Author: admin

ಏಣಗುಡ್ಡೆಯ ಬಹು ಕಾರಣಿಕದ ಕ್ಷೇತ್ರವೆನಿಸಿದ ದುರ್ಗಾ ನಗರ ಚೌಡೇಶ್ವರಿ ದೇವಸ್ಥಾನದಲ್ಲಿ ಇದೇ ಬರುವ 30.12.2023 ರ ಶನಿವಾರದಂದು ಚೌಡೇಶ್ವರಿ ದೇವಿಗೆ ಹೂವಿನ ಪೂಜೆ ಹಾಗೂ ದರ್ಶನ ಸೇವೆ ವಿಜೃಂಭಣೆಯಿಂದ ಊರ ಹಾಗೂ ಪರವೂರ ಭಕ್ತಾದಿಗಳ ಸಮಕ್ಷಮದಲ್ಲಿ 11 ಫಂಟೆಯ ಶುಭಮುಹೂರ್ತದಲ್ಲಿ ಜರಗಲಿದ್ದು, ಆ ಪ್ರಯುಕ್ತ 12.00 ಘಂಟೆಗೆ ಚಪ್ಪರ ಮುಹೂರ್ತ 12.30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಸಂಜೆ 5.00ಘಂಟೆಗೆ ಭಂಡಾರ ಇಳಿಯುವುದು. ತದ ನಂತರ 6.00 ಘಂಟೆಗೆ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ. ಅದೇದಿನ ರಾತ್ರಿ 8.00 ಗಂಟೆಗೆ ಕಲ್ಕುಡ ವರ್ತೆ ಕಾಳಮ್ಮ ದೈವಗಳಿಗೆ ನೇಮೋತ್ಸವ ಜರುಗಲಿದೆ. ಮತ್ತು ಮರುದಿನ ದಿನಾಂಕ 31.12.2023 ರ ಭಾನುವಾರ ಬೆಳಿಗ್ಗೆ 9.00 ಘಂಟೆಗೆ ಗುಳಿಗ ದೈವಕ್ಕೆ ನೇಮೋತ್ಸವ ಜರಗಲಿರುವುದು. ಅದೇ ರೀತಿ 3.1.2024 ರ ಬುಧವಾರ ದೈವಗಳಿಗೆ ತಂಬಿಲ ಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ನಡೆಯಲಿದ್ದು, ಆಸ್ತಿಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಶ್ರೀ…

Read More

ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಜನರ ಬದುಕು ಭಾವನೆಗಳ ನಡುವೆ ಗತಕಾಲದಿಂದಲೂ ಗ್ರಾಮೀಣ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಪರಿಕಗಳು ನೇಪಥ್ಯಕ್ಕೆ ವಾಲುತ್ತಿದೆ. ನಮ್ಮ ನಾಡಿನ‌ ಮುಖ್ಯ ಆಹಾರ ಬೆಳೆಗಳಲ್ಲೊಂದಾಗಿರುವ ಭತ್ತವನ್ನು ಮನೆಯ ‌ಮುಂದಿರುವ ಅಂಗಳದಲ್ಲಿ ಶ್ರೀಮಂತಿಕೆಗೆ ಸಾಕ್ಷಿ ಎಂಬಂತೆ ಬೃಹತ್ ಆಕಾರದ ದೇಶಿ ಸೊಗಡಿನ ತಿರಿ ಸಂಪತ್ತಿನ, ಸಿರಿತನದ ಮನೆತನದ ಗುತ್ತಿನ ಪ್ರತೀಕವಾಗಿದ್ದ ಕಾಲವೊಂದಿತ್ತು. ತಿರಿ ಕಟ್ಟುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ವಿಧಾನವನ್ನು ಭತ್ತದ ಕಣಜ ಕಟ್ಟುವಿಕೆ ಅಥವಾ ಗ್ರಾಮ್ಯ ಭಾಷ್ಯೆಯಲ್ಲಿ ತಿರಿ ಕಟ್ಟುವುದು ಎಂದು ಕರೆಯುತ್ತಾರೆ. ಆದರೆ ಈ ಸಂಪ್ರದಾಯ ಈ‌ ಕಾಲಘಟ್ಟದಲ್ಲಿ ನಿಧಾನವಾಗಿ ‌ಕಣ್ಮರೆಯಾಗುತ್ತಿರುವುದು ವಿಷಾದನೀಯ. ಎರಡು ಮೂರು ವರ್ಷಗಳವರೆಗೆ ತಿರಿಯಲ್ಲಿ ಧಾನ್ಯ ಸಂಗ್ರಹಿಸಿಟ್ಟರೂ ಹಾಳಾಗುವುದಿಲ್ಲ. ಅಷ್ಟೇ ಅಲ್ಲದೆ ಬಹಳ ಹಿಂದೆ ಹೆಣ್ಣು ಕೊಟ್ಟು ಮದುವೆ ‌ಮಾಡಿಸುವವರು ಮನೆಯೆದುರಿನ ತಿರಿ‌ ನೋಡಿ ಅವರ ಶ್ರೀಮಂತಿಕೆ ಅಳೆಯುತ್ತಿದ್ದರಂತೆ. ತಿರಿಯೊಂದಿಗೆ ಸಂಪ್ರದಾಯಬದ್ಧ ಗೌರವದ ಶ್ರೀಮಂತಿಕೆಯ ಇತಿಹಾಸವಿತ್ತು. ಆದರೆ ಆಧುನೀಕರಣದ ಭರಾಟೆಯಲ್ಲಿ ಈ ನೈಸರ್ಗಿಕ ಹುಲ್ಲಿನ ತಿರಿ ತನ್ನ‌ ಅಸ್ತಿತ್ವವನ್ನೇ…

Read More

ಪುಣೆ ;ಶ್ರೀ ಗುರುದೇವ ಸೇವಾಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ಪುಣ್ಯ ಜ್ಯೋತಿರ್ಲಿಂಗ ದರ್ಶನ ಮತ್ತು ಪುಣ್ಯ ಕ್ಷೇತ್ರಗಳ ದರ್ಶನದ ತೀರ್ಥಯಾತ್ರೆಯು ಈ ಬಾರಿ ಉತ್ತರಖಂಡದ ದೇವಭೂಮಿಯ ಹೃಷಿಕೇಶ್,ಹರಿದ್ವಾರ್ ,ಕೇದಾರನಾಥ್ ಜ್ಯೋತಿರ್ಲಿಂಗ ,ಬದ್ರಿನಾಥ್ ನರ ನಾರಾಯಣ ದೇವರ ದರ್ಶನದೊಂದಿಗೆ ಜರಗಿತು. ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶಿರ್ವಾದದೊಂದಿಗೆ , ಪುಣೆ ಶ್ರೀ ಗುರುದೇವ ಸೇವಾ ಬಳಗದ ಅದ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ, ಪ್ರ ಕಾರ್ಯದರ್ಶಿ ರೋಹಿತ್ ಶೆಟ್ಟಿ ಯವರ ಮು೦ದಾಳತ್ವದಲ್ಲಿ ಸುಮಾರು 44 ಜನ ಯಾತ್ರಾರ್ಥಿಗಳು 8 ದಿನದ ಈ ಯಾತ್ರೆಯಲ್ಲಿ ಪಾಲ್ಗೊಂಡರು , ಈ ಬಾರಿ ಬಾರತದ ಪವಿತ್ರವಾದ 12 ಜ್ಯೋತಿರ್ಲಿಂಗಗಳ ಪೈಕಿ ಹಿಮಾಲಯ ಪರ್ವತ ತಪ್ಪಲಿನ ಕೇದಾರನಾಥ್ ಕೆಧಾರೆಶ್ವರನರ ದರ್ಶನ ಗೈದು ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿ ಪುನಿತರಾದರು ,ಪುಣೆ ಶ್ರೀ ಗುರುದೇವ ಸೇವಾ ಬಳಗವು ಈ ಬಾರಿ 12ನೆ ಜ್ಯೋತಿರ್ಲಿಂಗ ದರ್ಶನ ಮಾಡುವ…

Read More

‘ಆಳ್ವಾಸ್‍ನಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಪ್ರಯೋಗಾಲಯ’ ವಿದ್ಯಾಗಿರಿ: ‘ಇಲ್ಲಿನ ಕಂಪ್ಯೂಟರ್  ಪ್ರಯೋಗಾಲಯವು ನಾನು ನೋಡಿದ ಪಿಯು ಕಾಲೇಜುಗಳ ಪೈಕಿ ಅತ್ಯಾಧುನಿಕ ಸೌಲಭ್ಯ ಹೊಂದಿದ ‘ಹೈ ಎಂಡ್ ಕಂಪ್ಯೂಟರ್ ಪ್ರಯೋಗಾಲಯ’ ಎಂದು ಸುರತ್ಕಲ್ ಎನ್‍ಐಟಿಕೆ ಪ್ರಾಧ್ಯಾಪಕ ಡಾ.ಮೋಹಿತ್ ಪಿ. ಶ್ಲಾಘಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು. ಸ್ಥಿರತೆ, ಸಮರ್ಪಕ ಯೋಜನೆ ಹಾಗೂ ಜೀವನ ಪರ್ಯಂತ ಕಲಿಕೆಯು ಯಶಸ್ಸಿನ ಸೂತ್ರ ಎಂದರು. ಬದುಕಿನಲ್ಲಿ ಸ್ಥಿರತೆಯು ಬಹುಮುಖ್ಯ. ನಾವು ಮಾಡುವ ಯಾವುದೇ ಕಾರ್ಯದಲ್ಲಿ ಸ್ಥಿರತೆ ಇದ್ದಾಗ ಮಾತ್ರ ಪರಿಪೂರ್ಣತೆ ಸಾಧಿಸಲು ಸಾಧ್ಯ. ವಾರದ ಕೊನೆಗೆ ಐದು ಗಂಟೆ ಕೆಲಸ ಮಾಡುವ ಬದಲು ಪ್ರತಿನಿತ್ಯ ಅರ್ಧಗಂಟೆ ಕೆಲಸ ಮಾಡಿ. ಡೆಡ್‍ಲೈನ್ ವೇಳೆಯಲ್ಲಿ ಕೆಲಸ ಮಾಡಲು ಯತ್ನಿಸಿದರೆ, ಒತ್ತಡ ಹೆಚ್ಚಾಗುತ್ತದೆ. ಅಲ್ಲದೇ, ಡೆಡ್‍ಲೈನ್ ತಪ್ಪಿದರೆ ತಪ್ಪು ದ್ವಿಗುಣಗೊಳ್ಳುತ್ತದೆ ಎಂದರು. ಅಂಕ ಕಡಿತಗೊಳಿಸುವಾಗ ಉಪನ್ಯಾಸಕರ ಮನಸ್ಸಿಗೂ ನೋವಾಗುತ್ತದೆ. ಆದರೆ, ನೀವುಇನ್ನಷ್ಟು ಪ್ರಗತಿ ಹೊಂದಬೇಕು ಎಂದು ಅಂಕ ಕಡಿತ ಮಾಡುತ್ತಾರೆ ಎಂದು ಸಮಜಾಯಿಷಿ…

Read More

ಮೀರಾ ಭಯಂದರ್ ಮಹಾನಗರ ಪಾಲಿಕೆಯು ಮೀರಾ ರೋಡಿನ ವಿದ್ಯಾ ನಗರಿಯ ಫಸ್ಟ್ ಸ್ಟೆಪ್ ಗ್ಲೋಬಲ್ ಶಾಲೆಯ ಬಳ್ಳಿ ಸೌತ್ ಇಂಡಿಯನ್ ಭವನ ನಿರ್ಮಾಣದ ಶಿಲಾನ್ಯಾಸವನ್ನು ಉತ್ತರ ಮುಂಬಯಿಯ ಸಂಸದ ಗೋಪಾಲ್ ಸಿ ಶೆಟ್ಟಿ ಮತ್ತು ಮೀರಾ ಭಯಂದರ್ ನ ಶಾಸಕ ಪ್ರತಾಪ್ ಸರ್ ನಾಯಕ್ ಅವರೊಂದಿಗೆ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ಯವರು ಜೂನ್ 28 ರಂದು ನೆರವೇರಿಸಿದರು. ಅನಂತರ ಧಾರ್ಮಿಕ ಪೂಜಾ ಕಾರ್ಯಗಳು ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಶೆಟ್ಟಿ ದಂಪತಿಯ ಯಜಮಾನಿಕೆಯಲ್ಲಿ ವೇದಮೂರ್ತಿ ಕೃಷ್ಣರಾಜ ತಂತ್ರಿಯವರು ನಡೆಸಿದರು. ಪೂಜಾ ಕಾರ್ಯಗಳು ನಡೆದ ಬಳಿಕ ಬಂಟರ ಸಂಘ ಮುಂಬಯಿಯ ಆಯೋಜನೆಯಲ್ಲಿ ತುಳು ಕನ್ನಡಿಗರ ಸಹಕಾರದೊಂದಿಗೆ ಮೀರಾ ರೋಡಿನ ಠಾಕೂರ್ ಮಾಲ್ ಮತ್ತು ಪ್ರಸಾದ್ ಇಂಟರ್ ನ್ಯಾಷನಲ್ ಹೋಟೆಲ್ ಬಳಿ ಇರುವ ಭಾರತರತ್ನ ಗಾನ ಸಾಮ್ರಾಟ ಲತಾ ಮಂಗೇಶ್ಕರ್ ನಾಟ್ಯ ಗೃಹ ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು…

Read More

ದೇಶದ ನೂತನ ಸಂಸತ್‌ ಭವನ ಉದ್ಘಾಟನೆಗೆ ಸಿದ್ಧವಾಗಿದ್ದು, ಇದೇ ರವಿವಾರ ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕಟ್ಟಡ ಉದ್ಘಾಟನೆ ನಡೆಸಲಿದ್ದು, ಇದಕ್ಕೆ ವಿಪಕ್ಷಗಳ ಕಡೆಯಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಕಾಂಗ್ರೆಸ್‌ ನೇತೃತ್ವದಲ್ಲಿ 20 ರಾಜಕೀಯ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿವೆ. ಸಾಮಾನ್ಯವಾಗಿ ಇಂಥ ಕಟ್ಟಡಗಳನ್ನು ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯವರೇ ಉದ್ಘಾಟನೆ ಮಾಡಬೇಕು. ಆದರೆ ಈಗ ಪ್ರಧಾನಿಯವರು ಉದ್ಘಾಟನೆ ನಡೆಸುತ್ತಿದ್ದಾರೆ. ಪ್ರಧಾನಿಯವರು ಸರಕಾರದ ಮುಖ್ಯಸ್ಥರೇ ಹೊರತು, ದೇಶದ ಮುಖ್ಯಸ್ಥರಲ್ಲ. ಹೀಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೇ ಲೋಕಾರ್ಪಣೆ ಮಾಡಿಸಬೇಕಿತ್ತು ಎಂಬುದು ವಿಪಕ್ಷಗಳ ನಿಲುವು. ಈ ವಿಚಾರದಲ್ಲಿ ವಿಪಕ್ಷಗಳು ವೃಥಾ ರಾಜಕಾರಣ ಮಾಡುತ್ತಿವೆ ಎಂಬುದು ಬಿಜೆಪಿ ಆರೋಪ. ಈ ಹಿಂದೆಯೂ ಸಂಸತ್‌ನ ಕೆಲವು ವಿಭಾಗಗಳು ಮತ್ತು ಗ್ರಂಥಾಲಯವನ್ನು ಆಗಿನ ಪ್ರಧಾನಿಗಳೇ ಉದ್ಘಾಟನೆ ಮಾಡಿದ್ದರು. ಈಗೇಕೆ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಉದ್ಘಾಟನೆ ವಿಚಾರದಲ್ಲಿ ಈ ಮಟ್ಟದ ವಿವಾದ…

