Author: admin

ನಮ್ಮ ಜೀವನದ ತೇರನ್ನು ಎಳೆಯಲು ಈ ಮಾಯ ನಗರಿಗೆ ಬಂದಿದ್ದು, ಇಲ್ಲಿ ನಾವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಿದ್ದು ನಮ್ಮ ಜನ್ಮ ಭೂಮಿಯನ್ನು ನೆನಪಿಸುತ್ತ ಹಳೆ ಬೇರು ಜೊತೆ ಹೊಸ ಬೇರನ್ನು ಸೇರಿಸಿ ಜಾತಿ ಮತ, ಬಡವ ಶ್ರೀಮಂತ ನೆಂಬ ಬೇದವಿಲ್ಲದೆ, 6,000 ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ತಿಳಿಯಪಡಿಸುವುದಕ್ಕೆ ಚಿಣ್ಣರ ಬಿಂಬ ಮಕ್ಕಳ ಸಂಸ್ಥೆಯನ್ನು ಕಟ್ಟಿದ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಅವರು ಈ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೀಯ. ಚಿನ್ನರ ಬಿಂಬದ ಕಲಾವಿದರು ಭವಿಷ್ಯವಿದೆ ಮುಂದೆ ಖ್ಯಾತ ಕಲಾವಿದರಾಗುತ್ತಾರೆ ಎಂಬುದು ಇಂದು ನಡೆದ ಕಲಾಪ್ರಕಾರಗಳೇ ಸಾಕ್ಷಿಯಾಗಿದೆ . ಚಿನ್ನರಲ್ಲಿ ಕನ್ನಡವನ್ನು ಬೆಳಿಸಿ ಉಳಿಸುವ ಈ ಸಂಸ್ಥೆಗೆ ಕರ್ನಾಟಕ ಸರಕಾರ ಅನುದಾನ ನೀಡದೇ ಇರುವುದು ತುಂಬಾ ಖೇದಕರ ಸಂಗತಿ, ಸರಕಾರ ಮುಂದಿನ ದಿನಗಳಲ್ಲಿ ಚಿಣ್ಣರ ಬಿಂಬ ವನ್ನು ಗುರುತಿಸಿ ಅನುದಾನ ದೊಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು, ಈ ಸಂಸ್ಥೆಯು 25ನೇ ವರ್ಷವನ್ನು…

Read More

ಗುರುಪುರ ಬಂಟರ ಮಾತೃ ಸಂಘದ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಬಂಟ ಯುವಕರನ್ನು ಸಂಘಟಿಸುವ ದೃಷ್ಟಿಯಿಂದ ಯುವ ಬಂಟರ ಸಭೆಯು ದಿನಾಂಕ 26-06-22 ರವಿವಾರ ತೆಂಕುಳಿಪಾಡಿ ಗ್ರಾಮದ ವಿನಯ ಶೆಟ್ಟಿ ಮನೆಯಲ್ಲಿ ಯುವ ವಿಭಾಗದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಲಿಂಗ ಮಾರ್ ಗುತ್ತು ಇವರ ನೇತ್ರತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಗ್ರಾಮದ ಹೆಚ್ಚಿನ ಯುವಕರು ಆಸಕ್ತಿಯಿಂದ ಭಾಗವಹಿಸಿದರು. ಈ ಸಭೆಯಲ್ಲಿ ಸಂಘದ ವಾರ್ಷಿಕ ಸಮಾವೇಶ ವಿದ್ಯಾರ್ಥಿ ವೇತನ ಹಾಗೂ ಸಂಘದ ನಿವೇಶನ ಖರೀದಿ, ಸಂಪನ್ಮೂಲ ಕ್ರೂಡಿಕರಣ ,ಸಮಾಜದ ಸಂಘಟನೆಬಗ್ಗೆ ಮಾಹಿತಿ ನೀಡಲಾಯಿತು.ಎಲ್ಲಾ ಯುವಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ,ಸಂಚಾಲಕರಾದ ಚಂದ್ರಹಾಸ್ ಶೆಟ್ಟಿ ನಾರಳ, ಕೋಶಾಧಿಕಾರಿ ಜಯರಾಮ್ ಶೆಟ್ಟಿ ವಿಜೇತ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರಿಮತಿ ಇಂದಿರಾಕ್ಷಿ ಶೆಟ್ಟಿ,ಸುದರ್ಶನ್ ಶೆಟ್ಟಿ ,ಜಯರಾಂ ರೈ, ಕೃಷ್ಣಕಾಂತ್ ಶೇಣವ, ಪ್ರಖ್ಯಾತ ಶೆಟ್ಟಿ,ಅನೂಪ್ ಶೆಟ್ಟಿ,ಮನೋಜ್ ರೈ,ಶಿವರಾಜ್ ರೈ,ಶಿವಪ್ರಸಾದ್, ನರೇಶ್ ಶೆಟ್ಟಿ, ಹಿರಿಯರಾದ ಶಂಕರ್ ಶೆಟ್ಟಿ,ನಿತ್ಯಾನಂದ ಮಲ್ಲಿ ಗ್ರಾಮಗಳ ಹಿರಿಯರು,ಯುವಕರು ಭಾಗವಹಿಸಿದ್ದರು.

Read More

ಹೌದು, ಒಬ್ಬ ತಂದೆಯ ಸ್ಥಾನದಲ್ಲಿರುವ ವ್ಯಕ್ತಿಯು ಮಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸೋಲಾರ್ ಅಳವಡಿಕೆಯ Salesman ಆಗಿ ಕೆಲಸ ಮಾಡುತ್ತಿದ್ದರು. ಆ ಕಂಪೆನಿಯಿಂದ ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಸಂಬಳ ಮತ್ತು ವಾರಕ್ಕೊಮ್ಮೆ ಬಸ್ ಚಾರ್ಜ್ ಕೂಡ ಪಡೆಯುತ್ತಾ ಇದ್ದರು. ಆ ಸಂಬಳದ ಮೇಲೆ ಬ್ಯಾಂಕ್ ಲೋನ್ ಮಾಡಿದ್ದು ಮಾತ್ರ ಅಲ್ಲದೆ ಕಂಪೆನಿಯಿಂದ ಪಿ ಎಫ್ ಫಂಡ್ ಕೂಡ ಪಡೆದು ಮನೆ ಕಟ್ಟಿಕೊಂಡಿದ್ದರು. ಪರಿಣಾಮ, ಬ್ಯಾಂಕ್ ಸಾಲದ ಮೇಲಿನ ಮಾಸಿಕ ಬಡ್ಡಿ ಕಟ್ಟಿ, ಉಳಿದ ಹಣದಿಂದ ಮನೆ ಖರ್ಚು ಮತ್ತು ಮಕ್ಕಳ ಎಜುಕೇಷನ್ ಖರ್ಚು ನಿಭಾಯಿಸಲು ತುಂಬಾ ಕಷ್ಟ ಪಡುತ್ತಿದ್ದರು. ದಿನ ಹೋದಂತೆ ಮಂಗಳೂರಿನಲ್ಲಿ ಒಂದು ಹೊಸ ಸೋಲಾರ್ ಆಫೀಸ್ ತೆರೆಯಿತು. ಅವರು ಆ ತಂದೆಯನ್ನು ಆಫೀಸಿಗೆ ಕರೆಸಿ, ತಮ್ಮ ಆಫೀಸಿಗೆ ಸೇರಿಕೊಳ್ಳುವಂತೆ ಮನವಿ ಮಾಡಿದರು. ಜೊತೆಗೆ ಮೊದಲ ಕಂಪೆನಿಗಿಂತ ಹೆಚ್ಚು ಸಂಬಳ ಮತ್ತು ವಾಹನದ ಸೌಲಭ್ಯ ನೀಡುವುದಾಗಿ ಹೇಳಿದರು. ಅವರ ಮಾತನ್ನು ನಂಬಿ ದುಡಿಯುತಿದ್ದ ಕಂಪೆನಿಗೆ…

