Author: admin
ವಿದ್ಯಾಗಿರಿ: ‘ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ. ಪ್ರತಿ ಹಂತದ ಕಲಿಕೆ ಹೊಸದನ್ನು ಕಲಿಸುತ್ತದೆ. ಕಲಿಯುವ ಮನಸ್ಸು ನಮ್ಮದಾಗಿರಬೇಕು ಎಂದು ಖ್ಯಾತ ವೈದ್ಯ ಹಾಗೂ ಕರ್ನಾಟಕ ರೆಡ್ಕ್ರಾಸ್ ಸೊಸೈಟಿ ಅಧ್ಯಕ್ಷ ಡಾ. ರಾಮಚಂದ್ರ ಕೆ. ಜೋಯಿಷಿ ಹೇಳಿದರು. ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ ಮತ್ತು ಫಿಸಿಯೋಥೆರಪಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಿಕೆ ಕೇವಲ ಪಠ್ಯಕ್ಕೆ ಸೀಮಿತವಲ್ಲ. ಅದು ವ್ಯಾಪಕ. ಅದು ಬದುಕಿನ ಕೊನೆ ತನಕದ ಕ್ರಿಯೆ. ಯಶಸ್ಸಿನ ಪಯಣದಲ್ಲಿ ಪ್ರತಿಭೆ, ಜ್ಞಾನ, ಕಠಿಣ ಪರಿಶ್ರಮ, ಆತ್ಮಸ್ಥೈರ್ಯ, ಆತ್ಮ ವಿಶ್ವಾಸ ಬಹಳ ಮುಖ್ಯ. ಬದುಕು ಹೂವಿನ ಹಾಸಿಗೆಯಲ್ಲ ಎಂದರು. ಯಶಸ್ಸಿನಲ್ಲಿ ಬುದ್ಧಿಮತ್ತೆ ಮತ್ತು ಭಾವನಾತ್ಮಕತೆಯ ನಂಟು ಹಾಗೂ ಜ್ಞಾನದ ಬಳಕೆ ಅಗತ್ಯ. ಕೇವಲ ಬುದ್ಧಿಮತ್ತೆಯೇ ಹೆಚ್ಚಿದರೂ ಸೋಲುತ್ತೇವೆ. ಭಾವನೆಗಳ ಸ್ಪಂದನೆ ಇರಬೇಕು. ನಾವು ಏನೇ ಆದರೂ, ಪರಿಸರಕ್ಕೆ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಆಳ್ವಾಸ್ ಹೆಲ್ತ್ ಸೆಂಟರ್ನ ಆರಂಭದ ದಿನಗಳಲ್ಲಿ ಕೆಲಸ ಮಾಡಿದ ನೆನಪನ್ನು…
ಬಂಟರ ಸಂಘ ಮುಂಬಯಿಯ ಸಂಚಾಲಕತ್ವದಲ್ಲಿರುವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 35ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ ಕುರ್ಲಾ ಪೂರ್ವದ ಬಂಟರ ಭವನ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮಾತೃಭೂಮಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ ಉಳ್ತೂರು ಮೋಹನ್ದಾಸ್ ಶೆಟ್ಟಿ ಗ್ರಾಹಕರು, ಶೇರ್ ದಾರರು ಮತ್ತು ಹಿತೈಷಿಗಳನ್ನು ಸ್ವಾಗತಿಸುತ್ತಾ, ಮಾತೃಭೂಮಿ ತಂಡ ರೂಪಗೊಳ್ಳುವಾಗ ಬಂಟರ ಸಂಘದ ಅಧ್ಯಕ್ಷರ, ಜಾಗತಿಕ ಬಂಟರ ಸಂಘದ ಅಧ್ಯಕ್ಷರು ಈ ಇಂದಿನ ಎಲ್ಲಾ ಕಾರ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಸಮರ್ಥ ರೀತಿಯ ತಂಡ ಮಾರ್ಗದರ್ಶನ ನೀಡಿದ್ದಾರೆ. ಅವರೆಲ್ಲರ ಸಮರ್ಥ ಮಾರ್ಗದರ್ಶನದಲ್ಲಿ ಈ ಸಂಸ್ಥೆಯನ್ನು ನನ್ನ ತಂಡ ಮುನ್ನಡೆಸುತ್ತಿದೆ. ನಮ್ಮ ತಂಡದಲ್ಲಿ ವಿದ್ಯಾವಂತರು, ಸಂಘಟಕರು, ಲೆಕ್ಕ ಪರಿಶೋಧಕರು ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾತೃಭೂಮಿ ಕೋ…
ಮುಂಬಯಿ, ಜು.29: ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ‘ಶಿಮುಂಜೆ ಪರಾರಿ’ ಕಾವ್ಯ ನಾಮದಿ ಚಿರಪರಿಚಿತ ತುಳು ಕನ್ನಡ ಕವಿ, ಅನುವಾದಕಾರ, ನಾಟಕಕಾರ, ಅಧ್ಯಾಪಕ, ಕಂಠದಾನ ಕಲಾವಿದ ಮತ್ತು ನಟ ಎಂದೆಣಿಸಿ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ಜನಾನುರೆಣಿಸಿರುವ ಶಿಮುಂಜೆ ಪರಾರಿ (ಸೀತಾರಾಮ ಮುದ್ದಣ್ಣ ಶೆಟ್ಟಿ) ಅವರನ್ನು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆಯು ವಯೋ ಸಮ್ಮಾನ-2023 ಗೌರವವನ್ನಿತ್ತು ಅಭಿನಂದಿಸಿತು. ಐಲೇಸಾ ಅಂತಾರಾಷ್ಟ್ರೀಯ ಡಿಜಿಟಲ್ ಸಂಸ್ಥೆ ಬೆಂಗಳೂರು ಇದೇ ಆಗಸ್ಟ್ ತಿಂಗಳಲ್ಲಿ ಸ್ಥಾಪನೆಯ ತೃತೀಯ ವರ್ಷ ಪೂರೈಸಿದ ನಿಮಿತ್ತ ಇಂದಿಲ್ಲಿ ಶನಿವಾರ ಅಪರಾಹ್ನ ಅಂಧೇರಿ ಪಶ್ಚಿಮದಲ್ಲಿನ ಕಂಟ್ರಿ ಕ್ಲಬ್ ಸಭಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿ (ಪತ್ನಿ ಚಂದ್ರಿಕಾ ಶೆಟ್ಟಿ ಅವರನ್ನೊಳಗೊಂಡು) ಪಾದಪೂಜೆ ನೆರವೇರಿಸಿ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ಗೌರವ ಸಲ್ಲಿಸಿತು. ಐಲೇಸಾ ಸಂಸ್ಥೆಯ ಪ್ರಧಾನರು ಮತ್ತು ರಾಷ್ಟ್ರದ ಪ್ರಸಿದ್ದ ಹಿನ್ನಲೆ ಗಾಯಕ ರಮೇಶ್ಚಂದ್ರ ಬೆಂಗಳೂರು ಇವರನ್ನೊಳಗೊಂಡು ನಾಡಿನ ಪ್ರಸಿದ್ಧ ಕವಿ ಸುಬ್ರಾಯ ಚೊಕ್ಕಾಡಿ ಅವರು ವಯೋಸಾಧನೆಯ ನೆನಪಿಗೆ ರೂಪಾಯಿ…
ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ವಿದ್ಯಾರ್ಥಿ ವೇತನ, ವಿಕಲ ಚೇತನ ವೇತನ, ಧನ ಸಹಾಯ ವಿತರಣಾ ಕಾರ್ಯಕ್ರಮ
ಬಂಟರ ಸಂಘ ಕಾರ್ಯ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ವಿಸ್ಥಾರವಾಗಿ ತಿಳಿಯಲು ಸಂಘವು ಆಪ್ ನ್ನು ತಯಾರಿಸಿದ್ದೇವೆ. ಅದರಲ್ಲಿ ತಳಮಟ್ಟದಿಂದ ಉನ್ನತ ಮಟ್ಟಕ್ಕೇರಿ ಸಾಧನೆಗೈದ ಗಣ್ಯರ ಸಂದರ್ಶನವಿದೆ. ಮಕ್ಕಳು ಅದನ್ನು ಓದುವದು ಅತಿ ಅಗತ್ಯ. ಇದು ನಮ್ಮ ಸಮಾಜದ ಮಕ್ಕಳು ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಬಹುದು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪ್ರೋತ್ಸಾಹ ನೀಡಲು ಸಂಘ ಹಲವಾರು ಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಯವರು ನುಡಿದರು. ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ನಿಟ್ಟೆ ಎಮ್. ಜಿ. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವಿದ್ಯಾರ್ಥಿ ವೇತನ, ವಿಕಲ ಚೇತನ ವೇತನ, ಧನ ಸಹಾಯ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಚಂದ್ರಹಾಸ ಕೆ. ಶೆಟ್ಟಿಯವರು ಬಂಟ ಸಮಾಜದ ಬಂಧುಗಳು ಸಾಧನೆ ಮಾಡುವ ಶಕ್ತಿವಂತರು, ನಮ್ಮ ವ್ಯಕ್ತಿತ್ವದ ಬಗ್ಗೆ ಯಾರಲ್ಲೂ ಕೀಳರಿಮೆ ಇರಬಾರದು.…
ಜಾನುವಾರುಗಳಲ್ಲಿ ಕಂಡುಬರುವ ಕಂದು ರೋಗ (ಬ್ರೂಸೆಲ್ಲೋಸಿಸ್)ವನ್ನು ತಡೆಗಟ್ಟುನ ನಿಟ್ಟಿನಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಹೆಣ್ಣು ಕರುಗಳಿಗೆ ಲಸಿಕೆ (ಬ್ರೂಸೆಲ್ಲಾ ವ್ಯಾಕ್ಸಿನ್) ಅಭಿಯಾನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಂದು ರೋಗ ಮುಕ್ತ ಜಿಲ್ಲೆಯಾನ್ನಾಗಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಈ ಉಚಿತ ಲಸಿಕಾ ಕಾರ್ಯಕ್ರಮ ಮೇ 31ರ ವರೆಗೆ ಹಮ್ಮಿಕೊಳ್ಳಲಾಗಿದೆ. ರೈತರು 4-8 ತಿಂಗಳೊಳಗಿನ ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸಿ ರೋಗ ಮುಕ್ತಗೊಳಿಸಬಹುದು. ಇದು ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದ್ದು, ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆಗಳು ಈ ರೋಗಕ್ಕೆ ತುತ್ತಾಗುತ್ತವೆ. ಈ ರೋಗವನ್ನು ತಡೆಗಟ್ಟಲು ಲಸಿಕೆ ಹಾಕಿಸುವುದೊಂದೇ ಪರಿಹಾರ. ಈ ರೋಗದಲ್ಲಿ ಸಾವಿನ ಪ್ರಮಾಣಕ್ಕಿಂತ ಸಂತಾನೋತ್ಪತ್ತಿಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಪಶು ವೈದ್ಯರು. ಭಾರತದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು ಹೊರ ದೇಶಗಳಿಗೆ ರಫ್ತಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ಉತ್ಪತ್ತಿಯಾಗುವ ಹಾಲು ರೋಗ ಮುಕ್ತ ಆಗಿಲ್ಲದಿರುವುದಿಲ್ಲ. ಆದ್ದರಿಂದ ಕೇಂದ್ರ…