Read More

ಜಪ್ಪು ಬಂಟರ ಸಂಘ ವಾರ್ಷಿಕ ಮಹಾಸಭೆ ಇತ್ತೀಚಿಗೆ ಎಮ್ಮೆಕೆರೆಯ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ಪಿ. ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಗೋಪಿನಾಥ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಸಚ್ಚಿದಾನಂದ ಆಳ್ವ ಸ್ವಾಗತಿಸಿದರು. 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣಾಧಿಕಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ವಸಂತ ಶೆಟ್ಟಿ ನೆರವೇರಿಸಿದರು. ಸುನಿಲ್ ಶೆಟ್ಟಿ ಮುಳಿಹಿತ್ಲು ಅಧ್ಯಕ್ಷರಾಗಿ ಆಯ್ಕೆಯಾದರು. ಬಾಲಕೃಷ್ಣ ಶೆಟ್ಟಿ, ಸರಿತಾ. ಎಸ್. ಶೆಟ್ಟಿ ಉಪಾಧ್ಯಕ್ಷರು, ನಯನಾ ಪಿ. ಶೆಟ್ಟಿ ಕಾರ್ಯದರ್ಶಿ, ಸಚ್ಚಿದಾನಂದ ಆಳ್ವ ಜತೆ ಕಾರ್ಯದರ್ಶಿ, ಆಶಾ ಜೆ. ರೈ, ಕೆ. ಗೋಪಿನಾಥ್ ಶೆಟ್ಟಿ ಕೋಶಾಧಿಕಾರಿ, ಜಗದೀಶ್ ರೈ, ಬಾಲಮಣಿ ಜೆ. ಶೆಟ್ಟಿ ಕ್ರೀಡಾ ಕಾರ್ಯದರ್ಶಿ, ಪೂರ್ಣಿಮಾ ಎನ್. ಶೆಟ್ಟಿ, ರೇಖಾ ಆರ್ ನಾಯರ್ ಸಾಂಸ್ಕೃತಿಕ ಕಾರ್ಯದರ್ಶಿ, ಲಕ್ಶ್ಮಣ ಶೆಟ್ಟಿ ಗೌರವಾಧ್ಯಕ್ಷ, ಜೆ. ಜೀವನ್ ಶೆಟ್ಟಿ ಆಂತರಿಕ ಲೆಕ್ಕ ಪರಿಶೋಧಕ, ರಾಜ್ ಕುಮಾರ್ ಶೆಟ್ಟಿ ಪಿ, ಕೃಷ್ಣರಾಜ ಸುಲಾಯ, ರಾಜಶೆಟ್ಟಿ, ವಸಂತ…

Read More

ಸುಸರ್ಜಿತ ತಾಲೂಕು ಆಸ್ಪತ್ರೆ, ಇಂಡಸ್ಟ್ರಿ ನಿರ್ಮಾಣ, ನೀರಿನ ಸಮಸ್ಯೆಗೆ ಮುಕ್ತಿ, ಉದ್ಯೋಗಾವಕಾಶ ಸೃಷ್ಟಿ ಜೊತೆಗೆ ಕಂದಾಯ, ಸಬ್‌ ರಿಜಿಸ್ಟರ್‌ ಸೇರಿದಂತೆ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕತೆ ನೀಡಲು ಕನಸು ಕಂಡಿದ್ದೇವೆ ಅದರಂತೆ ಕೆಲಸ ಮಾಡಲಿದ್ದೇವೆ ಇದಕ್ಕಾಗಿ ಮತದಾರರು ಹೆಚ್ಚು ಅಂತರದಿಂದ ಗೆಲ್ಲಿಸಬೇಕು ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಡಾ| ಗೋವಿಂದಬಾಬು ಪೂಜಾರಿ ಹೇಳಿದರು. ಕಾರ್ಯಕರ್ತರಿಗಾಗಿಯೇ ನಾವು ಕಾರ್ಯಕರ್ತರ ಶ್ರಮ ತಿಳಿದಿದೆ ಅವರಿಗಾಗಿ ಜೀವನವೇ ಮೂಡಿಪಾಗಿಡುತ್ತೇವೆ. ಯಾವುದೇ ಸಮಸ್ಯೆಗಳಿದ್ದರು ಬಿಟ್ಟುಕೊಡುವುದೇ ಇಲ್ಲ, ಕ್ಷೇತ್ರದ ಜನಸಾಮಾನ್ಯರು, ತಾಯಿಯಂದಿರು ಮತ ನೀಡುವ ಮೂಲಕ ಸಾಮಾನ್ಯ ವ್ಯಕ್ತಿಯನ್ನು ಕೈ ಬೀಡುವುದಿಲ್ಲ ಎನ್ನುವುದನ್ನು ದೇಶಕ್ಕೆ ಸಾರಿ ಸಾರಿ ಹೇಳುವ ಅವಕಾಶ ನಮ್ಮ ಮುಂದಿದೆ ಎಂದರು. ನಿಮ್ಮೊಂದಿಗೆ ಚರ್ಚಿಸಿ ಅನುದಾನ ವಾರ್ಡ್‌ ಮತ್ತು ಗ್ರಾಮದಲ್ಲಿ ಪಕ್ಷದ ಬಗ್ಗೆ ಪಂ. ಸದಸ್ಯರು, ಕಾರ್ಯಕರ್ತರು ಇಟ್ಟಿರುವ ವಿಶ್ವಾಸವೇ ಗೆಲುವಿಗೆ ಕಾರಣವಾಗಲಿದೆ. ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಪಂ.ಸದಸ್ಯರು, ಕಾರ್ಯಕರ್ತರು ಯೋಚಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯೋಜನೆಗಳು ಏನು ಬರುತ್ತದೆ, ಅನುದಾನಗಳನ್ನು ಎಲ್ಲಿ, ಹೇಗೆ ನೀಡಬೇಕು…

Read More

ಪ್ರತಿ ವರ್ಷದಂತೆ ಪುಣೆ ಕನ್ನಡ ಸಂಘದ ಪುರಂದರದಾಸರ ಕೀರ್ತನೆ ಸ್ಪರ್ಧೆಯು ಸಂಘದ ಕನ್ನಡ ಹೈಸ್ಕೂಲಿನ ದಿ. ಗುಂಡುರಾಜ್ ಎಂ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕುಶಾಲ್ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಆರಂಭವಾದ ಕಾರ್ಯಕ್ರಮದಲ್ಲಿ,ಮೂರು ವಿಭಾಗಗಳಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. ಕನ್ನಡ ಅಲ್ಲದೇ ತೆಲುಗು, ತಮಿಳು ಹಾಗೂ ಮರಾಠಿ ಭಾಷೆಯ ಮಕ್ಕಳು ಭಾಗವಹಿಸಿದ್ದರು. 5 ವರ್ಷದ ಪುಟಾಣಿ ಮಗು ವಿನಿಂದ 76 ವರ್ಷದ ಮಹಿಳೆ ಯ ವರೆಗಿನ ಕನ್ನಡಿಗರು, ತೆಲುಗು, ತಮಿಳು ಹಾಗೂ ಮರಾಠಿ ಭಾಷಿಕರು ದಾಸರ ಪದ ಹಾಡಿ, ಸಂಗೀತಕ್ಕೆ ಭಾಷೆ, ಜಾತಿಯ ಭೇದವಿಲ್ಲ ಎಂದು ತೋರಿಸಿಕೊಟ್ಟರು.ಕನ್ನಡ ಸಂಘದ ಅಧ್ಯಕ್ಷರಾದ ಕುಶಲ ಹೆಗ್ಡೆ ಅವರು ಮಕ್ಕಳ ಹಾಡುಗಳನ್ನು ಕೇಳಿ ಆನಂದಿಸಿದರು. ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು ಇಂದಿರಾ ಸಾಲಿಯಾನ್ ಮತ್ತು ನಿರ್ಣಾಯಕರು ವಿತರಿಸಿದರು.…

