Author: admin
ಕೊಲ್ಲಿ ರಾಷ್ಟ್ರದ ತುಳು ರಂಗ ಭೂಮಿಯಲ್ಲಿ ಹೊಸ ಭಾಷ್ಯ ಬರೆದ ಗಮ್ಮತ್ ಕಲಾವಿದರ ಚೊಚ್ಚಲ ಯಶಸ್ವಿ ತುಳು ಸಾಂಸಾರಿಕ ಹಾಸ್ಯಮಯ ನಾಟಕ ‘ವಾ ಗಳಿಗೆಡ್ ಪುಟುದನಾ’
ಯು.ಎ.ಇಯ ಪ್ರತಿಷ್ಠಿತ ನಾಟಕ ತಂಡ ಗಮ್ಮತ್ ಕಲಾವಿದೆರ್ ಯು.ಎ.ಇ ತಮ್ಮ 11 ನೇ ವರ್ಷಾಚರೆಣೆಯ ಅಂಗವಾಗಿ ತಮ್ಮ ಚೊಚ್ಚಲ ಯಶಸ್ವಿ ತುಳು ಸಾಂಸಾರಿಕ ಹಾಸ್ಯಮಯ ನಾಟಕ “ವಾ ಗಳಿಗೆಡ್ ಪುಟುದನಾ” ದುಬೈನ ಎಮಿರೇಟ್ಸ್ ಥಿಯೇಟರ್ನಲ್ಲಿ ಪ್ರದರ್ಶನಗೊಂಡಿತು. ಸರ್ವ ಶ್ರೀಗಳಾದ ಸರ್ವೋತ್ತಮ್ ಶೆಟ್ಟಿ, ಕಲಾಪೋಷಕರುಗಳಾದ ಹರೀಶ್ ಶೇರಿಗಾರ್, ಪ್ರವೀಣ್ ಕುಮಾರ್ ಶೆಟ್ಟಿ, ಸಂದೀಪ್ ರೈ ನಂಜೆ, ಜೋಸೆಫ್ ಮಾತಾಯಿಸ್, ಗಮ್ಮತ್ ಕಲಾವಿದೆರ್ ನ ಪೋಷಕರಾದ ಹರೀಶ್ ಬಂಗೇರ, ಡಯಾನ್ ಡಿಸೋಜಾ, ಜೇಮ್ಸ್ ಮೆಂಡೋನ್ಸಾ, ಮನೋಹರ್ ತೋನ್ಸೆ, ಅಧ್ಯಕ್ಷರಾದ ರಾಜೇಶ್ ಕುತ್ತಾರ್, ರಂಗ ನಿರ್ದೇಶಕ ವಿಶ್ವನಾಥ್ ಶೆಟ್ಟಿ ಮೊದಲಾದ ಗಣ್ಯರು ದೀಪ ಬೆಳಗಿಸುವುದರೊಂದಿಗೆ “ವಾ ಗಳಿಗೆಡ್ ಪುಟುದನಾ” ನಾಟಕಕ್ಕೆ ಚಾಲನೆ ನೀಡಿದರು ಮತ್ತು ಗಮ್ಮತ್ ಕಲಾವಿದೆರ್ ಯು ಎ ಇ ಅಧ್ಯಕ್ಷರಾದ ರಾಜೇಶ್ ಕುತ್ತಾರ್ ರವರು ಪ್ರಾಸ್ತಾವಿಕ ಸ್ವಾಗತದೊಂದಿಗೆ ಗಣ್ಯರನ್ನು ಅಭಿನಂದಿಸಿ ಗೌರವಿಸಿದರು. ಕಾರ್ಯಕ್ರಮದ ಅರಂಭದಲ್ಲಿ ಇತ್ತೀಚೆಗೆ ಅಗಲಿದ ದುಬೈಯ ಕಲಾಪೋಷಕ ದಿ. ದಿವೇಶ್ ಆಳ್ವ ಮತ್ತು ರಂಗ ಸಂಘಟಕ ದಿ. ಕಾಪು ಲೀಲಾಧರ…
ಒಕ್ಕೂಟದ ಮೂಲ್ಕಿಯ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಸರಕಾರದಿಂದ ಅನುಮತಿಗೆ ಸಹಕರಿಸಿದ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರಿಗೆ ಗೌರವ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಕನಸಿನ ಯೋಜನೆಗಳ ಮೂಲ್ಕಿಯ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಸರಕಾರದಿಂದ ಅನುಮತಿ ಕೊಡಿಸುವಲ್ಲಿ ಅಭೂತಪೂರ್ವ ಸಹಕಾರ ನೀಡಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ್ ರವರನ್ನು ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹಾಗೂ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈಯವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರ ಬತ್ತಳಿಕೆಯಿಂದ ಬಂದ ಪ್ರಬಲ ಅಸ್ತ್ರ “ಗುರು“ ನಾಟಕ
ದಾಖಲೆಗಳ ವೀರ, ಬದಲಾವಣೆಯ ಹರಿಕಾರ, ಪ್ರಶಸ್ತಿಗಳ ಸರದಾರ, ಸರಸ್ವತಿ ವರಪುತ್ರ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಬತ್ತಳಿಕೆಯಿಂದ ಬಂತೊಂದು ಪ್ರಬಲ ಅಸ್ತ್ರ (ಮೂಲ ಮರಾಠಿ ನಾಟಕ, ಕಾಶೀನಾಥ್ ಘಾಣೇಕಾರ್ ರ ಮಹಾನ್ ಕೃತಿ) ‘ಗುರು‘ನಾಟಕದ ಪ್ರಥಮ ಪ್ರದರ್ಶನ ಮೊನ್ನೆ ಬಂಟರ ಭವನದಲ್ಲಿ ಜರುಗಿತು. ಸತ್ಯ,ಧರ್ಮ, ನ್ಯಾಯ, ನೀತಿ ಎಂಬ ಆದರ್ಶಗಳನ್ನು ಪಾಲಿಸಿಕೊಂಡು, ಸಮಾಜಕ್ಕೆ ತನ್ನಿಂದಾದ ಉಪಕಾರ ಗೈಯುತ್ತಾ ಇರುವ ಓರ್ವ ಕಾಲೇಜು ಪ್ರಿನ್ಸಿಪಾಲ್ ವಿದ್ಯಾನಂದ್ ಆತನೊಟ್ಟಿಗೆ ಕೆಲವು ಕಾಲೇಜು ಪ್ರೊಫೆಸರ್ ಗಳು ಆತನ ಕುತಂತ್ರ ಬುದ್ಧಿ ತಿಳಿಯದಷ್ಟು ಒಳ್ಳೆಯ ಮನಸ್ಸಿನವರಾಗಿದ್ದರು. ಈ ಪ್ರಿನ್ಸಿಪಾಲ್ ಅದರಲ್ಲೂ ಶ್ಯಾಮ್ ಸುಂದರ್ ಅಚ್ಚು ಮೆಚ್ಚಿನ ಮನೆಮಗ. ಇನ್ನಿತರರು ಕ್ಷೀರಸಾಗರ್, ಪಿ. ಎನ್. ರಾವ್. ಇದ್ದೊಬ್ಬ ಮಗನನ್ನು ಕಳಕೊಂಡಿದ್ದರೂ ಮಡದಿ ಡಾ. ಸುಮಿತ್ರಾಳೊಂದಿಗೆ ಅಪ್ತ ಮಿತ್ರ ಶಂಭು ಹಾಗೂ ಆತನ ಮಡದಿ ನೀಲಮ್ ಳೊಂದಿಗೆ ಬಹಳ ಸಂತೋಷವಾಗಿ ದಿನ ಕಳೆಯುತ್ತಿದ್ದರು ಈ ಪ್ರಾಚಾರ್ಯರು. ಒಳ್ಳೆಯವರು…
ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ ; ಮಹಿಳೆಯರ ಸೌಭಾಗ್ಯದ ಸಂಕೇತ ಅರಸಿನ ಕುಂಕುಮ :ಸಿಎ ಸುರೇಂದ್ರ ಕೆ. ಶೆಟ್ಟಿ
ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಆರಸಿನ ಕುಂಕುಮ ಕಾರ್ಯಕ್ರಮವು ಜೂಯಿ ನಗರದಲ್ಲಿರುವ ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಮಾತನಾಡಿ, ಸನಾತನ ಧರ್ಮದಲ್ಲಿ ಅರಸಿನ ಕುಂಕುಮಕ್ಕೆ ವಿಶೇಷ ಮಾನ್ಯತೆಯಿದೆ. ಅರಸಿನ ಕುಂಕುಮ ಮಹಿಳೆಯರ ಸೌಭಾಗ್ಯದ ಸಂಕೇತ. ಕುಂಕುಮವನ್ನು ಹಚ್ಚುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಮಹಿಳೆಯರು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ನಮ್ಮ ಪರಂಪರೆ ಜತೆಗೆ ಆಧುನಿಕತೆಯನ್ನೂ ಅಳವಡಿಸಿಕೊಂಡು ತಮ್ಮ ಪ್ರತಿಭೆ ಮೂಲಕ ಅಸೋಸಿಯೇಷನ್ ನಲ್ಲಿ ಮಹಿಳಾ ವಿಭಾಗದಲ್ಲಿ ಸಕ್ರಿಯರಾಗಿರುವುದು ಅಭಿನಂದನೀಯವೆಂದು ನುಡಿದರು. ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಮತ್ತು ಪ್ರಭಾ ಎಸ್. ಶೆಟ್ಟಿ ದಂಪತಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೇಜಾಕ್ಷಿ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿ, ಮಹಿಳಾ ವಿಭಾಗದ ಕಾರ್ಯ…
ಕಾಪು ಪರಿಸರದ ಜನಪ್ರಿಯ ಸಂಘಟಕ ಸಮಾಜ ರತ್ನ ಲೀಲಾಧರ ಶೆಟ್ಟಿ ಸ್ಮರಣಾರ್ಥ ಅವರ ಅಭಿಮಾನಿ ಬಳಗದ ವತಿಯಿಂದ ಸಮಾಜಸೇವಕ ಸೂರಿ ಶೆಟ್ಟಿ ಕಾಪು ಅವರ ನೇತೃತ್ವದಲ್ಲಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಶಿರ್ವ ಕೊಲ್ಲಬೆಟ್ಟು ಸಂಘಮಿತ್ರ ಆವರಣದಲ್ಲಿ ನಡೆಯಿತು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಲಾಲಾಜಿ ಮೆಂಡನ್, ಮುಂಬಯಿ ಉದ್ಯಮಿ ತುಳು ಕೂಟ ಫೌಂಡೇಶನ್ ನಾಲಾಸೋಪಾರ ಇದರ ಅಧ್ಯಕ್ಷ ಶಶಿಧರ ಕೆ ಶೆಟ್ಟಿ ಇನ್ನಂಜೆ, ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ| ವೀಣಾ, ಡಾ। ಮಂಜುಶ್ರೀ ಪೈ, ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಕುತ್ಯಾರು ಕೇಂಜ ಸಾಯಿನಾಥ ಶೆಟ್ಟಿ, ಕರಂದಾಡಿ ಪ್ರೇಮನಾಥ ಶೆಟ್ಟಿ ಕರಂದಾಡಿ ಕುಟಚಾದ್ರಿ, ಮೋಹನ ಶೆಟ್ಟಿ, ಶಿರ್ವ ಬಂಟರ ಸಂಘದ ಅಧ್ಯಕ್ಷ ವೀರೇಂದ್ರ ಶೆಟ್ಟಿ ಪಂಜಿಮಾರು, ಕರಂದಾಡಿ ಶ್ರೀ ಬ್ರಹ್ಮಲಿಂಗೇಶ್ವರ ಭಜನ ಮಂಡಳಿಯ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಕುತ್ಯಾರು ಯುವಕ ಮಂಡಲದ ಅಧ್ಯಕ್ಷ ಸುಶಾಂತ್ ಶೆಟ್ಟಿ,…
ಅಳಪೆ ಕಣ್ಣೂರು ಗ್ರಾಮದ ಕೊಡಕಾಲ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನದ ಪುನಃ ಪ್ರತಿಷ್ಠ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜನಪದೀಯವಾಗಿ ನಂಬಿಕೊಂಡು ಬಂದ ದೈವಗಳು ನಮ್ಮ ಸಂರಕ್ಷಕರು. ಜಗತ್ತಿನ ಬೇರೆಲ್ಲೂ ಇರದ ವಿಶಿಷ್ಟ ನಂಬಿಕೆ, ಸಂಸ್ಕೃತಿ ತುಳುನಾಡಿನಲ್ಲಿದೆ. ದೈವರಾಧನೆ ನಮ್ಮ ಜಿಲ್ಲೆಯ ವಿಶಿಷ್ಟ ಪರಂಪರೆ. ಆಗಮಶಾಸ್ತ್ರ ಬರುವುದಕ್ಕೂ ಹಿಂದೆ ನಾವು ದೈವರಾಧನೆಯನ್ನು ನಂಬಿಕೊಂಡು ಬಂದಿದ್ದೇವೆ ಎನ್ನುವುದು ಪಾಡ್ದನದ ಮೂಲಕ ತಿಳಿಯುತ್ತದೆ ಎಂದರು. ಪುರಾಣ ಪ್ರಸಿದ್ಧ ಮತ್ತು ನಮ್ಮ ಹಿರಿಯರು ನಂಬಿಕೊಂಡು ಬಂದ ಪುರಾತನ ದೈವಗಳಲ್ಲಿ ಮುಂಡಿತ್ತಾಯ ವೈದ್ಯನಾಥ ಕ್ಷೇತ್ರವೂ ಒಂದು. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕೇವಲ 9 ತಿಂಗಳೊಳಗೆ ದೈವಸ್ಥಾನದ ಅಭಿವೃದ್ಧಿ ಕಾರ್ಯಗಳು ಅದ್ಬುತವಾಗಿ ಮೂಡಿಬಂದಿವೆ ಎಂದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ದೈವರಾಧನೆಯು ಸಮಾಜವನ್ನು ಒಟ್ಟು ಮಾಡುವ ವಿಶಿಷ್ಟವಾದ ಆರಾಧನಾ ಪದ್ಧತಿ. ಈ ದೈವಸ್ಥಾನದ ಕಾರ್ಯ ಉತ್ತಮವಾಗಿ ಮೂಡಿಬಂದಿದೆ. ಈ ಶಕ್ತಿ ಪೀಠ…
