Author: admin

ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆದ ಲಯನ್ಸ್ ಮತ್ತು ಲಿಯೋ ಕ್ಲಬ್ ಮಲ್ಪೆ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಲಯನ್ಸ್ ಜಿಲ್ಲೆ 317ಸಿ ಮಾಜಿ ಗವರ್ನರ್ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲಯನೆಸ್ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಮಾಜಿ ಗವರ್ನರ್ ಶ್ರೀಧರ ಶೇಣವ, ಲಯನ್ಸ್ ಕ್ಲಬ್ ಮಲ್ಪೆಯ ನೂತನ ಅಧ್ಯಕ್ಷ ಸುಧಾಕರ ಪೂಜಾರಿ, ಪದಗ್ರಹಣ ಅಧಿಕಾರಿ ಡಾ.ಮೆಲ್ವಿನ್ ಡಿಸೋಜ, ಮುಖ್ಯ ಅತಿಥಿ ರೋ.ಹೇಮಂತ್ ಯು.ಕಾಂತ್, ಲಿಯೋ ಅಧ್ಯಕ್ಷ ನಂದನ್ ಡಿ.ಕುಂದರ್, ಕಾರ್ಯದರ್ಶಿ ರವೀಂದ್ರ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ಡಾ.ತಲ್ಲೂರು ಶಿವರಾಮ ಶೆಟ್ಟರು ತಮ್ಮ ಸಂಪಾದನೆಯ ಒಂದು ಪಾಲನ್ನು ಕಲಾವಿದರ ಶ್ರೇಯಸ್ಸಿಗೆ, ಕಲಾ ಪ್ರಚಾರಕ್ಕೆ, ಕಲೆಯ ಉಳಿವಿಗೆ ವ್ಯಯಿಸುವ ಮೂಲಕ ಸಮಾಜದ ಮನ ಗೆದ್ದಿದ್ದಾರೆ. ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ನಾಡಿನ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ಅವರನ್ನು…

Read More

ವಿದ್ಯಾಗಿರಿ: ಶಿಕ್ಷಣ ಕ್ಷೇತ್ರದಲ್ಲಿ ನಾಟಕ ಮತ್ತು ಕಲೆ ಕೇವಲ ಪಠ್ಯೇತರ ಚಟುವಟಿಕೆಗಳಲ್ಲ. ಬದಲಾಗಿ ಅವು ಸೃಜನಶೀಲತೆ, ಬೌದ್ಧಿಕ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸಲಿರುವ ಪ್ರಬಲ ಸಾಧನಗಳಾಗಿವೆ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‌ರಾಮ್ ಸುಳ್ಯ ತಿಳಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ ‘ಶಿಕ್ಷಣದಲ್ಲಿ ಕಲೆ ಹಾಗೂ ನಾಟಕದ ಪಾತ್ರ’ ದ ಕುರಿತು ಕರ‍್ಯಗಾರದಲ್ಲಿ ಮಾತನಾಡಿದರು. ಶಿಕ್ಷಣದಲ್ಲಿ ಕಲೆಯನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ವಯಂ ಅಭಿವ್ಯಕ್ತಿ ಮತ್ತು ಸಂವಹನಕ್ಕಾಗಿ ಮೌಲ್ಯಯುತವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ನೃತ್ಯ, ಸಂಗೀತ, ನಾಟಕ, ಸೃಜನಶೀಲ ಬರವಣಿಗೆ, ರಂಗಭೂಮಿ ಇತ್ಯಾದಿಗಳನ್ನು ಒಳಗೊಂಡಿರಬೇಕು. ನಾಟಕಗಳು ನಮ್ಮ ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ನಮ್ಮ ಕಣ್ಣ ಮುಂದೆ ಸೃಷ್ಟಿಸುವುದರಿಂದ ವಿದ್ಯಾರ್ಥಿಗಳಿಗೆ ಬಹುಬೇಗನೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಕಲೆಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯಕ. ಪ್ರದರ್ಶನದ ಕಲೆಗಳು ಮಕ್ಕಳಲ್ಲಿ ತಮ್ಮ ಭಾವನೆ ಮತ್ತು ಕಲ್ಪನೆಗಳನ್ನು ಹಾಗೂ ತಮ್ಮದೇ ಆದ ವಿಶಿಷ್ಟ ಧ್ವನಿಗಳನ್ನು…

