Author: admin
ನಮ್ಮನ್ನು ಎಲ್ಲರೂ ಮೆಚ್ಚಿಕೊಳ್ಳಲಿ ಎಂದು ಹಪಹಪಿಸುವ ಬದಲು ನಮಗೆ ಬೆಲೆ ಕೊಡುವವರನ್ನು ಸದಾ ಪ್ರೀತಿಯಿಂದ ಗೌರವಿಸಿಕೊಳ್ಳಬೇಕು.
ವಯಸ್ಸಾಗಿ ಹಾಸಿಗೆ ಹಿಡಿದಿದ್ದ ತಂದೆ ತನ್ನ ಮಗಳನ್ನು ಕರೆದು ಮಗಳೇ, ನಾನು ನಿನ್ನನ್ನು ಕಷ್ಟಪಟ್ಟು ಓದಿಸಿ ವಿದ್ಯಾವಂತೆ ಮಾಡಿದೆ. ನಾನು ಸತ್ತರೆ ನಿನ್ನ ಜೀವನಕ್ಕಾಗಿ ಯಾವ ಆಸ್ತಿಯನ್ನೂ ಮಾಡಲಿಲ್ಲ. ದುಡಿದ ಹಣವೆಲ್ಲಾ ನಿನ್ನನ್ನು ಓದಿಸಲು ಖರ್ಚಾಯಿತು. ಆದರೆ ನನ್ನ ಬಳಿ ಉಳಿದದ್ದು ಮಾತ್ರ ಮನೆಯ ಹೊರಗೆ ಮೂಲೆಯಲ್ಲಿ ನಾನು ನಿಲ್ಲಿಸಿರುವ ಆ ಹಳೆಯ ಕಾರು ಮಾತ್ರ. ಅದು ಸ್ವಲ್ಪ ಹಳೆಯದ್ದು. ನೀನು ಅದನ್ನು ಮಾರಾಟ ಮಾಡುವ ಮೊದಲು ಆ ಕಾರನ್ನು ತೆಗೆದುಕೊಂಡು ಹೋಗಿ ಹೊರಗೆ ಜನರಿಗೆ ನೀನು ಆ ಕಾರನ್ನು ಮಾರಲು ತಂದಿರುವುದಾಗಿ ಹೇಳು. ನೋಡೋಣ ಜನರು ಆ ಕಾರಿಗೆ ಎಷ್ಟು ಬೆಲೆ ಕಟ್ಟುತ್ತಾರೆ?” ಎಂದು ತಂದೆ ಮಗಳಿಗೆ ಹೇಳಿದ. ತಂದೆಯ ಮಾತಿನಂತೆ ಆ ಹಳೆಯ ಕಾರನ್ನು ತೆಗೆದುಕೊಂಡು ಮಗಳು ಪೇಟೆಗೆ ಬಂದಳು. ಹಳೆಯ ಕಾರುಗಳ ಡೀಲರುಗಳು ಎಲ್ಲಿದ್ದಾರೆ ಎಂದು ವಿಚಾರಿಸುತ್ತಾ ಒಬ್ಬ ಕಾರ್ ಡೀಲರ್ ಬಳಿಗೆ ಬಂದು, ತನ್ನ ತಂದೆಯ ಆ ಹಳೆಯ ಕಾರಿನ ಈಗಿನ ಬೆಲೆಯನ್ನು ವಿಚಾರಿಸಿ, ಮನೆಗೆ…
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ‘ಯಕ್ಷಾಂತರಂಗ’ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರವನ್ನು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಆಗಸ್ಟ್ 20 ರಿಂದ ರಿಂದ 23 ರವರೆಗೆ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ನಡೆಯುವ ಈ ಕಾರ್ಯಾಗಾರದಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯ, ರಂಗನಡೆ, ಪುರಾಣ ಕಥನಗಳ ಬಗ್ಗೆ ವಿಚಾರ ಮಂಥನ ಮಾಡಲಾಗುವುದು. ಕಾರ್ಯಾಗಾರದ ಮೊದಲ ದಿನ ಅಜಪುರ ವಿಷ್ಣು ಭಾಗವತ ವಿರಚಿತ ಕಿರಾತಾರ್ಜುನ ಪ್ರಸಂಗದ ಆರಂಭದ ಭಾಗದ ಪ್ರಸಂಗ ಪಠ್ಯ ಮತ್ತು ರಂಗನಡೆಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಕಾರ್ಯಾಗಾರ ನಡೆಯಿತು. ಪ್ರಸಂಗ ಸಾಹಿತ್ಯವನ್ನು ಓದುವ ಬಗೆ, ಅರ್ಥವಿಸ್ತರಣೆಗೆ…
ವಿವಿಧ ಹೆಸರಿನಲ್ಲಿ ಕರೆಯಲ್ಪಡುವ ಬಂಟರ ಸಂಘಟನೆಗಳು ಸೌಹಾರ್ದದ ಕೂಡು ಕುಟುಂಬವಾಗಿದೆ. ಅಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ, ಹೊಂದಾಣಿಕೆ, ಕೂಡಿ ಬಾಳುವ ಕಲೆ ಕರಗತವಾಗಿರಲಿ. ಬಂಟ ಸಮಾಜದ ಕಟ್ಟ ಕಡೆಯ ಮಗು ಕೂಡಾ ಆರ್ಥಿಕ ಅಡಚಣೆಯಿಂದ ವಿದ್ಯಾಭ್ಯಾಸ ಸ್ಥಗಿತಗೊಳಿಸಬಾರದು. ಅವರಿಗೆ ಸಂಪೂರ್ಣ ನೆರವು ನೀಡಲು ಬಂಟ್ಸ್ ಫೋರಂ ಮೀರಾ ಭಾಯಂದರ್ ಸಿದ್ಧವಾಗಿದೆ ಎಂದು ಬಂಟ್ಸ್ ಫೋರಂ ಮೀರಾ ಭಾಯಂದರ್ ಅಧ್ಯಕ್ಷ ಉದಯ ಎಂ ಶೆಟ್ಟಿ ಮಲಾರಬೀಡು ತಿಳಿಸಿದರು. ಮಹಿಳಾ ವಿಭಾಗ ಆಗಸ್ಟ್ 10 ರಂದು ಸಂಜೆ ಮೀರಾ ರೋಡ್ ಪೂರ್ವದ ನಿತ್ಯಾನಂದ ನಗರ ಸ್ವಸ್ತಿಕ್ ಅಂಬರ್ ಪ್ಲಾಜಾ ಸಭಾಂಗಣದಲ್ಲಿ ಆಯೋಜಿಸಿದ ಆಟಿದ ಕೂಟ ತುಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿಯವರು ಸಂಜೀವಿನಿ ಟ್ರಸ್ಟ್ ಸಹಯೋಗದಲ್ಲಿ ಟಾಟಾ ಐಐಎಸ್ ಸಂಸ್ಥೆಯ ಮೂಲಕ ಕೌಶಲ ಮತ್ತು ಉದ್ಯೋಗ ಕಲ್ಪಿಸುವ ಯೋಜನೆ ಕೈಗೊಂಡಿದ್ದಾರೆ. ಬಂಟ ಸಮಾಜದ ಯುವಜನಾಂಗ ಇದರ ಪ್ರಯೋಜನ ಪಡೆಯಲು…
ಚಿಣ್ಣರಬಿಂಬ ಮುಂಬಯಿ ಇದರ ಮೀರಾ ರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆಯು ಆಗಸ್ಟ್ 24 ರಂದು ರವಿವಾರ ಮಧ್ಯಾಹ್ನ 1 ಗಂಟೆಯಿಂದ ಭಾಯಂದರ್ ಪೂರ್ವದ ನ್ಯೂ ಸೈಂಟ್ ಆಗ್ನೆಸ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ. ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವನ್ನು ರೈ ಸುಮತಿ ಎಜುಕೇಷನಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷ ಡಾ| ಅರುಣೋದಯ ರೈ ಬಿಳಿಯೂರು ಗುತ್ತು ಇವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ, ಉದ್ಯಮಿ ರಮೇಶ ಎಂ ಶೆಟ್ಟಿ ಸಿದ್ಧಕಟ್ಟೆಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟ್ಸ್ ಫೋರಂ ಅಧ್ಯಕ್ಷ ಉದಯ ಎಮ್ ಶೆಟ್ಟಿ ಮಲಾರಬೀಡು, ಮೀರಾರೋಡ್ ಶಿಬಿರದ ಹಿರಿಯ ವಿದ್ಯಾರ್ಥಿಗಳಾದ ಸಿಎ ಶ್ರೀರಕ್ಷಾ ಶೆಟ್ಟಿ, ಇಂಜಿನಿಯರ್ ನಿರೀಕ್ಷಾ ಶೆಟ್ಟಿ, ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷ್ಣವೇಷ ಸ್ಪರ್ಧೆ ಕಾರ್ಯಕ್ರಮವನ್ನು ಮೊಟ್ಟಮೊದಲ ಬಾರಿಗೆ ಚಿಣ್ಣರಬಿಂಬ ವತಿಯಿಂದ ಪರಿಸರದ ತುಳು ಕನ್ನಡಿಗರ ಮಕ್ಕಳಿಗೆ ಆಯೋಜಿಸಲಾಗಿದೆ. ಬಳಿಕ ಶಿಬಿರ ಮಟ್ಟದಲ್ಲಿ ಭಾವಗೀತೆ, ಜಾನಪದ ಗೀತೆ,…
ಪುಣೆ ತುಳು ಕೂಟದ 26ನೇ ವಾರ್ಷಿಕೋತ್ಸವ ಸಮಾರಂಭವು ಆಗಸ್ಟ್ 15 ರಂದು ಪುಣೆಯ ಬಾಣೇರ್ ನಲ್ಲಿಯ ಬಂಟರ ಭವನದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಜರಗಿತು. ತುಳುವರು ದೇಶ ಜೋಡಿಸುವ ಕಾರ್ಯವನ್ನು ದೇಶ ವಿದೇಶದಲ್ಲಿ ಮಾಡುತ್ತಿದ್ದಾರೆ. ಗುಣದಲ್ಲಿ, ಜ್ಞಾನದಲ್ಲಿ, ಕಠಿನ ಪರಿಶ್ರಮದಲ್ಲಿ ದುಡಿದು ಸಮಾಜ ಸೇವೆಯಲ್ಲಿರುವ ತುಳುವರು ಎಲ್ಲೇ ಇದ್ದರೂ ತುಳು ಬಾಷೆಯ ಜೀವಂತಿಕೆಯನ್ನು ಉಳಿಸಿ ಬೆಳೆಸಿದವರು. ನಮ್ಮ ಹಿರಿಯರ ಕಟ್ಟು ಕಟ್ಟಲೆ, ಸಂಸ್ಕತಿ, ಸಂಸ್ಕಾರ, ಆಚಾರ ವಿಚಾರವನ್ನು ಬಿಟ್ಟು ಕೊಡದೆ ತುಳುವ ಮಣ್ಣಿನ ಮಕ್ಕಳಾದ ತುಳುವರು ಘನತೆ ಗೌರವವನ್ನು ಉಳಿಸಿಕೊಂಡು ನಡೆದವರು ಎಂಬ ಹೆಮ್ಮೆ ನಮ್ಮದು. ತುಳುವರ ಸಂಸ್ಕಾರ ಏನು ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟಿದ್ದೇವೆ. ನಮ್ಮ ಜಲ ಮಣ್ಣು ಬಾಷೆಯ ಜೊತೆಯಲ್ಲಿ ನಿರಂತರ ಸಂಬಂಧವನ್ನಿಟ್ಟುಕೊಂಡು ತುಳು ಸಂಘಟನೆಯನ್ನು ಕಟ್ಟಿ ತುಳುವರನ್ನು ಚಾವಡಿಯಲ್ಲಿ ಒಟ್ಟು ಸೇರಿಸಿಕೊಂಡು ಪುಣೆಯ ತುಳುವರು ಮಾಡುವ ಸೇವೆಯ ಉದ್ದೇಶವೇ ತುಳುವರ ಒಗ್ಗಟ್ಟು, ತುಳುನಾಡಿನ ಸಂಸ್ಕ್ರತಿಯ ಬೆಳವಣಿಗೆ ಹಾಗೂ ತುಳು ಸಂಸ್ಕ್ರತಿಯ ಮೌಲ್ಯದ ಅರಿವು…
ಕರ್ನಾಟಕ ಸಂಘ ಕತಾರ್ : ಹಾಸಿಗೆ ಹಿಡಿದಿದ್ದ ಕುಂದಾಪುರದ ಜಯರಾಮ ಶೆಟ್ಟಿಯವರಿಗೆ ‘ಮನೋಬಲದ ಜಯವೀರ’ ಬಿರುದಿನೊಂದಿಗೆ ಗೌರವ, ಸಹಾಯಹಸ್ತ
ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯೂ) 2025 ರ ಆಗಸ್ಟ್ 10 ರಂದು ಬೆಂಗಳೂರಿನ ಬಸವೇಶ್ವರ ನಗರದ ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿಯಲ್ಲಿ ಸಂಸ್ಥಾಪಕರಿಗೆ, ರಜತಪಥದ ಹರಿಕಾರರಿಗೆ ಅಭಿವಂದನಾ ಕಾರ್ಯಕ್ರಮವನ್ನು ಆಯೋಜಿಸಿ, ತನ್ನ ಬೆಳ್ಳಿಹಬ್ಬದ ಸಂಭ್ರಮವನ್ನು ತವರು ನೆಲಕ್ಕೆ ತರುವುದರ ಮೂಲಕ ರಜತ ವರ್ಷಕ್ಕೆ ಇನ್ನಷ್ಟು ಮೆರುಗನ್ನು ನೀಡಿತು. ಈ ಸುಸಂಧರ್ಭದಲ್ಲಿ “25 ವರ್ಷ – 25 ನೊಂದ ಮುಖಗಳಲ್ಲಿ ಹರ್ಷ” ಎಂಬ ಧ್ಯೇಯದೊಂದಿಗೆ, ಸದಸ್ಯರು ಮತ್ತು ಹಿತೈಷಿಗಳಿಂದ ಸಂಗ್ರಹಿಸಿದ ನಿಧಿಯ ಮೂಲಕ, ರಾಜ್ಯದ ಬೇರೆ ಬೇರೆ ಕಡೆ ಅನಾಥರಿಗೆ, ವಿಶೇಷ ಚೇತನರಿಗೆ, ಏಡ್ಸ್ ಕ್ಯಾನ್ಸರಿನಂಥಹ ಭೀಕರ ಕಾಯಿಲೆಗಳಿಂದ ಬಳಲುವರಿಗೆ ಆಶ್ರಮಗಳನ್ನು ಸ್ಥಾಪಿಸಿ ನಡೆಸುವ 12 ನಿಸ್ವಾರ್ಥ ಸಮಾಜಸೇವಕರನ್ನು ಬಿರುದಿನೊಂದಿಗೆ ಗೌರವ ಧನವನ್ನು ನೀಡಿ ಸನ್ಮಾನಿಸಲಾಯಿತು. ಕೊಂಕಣ್ ರೈಲ್ವೆಯಲ್ಲಿ ಕೆಲಸ ಮಾಡುವಾಗ ಅಪಘಾತಕ್ಕೊಳಗಾಗಿ 34 ವರ್ಷಗಳಿಂದ ಹಾಸಿಗೆಯಲ್ಲಿರುವ ಕುಂದಾಪುರದ ಜಯರಾಮ ಶೆಟ್ಟಿಯವರನ್ನು ‘ಮನೋಬಲದ ಜಯವೀರ’ ಬಿರುದಿನೊಂದಿಗೆ ಸ್ಮರಣಿಕೆ, ರಜತ ವರ್ಷದ ವಿಶೇಷ ಶಾಲು, ಗೌರವ ಧನದೊಂದಿಗೆ ಸನ್ಮಾನಿಸಲಾಯಿತು. ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಡಾ|…
ಮಡಿಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಣಂಜಾರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬ್ರಹ್ಮಲಿಂಗೇಶ್ವರ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶಿವಪ್ರಸಾದ್ ಹೆಗ್ಡೆಯವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಮಂಜುನಾಥ ನಾಯಕ್, ಟ್ರಸ್ಟಿಗಳಾದ ವಿಕ್ರಂ ಹೆಗ್ಡೆ, ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಶಾಲಾ ಸಂಚಾಲಕರಾದ ಸಿಎ ಚಂದನ್ ಹೆಗ್ಡೆ, ಟ್ರಸ್ಟ್ ನ ಕೋಶಾಧಿಕಾರಿ ಪ್ರಕಾಶ್ ಪ್ರಭು, ಮೇಲ್ಬಂಟ ಫ್ರೆಂಡ್ಸ್ ಅಧ್ಯಕ್ಷರಾದ ಮಹೇಶ್ ಹೆಗ್ಡೆ, ಪೆಲತ್ತೂರು ಫ್ರೆಂಡ್ಸ್ ನ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಹರಿದಾಸ್ ನಾಯಕ್ ಹಾಗೂ ದಿನೇಶ್ ಯು.ಎಸ್, ಪಂಚಾಯತ್ ಸದಸ್ಯರಾದ ಶಿವಪ್ರಸಾದ್ ರಾವ್, ಊರಿನ ಹಿರಿಯರು, ಸ್ಥಳೀಯರು, ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಈ ಹಿಂದಿನ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶಾಲಾ ಹಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಯಿತು. ಶಾಲಾ ಪ್ರಭಾರ…
ಬಂಟರ ಸಂಘ ಸಾಲೆತ್ತೂರು ವಲಯ ಇದರ ವತಿಯಿಂದ ಆಗಸ್ಟ್ 10 ರಂದು ಜರಗಿದ “ಬಂಟೆರ್ನ ಆಟಿದ ಅಜನೆ” ಕಾರ್ಯಕ್ರಮದಲ್ಲಿ ಬಂಟರ ಸಂಘ ಸಾಲೆತ್ತೂರು ವಲಯದ ಮಾಜಿ ಅಧ್ಯಕ್ಷರಾದ ದೇವಪ್ಪ ಶೇಖ ಹಾಗೂ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಶ್ರೀಮತಿ ವಿಜಯ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಉದಯ ಕುಮಾರ್ ರೈ ಅಗರಿ, ಅರವಿಂದ್ ರೈ ಮೂರ್ಜೆಬೆಟ್ಟು, ಸುದೇಶ್ ಭಂಡಾರಿ ಎರ್ಮೆನಿಲೆ, ಮೂಲ್ಕಿ ಬಂಟರ ಸಂಘದ ಕಾರ್ಯದರ್ಶಿ ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಕುಲ್ಯಾರ್ ನಾರಾಯಣ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ನಗ್ರಿ ಕೆವುಳ, ಸಂಕಪ್ಪ ಶೆಟ್ಟಿ ಮಲಾರಬೀಡು, ಅಮರೇಶ್ ಶೆಟ್ಟಿ ತಿರುವಾಜೆ, ಸುನೀತಾ ಯು ರೈ ಗೌರಿಕೋಡಿ, ಗಾಯತ್ರಿ ಎಸ್. ರೈ ಕೊಲ್ಲಾಡಿ, ವಿನುತಾ ಎ. ಶೆಟ್ಟಿ ಕೊಲ್ಲಾಡಿ, ಪವಿತ್ರ ಪೂಂಜ ಕೊಡಂಗೆ, ಪ್ರದೀಪ್ ಕುಮಾರ್ ರೈ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಆಗಸ್ಟ್ : ಸಾಮಾಜಿಕ ಪ್ರಜ್ಞೆಯ ಜವಾಬ್ದಾರಿಯನ್ನು ಹೊಂದಿದ ಅರ್ಥಪೂರ್ಣ ಆಡಂಬರರಹಿತ ಜ್ಞಾನಸುಧಾದ ಕಾರ್ಯಗಳು ಪ್ರಶಂಸನೀಯ. ಸಭ್ಯತೆ, ನಡೆನುಡಿಯ ಸಾಕಾರಮೂರ್ತಿ ಡಾ.ಸುಧಾಕರ್ ಶೆಟ್ಟಿಯವರು ಎಂದು ಕಾರ್ಕಳ ಟಿ.ಎಂ.ಎಪೈ ರೋಟರಿ ಆಸ್ಪತ್ರೆಯ ಪ್ರಸೂತಿ, ಸ್ತಿರೋಗ ತಜ್ಞ ಡಾ. ಸಂಜಯ್ ಹೇಳಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ ೧೦೪ನೇ ಜನ್ಮದಿನದ ಅಂಗವಾಗಿ ಆಗಸ್ಟ್ ೨೧ರಂದು ನಡೆದ ಸಾಮಾಜಿಕ ನೆರವಿನ ಸೇವಾ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ಕಾರ್ಯಕ್ರಮ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಸಮಾಜ ಸೇವಕ ಅಂಬಲಪಾಡಿ ವಿಶು ಶೆಟ್ಟಿ ಹಾಗೂ ಸ್ವಚ್ಛ ಕಾರ್ಕಳದ ರಾಯಭಾರಿ ಫೆಲಿಕ್ಸ್ ಜೋಸೆಫ್ ವಾಜ್ರವರಿಗೆ ತಲಾ ೧೦ಸಾವಿರ, ಕುಕ್ಕುಂದೂರು, ಹಿರ್ಗಾನ, ಅಜೆಕಾರ್ ಹಾಗೂ ಬೈಲೂರು ಗ್ರಾಮದ ೧೮ ಸ್ವಚ್ಛತಾ ಸಿಬ್ಬಂದಿಗಳಿಗೆ ತಲಾ ೫ ಸಾವಿರ ನೀಡಿ ಗೌರವಿಸಲಾಯಿತು. ಕ್ಷಯಪೀಡಿತ ೮ ಜನರಿಗೆ ತಲಾ ೩ ಸಾವಿರದಂತೆ ರೂ.೨೪ಸಾವಿರ, ಅಪಘಾತಕ್ಕೀಡಾದ ಹಳೆವಿದ್ಯಾರ್ಥಿ ಕಿರಣ್ ನಾಯಕ್ರವರಿಗೆ ರೂ.೨೦ ಸಾವಿರ,…
ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ಡಾ. ನಿರಂಜನ್ ಶೆಟ್ಟಿ ಅವರ ಕನಸಿನ ಕೂಸು ಸುಮತಿ ಮಾನವಾಲಯ ಭಾನುವಾರ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಸಮಾಜ ಸೇವೆ ಮತ್ತು ಮನುಜ ಸೇವೆ ಇವೆರಡನ್ನು ಉದ್ದೇಶವಾಗಿಟ್ಟುಕೊಂಡು ಅದಕ್ಕೆ ತನ್ನನ್ನು ಮುಡುಪಾಗಿಟ್ಟು ಸೇವೆ ಸಲ್ಲಿಸುತ್ತಿರುವ ಮನೋವೈದ್ಯ ಡಾ. ನಿರಂಜನ್ ಶೆಟ್ಟಿ ಮತ್ತು ಕುಟುಂಬ ಹಲವು ವರ್ಷಗಳಿಂದ ಮಾನವಾಲಯ ಎಂಬ ಸಂಸ್ಥೆಯನ್ನು ಆರಂಭಿಸುವ ಉದ್ದೇಶ ಹೊಂದಿತ್ತು. ಹಲವು ಸಮಯಗಳ ಇವರ ಕನಸು ಆಗಸ್ಟ್ 17ರಂದು ಬೆಳಗ್ಗೆ 10 ಗಂಟೆಗೆ ‘ಸುಮತಿ ಮಾನವಾಲಯ’ ಎಂಬ ಹೆಸರಿನೊಂದಿಗೆ ಮಂಗಳೂರು ಎಸ್.ಡಿ.ಎಂ ಲಾ ಕಾಲೇಜು ಹಿಂಭಾಗ ಅಧಿಕೃತವಾಗಿ ಮಧು ಕನ್ಸ್ಟ್ರಕ್ಷನ್ ಮತ್ತು ಆಟಂ ಫಿಟ್ನೆಸ್ ಕ್ಲಬ್ ನ ಮಾಲಕಿ ಶ್ರೀಮತಿ ವಿಜಯಲಕ್ಷ್ಮಿ ಮಲ್ಲಿ, ಡೈಜಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಶ್ರೀಮತಿ ಸುನಂದ ಶೇಖರ್ ಶೆಟ್ಟಿ ಮಲ್ಲಾರ್ ಇವರ ಸಮ್ಮುಖದಲ್ಲಿ ಆರಂಭಗೊಂಡಿತು. ನಂತರ ಸಂಸ್ಥೆಯ ವತಿಯಿಂದ ಓಶಿಯನ್ ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಜನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಂದ…















