Author: admin
ಮೂಡುಬಿದಿರೆ: ಮೇ 2025 ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 15.09 ಫಲಿತಾಂಶ ಬಂದಿದ್ದರೆ, ಆಳ್ವಾಸ್ನ ಒಟ್ಟು 43 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 44.79 ಫಲಿತಾಂಶ ದಾಖಲಿಸಿದ್ದಾರೆ. ಆಳ್ವಾಸ್ನ ವಿದ್ಯಾರ್ಥಿಗಳಾದ ಗೋಡ್ವಿಲ್(309), ಜೆ ಬಸವರಾಜ್ (289), ಅವನಿ ಉಮೇಶ್ ರಾವ್ (283), ನಂದಿಶ್ ಕೆ ಎ (274), ಹರ್ಷವರ್ಧನ್ (273), ಸನ್ನಿಧಿ (271), ಅಪರ್ಣ ಸುಧಿ (265), ಚಿರಂತನ (263), ಅಂಕಿತಾ ರಾವ್(258), ಪ್ರಜ್ನಾ ಎನ್ (253), ನವದೀಪ್ ರೆಡ್ಡಿ (249), ವಿಸ್ಮಯ್ ಭಟ್(244) ಅನಿರುಧ್ದ್(241), ನಂದೀಶ್ ಎಸ್. (238), ಪ್ರಣಯ್ (237), ಜೈಶ್ನವ್ (236), ರೋಹಿತ್ ಪೂಜಾರಿ (234), ಶ್ರವಣ್ (228), ವೈಷ್ಣವಿ ಪ್ರಸಾದ್ (228), ಅಸ್ನಾ (225), ನಕ್ಷತ್ರಾ ಸಿ. (224), ರಿಯೋನಾ (224), ಸಾಕ್ಷಿ ಆರ್ (224), ಕ್ರಷ್ಣ ವರ್ಮ (221), ಸಮೀಕ್ಷಾ ಕೋಟ್ಯಾನ್ (218), ವೃಂದಾ (218), ಮಿಝ್ಬಾ ಶೇಖ್ (217), ವಚನ್ ರವಿಕುಮಾರ್ (217), ಅಂಬಿಕಾ ಕೆ ಎಸ್. (214),…
ಗುರುಗಳು ಅಂದಾಗ ನಮಗೆ ನೆನಪಿಗೆ ಬರೋದು ಬರೀ ಪಾಠ ಮಾಡಿದ ಗುರುಗಳು. ನಿಜ, ಅದರಲ್ಲೇನು ತಪ್ಪಿಲ್ಲ. ಒಮ್ಮೆ ಬದುಕಿನ ಕಿರುದಾರಿಯಿಂದ ನಡೆದುಕೊಂಡು ಬಂದು ಹೆದ್ದಾರಿಯ ತನಕ ಕೈ ಹಿಡಿದವರು. ಕೈ ಕೊಟ್ಟವರು, ಬೆಳೆಸಿದವರು, ಬೆರೆಸಿದವರು ಬಳಸಿದವರು ಎಲ್ಲರೂ ಗುರುಗಳೇ ಅಲ್ವಾ? ನಮಗೆ ಯಾರು ಯಾವ ರೀತಿ ಗುರುಗಳು ಆದ್ರು ಅನ್ನೋದರ ಬಗ್ಗೆ ನಾವು ಮಾತಾಡೋಣ. ಗುರು ಪೂರ್ಣಿಮೆಯಂದು ಎಲ್ಲಾ ಗುರುಗಳನ್ನು ಅವರ ಉಪದೇಶ, ಉಪನಿಷತ್ತನ್ನು ಮನಸಾರೆ ಒಪ್ಪಿಕೊಳ್ಳೋಣ. ಅಪ್ಪಿಕೊಳ್ಳೋಣ. ಬಾಲ್ಯದಲ್ಲಿ ನಮ್ಮ ಯೋಚನಾ ಶಕ್ತಿಯೇ ನಮಗೆ ಗುರು ಮತ್ತೆ ಆಗುತ್ತೆ ಜೀವನ ಶುರು. ಕಲಿಯುವ, ಕಲಿಸುವ, ಮುನ್ನಡೆಯುವ, ಮುನ್ನಡೆಸುವ, ಮುಗ್ಗರಿಸುವ, ಮಗ್ಗುಲು ಬದಲಿಸುವ ಪಾಠ. ಒಂದು ಕಾಲದಲ್ಲಿ ಗುರುಕುಲವಿತ್ತು. ಶಿಷ್ಯರನ್ನು ಬಲಿಷ್ಠರನ್ನಾಗಿ ಮಾಡುವ ಸರಸ್ವತಿ ದೇಗುಲ ಈಗ ಅದುವೇ ವಿಶ್ವವಿದ್ಯಾಲಯವಾಗಿ ವಿಶ್ವರೂಪ ಪಡೆದಿದೆ. ನಮ್ಮಕಾಲದ ಗುರುಗಳ ಹಾಗೆ ಈಗಿನ ಕಾಲದಲ್ಲಿ ಅಂತಹ ಗುರುಗಳು ಇಲ್ಲ ಅನ್ನೋದು ವಾಡಿಕೆ. ಕೆಲವೊಮ್ಮೆ ಅದೂ ಸರಿ ಅಂತಾನೂ ಅನಿಸ್ತದೆ. ಆವಾಗ ಗುರುಗಳು ಹೆಚ್ಚಾಗಿ ಪರಿವಾರದ ಸದಸ್ಯರಂತೆ…
