Author: admin

ರಾಜ್ಯ ಸರಕಾರ ಸಾಧಕ ಬಾಧಕದ ಪಟ್ಟಿ ಮಲ್ಪುಲೆ ಪಂಡುದ್ ಇತ್ತೆ ಸಮಿತಿ ಮಲ್ದುಂಡ್, ಅವೆನ್ ನಮ ಯಾಪನೆ ವೀರೇಂದ್ರ ಹೆಗ್ಡೆರೆನ ಒಟ್ಟುಗು ಪೋದು ಪ್ರಧಾನಿಡನೆ ಕೊರ್ತ, ಒಂಜಿ ರಡ್ಡ್ ಸಲ ಅತ್ತ್ ಮೂಜಿ ಮೂಜಿ ಸಲ ಕೊರ್ತ. ನಮ ನಮ್ಮ ಹಕ್ಕ್‍ನ್ ಕೇನುನ ರೀತಿ ಬದಲಾವೊಡು, ನಮ್ಮ ರಾಜಕೀಯದಕುಲು “ಇದನ್ನು ಒಂದು ನೋಡಿ” ಪಂಡುದ್ ಮನವಿ ಕೊರ್ಪೆರ್, ಅವು ಬದಲಾವೊಡು “ಇದನ್ನು ಒಂದು ಮಾಡಿ” ಪನ್ಪಿನ ಸೊರ ಪಿದಾಡೊಡು. ಇಜ್ಜಿಡ ದುಂಬುದ ಸರ್ತಿದ ಓಟುದ ಪೊರ್ತುಗು ನಿಕಲೆನ್ ತೂವೊನುವ ಪನ್ಪಿನ ನಿರ್ಧಾರ ದೆತೊನೊಡು. ತುಳು ಭಾಷೆದ ವಿಷಯ ಬನ್ನಗ ನಮ್ಮ ನಡುಟು ಆ ಪಕ್ಷದಾಯೆ ಈ ಪಕ್ಷದಾಯೆ ಪನ್ಪಿನ ಬೇಧ ಬರಿಯರೆ ಬಲ್ಲಿ ಒಟ್ಟಾದ್ ತುಳುಕ್ಕು ಬೇಲೆ ಮಲ್ಪೊಡು ಪಂಡುದ್ ಆರ್ ಖಡಕ್ಕ್ ಎಚ್ಚರ್ಮೆ ಲಕ್ಕಾಯೆರ್. ಬೆಂಗಳೂರು ತುಳುವೆರೆ ಚಾವಡಿದ ಪರ್ಬದ ಬೊಳ್ಳಿ ಪರ್ಬದ ಪೊರ್ತುಡು ಪಾತೆರೊಂದು ಆರ್ ಇಂಚ ಪಂಡೆರ್. ರಾಜಕಾರಣಿಲು ತುಳು ಭಾಷೆದ ಸಭೆಕ್ಕ್ ಬರ್ಪುಜೆರ್, ಬತ್ತಿನಕುಲುಲಾ ರಡ್ಡ್…

Read More

ಉತ್ತರಕ್ಕೆ ದಿಕ್ಕಿಗೆ ಬಾಗಿರುವ ತೆಂಗಿನಮರದಿಂದ ತೆಂಗಿನಕಾಯಿಯನ್ನು ಭೂಮಿಗೆ ಸ್ಪರ್ಶ ಆಗದಂತೆ ಕಿತ್ತು , ಅದನ್ನ ಸಿಪ್ಪೆ ಬಿಡಿಸದೆ ಶುದ್ಧ ಬಾವಿಯ ನೀರಿಂದ ತೊಳೆದು ರುಂದನದ ಕಟ್ಟೆ ಅಥವಾ ತುಳಸಿಕಟ್ಟೆಯ ಮುಂದೆ ಒಂದು ಮಣೆ ಇಟ್ಟು ಅದರ ಮೇಲೆ ಬಾಳೆ ಕೊಡಿ ಇರಿಸಿ ತದನಂತರ ಆ ತೆಂಗಿನಕಾಯಿಯ ಸಣ್ಣ ಸಿಪ್ಪೆ ತೆಗೆದು ಜುಟ್ಟು ಮಾಡಿ ಬಾಳೆ ಎಲೆಯ ಮೇಲೆ ಇಡಲಾಗುತ್ತದೆ. ನಂತರ ಊರಿನಲ್ಲೇ ಸಿಗುವ ಕಾಡ ಕೇಪುಲ ಹೂವನ್ನು ಅದಕ್ಕೆ ಹಾಕಿ, ಯಾವ ದೈವವನ್ನ ನಮಗೆ ನಂಬಬೇಕಿದೆಯೋ ಅದರ ಹೆಸರನ್ನ ಕರೆದು ಉದಾಹರಣೆಗೆ ಸ್ವಾಮಿ ಪಂಜುರ್ಲಿ ಅಥವಾ ಸ್ವಾಮಿ ಜಿಮಾದಿ ಎಂದು ಕರೆದು ಮದಿಪುವಿನ ಮೂಲಕ ದೈವವನ್ನ ಆ ತೆಂಗಿನಕಾಯಿಗೆ ಆಕರ್ಷಣೆ ಮಾಡಲಾಗುತ್ತದೆ. ಇಲ್ಲಿ ರಾಜಂದೈವವಾದರೆ ಎರಡು ತೆಂಗಿನಕಾಯಿ ಹಾಗೂ ಬೇರೆ ದೈವವಾದರೆ ಒಂದು ತೆಂಗಿನಕಾಯಿ.ಗುಳಿಗ ಸುಲಭದಲ್ಲಿ ಬರುವವನಲ್ಲದ ಕಾರಣ ಆತನಿಗೆ ಜೊತೆಯಲ್ಲಿ ಒಂದು ಕರ್ಕ್ ಪುಳಿಯನ್ನ ಇಡಲಾಗುತ್ತದೆ. ನಂತರದಲ್ಲಿ ದೈವಕ್ಕೆ ಆವೇಶ ಬರಿಸುವ ಪೂಜಾರಿಯನ್ನ ಕರೆದು ಆತನಿಗೆ ಮನೆಯ ಅಥವಾ ಊರ…

Read More

ಸಮಾಜದ ಬಗ್ಗೆ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಸಮಾಜದ ಬಲವರ್ಧನೆಗೆ ಎಲ್ಲರೂ ಸದಸ್ಯರಾಗ ಬೇಕು. ಶೇಕಡಾ 90 ರಷ್ಟು ಮಂದಿ ಸದಸ್ಯರಾಗದೆ ಉಳಿದಿದ್ದಾರೆ. ಅಂತವರನ್ನು ಒಟ್ಟು ಸೇರಿಸಿ ಸಮಾಜವನ್ನು ಕಟ್ಟುವ ಕೆಲಸ ನಡೆಯಬೇಕು. ಪರಸ್ಪರ ಬಾಂಧವ್ಯ, ಪ್ರೀತಿ, ವಿಶ್ವಾಸ, ಸಹಕಾರ ಬಂಟ ಸಮಾಜದ ಅಡಿಪಾಯವಾಗಿದ್ದು, ಅದು ಅಳಿವಿನಂಚಿನಲ್ಲಿದೆ. ನಮ್ಮ ಉನ್ನತ ಆಚಾರ ವಿಚಾರ, ಸಂಸ್ಕಾರ ಉಳಿಸ ಬೇಕು. ಈ ನಿಟ್ಟಿನಲ್ಲಿ ಬಾಂಧವ್ಯವನ್ನು ಬೆಸೆಯುವ ಸದುದ್ದೇಶದಿಂದ ಬಾಂಧವ್ಯ ಎಂಬ ಮಾಹಿತಿ ಸಂಗ್ರಹ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ವಠಾರದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ 102 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬಂಟ ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವು ಪ್ರವರ್ಗ 2 ಎಯಲ್ಲಿ ಸೇರಲು ಅರ್ಹರಾಗಿದ್ದರೂ ನಮ್ಮನ್ನು…

