Author: admin
ಮೈಸೂರು ಯುನಿಟಿ ಮೂವೀಸ್ ನಿರ್ಮಾಣದ, ಶರತ್ ಬಿಳಿನೆಲೆ ನಿರ್ದೇಶನದ ಫೈಜೂ ಮತ್ತು ಹುಂಜಾ ಪನ್ಪಿ ಜೋಕುಲೆನ ಕನ್ನಡ ಸಿನೆಮಾ ವಿಶ್ವವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವಡ್ ತೀರ್ಪುಗಾರೆರೆ ಪುಗರ್ತೆ ಪಡೆದ್ ದಸರಾ ಸಿನೆಮಾ ಪರ್ಬಗ್ ಆಯ್ಕೆ ಆದ್, ಮೈಸೂರು ಝೂ ಕೈತಲ್ದ ಮಾಲ್ ಆಫ್ ಮೈಸೂರುದ ಐನಾಕ್ಸ್ ಚಿತ್ರಮಂದಿರಡ್ ತೂಪರಿಕೆ ಆಪುನ ಒರುಟು ಊರ ಪರವೂರ ಜನಮಂದೆಲೆ ಮನಸ್ ಗೆಂದ್ಂಡ್. ಆತೇ ಅತ್ತಂದೆ ಮಂಡ್ಯ ಜಿಲ್ಲೆದ ಶ್ರೀರಂಗಪಟ್ಟಣದ ಜೋಕುಲೆ ದಸರಾದ ಚಲನಚಿತ್ರೋತ್ಸವಗ್ ಫೈಜೂ ಮತ್ತು ಹುಂಜಾ ಸಿನೆಮಾ ಆಯ್ಕೆ ಆದ್, ಶ್ರೀರಂಗಪಟ್ಟಣ ಗಂಜಾಂ ರೋಡ್ದ ಶ್ರೀದೇವಿ ಚಿತ್ರಮಂದಿರಡ್ ಬೊಕ್ಕ ಅರಕೆರೆ ಮಂಜುನಾಥ ಚಿತ್ರಮಂದಿರಡ್ ರಡ್ಡ್ ದಿನ ಪ್ರದರ್ಶನ ಆದ್ 7 ಶಾಲೆಲೆನ ಜೋಕುಲು, ಕಲ್ಪಾದಿಲ್ ಸೇರಿನಂಚ ಮಸ್ತ್ ಜೋಕುಲು, ಮಲ್ಲಕ್ಲ್ ತೂದು ಮೆಚ್ಚಿಯೆರ್. ಅವೆನ್ನ ಒಟ್ಟುಡು ಪ್ರಸ್ತುತ ಫೈಜೂ ಮತ್ತು ಹುಂಜಾ ಸಿನೆಮಾ ತೆಲುಗು ಬೊಕ್ಕ ಹಿಂದಿ ಬಾಸೆಲೆಗ್ ಡಬ್ಬಿಂಗ್ ಆವೊಂದುಪ್ಪುನವು ಪೆರ್ಮೆದ ವಿಚಾರ. ಫೈಜೂ ಮತ್ತು ಹುಂಜಾ ಸಿನೆಮಾ ನಿರ್ದೇಶಕೆರ್ ಆದುಪ್ಪುನ…
ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ಎನ್ನುವ ಈ ಸಂಸ್ಥೆಯು ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಒಂದು ಬಲಿಷ್ಠ ಸಂಘಟನೆ ಎಂದು ಅಭಿಮಾನದೊಂದಿಗೆ ಹೇಳುವಂತಿದೆ. ಇದಕ್ಕೆ ಇವರ ಕಾರ್ಯವೈಖರಿ ನಿದರ್ಶನ. ಅದರಲ್ಲೂ ಕಲೆಗೆ ನೀಡುವ ಪ್ರೋತ್ಸಾಹದ ಜೊತೆಗೆ ಇಂದು ಮುಂಬಯಿಯಲ್ಲಿ ಅದ್ದೂರಿಯ ಯಕ್ಷಗಾನ ಪ್ರದರ್ಶನ ನಡೆಯುವುದಿದ್ದರೆ ಅದರ ಸಂಪೂರ್ಣ ಶ್ರೇಯಸ್ಸು ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ಬಳಗಕ್ಕೆ ಸಲ್ಲುವಂತಿದೆ ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಅಕ್ಟೋಬರ್ 11ರ ಶನಿವಾರ ರಾತ್ರಿ ಮೀರಾ ಭಯಂದರ್ ರೋಡ್ ನ ಮೇವರ್ ವಾಟಿಕಾ ಸಭಾಗೃಹದಲ್ಲಿ ಮಹಾರಾಷ್ಟ್ರ ರಾಜ್ಯದ ಯಕ್ಷಗಾನ ಬಯಲಾಟದ ಇತಿಹಾಸದಲ್ಲೇ ಯಕ್ಷಗಾನ ಪ್ರದರ್ಶನಕ್ಕೆ ಜನಸಾಗರದ ಮೂಲಕ ದಾಖಲೆ ಬರೆದ ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ವತಿಯಿಂದ ಪ್ರಖರ ಹಿಂದುತ್ವವಾದಿ ಮಹೇಶ್ ಶೆಟ್ಟಿ ತೆಳ್ಳಾರು ಕುಡುಪುಲಾಜೆಯರವರ ಮಾರ್ಗದರ್ಶನದಲ್ಲಿ ಬಿಜೆಪಿ ನಾಯಕ ಸಚ್ಚಿದಾನಂದ ಶೆಟ್ಟಿಯವರ…
ನನ್ನ ಇಂದಿನ ಎಲ್ಲಾ ಸಾಧನೆಗಳಿಗೆ ಆಳ್ವಾಸ್ ಕಾರಣ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮೂಲಕ ಆಳ್ವಾಸ್ ನೀಡಿದ ಅವಕಾಶಗಳು ಮತ್ತು ಮಾರ್ಗದರ್ಶನದಿಂದ ನನ್ನ ಜೀವನದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಉಡುಪಿ ವಲಯದ ಫಾರೆಸ್ಟ್ ಬೀಟ್ ಆಫೀಸರ್ ಹಾಗೂ ಹಿರಿಯ ವಿದ್ಯಾರ್ಥಿ ಶರತ್ ಶೆಟ್ಟಿ ನುಡಿದರು. ಅವರು ಆಳ್ವಾಸ್ ಕಾಲೇಜ್ ಆಫ್ ಫಿಸಿಯೋತೆರೆಪಿ ಆಯೋಜಿಸಿದ್ದ ರಾಜೀವ್ ಗಾಂಧಿ ವಿಜ್ಞಾನ ವಿವಿಗಳ ಮಂಗಳೂರು ವಲಯ ಮಟ್ಟದ ಹುಡುಗರ ಮತ್ತು ಹುಡುಗಿಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ನ ಶಿಸ್ತು, ಕಠಿಣ ಪರಿಶ್ರಮ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವ ವ್ಯವಸ್ಥೆ ನನ್ನಂತಹ ಅನೇಕ ವಿದ್ಯಾರ್ಥಿಗಳನ್ನು ಯಶಸ್ಸಿನ ಹಾದಿಗೆ ಕೊಂಡೊಯ್ದಿದೆ. ಇಂದು ನಾನು ಸರಕಾರಿ ಉದ್ಯೋಗಿಯಾಗಿರುವುದು ಆಳ್ವಾಸ್ನಲ್ಲಿ ಕಲಿತ ನೈತಿಕತೆ, ಶ್ರಮ ಮತ್ತು ನಿಷ್ಠೆಯ ಫಲ. ಈ ಹಂತದಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ನಲ್ಲಿ ನಿಜವಾದ ಕಲಿಕೆ ಸಂಜೆ…
ಆತ ಹೆಚ್ಚಿನವರ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ಇದು ಲೋಕಾರೂಢಿ ಸಹ. ಮೌನವಾಗಿದ್ದುಕೊಂಡು ಬೆನ್ನಿಗೆ ಇರಿಯುವವರ ಕರಾಮತ್ತು ಬೇಗ ಬೆಳಕಿಗೆ ಬಾರದು. ಇರಿಸಿಕೊಂಡವಗೆ, ಹೃದಯಕ್ಕೆ ಗಾಯವಾದವಗೆ ಮಾತ್ರ ಗೊತ್ತು ಆ ನೋವಿನ ಬಗ್ಗೆ. ಸಮಾಜದ, ಮನೆಯ ಸದಸ್ಯರ ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಕಾರ್ಯ ಮಾಡುವವನಿಗೆ ನಲಿವಿಗಿಂತ ಹೆಚ್ಚು ನೋವೇ. ಆತನ ನೋವನ್ನು ನೋಡಿ ಹಿಂದಿನಿಂದ ಅಪಹಾಸ್ಯ ಮಾಡುವವರಿಗೇನೂ ಕೊರತೆಯಿಲ್ಲ. ಯಾಕೆ ಬೇಕಿವನಿಗೆ, ಸುಮ್ಮನೆ ನೋಡಿಯೂ ನೋಡದ ಹಾಗೆ ಇರಬಾರದೇ? ಎನ್ನುವವರಿದ್ದಾರೆ. ಆದರೆ ಎಲ್ಲವನ್ನೂ ದಾಟಿ ಮುಂದೆ ಸಾಗುವುದೇ ಬದುಕೆಂದು ಸಮಾಜಮುಖಿ ವ್ಯಕ್ತಿ ನಂಬಿರುತ್ತಾನೆ. ಎಲ್ಲರೂ ಒಂದೇ ರೀತಿಯಿದ್ದರೆ ವ್ಯವಹಾರವೆಂತು? ಸಾಗುವ ದಾರಿಯಲ್ಲಿ ನಯ -ನಾಜೂಕು, ಕಲ್ಲು-ಮುಳ್ಳು, ಎತ್ತರ-ತಗ್ಗು, ಹಳ್ಳ-ಕೊಳ್ಳಗಳು ಇರಲೇಬೇಕಲ್ಲ?ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸ್ಥಿತಪ್ರಜ್ಞರು ಭಗವಂತನ ಮೇಲೆ, ಕೈಗೊಂಡ ಕೆಲಸದ ಮೇಲೆ ಮಾತ್ರ ನಂಬಿಕೆಯಿಡುತ್ತಾರೆ. ಯಾರು ಹೇಳಿದ್ದಕ್ಕೂ ಕಿವಿಯಾನಿಸರು. ‘ಕೇಳದೆ, ಹೇಳಿಸಿಕೊಳ್ಳದೆ ತಮ್ಮ ಕರ್ತವ್ಯ ಮಾಡುವವರು ರೂಢಿಯೊಳು ಉತ್ತಮರಂತೆ’. ಹೇಳಿದರೂ ಕೇಳದಂತೆ ನಟಿಸುವ ಜಾಣಕಿವುಡರು ನಮ್ಮ ನಡುವೆಯೇ ಇದ್ದಾರೆ. ಹೇಳಿಸಿಕೊಳ್ಳದೆ ತಾವು ಮಾಡುವ ಕೆಲಸ…
ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ : ಉತ್ಸವ ಸಮಿತಿ ಅಧ್ಯಕ್ಷರಾಗಿ ಭವಿಷ್ ಶೆಟ್ಟಿ ಕೋಡಿಬೆಟ್ಟು
ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇಲ್ಲಿ ಬರುವ 14-01-2026 ರಂದು ಮಕರ ಸಂಕ್ರಮಣ ದಿನ ಧ್ವಜಾರೋಹಣಗೊಂಡು 5 ದಿನ ನಡೆಯುವ ವರ್ಷಾವಧಿ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ ನಡೆಸಲು ಊರ ಭಗವದ್ಭಕ್ತರ ಸಭೆಯನ್ನು ಕರೆದು ಉತ್ಸವ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಮಾಜಿ ಸಚಿವ ರಮಾನಾಥ ರೈ ಕಳ್ಳಿಗೆ ಗುತ್ತು, ಅಧ್ಯಕ್ಷರಾಗಿ ಭವಿಷ್ ಶೆಟ್ಟಿ ಕೋಡಿಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ದೇವಂದಬೆಟ್ಟು, ಕೋಶಾಧಿಕಾರಿಯಾಗಿ ನಾಗೇಶ್ ದರಿಬಾಗಿಲು ಉಳಿದಂತೆ ಗೌರವ ಸಲಹೆಗಾರರು, ಉಪಾಧ್ಯಕ್ಷರು, ಜತೆ ಕಾರ್ಯದರ್ಶಿಗಳು ಹಾಗೂ ಇತರ ಸಮಿತಿಯನ್ನು ರಚಿಸಲಾಯಿತು.