ಮುದ್ರಾಡಿ ಕ್ಷೇತ್ರವನ್ನು ಬೆಳಗಿಸಿದ ಧರ್ಮಯೋಗಿ ಮೋಹನ ಸ್ವಾಮೀಜಿ ಸಮಾಜದ ದೊಡ್ಡ ಶಕ್ತಿ : ರವೀಂದ್ರ ಶೆಟ್ಟಿ ಬಜಗೋಳಿ
ನಮ್ಮ ವಿವಿಧ ಧರ್ಮದ ಆಚರಣೆಗಳು ಬೇರೆಯಾದರೂ ಉದ್ದೇಶ ಒಂದೇ ಜಗತ್ತಿಗೆ ಒಳಿತು ಮಾಡುವ ಬೆಳಕು ನೀಡುವುದು. ಮುದ್ರಾಡಿ ಶ್ರೀ ಕ್ಷೇತ್ರವು ಅಂತಹ ಮಹತ್ವದ ಕಾರ್ಯವನ್ನು ನಡೆಸುತ್ತಿದೆ. ಮುದ್ರಾಡಿ ಕ್ಷೇತ್ರಕ್ಕೆ ಅದ್ಭುತ ಶಕ್ತಿಯಿದೆ. ಧರ್ಮ ಯೋಗಿ ಮತ್ತು ಕರ್ಮಯೋಗಿಯಾಗಿದ್ದ ಮೋಹನ ಸ್ವಾಮೀಜಿಯಿಂದ ಕ್ಷೇತ್ರವು ಬೆಳಗುತ್ತಿದೆ ಎಂದು ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಹೇಳಿದರು. ಅವರು ಹೆಬ್ರಿಯ ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಯೋಗಿ ಮೋಹನ ಸ್ವಾಮೀಜಿಯವರ ೪ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಧರ್ಮಯೋಗಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಜಾತಿ ಮತ ಧರ್ಮವನ್ನು ನಾವು ಪ್ರೀತಿಸುವುದರಿಂದ ಮಾತ್ರ ಧರ್ಮ ಬೆಳೆಯುತ್ತದೆ. ಕರಾವಳಿ ಜಿಲ್ಲೆ ತುಳುನಾಡಿನಲ್ಲಿ ನಾಗರಾಧನೆ ಮತ್ತು ದೈವರಾಧನೆಯ ಮೂಲಕ ಒಗ್ಗಟ್ಟು ಇದೆ. ಅದು ಸದೃಡ ಕುಟುಂಬದ ವ್ಯವಸ್ಥೆಗೆ ಕಾರಣವಾಗಿದೆ. ಆ ಮೂಲಕ ಸಂಘಟಿತ ಸಮಾಜ ನಿರ್ಮಾಣವಾಗಿದೆ ಎಂದು ವಿನಯ ಗುರೂಜಿ ಹೇಳಿದರು. ಮುಖಂಡ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ಸರ್ವ ಧರ್ಮದವರೂ ಕೂಡ ಬಂದು…
ಬಂಟರ ಸಂಘ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಆಶ್ರಯದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವು ಜುಲೈ 6 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೀರಾ ರೋಡ್ ನ ವಿಜಯ್ ಪಾರ್ಕ್ ಬಳಿ ಶಾಂತಿ ಪಾರ್ಕ್ ನ ಸ್ವಸ್ತಿಕ್ ಅಂಬರ್ ಪ್ಲಾಜಾ ಬ್ಯಾಂಕ್ವೆಟ್ಸ್ ನಲ್ಲಿ ನಡೆಯಿತು. ರಕ್ತದಾನ ಶಿಬಿರವನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡುತ್ತಾ, ಯುವ ವಿಭಾಗದ ಸದಸ್ಯರು ಬಹಳ ಉತ್ಸಾಹದಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಯಾವುದೇ ಕಂಪನಿಗಳಲ್ಲಿ ಉತ್ಪತ್ತಿ ಮಾಡಲಾಗದ ರಕ್ತ ಮನುಷ್ಯನ ಶರೀರದಲ್ಲಿ ಉತ್ಪತ್ತಿಯಾಗುವುದರಿಂದ ಇನ್ನೊಬ್ಬರ ಬದುಕಿಗೆ ಅಗತ್ಯವಿರುವ ಸಂದರ್ಭದಲ್ಲಿ ದಾನ ಮಾಡಬೇಕು. ರಕ್ತದಾನಕ್ಕೆ ಭಯಪಡುವ ಅಗತ್ಯವಿಲ್ಲ. ಅದರಿಂದ ಮತ್ತೊಬ್ಬರ ಜೀವ ಉಳಿಯುವಂತಾಗುತ್ತದೆ. ಪ್ರಾದೇಶಿಕ ಸಮಿತಿಯಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ರವೀಂದ್ರ ಶೆಟ್ಟಿ ಕೊಟ್ರಪಾಡಿಯವರು ಬಹಳಷ್ಟು ಸಮಾಜದ ಬಂಧುಗಳಿಗೆ ಆಶಯವಾಗುವ ರೀತಿಯಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದು ನುಡಿದರು. ಮುಖ್ಯ ಅತಿಥಿ…
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಲಿ ಮಂಗಳೂರು : ರೂ.೬೦೬ ಕೋಟಿ ಠೇವಣಿ, ರೂ.೫೨೧ ಕೋಟಿ ಸಾಲದೊಂದಿಗೆ ರೂ.೧೧೨೭ ಕೋಟಿ ಮೀರಿದ ವ್ಯವಹಾರ
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ೩೧ ಶಾಖೆಗಳನ್ನು ಹೊಂದಿ ಕಾರ್ಯಾಚರಿಸುತ್ತಿರುವ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ೨೦೨೫-೨೬ನೇ ಸಾಲಿನ ಮೊದಲ ತ್ರೆöÊಮಾಸಿಕ ಅವಧಿ ೩೦.೦೬.೨೦೨೫ರ ಅಂತ್ಯಕ್ಕೆ ರೂ.೬೦೬ ಕೋಟಿ ಠೇವಣಿ ಮತ್ತು ರೂ.೫೨೧ ಕೋಟಿ ಸಾಲದೊಂದಿಗೆ ರೂ.೧೧೨೭ ಕೋಟಿ ಒಟ್ಟು ವ್ಯವಹಾರವನ್ನು ದಾಖಲಿಸಿರುವುದು. ಜೂನ್ ೨೦೨೪ಕ್ಕೆ ಹೋಲಿಸಿದಾಗ, ಠೇವಣಿಯು ರೂ.೬೯ ಕೋಟಿ ಹಾಗೂ ಸಾಲವು ರೂ.೫೬ ಕೋಟಿ ಹೆಚ್ಚಳವಾಗಿ, ಒಟ್ಟು ವ್ಯವಹಾರದಲ್ಲಿ ರೂ.೧೨೫ ಕೋಟಿ ವೃದ್ಧಿಯನ್ನು ಕಂಡಿದೆ. ಕೆ. ಜೈರಾಜ್ ಬಿ. ರೈ ಅಧ್ಯಕ್ಷರು ಸಂಘವು ದಿನಾಂಕ ೩೦.೦೬.೨೦೨೫ ಕ್ಕೆ ರೂ.೨.೬೦ ಕೋಟಿ ನಿವ್ವಳ ಲಾಭವನ್ನು ಗಳಿಸಿದೆ, ಮತ್ತು ಒಟ್ಟು ಅನುತ್ಪಾದಕ ಆಸ್ತಿ ಹೊರಬಾಕಿ ಸಾಲದ ಶೇ.೦.