ಒಂದರೊಳು ಒಂದಿಲ್ಲ, ಒಂದರೊಳು ಕುಂದಿಲ್ಲ, ಒಂದೊಂದು ಅಂದವೂ ತನಗೆ ತಾನೇ ಚಂದ ಎಂದು ವರಕವಿ ದ.ರಾ ಬೇಂದ್ರೆಯವರ ಹೂ ಕವನದ ಸಾಲುಗಳು ನೆನಪಾದದ್ದು ಕೆಲ ದಿನಗಳ ಹಿಂದೆ ಮುಂಬಯಿ ಪ್ರಭಾದೇವಿ ಸಿದ್ದಿವಿನಾಯಕ ದೇವಸ್ಥಾನದಿಂದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಮಾರ್ಗದ ಬದಿಯಲ್ಲಿ ಬಲಯುತವಾಗಿ ಬೆಳೆದು ನಿಂತ ಗುಲ್ ಮೊಹರ್ ಮರವೊಂದು ಮೈ ತುಂಬಾ ಕೇಸರಿ, ಹಳದಿ, ಕೆಂಪು ಮಿಶ್ರಿತ ಹೂವನ್ನು ಆವರಿಸಿಕೊಂಡು ಸೊಬಗಿನಿಂದ ಕಂಗೊಳಿಸುತ್ತಾ ಹೆಮ್ಮೆಯಿಂದ ಇಗೋ ಮೇ ತಿಂಗಳು ಬಂತು, ನಿಮಗೆಲ್ಲಾ ಹೂವಿನ ಸ್ವಾಗತ ಕೋರುತ್ತಿದ್ದೇನೆ ಎಂದು ನಕ್ಕಂತೆ ಆಯ್ತು. ಸೃಷ್ಟಿಯ ಸೌಂದರ್ಯಕ್ಕೆ ಇನ್ನೊಂದು ಮೆರಗು ಈ ಗುಲ್ ಮೊಹರ್ ಹೂವು ಬಿರು ಬಿಸಿಲು, ಬಿಸಿ ಗಾಳಿ, ಶುಷ್ಕ ನೆಲ, ನೀರಿನ ಅಭಾವವಿರುವ ಸನ್ನಿವೇಶದ ವಾತಾವರಣದಲ್ಲಿ ತಲೆ ಎತ್ತಿ ಅರಳಿ ನಿಲ್ಲುವ ಕೆಂಪು ಚೆಲುವೆ. ಎಪ್ರಿಲ್ ತಿಂಗಳು ಕಳೆಯುತ್ತಿದ್ದಂತೆ ಮೇ ತಿಂಗಳ ಆರಂಭದ ದಿನಗಳಲ್ಲಿ ಮೇ ಫ್ಲವರ್ ನ ಮರ ಹೂ ಧರಿಸಿ ಎಲ್ಲರ ಗಮನ ಸೆಳೆಯುತ್ತದೆ. ಚೆಲುವಿಗೆ, ಕೋಮಲತೆಗೆ, ಮೃದು…
ಸಾಯಿ ಕ್ರಿಕೆಟರ್ಸ್ ಪುಣೆ, ವಾರಿಜ ಎ ಶೆಟ್ಟಿ ಸ್ಮರಣಾರ್ಥ ಸಾಯಿ ಟ್ರೋಪಿ ,ಮಹಾಗಣಪತಿ ಯಕ್ಷಗಾನ ಮಂಡಳಿ ವಿನ್ನರ್ಸ್ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮತ್ತು ಶಿಸ್ತು ಬದ್ದವಾದ ನಡವಳಿಕೆ ಮುಖ್ಯ –ಪ್ರವೀಣ್ ಶೆಟ್ಟಿ ಪುತ್ತೂರು ಪುಣೆ ; ಇಂದಿನ ಜೀವನವೇ ಸ್ಪರ್ದಾತ್ಮಕವಾಗಿದೆ , ಜೀವನದ ನಿರ್ವಹಣೆಗೆ ಗಂಡು ಹೆಣ್ಣೆಂಬ ಬೇದವಿಲ್ಲದೆ ದುಡಿಯುವ ಜಂಜಾಟದಲ್ಲಿ ಮನಸ್ಸಿಗೆ ಸಮಾದಾನ ನೆಮ್ಮದಿಗೆ , ಮನೋರಂಜನಾ ಕಾರ್ಯಕ್ರಮಗಳು ,ಕ್ರಿಕೆಟ್ ಆಟೋಟಗಳು ,ಕ್ರೀಡೆಗಳು ತುಂಬಾ ಸಹಾಯಕವಾಗಬಲ್ಲದು ಇಂತಹ ಕ್ರೀಡೆಗಳಲ್ಲಿ ಭಾರತೀಯರಲ್ಲಿ ಅಚ್ಚು ಮೆಚ್ಚು ಎಂದರೆ ಕ್ರಿಕೆಟ್,. ನಮ್ಮ ಪುಣೆಯಂತಹ ಮಹಾನಗರದಲ್ಲಿ ನೆಲೆಸಿರುವ ತುಳು ಕನ್ನಡಿರಲ್ಲಿ ಕೂಡಾ ಹೆಚ್ಚಿನ ಯುವ ಜನತೆ ಕ್ರಿಕೆಟ್ ನಲ್ಲಿ ಬಾಗಿಗಳಾಗುತ್ತಾರೆ .ಪುಣೆಯಲ್ಲಿ ಜಾತಿ ಮತ ಬೇದ ಬಾವವಿಲ್ಲದೆ ಪ್ರತಿ ವರ್ಷವೂ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಉತ್ತಮವಾಗಿ ನಡೆಸಿಕೊಂಡು ಬಂದಿರುವ ಸಾಯಿ ಕ್ರಿಕೆಟರ್ಸ್ ನವರು ಒಂದು ಸಂಸ್ಥೆಯಾಗಿ ದುಡಿಯುತಿದ್ದಾರೆ , ತುಳು ಕನ್ನಡಿಗ ಎಲ್ಲಾ ಕ್ರಿಕೆಟ್ ಆಟಗಾರರು , ಅಭಿಮಾನಿಗಳು ,ಆಸಕ್ತರನ್ನು ಒಂದೇ ಸೂರಿನಡಿ…
ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘವು ಬಹಳ ಶಿಸ್ತು ಬದ್ಧವಾಗಿ ಕ್ರೀಡಾಕೂಟ, ರಾಷ್ಟ್ರಮಟ್ಟದ ಕಬಡ್ಡಿ ಹಾಗೂ ತ್ರೋ ಬಾಲ್ ಪಂದ್ಯಾಟವನ್ನು ಆಯೋಜಿಸಿರುವುದು ಅಭಿನಂದನೀಯವಾಗಿದೆ. ಪುಣೆಯಲ್ಲಿರುವ ವಿವಿಧ ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಮಾಜ ಬಾಂಧವರೆಲ್ಲರನ್ನೂ ಸಂಘದ ಒಂದೇ ಛತ್ರದಡಿಯಲ್ಲಿ ಸೇರಿಸಿಕೊಂಡು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ನಮ್ಮೊಳಗಿನ ಒಗ್ಗಟ್ಟು ಬಲಗೊಂಡು ಬಾಂಧವ್ಯ ವೃದ್ಧಿಯಾಗಲು ಸಾಧ್ಯವಿದೆ. ಪ್ರತಿಯೊಂದು ಊರಿನಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆಯುವಂತಾದರೆ ಸಂಘಟನೆಗಳು ಶಕ್ತಿಯುತವಾಗುತ್ತದೆ ಎಂದು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕರ್ನಾಟಕ ಇದರ ಅಧ್ಯಕ್ಷರಾದ ರಾಕೇಶ್ ಮಲ್ಲಿ ಅಭಿಪ್ರಾಯಪಟ್ಟರು. ಅವರು ನಗರದ ಮೊರ್ಯಾ ಗೋಸಾವಿ ಕ್ರೀಡಾ ಸಂಕುಲದ ಎರ್ಮಾಳ್ ನಾರಾಯಣ ಕೆ ಶೆಟ್ಟಿ ವೇದಿಕೆಯಲ್ಲಿ ನಡೆದ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟ, ರಾಷ್ಟ್ರಮಟ್ಟದ ಕಬಡ್ಡಿ ಹಾಗೂ ತ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟಗಾರರಿಗೆ ಇಂದು ಮನ್ನಣೆ ಸಿಗುವಂತಾಗಲು ವಿಜಯಾ ಬ್ಯಾಂಕಿನ ಜಯಕರ್ ಶೆಟ್ಟಿಯವರು ಬಂಟ ಸಮಾಜದ ಕಬಡ್ಡಿ ಆಟಗಾರರಿಗೆ ಉದ್ಯೋಗ ನೀಡಿ…
ಮಂಗಳೂರು ವಿ.ವಿ. ವ್ಯಾಪ್ತಿಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಆದಷ್ಟೂ ಬೇಗ ಸಂಘಟಿತ ರಾಗಿ ಎಲ್ಲ ಪ್ರಾಂಶುಪಾಲರು, ಪದಾಧಿ ಕಾರಿಗಳೊಂದಿಗೆ ವಿ.ವಿ.ಯ ಆಡಳಿತವನ್ನು ಭೇಟಿಯಾಗಿ ಎದು ರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದ್ದಾರೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 16ನೇ ಮಹಾಸಭೆ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ ವಿಚಾರಗೋಷ್ಠಿಯನ್ನು ಅವರು ಉದ್ಘಾಟಿಸಿ ಮಾತನಾಡಿ, ಸರಕಾರ ಮತ್ತು ಮಂಗಳೂರು ವಿ.ವಿ. ನಮ್ಮನ್ನು ವಿಶ್ವಾಸಕ್ಕೇ ತೆಗೆದುಕೊಳ್ಳುತ್ತಿಲ್ಲ, ನಮ್ಮ ಸಭೆ ನಡೆಸುವುದಾಗಿ ಒಂದು ವರ್ಷದಿಂದ ಹೇಳಿದರೂ ಇದುವರೆಗೆ ಸಾಧ್ಯವಾಗಿಲ್ಲ ಎಂದರು. ಮಾನ್ಯತೆಗೆ ಹೆಚ್ಚು ಮೊತ್ತವನ್ನು ಖಾಸಗಿ ಕಾಲೇಜುಗಳು ವಿ.ವಿ.ಗೆ ಪಾವತಿಸಬೇಕಾಗುತ್ತದೆ. ಆದರೆ ಕಳೆದ ಐದು ವರ್ಷಗಳಿಂದ ವಿ.ವಿ.ಯ ವೇಳಾಪಟ್ಟಿಯೇ ಗೊಂದಲದಿಂದ ಕೂಡಿದೆ, ಪರೀಕ್ಷಾ ವ್ಯವಸ್ಥೆ, ಮೌಲ್ಯ ಮಾಪನ ಹದಗೆಟ್ಟು ಹೋಗಿದೆ. ಹೊಸ ಕೋರ್ಸ್ ಆವಿಷ್ಕಾರಗಳು ಆಗುತ್ತಿಲ್ಲ, ಪಿಜಿ ಕೋರ್ಸ್ ಪರಿಚಯಿಸುವಲ್ಲೂ ಹಿಂದಿದ್ದೇವೆ, ಪಿಜಿ ಕೋರ್ಸ್ಗಳಲ್ಲಿ ನಮ್ಮಲ್ಲಿ ಎಷ್ಟೇ ಕಷ್ಟಪಟ್ಟರೂ ಶೇ.…
ಜಗತ್ತಿನ ಒಟ್ಟು ಅಡಿಕೆ ಉತ್ಪನ್ನದಲ್ಲಿ ಭಾರತದ ಪಾಲು ಸುಮಾರು ಐವತ್ತು ಶೇಕಡಾದಷ್ಟು. ಅದರಲ್ಲೂ ಭಾರತದ ಒಟ್ಟು ಅಡಿಕೆ ಉತ್ಪನ್ನದಲ್ಲಿ ಕರ್ನಾಟಕವೊಂದೇ ಶೇಕಡಾ ಅರವತ್ತಕ್ಕಿಂತಲೂ ಹೆಚ್ಚು ಪಾಲು ಹೊಂದಿದೆ. ಕರ್ನಾಟಕದ ಒಟ್ಟು ಅಡಿಕೆ ಉತ್ಪನ್ನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯದ್ದು ಬಹುದೊಡ್ಡ ಪಾಲು. ಭಾರತದಲ್ಲಿ ಈ ಅಡಿಕೆ ಕೃಷಿಯ ಪರಂಪರೆ ಅದೆಷ್ಟು ಪುರಾತನವೆಂದರೆ “ತಾಂಬೂಲ’ ಅನ್ನುವುದರ ಪರಿಕಲ್ಪನೆ ಹಿಂದೂ ಧರ್ಮದಷ್ಟೇ ಹಳೆಯದು. ಹಾಗಾಗಿ ಅಡಿಕೆ ಎನ್ನುವುದು ನಮ್ಮ ಧರ್ಮದ ಅವಿಭಾಜ್ಯ ಅಂಗ. ಅದ್ಯಾವ ದೇವತಾ ಕಾರ್ಯಗಳೇ ಇರಲಿ, ಅದ್ಯಾವುದೇ ಶುಭಸಮಾರಂಭಗಳಿರಲಿ ವೀಳ್ಯದ ಎಲೆ ಮತ್ತು ಅಡಿಕೆ ಎಂಬುದು ಎಲ್ಲ ಆಚರಣೆಗಳ ಅವಿಭಾಜ್ಯ ಅಂಗ. ಅಡಿಕೆಯನ್ನು ನಮ್ಮ ಆಯುರ್ವೇದದಂಥಾ ಔಷಧಶಾಸ್ತ್ರಗಳೂ ಕೂಡಾ ಔಷಧವಾಗಿ ಬಳಕೆ ಮಾಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಬಗ್ಗೆ ವಿಶ್ವಮಟ್ಟದಲ್ಲಿ ಅಪಪ್ರಚಾರ ನಡೆಯುತ್ತಿದೆ. ಅಡಿಕೆಯ ಅನೇಕ ಔಷಧೀಯ ಗುಣಗಳನ್ನರಿತು ಉಪಯೋಗಿಸುತ್ತಿದ್ದ ಭಾರತೀಯರ ನಂಬಿಕೆಗೆ ವಿರುದ್ಧವಾಗಿ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎನ್ನುವ ಸುದ್ದಿಗೆ ಹೆಚ್ಚು ಮನ್ನಣೆ ಕೊಡಲಾಯಿತು. ಹೆಚ್ಚಿನ ಸಂಶೋಧನೆಗಳೆಲ್ಲಾ ವೀಳ್ಯದೆಲೆ,…















