Author: admin
ಶಿರ್ವ ಪದವು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಿರ್ವ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ರತನ್ ಕುಮಾರ್ ಶೆಟ್ಟಿಯವರ ಅಭಿನಂದನಾ ಸಮಾರಂಭವು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ಶಿರ್ವ ಪದವು ಸಮಾಜ ಮಂದಿರದಲ್ಲಿ ನಡೆಯಿತು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ ಮತ್ತು ಸುನಾಲಿನಿ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಮಾತನಾಡಿ ಯುವ ಕಾರ್ಯಕರ್ತ ರತನ್ ಶೆಟ್ಟಿಯವರ ಅಧಿಕಾರವಧಿಯಲ್ಲಿ ಗ್ರಾಮವು ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲಿ. ಗ್ರಾಮದ ಜನತೆಗೆ ಉತ್ತಮ ಸೇವೆ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಗ್ರಾ.ಪಂ. ಸದಸ್ಯ ನವೀನ್ ಕುಮಾರ್, ನಂದಳಿಕೆ ಚಾವಡಿ ಮನೆಯ ಸುಹಾಸ್ ಹೆಗ್ಡೆ, ಶಿರ್ವ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಉದ್ಯಮಿಗಳಾದ ಸುಧೀರ್ ಶೆಟ್ಟಿ ಅಟ್ಟಿಂಜ, ರಾಜೇಶ್ ಶೆಟ್ಟಿ ಶಬರಿ, ರಾಜೇಶ್ ಪೂಜಾರಿ ಭಾಗವಹಿಸಿದ್ದರು. ಶೇಖರ ಶೆಟ್ಟಿ ನಡಾಯಿ, ನವೀನ್ ಶೆಟ್ಟಿ ಗಂಗೆಜಾರು, ರಮೇಶ್ ಶೆಟ್ಟಿ ಕಡಂಬು,…
ಬೆಳಗಾವಿ ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟವು ಸಿ.ಪಿ.ಈಡ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಉತ್ತರ ವಿಭಾಗದ ಶಾಸಕರಾದ ಆಸಿಪ್ ಶೇಟ್ ಕ್ರೀಡೋತ್ಸವವನ್ನು ಉದ್ಘಾಟಿಸಿ, ಬಂಟ ಸಮಾಜದ ಕಾರ್ಯವೈಖರಿ, ನಿರಂತರ ಶ್ರಮ, ಅವಿರತವಾದ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡೋತ್ಸವದ ವಿವಿಧ ವಿಭಾಗಗಳಲ್ಲಿ ಕ್ರಿಕೆಟ್, ವಾಲಿಬಾಲ್, ತ್ರೋ ಬಾಲ್, ಹಗ್ಗ ಜಗ್ಗಾಟ, ರನ್ನಿಂಗ್ ರೇಸ್ ಇನ್ನಿತರ ಸ್ಪರ್ಧೆಗಳು ಇದ್ದವು. ಪುರುಷರು, ಮಹಿಳೆಯರು, ಮಕ್ಕಳು ಅತೀ ಉತ್ಸಾಹದಿಂದ ಭಾಗವಹಿಸಿದರು. ಕ್ರೀಡೋತ್ಸವದಲ್ಲಿ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾದ ವಿಠ್ಠಲ ಎಸ್ ಹೆಗಡೆ, ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಸನ್ನ ಶೆಟ್ಟಿ, ಕಾರ್ಯದರ್ಶಿ ಚೇತನ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಆನಂದ್ ಎನ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕ್ರೀಡಾ ಸಮಿತಿಯ ಉಳ್ತೂರು ಸಂತೋಷ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಕೀರ್ತಿಪ್ರಸಾದ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾದ ಪ್ರಭಾಕರ್ ಶೆಟ್ಟಿ, ಹಿರಿಯ ಸದಸ್ಯರಾದ ಉದಯ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ…
ವಿದ್ಯಾಗಿರಿ: ಸಜ್ಜಾದ ‘ಸಿರಿ ಸೊಬಗಿನ ಸಾಂಸ್ಕೃತಿಕ ನಗರಿ’ ವಿದ್ಯಾಗಿರಿ (ಮೂಡುಬಿದಿರೆ): ಸಾಂಸ್ಕೃತಿಕ ಸಿರಿ-ಸೊಬಗಿನ, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ, ಕಣ್ಮನಗಳಿಗೆ ರಸದೌತಣ ನೀಡುವ, ಪ್ರತಿ ವರ್ಷವೂ ವಿಭಿನ್ನ ಹಾಗೂ ಅನನ್ಯವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ಗೆ ವಿದ್ಯಾಗಿರಿ ಸಜ್ಜಾಗಿದೆ. ಅಬಾಲವೃದ್ಧರಾಗಿ ಸರ್ವರ ಪಂಚೇಂದ್ರಿಯಗಳಿಗೆ ರಸದೌತಣ ನೀಡುವ, ಮನ ತಣಿಸುವ ವಿರಾಸತ್, ಈ ಬಾರಿ ಡಿ.14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿವೆ. ಸಮೀಪದ ಕೃಷಿಸಿರಿ ವೇದಿಕೆ ಸೇರಿದಂತೆ ಆವರಣದಲ್ಲಿ ‘ಸಪ್ತ ಮೇಳ’ಗಳ ಸಂಗಮವು ಜನರಿಗೆ ಖುಷಿ ನೀಡಿದರೆ, ದೀಪಾಲಂಕಾರ, ಕಲಾಕೃತಿಗಳು, ಪುಷ್ಪ- ಫಲಗಳಿಂದ ನಂದನವನವೇ ಸೃಷ್ಟಿಯಾಗಿದೆ.‘ನೋಡಲೆರಡು ಕಣ್ಣು ಸಾಲದಮ್ಮಾ…’ ಎಂದು ವಿದ್ಯಾಗಿರಿಯು ಕೈ ಬೀಸಿ ಕರೆಯುತ್ತಿದೆ. ವಿದ್ಯಾಗಿರಿ ‘ಸಿರಿ ಸೊಬಗಿನ ಸಾಂಸ್ಕೃತಿಕ ನಗರಿ’ಯೇ ಎಂಬ ಅಚ್ಚರಿ ಮೂಡುವಂತಿದೆ. ರಥಾರತಿ:ಈ ಬಾರಿಯ ವಿರಾಸತ್ನ ವಿಶೇಷ ‘ರಥಾರತಿ’. ಮುಖ್ಯ ವೇದಿಕೆಯ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ ‘ವಿಶ್ವ ಬಂಟರ ಸಮ್ಮೇಳನ -2023’ ರ ಪ್ರಯುಕ್ತ ಅ.28 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ ‘ವಿಶ್ವ ಬಂಟರ ಕ್ರೀಡಾ ಕೂಟ ‘ ಹಾಗೂ ಅ.29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಒಕ್ಕೂಟದಿಂದ ಅ.28 ರಂದು ಶನಿವಾರ ಮತ್ತು ಅ.29 ರಂದು ರವಿವಾರ ಉಡುಪಿಯಲ್ಲಿ ವಿಶ್ವ ಬಂಟರ ಕ್ರೀಡಾ ಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ತಾರೆಯರು, ಅಂತಾರಾಷ್ಟ್ರೀಯ…
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉದ್ಯೋಗವನ್ನರಸಿಕೊಂಡು ಬಂದ ತುಳು ಕನ್ನಡಿಗರು ಸಮಾಧಾನಕರ ಉದ್ಯೋಗ ಗಿಟ್ಟಿಸಿಕೊಂಡ ಮೇಲೆ ಅಲ್ಲಿಗೇ ಸುಮ್ಮನಾಗುವುದಿಲ್ಲ. ಸದಾ ಉತ್ತಮ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಈ ಮಾತು ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ವ್ಯಾಪಾರ ವ್ಯವಹಾರಗಳಿರಲಿ, ಮನರಂಜನೆಯ ಕ್ಷೇತ್ರಗಳಿರಲಿ ಅಥವಾ ವೈದ್ಯಕೀಯ, ತಾಂತ್ರಿಕ, ಕೈಗಾರಿಕಾ ವಿಭಾಗಗಳೇ ಇರಲಿ ತಾವು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಆರ್ಥಿಕ ಭದ್ರತೆ ಹೊಂದುವವರೆಗೂ ಸಾಧನೆ ಮುಂದುವರಿಯುತ್ತದೆ. ಇನ್ನು ಕೆಲವು ಪದವೀಧರ ಯುವಕರು ತಮ್ಮ ಶಿಕ್ಷಣ ಅರ್ಹತೆಗಳಿಗೆ ಸರಿ ಹೊಂದುವ ಸಾಕಷ್ಟು ಆದಾಯ ವರಮಾನ ತರುವ ಉದ್ಯೋಗ, ಸಿಕ್ಕಿದ ಮೇಲೆ ತಮಗೆ ಬಾಲ್ಯದಿಂದಲೂ ಇದ್ದ ಆಸಕ್ತಿ ಹವ್ಯಾಸಗಳಿಗೆ ಸೂಕ್ತ ವೇದಿಕೆ ಸಿಕ್ಕುವ ನಿರೀಕ್ಷೆ ಹೊಂದಿರುತ್ತಾರೆ. ಸಿಕ್ಕಿತೆಂದರೆ ಅದನ್ನು ಇನ್ನಷ್ಟು ಬೆಳೆಸಿಕೊಂಡು ನಗರದ ಏಕತಾನತೆಯ ಬದುಕು ಬೇಸರ ತರದಂತೆ ತಮ್ಮ ಹವ್ಯಾಸಗಳಲ್ಲಿ ಆನಂದ ಕಾಣುತ್ತಾರೆ.. ಇನ್ನು ಕೆಲವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಿಕೊಂಡು ಸ್ನಾತಕೋತ್ತರ ಪಿ ಎಚ್ ಡಿ ಅಧ್ಯಯನ ಸಂಶೋಧನೆ ನಡೆಸಿ ಯಶಸ್ಸು ಸಂಪಾದಿಸಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ವಿಶೇಷ…
ಅಖಿಲ ಭಾರತ ತುಳು ಒಕ್ಕೂಟದ ಸಭೆಯು ಒಕ್ಕೂಟದ ಅಧ್ಯಕ್ಷರಾದ ಎ ಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ನಡೆಯಿತು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿಗಳಾದ ಕರುಣಾಕರ್ ಶೆಟ್ಟಿಯವರು ಉಳ್ಳಾಲ ತಾಲೂಕು ಸಮಿತಿಯ ರಚನೆ ಬಗ್ಗೆ ಮಾಹಿತಿ ನೀಡಿ, ಪ್ರಥಮವಾಗಿ ಓರ್ವ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದರು. ಅದರಂತೆ ಕೆ. ಟಿ ಸುವರ್ಣರ ಸೂಚನೆಯಂತೆ ನಿವೃತ್ತ ಮುಖ್ಯ ಉಪಾಧ್ಯಾಯರಾದ ಕೆ. ರವೀಂದ್ರ ರೈ ಅವರನ್ನು ಅಧ್ಯಕ್ಷರನ್ನಾಗಿ, ಆನಂದ ಕೆ ಅಸೈಗೋಳಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿತು. ನಂತರ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಶಿವರಾಮ ಶೆಟ್ಟಿ ಹಾಗೂ ವಿಜೇತ್ ಮಂಜನಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಭಾಧ್ಯಕ್ಷರಾದ ಎ.ಸಿ…
ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಉದ್ಯಮಿ, ದಾನಿ ಹಾಗೂ ಸಮಾಜ ಸೇವಕ ಎಂ.ಆರ್. ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಶ್ರೀಯುತ “ಬಂಜಾರ ಗೋಲ್ಡ್ ಪಿಂಚ್ ಕೊರಂಗ್ರಪಾಡಿ ಪ್ರಕಾಶ್ ಕೆ ಶೆಟ್ಟಿ” ಅವರು 25 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಮಾರ್ಗದರ್ಶಿಗಳಾದ ಶ್ರೀಯುತ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ಶ್ರೀಯುತ ಉಪೇಂದ್ರ ಶೆಟ್ಟಿ ಮತ್ತು ಭಾರತಿ ಶೆಟ್ಟಿ ಅವರ ಮುಖಾಂತರ ಶ್ರೀಯುತ ಪ್ರಕಾಶ್ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿದರು. ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಪ್ರಕಾಶ್ ಶೆಟ್ಟಿ ಅವರಿಗೆ ಕಟ್ಟಡದ ಬಗ್ಗೆ ಮಾಹಿತಿಯನ್ನು ಅಧ್ಯಕ್ಷರು ನೀಡಿದರು. ನಂತರ ಪ್ರಕಾಶ್ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ದೇಶ ವಿದೇಶದಲ್ಲಿರುವ ಸಮಸ್ತ ಬಂಟರ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಾ ಹಾಗೂ ಬಂಟರ ಸಮುದಾಯದ…
“ಇರೋದು ಒಂದೇ ಬದುಕು, ನಮ್ ಇಷ್ಟದಂಗೆ ನಾವ್ ಬಾಳ್ಬೇಕು, ಎಲ್ಲದ್ರಲ್ಲೂ ಎಲ್ಲದಕ್ಕೂ ಹೊಂದಾಣಿಕೆ ಮಾಡ್ಕೊಂಡ್ ಬಾಳಕಾಗಲ್ಲ. ಎಷ್ಟು ದಿನ ಇರ್ತಿವೋ ಗೊತ್ತಿಲ್ಲ! ಎಲ್ಲದಕ್ಕೂ ಅನುಸರಿಸಿಕೊಂಡು ಹೋಗು ಅನ್ನೋ ಮಾತನ್ನೇ ಓಬಿರಾಯನ ಕಾಲದಿಂದಲೂ ಕೇಳಿ-ಕೇಳಿ ಸಾಕಾಗಿದೆ. ನನಗೆ ಸ್ವತಂತ್ರ ಬೇಕು, ನನ್ನ ಬದುಕು ನನ್ನ ನಿರ್ಧಾರ ಅಷ್ಟೇ!’. ಇತ್ತೀಚಿನ ದಿನಗಳಲ್ಲಿ ತನ್ನದೇ ಬದುಕು ಕಟ್ಟಿಕೊಳ್ಳಲು ಹಂಬಲಿಸುವ ಮಕ್ಕಳು ಹೇಳುವ ಮಾತುಗಳಿವು. ಸ್ವ-ಇಚ್ಛೆಯ ಬದುಕಿನ ಹಂಬಲ ಅವರದು. ಆದರೆ ಹಿರಿಯರು ಹೇಳುವ ಕಿವಿಮಾತು, “ನೋಡಿ ಮಕ್ಕಳೇ ನೀವು ಬೆಳೆಯುತ್ತಿದ್ದೀರಿ, ಸ್ವಲ್ಪ ತಗ್ಗಿ ಬಗ್ಗಿ ನಡೆಯಬೇಕು, ಯಾರನ್ನೂ ಎದುರು ಹಾಕಿಕೊಳ್ಳಬಾರದು. ನೀವಂತೂ ನಿಮ್ಮದೇ ರೂಲ್ಸ್ ರೆಗ್ಯುಲೇಷನ್ಸ್ ಅಂತ ಫಾಲೋ ಮಾಡಿ, ಸುಮ್ನೆ ಇಲ್ಲ ಸಲ್ಲದ್ದರ ಬಗ್ಗೆ ದಾವಂತ ಪಡುತ್ತೀರಿ’ ಎನ್ನುವುದು ಸರ್ವೇಸಾಮಾನ್ಯ ವಿಷಯವಾಗಿ ಹೋಗಿದೆ. ಅದರಲ್ಲೂ ಮದುವೆಯಾಗಿ ಹೋಗುವ ಹೆಣ್ಣು ಮಕ್ಕಳ ಪಾಲಿಗೆ ಹೊಂದಾಣಿಕೆಯ ಮಹಾಮಂತ್ರವನ್ನು ಪಠಿಸಿಯೇ ಕಳಿಸುವುದು. ನಮಗೆಲ್ಲಾ ಗೊತ್ತಿರುವಂತೆ ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಬೆರೆತು ಬಾಳಬೇಕಾದುದು ಬದುಕಿನ ನಿಯಮ. ಆದರೆ ಹೊಂದಿಕೊಂಡು…
