Author: admin
ಕಿಕ್ಕಿರಿದು ತುಂಬಿದ ಸಭಾಂಗಣ: ಜೀವನದಲ್ಲೇ ನೀಡಿದ ಶ್ರೇಷ್ಠ ಕಾರ್ಯಕ್ರಮ-ಬಣ್ಣನೆ ಆಳ್ವಾಸ್ ಅಭಿಮಾನ ಸಾಗರಕ್ಕೆ ‘ಶ್ರೇಯಾ’ ಫಿದಾ
ವಿದ್ಯಾಗಿರಿ (ಮೂಡುಬಿದಿರೆ): ಮುಸ್ಸಂಜೆ ಇನ್ನೂ ಕವಿದಿಲ್ಲ, ನೇಸರ ಇನ್ನೂ ಜಾರಿಲ್ಲ, ಆಗಲೇ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಪ್ರೇಕ್ಷಕರು ತುಂಬಿ ತುಳುಕಿದ್ದು, ಹಾಡಿನ ಹೊನಲಿಗಾಗಿ ಕಾದು ನಿಂತಿದ್ದರು. ಎಲ್ಲೆಡೆ ಒಂದೇ ಝೇಂಕಾರ ಶ್ರೇಯಾ, ಶ್ರೇಯಾ, ಶ್ರೇಯಾ. ಅದು `ಶ್ರೇಯಾ’ ಸ್ವರದ ಪವಾಡ. ಶನಿವಾರದ ಸಂಜೆಯ ಬಿಸಿಲು ಆರುವ ಮುನ್ನವೇ ಶ್ರೇಯಾ ಶ್ರೇಯಾ ಘೋಷಾಲ್ ನಾದ ನಿನಾದದ ತಂಪಿಗೆ-ಕಂಪಿಗೆ ಹಂಬಲಿಸಿ ಚಾತಕ ಪಕ್ಷಿಯಂತೆ ಬಿದಿರೆ ಜನ ಕುಳಿತ್ತಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ಆಳ್ವಾಸ್ ವಿರಾಸತ್ ಮೂರನೇ ದಿನವಾದ ಶನಿವಾರ ಚಿತ್ರಣ. ಪಶ್ಚಿಮ ಬಂಗಾಳದ ಬೆಹರಾಂಪುರದ ಹಾಲುಗೆನ್ನೆಯ ಹುಡುಗಿ ಶ್ರೇಯಾ ಘೋಷಾಲ್ ‘ ನಮಸ್ಕಾರ ಮೂಡುಬಿದಿರಿ…’ ಎನ್ನುತ್ತಲೇ… `ಯಾರಾ ಮುಜುಕೋ ಇರಾದೆ ದೇ… ಸುನ್ ರಹಾ ಹೇ ನಾ ತೂ.’. ಹಾಡುತ್ತಲೇ ವೇದಿಕೆ ಪ್ರವೇಶಸುತ್ತಿದ್ದಂತೆಯೇ ಸಡಗರದ ಅಲೆ ಉಕ್ಕಿ ಬಂದ ಸಾಗರದಂತೆ ಸಭಾಂಗಣವೇ ರಂಗೇರಿತು. ಎಲ್ಲ ದಿಕ್ಕಿನಲ್ಲೂ `ಸುನ್ ರಹಾ…
ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಗಾಗಿ ರಚಿಸಿದ ಪುಣೆ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಸಂಭ್ರಮದಿಂದ ನಡೆಯಿತು. ಪುಣೆ ಬಂಟರ ಸಂಘದ ಅಧ್ಯಕ್ಷ ಹಾಗೂ ಕಾಪು ಮಾರಿಗುಡಿ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಕೆ ಪ್ರಕಾಶ್ ಶೆಟ್ಟಿ,ಕಾಪು ಮಾರಿಗುಡಿ ಅಭಿವೃದ್ಹಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಮುಂಬಯಿ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿ, ಕಾಪು ಮಾರಿಗುಡಿ ಅಭಿವೃದ್ಹಿ ಪ್ರಚಾರ ಸಮಿತಿ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ, ಆರ್ಥಿಕ ಸಮಿತಿಯ ಮುಖ್ಯ ಪ್ರಧಾನ ಸಂಚಾಲಕರಾಗಿರುವ ಉದಯ್ ಸುಂದರ್ ಶೆಟ್ಟಿ, ಸಂದೀಪ್ ಶೆಟ್ಟಿ, ರವಿರಾಜ್ ಶೆಟ್ಟಿ,…
ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಎಸೋಸಿಯೇಷನ್ ನೇತ್ರತ್ವದಲ್ಲಿ, ಬಂಟ್ವಾಳ ತಾಲೂಕು ವಾಲಿಬಾಲ್ ಎಸೋಸಿಯೇಷನ್, ಯೂತ್ ಬಂಟ್ಸ್ ಬಂಟ್ವಾಳ ತಾಲೂಕು ಹಾಗೂ ಯೂತ್ ಬಂಟ್ಸ್ ಬಿ.ಸಿ ರೋಡು ಇದರ ಸಂಯುಕ್ತ ಆಶ್ರಯದಲ್ಲಿ ಬಿ.ಸಿ ರೋಡು, ಬ್ರಹ್ಮರ ಕೋಟ್ಲು ಬಳಿ ಇರುವ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದಿನಾಂಕ 30. 01. 2024 ನೇ ಮಂಗಳವಾರ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆಯಿತು. ಖ್ಯಾತ ಉದ್ಯಮಿ, ಹೋಟೆಲ್ ರಂಗೋಲಿಯ ಮಾಲಕರಾದ ಶ್ರೀಯುತ ಸದಾನಂದ ಶೆಟ್ಟಿ ಇವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ವಾಲಿಬಾಲ್ ಎಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಸತೀಶ್ ಬಪ್ಪಲಿಗೆ, ತಾಲೂಕು ವಾಲಿಬಾಲ್ ಎಸೋಸಿಯೇಷನ್ ನ ಗೌರವಾಧ್ಯಕ್ಷರಾದ ಶ್ರೀ ಶ್ರೀಕಾಂತ ಶೆಟ್ಟಿ ಸಂಕೇಶ ಉಪಸ್ಥಿತರಿದ್ದರು. ಜಿಲ್ಲಾ ವಾಲಿಬಾಲ್ ಎಸೋಸಿಯೇಷನ್ ಕಾರ್ಯದರ್ಶಿ ಶ್ರೀ ಶಂಕರ್ ಶೆಟ್ಟಿ ಪರಾರಿ ಗುತ್ತು, ಯೂತ್ ಬಂಟ್ಸ್ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಶ್ರೀ ನಿಶಾನ್ ಆಳ್ವ, ಯೂತ್ ಬಂಟ್ಸ್ ಬಿ.ಸಿ ರೋಡ್ ಇದರ ಅಧ್ಯಕ್ಷರಾದ…
ವಿದ್ಯಾಗಿರಿ: ಇಲ್ಲಿ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ 29ನೇ ಆಳ್ವಾಸ್ ವಿರಾಸತ್ನ ಅಂತಿಮ ದಿನವಾದ ಭಾನುವಾರ ಆಳ್ವಾಸ್ ಸಾಂಸ್ಕೃತಿಕ ಹಾಗೂ ಕ್ರೀಡಾ ತಂಡದ ವಿದ್ಯಾರ್ಥಿಗಳು ರೋಚಕ ಅನುಭವ ನೀಡುವ ಪ್ರದರ್ಶನ ನೀಡಿ, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಮಲ್ಲಕಂಬ: ಆಳ್ವಾಸ್ ಕಾಲೇಜಿನ ಸುಮಾರು 130 ವಿದ್ಯಾರ್ಥಿಗಳು ಏಕಕಾಲದಲ್ಲಿ ಮಲ್ಲಕಂಬ ಸಾಹಸ ಪ್ರದರ್ಶನ ನೀಡಿದರು. ಪ್ರೇಕ್ಷಕರು ಬೆಕ್ಕಸ ಬೆರಗಾದರು. ಮಲ್ಲಕಂಬವು ಅಪ್ಪಟ ದೇಶೀಯ ಕ್ರೀಡೆ. ದೇಶಿ ಸಂಸ್ಕೃತಿ ಹಾಗೂ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವ ಆಳ್ವಾಸ್, ಈ ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕ್ರೀಡೆಯಾಗಿದ್ದ ಮಲ್ಲಕಂಬಕ್ಕೆ ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ದೂರದೃಷ್ಟಿಯನ್ನು ಇರಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಕಲಾ ರೂಪ ನೀಡಿದ್ದು, ಮಲ್ಲಕಂಬವು ವೇದಿಕೆ ಮೇಲೇರಿದೆ. ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿ ಪಟ್ಟುಗಳ ಸಾಧನೆಗಾಗಿ ಬಳಸುತ್ತಿದ್ದರು. ಈ ಎತ್ತರದ ಕಂಬದ ಕುತ್ತಿಗೆ ಹಾಗೂ ಮೇಲಿನ ನಾಬ್ಗೆ ಎಣ್ಣೆಯನ್ನು ಸವರಿ ನಾಜೂಕುಗೊಳಿಸಲಾಗಿರುತ್ತದೆ. ಇನ್ನೊಂದೆಡೆ ಜೋತು ಬಿದ್ದ…
ಮುಂಬಯಿ (ಆರ್ ಬಿ ಐ), ಅ.12: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಹೆಸರಾಂತ ಆರ್ಥಿಕ ತಜ್ಞ, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ ಆಫ್ ಇಂಡಿಯಾ) ಅಧಿಕಾರಿ ಡಾ| ಆರ್.ಕೆ ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ಅವರು ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಡಿಆರ್ ಟಿ) ಇದರ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗಿ ಆಯ್ಕೆ ಆಗಿರುತ್ತಾರೆ. ಎಂಡಿಆರ್ ಟಿ ಅಧ್ಯಕ್ಷ ರಾಂಡಿ ಎಲ್.ಸ್ಟ್ರಿಚ್ ಫೀಲ್ಡ್ ಅವರು ಡಾ| ಆರ್.ಕೆ ಶೆಟ್ಟಿ ಅವರಿಗೆ ಆಯ್ಕೆಯ ಅಧಿಕೃತ ಪ್ರಮಾಣ ಪತ್ರವನ್ನು ಕಳುಹಿಸಿ ಅಭಿನಂದಿಸಿರುವುದಾಗಿ ಎಂಡಿಆರ್ ಟಿ ವಕ್ತಾರರು ತಿಳಿಸಿದ್ದಾರೆ. ಎಂಡಿಆರ್ ಟಿಯ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗುವ ಕನಸು ಹೊತ್ತು ಅಂತಹ ಸಾಧನೆಯನ್ನು ಸಾಧಿಸಿದ ಭಾರತದ ಕೆಲವೇ ಸಾಧಕರಲ್ಲಿ ಡಾ| ಆರ್.ಕೆ ಓರ್ವರಾಗಿರುವರು. ಕ್ಲಬ್ ಸದಸ್ಯತ್ವ ಪಡೆಯುವ ಮುಖೇನ ಶೆಟ್ಟಿ ಅವರು ಎಂಡಿಆರ್ ಟಿ ಸ್ಟೋರ್ ನಿಂದ ವಿಶೇಷ ಕ್ವಾರ್ಟರ್ ಸೆಂಚುರಿ ಫಲಕ ಸ್ವೀಕರಿಸಲು ಆರ್ಹರೆಣಿಸಿರುವರು. ಕರ್ನಾಟಕದ ಚಿಕ್ಕಮಗಳೂರು ಇಲ್ಲಿನ ಕಂಬಿಹಳ್ಳಿಯಲ್ಲಿ ಕೃಷ್ಣ ಕೆ.ಶೆಟ್ಟಿ ಮತ್ತು…
ವಿದ್ಯಾಗಿರಿ: ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಜನವರಿ 29ರಿಂದ 31ರ ವರೆಗೆ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ದ್ವಿತೀಯ ರನ್ನರ್ ಅಪ್ ಆಗಿದ್ದು, ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 15 ಕ್ರೀಡಾಪಟುಗಳ ಪೈಕಿ 13 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.ಈ ಪಂದ್ಯಾವಳಿಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಪ್ರಥಮ ಸ್ಥಾನ ಪಡೆದಿದ್ದರೆ, ಔರಂಗಬಾದ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮರಥ್ವಾಡ ವಿಶ್ವವಿದ್ಯಾಲಯ ದ್ವಿತೀಯ ಸ್ಥಾನ ಪಡೆದಿದೆ. ಖೇಲೋ ಇಂಡಿಯಾ: ಯುವ ಖೇಲೋ ಇಂಡಿಯಾ ಖೋಖೋ ಪಂದ್ಯಾವಳಿಯು ಚೆನ್ನೈನಲ್ಲಿ ಜನವರಿ 26ರಿಂದ 30ರವರೆಗೆ ನಡೆದಿದ್ದು, ಯುವಕರ ಹಾಗೂ ಯುವತಿಯರ ವಿಭಾಗದ ರಾಜ್ಯ ತಂಡವನ್ನು ಆಳ್ವಾಸ್ ಕಾಲೇಜಿನ ತಲಾ ಇಬ್ಬರು ವಿದ್ಯಾರ್ಥಿಗಳು ಪ್ರತಿನಿಧಿಸಿದ್ದಾರೆ. ಯುವಕರ ತಂಡವನ್ನು ಆಳ್ವಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸಂಗೀತ್ ಗೌಡ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಮೇಶ್ ಪ್ರತಿನಿಧಿಸಿದ್ದು, ಕರ್ನಾಟಕ ತಂಡವು ತೃತೀಯ ಸ್ಥಾನ ಪಡೆದಿದೆ. ಯುವತಿಯರ ತಂಡವನ್ನು ಆಳ್ವಾಸ್ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಹಿಮಾನಿ ಹಾಗೂ…
ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 29ನೇ ವರ್ಷದ ಆಳ್ವಾಸ್ ವಿರಾಸತ್ನ ಶ್ರೀಮತಿ ವಜನಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಭಾನುವಾರ ವಿಜಯ ಪ್ರಕಾಶ್ ಅವರ ಸ್ವರಮಾಧುರ್ಯ, ಮೈಸೂರು ಮಂಜುನಾಥ ಅವರ ವಯೋಲಿನ್ ವೈಭವ ಹಾಗೂ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲಿನ ನಾದಕ್ಕೆ ಪ್ರೇಕ್ಷಕರು ತಲೆದೂಗಿದರು. ಆಳ್ವಾಸ್ ವಿರಾಸತ್ ಪ್ರಶಸ್ತಿ ಪುರಸ್ಕೃತ ಮೂವರ ಕಛೇರಿಯು ಅಭಿಮಾನಿಗಳನ್ನು ಸಂಗೀತ ಲೋಕಕ್ಕೆ ಕೊಂಡೊಯ್ದಿತು. ಅದು ವಿರಾಸತ್ ವೇದಿಕೆಯಲ್ಲಿ ನಡೆದ ತಾಳ ವಾದ್ಯ ಸಂಗೀತ ಕಾರ್ಯಕ್ರಮದ ನಿನಾದ. ಹಾಲು ಬೆಳದಿಂಗಳು ಚೆಲ್ಲಿದ ವಿದ್ಯುದಾಲಂಕಾರದ, ತುಂಬಿ ತುಳುಕಿದ ಸಭಾಂಗಣದಲ್ಲಿ ಸೇರಿದ ಶ್ರೋತೃಗಳ ಮನಸೂರೆಗೊಂಡಿತು. ಆರಂಭದಲ್ಲಿ ಹಂಸಧ್ವನಿ ರಾಗದ ಆಲಾಪನೆ ಮೂಲಕ ಕಛೇರಿ ಆರಂಭಗೊಂಡಿತು. ಗೋಡ್ಖಿಂಡಿ ಬಾನ್ಸುರಿಗೆ ಮೈಸೂರು ಮಂಜುನಾಥ್ ಜುಗಲ್ ಬಂಧಿಯಾದರು. ಮುಸ್ಸಂಜೆಯ ಗೋಧೋಳಿ ಲಗ್ನದಲ್ಲಿ ಮನೆ ಮನೆಗಳಲ್ಲಿ ದೀಪ ಬೆಳಗಿದಂತೆ, ಬೆಳಂದಿಗಳು ತುಂಬಿದ ವೇದಿಕೆಯಲ್ಲಿ ಗಣೇಶ ಸ್ತುತಿ ಮೂಲಕ ಹಂಸಧ್ವನಿ ರಾಗದ ವಾತಾಪಿ ಗಣಪತಿಂ ಭಜೇ..ನಾದ ಹೊನಲಾಯಿತು. ನಾದಸುಧೆಯ ಏರಿಳಿತವು ಸಭಾಂಗಣದಲ್ಲಿ ಸಂಭ್ರಮದ ಅಲೆಯನ್ನು ಸೃಷ್ಟಿಸಿತು.…
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಅಕ್ಟೋಬರ್ 22 ರಂದು ಶನಿವಾರ ಬೆಳಿಗ್ಗೆ 10.00 ಗಂಟೆಗೆ ಬಂಟ್ಸ್ ಹಾಸ್ಟೇಲ್ ಬಳಿಯ ಸಿ.ವಿ. ನಾಯಕ್ ಹಾಲ್ ನ ಸಭಾಂಗಣದಲ್ಲಿ ಜರಗಲಿದೆ. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ಮನೆ ನಿರ್ಮಾಣ, ಕ್ರೀಡೆ, ವೈದ್ಯಕೀಯ ಮೊದಲಾದ ಫಲಾನುಭವಿಗಳಿಗೆ ಚೆಕ್ ಗಳನ್ನು ವಿತರಿಸಲಾಗುವುದು. ಮುಖ್ಯ ಅತಿಥಿಗಳಾಗಿ ವಲ್ಡ್ ಬಂಟ್ಸ್ ವೆಲ್ ಫೇರ್ ಎಸೋಸಿಯೇಶನ್ ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಜಾಗತಿಕ ಬಂಟ ಪ್ರತಿಷ್ಠಾನದ ಪೋಷಕ ಡಾ ಬಿ ಆರ್ ಶೆಟ್ಟಿ, ಮಾಜೀ ಅಧ್ಯಕ್ಷ ಡಾ ಎಂ.ಶಾಂತಾರಾಮ ಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ಎ.ಜೆ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ…
ಸಾಮಾಜಿಕ ಬದುಕಿನಲ್ಲಿ ಬಂಟರ ಪಾತ್ರ ಕುರಿತು ವಿಚಾರ ಗೋಷ್ಠಿ, ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಲಿ – ಶ್ರೀಕಾಂತ್ ಶೆಟ್ಟಿ
ನಮ್ಮ ಸಂಸ್ಕೃತಿ ಪರಂಪರೆಯನ್ನು ಮಕ್ಕಳಿಗೆ ಕಲಿಸುವ ಕೆಲಸ ನಮ್ಮ ತಾಯಿಂದಿರು ಮಾಡಬೇಕು. ಸಾಮಾಜಿಕ ಬದುಕಿನಲ್ಲಿ ಬಂಟರ ಪಾತ್ರ ಕುರಿತು ಎಲ್ಲರೂ ಅರಿಯಬೇಕು ಎಂದು ಲೇಖಕ ಶ್ರೀಕಾಂತ್ ಶೆಟ್ಟಿ ಹೇಳಿದರು. ಅವರು ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯ ಇದರ ಆಶ್ರಯದಲ್ಲಿ ನಡೆದ ಬಂಟರ ವಾರ್ಷಿಕ ಸಮಾವೇಶದಲ್ಲಿ ಸಾಮಾಜಿಕ ಬದುಕಿನಲ್ಲಿ ಬಂಟರ ಪಾತ್ರ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಮಲ್ಲಿಕಾ ಸುಮಂತ್ ಶೆಟ್ಟಿ ಉದ್ಘಾಟಿಸಿದರು. ಬಂಟರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ನ ಸಮಾಜ ಭಾಂದವರು ಸಕ್ರೀಯವಾಗಿ ಭಾಗವಹಿಸಿರುವ ಪರಿಣಾಮ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. ಸಮಾರಂಭದಲ್ಲಿ ಉದ್ಯಮಿ ಹರೀಶ್ ಶೆಟ್ಟಿ, ಸಮಾವೇಶ ಸಮಿತಿಯ ಸಂಚಾಲಕರಾದ ಮುಟ್ಲುಪಾಡಿ ಸತೀಶ್ ಶೆಟ್ಟಿ, ಆಶಾಲತಾ ಬಿ.ಶೆಟ್ಟಿ, ಉಪಾಧ್ಯಕ್ಷರಾದ ವಾದಿರಾಜ್ ಶೆಟ್ಟಿ, ಹರ್ಷ ಶೆಟ್ಟಿ, ಕುಂಟಿನಿ ಭಾಸ್ಕರ್ ಶೆಟ್ಟಿ, ದಯಾನಂದ ಶೆಟ್ಟಿ, ಸುರೇಶ್ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್,…
ಸಿಂಗಾರ ಸಿರಿಗೆ ಪ್ರೇಕ್ಷಕರ ಕೊಂಗಾಟ, ಗೊಂಬೆ ಗಾಯನದಲ್ಲಿ ಮೋಹನ ಆಳ್ವ ಬಣ್ಣನೆ ವಿಜಯ್ ಪ್ರಕಾಶ್ ಗಾನಕ್ಕೆ ವಿರಾಸತ್ `ಜೈ ಹೋ…`
ವಿದ್ಯಾಗಿರಿ (ಮೂಡುಬಿದಿರೆ): ಸಂಗೀತ ಸಿರಿಯ ಕೆನ್ನೆಯ ಮೇಲೆ ಪ್ರೀತಿಯ ಕೆಂಬಣ್ಣದಂತೆ `ವಿರಾಸತ್ ವೇದಿಕೆಯು ಭಾನುವಾರ ಸಂಜೆ ವಿಜಯ್ ಪ್ರಕಾಶ್ ಹಾಗೂ ಸಂಗಡಿಗರ ರಸಸಂಜೆಗೆ ಸಾಕ್ಷಿಯಾಯಿತು. ಶ್ರೋತೃಗಳ `ಜೈ ಹೋ… ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 29ನೇ ವರ್ಷದ ಆಳ್ವಾಸ್ ವಿರಾಸತ್ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಭಾನುವಾರ ರಾಗಗಳದ್ದೇ ನರ್ತನ. ಕನ್ನಡ ಹಾಡುಗಳ ರೋಮಾಂಚನ. `ಭಜರಂಗಿ ಸಿನಿಮಾದ `ನಂದ ನಂದ ಶ್ರೀ ಕೃಷ್ಣ ನನ್ನ ಬಂಧುವೇ ನೀ ಶ್ರೀ ಕೃಷ್ಣ ಹಾಡಿನ ಮೂಲಕ ಕಾಮನಬಿಲ್ಲಿನ ಬೆಳಕಿನ ವೇದಿಕೆಗೆ ಬಂದ ನೇರಳೆ ಧಿರಿಸಿನ ಮುದ್ದು ಮೊಗದ ಅಪ್ಪನ ಪ್ರೀತಿಯ ಹುಡುಗಿ ಅನುರಾಧ ಭಟ್, ಸಂಗೀತ ರಸಸಂಜೆಗೆ ಮುನ್ನುಡಿ ಬರೆದರು. ತಂದೆಯ ಬೆವರ ಹನಿಗೆ ಮಕ್ಕಳ ಪ್ರೀತಿಯ ಮುತ್ತುಗಳನ್ನು ತೊಡಿಸಿದ, ತಾನೇ `ಚೌಕ ಸಿನಿಮಾಕ್ಕೆ ಹಾಡಿದ `ನಾನು ನೋಡಿದ ಮೊದಲ ವೀರ … ಅಪ್ಪಾ ಐ ಲವ್ ಯೂ ಪಾ .. ಹಾಡಿದಾಗ ಪ್ರೇಕ್ಷಕ ವರ್ಗದಲ್ಲಿನ ತಂದೆ- ಮಗಳು- ಮಗ ಮಾತ್ರವಲ್ಲ…