Read More

ಒಂದು ಸಮುದಾಯದ ಪ್ರತಿನಿಧಿಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ ಕ್ರಮೇಣ ಒಟ್ಟು ಸಮಾಜದ ಸೇವಾದೀಕ್ಷೆಗೆ ಬದ್ಧರಾದ ಬಂಟ ಬಾಂಧವರು ಅನೇಕ ಮಂದಿ ಇದ್ದಾರೆ. ಹೌದು ಇಂಥಹ ಜನಪ್ರಿಯ ಸಾಮಾಜಿಕ ಮುಂದಾಳುಗಳ ಸಾಲಿನಲ್ಲಿ ಲಯನ್ ಅಶೋಕ್ ಕುಮಾರ್ ಶೆಟ್ಟರದ್ದು ಬಹುಶ್ರುತ ಹೆಸರು. ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸುಮಾರು ನಾಲ್ಕು ದಶಕಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ತನ್ನ ಜೀವನವನ್ನು ಸಮಾಜಸೇವೆ, ಸಮುದಾಯದ ಸಂಘಟನೆಗೆ ಮುಡಿಪಾಗಿಟ್ಟವರು. ಲಯನ್, ಜೇಸೀಸ್ ಇಂತಹ ಸಮಾಜಸೇವಾ ಹಾಗೂ ನಾಯಕತ್ವ ತರಬೇತಿ ಸಂಸ್ಥೆಗಳ ನಂಟು ಬೆಳೆಸಿಕೊಂಡು ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಶೋಕ್ ಕುಮಾರ್ ಶೆಟ್ಟಿ ಅವರು ಪ್ರಸ್ತುತ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸ್ದಾನ ಅಲಂಕರಿಸಿದ್ದಾರೆ. ಶ್ರೀ ಮಂಜಯ್ಯ ಶೆಟ್ಟಿ ಮತ್ತು ಅವರಾಲ್ ಬೊಳಿಂಜೆ ಶ್ರೀಮತಿ ವಾರಿಜಾ ಎಂ ಶೆಟ್ಟಿ ದಂಪತಿಯ ಸುಪುತ್ರನಾಗಿ ಜನಿಸಿದ ಶೆಟ್ಟರು ವಿಜ್ಞಾನ ಪದವೀಧರರು. ಇವರ ತೀರ್ಥರೂಪರು ಮೂಲ್ಕಿ ಆರೋಗ್ಯ ಸೇವಾ ಕೇಂದ್ರದಲ್ಲಿ ಉದ್ಯೋಗಕ್ಕಿದ್ದರು. ಬಾಲ್ಯದಲ್ಲೇ ತಾನು ಹುಟ್ಟಿದ ಕುಟುಂಬದ ಶಿಸ್ತು ಹಾಗೂ…

Read More

ಮೂಲ್ಕಿ ಬಂಟರ ಸಂಘ (ರಿ) ಇದರ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಗೌರವ ಸಲಹೆಗಾರರಾಗಿ ಪುರುಶೋತ್ತಮ ಶೆಟ್ಟಿ, ಗಂಗಾಧರ ಶೆಟ್ಟಿ, ಉಪಾಧ್ಯಕ್ಷರಾಗಿ ಜೀವನ್ ಕೆ ಶೆಟ್ಟಿ, ಕಾರ್ಯದರ್ಶಿಯಾಗಿ ಸಾಯಿನಾಥ ಶೆಟ್ಟಿ ಮುಂಡ್ಕೂರು, ಜೊತೆ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ ಕಿನ್ನಿಗೋಳಿ, ಕೋಶಾಧಿಕಾರಿಯಾಗಿ ಸ್ವರಾಜ್ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಸಂಚಾಲಕರಾಗಿ ರೋಹಿಣಿ ಶೆಟ್ಟಿ, ಯುವ ವಿಭಾಗದ ಸಂಚಾಲಕರಾಗಿ ದಾಮೋದರ ಶೆಟ್ಟಿ ಕೊಡೆತ್ತೂರು, ಪತ್ರಿಕಾ ಮತ್ತು‌ ಪ್ರಚಾರ ವಿಭಾಗದ ಸಂಚಾಲಕರಾಗಿ ನಿಶಾಂತ್ ಶೆಟ್ಟಿ ಕಿಲೆಂಜೂರು ಆಯ್ಕೆಯಾಗಿದ್ದಾರೆ.