ತಾಯಿ ವಾತ್ಸಲ್ಯದ , ತ್ಯಾಗದ ವಿಶಿಷ್ಟ ಸಾಹಿತ್ಯವಿರುವ ಹಾಡು ”ಮತ್ತೇನಿಲ್ಲಾ” ಇದೆ ತಿಂಗಳ 17 ರಂದು ಸಂಜೆ 7.30 ಕ್ಕೆ ಐಲೇಸಾ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ . ಮುಂಬೈ ರಂಗ ಮತ್ತು ಧ್ವನಿ ಕಲಾವಿದ ಸುರೇಂದ್ರ ಮಾರ್ನಾಡ್ ಅವರ ಸಾಹಿತ್ಯದ ಈ ಹಾಡನ್ನು ಪ್ರಸಿದ್ಧ ಗಾಯಕ ರಾಮಚಂದ್ರ ಹಡಪದ ಸಂಗೀತ ಸಂಯೋಜಿಸಿ ತಾನೇ ಹಾಡಿದ್ದಾರೆ . ಬೆಂಗಳೂರಿನ ಉದ್ಯಮಿ ಕಾರ್ಕಳ ರೆಂಜಾಳದ ವಲೆರಿಯನ್ ರಾಡ್ರಿಗಸ್ ಹಾಡನ್ನು ಪ್ರಾಯೋಜಿಸಿದ್ದು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆಯ ಮೂಲಕ ಸಂಗೀತ ಪ್ರಿಯರಿಗೆ ಸಮರ್ಪಿಸಿದ್ದಾರೆ. ಸಚ್ಚು ಮಾರ್ನಾಡ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು , ಛಾಯಾಗ್ರಹಣದಲ್ಲಿ ಸಂದೀಪ ಮೂಡಬಿದ್ರೆ ಅವರು ತಮ್ಮ ಕೈ ಚಳಕ ತೋರಿಸಿದ್ದಾರೆ ಗೋಪಾಲ್ ಪಟ್ಟೆ ಜಯಂತ್ ಐತಾಳ್ , ವಿನಾಯಕ್ ಮಲ್ಯ ಸಂಕಲನದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಸಾಂಸಾರಿಕ ಜೀವನದಲ್ಲಿ ಹೆಣ್ತನದ ,ತಾಯ್ತನದ ತ್ಯಾಗವನ್ನು ವಿಸ್ತರಿಸುತ್ತಾ ಹೋಗುವ ಈ ಹಾಡು ತಾಯಿ ತನಗಾಗಿ ಏನನ್ನೂ ಬಯಸದೆ ಎಲ್ಲವನ್ನೂ ಮಕ್ಕಳ…
ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಸಿದ್ದಿ ವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆಪ್ಟೆಂಬರ್ 19 ರಿಂದ 21 ರವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸರ್ವ ಬಂಟ ಸಮಾಜದ ಸಹಕಾರದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಗಣೇಶೋತ್ಸವ ಪ್ರಯುಕ್ತ ಪ್ರತಿಭಾನ್ವೇಷಣೆಯಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದರ ಪೂರ್ವಭಾವಿ ಸಭೆ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ ವಹಿಸಿದ್ದರು. ಕೊರೋನದಿಂದ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ ನಾವು 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಎಲ್ಲರನ್ನೂ ಸೇರಿಸಿ ಆಚರಿಸುತ್ತೀದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಸಮುದಾಯದ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸೇರಿಸಲು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇದಕ್ಕೆ ಸಮಿತಿ, ಉಪ ಸಮಿತಿಗಳನ್ನು ರಚಿಸಿದ್ದೇವೆ.…