Author: admin
ಎಲ್ಲೂರು ಮಾಣಿರು ದಿವಂಗತ ಬಾಬು ಶೆಟ್ಟಿ ಮತ್ತು ಕಾಪು ಕಲ್ಯ ದೇವಸ್ಯ ಗೋಪಿ ಶೆಟ್ಟಿ ದಂಪತಿಗೆ ಪುತ್ರರಾಗಿ ಜನಿಸಿದ ವಸಂತ ಶೆಟ್ಟಿ ಅವರು ಬಾಲ್ಯದ ದಿನಗಳಿಂದಲೇ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದರು. ಎಲ್ಲೂರು ಅದಮಾರು ಮತ್ತು ಮೂಲ್ಕಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಶೆಟ್ಟರು ವಾಣಿಜ್ಯ ಶಾಸ್ತ್ರ ಪದವಿಧರರು. ಮುಂದೆ ಸಮಯ ಸಂಧರ್ಭ ಅನುಕೂಲ ಕೂಡಿ ಬರಲು ತನ್ನ ಶಿಕ್ಷಣ ಮುಂದುವರಿಸಿ ಧಾರವಾಡ ವಿಶ್ವವಿದ್ಯಾಲಯ ಮೂಲಕ ಸ್ನಾತಕೋತ್ತರ ಶಿಕ್ಷಣ ಪಡೆದು ಎಂ.ಕಾಂ. ಪದವಿ ಸಂಪಾದಿಸಿಕೊಂಡರು. ತನ್ನ ವಿದ್ಯಾರ್ಜನೆಯ ದಾಹ ಅಲ್ಲಿಗೆ ಕೊನೆಗೊಳ್ಳದೇ ಮುಂದೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಮೂಲಕ ಮೂರು ವರ್ಷಗಳ ಆರ್ಟಿಕಲ್ಸ್ ಅಧ್ಯಯನ ಮುಗಿಸಿದ ಬಳಿಕ ಎರ್ಮಾಳು, ಪಡುಬಿದ್ರಿ ಹಾಗೂ ಮೂಲ್ಕಿ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಅನುಭವ ಹೊಂದಿರುವ ವಸಂತ ಶೆಟ್ಟಿಯವರು ನಾಲ್ಕೂವರೆ ದಶಕಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಜೆಪ್ಪು ಬಂಟರ ಸಂಘದ ನೂತನ ಅಧ್ಯಕ್ಷರಾಗಿ…
ಬಾಲ್ಯವಿವಾಹ ಪದ್ಧತಿ ಇನ್ನೂ ರೂಢಿಯಲ್ಲಿದೆಯಾ? ಬಾಲ್ಯ ವಿವಾಹ ಪದ್ಧತಿ ಇವತ್ತಿಗೂ ಜೀವಂತವಾಗಿದೆಯಾ? ಬಾಲ್ಯ ವಿವಾಹಕ್ಕೆ ಅಕ್ಷಯ ತೃತೀಯಾ ವೇದಿಕೆ ಆಗಿದ್ದು ಹೌದಾ? ಬಾಲ್ಯ ವಿವಾಹ ನಿಷೇಧಿಸಲಾಗಿದ್ದು, ಕಠಿಣ ಕಾನೂನು ಇದೆ. ಈ ಪದ್ಧತಿ ನಿರ್ಬಂಧಿಸಿ ಅದಾಗಲೇ ಕೆಲವು ವರುಷಗಳೇ ಉರುಳಿ ಹೋಗಿದೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲವೆ? ಸಾಮೂಹಿಕ ವಿವಾಹ ಮತ್ತು ಅಕ್ಷಯ ತೃತೀಯದಂತಹ ಶುಭ ದಿನಗಳು ಶಾಲಾ ರಜಾ ಸಮಯದಲ್ಲಿ ಬರುವ ಕಾರಣ ದುರ್ಬಳಕೆ ಮಾಡಿಕೊಂಡು ಮಕ್ಕಳ ಪಾಲಕರು ಸಮಾಜದ ಹಾಗೂ ಸರ್ಕಾರದ ಕಣ್ಣು ತಪ್ಪಿಸಿ ಅಪ್ರಾಪ್ತ ಮಕ್ಕಳ ವಿವಾಹ ಸದ್ದಿಲ್ಲದೆ ನಡೆಸುತ್ತಿದ್ದು ತೆರೆಮರೆಯಲ್ಲಿ ಬಾಲ್ಯವಿವಾಹ ಪದ್ಧತಿ ನಡೆಯುತ್ತಿದೆ ಅನ್ನುವುದನ್ನು ಅರಗಿಸಿಕೊಳ್ಳಲು ನನಗಂತೂ ಕೆಲ ಹೊತ್ತು ಬೇಕಾಯಿತು. ಕೆಲ ದಿನಗಳ ಹಿಂದೆ ಒಂದಲ್ಲ ಎರಡಲ್ಲ 6 ದಿನಪತ್ರಿಕೆ ತಿರುವಿ ಹಾಕಿದರೂ ಎಲ್ಲದರಲ್ಲೂ ಶುಭ ಸಮಾರಂಭಕ್ಕೆ ಅತ್ಯಂತ ಪ್ರಶಸ್ತವೆನಿಸಿರುವ ಅಕ್ಷಯ ತೃತೀಯ ದಿನದಂದು ನಡೆಯಲಿರುವ ಸಹಸ್ರಾರು ಮದುವೆ ಸಮಾರಂಭಗಳಲ್ಲಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆ ಬಗ್ಗೆ ಕೆಲವು ರಾಜ್ಯ ಸರಕಾರಗಳು ಶಂಖಿಸಿದ್ದು, ಅದರಲ್ಲಿ…
ಪೋವಾಯಿ 2023-24 ಸಾಲಿನ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಪೊವಾಯಿಯ ಎಸ್ ಎಂ ಶೆಟ್ಟಿ ಜೂನಿಯರ್ ಕಾಲೇಜಿನ ವಿಧ್ಯಾರ್ಥಿನಿ ಜೀವಿಕಾ ವಿಶ್ವನಾಥ ಶೆಟ್ಟಿ ಪೇತ್ರಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 92 ಅಂಕಗಳೊಂದಿಗೆ ಕಾಲೇಜಿಗೆ ತೃತೀಯಳಾಗಿದ್ದಾಳೆ. ಚಿಣ್ಣರ ಬಿಂಬದ ಪ್ರತಿಭಾವಂತ ವಿಧ್ಯಾರ್ಥಿನಿ ಆಗಿರುವ ಜೀವಿಕಾ ರಂಗ ಕಲಾವಿದೆಯಾಗಿ, ನಿರೂಪಕಿಯಾಗಿ ಗುರುತಿಸಿಕೊಡಿರುವಳು. ನಾಟಕ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದಿರುವಳು. ಕರ್ನಾಟಕ ತುಳು ಅಕಾಡೆಮಿಯ ವತಿಯಿಂದ ವಿಷೇಶ ಬಾಲ ಕಲಾವಿದೆ ಪ್ರಶಸ್ತಿ, ಕನ್ನಡ ಕಲಾ ಕೇಂದ್ರದ ಸುವರ್ಣ ಶ್ರೀ ಪ್ರಶಸ್ತಿಗಳಿಗೆ ಭಾಜನಳಾಗಿರುವಳು. ಇದೀಗ ತುಳು ಲಿಪಿಯನ್ನೂ ಕಲಿಯುತ್ತಿರುವ ಜೀವಿಕಾ ಮೊದಲ ಪರೀಕ್ಷೆಯಲ್ಲಿಯೂ 92 ಅಂಕಗಳೊಂದಿಗೆ ತೇರ್ಗಡೆಯಾಗಿರುವಳು. ಶಿಸ್ತಿನ ವಿಧ್ಯಾರ್ಥಿ ಎಂಬ ಮೆಚ್ಚುಗೆಯೊಂದಿಗೆ ಕಾಲೇಜಿನಲ್ಲಿ ಕೊಡ ಮಾಡುವ 2022-23 ರ ಪ್ರಶಸ್ತಿಯನ್ನೂ ಪಡೆದಿರುವಳು.ಚಿಣ್ಣರ ಬಿಂಬದ ರೂವಾರಿ ಪ್ರಕಾಶ ಭಂಡಾರಿ, ಸುರೇಂದ್ರ ಕುಮಾರ ಹೆಗ್ಡೆ, ಗೀತಾ ಹೇರಳ ಸಂಸ್ಥೆಯ ಪರವಾಗಿ ಅಭಿನಂದಿಸಿರುವರು. ಈಕೆ ಲೇಖಕ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ…
‘ವ್ಯಕ್ತಿಯೊಬ್ಬ ದೊಡ್ಡ ಶಕ್ತಿಯಾಗುವುದು ತನ್ನ ಸಾಧನೆಯ ಬಲದಿಂದ. ಭಾಸ್ಕರ ರೈ ಕುಕ್ಕುವಳ್ಳಿಯವರು ಕೇವಲ ಯಕ್ಷಗಾನಕ್ಕಾಗಿ ಸೀಮಿತರಾದವರಲ್ಲ. ಅವರು ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಕವಿ ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ ವಿಶೇಷ ಸಾಧನೆ ಮಾಡಿದ ಸಾಹಸಿ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 30 ಕೃತಿಗಳನ್ನು ಹೊರ ತಂದ ಪ್ರಬುದ್ಧ ಲೇಖಕ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಮತ್ತು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಮತ್ತು ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬಿಲ್ವಶ್ರೀ’ ಸಭಾಂಗಣದಲ್ಲಿ ಕ್ಷೇತ್ರದ ಪತ್ತನಾಜೆ ಉತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘವು ಏರ್ಪಡಿಸಿದ ಹುಟ್ಟೂರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ದೇಶ ವಿದೇಶಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ಕರಾವಳಿಯ ಸಾಂಸ್ಕೃತಿಕ ಹರಿಕಾರರಾಗಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾದ ಭಾಸ್ಕರ ರೈ ಅವರು ನಿರಂತರ ಕ್ರಿಯಾಶೀಲರಾಗಿರುವ ವಿಶಿಷ್ಟ ಪ್ರತಿಭಾವಂತ. ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಧೀಮಂತ’ ಎಂದವರು…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಮೇ 26 ರಂದು ಭಾನುವಾರ ಅಡ್ಯಾರ್ ನಲ್ಲಿರುವ “ಯಕ್ಷಧ್ರುವ ಪಟ್ಲ ಸಮಾರಂಭ 2024” ಜರಗಲಿದೆ. ಸಮಾರಂಭದಲ್ಲಿ ಬೆಳಿಗ್ಗೆ 7.45 ಕ್ಕೆ ಚೌಕಿಪೂಜೆ, ಅಬ್ಬರ ತಾಳ, ಬಳಿಕ ಮಹಿಳಾ ಯಕ್ಷಗಾನ ನಡೆಯಲಿದೆ. ಬಳಿಕ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಮುಂಬೈ ಹೇರಂಭ ಕೆಮಿಕಲ್ಸ್ ಇಂಡಸ್ಟ್ರಿಸ್ ಸಂಸ್ಥೆಯ ಸಿಎಂಡಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಶುಭಶಂಸನೆಗೈಯಲಿದ್ದಾರೆ. ಆರೋಗ್ಯ ಶಿಬಿರದ ಉದ್ಘಾಟನೆಯನ್ನು ಡಾ. ರವೀಶ್ ತುಂಗಾ ನೆರವೇರಿಸಲಿದ್ದಾರೆ. ರಕ್ತದಾನ ಶಿಬಿರವನ್ನು…
ಬ್ರಹ್ಮಾವರ ಮೇ 25: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಂಸ್ಥೆಯ ಶಿಕ್ಷಕವೃಂದ ಹಾಗೂ ಪೋಷಕರಿಗೆ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ಒರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಎಸಿಎನ ರಾಯಭಾರಿಗಳು ಕುಮಾರಿ ಅಬಿಧಾ ಹಾಗೂ ಕುಮಾರಿ ಸಿರೀನಾ ಸ್ಕರಿಯಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಮಕ್ಕಳು ದೇವರ ಅಮೂಲ್ಯ ಕೊಡುಗೆ, ಅವರು ಮುಗ್ಧರಾಗಿದ್ದು, ಅವರಿಗೆ ಉತ್ತಮ ಮೌಲ್ಯ ಶಿಕ್ಷಣದ ಜೊತೆಗೆ ಬಾಲ್ಯದಲ್ಲಿ ಎದುರಾಗುವ ಕಿರುಕುಳ, ದೌರ್ಜನ್ಯವನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೌಶಲ್ಯ ಜ್ಞಾನವನ್ನು ಪೋಷಕರು ಮತ್ತು ಶಿಕ್ಷಕರು ನೀಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಜಿ ಎಮ್ ಮೇಲೆ ನಂಬಿಕೆಯಿಟ್ಟು ನಿಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದ್ದೀರಿ, ಅವರ ಸಂಪೂರ್ಣ ಜವಾಬ್ದಾರಿ ನಮ್ಮದು. ಈ ವರ್ಷ ಶಾಲೆ 20ನೇ ಸಂಭ್ರಮವನ್ನು ಆಚರಿಸುತ್ತಿದ್ದು ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.…
ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರು ಹೊರನಾಡ ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಸಂಘ ಆಂಧೇರಿ (ರಿ) ಪ್ರಸ್ತುತ ಪಡಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇವರ ಸಹಯೋಗದಲ್ಲಿ ಜೂನ್ 9 ರಂದು ಭಾನುವಾರ ರಾಧಾಬಾಯಿ ಟಿ. ಭಂಡಾರಿ ಸಭಾಗೃಹ, ಬಂಟರ ಭವನ ಕುರ್ಲಾ, ಮುಂಬಯಿಯಲ್ಲಿ ಬೆಳಿಗ್ಗೆ 9.30 ರಿಂದ ಆರಂಭವಾಗುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ 2024 ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಹೇರಂಬ ಇಂಡಸ್ಟ್ರೀಸ್ನ ಸಿ.ಎಂ.ಡಿ. ಕನ್ಯಾನ ಸದಾಶಿವ ಶೆಟ್ಟಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಡಾ. ಸುಧಾಕರ ಶೆಟ್ಟಿ ಅವರಿಗೆ ಹೊರನಾಡ ಕನ್ನಡ ಪ್ರಶಸ್ತಿ ಸೇರಿದಂತೆ ಹಲವು ಮಂದಿ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ಮೋಹನ್ ಆಳ್ವರ ಸಹಕಾರದೊಂದಿಗೆ ಮೂಡಬಿದ್ರೆಯಲ್ಲಿ ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್ನ್ನು ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುತ್ತಾ ಬಂದಿರುವ ಕಠಿಣ ಪರಿಶ್ರಮಿ, ವೈದ್ಯಕೀಯ ಸಮಾಜ ಸೇವೆಗಾಗಿ ದಕ್ಷಿಣ ಕನ್ನಡ…
