Author: admin
ಬಂಟರ ಸಂಘ ಪಡುಬಿದ್ರಿಯ ಆಶ್ರಯದಲ್ಲಿ ನೂತನವಾಗಿ ಆರಂಭಗೊಂಡ ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ಶ್ರೀನಾಥ್ ಹೆಗ್ಡೆ ನಡ್ಸಾಲು ಗುತ್ತು ಹಾಗೂ ನಿರ್ದೇಶಕರಾಗಿ ರವೀಂದ್ರನಾಥ ಜಿ.ಹೆಗ್ಡೆ, ಎರ್ಮಾಳು ಶಶಿಧರ ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಗುಂಡ್ಲಾಡಿ ಸುರೇಶ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಮಾಧವ ಸಿ. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ಸಂತೃಪ್ತಿ ಎಂ. ಶೆಟ್ಟಿ, ಶೋಭಾ ಜೆ. ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ 2024 : ಸೆಪ್ಟೆಂಬರ್ 28 ರಂದು ಟೀಂ ಐಲೇಸಾದಿಂದ ”ಕೂಜಿನ ಪಾಟು” ಹಾಡು ಬಿಡುಗಡೆ.
ನಿಟ್ಟೆ ವಿಶ್ವ ವಿದ್ಯಾಲಯ ಸೆಪ್ಟೆಂಬರ್ 28 ರಂದು ತುಳು ದಿನ ಮತ್ತು ತುಳುವಿನ ಖ್ಯಾತ ಕವಿ ಡಾ| ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ”ಅಮೃತ ನೆಂಪು” ಆಚರಿಸಲಿದ್ದು ಆ ಸಂದರ್ಭದಲ್ಲಿ ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಜೊತೆಗೆ ಸೇರಿಕೊಂಡು ಕೊರಗ ಭಾಷೆಯ ಮೊತ್ತ ಮೊದಲ ”ಕೂಜಿನ ಪಾಟು” ಎಂಬ ಹಾಡನ್ನು ಬಿಡುಗಡೆ ಮಾಡಲಿದೆ. ಇದೇ ಸಂದರ್ಭದಲ್ಲಿ ಅಮೃತರ ನೆನಪಿನಲ್ಲಿ ಅವರ ಕೈಬರಹದ ಗ್ರಂಥ ಗೊಂಚಲನ್ನು ನಿಟ್ಟೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವ ವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊಫೆಸರ್ ಡಾ. ಸತೀಶ್ ಕುಮಾರ್ ಭಂಡಾರಿ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಅಮೃತ ಸೋಮೇಶ್ವರರವರ ಪುತ್ರ, ಸಾಹಿತಿ ಡಾ. ಚೇತನ್ ಸೋಮೇಶ್ವರ್, ನಿಟ್ಟೆ ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ. ಗೋಪಾಲ್ ಮುಗೆರಾಯ ಮತ್ತು ಖ್ಯಾತ ಕನ್ನಡ ತುಳು ಸಂಗೀತ ನಿರ್ದೇಶಕ ವಿ ಮನೋಹರ್ ಭಾಗವಹಿಸುತ್ತಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲೂಣ್ಕರ್ ಮತ್ತು ನಿಟ್ಟೆ ವಿಶ್ವ ವಿದ್ಯಾಲಯದ…
ಕರ್ನಾಟಕ ಸಂಘ ಕತಾರ್ (ದೋಹಾ ಕತಾರ್ ನ ಭಾರತೀಯ ರಾಯಭಾರ ಕಚೇರಿಯ ಅಧೀನದಲ್ಲಿರುವ ಸಹವರ್ತಿ ಸಂಸ್ಥೆ) ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ 163 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ” ಅಭಿಯಂತರ ದಿನಾಚರಣೆ” ಯನ್ನು ೧೫ ಸೆಪ್ಟೆಂಬರ್ ೨೦೨೪ ರಂದು ಕತಾರ್ ನ ದೋಹಾದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಹಾಲ್ ನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕತಾರ್ ನ ಭಾರತೀಯ ರಾಯಭಾರಿ ಗೌರವಾನ್ವಿತ ಶ್ರೀ ವಿಪುಲ್ ಮತ್ತು ಗೌರವಾನ್ವಿತ ಅತಿಥಿಯಾಗಿ ಕಹ್ರಾಮಾ ವಿದ್ಯುತ್ ಪ್ರಸರಣ ವಿಭಾಗದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಮುಖ್ಯಸ್ಥರಾದ ಶ್ರೀ ಅಬ್ದುಲ್ಲಾ ಇಬ್ರಾಹಿಂ ವೈ.ಎ. ಫಖ್ರೂ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು. ನಂತರ ಭಾರತ ರತ್ನ ಸರ್ ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಕಿರು ವಿಡಿಯೋ ಪ್ರಸ್ತುತಿಯನ್ನು ನೀಡಲಾಯಿತು. ರವಿ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ…
ವೈದ್ಯನಾಗಬೇಕೆಂದು ಹೆತ್ತವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ವೈದ್ಯಕೀಯ ಕಾಲೇಜು ಆರಂಭಕ್ಕೆ ಸ್ವಲ್ಪ ಸಮಯವಿದೆ ಎಂದು ಸಮಯ ಕಳೆಯಲು ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದೆ. ಅಲ್ಲಿ ಕಲಾ ಕ್ಷೇತ್ರ ಆಕರ್ಷಿಸಿತು. ಹಾಡುಗಾರನಾದೆ, ನಟನಾದೆ, ಸಂಗೀತ ನಿರ್ದೇಶಕನಾದೆ. ಸಂಗೀತದ ಆಕರ್ಷಣೆಯಿಂದ ಬದುಕೇ ಬದಲಾಯಿತು ಎಂದು ಸಂಗೀತ ನಿರ್ದೇಶಕ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ| ಗುರುಕಿರಣ್ ಶೆಟ್ಟಿ ತಮ್ಮ ಸಾಧನೆಯ ಹಾದಿಯನ್ನು ತೆರೆದಿಟ್ಟರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ನಮ್ಮ ಬದುಕನ್ನು ನಾವೇ ವಿನ್ಯಾಸಗೊಳಿಸಬೇಕು. ಕನಸು ಕಟ್ಟುವ ಬದಲು ಇಷ್ಟವಾದ ಕೆಲಸವನ್ನು ಮಾಡುತ್ತಾ ಹೋಗಬೇಕು. ಸಂಗೀತವೇ ನನ್ನ ಮನಸ್ಸಿಗೆ ಖುಷಿ ನೀಡುವ ಕೆಲಸ. ಅದನ್ನು ನಿಷ್ಠೆಯಿಂದ ಮಾಡಿದ ಕಾರಣ ಯಶಸ್ಸು ಸಾಧ್ಯವಾಯಿತು ಎಂದರು. ಸರ್ಕಾರಿ ಕಾಲೇಜಿನಲ್ಲಿ ಕಲಿತ ಕಾರಣ ಎಲ್ಲರೊಂದಿಗೆ ಬೆರೆಯುವ ಗುಣ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವ ಛಲ ಬೆಳೆಯಿತು. ನನ್ನದೇ…
ಮಾಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರೊಫೆಸರ್ ನಾಗರತ್ನ ರಾವ್ ಮಾತನಾಡಿ, ಭಾಷೆ ಎಲ್ಲರನ್ನೂ ಒಗ್ಗೂಡಿಸುವ ಪರಸ್ಪರನ್ನು ಬೆಸೆಯುವ ಕೆಲಸ ಮಾಡುತ್ತದೆ. ಹಿಂದಿ ಇಂದು ಕೇವಲ ಒಂದು ಭಾಷೆ ಮಾತ್ರವಾಗಿ ಉಳಿದಿಲ್ಲ ಬದಲಾಗಿ ಹಲವಾರು ಉದ್ಯೋಗಗಳನ್ನು ನೀಡುವ ಒಂದು ಅವಕಾಶವಾಗಿ ಮಾರ್ಪಟ್ಟಿದೆ. ದಕ್ಷಿಣ ಕನ್ನಡದಲ್ಲಿರುವ ಕೇಂದ್ರ ಸರ್ಕಾರದ ಕಾರ್ಯಾಲಯಗಳಲ್ಲಿ ಹಲವಾರು ಅವಕಾಶಗಳು ನಮ್ಮ ಮುಂದಿದೆ. ವಿದ್ಯಾರ್ಥಿಗಳು ಬ್ಯಾಂಕ್ ಗಳಲ್ಲಿ ಎಂಆರ್ಪಿಎಲ್, ಎಂಸಿಎಫ್, ರೈಲ್ವೆ ಮತ್ತು ಏಪೆರ್Çೀರ್ಟ್ ಹೀಗೆ ಹತ್ತು ಹಲವು ಕಡೆ ಹಿಂದಿ ಉದ್ಯೋಗಾವಕಾಶಗಳು ತೆರೆದಿವೆ ಎಂದರು. ಕಳೆದ 9 ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಸ್ನಾತಕೋತ್ತರ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳು ಇಂದು ನೂರಕ್ಕೆ ನೂರು ಉದ್ಯೋಗಗಳನ್ನು ಹೊಂದಿರುವುದು ಇದಕ್ಕೆ ಸಾಕ್ಷಿ ಎಂದರು. ಆಳ್ವಾಸ್ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ ಮಾತನಾಡಿ, ಹಿಂದಿ ಭಾಷೆ ಭಾರತವನ್ನು ಒಂದು ಸೂತ್ರವಾಗಿ ಒಗ್ಗೂಡಿಸಿದೆ. ಈ ಏಕ ಸೂತ್ರ…
ಸಂಘಟನಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಶ್ರೀಮತಿ ಪ್ರಿಯಾ ಗಿರೀಶ್ ಶೆಟ್ಟಿ ಕಟೀಲು ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ವತಿಯಿಂದ ಜಯಲಕ್ಷ್ಮಿ ಸಿಲ್ಕ್ ಉದ್ಯಾವರ ಉಡುಪಿ ವತಿಯಿಂದ ನಡೆದ ಸಾರಿ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸುರತ್ಕಲ್ ಬಂಟರ ಸಂಘವು ಹಲವಾರು ಜನಪರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದರು. ವೇದಿಕೆಯಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಪುಷ್ಷರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಸುಧಾಕರ ಪೂಂಜ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆಯರಾದ ಬೇಬಿ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಉಪಾಧ್ಯಕ್ಷೆ ಸರೋಜ ಶೆಟ್ಟಿ, ಪ್ರಧಾನ…
ಮುಂಬಯಿ ಮಹಾನಗರ ಹಾಗೂ ತವರು ನೆಲದಲ್ಲಿ ಕಮನೀಯ ಕಲೆ ಯಕ್ಷಗಾನ ಹಾಗೂ ಅದರ ವಾಚಿಕ ಪ್ರದಾನ ಅಂಗ ತಾಳಮದ್ದಳೆಯ ಕಂಪನ್ನು ವ್ಯಾಪಕ ರೀತಿಯಲ್ಲಿ ಪಸರಿಸುವಲ್ಲಿ ಮಹತ್ತರ ಶ್ರಮ ವಹಿಸುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ಅಜೆಕಾರು ಕಲಾಭಿಮಾನಿ ಬಳಗದ ಸದಸ್ಯರು ಸೆಪ್ಟೆಂಬರ್ 29ರಂದು ಭಾನುವಾರ ಅಪರಾಹ್ನ 3.00 ರಿಂದ ಸಂಭ್ರಮೋಲ್ಲಾಸದಿಂದ ನಡೆಯಲಿರುವ ತ್ರಯೋವಿಂಶತಿ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾ ಬಾಂಧವರಿಗೆ ಪತ್ರಿಕಾ ಪ್ರಕಟನೆ ಮೂಲಕ ಆತ್ಮೀಯ ಆಮಂತ್ರಣ ನೀಡಿದ್ದಾರೆ. ಬಂಟರ ಸಂಘ ಮುಂಬಯಿ ಕುರ್ಲಾ ಪೂರ್ವದಲ್ಲಿ ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಬಂಧಿ ಸಾಧಕರು ಪ್ರೋತ್ಸಾಹಕರುಗಳಿಗೆ ಪ್ರಶಸ್ತಿ ಪ್ರದಾನದ ಜೊತೆಗೆ ಮಾತೃ ಶ್ರೀ ಸಂಸ್ಮರಣ ಪ್ರಶಸ್ತಿ, ಕೃತಿ ಪ್ರಕಟನೆ ಗೌರವ ಪ್ರಶಸ್ತಿಗಳನ್ನು ಪ್ರದಾನಿಸಲಾಗುತ್ತದೆ. ಪ್ರತಿಷ್ಠಿತ ಯಕ್ಷರಕ್ಷ ಪ್ರಶಸ್ತಿ, ಗೌರವ ಯಕ್ಷ ರಕ್ಷ ಸಾಧಕ ಪ್ರಶಸ್ತಿ ಇತ್ಯಾದಿ ಪುರಸ್ಕಾರ ಇದ್ದು ಮನರಂಜನೆಯಂಗವಾಗಿ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಲಾಡ್ ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್…
ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಹಿಂದೂ ಪದವಿಪೂರ್ವ ಕಾಲೇಜು ಶಿರ್ವ ಜಂಟಿ ಆಯೋಜನೆಯಲ್ಲಿ ಸೆಪ್ಟೆಂಬರ್ 19 ರಂದು ಶಿರ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಹುಡುಗರ ವಿಭಾಗದ ತ್ರೋಬಾಲ್ ಪಂದ್ಯಾವಳಿಯಲ್ಲಿ ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜು ಕಾರ್ಕಳ ತಂಡವನ್ನು ಪ್ರತಿನಿಧಿಸಿದ ಕಾರ್ಕಳ ಎಸ್ ಎನ್ ವಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ತೇಜಸ್ ಶೆಟ್ಟಿ ರೆಂಜಾಳರವರು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜು ಕಾರ್ಕಳ ದ್ವಿತೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ತೇಜಸ್ ಶೆಟ್ಟಿಯವರನ್ನು ಎಸ್.ಎನ್.ವಿ ಪಿಯು ಕಾಲೇಜಿನ ಆಡಳಿತ ಸಮಿತಿ, ಪ್ರಾಂಶುಪಾಲರು, ಅಧ್ಯಾಪಕ ವೃಂದದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಕಲಿಕೆ ಮತ್ತು ಕ್ರೀಡೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ತೇಜಸ್ ಶೆಟ್ಟಿಯವರು ರೆಂಜಾಳ ಕಡಂಬಾಕ್ಯಾರ್ ಮನೆಯ ಶ್ರೀಮತಿ ಮಮತಾ ಶೆಟ್ಟಿಯವರ ಪುತ್ರರಾಗಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಕೋಟೇಶ್ವರ ಸಹನಾ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಸುರೇಂದ್ರ ಶೆಟ್ಟಿಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಒಟ್ಟು 9 ಮಂದಿಯನ್ನು ವ್ಯವಸ್ಥಾಪನಾ ಸಮಿತಿಗೆ ಸರಕಾರ ಆಯ್ಕೆ ಮಾಡಿದೆ. ಸಮಾಜಸೇವಕ ಸುರೇಂದ್ರ ಶೆಟ್ಟಿಯವರು ಕಾರ್ಕಳ ಹಿರಿಯಂಗಡಿ ನಿವಾಸಿ ಆಗಿದ್ದು ಕೋಟೇಶ್ವರದಲ್ಲಿ ತನ್ನ ಉದ್ಯಮವನ್ನು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಅವರು ಕುಂದಾಪುರದಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಕಾರ್ಕಳ ಶಿವತಿಕೆರೆ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕೂಡಾ ಅವರು ಸೇವೆ ಸಲ್ಲಿಸಿದ್ದರು.
