ನಾವೆಲ್ಲರೂ ಪ್ರಕೃತಿಯ ಆರಾಧಕರು. ನಮಗರಿವಿಲ್ಲದೇ ಪ್ರಕೃತಿಯಿಂದ ಸಿಗುವ ಗಾಳಿ, ನೀರು, ಮರ, ಬೆಳಕು, ಮಣ್ಣಿನ ಆರಾಧಕರಾಗಿ ಪ್ರಕೃತಿಯನ್ನು ನಾವು ಪೂಜಿಸುತ್ತೇವೆ. ಜೀವ ಪೋಷಕ ಜೀವ ರಕ್ಷಕ ಇದೆಲ್ಲದರ ಮಹತ್ವ ಇಂದಿಗೂ ಮುಂದೆಯೂ ಎಂದೆಂದಿಗೂ ಇದ್ದೆ ಇರುತ್ತದೆ. ಭೂಮಿಯಲ್ಲಿನ ತೇವಾಂಶ ಭರಿತ ಜಾಗವನ್ನು ರಕ್ಷಣೆ ಪೋಷಣೆ ನೀಡಿದರೆ ಅರಣ್ಯ ಸಂಪತ್ತು ಯತೇಚ್ಛವಾಗಿ ಬೆಳೆಯಲು ಸಾದ್ಯ. ಇದಕ್ಕೆ ಪ್ರಾಮಾಣಿಕ ಬದ್ದತೆ ಬೇಕು. ಪ್ರಕೃತಿ ರಕ್ಷಣೆ ಕೂಡಾ ಹಾಗೂ ದೇಶ ರಕ್ಷಣೆ ಕೂಡಾ ನಮ್ಮಿಂದಲೇ ಆಗಬೇಕು. ನಮ್ಮ ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ ಮತ್ತು ಯುವ ವಿಭಾಗದ ಸದಸ್ಯರಿಂದ ಪ್ರಕೃತಿಯ ಸಾಮಾನ್ಯ ಚಿಂತನೆಯಿಂದ ಅರ್ಥ ಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಕೃತಿಗೆ ಕೊಡುಗೆ ನೀಡಲು ಪ್ರತಿಯೊಬ್ಬರೂ ತಮ್ಮ ಶಕ್ತಿ ಮತ್ತು ಉದಾತ್ತ ಮನೋಭಾವದಿಂದ ಒಗ್ಗೂಡಿ ತಮ್ಮ ಕರ್ತವ್ಯವನ್ನು ಮಾಡಿ ತೋರಿಸಿದ್ದಾರೆ. ಭವಿಷ್ಯದ ಪೀಳಿಗೆಗೆ ಪ್ರಕೃತಿಯನ್ನು ಕಾಪಾಡುವ ಕಡೆಗೆ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ತೋರಿಸೋಣ. ವನ ಮಹೋತ್ಸವ ಎಂದರೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಎಂದು ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು.

ಪುಣೆ ಬಂಟರ ಸಂಘದ ಯುವ ವಿಭಾಗದ ವತಿಯಿಂದ ಜೂನ್ 7ರಂದು ಪುಣೆಯ ಸುಸ್ರೋಡ್ ನಲ್ಲಿನ ಕೀರ್ತಿ ಗಾರ್ಡನ್ ನಲ್ಲಿ ಟ್ರೀ ಪ್ಲಾಂಟೇಶನ್ ಡ್ರೈವ್ ಎಂಬ ಹೆಸರಿನಲ್ಲಿ ವನ ಮಹೋತ್ಸವವನ್ನು ಆಚರಿಸಲಾಯಿತು. ಅಭಿನಂದನ್ ಶೆಟ್ಟಿಯವರು ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮತ್ತು ಅಧ್ಯಕ್ಷ ಅಜಿತ್ ಹೆಗ್ಡೆಯವರಿಗೆ ಗಿಡ ನೀಡಿ ವನ ಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸೇರಿದ ಎಲ್ಲರೂ ವಿವಿಧ ಜಾತಿಯ ಗಿಡ ನೆಟ್ಟರು. ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಉಪ ಕಾರ್ಯಾಧ್ಯಕ್ಷೆ ದಿವ್ಯಾ ಎಸ್ ಶೆಟ್ಟಿ, ಸಮಿತಿ ಪದಾಧಿಕಾರಿಗಳಾದ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಶೇಖರ್ ಸಿ ಶೆಟ್ಟಿ, ಗಣೇಶ್ ಪೂಂಜಾ, ಉದಯ್ ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಸಿ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ವಿನೋದಾ ಶೆಟ್ಟಿ, ವಸಂತ್ ಶೆಟ್ಟಿ, ಉತ್ತರ ವಲಯ ಪೂರ್ವ ವಲಯ, ಪಶ್ಚಿಮ ವಲಯದ ಪದಾಧಿಕಾರಿಗಳು ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು, ಯುವ ವಿಭಾಗದ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಕೆ ಅಜಿತ್ ಹೆಗ್ಡೆಯವರು