ಉದ್ಯಮಿ, ಸಮಾಜ ಸೇವಕ ಶಶಿಧರ ಕೆ. ಶೆಟ್ಟಿ ಇನ್ನಂಜೆಯವರಿಗೆ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವಾಕರ್ತ ಪ್ರಶಸ್ತಿ ಪ್ರದಾನ
ವಸಾಯಿ ತಾಲೂಕಿನ ಹೋಟೆಲ್ ಉದ್ಯಮಿ, ತುಳುಕೂಟ ಫೌಂಡೇಶನ್ ನಾಲಾಸೋಪಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಶ್ರೀ ದೇವಿ ಯಕ್ಷಕಲಾ ನಿಲಯ ನಾಲಾಸೋಪಾರ ವಿರಾರ್ ನ ಅಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಮುಂಬಯಿ ಬಂಟರ ಸಂಘದ ಜೊತೆ ಕೋಶಾಧಿಕಾರಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಶಶಿಧರ ಕೆ ಶೆಟ್ಟಿ ಇನ್ನಂಜೆಯವರಿಗೆ ಅವರ ಸಾಮಾಜಿಕ ಸೇವೆಗಳು ಮತ್ತು ಸಮಾಜದಲ್ಲಿ ಅಪರಾಧ ಕಾರ್ಯಗಳು ನಡೆಯದಂತೆ ಜನಜಾಗೃತಿಯ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವುದನ್ನು ಗಮನಿಸಿ ನಾಲಾಸೋಪಾರ ಅಚೋಲೆ ಪೊಲೀಸ್ ಠಾಣೆಯ ವರಿಷ್ಠ ಪೊಲೀಸ್ ಅಧಿಕಾರಿಯವರು ಗೌರವ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. ಶಶಿಧರ್ ಕೆ ಶೆಟ್ಟಿಯವರು ಪಾಲ್ಗರ್ ಜಿಲ್ಲೆಯಲ್ಲಿ ವಿವಿಧ ಭಾಷೆಯ ಸಂಘಟನೆಗಳ ಸೇವಾ ಕಾರ್ಯಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದವರು. ಅಲ್ಲದೇ ವಸಾಯಿ ತಾಲೂಕಿನ ತುಳು – ಕನ್ನಡಿಗರ ಸಂಘ ಸಂಸ್ಥೆಗಳಿಗೆ ಧಾರ್ಮಿಕ ಕಾರ್ಯಗಳಿಗೆ ಮತ್ತಿತರ ಸಮಾಜ ಪರ ಸೇವಾ ಕಾರ್ಯಗಳಿಗೆ ಆರ್ಥಿಕ ಸಹಾಯ ಹಾಗೂ ಪ್ರೋತ್ಸಾಹವನ್ನು ನೀಡುತ್ತಾ ಪರಿಸರದ ಜನರಲ್ಲಿ ಒಗ್ಗಟ್ಟು, ಸಾಮರಸ್ಯ,…
ಸವಣೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷ, ಸವಣೂರು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಪುಣ್ಚಪ್ಪಾಡಿ ದೇವಸ್ಯ ಪಿ.ಡಿ. ಗಂಗಾಧರ್ ರೈ ಮತ್ತು ಸುವಾಸಿನಿ ಜಿ.ರೈ ಕಳ್ಳಿಗೆ ಬೀಡುರವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಮಾರಂಭವು ಅದ್ದೂರಿಯಾಗಿ ಮೇ 22 ರಂದು ಪುತ್ತೂರು ದರ್ಬೆ ಪ್ರಶಾಂತ್ ಮಹಲ್ ನ ಸಭಾಭವನದಲ್ಲಿ ಜರಗಿತು. ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಯಜಮಾನ ವಿಶ್ವನಾಥ ರೈ ದಂಪತಿ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆಗೈದರು. ಗಂಗಾಧರ ರೈ ಮತ್ತು ಸುವಾಸಿನಿ ಜಿ. ರೈಯವರುಗಳು ಪರಸ್ಪರ ಹಾರಾರ್ಪಣೆಗೈದರು, ಬಳಿಕ ಕೇಕ್ ಕತ್ತರಿಸಿದರು. ಸರ್ವ ಕ್ಷೇತ್ರದಲ್ಲೂ ಸೈ ಎನಿಸಿದ ಗಂಗಣ್ಣ – ರಾಕೇಶ್ ರೈ : ಕಾರ್ಯಕ್ರಮದ ನಿರೂಪಕರಾದ, ದ. ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡಿಂಜಿರವರು ಮಾತನಾಡಿ ಪಿ.ಡಿ. ಗಂಗಾಧರ ರೈ ಮತ್ತು ಸುವಾಸಿನಿ ಜಿ. ರೈಯವರ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಣೆಯನ್ನು ನೋಡುವ ಸೌಭಾಗ್ಯ ನಮಗೆ ದೊರೆತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಪಿ.ಡಿ. ಗಂಗಾಧರ ರೈಯವರು…
ಮುಂಗಾರು ಪೂರ್ವ ಮಳೆ ಕೈ ಕೊಟ್ಟರೂ ಮುಂಗಾರು ಶುಭಾರಂಭಗೊಂಡಿದೆ. ಮಳೆಗಾಲವೆಂದರೆ ಇಳೆ ತಂಪಾಗಿ ಜೀವ ಜಲ ಸಮೃದ್ದವಾಗುವ ಕಾಲ. ಗುಡುಗು ಸಿಡಿಲುಗಳ ಆರ್ಭಟದ ಜೊತೆಗೆ ನೆರೆಯ ಭೀತಿಯೂ ಮಳೆಗಾಲದಿಂದ ಹೊರತಾಗಿಲ್ಲ. ಮುಖ್ಯವಾಗಿ ಮಳೆಗಾಲದಲ್ಲಿ ಎಚ್ಚರಿಕೆಯಲ್ಲಿರಬೇಕಾದವರು ವಾಹನ ಸವಾರರು. ಅದರಲ್ಲಿಯೂ ಬೈಕ್ ಸವಾರರು. ನಿಮ್ಮ ಮನೆಯಲ್ಲಿ ಬೈಕ್ ಕ್ರೇಝ್ ಇರುವ ಮಕ್ಕಳಿದ್ದರೆ ಅವರನ್ನ ಕರೆದು ಇಂದೇ ತಿಳಿಹೇಳಿರಿ, ಮಳೆಗಾಲದಲ್ಲಿ ರಸ್ತೆ ಜಾರುತ್ತಿರುತ್ತದೆ. ವಾಹನಗಳ ಓಡಾಟದಿಂದಾಗಿ ಲೀಕೇಜ್ ಆಗುವ ಪ್ಯೂಯಲ್, ವಾಹನಗಳು ಹೊರಬಿಡುವ ಹೊಗೆಯ ಕಾರಣಕ್ಕೆ ಎಣ್ಣೆಯಂತೆ ಜಾರುವ ಅಂಶಗಳು ರಸ್ತೆಯಲ್ಲಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತಗಳಾಗುವ ಸಂಭವ ಅತೀ ಹೆಚ್ಚು. ವಾಹನಗಳ ಬ್ರೇಕ್ ನಿರೀಕ್ಷೆಯಂತೆ ಕೆಲಸ ಮಾಡುವುದಿಲ್ಲ! ಕೆಲವು ರಸ್ತೆಗಳು ಹೊಂಡಗಳಿಂದ ಕೂಡಿರುತ್ತವೆ ಎಲ್ಲೆಲ್ಲಿ ಹೊಂಡಗಳಿವೆ, ಮ್ಯಾನ್ ಹೋಲುಗಳಿವೆ? ಚರಂಡಿ ಓಪನ್ ಆಗಿದೆ ಎನ್ನುವುದನ್ನ ಊಹಿಸುವುದೂ ಸಾಧ್ಯವಿಲ್ಲ. ಹಾಗಾಗಿ ಎಚ್ಚರಿಕೆಯ ಕಣ್ಣೊಂದು ಆ ಕಡೆಗಿದ್ದರೆ ಉತ್ತಮ. ಸರ್ಕಸ್ ಮಾಡಲೇ ಬೇಡಿ : ಕೆಲವು ಸವಾರರಿಗೆ ಒಂದು ಛೇಷ್ಠೆ ಇದ್ದೇ ಇರುತ್ತದೆ.…