Read More

“ಗಜಮುಖನೆ ಗಣಪತಿಯೇ ನಿನಗೆ ವಂದನೆ, ನಂಬಿದವರ ಪಾಲಿನ ಕಲ್ಪತರು ನೀನೆ….!”ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ವಾಡಿಕೆ ಬರುವಂತಹ ವಿಶೇಷ ಶ್ಲೋಕ….!ಅದೇ ರೀತಿ ಗಣಪತಿ ಮತ್ತು ಇನ್ನಿತರ ದೇವತೆಗಳನ್ನು ಸ್ಮರಿಸುವುದಾದರೆ ಗಣಪತಿಗೆ ಮೊದಲ ಪಂತಿಯ ಅಗ್ರಸ್ಥಾನ ಹಾಗೂ ಗಣಪತಿಗೆ ಮೊದಲ ಆರಾಧಿತ ಎಂದು ಕರೆಯುತ್ತೇವೆ. ಮೋದಕ ಗಣೇಶ, ಹಾಗೆ ಹೊಟ್ಟೆ ಗಣೇಶ, ಜಡೆ ಗಣೇಶ, ಇವುಗಳಲ್ಲಿ ವಿಶೇಷವಾದಂತಹ ಗಣಪತಿಯು ಮಾನವನ ಬದುಕಿನ ಜೊತೆಗೆ ಅವಿನಾಭವ ಸಂಬಂಧವನ್ನು ಹೊಂದಿದೆ. ಯಾಕೆಂದರೆ ಮನುಷ್ಯನಿಗೆ ಕಷ್ಟಗಳು ಬಂದಾಗ ಮೋದಕ ಪ್ರಿಯನಾ ನೆನಪು ಮಾಡಿಕೊಂಡು, ಆ ಕಷ್ಟವನ್ನ ಭಗವಂತನಲ್ಲಿ ಸ್ಮರಿಸುತ್ತೇವೆ. ಕಷ್ಟಗಳು ನಿವಾರಣೆಯಾದಾಗ ಗಣಪತಿಗೆ ಹರಿಕೆ ರೂಪದಲ್ಲಿ ಹಣ್ಣು ಕಾಯಿಯನ್ನ ಅರ್ಪಿಸಿ ನಾವು ನಮಸ್ಕರಿಸುತ್ತೇವೆ. ಅದೇ ರೀತಿ ವಿಶೇಷವಾದ ಗಣಪತಿಯನ್ನು ನಾವಿಂದು ತಿಳಿದುಕೊಳ್ಳಾದರೆ ನೇರವಾಗಿ ಚಿತ್ರದುರ್ಗ ಜಿಲ್ಲೆಯತ್ತ ಧಾವಿಸಿದರೆ, ನಮಗೆ ಜಡೆ ಗಣಪತಿಯಾ ದರುಶನವಾಗುತ್ತದೆ. ಬದುಕಿನ ಸಂಕಷ್ಟಗಳನ್ನ ನಿವಾರಿಸುವ ಜಡೆ ಗಣಪತಿಯು ಜಿಲ್ಲೆಯ ಸಮಸ್ತ ಭಕ್ತಾದಿಗಳನ್ನ ತನ್ನತ್ತ ಸೆಳೆದುಕೊಳ್ಳುವ ಚಾಕ ಚಕ್ಯತೆ ಈ ಗಣೇಶನಿಗೆ ಇದೆ. ಯಾಕೆಂದರೆ ಹಲವಾರು ಬಾರಿ…

Read More

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಮಾಜ ಸೇವೆಗಾಗಿ ರವಿ ಶೆಟ್ಟಿ ಮೂಡಂಬೈಲ್ ಪ್ರಶಸ್ತಿ ಸ್ವೀಕರಿಸಿದರು. ರವಿ ಶೆಟ್ಟಿ ಮೂಡಂಬೈಲ್ ಸಮಾಜ ಸೇವಕ, ಉದ್ಯಮಿಯಾಗಿದ್ದಾರೆ. ಅವರು ಸಮಾಜ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ-ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಯ ಪುತ್ರನಾಗಿ ಬಂಟ್ವಾಳ ತಾಲೂಕಿನ ಮೂಡಂಬೈಲುನಲ್ಲಿ 1963 ಜು.20 ರಂದು ಜನಿಸಿದ ರವಿ ಶೆಟ್ಟಿ ಅವರು ಎಂಜಿನಿಯರಿಂಗ್ ಹಾಗೂ ಎಂಬಿಎ ಪದವೀಧರರಾಗಿದ್ದಾರೆ. ಭಾರತದಲ್ಲಿ ಹಲವಾರು ಪ್ರಮುಖ ಕಂಪನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿರುವ ರವಿಶೆಟ್ಟಿಯವರು ಕೆಲವು ವರ್ಷಗಳಿಂದ ಕತಾರ್‌ನಲ್ಲಿ ಎಟಿಎಸ್ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಸಂಘ ಕತಾರ್, ತುಳುಕೂಟ ಕತಾರ್, ಬಂಟ್ಸ್ ಕತಾರ್ ಹಾಗೂ ಜಿಲ್ಲೆಯ ಹಲವು ಸಂಘಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಮಹಾಪೋಷಕರಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ರವಿಶೆಟ್ಟಿಯವರ ಜೀವನದ ಬಗ್ಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರವಿತೇಜ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಕಟಿಸಿತ್ತು. “ನನ್ನ ಸಮಾಜ ಸೇವೆಯನ್ನು ಗುರುತಿಸಿ…