ವಿದ್ಯಾಗಿರಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಿಸಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು 9 ರ್ಯಾಂಕ್ಗಳನ್ನು ಪಡೆದಿದ್ದಾರೆ. ಎಂ.ಡಿ. ಕ್ಲಿನಿಕಲ್ ಯೋಗದಲ್ಲಿ ಡಾ.ಅಂಶುಮಾನ್ ಆರ್ ಯಾದವ್ (ಪ್ರಥಮ), ಮೊಯಿರಂಗ್ತೇಮ್ ಜಾಯ್ಚಂದ್ ಸಿಂಗ್(6ನೇ), ಡಾ.ಖಂದುರಕ್ಪ್ಮಾ ಗೀತಾರಾಣಿ ದೇವಿ (7ನೇ), ಡಾ.ಒಯಿನಮ್ ಬಾಬ್ಬಿಚಂದ್ ಬಾಷ್ ದೇವಿ (8ನೇ) ಮತ್ತು ಡಾ.ಬಾಲಗೋವಿಂದ ಟಿ.ಪಿ. (10ನೇ) ರ್ಯಾಂಕ್ ಪಡೆದಿದ್ದಾರೆ. ಎಂ.ಡಿ. ಕ್ಲಿನಿಕಲ್ ನ್ಯಾಚರೋಪತಿಯಲ್ಲಿ ಡಾ.ವನಿತಾ ಶೆಟ್ಟಿ (2ನೇ), ಡಾ.ಸ್ವಾತಿ ಎಸ್. (5ನೇ), ಡಾ. ಪ್ರಜ್ವಲ್ ಎಚ್.ಎಂ.(6ನೇ) ಮತ್ತು ಡಾ.ರಂಜಿನಿ ಮೂರ್ತಿ (7ನೇ) ರ್ಯಾಂಕ್ ಪಡೆದಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಸಾಹಸ ತ್ಯಾಗ ಬಲಿದಾನಕ್ಕೆ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಗೋರ್ಖಾ ರೈಫಲ್ಸ್ ರೇಜಿಮೆಂಟ್ ಸೇವೆ ಸಲ್ಲಿಸಿದ್ದ ನಿವೃತ್ತ ಸೇನಾಧಿಕಾರಿ ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ ಅವರು 2024ರ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಮಿಲಾಗ್ರಿಸಿನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎಸ್ಸಿ ಪದವಿ ಮುಗಿಸಿದ ಬೃಜೇಶ್ ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿದರು. ಪದವಿಯಲ್ಲಿದ್ದಾಗ ಎನ್.ಸಿ.ಸಿ ಸೇರಿ ವಿಶ್ವವಿದ್ಯಾಲಯದಲ್ಲಿ ಬೆಸ್ಟ್ ಕೇಡೆಟ್ ಎಂದು ಗುರುತಿಸಿಕೊಂಡು ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಎನ್.ಸಿ.ಸಿ ಕೇಡೆಟ್ ಆಗಿ ಪಾಲ್ಗೊಂಡಿದ್ದರು. ಯು.ಪಿ.ಎಸ್.ಸಿ ಆಯೋಜಿಸುವ ಕಂಬೈನ್ಸ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ (CDSE) ಪರೀಕ್ಷೆ ಹಾಗೂ ಎಸ್.ಎಸ್.ಬಿ ಇಂಟರ್ವ್ಯೂನಲ್ಲಿ ತೇರ್ಗಡೆಗೊಂಡು ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂ ಸೇನೆಯ ಪ್ರತಿಷ್ಠಿತ ಗೋರ್ಖಾ ರೈಫಲ್ಸ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಅಸ್ಸಾಂ ಮತ್ತು ಮಣಿಪುರ ಸೇರಿದಂತೆ…