೦೫ಕ್ಕೆ ಸೀಮಿತವಾಗಿದೆ ಹಾಗೂ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ. ಸಂಘವು ೨೦೨೫-೨೬ನೇ ವಿತ್ತೀಯ ವರ್ಷದ ಮೊದಲ ತ್ರೆöಮಾಸಿಕ ಅವಧಿ ೩೦.೦೬.೨೦೨೫ಕ್ಕೆ ಸಾಧಿಸಿರುವ ಈ ಪ್ರಗತಿಯು ತೃಪ್ತಿದಾಯಕವಾಗಿದೆ. ಈ ತ್ರೆöÊಮಾಸಿಕ ಅವಧಿಯ ಜೂನ್ ತಿಂಗಳಲ್ಲಿ ೧೧…
ಜೈ ತುಳುನಾಡ್ (ರಿ) ಸಂಸ್ಥೆಯಿಂದ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ನ ಹಾಡುಗಳ ಸ್ಪರ್ಧೆ ಏರ್ಪಡಿಸಿದೆ. ಟೀಮ್ ಐಲೇಸಾ ಪ್ರಾಯೋಜಕತ್ವದಲ್ಲಿ ನಡೆಯುವ ಸ್ಪರ್ಧೆಯಲ್ಲಿಹಾಡಿನ ಕ್ಯಾಟಗರಿಯನ್ನು ಎರಡು ವಿಭಾಗಗಳನ್ನಾಗಿ ಮಾಡಿದೆ. ಹನ್ನೆರಡು ವರ್ಷದೊಳಗಿನ ಮತ್ತು ಹನ್ನೆರಡು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತಿ ವಿಭಾಗದಲ್ಲೂ ಮೂರು ಬಹುಮಾನಗಳು, ಒಟ್ಟು 6 ನಗದು ಬಹುಮಾನಗಳು ಅಲ್ಲದೇ ತೀರ್ಪುಗಾರರ ಮೆಚ್ಚುಗೆ ಪಡೆದ ಹತ್ತು ಹಾಡುಗಾರರಿಗೆ ಎಕ್ಸಿಸ್ ವಿಮಾ ಸಂಸ್ಥೆ ಹತ್ತು ಹಾಡುಗಾರರಿಗೆ ಉಡುಗೊರೆ ನೀಡಲಿದೆ ಎಂದು ಜೈ ತುಳುನಾಡಿನ ವಕ್ತಾರರು ತಿಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ilesa The Music channel ನಲ್ಲಿರುವ ತುಳು ಹಾಡುಗಳನ್ನಷ್ಟೇ ಹಾಡಿ ಅದರ ವಿಡಿಯೋ ಮಾಡಿ +917090841297 ಗೆ ಕಳುಹಿಸಬೇಕು. ನಿಮಗೆ ಇದರ ನಿಯಮಗಳ ಬಗ್ಗೆ ಸ್ಪರ್ಧೆಯ ಬಗ್ಗೆ ಮಾಹಿತಿ ಬೇಕಿದ್ದಲ್ಲಿ 7090841297ಗೆ ಕರೆ ಮಾಡಿ ಸ್ಪರ್ಧೆಯ ವಿವರವನ್ನು ಸವಿವರವಾಗಿ ಪಡೆದುಕೊಳ್ಳಬಹುದು. ಹೆಚ್ಚಿನ ಹಾಡುಗಾರರು ಹೊಸ ಹಾಡುಗಳನ್ನು ಹಾಡುವುದೇ ಮುಖ್ಯ ಗುರಿ. ಭಾಷೆಗಾಗಿಯೇ ಕೆಲಸ ಮಾಡುವ 39 ದೇಶಗಳಲ್ಲಿ ಹರಡಿಕೊಂಡಿರುವ ಐಲೇಸಾ…
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಪದಗ್ರಹಣ ಸಮಾರಂಭ ಜುಲೈ 10 ರಂದು ಗುರುವಾರ ಸಂಜೆ 7: 00 ಗಂಟೆಗೆ ಆರ್.ಎನ್ ಶೆಟ್ಟಿ ಸಭಾಭವನದ ಎಸ್.ಎಸ್ ಹೆಗ್ಡೆ ಸಭಾಭವನದಲ್ಲಿ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಭುಜಂಗ ಶೆಟ್ಟಿ ರಟ್ಟಾಡಿ, ಕೋಶಾಧಿಕಾರಿಯದ ಶ್ರೀ ಅಣ್ಣಪ್ಪ ಶೆಟ್ಟಿ ಯರುಕೋಣೆ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ 317c ಯ ಮಾಜಿ ಜಿಲ್ಲಾ ಗವರ್ನರ್ ಲಯನ್ ಎಂ.