Read More

ಮಂಗಳೂರು, ಮಣಿಪಾಲಕ್ಕೆ ಮಾತ್ರ ಸೀಮಿತವಾಗಿದ್ದ ಮಲ್ಟಿಫ್ಲೆಕ್ಸ್ ಸಿನಿಮಾ ಥಿಯೇಟರ್ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂರು ಸಿನಿಮಾ ಹಾಲ್ ಗಳೊಂದಿಗೆ ಮಾಚ್೯ 25 ಶುಕ್ರವಾರದಿಂದ ಸುರತ್ಕಲ್ ಹೃದಯಭಾಗದಲ್ಲಿರುವ ಅಭಿಷ್ ಮಾಲ್ ನಲ್ಲಿ ಶುಭಾರಂಭಗೊಳ್ಳಲಿದೆ. ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮಾಲಕ ಶಶಿಧರ್ ಕೋಡಿಕಲ್ ಅವರು, “ಸುರತ್ಕಲ್, ಪಡುಬಿದ್ರೆ, ಮೂಲ್ಕಿ, ಬಜಪೆ ಕಾಟಿಪಳ್ಳ ಕೃಷ್ಣಾಪುರ ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಜನರಿಗೆ ಮಲ್ಟಿ ಫ್ಲೆಕ್ಸ್ ನಲ್ಲಿ ಕೂತು ಕುಟುಂಬ ಸಮೇತ ಸಿನಿಮಾ ನೋಡುವ ಕನಸನ್ನು ಸುರತ್ಕಲ್ ನಲ್ಲಿ ಸಿನಿ ಗ್ಯಾಲಕ್ಸಿ ಚಿತ್ರಮಂದಿರ ನನಸು ಮಾಡಲಿದೆ. ಸಿನಿಗ್ಯಾಲಕ್ಸಿಯಲ್ಲಿ ಹವಾನಿಯಂತ್ರಿತ ಮೂರು ಪರದೆಗಳಿವೆ. ಉತ್ತಮ ತಂತ್ರಜ್ಞಾನ, ಸೌಂಡ್, ವಿಡಿಯೋ ಗುಣಮಟ್ಟ ಯಾವುದರಲ್ಲೂ ರಾಜಿ ಮಾಡಿಕೊಳ್ಳದೆ ಮೂರು ಪ್ರತ್ಯೇಕ ಸಿನಿಮಾ ಹಾಲ್ ಗಳನ್ನು ನಿರ್ಮಿಸಿದ್ದು ಒಟ್ಟು 417 ಆಸನ ಸಾಮರ್ಥ್ಯ ಹೊಂದಿದೆ” ಎಂದು ಶಶಿಧರ್ ಕೋಡಿಕಲ್ ಹೇಳಿದರು. ಯು ಎಫ್ ಒ ತಂತ್ರಜ್ಞಾನದೊಂದಿಗೆ ಸಿನಿಮಾ ಹಾಲ್ ತಯಾರಾಗಿದ್ದು ರಾಕರ್, ಗೋಲ್ಡ್ ಸೋಫಾ ಸೀಟ್ಸ್, ಕುಟುಂಬಕ್ಕಾಗಿ ಖಾಸಗಿ ಕ್ಲಬ್ ಕ್ಲಾಸ್ ಸೀಟ್ಸ್…

Read More

ಬದುಕಿನ ಪಯಣವನ್ನು ಮುಗಿಸಿ ಪಂಚಭೂತಗಳಲ್ಲಿ ಲೀನರಾದ ಕಾಪು ಪ್ರಶಾಂತ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಕೆ ಪ್ರಭಾಕರ್ ಶೆಟ್ಟಿಯವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಪ್ರಾರ್ಥಿಸುತ್ತಿದ್ದೇವೆ.