1976ರಲ್ಲಿ ಶಿಬರೂರುಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ ನವೀಕರಣಗೊಂಡಿದ್ದು 2010ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಕೈಗೊಂಡಿದ್ದು ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ನಡೆಯುತ್ತಿದೆ. ಕ್ಷೇತ್ರವು ದೈವ ಕ್ಷೇತ್ರ ಮಾತ್ರವಲ್ಲದೇ ನಾಗ ಕ್ಷೇತ್ರವು ಆಗಿರುತ್ತದೆ. ಕ್ಷೇತ್ರದ ವಿಶೇಷವೇನೆಂದರೆ ಬ್ರಹ್ಮಕುಂಭಾಭಿಷೇಕ ನಡೆಯುವ ಸಂದರ್ಭದಲ್ಲಿ ನಾಗಮಂಡಲ ಸೇವೆಯು ನಡೆಯುವುದು ಗಮನಾರ್ಹ. ಇದೇ ಬರುವ ಎಪ್ರಿಲ್ 22ರಿಂದ 30ರ ತನಕ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮಗಳು ಜರಗಲಿದ್ದು 26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಕುಂಭಾಭಿಷೇಕವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಶಿಬರೂರುರವರ ನೇತೃತ್ವದಲ್ಲಿ ಜರಗಲಿದ್ದು, ಅದೇ ದಿನ ರಾತ್ರಿ ಕ್ಷೇತ್ರದಲ್ಲಿ ನಾಗಮಂಡಲ ಸೇವೆ ಜರುಗಲಿದೆ. ಎಪ್ರಿಲ್ 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವವು ಜರಗಲಿದ್ದು ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು…
ಮೂಡುಬಿದಿರೆ: ಇಂದಿನ ಸಮಾಜ ಅಭಿವೃದ್ಧಿಯತ್ತಾ ಸಾಗುತ್ತಿದೆ, ನಿಜ. ಆದರೆ ಮೂಲಭೂತವಾಗಿ ಬಡವ- ಶ್ರೀಮಂತ, ಅಕ್ಷರಸ್ಥ- ಅನಕ್ಷರಸ್ಥ, ಆರೋಗ್ಯ ಸೇವೆಯನ್ನು ಪಡೆಯಲು ಶಕ್ತರಾದ ಹಾಗೂ ಅಶಕ್ತರಾದ ನಡುವಿನ ಕಂದಕ ಮಾತ್ರ ಹೆಚ್ಚುತ್ತಲೆ ಸಾಗಿದೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ಸಮಾಜಮುಖಿ ಉಚಿತ ಸೇವೆಗಳು ಸ್ತುತ್ಯರ್ಹ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ಯುವವಾಹಿನಿ(ರಿ.) ಮೂಡುಬಿದಿರೆ ಘಟಕ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜರುಗಿದ ಎರಡನೇ ‘ಉಚಿತ ನೇತ್ರ ತಪಾಸಣಾ ಶಿಬಿರ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮತನಾಡಿದರು. ಸಮಾಜದ ಪರಿಕಲ್ಪನೆಯಲ್ಲಿ ಜರಗುವ ಪ್ರತಿ ಕೆಲಸಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇರಲು ಸಹಕಾರಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿ…