Author: admin
ವಿಶ್ವ ಬಂಟ ಪ್ರತಿಷ್ಠಾನದಿಂದ 2024-25ನೇ ಸಾಲಿನ ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ವಿತರಣಾ ಸಮಾರಂಭ ನಗರದ ಮೋತಿಮಹಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಒಟ್ಟು 165 ವಿದ್ಯಾರ್ಥಿಗಳಿಗೆ 36.70 ಲಕ್ಷ ರೂ.ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ನೀಡಲಾಯಿತು. ವಿದ್ಯಾರ್ಥಿ ದತ್ತಿ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ 9 ವಿದ್ಯಾರ್ಥಿಗಳಿಗೆ 1.75 ಲಕ್ಷ ರೂ. ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ. ಎ.ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಖಜಾಂಜಿ ಸಿಎ ಸುದೇಶ್ ಕುಮಾರ್ ರೈ.ಬಿ, ಯೋಜನಾ ನಿರ್ದೇಶಕ ಡಾ. ಸಂಜೀವ ಬಿ ರೈ, ಜೈರಾಜ್ ಬಿ ರೈ, ಬೂಡಿಯಾರ್ ರಾಧಾಕೃಷ್ಣ ರೈ, ಚಂದ್ರಶೇಖರ ಭಂಡಾರಿ, ಡಾ. ಪ್ರಶಾಂತ್ ಕುಮಾರ್ ರೈ, ಬಲರಾಜ್ ರೈ, ಜ್ಯೋತಿ ಆಳ್ವ, ಶಂಕರಿ ರೈ, ವರಲಕ್ಷ್ಮಿ ಮಲ್ಲಿ ಉಪಸ್ಥಿತರಿದ್ದರು. ವಿಶ್ವ ಬಂಟ ಪ್ರತಿಷ್ಠಾನ ಕಳೆದ 28 ವರ್ಷಗಳಲ್ಲಿ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರ…
ನೀರಿನ ಲವಂಗದ 8 ಆಶ್ಚರ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ಬಹುಶಃ ತಿಳಿದಿಲ್ಲ. ಲವಂಗಗಳು ತಮ್ಮ ದಪ್ಪ ಸುವಾಸನೆ ಮತ್ತು ಔಷಧೀಯ ಗುಣಗಳಿಗೆ ಹೆಸರು ವಾಸಿಯಾಗಿದೆ. ಆದರೆ ಲವಂಗವನ್ನು ನೀರಿನಲ್ಲಿ ನೆನೆಸುವುದು ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ಅನ್ಲಾಕ್ ಮಾಡುತ್ತದೆ. ರಾತ್ರಿಯಿಡೀ ಕೆಲವು ಲವಂಗಗಳನ್ನು ನೆನೆಸಿ ಮತ್ತು ತುಂಬಿದ ನೀರನ್ನು ಸೇವಿಸುವ ಮೂಲಕ ತಯಾರಿಸಲಾದ ಲವಂಗದ ನೀರು, ಆಂಟಿ ಆಕ್ಸಿಡೆಂಟ್ಗಳು, ಉರಿಯೂತದ ಏಜೆಂಟ್ಗಳು ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಬೆಂಬಲಿಸಲು ಸಹಾಯ ಮಾಡುವ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ನೀರಿನ ಲವಂಗದ ಎಂಟು ಆಶ್ಚರ್ಯಕರ ಪ್ರಯೋಜನಗಳು ಇಲ್ಲಿವೆ. ಅದು ನಿಮ್ಮ ದಿನಚರಿಯಲ್ಲಿ ಈ ನೈಸರ್ಗಿಕ ಪರಿಹಾರವನ್ನು ಸೇರಿಸಲು ಬಯಸುತ್ತದೆ. 1. ಜೀರ್ಣಕಾರಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಲವಂಗದ ನೀರು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಒಡೆಯಲು ಸಹಾಯ ಮಾಡುತ್ತದೆ. ಲವಂಗದ ನೈಸರ್ಗಿಕ ಸಂಯುಕ್ತಗಳು ಉಬ್ಬುವುದು, ಅನಿಲ ಮತ್ತು ಅಜೀರ್ಣವನ್ನು ನಿವಾರಿಸುತ್ತದೆ. ಇದು ಸೂಕ್ಷ್ಮ ಹೊಟ್ಟೆ ಅಥವಾ ಜೀರ್ಣಕಾರಿ…
ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಕಾಮನೆಗಳ ಪ್ರದಾಯಕನಾಗಿ, ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಈ ಕ್ಷೇತ್ರವನ್ನು ಗುಪ್ತ ಕ್ಷೇತ್ರವೆಂಬುವುದಾಗಿಯೂ ಕರೆಯುತ್ತಾರೆ. “ಮೃತ್ತಿಕಾ” (ಮಣ್ಣು) ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಚರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ದೇವರಿಗೆ ಅನ್ನದಾತ ಸುಬ್ಬಪ್ಪನೆಂಬ ನಾಮಾಭಿದಾನವಿದ್ದು, ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತಿದೆ. ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂದ್ಯ, ಭೂಮಿದೋಷವೇ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಅಶ್ಲೇಷ ಬಲಿ, ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ. ಪೌರಾಣಿಕ ಕಥೆ : ಶ್ರೀ ಕುಮಾರಸ್ವಾಮಿಯು ತಾರಕಾಸುರ ಶೂರ ಪದ್ಮಾಸುರ ಹಾಗೂ ಅವನ ಅನುಯಾಯಿಗಳನ್ನು…
ಮೂಡುಬಿದಿರೆ: ‘ಶಿಕ್ಷಣ ವ್ಯವಸ್ಥೆಯ ಆರಂಭದಲ್ಲೆ, ಒಬ್ಬ ವ್ಯಕ್ತಿಯಾಗಿ ತನ್ನ ಜೀವನದ ಉದ್ದೇಶವೇನೆಂಬುದನ್ನು ಅರಿಯಬೇಕು’ ಎಂದು ಕೋಟೇಶ್ವರದ ರಾಜಾರಾಮ್ ಪೋಲಿಮರ್ಸ್ ಸಂಸ್ಥೆಯ ಸ್ಥಾಪಕ ಸುರೇಶ್ ಕಾಮತ್ ಹೇಳಿದರು. ಆಳ್ವಾಸ್(ಸ್ವಾಯತ್ತ) ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ಹಮ್ಮಿಕೊಂಡ ಎಂತುಝಿಯಾ ಕೋರ್ಪೊ ಕನೆಕ್ಟ್ ಫೆಸ್ಟ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಗುರಿಯನ್ನು ಆರಂಭದಲ್ಲೆ ಅರಿಯುವುದು ಉತ್ತಮ. ಪ್ರತಿ ಕೆಲಸದಿಂದ ಬರುವ ಅನುಭವದಿಂದ ಬದುಕನ್ನು ಶ್ರೇಷ್ಠತೆಯೆಡೆಗೆ ಒಯ್ಯುವ ಕೆಲಸವಾಗಬೇಕಿದೆ ಎಂದರು. ಮುಖ್ಯಅತಿಥಿ ನೆಲೆಯಲ್ಲಿ ಮಾತನಾಡಿದ ಯುವ ಪ್ರತಿನಿಧಿ ಮಿಥುನ್ ರೈ, ವೃತ್ತಿಪರ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಮ್ಯಾನಜ್ಮೆಂಟ್ ಪದವಿ ಸೂಕ್ತ ಆಯ್ಕೆ. ಎಲ್ಲವನ್ನು ಪರಿಶ್ರಮದಿಂದ ಕಲಿಯಬೇಕು. ಸವಾಲುಗಳನ್ನು ಎದುರಿಸಿ ಮುನ್ನಡೆಯುವವ ನಿಜವಾದ ನಾಯಕನೆನಿಸಿಕೊಳ್ಳಬಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ ಅದನ್ನು ತಾವೇ ಗುರುತಿಸಿಕೊಳ್ಳಬೇಕು ಹಾಗೂ ಉಪನ್ಯಾಸಕರು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು. ದಶಕಗಳ ಹಿಂದೆ ತಾನು ಪದವಿ ವಿದ್ಯಾರ್ಥಿಯಾಗಿದ್ದಾಗ ಆಯೋಜಿಸಿದ ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ಸನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಡರು. ಏಷ್ಯಾ ಖಂಡದ ಹಲವು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡು,…
ಒಬ್ಬ ರಾಜ ತನ್ನ ರಾಜ್ಯ ನೋಡಲು ಕುದುರೆಯನೇರಿ ಹೊರಟ. ಒಂದೂರಿನ ಹಾದಿಯಲ್ಲಿ ಹೋಗುವಾಗ ಆತನಿಗೆ ತುಂಬಾ ಹಸಿವಾಯಿತು. ಸುತ್ತಮುತ್ತ ನೋಡಿದಾಗ ಬೃಹದಾಕಾರದ ಮರದಲ್ಲಿ ತುಂಬಾ ಹಣ್ಣುಗಳು ಜೋತು ಬಿದ್ದಿದ್ದವು. ಆ ಮರ ಎತ್ತರವಿದ್ದ ಕಾರಣ ಒಂದು ಹಣ್ಣೂ ಆತನ ಕೈಗೆ ಎಟಕಲಿಲ್ಲ. ಆಗ ಮರ ಕಡಿಯುವವನೊಬ್ಬ ಸಾಕಷ್ಟು ಹಣ್ಣುಗಳನ್ನು ಕೊಯ್ದು ರಾಜನಿಗೆ ಕೊಟ್ಟ ತಕ್ಷಣ ಆತ ಅದನ್ನು ಗಬಗಬನೆ ತಿಂದು ಮರ ಕಡಿಯುವವನಿಗೆ ಚಿನ್ನದ ನಾಣ್ಯಗಳನ್ನು ಕೊಟ್ಟು ಮುಂದೆ ಸಾಗಿದ. ಹೀಗೆ ಸಾಗುವಾಗ ಆತ, ನಾನು ರಾಜನಾದರೂ ನನಗೆ ಮರ ಏರಲು ತಿಳಿದಿಲ್ಲ. ಇದೆಂತಹ ಅವಮಾನ ಎಂದು ಮರುಗಿದ. ಹೀಗೆ ದೂರ ಸಾಗುವಾಗ ಬಿಸಿಲು ಆತನಿಗೆ ಸುಸ್ತಿನ ಜೊತೆಗೆ ನಿದ್ರೆ ಬರಲು ಶುರುವಾಯಿತು. ಮರದ ಕೆಳಗೆ ಮಲಗಿದರೂ ಆತನಿಗೆ ನಿದ್ರೆ ಬರಲಿಲ್ಲ. ದೂರದಲ್ಲಿ ಮರಗೆಲಸದವನೊಬ್ಬ ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆ ಹಾಸಿ ಗಾಢ ನಿದ್ರೆಗೆ ಜಾರಿದ್ದ. ಆಗ ರಾಜನಿಗೆ, ಅವನಿಗೆ ಆ ಭಗವಂತ ಅದೆಷ್ಟು ಸುಖ ನಿದ್ರೆ ಕರುಣಿಸಿದ್ದಾನೆ. ಕಲ್ಲು,…
ಕರೀಮ್ ನಗರ ಹೋಟೆಲ್ ಉದ್ಯಮಿಗಳಿಂದ ಯುವ ಸಂಘಟಕ ಕುಂದಾಪುರ ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಹೋಟೆಲ್ ಗೀತಾ ಭವನ್ ನಲ್ಲಿ ಹಿರಿಯ ಹೋಟೆಲ್ ಉದ್ಯಮಿಗಳಾದ ಕೊಡ್ಲಾಡಿ ಗಂಜಿಕೂಡ್ಲು ಶಿವರಾಮ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳಾದ ರವೀಂದ್ರ ಶೆಟ್ಟಿ ಅಮಾಸೆಬೈಲು, ಅಲ್ತಾರು ಭಾಸ್ಕರ ಶೆಟ್ಟಿ, ಗಿರೀಶ್ ಉಪಸ್ಥಿತರಿದ್ದರು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂಡಲ ನೆಹರೂ ನಗರ ಪಿಂಪ್ರಿ : ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪುನಃ ಪ್ರತಿಷ್ಠಾ ಮಹೋತ್ಸವ
ಸನಾತನ ಹಿಂದೂ ಧರ್ಮ ನಿರಂತರವಾಗಿದೆ. ಎಷ್ಟೇ ಅಡೆ ತಡೆ ಬಂದರೂ ಯಾವುದೇ ರೀತಿಯಲ್ಲೂ ನಿಲ್ಲದು. ಇದು ಶಾಶ್ವತ ಧರ್ಮ ಎಂಬುದನ್ನು ಜಗತ್ತು ತಿಳಿದುಕೊಳ್ಳಬೇಕು. ನಮ್ಮ ಸನಾತನ ಹಿಂದೂ ಧರ್ಮದ ಜ್ಞಾನ ಭಂಡಾರವನ್ನು ಎಷ್ಟು ಅರಿತು ಕೊಂಡರೂ ಕಡಿಮೆಯೇ. ಅದರೆ ಹಿಂದೂ ಜ್ಞಾನವನ್ನು ಪಡೆಯುವುದು ಇಂದಿನ ಕಾಲಕ್ಕೆ ಬಹು ಮುಖ್ಯ. ನಮ್ಮಹಿಂದೂಗಳ ಜಾತಿಯನ್ನು ಬದಿಗಿಟ್ಟು ಧರ್ಮವನ್ನು ಅಪ್ಪಿಕೊಳ್ಳಿ. ಇದರಿಂದ ಮಾತ್ರ ಧರ್ಮ ಜಾಗೃತಿಯಾಗಲು ಸಾದ್ಯ. ಜಾತಿ ಮನೆಯ ಒಳಗಿರಲಿ, ಆದರೆ ದೇಶಕ್ಕಾಗಿ ಸನಾತನ ಧರ್ಮಕ್ಕಾಗಿ ಹಿಂದೂವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಭಾವನೆ ನಮ್ಮಲ್ಲಿರಲಿ. ಧರ್ಮ ಜಾಗೃತಿ ಮನೆ ಮನೆಯಲ್ಲೂ ಬೆಳಗಬೇಕು. ಮನೆ ಮನೆಯಲ್ಲೂ ಹಿಂದೂ ಧರ್ಮ ಜಾಗೃತಿಯೊಂದಿಗೆ ಮಗು ಹುಟ್ಟಿ ಬರಬೇಕು. ಆವಾಗ ಮಾತ್ರ ಸಂಘಟಿತ ಬಲ ಬರಲು ಸಾಧ್ಯ. ಮಕ್ಕಳಿಗೆ ಧರ್ಮ ಭೋಧನೆ ಪ್ರತಿ ಮನೆಯಲ್ಲೂ ಅಗಬೇಕು. ಹಿಂದೂವಾಗಿ ಜನಿಸಿ, ಬದುಕಿ, ಹಿಂದೂ ನನ್ನ ಜನ್ಮ ಸಿದ್ದ ಹಕ್ಕು ಎಂಬಂತೆ ದೇಶಕ್ಕಾಗಿ ಬದುಕಿ ತೋರಿಸಬೇಕು. ಹಿಂದೂ…
ಭಾಷೆಯ ಸಂಘಟನೆ ಏಕೆ ಬೇಕು ಎಂಬುದನ್ನು ನಾವು ಎಲ್ಲರೂ ಅರಿತವರು. ಜಾತಿಗಿಂತ ಮೊದಲಾಗಿ ನಮಗೆ ಭಾಷೆ ಮುಖ್ಯ, ಅದರಲ್ಲೂ ನಮ್ಮ ತುಳು ಭಾಷೆ ನಮ್ಮ ತಾಯಿ ಭಾಷೆ. ಒಂದೇ ತಾಯಿಯ ಮಕ್ಕಳಂತೆ ಸೇರಿಕೊಂಡು ತುಳು ಭಾಷೆ ಮೇಲಿನ ಪ್ರೀತಿಯಿಂದ ಸ್ಥಾಪನೆಗೊಂಡ ತುಳು ಸಂಘ ಪಿಂಪ್ರಿ ಹದಿಮೂರು ವರ್ಷಗಳ ಉಚ್ಚಾಯದಲ್ಲಿದೆ. ತುಳು ಭಾಷೆ ಸದ್ಯದಲ್ಲೇ ನಮ್ಮ ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ಸೇರ್ಪಡೆಗೊಳ್ಳಲಿದೆ. ಇದು ಸೇರ್ಪಡೆಗೊಂಡರೆ ತುಳುವರಿಗೆ ಶೈಕ್ಷಣಿಕವಾಗಿ ಹಲವಾರು ಪ್ರಯೋಜನವಾಗಲಿವೆ. ಅದಕ್ಕಾಗಿ ನಮ್ಮ ತುಳು ಸಂಘಟನೆಗಳು ಭಾಷೆಯ ಅಭಿವೃದ್ದಿಗೆ ಶ್ರಮಿಸಬೇಕು. ಪಿಂಪ್ರಿ ಚಿಂಚ್ವಾಡ್ ತುಳು ಸಂಘ ಈ ನಿಟ್ಟಿನಲ್ಲಿ ತುಳು ಬಾಷೆಗೆ ಒತ್ತು ನೀಡಿ ಶ್ರಮಿಸುತ್ತಿದೆ. ಇಂದು ಇಲ್ಲಿ ಪ್ರದರ್ಶನಗೊಂಡ ನಾಟಕ ತುಳುನಾಡಿನ ದೈವ ಶಕ್ತಿಯ ಮಹಿಮೆಯನ್ನು ಉತ್ತಮ ರೀತಿಯಲ್ಲಿ ಬಿಂಬಿಸಿದೆ. ಇಂತಹ ನಾಟಕಗಳನ್ನು ನಮ್ಮ ಮಕ್ಕಳು ನೋಡಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ನಮ್ಮ ಸ್ವಾಭಿಮಾನದ ಸಂಕೇತವಾದ ನಮ್ಮ ತುಳು ಭಾಷೆಯ ಒಲವನ್ನು ನಾವೆಲ್ಲರೂ ಪಡೆಯಬೇಕು. ನಮ್ಮ ಮಕ್ಕಳು ಕೂಡಾ ಒಲವನ್ನು…
ತಮ್ಮ ಮನಸ್ಸಿನಲ್ಲಿದ್ದ ಹಿಂದವೀ ಸ್ವರಾಜ್ಯದ ಸಂಕಲ್ಪನೆಯನ್ನು ಪ್ರತ್ಯಕ್ಷವಾಗಿ ಜಾರಿಗೆ ತರಲು ಛತ್ರಪತಿ ಶಿವಾಜಿಗೆ ಜ್ಞಾನ, ಚಾರಿತ್ರ್ಯ, ಚಾತುರ್ಯ, ಸಂಘಟನೆ ಹಾಗೂ ಪರಾಕ್ರಮ ಮುಂತಾದ ಸಾತ್ವಿಕ ಮತ್ತು ರಜೌಗುಣಗಳ ಅಮೃತಪಾನ ನೀಡುವ ರಾಜಮಾತೆ. ಹಿಂದವೀ ಸ್ವರಾಜ್ಯದ ಸ್ಥಾಪನೆಯ ಹಾದಿಯಲ್ಲಿ ಅಡ್ಡ ಬರುವ ಹೇಡಿಗಳ ಜೊತೆ ಹೋರಾಡುವ ಧೈರ್ಯವು ಶಹಾಜಿಯ ಪುತ್ರ ಶಿವಾಜಿಗೆ ಸಿಕ್ಕಿದ್ದು ಕೇವಲ ಜಿಜಾಬಾಯಿಯು ಬಿತ್ತಿದ ‘ಶೌರ್ಯದ’ ಸಂಸ್ಕಾರಗಳಿಂದ . ಸಿಂದಖೇಡ ಸಂಸ್ಥಾನದ ರಾಜರ (ಇಂದಿನ ಬುಲಢಾಣಾ ಜಿಲ್ಲೆಯ) ಸನ್ಮಾನನೀಯ ಸರದಾರರಾದ ಲಖೋಜಿ ಜಾಧವ ಹಾಗೂ ಮ್ಹಾಳಸಾಬಾಯಿ ದಂಪತಿಗೆ ಮಗಳಾಗಿ ಜಿಜಾಬಾಯಿ ಜನಿಸಿದರು. ಕರ್ತೃತ್ವವಂತ ತಂದೆಯ ಪರಾಕ್ರಮದ ಉದಾಹರಣೆಗಳನ್ನು ತೊಟ್ಟಿಲಲ್ಲಿರುವ ಜಿಜಾಬಾಯಿ ಬೆರಗಾಗಿ ಕೇಳುತ್ತಿದ್ದರು. ಆದರೆ ವಯಸ್ಸಿನ ಜೊತೆ ಪಾರತಂತ್ರ್ಯದ ಅರಿವೂ ಹೆಚ್ಚಾಯಿತು; ಅಸಹಾಯಕತೆ ಮತ್ತು ಅವಿಶ್ವಾಸ ಎಂಬ ರೋಗಗಳನ್ನು ಅವರು ಮನಸಾರೆ ತಿರಸ್ಕಾರ ಮಾಡಲು ಮುಂದಾದರು. ಗೊಂಬೆಗಳ ಆಟಿಕೆಯ ಸಂಸಾರದಲ್ಲಿ ಮುಳುಗಿರಬೇಕಾದ ಸಮಯದಲ್ಲಿ, ಜಿಜಾಬಾಯಿ ಕತ್ತಿಯನ್ನು ಬಿಗಿಯಾಗಿ ಹಿಡಿದು ಕತ್ತಿವರಸೆಯಲ್ಲಿ ಪರಿಣತಿ ಸಾಧಿಸುವುದರಲ್ಲಿ ಮಗ್ನರಾಗಿದ್ದರು. ಲಷ್ಕರಿನ ಪ್ರಶಿಕ್ಷಣವನ್ನು ಕಲಿಸುವಂತೆ ಲಾಖೋಜಿಯವರಲ್ಲಿ…
ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ತುಳುವೆರೆ ಆಯಾನೊ ಕೂಟ ಕುಡ್ಲ ಇದರ ಮಹಾಸಭೆಯು ಇತ್ತೀಚೆಗೆ ಸ್ವರೂಪ ಅಧ್ಯಯನ ಕೇಂದ್ರ ಕೋಡಿಯಾಲ್ ಬೈಲ್ ಇಲ್ಲಿ ನಡೆಯಿತು.ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಶಮಿನ ಆಳ್ವ ಮರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಭೂಷಣ್ ಕುಲಾಲ್, ಖಜಾಂಜಿಯಾಗಿ ಅಮೂಲ್ಯ ಶೆಟ್ಟಿ ಇವರು ಆಯ್ಕೆಯಾದರು. ಅಂತೆಯೇ ಉಪಾಧ್ಯಕ್ಷರಾಗಿ ಗೋಪಾಡ್ಕರ್, ಹರಿಪ್ರಸಾದ್ ರೈ, ರಾಜೇಶ್ ಅಮಿನ್, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ರೋಹಿಣಿ ಶೆಟ್ಟಿ, ಶ್ರೀಮತಿ ಭಾರತೀ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಜ್ವಲ್ ಆಳ್ವ, ರಾಜೇಶ್ ಹೆಗ್ಡೆ ಪೊಳಲಿ, ಕುಸುಮ ಶೆಟ್ಟಿ ಇವರು ಅವಿರೋಧವಾಗಿ ಆಯ್ಕೆಗೊಂಡರು.















