Author: admin
ಮುಲುಂಡ್ ಪರಿಸರದ ಪ್ರಸಿದ್ಧ ವಿದ್ಯಾಸಂಸ್ಥೆ ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಸಂಚಾಲಕ ಸಂಸ್ಥೆ ನವೋದಯ ಕನ್ನಡ ಸೇವಾ ಸಂಘದ ವತಿಯಿಂದ ಅಯೋಧ್ಯೆಯ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯ ಶುಭ ಸಂದರ್ಭ ಶ್ರೀರಾಮೋತ್ಸವ – ನವೋದಯ ದೀಪೋತ್ಸವ ಎಂಬ ವಿಶೇಷ ಕಾರ್ಯಕ್ರಮವು ಸಂಸ್ಥೆಯ ನವೋದಯ ಸದನ ಸಭಾಗೃಹದಲ್ಲಿ ಜರಗಿತು. ಸಂಘದ ಅಧ್ಯಕ್ಷರು ಮತ್ತು ಸಂಸ್ಥೆಯ ಕಾರ್ಯಾಧ್ಯಕ್ಷ ಎಳತ್ತೂರುಗುತ್ತು ದಯಾನಂದ್ ಎಸ್ ಶೆಟ್ಟಿಯವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಸರ್ವ ಸದಸ್ಯರು, ಶಾಲೆಯ ಮುಖ್ಯ್ಯೊಪಾಧ್ಯಾಯಿನಿ, ಶಿಕ್ಷಕ ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಘದ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು. ನವೋದಯ ಭಜನಾ ಮಂಡಳಿಯ ಸದಸ್ಯರಿಂದ, ವಿಜಯ್ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ಭಜನೆ ಹಾಗೂ ನವೋದಯದ ಮಕ್ಕಳಿಂದ ಕುಣಿತ ಭಜನಾ ಕಾರ್ಯಕ್ರಮವು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ನವೋದಯ ದೀಪೋತ್ಸವದಲ್ಲಿ ಭಕ್ತರು ಜತೆಗೂಡಿ ಸುಮಾರು 1000 ಹಣತೆಗಳ ದೀಪ ಪ್ರಜ್ವಲನೆ…
ಬ್ರಹ್ಮಾವರ-ಡಿ.16: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಡಿ. 16 ರಂದು ಮಕ್ಕಳ ಸಂತೆ ‘ಜಿ ಎಮ್ ಬಜಾರ್’ನ್ನು ಅಯೋಜಿಸಲಾಗಿತ್ತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಜ್ಯೋತಿ ಬೆಳಗಿಸಿ ಜಿ ಎಮ್ ಬಜಾರನ್ನು ಉದ್ಘಾಟಿಸಿ ಮಾತನಾಡಿ ನಮ್ಮ ದಿನನಿತ್ಯದ ಜೀವನದಲ್ಲಿ ಹಣವು ಮುಖ್ಯವಾಗಿದ್ದು ಅದರ ಮೌಲ್ಯಗಳ ಅರಿವು ಮಕ್ಕಳಿಗೆ ಇರಬೇಕು. ಜೊತೆಗೆ ವಸ್ತುಗಳನ್ನು ಕೊಂಡುಕೊಳ್ಳುವ ಹಣವನ್ನು ವೆಚ್ಚಮಾಡುವ ಪರಿಜ್ಞಾನವಿರಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಮಕ್ಕಳ ಸಂತೆಯು ವಿದ್ಯಾರ್ಥಿಗಳಿಗೆ ವಸ್ತುಗಳ ಖರೀದಿ, ಅವುಗಳ ಬೆಲೆ, ವ್ಯವಹಾರ ಜ್ಞಾನವನ್ನು ಬೆಳೆಸುತ್ತದೆ. ಇದು ಅವರು ಸಮಾಜದಲ್ಲಿ ವ್ಯವಹರಿಸುವಾಗ ನೆರವಾಗುತ್ತದೆ ಎಂದರು. ಶಾಲೆಯ ಪ್ರಿ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಮ್ಮ ಪೆÇೀಷಕರ ಜೊತೆ ಹಣವನ್ನು ನೀಡಿ ವಸ್ತುಗಳನ್ನು ಖರೀದಿಸಿ ಸಂತೆಯ ಪ್ರಾತ್ಯಕ್ಷಿಕ ಅನುಭವ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಸಿನಿಮಾ ಸಮಾಜದಿಂದ ಸೋಮವಾರ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮತ್ತು ಪತ್ರಿಕೋದ್ಯಮ ವಿಭಾಗದ ಸ್ಟುಡಿಯೋದಲ್ಲಿ ‘ರಿಬೇಟ್’ (ರಿವೀವ್ ಆ್ಯಂಡ್ ಡಿಬೇಟ್) ಕಾರ್ಯಕ್ರಮ ನಡೆಯಿತು. ಮೊದಲಿಗೆ ವಿದ್ಯಾರ್ಥಿಗಳಿಗೆ ‘ಬದಲಾವಣೆ’ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಬಳಿಕ ಬಿಡ್ ಮೂಲಕ ವಿದ್ಯಾರ್ಥಿಗಳ ಎರಡು ತಂಡಗಳನ್ನು ಆಯ್ಕೆ ಮಾಡಲಾಯಿತು. ಇತ್ತಂಡಗಳಿಗೆ ‘ಲೂಸಿಯಾ’ ಮತ್ತು ‘ಸಿನಿ ಅಡ್ಡೆ’ ಎಂದು ವಿದ್ಯಾರ್ಥಿಗಳು ಹೆಸರಿಸಿಕೊಂಡರು. ಕಿರುಚಿತ್ರದಲ್ಲಿ ಪ್ರಸ್ತಾವಗೊಂಡ ಪ್ರಮುಖ 5 ವಿಷಯಗಳ ಕುರಿತು ಎರಡು ತಂಡಗಳ ಮಧ್ಯೆ ಪರ-ವಿರೋಧ ಚರ್ಚೆ ನಡೆಯಿತು. ಅನಂತರ ಸಿನಿಮಾದ ತಂತ್ರಜ್ಞಾನ, ಚಿತ್ರಕತೆ ಕುರಿತು ರಸಪ್ರಶ್ನೆ ನಡೆಯಿತು. ವಿದ್ಯಾರ್ಥಿ ಅವಿನಾಶ್ ಕಟೀಲ್ ಕಾರ್ಯಕ್ರಮ ನಡೆಸಿಕೊಟ್ಟರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹಾಗೂ ಸೃಜನಶೀಲತೆಯ ಮೂಲಕ ಆಳ್ವಾಸ್ ಸಿನಿಮಾ ಸಮಾಜದ ಕಾರ್ಯಕ್ರಮ ವಿಭಿನ್ನವಾಗಿದೆ’ ಎಂದು ಶ್ಲಾಘಿಸಿದರು. ಸಹಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ಹರ್ಷವರ್ಧನ ಪಿ.ಆರ್. ನಿಶಾನ್ ಕೋಟ್ಯಾನ್, ದೀಕ್ಷಿತಾ, ಇಂಚರಾ ಗೌಡ ಮತ್ತು ಅಕ್ಷಯ್ ಕುಮಾರ್ ತೀರ್ಪುಗಾರರಾಗಿ ಸಹಕರಿಸಿದರು.
ವಿದ್ಯಾಗಿರಿ: ಪಡುವಣದಲ್ಲಿ ನೇಸರ ಹೊಂಗಿರಣ ಬೀರಿ ಬೈ ಬೈ ಹೇಳುತ್ತಿದ್ದರೆ, ಇತ್ತ ಮೂಡಣ ದಿಕ್ಕಿನ ಬಿದಿರೆಯ ನಾಡಲ್ಲಿ, ಶಿಕ್ಷಣ- ಸಾಂಸ್ಕøತಿಕ ಕಾಶಿಯ ಬೀಡಲ್ಲಿ ನಾದ ನಿನಾದ ‘ಗಾನ ವೈಭವ’ ಮೊಳಗಿತು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ 19ಕ್ಕೂ ಅಧಿಕ ಭಾಗಗಳಲ್ಲಿ 3500 ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸೇರಿದಂತೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಸ್ವರ ಮಾಧುರ್ಯಕ್ಕೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ತುಂಬಿದ ಪ್ರೇಕ್ಷಕರ ಕರತಾಡನ, ಜಯಕಾರ ಮುಗಿಲು ಮುಟ್ಟಿತು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ ಸಭಾಂಗಣದ ಮುಂಭಾಗದ ಭವ್ಯ ವೇದಿಕೆಯಲ್ಲಿ ಬಿನ್ನಿ ಗಾನದ ಬೆಳಕು ಹರಿಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ಆಳ್ವಾಸ್ ವಿರಾಸತ್ ನ ಎರಡನೇ ದಿನವಾದ ಶುಕ್ರವಾರದ ಚಿತ್ರಣ. ‘ಈ ಹಾಡಲ್ಲಿ ನಾನು ಹೆಚ್ಚು ಮಾತನಾಡಬೇಕಾಗುತ್ತದೆ’…
2016ರ ಒಂದು ದಿನ ಕನ್ನಡದಲ್ಲಿ ರಿಕ್ಕಿ ಎಂಬ ಸಿನೆಮಾವು ಬಿಡುಗಡೆ ಆಗಿತ್ತು. ಆ ಸಿನೆಮಾದ ನಿರ್ದೇಶಕರಾಗಿ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದ್ದ ಈ ಕುಂದಾಪುರದ ಕೆರಾಡಿ ಗ್ರಾಮದ ಹುಡುಗನು ಆ ಸಿನೆಮಾಕ್ಕೆ ಥಿಯೇಟರ್ ಸಿಗಲಿ ದೇವರೇ ಎಂದು ತನ್ನ ಫೇಸ್ ಬುಕ್ ಪುಟದಲ್ಲಿ ತಾನೇ ಬರೆದುಕೊಂಡಿದ್ದರು! ಆ ಸಿನೆಮಾಕ್ಕೆ ಥಿಯೇಟರ್ ಸಿಕ್ಕಿತೋ ಗೊತ್ತಿಲ್ಲ! ಆದರೆ ಇಂದು ಅದೇ ಹುಡುಗ ನಿರ್ದೇಶನ ಮಾಡಿ, ಪ್ರಮುಖ ಪಾತ್ರ ವಹಿಸಿರುವ ‘ ಕಾಂತಾರ ‘ ಎಲ್ಲೆಡೆಯೂ ಬಿಡುಗಡೆಯಾಗಿ ಕೆಲವು ದಿನಗಳು ಆಗಿವೆ. ಆದರೆ ಆ ಸಿನೆಮಾ ನೋಡಲು ಬಂದವರು ಟಿಕೆಟ್ ಸಿಗದೆ ಹಿಂದೆ ಹೋಗುವ ಪರಿಸ್ಥಿತಿಯು ಇಡೀ ರಾಜ್ಯದಲ್ಲಿ ಇಂದು ಇದೆ! ಕಾಂತಾರ ಕನ್ನಡ ಸಿನೆಮಾದ ಸುನಾಮಿ ಎಂದು ಇಂದು ಪ್ರೂವ್ ಆಗಿದೆ! ಸೂಪರ್ ಹಿಟ್ ಆಗಿರುವ ಕಾಂತಾರ ಸಿನೆಮಾ ಒಬ್ಬ ಗ್ರಾಮೀಣ ಹುಡುಗನ ಸಿನೆಮಾ ಬದುಕಿನ ಯಶಸ್ಸಿಗೆ ಭಾರೀ ಮುನ್ನುಡಿಯನ್ನು ಬರೆದಾಗಿದೆ! ಆ ಯುವಕನೆ ರಿಷಭ್ ಶೆಟ್ಟಿ! ನಮ್ಮ ಕುಂದಾಪುರದ ಕೆರಾಡಿ ಗ್ರಾಮದ ಹುಡುಗ!…
ವಿದ್ಯಾಗಿರಿ (ಮೂಡುಬಿದಿರೆ): ‘ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಬದ್ಧತೆಯೇ ಆಧಾರ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಸಭಾಂಗಣದಲ್ಲಿ ಸೋಮವಾರ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ‘ಪೋಷಕ-ಶಿಕ್ಷಕರ ಸಭೆ’ಯಲ್ಲಿ ಅವರು ಮಾತನಾಡಿದರು. ‘ಎಲ್ಲ ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಬದ್ಧರಾಗಿರುತ್ತಾರೆ. ಕನಸು ಕಟ್ಟುತ್ತಾರೆ. ಕಾಲ ಕ್ರಮೇಣ ಹೋದಂತೆ ಸ್ಪಂದನೆ ನೀಡುವುದು ಕಡಿಮೆ ಆಗುತ್ತದೆ. ಅದು ಹಾಗೆ ಆಗಬಾರದು ವಿದ್ಯಾರ್ಥಿಗಳಾಗಲಿ ಪೋಷಕರಾಗಲಿ ಸರಿಯಾದ ರೀತಿಯಲ್ಲಿ ಸ್ಪಂದಿಸುವುದು ಕರ್ತವ್ಯ’ ಎಂದರು. ‘ನೀವು ಯಾವ ಕ್ಷೇತ್ರಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತೀರೋ, ಆ ಕ್ಷೇತ್ರದ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಬೇಕು. ನಮ್ಮಲ್ಲಿ ಸಮಗ್ರ ವ್ಯವಸ್ಥೆ ಇದೆ. ನಮ್ಮ ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕಾ ಅವಧಿಯಲ್ಲಿ ಜೊತೆಯಲ್ಲಿದ್ದು, ಕಲಿಸುತ್ತಾರೆ. ಪಾಠ ಓದಿಸುತ್ತಾರೆ. ಬಳಿಕ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಭ್ಯಾಸ ಮಾಡಿಸುತ್ತೇವೆ. ಪದವಿ ಪೂರ್ವ ಮಂಡಳಿಯು ನಿಗದಿ ಪಡಿಸಿದ ಪರೀಕ್ಷಾ ಅವಧಿ, ಪ್ರಶ್ನೆಗಳು, ಪ್ರಶ್ನಾ ಮಾದರಿಗಳನ್ನೇ ಪಾಲಸಿಕೊಂಡು ಅವರಿಗೆಕಲಿಸಲಾಗುತ್ತದೆ’ ಎಂದರು.…
ಸೇವೆ ಮಾಡುವ ಸಾಮರ್ಥ್ಯವನ್ನು ನಮಗೆ ದೇವರು ನೀಡಿದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ ಎಂದು ಶ್ರೀ ರಾಜನ್ ದೈವ ಶ್ರೀ ಧೂಮಾವತಿ ದೈವಸ್ಥಾನ ಮಿತ್ತಗುತ್ತು ಬಳ್ಕುಂಜೆ, ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿಯವರು ತಿಳಿಸಿದರು. ಮೀರಾ ರೋಡ್ ಪೂರ್ವ ಹೋಟೆಲ್ ಮೆಜೆಸ್ಟಿಕ್ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿದ ಶ್ರೀ ರಾಜನ್ ದೈವ ಶ್ರೀ ಧೂಮಾವತಿ ದೈವಸ್ಥಾನ ಮಿತ್ತ ಗುತ್ತು ಬಳ್ಕುಂಜೆ, ಇದರ ಮುಂಬಯಿ ಸಮಿತಿಯ ವಿಶೇಷ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಭಾರತೀಯ ಜನತಾ ಪಕ್ಷದ ಮೀರಾ ಭಾಯಂದರ್ ದಕ್ಷಿಣ ಭಾರತೀಯ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳ್ಕುಂಜೆ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರನ್ನು ಗೌರವಿಸಿ ಮಾತನಾಡುತ್ತಾ, ಸಮಾಜದಲ್ಲಿ ಬಹುತೇಕ ಜನರು ಸ್ವಾರ್ಥ ಸಾಧನೆಗಾಗಿ ಹವಣಿಸುತ್ತಿದ್ದಾರೆ. ಆದರೆ ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ನಂಬಿರುವ ರವೀಂದ್ರ ಶೆಟ್ಟಿಯವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆ ಸಲ್ಲಿಸುತ್ತಾ ಸಮಾಜಮುಖಿ ಚಿಂತನೆ ಮಾಡುತ್ತಾ ಬಂದಿದ್ದಾರೆ.…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿಗಳಾದ ಶ್ರೀ ಕೂಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ನೂತನ ಪದಾಧಿಕಾರಿಗಳ ಸಭೆಯು ಒಕ್ಕೂಟದ ಕಛೇರಿಯಲ್ಲಿ ಜರಗಿತು. ನಡೆದ ಸಭೆಯಲ್ಲಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸುಮಾರು 65 ಸೆಂಟ್ಸ್ ಜಮೀನನ್ನು ಖರೀದಿಸುವರೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಹಾಗೆಯೇ ಜಮೀನಿನ ಮಾಲಕರ ಜೊತೆ ಮಾತುಕತೆ ನಡೆಸಿದಂತೆ MOU ಮಾಡಿಕೊಳ್ಳಲಾಯಿತು. ಸರ್ವಸಮ್ಮತಿಯಂತೆ ಈ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಕಟ್ಟಡಗಳ ವಿವಿಧ ರಚನೆಗಳನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಶ್ರೀ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಸಂಕೀರ್ಣವೆಂದು ನಾಮಕರಣ ಮಾಡುವುದಾಗಿ ನಿರ್ಣಯಿಸಲಾಯಿತು. ಈ ಬಗ್ಗೆ ಮಹಾದಾನಿ ಶ್ರೀ ಸದಾಶಿವ ಶೆಟ್ಟಿ ಅವರು ತಮ್ಮ ಮನದಾಳದ ಮಾತುಗಳೊಂದಿಗೆ ಸಮ್ಮತಿಯನ್ನು ನೀಡಿದರು. ಹಾಗೆಯೇ ಅವರ ಕೊಡುಗೆಯು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಕಾಶೆಯಲ್ಲಿ ಮೂಡಿಬರುವುದಾಗಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್…