Read More

“ಯಾರು ಆಳಿದರೇನು ನಾವು ರಾಗಿ ಬೀಸುವುದು ತಪ್ಪುವುದೇ? ಎಂಬ ಮಾತಿಗೆ ಸರಿಯಾಗಿ “ಯಾರು ಊಳಿದರೇನು ಹಸಿವು ನೀಗುವಷ್ಟು ಸಮೃದ್ಧವಾಗಿದೆಯೇ?” ದೇಶದ ಪರಿಸ್ಥಿತಿ. ಆಗಿಲ್ಲವೆಂದಾದ ಮೇಲೆ ನಮಗೆ ನಾವೇ ಶಿಲ್ಪಿಗಳು ಯಾಕಾಗಬಾರದು? ಹೌದು, ಪ್ರತಿಯೊಬ್ಬ ಮಾನವನ ಉನ್ನತಿ ಮತ್ತು ಅವನತಿ ಅವರವರ ಕೈಯಲ್ಲಿಯೇ ಇರುವುದರಿಂದ ನಮ್ಮ ನಮ್ಮ ಪ್ರಗತಿಗೆ ಅಡಿಗಲ್ಲು ನಾವೇ ಹಾಕಿಕೊಳ್ಳಬೇಕು. ಯಾರಿಂದಲೂ ಯಾವುದೇ ತರದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ. ಇಂದು ನಮ್ಮ ದೇಶದಲ್ಲಿ ಸರಿಪಡಿಸಲಾರದ ಅನೇಕ ಅನಾಹುತ, ಅನಾಚಾರಗಳಿಗೆ ಕಾರಣರು ಯಾರು? ಅದರಲ್ಲಿ ‌ಮುಖ್ಯವಾಗಿ ನಮ್ಮ ನೆಲದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಉಡುಗೆ, ತೊಡುಗೆ, ಆಹಾರ, ಹಬ್ಬ ಹರಿದಿನಗಳಲ್ಲಿ ತಂದುಕೊಂಡ ಬದಲಾವಣೆಯ ಅಗತ್ಯ ನಮಗಿತ್ತೇ? ಆ‌ ನಿಟ್ಟಿನಲ್ಲಿ ಬುದ್ದಿ ಜೀವಿಗಳಾದವರು ಯೋಚಿಸಬೇಕು. ಇಂದು ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ನಮಗೆ ನಾವೇ ದೊರೆಗಳು. ಪ್ರಜೆಗಳು ‌ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ದೇಶ ಆಳಲಾಗುತ್ತಿದೆ. ವಿದ್ಯಾವಂತ ಬುದ್ದಿವಂತರ ನಾಡಿನಲ್ಲಿ ಅತ್ಯಾಚಾರಕ್ಕೆ ಕೊನೆಯಿಲ್ಲ ಎಂಬಂತೆ ಕಂಡು ಕೇಳಿ ಬರುತ್ತಿದೆ. ವಿದ್ಯಾವಂತ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ…

