಸಹಕಾರ ಕ್ಷೇತ್ರದ ಮಹೋನ್ನತ ಗೌರವವಾದ ‘ಸಹಕಾರ ರತ್ನ’ ಪ್ರಶಸ್ತಿ ಪಡೆದ ಜಯಕರ ಶೆಟ್ಟಿ ಇಂದ್ರಾಳಿ ಅವರು ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜಯಕರ ಶೆಟ್ಟಿ ಇಂದ್ರಾಳಿ ಅವರು ಶತಮಾನೋತ್ಸವನ್ನು ಯಶಸ್ವಿಯಾಗಿ ಪೂರೈಸಿರುವ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಕಳೆದ 42 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದು, ಇದನ್ನು ಅದನ್ನು ಜಿಲ್ಲೆಯ ಯಶಸ್ವಿ ಸಹಕಾರಿ ಸಂಸ್ಥೆಯಾಗಿ ಜನಮನದಲ್ಲಿ ಪ್ರತಿಷ್ಠಾಪಿಸಿದ್ದಾರೆ. 1918ರಲ್ಲಿ ಸ್ಥಾಪನೆಗೊಂಡ ಈ ಸೊಸೈಟಿ, 1978ರಿಂದ 1981ರವರೆಗೆ ವ್ಯವಹಾರ ಸ್ಥಗಿತಗೊಂಡು ಮುಚ್ಚುವ ಸ್ಥಿತಿಯಲ್ಲಿದ್ದು, ಸರಕಾರದ ಆಡಳಿತಾಧಿಕಾರಿಗಳ ಕಾಲದಿಂದ ವಿವಿಧ ಹುದ್ದೆಗಳ ಮೂಲಕ ಅದಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟು ಅದೊಂದು ಬೃಹತ್ ಸಂಸ್ಥೆಯಾಗಿ ಬೆಳೆಯಲು ಕಾರಣೀಭೂತರಾಗಿದ್ದಾರೆ. ಶಿವಳ್ಳಿ ಗ್ರಾಮದ ಇಂದ್ರಾಳಿಯ ಪ್ರತಿಷ್ಠಿತ…