ಜೆ.ಎಫ್ ಬಿ. ದಿವಾಕರ ಶೆಟ್ಟಿ ಭದ್ರಾವತಿ ಪ್ರಮಾಣ ವಚನ ಬೋಧಿಸಲಿದ್ದಾರೆ. ನೂತನವಾಗಿ ಸೇರ್ಪಡೆಕೊಳ್ಳಲಿರುವ ಹೊಸ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಚೀಫ್ ಕೋ ಆರ್ಡಿನೇಟರ್ ಲಯನ್ ಪಿ.ಎಂ.ಜೆ.ಎಫ್ ರಂಜನ್ ಕಲ್ಕೂರ ಪ್ರಮಾಣವಚನ ನಡಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರೀಜನ್ ನ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲೆಯ ಕ್ಯಾಬಿನೆಟ್ ಸದಸ್ಯರುಗಳು ಭಾಗವಹಿಸಲಿದ್ದಾರೆ. ವಿವಿಧ ರೀತಿಯ ಸೇವಾ ಚಟುವಟಿಕೆಗಳು ಮತ್ತು ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಸ್ಥಾಪಕ…
ಮುಂಬಯಿಯ ಪ್ರಸಿದ್ಧ ಹೊಟೇಲ್ ಉದ್ಯಮಿ, ಅಜಂತಾ ಕ್ಯಾಟರರ್ಸ್ ಹಾಗೂ ಕೃಷ್ಣ ಪ್ರೇಮ ಕನ್ಸಲ್ಟೆನ್ಸಿಯ ಆಡಳಿತ ನಿರ್ದೇಶಕ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಜಯರಾಮ್ ಶೆಟ್ಟಿ ಇನ್ನಾ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಇವರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದಯೆ ಇವರ ಮತ್ತು ಇವರ ಕುಟುಂಬದ ಮೇಲೆ ಸದಾ ಇರಲಿ ಎಂದು ಹಾರೈಸಿ, ಒಕ್ಕೂಟದ ಪರವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) : ಉಪ್ಪಿನಂಗಡಿ ಶಾಲೆಯಲ್ಲಿ “ಯಕ್ಷ ಶಿಕ್ಷಣ” ಯಕ್ಷಗಾನ ತರಬೇತಿ ಉದ್ಘಾಟನೆ
ಶ್ರೀರಾಮ ಶಾಲೆ ವೇದಶಂಕರ ನಗರ ಉಪ್ಪಿನಂಗಡಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಉಪ್ಪಿನಂಗಡಿ ಘಟಕದ ಮೇಲ್ವಚಾರಣೆಯಲ್ಲಿ 2025-26 ನೇ ಸಾಲಿನ “ಯಕ್ಷ ಶಿಕ್ಷಣ” ಯೋಜನೆಯು ಜೂನ್ 27 ರಂದು ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮವು ಉರಿಮಜಲು ರಾಮ ಭಟ್ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ ಜಗದೀಶ್ ಶೆಟ್ಟಿಯವರು ಉದ್ಘಾಟಿಸಿ, ಪಟ್ಲ ಫೌಂಡೇಶನ್ ಸ್ಥಾಪನೆಯ ಉದ್ದೇಶ, ಕಾರ್ಯವೈಖರಿಯನ್ನು ತಿಳಿಸಿದರು. ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಸದಸ್ಯರಾದ ಸುಧಾಕರ್ ಶೆಟ್ಟಿ ಗಾಂಧೀಪಾರ್ಕ್ ಇವರು ಮಾತನಾಡಿ, ಮಕ್ಕಳು ಕಲೆಯನ್ನು ಉಳಿಸಿಕೊಂಡು, ಉತ್ತಮ ಸಂಸ್ಕಾರ ಬೆಳೆಸಿಕೊಂಡು ಹೋಗಬೇಕಾದರೆ ಇಂತಹ ತರಬೇತಿಗಳು ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಯು.ಜಿ ರಾಧಾ ಮಾತನಾಡಿ, ಉಚಿತ ಯಕ್ಷಗಾನ ತರಬೇತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಯಕ್ಷಗಾನ ನಾಟ್ಯ ಗುರುಗಳಾದ ಸತೀಶ್ ಆಚಾರ್ಯ ಮಾಣಿ ಇವರಿಗೆ ಸ್ವಸ್ತಿಕ ನೀಡಿ ಗುರುವಂದನೆ ಮಾಡಿ…
ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಪಂಚಮ ಸಂಭ್ರಮ ಮತ್ತು ಎಮ್.ಆರ್.ಪಿ.ಎಲ್ ಕೊಡುಗೆಯಾಗಿ ನೀಡಿದ ‘ಹೋಮ್ ಕೇರ್ ವ್ಯಾನ್’ ಮನೆ ಬಾಗಿಲಿಗೆ ಆರೋಗ್ಯ ಸೇವೆ ವಾಹನದ ಉದ್ಘಾಟನಾ ಕಾರ್ಯಕ್ರಮ ಕಟೀಲು ಆಸ್ಪತ್ರೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಎಚ್.ಎಸ್ ಬಲ್ಲಾಳ್ (ಉಪ ಕುಲಪತಿಗಳು, ಮಾಹೆ ಮಣಿಪಾಲ) ಮಾತನಾಡಿ, ಕೇವಲ 5 ವರ್ಷದಲ್ಲಿ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಗಣನೀಯವಾದ ಮೈಲುಗಲ್ಲು ಸ್ಥಾಪಿಸಿದೆ. ಮಾದರಿ ಆಸ್ಪತ್ರೆಯಾಗಿ ಜನರ ಮೆಚ್ಚುಗೆ ಗಳಿಸಿದೆ ಎಂದರು. ವೇದಿಕೆಯಲ್ಲಿ ಕಟೀಲು ದೇವಳದ ಅನುವಂಶಿಕ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಮಣ ಅಸ್ರಣ್ಣ ಆಶೀರ್ವಚನ ನೀಡಿದರು. ಲೆಫ್ಟಿನೆಂಟ್ ಜನರಲ್ ಡಾ. ಎಮ್.ಡಿ ವೆಂಕಟೇಶ್, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಸಂಜೀವನಿ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ರಾವ್, ಡಾ. ಆನಂದ್ ವೇಣುಗೋಪಾಲ್ (ಮಾಹೆ ಮಣಿಪಾಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ), ಡಾ. ಅರವಿಂದ್ (ಎಚ್.ಆರ್ – ಎಮ್.ಆರ್.ಪಿ.ಎಲ್), ಕೆ.ಎಮ್.ಸಿ ಆಸ್ಪತ್ರೆಯ ಡೀನ್ ಡಾ. ಉಣ್ಣಿ ಕೃಷ್ಣನ್, ಡಾ.…