ಮಾತನಾಡಿ, ಗಿಡ ನೆಡುವ ಮೂಲಕ ಪರಿಸರಕ್ಕೆ ಮಾನವ ಕುಲಕ್ಕೆ ಶುದ್ದಗಾಳಿ, ಪರಿಸರ ಸೌಂದರ್ಯ, ಪಶು ಪಕ್ಷಿಗಳಿಗೆ ಆಹಾರ ಆಶ್ರಯ ಹೀಗೆ ವಿಭಿನ್ನ ಆಶಯಗಳೊಂದಿಗೆ ಹಾಗೂ ಮುಖ್ಯವಾಗಿ ಯುವ ಪೀಳಿಗೆಗೆ ಗಿಡ ಮರ ಪರಿಸರ ತನ್ನದೆನ್ನುವ ಆತ್ಮೀಯ ಭಾವ ಸ್ಪರ್ಶವನ್ನು ಬಿತ್ತುವ ಉದ್ದೇಶದಿಂದ ವನ ಮಹೋತ್ಸವ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮ ಸಂಘದ ಯುವ ವಿಭಾಗ ಅಭಿನಂದನ್ ಶೆಟ್ಟಿಯವರ ಮತ್ತು ಎಲ್ಲಾ ಯುವ ಪದಾಧಿಕಾರಿಗಳ ನೇತೃತ್ವದಲ್ಲಿ ಪರಿಸರಕ್ಕೆ ಸಂರಕ್ಷಣೆಯ ಕಾಳಜಿಯಿಂದ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆಯವರು ಮಾತನಾಡಿ, ಪರಿಸ್ಪರ ಸಂರಕ್ಷಣೆ ಕಾಳಜಿಯನ್ನು ನಮ್ಮ ಯುವ ವಿಭಾಗ ಅರಿತು ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಮರ, ಗಿಡ, ಗಿಡಮೂಲಿಕೆಗಳು ಉಳಿದರೆ ಪ್ರಕೃತಿ ಸಮತೋಲನವಾಗಿ ಮಾನವ ಜೀವ ಜಗತ್ತು ನೆಮ್ಮದಿಯ ಬದುಕು ಕಾಣಲು ಸಾಧ್ಯ. ಈ ಭೂಮಿ ಪರಿಸರ ನಮಗಾಗಿ ನಮ್ಮ ಮುಂದಿನ ಪಿಳಿಗೆಗಾಗಿ ಕೂಡಾ ಬೇಕು ಎಂಬುದನ್ನು ಅರಿತು ಅರಣ್ಯ ಸಂಪತ್ತನ್ನು ಬೆಳೆಸಬೇಕು. ಯುವ ವಿಭಾಗದ ಅಭಿನಂದನ್ ಶೆಟ್ಟಿ ಮತ್ತು ತಂಡ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿ ಪರಿಸರಕ್ಕೆ ತಮ್ಮಿಂದಾಗುವ ಕೊಡುಗೆಯನ್ನು ನೀಡಿದ್ದಾರೆ. ನಾವೆಲ್ಲರೂ ಪ್ರೋತ್ಸಾಹಕರಾಗಿ ತಮ್ಮೊಂದಿಗೆ ಸದಾ ಇದ್ದೇವೆ ಎಂದರು.ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ ಮಾತನಾಡಿ, ನಮ್ಮ ಗೌರವಾನ್ವಿತ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ, ಅಧ್ಯಕ್ಷ ಅಜಿತ್ ಹೆಗ್ಡೆಯವರ ಅಮೂಲ್ಯವಾದ ಮಾರ್ಗದರ್ಶನದಲ್ಲಿ, ಮಹಿಳಾ ವಿಭಾಗ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಸದಸ್ಯರು ಮತ್ತು ನಮ್ಮ ಯುವ ವಿಭಾಗದ ಸಂಪೂರ್ಣ ಸಹಕಾರ ಮತ್ತು ಉತ್ಸಾಹಭರಿತವಾಗಿ ಭಾಗವಹಿಸುವಿಕೆಯೊಂದಿಗೆ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಕಾರ್ಯಕ್ರಮ ಆಯೋಜಿಸುವಲ್ಲಿ ನಮಗೆ ಪ್ರತಿಯೊಬ್ಬರ ಕೊಡುಗೆ ಬಹಳಷ್ಟಿದೆ. ಭವಿಷ್ಯದ ಪೀಳಿಗೆಗೆ ಪ್ರಕೃತಿಯನ್ನು ಕಾಪಾಡುವ ಕಡೆಗೆ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ತೋರಿಸಿದ್ದೇವೆ. ನಮ್ಮ ಎಲ್ಲಾ ಸಮಿತಿಗಳ ಸದಸ್ಯರು ಸಂತೋಷ ಮತ್ತು ಬದ್ಧತೆಯಿಂದ ಮರಗಳನ್ನು ನೆಡುವುದನ್ನು ನೋಡುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿತ್ತು. ಯುವ ವಿಭಾಗದ ಪರವಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ಸಿಗೋಳಿಸಿದ ಪ್ರತಿಯೊಬ್ಬರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ, ಚಿತ್ರ : ಹರೀಶ್ ಮೂಡಬಿದಿರೆ, ಪುಣೆ