Read More

ಆಗಸ್ಟ್ ೦೫: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಜಿ ಎಮ್ ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಪ್ರಕಾಶ್ಚಂದ್ರ ಶೆಟ್ಟಿಯವರ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನನ್ನ ಕನಸು ಸಾಕಾರಗೊಳ್ಳಲು ಮುಖ್ಯ ಕಾರಣ ನನ್ನ ತಂದೆ-ತಾಯಿಯರ ಆಶೀರ್ವಾದ, ಸ್ನೇಹಿತರ, ಶಿಕ್ಷಕರ ಹಾಗೂ ಪೋಷಕರ ಸಹಕಾರವೆಂದರು. ನಮಗೆ ನಮ್ಮ ತಂದೆ ತಾಯಿಯರೆ ನಿಜವಾದ ದೇವರು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆದಂತೆ ನುಡಿಯಬೇಕು. ನನ್ನ ಉಸಿರಿರುವವರೆಗೂ ಮಕ್ಕಳ ಮೇಲಿರುವ ಪ್ರೀತಿ ಹೀಗೆಯೇ ಇರುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ದಿನವಿರುತ್ತದೆ. ಅದೇ ರೀತಿ ಜಿ ಎಮ್‌ನಲ್ಲಿ ಅಧ್ಯಕ್ಷರ ಹುಟ್ಟು ಹಬ್ಬವೂ ನಮಗೆಲ್ಲರಿಗೂ ವಿಶೇಷವಾದದ್ದು. ಅವರ ಚಿಂತನಾ ಶಕ್ತಿ, ಕ್ರಿಯಾಶೀಲತೆ ನಮಗೆಲ್ಲರಿಗೂ ಸ್ಫೂರ್ತಿ ಎಂದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೃತ್ಯ, ಗಾಯನ ಮತ್ತು ಗ್ರೀಟಿಂಗ್ಸ್ ಕಾರ್ಡ್ ನೀಡುವುದರ ಮೂಲಕ ಹುಟ್ಟುಹಬ್ಬಕ್ಕೆ ಶುಭಕೋರಿದರು. ಅಧ್ಯಕ್ಷರು…

Read More

ಮೂಡುಬಿದಿರೆ: ಜೂನ್ ೨೦೨೪ರಲ್ಲಿ ನಡೆದ ಎ.ಸಿ.ಸಿ.ಎ – ಯು. ಕೆ ಪರೀಕ್ಷೆಯ ವಿವಿಧ ಪತ್ರಿಕೆಗಳಲ್ಲಿ ಆಳ್ವಾಸ್ ಕಾಲೇಜಿನ ೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಹಸನ್ ಸುಹೈಲ್, ಶೇಖ್ ಮೊಹಮ್ಮದ್ ಸೈಮ್, ಲಿಯೋನಾ ವಿಯೋಲಾ ಡಿಸೋಜಾ, ಬಿಂದಿಯಾ ಎನ್ ಇವರು ಎ.ಸಿ.ಸಿ.ಎ – ಎಫ್-೮ ಆಡಿಟ್ ಆಂಡ್ ಅಶ್ಯೂರೆನ್ಸ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಮಾಝ್, ರಿಯಾ ಲಿಸಾ ರೆಬೆಲ್ಲೋ, ಸಂತೋಷ್ ನಾಯಕ್, ಸುವೈದ್ ಸುಲೈಮಾನ್, ಪ್ರತೀಕ್ ವಿ ಹೆಗ್ಡೆ, ಚೈತನ್ಯಾ ಎಮ್, ಪ್ರಶಾ ಜೈನ್ ಇವರು ಎ.ಸಿ.ಸಿ.ಎ – ಎಫ್-೭ ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆಳ್ವಾಸ್‌ನ ದ್ವಿತೀಯ ಬಿ.ಕಾಂ. ಎ.ಸಿ.ಸಿ.ಎ.ಯ ವಿದ್ಯಾರ್ಥಿ ಹಸನ್ ಸುಹೈಲ್ ಆಡಿಟ್ ಆಂಡ್ ಅಶ್ಯೂರೆನ್ಸ್ (ಎ.ಸಿ.ಸಿ.ಎ – ಎಫ್-೮) ಪತ್ರಿಕೆಯಲ್ಲಿ ೭೭ ಅಂಕಗಳನ್ನು ಪಡೆದುಕೊಂಡಿದ್ದು, ಈ ಪತ್ರಿಕೆಯಲ್ಲಿ ವಿಶ್ವದ ೯ನೇ ಹಾಗೂ ಭಾರತದ ೩ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಆಳ್ವಾಸ್‌ನಲ್ಲಿ ಈ ಸಾಧನೆ ಮಾಡಿದ ಪ್ರಥಮ ವಿದ್ಯಾರ್ಥಿಯಾಗಿದ್ದಾರೆ. ಇವರು ಮಾರ್ಚ್೨೦೨೪ರಲ್ಲಿ ನಡೆದ ಎ.ಸಿ.ಸಿ.ಎ – ಯು. ಕೆ ಎಫ್-೭…