Read More

ಅಜೆಕಾರು ಕಲಾಭಿಮಾನಿ ಬಳಗದ 22ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ದಿನಾಂಕ 10-09-2023ರಂದು ನಡೆಯಿತು. ಮುಂಬಯಿ ಕುರ್ಲಾ ಬಂಟರ ಸಂಘದ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಹಾಗೂ ‘ಅರುವ’ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಬಾಸ್ ಗ್ರೂಫ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕರಾದ ಮಹೇಶ್ ಎಸ್.ಶೆಟ್ಟಿ “ಕಳೆದ 22 ವರ್ಷಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ತಮ್ಮ ಮುಂದಾಳತ್ವದ ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ತವರೂರ ಅದೆಷ್ಟೋ ಕಲಾವಿದರನ್ನು ಈ ಮುಂಬಯಿ ಮಹಾನಗರಕ್ಕೆ ಆಹ್ವಾನಿಸಿ, ಯಕ್ಷಗಾನ ಮತ್ತು ತಾಳ ಮದ್ದಳೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ಸುಮಾರು ಒಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದ ಹಿರಿಮೆ ಇವರೊಂದಿಗಿದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ನನ್ನನ್ನು ಸೇರಿಸಿ ಬಂಟರ ಸಂಘದ ಅನೇಕ ಪದಾಧಿಕಾರಿಗಳಿಗೆ ಯಕ್ಷಗಾನವನ್ನು ಕಲಿಸಿ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತುಳುನಾಡಿನ ಆಚಾರ,…

Read More

ಕರಾವಳಿ ಸೌಹಾರ್ದ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ 23 ನೇ ವಾರ್ಷಿಕ ಮಹಾಸಭೆಯು ದಿನಾಂಕ 09.09.2023 ನೇ ಶನಿವಾರ, ದಾವಣಗೆರೆಯ ಕುಂದವಾಡ ರಸ್ತೆಯ ಡಾ. ಶಾಮ್ ಸುಂದರ ಶೆಟ್ಟಿ ಬಂಟರ ಭವನ ದಲ್ಲಿ ನೆರವೇರಿತು. ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸಿಎ. ಉಮೇಶ ಶೆಟ್ಟಿಯವರು ವಹಿಸಿದ್ದರು. ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ದಿನೇಶ್ ಕೆ. ಶೆಟ್ಟಿಯವರು ಸ್ವಾಗತಿಸಿದರು. ಸಹಕಾರಿ ಸಂಘವು ವರದಿ ಸಾಲಿನಲ್ಲಿ ಉತ್ತಮ ಲಾಭ ಹೊಂದಿದ್ದು, ಸವಕಳಿ ರೂ 21.10 ಲಕ್ಷ ಕಳೆದು ರೂ 69.08 ಲಕ್ಷಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 14 ರಷ್ಟು ಡಿವಿಡೆಂಟ್ ಘೋಷಿಸಿದ್ದು, ಸದಸ್ಯರಿಗೆ ಒಟ್ಟು ರೂ 18.10 ಕೋಟಿಗಳಷ್ಟು ಸಾಲ ವಿತರಿಸಿ, ಸ್ವಂತ ಕಟ್ಟಡದೊಂದಿಗೆ ದಾವಣಗೆರೆ ನಗರದಲ್ಲಿ ಮಂಚೂಣಿಯ ಸಹಕಾರಿ ಸಂಘವಾಗಿದೆ ಎಂದು ತಿಳಿಸಿದರು. ಕರಾವಳಿ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ, ದಾವಣಗೆರೆಯ 4 ಜನ ದಿನ ಪತ್ರಿಕೆ…

Read More

ವಿಜಯಾ ಬ್ಯಾಂಕಿನ ( ಈಗಿನ ಬ್ಯಾಂಕ್ ಅಫ್ ಬರೋಡಾ) ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃಧ್ಧಿ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಬ್ರಹ್ಮಾವರದ ಆಶ್ರಯ ಹೋಟೆಲಿನಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಅಣ್ಣಪ್ಪ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ವೇಣುಗೋಪಾಲ ಶಟ್ಟಿಯವರು ವರದಿ ವಾಚನ ಮಾಡುತ್ತಾ ಹಿಂದಿನ ಸಾಲಿನಲ್ಲಿ ಸಂಘವು ಹಲವಾರು ದುರ್ಬಲರಿಗೆ ನೀಡಿದ ಆರ್ಥಿಕ ಸಹಾಯ ಮತ್ತಿತರ ಸಮಾಜಮುಖಿ ಕಾರ್ಯಕ್ರಮಗಳ ವಿವರ ನೀಡಿದರು. 400 ಕ್ಕೂ ಮಿಕ್ಕಿ ನಿವೃತ್ತ ಅಧಿಕಾರಿಗಳ ಸದಸ್ಯತ್ವ ಹೊಂದಿರುವ ಸಂಘದ 2023-25 ಸಾಲಿಗೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳ ಹೆಸರನ್ನು ಚುನಾವಣಾಧಿಕಾರಿಯಾಗಿ ಆಗಮಿಸಿದ ಶ್ರೀಯುತ ವಸಂತ ಹೆಗ್ಡೆಯವರು ಘೋಷಿಸಿದರು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಕೆ. ಸಂಕಯ್ಯ ಶೆಟ್ಟಿ, ಖಜಾಂಚಿ ಕೆ. ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಎಸ್. ಜಯರಾಮ ಹಗ್ಡೆ, ಮತ್ತಿತರ 9 ಜನರ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕಾರ ಮಾಡಿದರು. ಸಂಘದ ಮಾಜಿ ಅಧ್ಯಕ್ಷರುಗಳು,…