ಸಿನೇಮಾ ತಲುಬು ಬಿಟ್ಟು ದಶಕಗಳು ಕಳೆದಿವೆ. ಪ್ರತೀ ಕನ್ನಡ ಸಿನೇಮಾಗಳ ಪ್ರೀಮಿಯರ್ ಶೋ ನೋಡುತ್ತಿದ್ದ ಕಾಲವಿತ್ತು. ಕಸುಬೇ ಹಾಗಿತ್ತು. ಮೊನ್ನೆ ರಾನಿ ಸಿನೇಮಾ ನೋಡಿ ಬಂದೆ. ಬಂದ ತಕ್ಷಣ ಅದಕ್ಕೇ ಯಾವುದೇ ರಿಯಾಕ್ಟ್ ಮಾಡಿಲ್ಲ. ಈ ವಾರವೇ ಹತ್ತಕ್ಕೂ ಹೆಚ್ಚು ಕನ್ನಡ ಸಿನೇಮಾ ಬಿಡುಗಡೆಯಾಗಿದೆ. ಅದೆಲ್ಲದರ ನಡುವೆ ಮಾಸ್ ಸಿನೇಮ ರಾನಿ ಸ್ಪರ್ಧೆಯಲ್ಲಿದೆ. ಚಾಕ್ಲೇಟ್ ಹೀರೋನಂತೆ ಕಾಣಿಸುವ ಕಿರಣ್ ರಾಜ್ ಫೇಸು ಮಾಸ್ ಸಿನೇಮಾಕ್ಕೂ ಪೋಸು ಕೊಡಬಲ್ಲದು ಎನ್ನುವುದನ್ನ ನಿರ್ದೇಶಕ ಗುರುತೇಜ್ ಶೆಟ್ಟಿ ಅದ್ಭುತವಾಗಿ ತೋರಿಸಿದ್ದಾರೆ. ಕ್ಯಾಮರಾ ಕೈ ಚಳಕದ ರಾಘವೇಂದ್ರ ಕೋಲಾರ ಪ್ರತೀ ಫ್ರೇಮಿನಲ್ಲೂ ಇಷ್ಟವಾಗುತ್ತಾರೆ. ಇದು ಪಕ್ಕಾ ಫ್ಯಾಮಿಲಿ ಆಕ್ಷನ್ ಜಾನರ್. ಬಹುತೇಕ ನಿರ್ದೇಶಕರು ಹೀರೋ ಕೈಗೆ ಮಚ್ಚು ನೀಡೋಕೆ ಅದೇ ಹಳೆ ಕಾರಣದ ಕಥೆ ಹೆಣೆಯುತ್ತಾರೆ. ಪ್ರತೀ ಸೀನುಗಳನ್ನೂ ಕುಂತಲ್ಲೇ ನಿರ್ಧರಿಸಿ ಬಿಡಬಹುದು. ಆದರೆ ರಾನಿ ಹಾಗಲ್ಲ! ನಟನಾಗಬೇಕು ಎನ್ನುವ ಉತ್ಕಟ ಕನಸಿರಿಸಿಕೊಂಡ ಹುಡುಗನೊಬ್ಬ ಬದುಕಿನ ಮಾಯಾಜಾಲಕ್ಕೆ ಸಿಲುಕಿ ಡಾನ್ ಆಗಿ ಬಿಡುವ ಕಥೆಯಿದು. ಕ್ಷಣ ಕ್ಷಣಕ್ಕೂ…