Read More

ಬ್ರಹ್ಮಾವರ ಅಗಸ್ಟ್ ೦೩: ಶಿಸ್ತು, ಕಠಿಣ ಪರಿಶ್ರಮ, ತ್ಯಾಗ ಮನೋಭಾವದಿಂದ ಜೀವನದಲ್ಲಿ ಯಶಸ್ಸನ್ನು ಪಡೆದು ಗುರಿ ಮುಟ್ಟಲು ಸಾಧ್ಯ. ಸುಲಭದನ್ನು ಮಾಡುವ ಬದಲು ಜೀವನಕ್ಕೆ ಒಳಿತನ್ನು ಉಂಟುಮಾಡುವ ಕಾರ್ಯವು ಕ್ಲಿಷ್ಟವಾಗಿದ್ದರೂ ಮಾಡಬೇಕು. ಜಿ ಎಮ್ ಕಲಿಕೆಗೆ ಉತ್ತಮ ಸ್ಥಳವಾಗಿದ್ದು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಿದೆ ಎಂದು ತ್ರಿಶಾ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹೇಳಿದರು. ಇವರು ಬ್ರಹ್ಮಾವರದ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ಜಿ ಎಮ್ ಕ್ವಿಜ್ ಫೆಸ್ಟ್ನ್ನು ಉದ್ಘಾಟಿಸಿ ಮಾತನಾಡಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಕೆ ಎಮ್ ಸಿ ಮಣಿಪಾಲದ ವೈದ್ಯೆ ಡಾ. ಚೈತ್ರ ಆರ್ ರಾವ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದಿನನಿತ್ಯದ ಆಗುಹೋಗುಗಳ ಬಗ್ಗೆ ತಿಳಿಯಬೇಕು. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಕಲಿಕಾ ಹಾಗೂ ಐಕ್ಯತಾ ಮನೋಭಾವದ ಜೊತೆಗೆ ಆಲಿಸುವ ಗುಣಗಳನ್ನು ಬೆಳೆಸುತ್ತದೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ರಾಜ್ಯದ…

Read More

ಡಾ. ವಿರೇನ್ ಶೆಟ್ಟಿ ಮತ್ತು ಡಾ. ಸನ್ಯಾ ರೂಪನಿ ಅವರು ಹೋಮಿಯೋಪತಿಯಲ್ಲಿ ಸ್ಪರ್ಧಾತ್ಮಕ ಆನ್ ಲೈನ್ ಪರೀಕ್ಷೆ ಬರೆಯುವ ಮಾನ್ಯತೆ ಪಡೆದ MAGNUM OPUS HOMOEOPATHY ರಾಷ್ಟ್ರೀಯ ತರಬೇತಿ ಸಂಸ್ಥೆ ಇದರ ಸಹ ಸಂಸ್ಥಾಪಕರಾಗಿದ್ದಾರೆ. ಡಾ. ವಿರೇನ್ ಶೆಟ್ಟಿಯವರು ಪುಣೆಯ ಮಕ್ಕಳ ತಜ್ಞ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಶೆಟ್ಟಿಯವರ ಸುಪುತ್ರರಾಗಿದ್ದಾರೆ. AIAPGET ವೆಂಬುವುದು ಎಂ.ಡಿ. ವೈದ್ಯಕೀಯ ಹೋಮಿಯೋಪತಿಗಾಗಿ ಇರುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಇದರಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರವೇಶ ಪರೀಕ್ಷೆ ಬರೆಯುತ್ತಾರೆ. 1 ರಿಂದ 100 ರ ತನಕ ರ‍್ಯಾಂಕ್‌ ಗಳಿರುತ್ತವೆ. MAGNUM OPUS ಮೂಲಕ ತರಬೇತಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು AIAPET ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ನಿಂದ 100 ರ‍್ಯಾಂಕ್‌ ಗಳಲ್ಲಿ ಒಟ್ಟು 20 ರ‍್ಯಾಂಕ್‌ಗಳನ್ನು ಪಡೆದಿದ್ದು, MAGNUM OPUS ನ ಬಹು ದೊಡ್ಡ ಸಾಧನೆಯಾಗಿದೆ. ಡಾ. ಫಝಲ್ ಅಖ್ತರ್ ಮೊದಲ ರ‍್ಯಾಂಕ್‌, ಡಾ. ವೈಷ್ಣವಿ ಬೈರಾಗಿ 18ನೇ…

Read More

2023- 24 ಸಾಲಿನಲ್ಲಿ ಸರ್ವಿಸ್ ಆಕ್ಟಿವಿಟಿ ನಿಮಿತ್ತ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಅಸಹಾಯಕರಿಗೆ ಹಾಗೂ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ಕಾಳವಾರ ವರದರಾಜ್ ಶೆಟ್ಟಿ ಅವರ ಫೌಂಡೇಶನ್ ನಿಂದ ಲಯನ್ಸ್ ಕ್ಲಬ್ ಕೋಟೇಶ್ವರಕ್ಕೆ ತರಿಸಿಕೊಟ್ಟಿರುವ ಲಯನ್ ಜಯಪ್ರಕಾಶ್ ಶೆಟ್ಟಿ ಕಟ್ಕೇರಿ ಇವರನ್ನು ಕೋಟೇಶ್ವರದ ಲಯನ್ಸ್ ಪದಗ್ರಹಣ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಲ| ಜಯಕರ್ ಶೆಟ್ಟಿ ಇಂದ್ರಾಳಿ ಅವರು ಪದಗ್ರಹಣ ಮಾಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. 2024 25 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಬಿ ಎಸ್ ವಿಶ್ವನಾಥ್, ಕೋಶಾಧಿಕಾರಿಯಾಗಿ ಲಯನ್ ಸೌಮ್ಯ ನಿತ್ಯಾನಂದ, ಖಜಾಂಚಿಯಾಗಿ ವೆಂಕಟೇಶ್ ಬೆಟ್ಟಿನ್ ಅವರು ಪದಗ್ರಹಣ ಸ್ವೀಕರಿಸಿದರು.

Read More

ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಂದ ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರ ಆಗಸ್ಟ್ 1ರಂದು ಆರಂಭಗೊಂಡಿತು. ಈ ಶಿಬಿರವು ಪುಣೆ ಕಂಟೋನ್ಮೆಂಟ್ ಪರಿಸರದ ಎಲ್ಲಾ ಶಾಲೆಗಳಲ್ಲಿ ನಡೆಯಲಿದೆ. ಡಾ.ಉಷಾ ತಪಾಸೆ (ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್ ನ ಆರ್ ಎಂ ಓ), ಡಾ.ಸುಧಾಕರ್ ಶೆಟ್ಟಿ (ಮಕ್ಕಳ ತಜ್ಞರು, ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್), ಡಾ. ಭುಜಬಲ್ (ಎಎಂಓ) ಮತ್ತು ಮಟ್ರೋನ್ ಮೊದಲಾದ ಗಣ್ಯರು ಜುಲೈ 31ರಂದು ನಡೆದ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಪಸ್ಥಿತರಿದ್ದರು. ಆಗಸ್ಟ್ 1 ರಂದು ಬೆಳಿಗ್ಗೆ 8 ಗಂಟೆಗೆ ಪುಣೆಯ ಗಣೇಶ್ ಪೇಟೆಯ ಗುರುನಾನಕ್ ಪ್ರೈಮರಿ ಸ್ಕೂಲ್ ನಲ್ಲಿ ಮತ್ತು ಬೆಳ್ಳಿಗೆ 9.30ಕ್ಕೆ ರಬಿಂದ್ರನಾಥ್ ಪ್ರೈಮರಿ ಸ್ಕೂಲ್ ಕ್ಯಾಂಪ್ ಪುಣೆಯಲ್ಲಿ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಸುಧಾಕರ್ ಶೆಟ್ಟಿಯವರು ಯಶಸ್ವಿಯಾಗಿ ನಡೆಸಿಕೊಟ್ಟರು.

