Author: admin
ಐಲೇಸಾ ಸಂಸ್ಥೆ ವತಿಯಿಂದ ತಾಂತ್ರಿಕ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವ ‘ಕೃತಕ ಬುದ್ಧಿಮತ್ತೆ ಮುಂದಿನ ಅನಿವಾರ್ಯತೆ’ ವಿಶೇಷ ಕಾರ್ಯಕ್ರಮವು ಮಾರ್ಚ್ 2 ರಂದು ರಾತ್ರಿ 7.30 ರಿಂದ ನಡೆಯಲಿದೆ. ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಶನ್ ಟೆಕ್ನಾಲಜಿಯ ಸಂಶೋಧನ ವೃತ್ತಿಯ ಯುವ ಪ್ರತಿಭೆ ಪ್ರದ್ಯೋಶ್ ಹೆಗ್ಡೆ ಮತ್ತು ಸಿಂಗಾಪುರದ ಎಚ್ಯೂ ಕನೆಕ್ಷನ್ಸ್ ಪ್ರೈ.ಲಿ. ನ ಫ್ರಿನ್ಸಿಪಲ್ ಕನ್ಸಲ್ಟೆಂಟ್, ಉಡುಪಿ ಮೂಲದ ಉದ್ಯಮಿ ರಾಜೇಶ್ ಆಚಾರ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಉಪನ್ಯಾಸ ನೀಡಲಿದ್ದಾರೆ. ವೇಗವಾಗಿ ಬದಲಾಗುತ್ತಿರುವ ಭಾರತದಲ್ಲಿ ಆ ವೇಗಕ್ಕೆ ಹೊಂದಿಕೊಂಡು ನಮ್ಮ ವೃತ್ತಿ- ಪ್ರವೃತ್ತಿಗಳನ್ನು ಬದಲಾಯಿಸಿಕೊಳ್ಳುವುದು ಇಂದಿನ ಅತ್ಯಂತ ಅಗತ್ಯಗಳಲ್ಲಿ ಒಂದು. ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಯುವ ಮಟ್ಟದಲ್ಲಿ ಮುಂದುವರೆದು ವಿಶ್ವಕ್ಕೆ ಬೆರಗನ್ನು ಹುಟ್ಟಿಸಿತು ಅನ್ನುವುದು ಈಗ ಇತಿಹಾಸ. ಮುಂದಿನ ದಿನಗಳು ತಾಂತ್ರಿಕತೆ ಜತೆಗೆ ಅತ್ಯಂತ ವೇಗವಾಗಿ ಬದಲಾಗುವಂತಹದು. ಯುವ ಜನರ ತುಂಬಿರುವ ಭಾರತ ಈ ಬದಲಾವಣೆಗಳನ್ನು ಅಪ್ಪಿಕೊಳ್ಳುವುದು ಬಲು ಸುಲಭ. ವೃತ್ತಿ ಜತೆಗೆ ಸಂಗೀತ- ಸಾಹಿತ್ಯ ಮೊದಲಾದ ಪ್ರವೃತ್ತಿಯಲ್ಲಿಯೂ…
ಆಫ್ರಿಕಾ ಖಂಡದ ತಾಂಜಾನಿಯ ದೇಶದಲ್ಲಿ ನಡೆದ Taliss-IST ಆಹ್ವಾನಿತರ ಅಂತಾರಾಷ್ಟ್ರೀಯ ಈಜು ಚಾಂಪಿಯನ್ಶಿಪ್ ನಲ್ಲಿ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ನ ಸದಸ್ಯ ಚಿಂತನ್ ಎಸ್. ಶೆಟ್ಟಿ 15 – 16 ವರ್ಷದ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿ 50 ಮತ್ತು 100 ಮೀಟರ್ ಪ್ರೀಸ್ಟೈಲ್, 50 ಮೀಟರ್ 100 ಮೀಟರ್ ಬಟರ್ ಫ್ಲೈ ಹಾಗೂ 100 ಮೀಟರ್ ವೈಯಕ್ತಿಕ ಮಿಡ್ಲೆ ಈಜು ಸ್ಪರ್ಧೆಗಳಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಗಳು, 400 ಮೀಟರ್ ವೈಯಕ್ತಿಕ ಮಿಡ್ಲೆ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 4+50 ಮೀಟರ್ ಮಿಡ್ಲೆ ರಿಲೆಯಲ್ಲಿ ಕಂಚಿನ ಪದಕಗಳೊಂದಿಗೆ 15-16 ವರ್ಷದ ಬಾಲಕ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದುಕೊಂಡು ದೇಶಕ್ಕೆ, ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಚಿಂತನ್ ಎಸ್. ಶೆಟ್ಟಿ ಇವರು ಮಂಗಳೂರಿನ ಬಂಟ್ಸ್ ಹಾಸ್ಟೆಲ್ನಲ್ಲಿರುವ ಶ್ರೀ ರಾಮಕೃಷ್ಣ ಹೈಸ್ಕೂಲ್ ವಿದ್ಯಾರ್ಥಿಯಾಗಿರುತ್ತಾರೆ. ಇವರು ಕ್ಲಬ್ ನ ಹಿರಿಯ ಈಜು ತರಬೇತುದಾರರಾದ ಎಂ. ಶಿವಾನಂದ ಗಟ್ಟಿ ಇವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಮಟ್ಟದ…
ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ಸಂತೆಕಟ್ಟೆ ಲಕ್ಷ್ಮೀನಗರದ ಗ್ರೀನ್ ಎಕರ್ಷ್ನಲ್ಲಿ ಜರಗಿತು. ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಉಡುಪಿ ಡಯಾಸಿಸ್ನ ವಿಕಾರ್ ಜನರಲ್ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು. ಈಶ ವಿಠಲದಾಸ ಶ್ರೀಗಳು ಮಾತನಾಡಿ, ಸಂಘಟನೆಗಳಿಂದ ಪರಿಹಾರ ಸಾಧ್ಯವಿದೆ. ಕಾರ್ಯಕ್ರಮಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಎಲ್ಲಾ ಕ್ಯಾಟರಿಂಗ್ ಸಂಸ್ಥೆಗಳು ಉತ್ತಮ ಹೆಸರು ಗಳಿಸಿ ಅಭಿವೃದ್ಧಿ ಹೊಂದಬೇಕು ಎಂದರು. ಮಾಲಕರು, ನೌಕರರ ಮಕ್ಕಳು ಶಿಕ್ಷಣ, ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು. ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ, ಜನರ ಹಸಿವು ನೀಗಿಸುವ, ಊಟ ಕೊಡುವ ಪುಣ್ಯದ ಕಾರ್ಯವನ್ನು ಕ್ಯಾಟರಿಂಗ್ ಸಂಸ್ಥೆಗಳು ನಿರ್ವಹಿಸುತ್ತಿವೆ. ಎಲ್ಲರೂ ಸಂಘಟಿತರಾಗಿದ್ದರೆ ಸಾಧನೆ ಮಾಡಲು ಸಾಧ್ಯ. ಉತ್ತಮ ಊಟೋಪಚಾರದ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲಾ ಕ್ಯಾಟರಿಂಗ್ ಸಂಸ್ಥೆಗಳು ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಹಾರೈಸಿದರು. ಸಂಘದ ಪ್ರಮುಖರಾದ ವಿವಿಧ ಕ್ಯಾಟರಿಂಗ್ ಸಂಸ್ಥೆಯ ಮಾಲಕರಾದ…