Read More

ವಿದ್ಯಾಗಿರಿ: ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಲಲಿತಕಲಾ ಸ್ಪರ್ಧೆಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು, ಸಮಗ್ರ ಪ್ರಶಸ್ತಿ ಪಡೆದಿಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಮೆಲ್ರೋಯ್ ಪೋಸ್ಟರ್ ಮೇಕಿಂಗ್‍ನಲ್ಲಿ ಪ್ರಥಮ ಸ್ಥಾನ, ಮಾಡೆಲಿಂಗ್ ನಲ್ಲಿ ಶ್ರೀಧರ್ ಬಡಿಗೇರ್ ಪ್ರಥಮ ಸ್ಥಾನ, ಕಾರ್ಟೂನಿಂಗ್‍ನಲ್ಲಿ ನಂದನ್ ದ್ವಿತೀಯ ಸ್ಥಾನ ಮತ್ತು ಇನ್ಸ್ಟಾಲೇಶನ್‍ನಲ್ಲಿ ಅಕ್ಷಿತ, ಮಣಿಕಂಠ, ಮಹೇಶ್, ರಿಫಾಯಿ ತಂಡ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ‘ಸಮಗ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆಳ್ವಾಸ್ ಬಿವಿಎ ವಿಭಾಗದ ಉಪನ್ಯಾಸಕ ಪರಮೇಶ್ವರ್ ಇದ್ದರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ವಿದ್ಯಾಗಿರಿ (ಮೂಡುಬಿದಿರೆ): ಕೃಷಿ, ಸಂಘಟನೆ, ಸಾಂಸ್ಕೃತಿಕ, ಧಾರ್ಮಿಕ, ವಿದ್ಯಾ ಕ್ಷೇತ್ರ ಹಾಗೂ ಸಮಾಜ ಸೇವೆಗಳಲ್ಲಿ ಸಕ್ರಿಯರಾಗಿದ್ದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಮಂಗಳವಾರ ನಿಧನರಾದರು. ಅವರಿಗೆ 107 ವರ್ಷ ವಯಸ್ಸಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಿಜಾರುಗುತ್ತು ಮನೆತನದಲ್ಲಿ 1916ರ ಆಗಸ್ಟ್ 15ರಂದು ಜನಿಸಿದ ಅವರು, ಆದರ್ಶ ಕೃಷಿಕರಾಗಿ ಬದುಕು ಕಂಡವರು. ದಕ್ಷಿಣ ಕನ್ನಡದಲ್ಲಿ ಯಶಸ್ವಿಯಾಗಿ ಅಡಿಕೆ, ತೆಂಗು ಹಾಗೂ ಕ್ಯಾವೆಂಡಿಸ್ ಬಾಳೆ ಕೃಷಿಯನ್ನು ಪರಿಚಯಿಸಿದವರಲ್ಲಿ ಪ್ರಮುಖರಾಗಿದ್ದಾರೆ. ಮಿಜಾರು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸ್ಥಾಪಕರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಅವರು, ಮೂಡುಬಿದಿರೆ ಶೈಕ್ಷಣಿಕ ಕ್ರಾಂತಿಗೆ ಅರಿವಿನ ಸ್ಫೂರ್ತಿಯ ಸೆಲೆಯಾಗಿದ್ದರು. ಕೃಷಿ ಕ್ರೀಡೆಯ ಹಿರಿಯ ಪ್ರೋತ್ಸಾಹಕರಾಗಿದ್ದ ಅವರು, ಮಿಜಾರು ಕೋಟಿ ಚೆನ್ನಯ ಜೋಡುಕೆರೆ ಕಂಬಳವನ್ನು ಪರಿಚಯಿಸಿದ ಕೀರ್ತೀ ಇವರಿಗೆ ಸಲ್ಲುತ್ತದೆ. ಬದುಕಿನ ಸಂಧ್ಯಾಕಾಲದವರೆಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನಿಕಟವರ್ತಿಯಾಗಿದ್ದ ಆನಂದ ಆಳ್ವರು, ನಾಗಮಂಡಲ, ಬ್ರಹ್ಮಕಲಶ, ದೈವಾರಾಧನೆ ಸೇರಿದಂತೆ ಧರ್ಮ ಮತ್ತು…

Read More

ತುಳು ಕೂಟ ಪುಣೆ (ರಿ) ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜಸೇವಕ ಶ್ರೀ ದಿನೇಶ್ ಶೆಟ್ಟಿ ಕಳತ್ತೂರು ಅಶ್ವತ್ಥಗುತ್ತು ಇವರು ದಿನಾಂಕ 19.10.2023 ರಂದು ನಡೆದ ಮಹಾಸಭೆಯಲ್ಲಿ ಆಯ್ಕೆಯಾದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಶ್ರೀ ದಿನೇಶ್ ಶೆಟ್ಟಿ ಕಳತ್ತೂರು ಹಾಗೂ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು ಇವರುಗಳನ್ನು ಸಭೆಯಲ್ಲಿ ಗಣ್ಯಾತಿ ಗಣ್ಯರು ಅಭಿನಂದಿಸಿದರು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಸ್ಥಾಪಕಾಧ್ಯಕ್ಷ ಜಯ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಹೆಗ್ಡೆ, ಡಾ. ಸುಧಾಕರ್ ಶೆಟ್ಟಿ, ಸಂತೋಷ್ ಶೆಟ್ಟಿ ಎಣ್ಣೆಹೊಳೆ ಉಪಸ್ಥಿತರಿದ್ದರು.

Read More