Author: admin
ಜಾಗತಿಕ ಮಟ್ಟದ ಬಂಟರ ಸಮಾಗಮ 2024 ಸಂಭ್ರಮದಲ್ಲಿ ಪಾಲ್ಗೊಳ್ಳಲು ಅತ್ಯಂತ ಸಂತಸವಾಗುತ್ತಿದೆ. ಕಾರ್ಯಕ್ರಮದ ನೇತೃತ್ವ ವಹಿಸಿದ ಪದಾಧಿಕಾರಿಗಳೆಲ್ಲರನ್ನು ‘ಶೆಟ್ಟೀಜಿ’ ಎಂದು ಕರೆಯುವ ಮೂಲಕ ಎಲ್ಲರಿಗೂ ನಮಿಸುತ್ತಿದ್ದೇನೆ. ಬಂಟ ಸಮಾಜಕ್ಕೆ ಬಂದಾಗಲೆಲ್ಲಾ ನನ್ನಲ್ಲಿ ಉತ್ಸಾಹ ಹೆಚ್ಚುತ್ತದೆ. ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಇಲ್ಲಿ ಬಂದಾಗ ನನ್ನ ಸ್ವಂತ ಮನೆಗೆ ಬಂದಂತೆ ಅನಿಸುತ್ತದೆ. ಬಂಟ ಸಮಾಜದವರಾದ ತಾವು ನಮ್ಮಂತೆ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚು ಒಲವು ತೋರುತ್ತಿದ್ದೀರಿ. ಬಂಟ ಸಮಾಜದ ರಾಜಕೀಯ ನೇತಾರ ಗೋಪಾಲ್ ಸಿ. ಶೆಟ್ಟಿ ನನಗೆ ಹೆಚ್ಚು ಪ್ರಿಯವಾದವರು. ನಾಯಕನೆಂದರೆ ಗೋಪಾಲ್ ಸಿ. ಶೆಟ್ಟಿಯಂತಿರಬೇಕು ಎಂದು ಮಹಾರಾಷ್ಟ್ರ ರಾಜ್ಯದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನುಡಿದರು. ಅವರು ಡಿಸೆಂಬರ್ 7 ರಂದು ಕುರ್ಲಾ ಪೂರ್ವ ಬಂಟರ ಭವನದಲ್ಲಿ ಜರಗಿದ ವಿಶ್ವ ಬಂಟರ ಸಮಾಗಮ 2024 ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಶೆಟ್ಟೀಸ್ ಉಡುಪಿ ರೆಸ್ಟೋರೆಂಟ್ ಹೆಸರಿನಲ್ಲಿ ಹೋಟೆಲ್ ಉದ್ಯಮದಲ್ಲಿ ಪರಿಣಿತರು. ಉಡುಪಿ ರೆಸ್ಟೋರೆಂಟ್ ಹೆಸರಿನ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಬಂಟರ ಸ್ಟಾರ್ ಹೋಟೆಲಿಗಿಂತ ಉಡುಪಿ ರೆಸ್ಟೋರೆಂಟ್…
ಅರವತ್ತು ವರ್ಷವು ಮನುಷ್ಯನ ಜೀವನದಲ್ಲಿ ಒಂದು ನಿರ್ಣಾಯಕ ಘಟ್ಟ. ಸರಕಾರಿ ಕೆಲಸದಲ್ಲಿದ್ದವರಿಗೆ ಇದು ನಿವೃತ್ತಿಯ ಸಮಯ. ಬೇರೆ ಬೇರೆ ಹುದ್ದೆಗಳನ್ನು ಹೊತ್ತು ದುಡಿದವರಿಗೆ ಪೂರ್ಣ ವಿಶ್ರಾಂತಿ. ಕೆಲಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರಿಗೆ ನಿವೃತ್ತಿಯ ಬದು ಕನ್ನು ಕಳೆಯುವುದೂ ತ್ರಾಸದ ಕೆಲಸ. ಸಹಜವಾಗಿ ಹುದ್ದೆಯ ಮೂಲಕ ಕಂಡುಕೊಂಡ ಗೌರವವು ಕಣ್ಮರೆಯಾಗುತ್ತದೆ. ತಾನೇ ದುಡಿದ ಸಂಸ್ಥೆ ಅಥವಾ ಕಚೇರಿಗೆ ಹೋದಾಗಲೂ ಕಹಿ ಅನುಭವ. ಮೊದಲಿನ ಗೌರವವಿಲ್ಲ. ನಿವೃತ್ತರಾದ ಮೇಲೆ ಸಹೋದ್ಯೋಗಿಗಳಾಗಿದ್ದ ಅನೇಕರು ಸಂಪರ್ಕದಿಂದಲೂ ದೂರವಾಗುತ್ತಾರೆ. ನಿವೃತ್ತರಿಗೆ ಈ ವ್ಯತ್ಯಾಸದ ಅರಿವು ಆಗಿಯೇ ಆಗುತ್ತದೆ. ಸಂಸಾರದಲ್ಲಿಯೂ ನಿರೀಕ್ಷಿತ ಸಂಬಂಧಗಳ ಕೊರತೆ. ಈಗೀಗ ಹೆಚ್ಚಿನ ಕುಟುಂಬಗಳಲ್ಲಿ ಹಿರಿಯ ಎರಡು ತಲೆಗಳು ಮಾತ್ರ. ಮಕ್ಕಳಿಗಾದರೋ ದುಡಿಮೆಯ ಹೊಣೆ. ದೂರದ ಊರುಗಳಲ್ಲಿ ಅವರ ಉದ್ಯೋಗ. ಕೆಲವೊಮ್ಮೆ ವಿದೇಶದಲ್ಲಿ ಉದ್ಯೋಗ. ಹಾಗಾಗಿ ಹಿರಿಯರು ತಮ್ಮ ಮನೆಯಲ್ಲಿಯೇ ವಾಸ್ತವ್ಯ. ಮಕ್ಕಳು ಕರೆದರೂ ತಮ್ಮ ಹಿರಿಯರು ಬದುಕಿ ಬಾಳಿದ ಮನೆಯನ್ನು ತೊರೆಯಲು ಒಪ್ಪದ ಮನಸ್ಸು. ಹಾಗಾಗಿ ಹಿರಿಯ ಎರಡು ಜೀವಗಳು ದಿನವೂ ತಮ್ಮೊಳಗೆ ಸಾಂತ್ವನವನ್ನು…
ಹುಟ್ಟೂರಿನಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಿದ್ದೇವೆ. ಶಂಕರನಾರಾಯಣ ಕನ್ಸ್ಟ್ರಕ್ಷನ್ ಪ್ರೈ.ಲಿ.(ಎಸ್ಎನ್ಸಿ) ಸಂಸ್ಥಾಪಕರಾದ ಸಿ. ನಾರಾಯಣ ಶೆಟ್ಟಿ ಅವರ ಹುಟ್ಟೂರಾದ ಇಲ್ಲಿ ಅವರ 100ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಈ ಆಸ್ಪತ್ರೆಯನ್ನು ಜನತೆಯ ಸೇವೆಗಾಗಿ ಆರಂಭಿಸಲಾಗಿದೆ ಎಂದು ಎಸ್ಎನ್ಸಿ ಚೇರ್ಮನ್ ಡಾ| ಎನ್. ಸೀತಾರಾಮ ಶೆಟ್ಟಿ ಹೇಳಿದರು. ಅವರು ರವಿವಾರ ಶಂಕರನಾರಾಯಣದಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಆರಂಭವಾದ 25 ಕೋ.ರೂ. ವೆಚ್ಚದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಆಸ್ಪತ್ರೆಯ ಕಲ್ಪನೆಯು ಹಿರಿಯ ಸಹೋದರ ನಾರಾಯಣ ನೇತ್ರಾಲಯ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಸಂಸ್ಥಾಪಕ ದಿ| ಡಾ| ಭುಜಂಗ ಶೆಟ್ಟಿ ಅವರದ್ದಾಗಿದೆ. ಈ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲಾಗುವುದು ಎಂದರು. ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್ ಇರುವುದಿಲ್ಲ. ವರ್ಷಕ್ಕೆ 70 ಸಾವಿರ ಉಚಿತ ಶಸ್ತ್ರಚಿಕಿತ್ಸೆ…
ವಿದ್ಯಾಗಿರಿ: ಮೂಡಣದ ಬಿದಿರೆಯ ನಾಡಲ್ಲಿ ಮೂರು ದಶಕಗಳ ಹಿಂದೆ ಬೆಳಗಿದ ಸಾಂಸ್ಕೃತಿಕ ಬೆಳಕು ಜನಮಾನಸವ ಬೆಸೆದುಕೊಂಡಿದ್ದು, ಈಗ ಮೂವತ್ತರ ಹರುಷ. ಈ ಸಾಂಸ್ಕೃತಿಕ ಬೆಳಕಿನ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ 30ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ವಿದ್ಯಾಗಿರಿಯು ವಿದ್ಯುದ್ದೀಪಾಲಂಕಾರ, ಹೂ-ಹಣ್ಣಿನ ಸಿಂಗಾರ, ಗೂಡುದೀಪಗಳ ಬೆಳಕು, ಕಲಾಕೃತಿಗಳ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಗಳ ಬೆರಗಿನ ಮೂಲಕ ಸಜ್ಜಾಗಿದೆ. ಇಂದಿನಿAದ (ಡಿ.10) ಭಾನುವಾರದ ವರೆಗೆ (ಡಿ.15) ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ. ಈ ಬಾರಿ ಡಿ.10 ರಿಂದ 14ರ ವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ ಮಿಂದೇಳಲು ಮೀಸಲಿರಿಸಲಾಗಿದೆ. ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸೇರಿದಂತೆ ಸುತ್ತಲ ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ…
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಸಮಾಜ ಭಾಂದವರಿಗಾಗಿ ನಡೆಯುವ 12ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 8 ರವಿವಾರದಂದು ವಿವಿಧ ಕ್ರೀಡಾ ಆಟೋಟ ಸ್ಪರ್ದೆಗಳೊಂದಿಗೆ ಪುಣೆಯ ಸಾಳುಂಕೆ ವಿಹಾರ್ ರೋಡ್ ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಲೇನ್ ವಾನ್ವೋರಿಯಲ್ಲಿರುವ ರೇಸ್ ಸ್ಪೋರ್ಟ್ಸ್ ಕ್ರೀಡಾ ಸಂಕುಲದಲ್ಲಿ ಜರಗಲಿರುವುದು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತುರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಜರಗಲಿದೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪುಣೆ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್, ಪುಣೆ ನಗರ ಶಿವಸೇನಾ ಅಧ್ಯಕ್ಷರಾದ ಪ್ರಮೋದ್ ಅಲಿಯಾಸ್ ನಾನಾ ಭಂಗಿರೆರವರು ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ಪುಣೆಯ ಖ್ಯಾತ ಉದ್ಯಮಿ ಮಂಜುನಾಥ್ ಸಿ ಶೆಟ್ಟಿಯವರು ಉಪಸ್ಥಿತರಿರುವರು. ಅಸೋಸಿಯೇಷನ್ ನ ಕ್ರೀಡಾ ಕಾರ್ಯಾಧ್ಯಕ್ಷರಾದ ರಕ್ಷಿತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಅಸೋಸಿಯೇಷನ್ ನ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸಮಿತಿ ಪಧಾದಿಕಾರಿಗಳ ಸಹಕಾರದೊಂದಿಗೆ…
ಸಮಾಜದ ಎಲ್ಲರೂ ಒಪ್ಪುವಂತಹ ಸಜ್ಜನಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುವುದು ಅಪರೂಪದ ಕೆಲಸ. ಈ ವ್ಯಕ್ತಿತ್ವವನ್ನು ಸುದೀರ್ಘ ಕಾಲ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿರುವ ಅಪ್ಪಣ್ಣ ಹೆಗ್ಡೆಯವರದ್ದು ಬಣ್ಣಿಸುವ ಪದಗಳ ಹೂರಣ ಎಂದು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನುಡಿದರು. ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಆವರಣದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ಲೋಕ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ.ಶಂಕರ್ ಅವರು, ಸಾಮಾಜಿಕ, ಧಾರ್ಮಿಕ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ಸಲ್ಲಿಸಿರುವ ಬಸ್ರೂರು ಅಪ್ಪಣ್ಣ ಹೆಗ್ಡೆಯವರದ್ದು ಅಪರೂಪದ ವ್ಯಕ್ತಿತ್ವ. ಜಾತಿ, ಧರ್ಮಗಳನ್ನು ಮೀರಿದ ವ್ಯಕ್ತಿ. ಅಂತಹ ಪುಣ್ಯ ಪುರುಷರ ಸಮಕಾಲಿನರಾಗಿ ಇರುವುದೇ ನಮ್ಮ ಭಾಗ್ಯ. ಅವರು ನೂರ್ಕಾಲ ಬಾಳಿ, ಸಮಾಜಕ್ಕೆ ಬದುಕಲಿ ಎಂದು ಹಾರೈಸಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ 90 ರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಮುಂಬಯಿ ಉದ್ಯಮಿ ಎನ್.ಟಿ ಪೂಜಾರಿ ಅವರು, ಸರಳತೆಯ…
ತುಳು ಸಂಘ ಪಿಂಪ್ರಿ ಚಿಂಚ್ವಾಡ್ : ಅಧ್ಯಕ್ಷರಾಗಿ ಹರೀಶ್ ಶೆಟ್ಟಿ ಕುರ್ಕಾಲ್, ಉಪಾಧ್ಯಕ್ಷರಾಗಿ ದಿನೇಶ್ ಶೆಟ್ಟಿ ಉಜಿರೆ ಪುನರಾಯ್ಕೆ
ಪುಣೆ ಮಹಾನಗರದ ಔದ್ಯೋಗಿಕ ನಗರಿ ಪಿಂಪ್ರಿ ಚಿಂಚ್ವಾಡ್ ನ ಸಮಸ್ತ ತುಳು ಬಾಂಧವರ ಸಂಸ್ಥೆ ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ ಮಹಾಸಭೆಯು ನವೆಂಬರ್ 29ರಂದು ಬೋಸ್ರಿಯ ಜಂಜಿರಾ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ತುಳು ಸಂಘದ ನೂತನ ಹೊಸ ಕಾರ್ಯಕಾರಿಣಿ ಸಮಿತಿಯನ್ನು ನೆರೆದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು. ಕಳೆದ ಅವದಿಯಲ್ಲಿ ಸಂಘದ ಕಾರ್ಯವನ್ನು ಯಶಸ್ವಿಯಾಗಿ ನಡೆಸಿ ಇಲ್ಲಿನ ತುಳುವರ ಅಭಿಮಾನಕ್ಕೆ ಪಾತ್ರರಾದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಇವರನ್ನು ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉದ್ಯಮಿ ದಿನೇಶ್ ಶೆಟ್ಟಿ ಉಜಿರೆ ಇವರನ್ನು ಮರು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಸಂಘದ ಸ್ಥಾಪನೆಯಿಂದ ಸಂಘದ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉದ್ಯಮಿ ನಿತಿನ್ ಶೆಟ್ಟಿ ನಿಟ್ಟೆ, ಕೊಶಾಧಿಕಾರಿಯಾಗಿ ಉದ್ಯಮಿ ರಾಜೇಶ್ ಶೆಟ್ಟಿ ಕುರ್ಕಾಲ್ ರವರು ಆಯ್ಕೆಯಾದರು. ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪೆರ್ಡೂರು, ಸಾಮಾಜಿಕ ಸೇವಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ…
ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ಉಡುಪಿ ಹೋಟೆಲ್ ತೆರೆಯಲಾಗಿದೆ. ಬಾಗಲಕೋಟೆ ಮುಧೋಳ ಲೋಕಾಪುರದ ಕುಂದಾಪುರ ಮೂಲದ ಉದ್ಯಮಿ ಗುಣಾಕರ್ ಶೆಟ್ಟಿ ಎಂಬುವವರು ಹೋಟೆಲ್ ಆರಂಭಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಬಾಲ ಮೂರ್ತಿ ಲೋಕಾರ್ಪಣೆಗೊಂಡ ಬಳಿಕ ಇಲ್ಲಿನ ಹೋಟೆಲ್, ವಸತಿ ಗೃಹಗಳ ದರಗಳು ಗಗನಕ್ಕೇರಿವೆ. ಆದರೆ, ನಾವು ಆರಂಭಿಸುತ್ತಿರುವ ಹೋಟೆಲ್ ಮತ್ತು ವಸತಿ ಗೃಹದಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಅಲ್ಲದೇ ಇಡೀ ಹೋಟೆಲ್ ಕನ್ನಡಮಯ ಆಗಿರಲಿದ್ದು, ಕೆಲಸಕ್ಕೆ ಕನ್ನಡಿಗರಿಗೆ ಆಧ್ಯತೆ ನೀಡಲಾಗುವುದು. ಒಟ್ಟಾರೆ ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ಆದರಾತಿಥ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಸಾನಿಧ್ಯದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ನೆರವೇರಿಸಿದರು. ಈ ಸಂಧರ್ಭದಲ್ಲಿ ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ, ಸ್ವಾತಿ ಗ್ರೂಪ್ ಆಫ್ ಹೋಟೆಲ್ಸ್ ಸಿಎಂಡಿ ಜಿ ಕೆ ಶೆಟ್ಟಿಯವರು ಉಪಸ್ಥಿತರಿದ್ದರು. ಇನ್ಮುಂದೆ ಅಯೋಧ್ಯೆಯಲ್ಲೂ ಶ್ರೀರಾಮನ ಭಕ್ತರಿಗೆ ಕರ್ನಾಟಕದ ಸವಿರುಚಿ ಲಭ್ಯ. ರಾಮ ಮಂದಿರದಿಂದ…
“ಪಂಜುರ್ಲಿ”ಗೆ ಬೆಸ್ಟ್ ಸೀ ಫುಡ್ ಹೋಟೆಲ್ ಹಾಗೂ ಭಾರತದ ಮೋಸ್ಟ್ ಪ್ರಾಮಿನೆಂಟ್ ಫುಡ್ ಆಂಡ್ ಹಾಸ್ಪಿಟಾಲಿಟಿ ಪ್ರಶಸ್ತಿ
ಹೊಸದಿಲ್ಲಿಯ ಮೆರಿಟ್ ಅವಾರ್ಡ್ಸ್ ಆಂಡ್ ಮಾರ್ಕೆಟ್ ರಿಸರ್ಜ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹುಬ್ಬಳ್ಳಿ ಧಾರವಾಡದ ಪಂಜುರ್ಲಿ ಹೋಟೆಲಿಗೆ ಬೆಸ್ಟ್ ಸೀ ಫುಡ್ ಹೋಟೆಲ್ ಹಾಗೂ ಭಾರತದ ಮೋಸ್ಟ್ ಪ್ರಾಮಿನೆಂಟ್ ಫುಡ್ ಅಂಡ್ ಹಾಸ್ಪಿಟ್ಯಾಲಿಟಿ ಅವಾರ್ಡ್ ನೀಡಿ ಗೌರವಿಸಿದೆ. ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಪಾಲುದಾರ ಇನ್ನ ಬಡಕರ ಗುತ್ತು ರವಿಕಾಂತ ಶೆಟ್ಟಿಯವರು ಪ್ರಶಸ್ತಿ ಸ್ವೀಕರಿಸಿದರು. ರಾಜೇಂದ್ರ ವಿ ಶೆಟ್ಟಿಯವರು ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾಗಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪುಣೆ, ದಾವಣಗೆರೆಗಳಲ್ಲಿ ಪಂಜುರ್ಲಿ ಶಾಖೆಗಳನ್ನು ಹೊಂದಿದೆ. 2024ರ ಈ ಪ್ರಶಸ್ತಿ ಪಡೆದ ಧಾರವಾಡದ ಏಕೈಕ ಹೋಟೆಲ್ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಯುವ ಜನತೆಯು ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆದರ್ಶಪ್ರಾಯ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ದೇಶದ ಐಕ್ಯತೆಯಲ್ಲಿ ಕೈಜೋಡಿಸಿ ಬಲಿಷ್ಠ ಭಾರತವನ್ನು ನಿರ್ಮಿಸುವಲ್ಲಿ ತಮ್ಮ ಪಾತ್ರ ಅತ್ಯಂತ ಹಿರಿದಾಗಿರುತ್ತದೆ. ಮಾತ್ರವಲ್ಲದೇ ಬದುಕಿನಲ್ಲಿ ಯುವ ಜನತೆಯು ಶಿಸ್ತು ಬದ್ಧವಾದ ಜೀವನ ನಡೆಸಿ, ಸಮಾಜದ ಸರ್ವತೋಮುಖ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು. ಅವರು ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳು ಮೊಬೈಲ್ ನಲ್ಲಿ ಆಡುವ ಮೂಲಕ ಭಾವನಾತ್ಮಕ ಸಂಬಂಧ ಇಲ್ಲವಾಗಿದೆ. ಮುಂದಿನ ಪೀಳಿಗೆಗೆ ಹೇಗೆ ಬೆಳೆಯಬೇಕು ಎಂದು ತಂದೆ ತಾಯಿಯಂದಿರ ಕೈಯಲ್ಲಿದೆ. ಸಮಾಜದ ಸಮಸ್ಯೆಯನ್ನು ಒಟ್ಟು ಸೇರಿ ಎದುರಿಸಲು ಎಲ್ಲರೂ ಶಕ್ತರಾಗಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ…