Author: admin
ಕಾರ್ಕಳ : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು ನಿಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ಸಂಸ್ಥೆಯ ಪೂರ್ಣಶ್ರೀ ವಿ.ಎಸ್. ಶ್ರೇಯಾ ಹೆಮರಡ್ಡಿ ಸಿ ಮತ್ತು ಗ್ರೀಷ್ಮಾ ಎಸ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಮಹಿಳೆಯರಲ್ಲಿ ಅಂಡಾಶಯದ ನೀರುಗುಳ್ಳೆ ( ಓವರಿಯನ್ ಸಿಸ್ಟ್ /PCOD) – ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸಾ ಮಾರ್ಗಗಳು ಪರಿಚಯ
ಮಾಸಿಕ ಚಕ್ರವು ಮಹಿಳೆಯ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಮೊದಲ ಋತು ಚಕ್ರ ದಿಂದ ಶುರುವಾಗಿ ಋತು ಬಂಧದವರೆಗೆ ಇದು ಜೀವನದ ಅವಿಭಾಜ್ಯ ಅಂಗ. ಆದರೆ ಮಾಸಿಕ ಚಕ್ರ ಅಸಮಂಜಸವಾಗಿ, ವಿಳಂಬವಾಗಿ, ಅತಿಯಾದ ಪ್ರಮಾಣದಲ್ಲಿ ಅಥವಾ ಸಂಪೂರ್ಣ ನಿಂತಾಗ , ಅದು ಮಹಿಳೆಗೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಕಿರಿಕಿರಿ ಯನ್ನು ಉಂಟುಮಾಡುತ್ತದೆ. ಅಂತಹ ಒಂದು ಸಾಮಾನ್ಯ ಸಮಸ್ಯೆ ಎಂದರೆ PCOD – ಪಾಲಿ ಸಿಸ್ಟಿಕ್ ಓವರಿಯನ್ ಡಿಸೀಸ್. ಇಲ್ಲಿ ಅಂಡಾಶಯದ ಹಲವು ಸಿಸ್ಟ್ಗಳು (ದ್ರವ ತುಂಬಿದ ಗುಳ್ಳೆಗಳು ) ಕಂಡುಬರುತ್ತವೆ. ಹಾರ್ಮೋನ್ಗಳ ಅಸಮತೋಲನದಿಂದ ಇದು ಉಂಟಾಗುತ್ತದೆ. ಇದರ ಪ್ರಮುಖ ಲಕ್ಷಣಗಳು – ಮಾಸಿಕ ನಿಲ್ಲುವುದು (ಅಮೆನೋರಿಯಾ), ದೇಹದ ಮೇಲೆ ಹೆಚ್ಚುವರಿ ಕೂದಲು ಬೆಳವಣಿಗೆ (ಹಿರ್ಸುಟಿಸಮ್), ದೇಹದ ತೂಕ ಹೆಚ್ಚಾಗುವುದು ಮತ್ತು ಅಂಡಾಶಯ ದೊಡ್ಡದಾಗಿರುವುದು. ಹಾರ್ಮೋನ್ಗಳು ಯಾವುವು? PCOD ಯಲ್ಲಿ ಏನಾಗುತ್ತದೆ? PCOD ಯಲ್ಲಿ ಆಂಡ್ರೋಜನ್ (ಪುರುಷ ಹಾರ್ಮೋನ್) ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಅಂಡಾಣು ಬಿಡುಗಡೆ ಪ್ರಕ್ರಿಯೆ ಯಲ್ಲಿ ಏರುಪೇರಾಗಿ…
ಸರ್ ಎಂ ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ ಪ್ರಯುಕ್ತ ದೇಶದಾದ್ಯಂತ ಆಚರಿಸುತ್ತಿರುವ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸೆಪ್ಟೆಂಬರ್ 15 ರಂದು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಕುಂದಾಪುರದ ಪುರಸಭೆಯ ಇಂಜಿನಿಯರ್ (ಪರಿಸರ) ಗುರುಪ್ರಸಾದ್ ಶೆಟ್ಟಿ ಶಿರೂರು ಅವರನ್ನು ಯುವ ಬಂಟರ ಸಂಘದ ಪೋಷಕ ಸದಸ್ಯರು, ಹೈದರಾಬಾದ್ ನ ಹಿರಿಯ ಉದ್ಯಮಿ ನೆಲಗೊಂಡ ಸುಧಾಕರ ಶೆಟ್ಟಿ ಜನ್ಸಾಲೆ ಫಲ ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಯುವ ಬಂಟರ ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ವಹಿಸಿದ್ದರು. ಯುವ ಬಂಟರ ಸಂಘದ ದತ್ತಿನಿಧಿ ಪೋಷಕರಾದ ಕಂದಾವರ ಸತೀಶ್ ಶೆಟ್ಟಿ, ಅಶೋಕ್ ಶೆಟ್ಟಿ ಸಂಸಾಡಿ, ಬಿ. ಜಯರಾಮ ಶೆಟ್ಟಿ ಹಳ್ನಾಡು, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ಸಾಲ್ಗದ್ದೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುರಳಿಧರ ಶೆಟ್ಟಿ ಹುಯ್ಯಾರು, ಕೋಶಾಧಿಕಾರಿ…
ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಪ್ರಯುಕ್ತ ದೇಶದಾದ್ಯಂತ ಆಚರಿಸುತ್ತಿರುವ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನವರು ಸೆಪ್ಟೆಂಬರ್ 15 ರಂದು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಕುಂದಾಪುರದ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ ಅವರನ್ನು ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರು, ನಿವೃತ್ತ ಬ್ಯಾಂಕ್ ಉದ್ಯೋಗಿ ಹಳ್ನಾಡು ಬಿ. ಜಯರಾಮ ಶೆಟ್ಟಿ ಫಲ ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷರಾದ ಲ. ವಸಂತರಾಜ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಅಶೋಕ ಶೆಟ್ಟಿ ಸಂಸಾಡಿ, ಹೈದರಾಬಾದ್ ಹೋಟೆಲ್ ಉದ್ಯಮಿ ನೆಲಗೊಂಡ ಸುಧಾಕರ ಶೆಟ್ಟಿ ಜನ್ಸಾಲೆ, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ಸಾಲ್ಗದ್ದೆ, ಪಶು ವೈದ್ಯ ಡಾ. ಪ್ರಶಾಂತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ನಿಕಟ ಪೂರ್ವ ಅಧ್ಯಕ್ಷ ಲ| ಉದಯ್ ಶೆಟ್ಟಿ ಮಚ್ಚಟ್ಟು, ಲ| ಪ್ರಕಾಶ ಶೆಟ್ಟಿ…
ಮೂಡುಬಿದಿರೆ: ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ಕಂಟ್ರಿ ಚಾಂಪಿಯನ್ಶಿಫ್ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 21ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಮೊದಲ 5 ಸ್ಥಾನಗಳನ್ನು ಆಳ್ವಾಸ್ ಕಾಲೇಜಿನ ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಮೋಹಿತ್ (ಪ್ರಥಮ), ಆದೇಶ್ ಕುಮಾರ್ (ದ್ವಿತೀಯ), ಶುಭಂ(ತೃತೀಯ), ರೋಹಿತ್(4ನೇ ಸ್ಥಾನ), ಹರೇಂದ್ರ(5ನೇ ಸ್ಥಾನ) ಪಡೆದು ಸತತ 21ನೇ ವರ್ಷ ಕುರುಂಜಿ ವಿಶ್ವನಾಥ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಮೊದಲ 6 ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡರು. ಆಳ್ವಾಸ್ನ ತಮಿಶಿ (ಪ್ರಥಮ), ನಿರ್ಮಲಾ(ದ್ವಿತೀಯ), ಭಾಗೀರಥಿ(ತೃತೀಯ), ಯಶಿ(4ನೇ ಸ್ಥಾನ), ಜ್ಯೋತಿ (5ನೇ ಸ್ಥಾನ), ಮನೀಷಾ(6ನೇ ಸ್ಥಾನ) ಪಡೆದು ಸತತ 21ನೇ ವರ್ಷ ಕೈಕುರೆ ಶ್ರೀ ರಾಮಣ್ಣ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶ್ಲಾಘಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಇವರ ನೇತೃತ್ವದಲ್ಲಿ ಆಯೋಜಿಸಿರುವ ಕುಂದಾಪುರ ತಾಲೂಕು ಮಟ್ಟದ 17ರ ವಯೋಮಾನದ ಹುಡುಗರ ಕ್ರಿಕೆಟ್ ಪಂದ್ಯಾಟದಲ್ಲಿ ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಅನುಜ್ ಈಶ್ವರ ಅಂಬ್ಲಿ ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಈತ ಈಶ್ವರ ಹಾಗೂ ಅಶ್ವಿನಿ ದಂಪತಿಯ ಪುತ್ರ. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್. ಕೆ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ಹಾಗೂ ಸೂರ್ಯ ತರಬೇತಿ ನೀಡಿದ್ದರು.
ಡಿಜಿಟಲ್ ‘ಜಾತಿ ಎಣಿಕೆ’ ಇರಲಿ, ಡಿಜಿಟಲ್ ‘ಮತ ಎಣಿಕೆ’ ಬೇಡ : ಡಿಜಿಟಲ್ ವ್ಯವಸ್ಥೆಯಲ್ಲಿ ಸರಕಾರದ ದ್ವಂದ್ವ ನಿಲುವು!!!
ಇಡೀ ಅರ್ಥ ವ್ಯವಸ್ಥೆ ಇವತ್ತು ಡಿಜಿಟಲೀಕರಣ ಆಗಿದೆ. ಬಹುತೇಕ ಜನರ ಹಣಕಾಸಿನ ವ್ಯವಹಾರಗಳು ಮೊಬೈಲ್ನಲ್ಲಿ ನಡೆಯುತ್ತವೆ. ಹೆಚ್ಚಿನ ಎಲ್ಲಾ ರೀತಿಯ ಖರ್ಚುಗಳ ಪೇಮೆಂಟ್ ಡಿಜಿಟಲ್ ಮೂಲಕವೇ ಆಗುತ್ತವೆ. ಬ್ಯಾಂಕಿಂಗ್ ವ್ಯವಹಾರಗಳು, ಷೇರು ವ್ಯವಹಾರಗಳು ಗ್ರಾಹಕನ ಮನೆಯ ಪೋರ್ಟಿಕೋದಲ್ಲೇ ನಡೆಯುತ್ತವೆ. ಕೃಷಿ ಉತ್ಪನ್ನಗಳ ಮಾರಾಟ, ಖರೀದಿ, ಭೂಮಿಯ ದಾಖಲಾತಿಗಳು, ಬೆಳೆ ಸರ್ವೆ, ಟ್ಯಾಕ್ಸ್ ಪೇಮೆಂಟ್, ಆದಾಯ ತೆರಿಗೆ ರಿಟರ್ನ್ಸ್ಗಳೆಲ್ಲಾ ಡಿಜಿಟಲ್ ಮಾರ್ಗದಲ್ಲೇ ಇರುವುದು. ಬಿಸಿನೆಸ್, ಟ್ರಾನ್ಸ್ಪೋರ್ಟ್, ಅಂಚೆ, ವಿಮೆ ವ್ಯವಹಾರಗಳು ಡಿಜಿಟಲ್ ಆಗಿ ಅನೇಕ ವರ್ಷಗಳೇ ಆಗಿವೆ. ಸಿನಿಮಾ ಟಿಕೇಟ್ ಕೂಡ ಈಗ ಪೇಪರ್ ಲೆಸ್ ಆಗಿದೆ. ಊಬರ್ ಬಾಡಿಗೆ ಕಾರಿಗೆ ಅದರ ಪೇಮೆಂಟ್ಗೆ ಬೆರಳು ತುದಿಯಲ್ಲಿ ಮೊಬೈಲ್ ಸ್ಕ್ರೀನ್ ಒತ್ತಿದರೆ ಸಾಕು. ಗೂಗಲ್ ಮ್ಯಾಪ್, ಮನೆ ಮುಂದಿನ ಸಿಸಿ ಕ್ಯಾಮರ, ರೇಡಿಯೋ ಪ್ರಸಾರ, ಟಿವಿ ನ್ಯೂಸ್, ಓಟಿಟಿ ಸಿನಿಮಾ ಎಲ್ಲಾ ಡಿಜಿಟಲ್ ಆಗಿವೆ. ಕೊತ್ತಂಬರಿ ಸೊಪ್ಪಿನ ವ್ಯಾಪಾರದಿಂದ ಹಿಡಿದು ಫಾಸ್ಟ್ ಟ್ಯಾಗ್ ಟೋಲ್ ಪೇಮೆಂಟ್ವರೆಗೆ ಎಲ್ಲರೂ ಡಿಜಿಟಲ್ ವ್ಯವಸ್ಥೆಯನ್ನು ನಂಬಿಯಾಗಿದೆ. ಮನುಷ್ಯನ…
ವೈದ್ಯರನ್ನು ತಲುಪುವ ಮುನ್ನವೇ ಸೂಕ್ತ ಪ್ರಥಮ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯ ಜೀವ ರಕ್ಷಿಸುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದುವುದು ಅಗತ್ಯ ಎಂದು ಕೆಐಒಸಿಎಲ್ನ ನಿವೃತ್ತ ವೈದ್ಯಕೀಯ ಅಧಿಕಾರಿ ಡಾ. ಬಿ. ರಾಮಚಂದ್ರ ಭಟ್ ಹೇಳಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಥಮ ಚಿಕಿತ್ಸೆಗೆ ಬಹುತೇಕ ಸಂದರ್ಭ ಯಾವುದೇ ಉಪಕರಣಗಳು ಲಭ್ಯವಿರುವುದಿಲ್ಲ. ವ್ಯಕ್ತಿಯ ಸಮಯ ಪ್ರಜ್ಞೆ ಮತ್ತು ಜ್ಞಾನ ರೋಗಿಯ ಚಿಕಿತ್ಸೆಗೆ ನೆರವಾಗುತ್ತದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿ ರೋಟರಿ ಸಂಸ್ಥೆಯ ಪೂರ್ವ ಅಸಿಸ್ಟೆಂಟ್ ಗವರ್ನರ್ ವಿನೋದ್ ಕುಡ್ವ ಮಾತನಾಡಿ ‘ಪ್ರಥಮ ಚಿಕಿತ್ಸೆಯು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಯೇನೆಪೊಯ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಜಿತಿನ್ರಾಜ್. ವಿ ಅವರು ಪ್ರಥಮ ಚಿಕಿತ್ಸೆ ಬಗ್ಗೆ…
ದುಂಬೊರ್ತಿಗ್ ಮೂಜಿ ನಾಲ್ ಪೊನ್ನು ಜೋಕುಲೇ ಇತ್ತಗೆ. ಐಕ್ ಅರ್ತಿ ಪಿರ್ತಿಗ್ ಪಂದ್ ಕಡೆತ ಬಾಲೆಗ್ ಮಾಯನದ ನಿರವು ದಂಡ್ ಮಲ್ತ್ ದ್ ಅಂಟದ್, ಆನ್ ಬಾಲೆ ಪಂದ್ ಅಪ್ಪೆ ಕುಸಿ ಪಡೆವೊಂದು ಇತ್ತೊಲುಗೆ. ಬಾಲೆನ್ ಜೋರ್ ಬೆಚ್ಚ ನೀರ್ ಡ್ ಮೀಪವೊಂದು ಇತುಜೊಲು, ಜೋರು ದೆಂಬುದಗ ಪಿದಾಯಿ ಕಡಪುಡೊಂದು ಇತುಜೊಲು. ಈ ಬಾಲೆ ಒಂಜೈಕ್ ರಡ್ಡೆಕ್ ಅಪ್ಪೆನ್ ಪೊಡಿಗೆ ಕಟ್ಟಾವೊಂದು (blackmail) ಇತುಂಡುಗೆ, “ದೆಂಬುಡು ಕುಲ್ಲುವೆ” ಪಂದ್. ಉಂದು ಮಡಿವಂತೆರೆಗ್ ಒಂತೆ ಬಪ್ಪರ್ (vulgar) ಪಂದ್ ತೋಜು. ಈ ಒಂಜಿ ತುಲುವ ಪಾತೆರ ಪಂಡ್ಂಡ, ಐತ ಪಿರವುದು ಕತೆ, ಭಾವಾರ್ಥ ಜನೊಕುಲೆಗ್ ತೆರಿಯೊಂದು ಇತ್ಂಡ್. ಕೆಲವು ಜೋಕುಲು ಅಪ್ಪ್ಯೆಲ್ಲೆನ್ ಪೋಡಿಗಟ್ಟವುನ ಕೇಂದೆ “ಉಗ್ಗೆಲ್ ಗ್ ಲಾಗಿವೆ”, “ಓಲ್ಲ ಪೋದು ಜೀವ ಕೊರ್ಪೆ” ಇಂಚ. ಉಂದೆನೇ ಇಂಗ್ಲೀಷ್ ಡ್ emotional blackmail (ಭಾವನಾತ್ಮಕ ಬೆದರಿಕೆ) ಪನ್ಪೆರ್. ಅಂಚ ಏರ್ಲಾ ಅಪಗಪಗ ಪೊಡ್ಯಾವೊಂದು (ಧಮ್ಕಿ ಕೊರೊಂದು) ಇತ್ತೆರ್ ಡ ಪನ್ವೆರ್ “ದುಂಬೊಂಜಿ ಬಾಲೆ…
ಗಣಿತನಗರ : ಒಬ್ಬ ವ್ಯಕ್ತಿಯ ಯಶಸ್ಸಿಗೆ, ಕನಸನ್ನು ನನಸು ಮಾಡಲು ಪರಿಸ್ಥಿತಿ ಮುಖ್ಯವಲ್ಲ ಮನಸ್ಥಿತಿ ಮುಖ್ಯ. ಸಕಾರಾತ್ಮ ಆಲೋಚನೆಗಳಿಗೆ ಸೋಲಿಲ್ಲ. ಯಾರಿಗೆ ಹೆತ್ತವರ ಆಲೋಚನೆಗಳು ಅರ್ಥವಾಗುತ್ತವೆಯೋ ಅಂತವರು ಎಂದೂ ಹಾದಿ ತಪ್ಪಲು ಸಾದ್ಯವಿಲ್ಲ ಎಂದು ಸ.ಪ.ಪೂ.ಕಾಲೇಜು ಸದಲಗ, ಚಿಕ್ಕೋಡಿ ಇಲ್ಲಿನ ಉಪನ್ಯಾಸಕ ಶ್ರೀ ವೀರೇಶ್ ಗದಿಗೆಪ್ಪಗೌಡ ಪಾಟೀಲ್ ನುಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-40ರಲ್ಲಿ “ಸಕಾರಾತ್ಮಕ ಆಲೋಚನೆ ಸಾಧನೆಗೆ ಪ್ರೇರಣೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಕನಸನ್ನು ನನಸು ಮಾಡಲು ಸಕಾರಾತ್ಮಕ ಆಲೋಚನೆ ಮುಖ್ಯ. ನಮ್ಮನ್ನು ತುಂಬಾ ಸುಲಭವಾಗಿ ಸೋಲಿಸುವ ಆಯುಧ ಭಯ. ನಮಗೆ ನಾವೇ ಪ್ರೇರಣೆಯನ್ನು ತುಂಬ ಬೇಕು ಎನ್ನುತ್ತಾ ಅನೇಕ ಮಹಾತ್ಮರ ಜೀವನ ಸಂದೇಶಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್…