ಅವರನ್ನೊಮ್ಮೆ ಕಣ್ಣೆದುರು ಕಂಡಾಗ ತುಳುವರ ನಂಬಿಕೆಯ ದೈವಾರಾಧನೆಯ ಯಜಮಾನಿಕೆಗಾಗಿಯೇ ಜನ್ಮತ್ತಳೆದವರೆಂಬ ಭಾವ. ಅಜಾನುಬಾಹು ಸದೃಢ ದೇಹ, ಅದಕೊಪ್ಪುವ ಸುಂದರ ಮುಖ ಚರ್ಯೆ, ಗಂಭೀರ ತೀಕ್ಷ್ಣ ಕಣ್ಣನೋಟ. ಶೋಭೆಯಂತಿರುವ ಆ ದಪ್ಪ ಮೀಸೆ, ಅದರಂಚಿನ ತುಟಿಗಳೆಡೆಯ ತಿಳಿ ನಗುವಿನ ಸ್ಪರ್ಶ. ಘನಸ್ತಿಗೆಯ ಹೆಜ್ಜೆಯ ನಡಿಗೆ. ತುಳುವರ ಹೆಗ್ಗುರುತಿನ ದಿರಿಸು. ಭೂಷಣಪ್ರಾಯವಾದ ಮಡಿ ಕಚ್ಚೆ, ತೋಳ ಸುತ್ತುವರಿದ ಅಡ್ಡ ಶಾಲು. ಕೈತಟ್ಟಿನಲಿ ಹೊಳೆಯುವ ಅಧಿಕಾರದ ಸ್ವರ್ಣ ಮುದ್ರೆ. ಹಿರಿತನದ ಮುಡಿಗೊಪ್ಪುವ ಶುಭ್ರ ಮುಂಡಾಸು. ವ್ಯಕ್ತಿಯ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೆಚ್ಚಿನ ವರ್ಣನೆ ಬೇಕೇ? ಗೌರವ ಭಕ್ತಿ ಏಕ ಕಾಲಕ್ಕೆ ಮೇಲೈಸಿ, ತನ್ನಿಂತಾನೆ ಕರಮುಗಿದು ಪಾದ ಸ್ಪರ್ಶಿಸಿ ಆ ಕೈಗಳಿಂದ ಆಶೀರ್ವಾದದ ಅಪ್ಪುಗೆಯನ್ನು ಪಡೆಯಬೇಕೆನ್ನುವ ತವಕ. ಗಡುಸು ಧ್ವನಿಯಲ್ಲಿ “ಎಡ್ಡೆಯಾಲ ಮಗ ” ಎನ್ನುವ ಕಾಳಜಿಯ ಮಾತು. “ಮಾತ ಸಮ ಆಪುಂಡು” ಎನ್ನುವ ನುಡಿಯೊಂದಿಗೆ ಆ ಕೈಗಳಿಂದ ಪಡೆದ “ಉಳ್ಳಾಯನ” ಎರಡೆಲೆ ಗಂಧದ ಅನುಗ್ರಹ. ಬರವಣಿಗೆ, ಮಾತುಗಳಿಗೆ ನಿಲುಕದ, ಹೃದಯಕ್ಕೆ ಬಲು ಹತ್ತಿರದ ಧೀಮಂತಿಕೆಯ ನಿಜರೂಪ, ಯೋಗ…
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಣ್ಣ ಹಳ್ಳಿ ಹಾರಾಡಿ ಗ್ರಾಮದಲ್ಲಿ ಜನಿಸಿದ ಮಂದರ ಶೆಟ್ಟಿ ಇವತ್ತು ಬ್ರಹ್ಮಾವರ ಪರಿಸರದಲ್ಲಿ ಕೊಡುಗೈ ದಾನಿಯಾಗಿ ಗುರುತಿಸಿಕೊಂಡವರು. ಪಡು ಹಾರಾಡಿಯ ಮೇಲ್ಪಾಲು ಮನೆ ಅಂತಯ್ಯ ಶೆಟ್ಟಿ ಹಾಗೂ ಬಾರ್ಕೂರು ಹೊಳೆ ಹೊದ್ದಿನಮನೆ ಪ್ರೇಮ ಶೆಡ್ತಿಯವರ ಆರು ಜನ ಮಕ್ಕಳ ತುಂಬು ಸಂಸಾರದಲ್ಲಿ ನಾಲ್ಕನೇಯವರಾಗಿ ಜನಿಸಿದರು. ಊರಿನ ಗರಡಿಯ ಮೊಕ್ತೇಸರರ ಕುಟುಂಬದವರಾದ ಪ್ರತಿಷ್ಠೆ ಇದ್ದರೂ ಕೂಡ ವ್ಯವಸಾಯದ ಆದಾಯದ ಮೇಲೆ ಸಂಸಾರ ಸಾಗಬೇಕಾದ ಅನಿವಾರ್ಯತೆಯಿದೆ ಎಂದು ತಮ್ಮ ಶಿಕ್ಷಣದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳಬೇಕಾಯಿತು. ವಿದ್ಯಾರ್ಥಿ ದೆಸೆಯಲ್ಲಿ ತರಕಾರಿ ಬೆಳೆದು ಅದರಿಂದ ಗಳಿಸಿದ ಹಣದಿಂದ ಶಿಕ್ಷಣ ಮುಂದುವರೆಸಿ ಪದವಿ ಶಿಕ್ಷಣ ಮುಂದುವರೆಸಿದರು. ನಂತರ ತನ್ನ ಮುಂದಿನ ಕೆಲಸಕ್ಕಾಗಿ ಬಹರೈನ್ ಕಡೆಗೆ ಪ್ರಯಾಣ ಬೆಳೆಸಿದರು. ಅಲ್ಲಿ ತನಕ ಕೆಲಸ ಹಾಗೂ ಶಿಕ್ಷಣವನ್ನು ಕೆಲಸದ ಜೊತೆ ಮುಂದುವರೆಸಿದರು. ಕಂಪ್ಯೂಟರ್ ಸಂಬಂಧಿತ ಕೋರ್ಸ್ ಗಳನ್ನು ಮುಗಿಸಿ, ತಾನು ಗಳಿಸಿರುವ ಸಂಪರ್ಕಗಳ ಸಹಾಯ ಪಡೆದು ಲಂಡನ್ ಗೆ ಧಾವಿಸಿದರು. ಕಳೆದ ಇಪ್ಪತ್ತು ವರ್ಷಗಳಿಂದ ಲಂಡನ್ನಿನಲ್ಲಿ…
ಮೂಡುಬಿದಿರೆ: ಮೈಸೂರಿನ ಜೆಎಸ್ಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ವಿವಿಯಲ್ಲಿ ನಡೆದ 37ನೇ ಅಂತರ್ ವಿವಿ ಆಗ್ನೇಯ ವಲಯದ ಯುವ ಉತ್ಸವ- ‘ಯುವ ಬಿಂಬದಲ್ಲಿ’ ಮಂಗಳೂರು ವಿವಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಏಕಾಂಕ ನಾಟಕ- ಏಕದಶಾನನದಲ್ಲಿ ಪ್ರಥಮ, ಪ್ರಹಸನದಲ್ಲಿ ಪ್ರಥಮ, ಜನಪದ ವಾದ್ಯ ಮೇಳ ಪ್ರಥಮ, ಸ್ವರ ವಾದ್ಯದಲ್ಲಿ ದ್ವಿತೀಯ, ಶಾಸ್ತ್ರೀಯ ಪಕ್ಕವಾದ್ಯ ಐದನೇ ಸ್ಥಾನ, ಜನಪದ ನೃತ್ಯದಲ್ಲಿ ಐದನೇ ಸ್ಥಾನ, ಸಮೂಹ ಹಾಡಿನಲ್ಲಿ ಐದನೇ ಸ್ಥಾನ ಪಡೆದು ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಏಕಾಂಕ ನಾಟಕ, ಕಿರು ಪ್ರಹಸನ ಹಾಗೂ ಜನಪದ ವಾದ್ಯ ಮೇಳ, ಸ್ವರ ವಾದ್ಯದ ವಿದ್ಯಾರ್ಥಿಗಳು ಪಂಜಾಬ್ನಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಶಿರಾಜ್ ಕಾವೂರು ರಚಿಸಿ, ಡಾ ಜೀವನರಾಮ್ ಸುಳ್ಯ ನಿರ್ದೇಶನದ ‘ಏಕದಶಾನನ’ ಏಕಾಂಕ ನಾಟಕ, ಜನಪದ ವಾದ್ಯ ಮೇಳ, ದ್ವಿತೀಯ ಸ್ಥಾನ ಪಡೆದ…
ನಾನು ಕೂಡ ಸರಕಾರಿ ಶಾಲೆಯಲ್ಲಿ ಕಲಿತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಅನೇಕ ಸಾಧಕರು ಸರಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿ ದೊಡ್ಡ ಮಟ್ಟ ತಲುಪಿದ್ದಾರೆ. ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದರ ಬಗ್ಗೆ ಕೀಳಂದಾಜು ಸಲ್ಲದು ಎಂದು ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಕುಂದಾಪುರದ ಕೆರಾಡಿ ಶಾಲೆಯನ್ನು ರಿಷಬ್ ಶೆಟ್ಟಿ ಫೌಂಡೇಶನ್ ನೇತೃತ್ವದಲ್ಲಿ ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ನಡೆದ ಸಮಾಲೋಚನೆ, ಅಭಿವೃದ್ಧಿ ಯೋಜನೆ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆರಾಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣದ ಜತೆಗೆ ಕಲೆ, ಕ್ರೀಡೆ, ಯೋಗದ ಸ್ಮರ್ಧಾತ್ಮಕ ಪರೀಕ್ಷಾ ತಯಾರಿ, ವ್ಯಕ್ತಿತ್ವ ವಿಕಸನ ತರಗತಿ, ವಾಹನ ವ್ಯವಸ್ಥೆ ಮಾಡಲಾಗುವುದು. ನಮ್ಮದು ಖಾಸಗಿ ಶಾಲೆಯ ಜತೆ ಸ್ಪರ್ಧೆಯಲ್ಲ. ಆದರೆ ಕನ್ನಡ ಶಾಲೆಯನ್ನು ಮಾದರಿಯಾಗಿಸುವುದು ನಮ್ಮ ಗುರಿ. ರಿಷಬ್ ಶೆಟ್ಟಿ ಫೌಂಡೇಶನ್ ಮುಂದಿನ 5 ವರ್ಷಗಳ ಅವಧಿಗೆ ಶಾಲೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಿದೆ ಎಂದರು. ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದರ್ಶನ ಶೆಟ್ಟಿ, ಊರ…
ಚೇಳಾರ್ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಗಡಿ ಪ್ರಧಾನರಾದ ಖಂಡಿಗೆ ಬೀಡು ಆದಿತ್ಯ ಮುಕ್ಕಾಲ್ದಿ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಗೌರವಾರ್ಥ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮವು ಚೇಳಾರ್ ಖಂಡಿಗೆ ಬೀಡು ಶ್ರೀ ಧರ್ಮರಸು ದೈವಸ್ಥಾನದಲ್ಲಿ ನಡೆಯಿತು. ಪಣಿಯೂರುಗುತ್ತು ಕರುಣಾಕರ ಶೆಟ್ಟಿ ಮಾತನಾಡಿ, ಆದಿತ್ಯ ಮುಕ್ಕಾಲ್ದಿ ಅವರು ಮೂವತ್ತು ವರ್ಷಗಳ ಕಾಲ ಗಡಿ ಪ್ರದಾನರಾಗಿ ಸಲ್ಲಿಸಿದ ಸೇವೆ ಅನನ್ಯವಾದುದು. ಆದಿತ್ಯ ಮುಕ್ಕಾಲ್ದಿಯವರ ಉಸಿರು ನಿಂತರೂ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದರು. ಚೇಳಾರ್ ಶ್ರೀ ಶಾರದಾ ವಿದ್ಯಾ ಟ್ರಸ್ಟ್ ನ ಅಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ಆದಿತ್ಯ ಮುಕ್ಕಾಲ್ದಿ ಅವರಲ್ಲಿ ಅಭಿಮಾನ, ಆತ್ಮೀಯತೆ, ಪ್ರೀತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ನೀಡುವ ಗೌರವವನ್ನು ಅವರಲ್ಲಿ ಕಾಣಲು ಸಾಧ್ಯವಿತ್ತು ಎಂದರು. ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ ಮಾತನಾಡಿ ಆದಿತ್ಯ ಮುಕ್ಕಾಲ್ದಿ ಅವರು ಕೃಷಿ ಬದುಕಿನ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ದೈವಾರಾಧನೆಯಲ್ಲಿ ಅಧಿಕಾರಯುತವಾಗಿ ಮಾತನಾಡ ಬಲ್ಲರು.…