ಕಾರ್ಕಳ ಜ್ಞಾನಸುಧಾದಲ್ಲಿ ಶ್ರದ್ಧಾಂಜಲಿ ಸಭೆ ಕಾರ್ಕಳದ ಪ್ರಸಿದ್ಧ ಲೆಕ್ಕಪರಿಶೋಧಕ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿಯಾಗಿರುವ ಸಿ.ಎ ನಿತ್ಯಾನಂದ ಪ್ರಭುರವರ ತಾಯಿ ಸುಮಿತ್ರಾ ಪ್ರಭು (87) ಅವರು ಆದಿತ್ಯವಾರದಂದು ದೈವಾಧೀನರಾದರು. ಕೆರ್ವಾಶೆಯಲ್ಲಿ ಜನಿಸಿದ ಇವರು ಅಜೆಕಾರ್ ಗುಂಡುರಾಯ ಪ್ರಭುರವನ್ನು ವರಿಸಿ ಅಂಗಡಿ ವ್ಯಾಪಾರದಲ್ಲಿ 40ವರ್ಷಗಳಿಂದ ತೊಡಗಿಸಿಕೊಂಡ ಇವರಿಗೆ ಓರ್ವ ಪುತ್ರನನ್ನು ಹಾಗೂ ಮೂವರು ಪುತ್ರಿಯರನ್ನು, 9 ಮೊಮ್ಮಕ್ಕಳನ್ನು ಹಾಗೂ ಒಂದು ಮರಿಮೊಮ್ಮಗುವನ್ನು ಅಗಲಿದ್ದಾರೆ. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಕಾರ್ಕಳ ಜ್ಞಾನಸುಧಾದ ಮುಖ್ಯ ಸಭಾಂಗಣದಲ್ಲಿ ಅಗಲಿದ ದಿವ್ಯಚೇತನ ಸುಮಿತ್ರಾ ಪ್ರಭುರವರಿಗೆ ಸೋಮವಾರದಂದು ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಶ್ರೀಮತಿ ಉಷಾ ರಾವ್ ಯು, ಉದ್ಯಮಿ ತ್ರಿವಿಕ್ರಮ ಕಿಣಿ, ಸುಮಿತ್ರಾ ಅವರ ಮೊಮ್ಮಗ, ಸಂಸ್ಥೆಯ ಇಂಟರ್ನಲ್…
ಕಾರ್ಕಳ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೆವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ. ಲಿಖಿತ ಪರೀಕ್ಷೆಯಲ್ಲಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ವರುಣ್ ಜೆ ಹಾಗೂ ಮಣಿಪಾಲ ವಿದ್ಯಾನಗರದ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಗೌರಿ ಬೋರ್ಕರ್ ತೇರ್ಗಡೆಗೊಂಡಿದ್ದಾರೆ. ