Author: admin
2024- 25 ನೆಯ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಸಾಲಿನ ಐ.ಸಿ.ಎಸ್.ಇ ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಥಾಣೆಯ ಸುಲೋಚನಾ ದೇವಿ ಸಿಂಗಾನೀಯ ಸ್ಕೂಲಿನ ವಿದ್ಯಾರ್ಥಿನಿ ಶ್ರಾವ್ಯ ಎಸ್ ಶೆಟ್ಟಿ ಅವರು ಶೇಕಡ 94.02 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಥಾಣೆ ಪಶ್ಚಿಮದ ವರ್ತಕ್ ನಗರದ ನಿವಾಸಿಯಾಗಿದ್ದು, ಸುರತ್ಕಲ್ ಮಧ್ಯ ಕುಂಜರ ಬಾಳಿಕೆ ಸಂದೀಪ್ ಎಸ್ ಶೆಟ್ಟಿ ಮತ್ತು ನಂದಬೆಟ್ಟು ಮಮತಾ ಎಸ್ ಶೆಟ್ಟಿ ದಂಪತಿಯ ಪುತ್ರಿ ಹಾಗೂ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ ಕೆ ಶೆಟ್ಟಿಯವರ ಮೊಮ್ಮಗಳು.
ನೀರ ಮೇಲ್ಡ್ ಪಾಂಬು ಪುಡೆಮಿನ್/ಬೂಮಿನ್ ಅಪ್ಪೆ ಪಂದ್ ಮಾನಿತಿನ ನರಮಾನಿ ಪುಡೆಮಿ ಮೇಲ್ಮೆಡ್ ಇಪ್ಪುನ ಸರ್ವ ಜೂವೊ ಜಂತುಲೆಡ್ಲಾ ದೇವೆರೆನ್ ತೂದು ಪೂಜನೆ ಮಲ್ಪುನಕ್ಲ್. ಗಡಿ ಗಡಿ ಮಲ್ಪಿ ತಪ್ಪುಲೆನ್ ಮಾಪಿತ್ ‘ಕ್ಷಮಯಾಧರಿತ್ರಿ’ ಪನ್ಪವೊನ್ನ ಬೂಮ್ಯಪ್ಪೆನ ಜಕ್ಕೆಲ್ಡ್ ತೆಲಿತ್ತ್ ನಲಿಪ್ಪುನ ಒಟ್ಟುಡು ಆಲೆನ್ ಪೂಜೆ ಮಲ್ಪೆರೆಲ, ಬೆನ್ನಿ ಸಾಗೊಳಿ ಮಲ್ಪೆರೆಲಾ ದಿನ, ಗಡು ನಿಗಂಟ್ ಮಲ್ತಿನಕ್ಲ್ ನಮ್ಮ ಪೆರಿಯ ತರೆಮಂದೆಲ್. ಒರ್ಸೊ ಇಡೀ ಮಿನದನ ಮಲ್ತೊಂದೇ ಕುಲ್ಲ್ಂಡ ಒರ್ಸೊದ ಬಂಜಿದ ಪಡಿಕ್ಕ್ ತತ್ವಾರ ಬರ್ಪುನವು ಸಾಜ. ಅವೆಕ್ಕ್ ಬೋಡಾದ್ ಮಿನದನ ಮುಗಿತ್ ಬೆನ್ನಿ ತೊಟ್ಟೆರೆ ನಮ್ಮ ಪೆರಿಯ ಮಂದೆಲೆ ನಿಗಂಟ್ದ ಗಡುವೇ ಈ ಪತ್ತನಾಜೆ. ಉಂದು ತುಳುನಾಡ ಜನಮಂದೆಲ್ ಮಲ್ಪಿ ಗೌಜಿ, ಗಮ್ಮತ್ತ್, ಎಡ್ಡೆ ಮೆಲ್ಲಿಲೆನ್ ಮಾತ ಉಂತವುನ ಗಡುತ್ತ ದಿನೊ.ತುಳುವೆರೆ ಕಾಲಕೊಂದೆದ ರಡ್ಡನೇ ತಿಂಗೊಲಾಯಿ ಬೇಸ ತಿಂಗೊಲುಡು ಪತ್ತ್ ಪೋಪುನಾನಿಗ್ ಪಂಡ ಗ್ರೇಗೋರಿಯನ್ ಕ್ಯಾಲೆಂಡರ್ ಪ್ರಕಾರ ಮೇ ತಿಂಗೊಲುದ 24 ಅತಂಡ 25ನೇ ತಾರೀಕ್ದಾನಿ ತುಳುವೆರೆ ಬಿತ್ತಿಲ್ಡ್ ಪತ್ತನಾಜೆದ ಗೌಜಿ.…
ಸುವರ್ಣ ಸಂಭ್ರಮದಲ್ಲಿರುವ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2024- 25 ನೇ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 22ರಂದು ಏರ್ಪಡಿಸಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಅಶೋಕ್ ಬಿ. ಹಿಂಚಿಗೇರಿ ದೀಪ ಬೆಳಗಿ ಉದ್ಘಾಟಿಸಿದರು. ಸಮಾರಂಭದಲ್ಲಿ ಉದ್ಯಮ, ಸಂಸ್ಕೃತಿ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕ ಮಂಗಳೂರಿನ ಮಹೇಶ್ ಮೋಟಾರ್ಸ್ ಮಾಲೀಕ ಎ.ಕೆ ಜಯರಾಮ ಶೇಖ ಅವರು ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದರು. ಫರಂಗಿಪೇಟೆಯ ಶ್ರೀರಾಮ ಪ್ರೌಢ ಪ್ರಾಥಮಿಕ ಶಾಲೆಯ ನವೀಕರಣ, ಬಡ ವಿದ್ಯಾರ್ಥಿಗಳಿಗೆ ನೆರವು, ಸ್ಥಳೀಯ ಶಿಕ್ಷಕರ ನೇಮಕಾತಿ, ಯಕ್ಷ ಶಿಕ್ಷಣ, ರಂಗಮಂದಿರ ಮತ್ತು ಜಯಪದ್ಮ ಸಭಾಂಗಣಗಳ ನಿರ್ಮಾಣ ಇತ್ಯಾದಿ ಶೈಕ್ಷಣಿಕ ಸೇವೆಗಳಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದ ಅವರ ಸಾಧನೆಯನ್ನು ಪರಿಗಣಿಸಿ ಆರ್ಯಭಟ ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಆರ್ಯಭಟ ಸಾಂಸ್ಕೃತಿಕ…
2025ರ ಸಾಲಿನ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ಗಳನ್ನು ಗಳಿಸುವುದರ ಮೂಲಕ ಎಕ್ಸಲೆಂಟ್ ಕಾಲೇಜಿನ ಕೀರ್ತಿಯನ್ನು ರಾಜ್ಯಾದ್ಯಂತ ಹೆಚ್ಚಿಸಿರುತ್ತಾರೆ. ಪ್ರಸ್ತುತಿ ಶೆಟ್ಟಿ 222, ತ್ರಿಶಾ ಪಿ ಶೆಟ್ಟಿ 1123, ಅನನ್ಯ ಯು ಶೆಟ್ಟಿ 1195, ಸ್ಮರಣ್ ಎಂ 1415, ರಶ್ಮಿ 1542, ಧನುಷ್ ದೇವಾಡಿಗ 1801, ಅವಿಜಿತ್ ಶೆಟ್ಟಿ 1806, ಪದ್ಮಾಶ್ರೀ ವಿ ಎನ್ 3414, ಸುಶಾಂತ್ ಚಂದ್ರ 3446, ಪ್ರಥಮ ತಾಳಿಕೋಟೆ 3641, ಚಿತ್ರಾ ನಾಯ್ಕ 3675, ಶ್ರೀ ಹರ್ಷ ಪಿ ಎನ್ 3940, ಪ್ರಜ್ವಲ್ ಕುಮಾರ್ ಎಸ್ 3950, ಆಕಾಶ್ 4383, ತನ್ವಿ ಶೆಟ್ಟಿ 4548, ಶಬರಿ ಡಿ ಶೆಟ್ಟಿ 4675, ರ್ಯಾಂಕ್ ಗಳನ್ನು ಗಳಿಸಿ ರಾಜ್ಯದಲ್ಲಿ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಎಂ. ಎಂ ಹೆಗ್ಡೆ ಎಜುಕೇಶನಲ್ & ಚಾರೀಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್…
ಥಾಣೆ:- 2024-25ನೆಯ ಶೈಕ್ಷಣಿಕ ಸಾಲಿನ ಎಚ್.ಸಿ. ಸಿ ಪರೀಕ್ಷಾ ಫಲಿತಾಂಶದಲ್ಲಿ ಮುಲುಂಡ್ ಪೂರ್ವದ ವಿ.ಜಿ.ವಾಝೆ ಕಾಲೇಜಿನ ವಿದ್ಯಾರ್ಥಿ ಕ್ರಿಷ್ ಕರುಣಾಕರ ಶೆಟ್ಟಿ ಅವರು ಶೇ 92 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಲ್ವಾ ಖಾರೇಗಾಂವ್ ನಿವಾಸ್ ಮೂಲತ: ಪೆಲತ್ತೂರು ಕುಂಬರ್ಜಡ್ಡು ಪ್ರೀತಿಕಾ ನಿಲಯ ಕರುಣಾಕರ ಶೆಟ್ಟಿ ಮತ್ತು ಕಣಂಜಾರು ಕೊಳಕೆಬೈಲು ಸುಜಾತ ಶೆಟ್ಟಿ ದಂಪತಿಯ ಪುತ್ರಿ.
ಗುಡ್ಡೆಯಂಗಡಿ:- 2024-25ನೆಯ ಶೈಕ್ಷಣಿಕ ಸಾಲಿನ ಹತ್ತನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಕಾರ್ಕಳ ತಾಲೂಕಿನ ಗಣಿತ ನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಹೈಸ್ಕೂಲು ಇಲ್ಲಿನ ವಿದ್ಯಾರ್ಥಿನಿ ಸ್ವಸ್ತಿ.ಎಸ್ ಶೆಟ್ಟಿ ಶೇಕಡಾ 97.44 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಗುಡ್ಡೆಯಂಗಡಿ ಪೆಲತ್ತೂರು ಕುಂಬರ್ಜಡ್ಡು ಪ್ರೀತಿಕಾ ನಿಲಯ ಸುರೇಶ. ಎನ್. ಶೆಟ್ಟಿ ಹಾಗೂ ಉಡುಪಿ ಅಂಬಲಪಾಡಿ ಕಪ್ಪೆಟ್ಟು ಶ್ರೀ ರತ್ನಾ ನಿವಾಸದ ಸೌಮ್ಯ.ಎಸ್.ಶೆಟ್ಟಿ ಇವರ ಸುಪುತ್ರಿಯಾಗಿದ್ದಾರೆ.
ಗಣಿತನಗರ : ರಾಷ್ಟ್ರ ಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆಇಇ ಮೈನ್.ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಅಂತಿಮ ಫಲಿತಾಂಶದಲ್ಲಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕೆ.ಮನೋಜ್ ಕಾಮತ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲು.ಎಸ್ ವರ್ಗದಲ್ಲಿ 1ನೇ ರ್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ್ಯಾಂಕನ್ನು ಪಡೆದಿರುತ್ತಾರೆ. ಬಿ.ಆರ್ಕ್ ವಿಭಾಗದಲ್ಲಿ ಚಿಂತನ್ ಮೆಘವತ್ 99.9741943 ಪರ್ಸಂಟೈಲ್ ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ 19ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ ಮೊದಲನೇ ರ್ಯಾಂಕನ್ನು, ಬಿ.ಪ್ಲಾನಿಂಗ್ ವಿಭಾಗದಲ್ಲಿ 99.8556269 ಪರ್ಸಂಟೈಲ್ನೊಂದಿಗೆ ಕೆಟಗರಿ ವಿಭಾಗದಲ್ಲಿ 3ನೇ ರ್ಯಾಂಕ್ ಹಾಗೂ ಜನರಲ್ ಮೆರಿಟ್ ವಿಭಾಗದಲ್ಲಿ 48ನೇ ರ್ಯಾಂಕನ್ನು ತನ್ನದಾಗಿಸಿಕೊಂಡಿದ್ದಾರೆ. ಜೊತೆಗೆ ಆಕಾಶ್ ಪ್ರಭು 99.9627251 ಪರ್ಸಂಟೈಲ್ನೊಂದಿಗೆ 27ನೇ ರ್ಯಾಂಕ್, ತರುಣ್ ಎ.ಸುರಾನ 99.9483886 ಪರ್ಸಂಟೈಲ್ನೊಂದಿಗೆ 39ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 7ನೇ…
ದೇಶದ ಪ್ರತಿಷ್ಠಿತ ಆರ್ಕಿಟೆಕ್ಚರ್ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ.(ಬಿ. ಆರ್ಕ್ )2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮೋಹಿತ್- 99.4093359 ಪರ್ಸೆಂಟೈಲ್ ನೊಂದಿಗೆ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಎರಡರಲ್ಲೂ ರಾಷ್ಟ್ರಕ್ಕೆ ಕೆಟಗರಿ ವಿಭಾಗದಲ್ಲಿ ಆರನೇ ರ್ಯಾಂಕ್ ಗಳಿಸಿ ವಿಶಿಷ್ಟಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ (AIR 101), ಟಿ ಪ್ರದೀಪ್ (AIR 117),ಮೋನಿಕಾ ಕೆ ಎ(AIR 140), ಸುಧಾಂಶು ಪಾಲೇಕರ್ (AIR 268), ಪ್ರತಿಕ್ ಎನ್ ಶೆಟ್ಟಿ (AIR 362), ತ್ರಿಶ್ಲಾ ಗಾಂಧಿ (AIR 423), ರೋಹಿತ್ ಜಿ ಬಿ -(AIR 461), ಸಾಚಿ ಶಿವಕುಮಾರ್ -(AIR 484), ಚಿನ್ಮಯಿ ಆರ್-(AIR 519), ಮನೋಜ್ ಎಂ ಆರ್ -(AIR 846), ಚೇತನ್ ಗೌಡ -(AIR 867), ಆಕಾಶ್ ದೇವಾಡಿಗ -(AIR 980) ಕೆಟಗರಿ ವಿಭಾಗದಲ್ಲಿ ರ್ಯಾಂಕ್ ಗಳಿಸಿದ್ದಾರೆ. 500 ರ್ಯಾಂಕ್ ಒಳಗೆ 10 ಮಂದಿ, 1000 ರಾಂಕ್…
ಯುಎಇಯಲ್ಲಿ ಹಾಗೂ ಕರಾವಳಿಯಲ್ಲಿ ಹೆಸರು ವಾಸಿಯಾಗಿರುವ ಹೋಟೆಲ್ ಉದ್ಯಮ ಸಂಸ್ಥೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಕಳೆದ 13 ವರ್ಷದಿಂದ ತನ್ನ ಮಾತೃಪಿತರ ಮದುವೆಯ ವಾರ್ಷಿಕ ದಿನದಂದು ದುಬೈನಲ್ಲಿ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರದ ಕಾರ್ಯಕ್ರಮ ಮೇ 22 ರಂದು ಫಾರ್ಚೂನ್ ಪ್ಲಾಝದಲ್ಲಿ ಯಶಸ್ವಿಯಾಗಿ ನಡೆಯಿತು. ದುಬೈ ಹೆಲ್ತ್ ಅಥೋರಿಟಿಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಯಶಸ್ವಿಯಾಗಿ ಜರುಗಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಸಿಬ್ಬಂದಿ ವರ್ಗದವರು, ದುಬೈ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರವೀಣ್ ಶೆಟ್ಟಿಯವರ ಸ್ನೇಹಿತರು ಶಿಬಿರದಲ್ಲಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು, ನನ್ನ ಮಾತೃಪಿತರಾದ ಶ್ರೀಮತಿ ಸರೋಜಿನಿ ಶೆಟ್ಟಿ ಮತ್ತು ಶ್ರೀ ನಾರಾಯಣ ಶೆಟ್ಟಿಯವರ ಮದುವೆಯ ವರ್ಷದ ಈ ಶುಭ ದಿನದಂದು ಕಳೆದ ಹದಿಮೂರು ವರ್ಷಗಳಿಂದ ಈ…
ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೇ 23 ರಂದು ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ರಮೇಶ್ ಭಟ್ ಉಪ್ಪಂಗಳ ಮತ್ತು ಉಪಾಧ್ಯಕ್ಷರಾಗಿ ದಯಾನಂದ ರೈ ಮನವಳಿಕೆ ಆಯ್ಕೆಯಾದರು.ದಯಾನಂದ ರೈ ಮನವಳಿಕೆಯವರು ಅಲಂಕಾರು ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಣಾಧಿಕಾರಿಯಾಗಿ ನಿವೃತ್ತರಾಗಿದ್ದರು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.