ಮುಂಬಯಿ ಬಂಟರ ಸಂಘದ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಸದಸ್ಯರು ಇತ್ತೀಚೆಗೆ ಅಧ್ಯಕ್ಷ ಸೂರಜ್ ಎನ್ ಶೆಟ್ಟಿ ಅವರ ನೇತೃತ್ವದಲ್ಲಿ ಶಿರಡಿ ಶ್ರೀ ಸಾಯಿಬಾಬಾ ಮಂದಿರಕ್ಕೆ ತೀರ್ಥಯಾತ್ರೆಗೈದರು. ಈ ಯಾತ್ರೆಯಲ್ಲಿ ಸಂಚಾಲಕ ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ಯಶವಂತ ಶೆಟ್ಟಿ ಮತ್ತು ಜಂಟಿ ಕಾರ್ಯದರ್ಶಿ ಅಮರ ಶೆಟ್ಟಿ ಅವರುಗಳಲ್ಲದೇ ಮಾಜಿ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ವಿಶ್ವನಾಥ ಶೆಟ್ಟಿ ಪೇತ್ರಿ, ಕೃಷ್ಣ ಶೆಟ್ಟಿ, ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಅಮರ್ ಶೆಟ್ಟಿ ಮತ್ತು ಎಲ್ಲಾ ಮಹಿಳಾ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 36 ಸದಸ್ಯರು ಮತ್ತು ಸಂಚಾಲಕ ವಜ್ರ ಪೂಂಜಾ ಮತ್ತು ಸುಜಾತಾ ಗುಣಪಾಲ್ ಶೆಟ್ಟಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರದ ಬಹು ಪ್ರತಿಷ್ಠಿತ ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಉತ್ಸಾಹಿ ಕ್ರಿಯಾಶೀಲ ಯುವಕ ಸವಿನ್ ಶೆಟ್ಟಿ ಈ ಮೊದಲೇ ಯುವ ವಿಭಾಗದ ಹಲವು ಜವಾಬ್ಧಾರಿಯುತ ಸ್ಥಾನವನ್ನು ಅಲಂಕರಿಸಿದವರು. ಜೊತೆ ಕೋಶಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಥ ರೀತಿಯ ಪದ ನಿರ್ವಹಣೆ ಮಾಡಿದ ಸವಿನ್ ಈಗ ಸಮಿತಿಯ ಹಿರಿಯರ ಹಾಗೂ ಯುವ ವಿಭಾಗದ ಸರ್ವ ಸಮ್ಮತಿಯೊಂದಿಗೆ ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಕಡಂದಲೆ ಉಲನಡ್ಕ ಪುತ್ತಿಗೆ ಗುತ್ತು ಜಗನ್ನಾಥ ಶೆಟ್ಟಿ ಮತ್ತು ಮೂಡುಬೆಳ್ಳೆ ಮೇಲ್ಮನೆ ಶೋಭಾ ಶೆಟ್ಟಿ ದಂಪತಿಗೆ ಸುಪುತ್ರರಾಗಿ ಜನಿಸಿದರು. ಸವಿನ್ ಶೆಟ್ಟಿ ತನ್ನ ಎಂ.ಬಿ.ಎ. ವ್ಯಾಸಂಗದ ಸಮಯದಿಂದಲೇ ಬಂಟರ ಸಂಘದ ಸಂಪರ್ಕದಲ್ಲಿದ್ದು, ಸಂಘದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇವರು ಉಮಾಕೃಷ್ಣ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಎಂಡ್ ರಿಸರ್ಚ್ ಮೂಲಕ 2014 ರಲ್ಲಿ ಎಂ.ಬಿ.ಎ ಪದವಿ ಸಂಪಾದಿಸಿದ್ದರು. ತನ್ನ ವೃತ್ತಿ ಜೀವನವನ್ನು ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಮೂಲಕ ಪ್ರಾರಂಭಿಸಿದರು. ಇದೀಗ ಬಹು ಪ್ರತಿಷ್ಠಿತ…