Read More

ಲಯನ್ಸ್ ಇಂಟರ್ನ್ಯಾಷನಲ್ (ಜಿಲ್ಲೆ -317C), ವಲಯ 2, ಪ್ರಾಂತ್ಯ 5 ಲಯನ್ಸ್ ಕ್ಲಬ್ ತಲ್ಲೂರು ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಯನ್ ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿಯಾಗಿ ಲಯನ್ಸ್ ಚಂದ್ರಶೇಖರ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಆಗಸ್ಟ್ 07 ರ ಬುಧವಾರ ಸಂಜೆ 7 ಘಂಟೆಗೆ ತಲ್ಲೂರಿನ ಪ್ರವಾಸಿ ಹೋಟೆಲ್ ನ ಸಭಾಂಗಣದಲ್ಲಿ ಜರುಗಲಿರುವುದು. ಪದ ಪ್ರದಾನ ಅಧಿಕಾರಿಯಾಗಿ ಲಯನ್ ಜಯಕರ ಶೆಟ್ಟಿ ಇಂದ್ರಾಳಿಯವರು ಆಗಮಿಸಲಿದ್ದಾರೆ.

Read More

ತುಳು-ಕನ್ನಡಿಗರು ಮುಂಬಯಿ ಮಹಾನಗರಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ವಲಸೆ ಬಂದು ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಮೆಚ್ಚಿನ ತಾಣವಾಗಿರುವ ಮುಂಬಯಿಗೆ ಬೇರೆ ಬೇರೆ ಕಾರಣಗಳಿಂದ ಬಂದವರು. ಕೇವಲ ಹೊಟ್ಟೆಪಾಡಿಗಾಗಿ ದುಡಿಯುತ್ತಾ, ಹಣಗಳಿಕೆಯೊಂದೇ ತಮ್ಮ ಉದ್ದೇಶವೆಂದು ತಿಳಿಯದೆ ನಾಡು, ನುಡಿ ಸಂಸ್ಕೃತೀಯ ಉಳಿವಿಗಾಗಿ ಶ್ರಮಿಸಿದರು. ಈ ನಗರದಲ್ಲಿರುವ ತುಳು-ಕನ್ನಡಿಗರು ಅದಮ್ಯ ಜೀವನೋತ್ಸಾಹವನ್ನು ಹೊಂದಿದವರು. ಅವರ ಕ್ರಿಯಾಶೀಲತೆ, ಕಾರ್ಯಕ್ಷಮತೆ, ನಿಷ್ಠೆ, ಪರಸ್ಪರ ಸಹಕರಿಸುವ, ಪ್ರೋತ್ಸಾಹಿಸುವ ಗುಣಕ್ಕೆ ಬೆರಗಾಗಲೇ ಬೇಕು. ಇಲ್ಲಿ ನಮ್ಮವರು ಬೇರೆ ಬೇರೆ ಕ್ಷೇತ್ರದಲ್ಲಿ ಮಿಂಚಲು ಅವರ ಶ್ರಮ ಸಂಸ್ಕ್ರತಿಯೇ ಕಾರಣ. ಮುಂಬಯಿ ಮಹಾನಗರದಲ್ಲಿ ತುಳು ಕನ್ನಡಿಗರು ಸಾಂಘಕಿವಾಗಿ ಮಾಡಿದ ಸಾಧನೆ ಅಪಾರವಾದುದು. ಸಮಾನ ಮನಸ್ಕರು ಸೇರಿ ಅಂದು ಹುಟ್ಟು ಹಾಕಿದ ಸಂಘ ಸಂಸ್ಥೆಗಳ ಮುಖ್ಯ ಉದ್ದೇಶ ಪರಿಚಯ, ಸ್ನೇಹ ಸೌಹಾರ್ದತೆಗಳು ಬೆಳೆಯುವುದೇ ಆಗಿತ್ತು. ಜಾತಿ ಮತಕ್ಕಿಂತ ಮೊದಲು ಭಾಷೆ, ನಮ್ಮ ನೆಲದ ಅಭಿಮಾನ ಮನುಷ್ಯರನ್ನು ಹತ್ತಿರ ತರಿಸುತ್ತದೆ. ನಂತರದ ದಿನಗಳಲ್ಲಿ ಈ ಸಂಸ್ಥೆಗಳ ಉದ್ದೇಶ, ವ್ಯಾಪ್ತಿ ವಿಸ್ತರಿಸುತ್ತಾ ಹೋಯಿತು. ಹೀಗೆ…

Read More