Read More

“ರಾಜಕೀಯದ ಪಡಸಾಲೆಯಿಂದ ಹಿಂದೆ ಸರಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿ…!” ನೂತನ ಅಭ್ಯರ್ಥಿಗೆ  ಅವಕಾಶ ಮಾಡಿಕೊಡಲು ಕುಂದಾಪುರ ಕ್ಷೇತ್ರ ಬಿಟ್ಟುಕೊಟ್ಟ ಶಾಸಕ…!” ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಬೇಸರದ ಆಕ್ರೋಶ…!” – ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ. ಸುದ್ದಿ:ಹಾಲಾಡಿ ” ಅವರು ಸಾಮಾನ್ಯರಲ್ಲಿ ಅಸಮಾನ್ಯ ವ್ಯಕ್ತಿ, ಕೈಯಲ್ಲಿ ಒಂದು ಕೀಪ್ಯಾಡ್ ಮೊಬೈಲ್, ಬಾಯಿ ತುಂಬಾ ಎಲೆ ಅಡಿಕೆ ತುಂಬಿಕೊಂಡು ವಾದ ವಿವಾದ, ಕರಾವಳಿಯ ಶೆಟ್ಟರ ಗತ್ತು, ಶುಭ್ರತೆಯ ಸಂಕೇತ ಎಂಬತ್ತೆ ಬಿಳಿ ಪಂಚೆ ಮತ್ತು  ಬಿಳಿ ಶರ್ಟ್ ಧರಿಸುವ ಹಾಲಾಡಿ ಅವರ ವರ್ಚಸ್ಸು ,ಸ್ಥಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತು, ಬಡವರಿಗೆ ಅನಾರೋಗ್ಯದವರಿಗೆ ,ವಿದ್ಯಾರ್ಥಿಗಳಿಗೆ, ಕಡುಬಡತನದಲ್ಲಿ ಸಿಲುಕಿದವರಿಗೆ ವರದಾನವಾಗಿ ಸಿಗುವ ಇವರ ಮಾತು ಅಷ್ಟೇ ದಷ್ಟಪುಷ್ಟ….!” ಆದರೆ ರಾಜಕಾರಣಿಗೆ ಬರುವಂತ ಅಭ್ಯರ್ಥಿಗಳು ತನಗೂ ತನ್ನವರಿಗೂ ಹಾಗೂ ತನ್ನ ವಂಶಪಾರಂಪರಿವಾಗಿ ಆಸ್ತಿಗಳನ್ನ ಮಾಡುವಂತಹ ರಾಜಕಾರಣಿಗಳು ಮಧ್ಯೆ ಹಾಲಾಡಿ ಅವರು ವಿಭಿನ್ನ, ವಿಶೇಷ..! ಐಷಾರಾಮಿ ಜೀವನವನ್ನು ತ್ಯಜಿಸಿ ಸಾಮಾನ್ಯರಂತೆ ಬದುಕುವಂತ ಶಾಸಕರು ಕುಂದಾಪುರಕ್ಕೆ ಮಾದರಿಯಾಗುವುದಲ್ಲದೆ .ಇತರ…

Read More