ಮೂಡುಬಿದಿರೆ ಮೂಲದ ಖ್ಯಾತ ಮಕ್ಕಳ ತಜ್ಞರಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ ಶೆಟ್ಟಿ ಅವರು ಪುಣೆಯ ಸಂತ ವಿನ್ಸೆಂಟ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಅಪೌಷ್ಟಿಕತೆ ಕುರಿತು ಮಾಹಿತಿ ಶಿಬಿರವನ್ನು ನಡೆಸಿಕೊಟ್ಟರು. ಡಾ.ಸುಧಾಕರ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಶಾಲಾಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದ್ದಾರೆ. ಪುಣೆಯ ಕಂಟೋನ್ಮೆಂಟ್ ಬೋರ್ಡ್ ಆಸ್ಪತ್ರೆಯ ಸಹಯೋಗದೊಂದಿಗೆ ಈ ಶಿಬಿರ ನಡೆಯಿತು.
ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಬಂಟರ ಸಂಘದ ಸರ್ವ ಸದಸ್ಯರ ಮಹಾಸಭೆ ಇತ್ತೀಚಿಗೆ ದಾವಣಗೆರೆಯ ಕುಂದುವಾಡ ರಸ್ತೆಯಲ್ಲಿರುವ ಬಂಟರ ಭವನ ಸಭಾಂಗಣದಲ್ಲಿ ನಡೆದಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಕ್ಷಗಾನ ಬಾಲ ಕಲಾವಿದರಾದ ನಗರದ ಸೆಂಟ್ ಪಾಲ್ಸ್ ಕಾನ್ವೆಂಟ್ ನಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ರಿತ ಹಟ್ಟಿಯಂಗಡಿ ಆನಂದ ಶೆಟ್ಟಿ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮೃದ್ಧಿ ಹರೀಶ್ ಶೆಟ್ಟಿ ನೂಜಿಯವರು ಯಕ್ಷಗಾನ ಪ್ರದರ್ಶನದೊಂದಿಗೆ ಅತ್ಯದ್ಭುತವಾಗಿ ತಾಳಕ್ಕೆ ಸರಿಯಾಗಿ ಕುಣಿತದೊಂದಿಗೆ ನೆರೆದ ಪ್ರೇಕ್ಷಕರ ಹೃನ್ಮನ ತಣಿಸಿದರು. ಕರ್ನಾಟಕ ಕರಾವಳಿ ಜಿಲ್ಲೆಗಳ ಆರಾಧನಾ ಗಂಡು ಕಲೆ, ಯಕ್ಷಗಾನವನ್ನು ವಾಣಿಜ್ಯ ನಗರಿ ದಾವಣಗೆರೆಯಲ್ಲಿ ವೈಭವೀಕರಿಸಿದ ಈ ಯಕ್ಷಗಾನ ಬಾಲ ಕಲಾವಿದರಿಗೆ ದಾವಣಗೆರೆಯ ಯಕ್ಷರಂಗ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ್ ಶೆಟ್ಟಿ, ಸಿಎ ಉಮೇಶ್ ಶೆಟ್ಟಿ ಸೇರಿದಂತೆ ಸಂಸ್ಥೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು, ಯಕ್ಷ ಪ್ರೇಮಿಗಳು ಸಂಭ್ರಮದಿಂದ ಮೆಚ್ಚುಗೆಯೊಂದಿಗೆ ಅಭಿನಂದಿಸಿದರು. ದಾವಣಗೆರೆಯ ಪ್ರತಿಷ್ಠಿತ ಜೆ. ಜೆ.…