Read More

ನಾಲ್ಕು ವರ್ಷದ ಪುಟ್ಟ ಬಾಲೆ ಇವಳು. ಆದರೆ, ಸಾಧನೆಯ ಪಟ್ಟಿ ನೋಡುತ್ತ ಹೋದರೆ, ಎಂತಹ ವಯಸ್ಕರೂ ನಾಚುವಂತಿದೆ. ಸರಿಯಾಗಿ ಹೆಜ್ಜೆ ಇಟ್ಟು ನಡೆಯುವುದೇ ಕಷ್ಟ ಎನ್ನುವ ಈ ವಯಸ್ಸಿನಲ್ಲಿ ಇಲ್ಲಿನ ಶಾರ್ವಿ, ಸಾಧನೆಗಳ ಮೆಟ್ಟಿಲುಗಳನ್ನು ಹತ್ತುತ್ತಲೇ ಇದ್ದಾಳೆ. ಇಂಡಿಯನ್‌ ಬುಕ್‌ ಆಫ್‌ ರಿಕಾರ್ಡ್, ಇಂಡಿಯಾ ಸ್ಟಾರ್‌ ಐಕಾನ್‌ ಕಿಡ್ಸ್ ಅಚೀವ್‌ಮೆಂಟ್ ಅವಾರ್ಡ್‌, ಮಾಜಿಕ್‌ ಬುಕ್‌ ಆಫ್‌ ರಿಕಾರ್ಡ್‌ ಬೆಸ್ಟ್‌ ಅಚೀವರ್ಸ್‌ ಅವಾರ್ಡ್‌, ಜಾಕಿ ಟ್ಯಾಲೆಂಟ್ ಐಕಾನ್‌ ಅವಾರ್ಡ್‌, ಗ್ರ್ಯಾಂಡ್‌ ಏಷ್ಯನ್‌ ಬುಕ್‌ ಆಪ್‌ ವರ್ಲ್ಡ್‌ ರಿಕಾರ್ಡ್‌, ವಂಡರ್‌ ಬಡ್ಡೀಸ್‌ ಗೋಲ್ಡನ್‌ ಐಕಾನ್‌ ಅವಾರ್ಡ್‌, ಕಾರ್ನಿವಲ್ ಫೆಸ್ಟ್ ಇಂಜ್ ಜಿನಿಯಸ್ ಟ್ಯಾಲೆಂಟ್ ಅವಾರ್ಡ್, ಯೂಥಿಸ್ತಾನ್‌ ಮ್ಯಾಥಮ್ಯಾಟಿಕಲ್‌ ಚಾಲೆಂಜ್‌ ಗೋಲ್ಡನ್‌ ಮೆಡಲ್‌ ಹೀಗೆ ಹತ್ತು ಹಲವು ದಾಖಲೆಗಳು ಶಾರ್ವಿ ಹೆಸರಿನಲ್ಲಿ ದಾಖಲಾಗಿವೆ. ಪಂಜುರ್ಲಿ ಗ್ರೂಪ್‌ನ ರವಿಕಾಂತ್‌ ಶೆಟ್ಟಿ ಹಾಗೂ ದಿವ್ಯಶ್ರೀ ಶೆಟ್ಟಿ ದಂಪತಿಯ ಪುತ್ರಿ ಶಾರ್ವಿಗೆ ಸದ್ಯ ನಾಲ್ಕು ವರ್ಷ ವಯಸ್ಸು. ಈಕೆ 10 ಬಣ್ಣಗಳು, 13 ಆಕೃತಿಗಳು, 15 ಕ್ರೀಡೆಗಳು, 26 ಕಾರು…

Read More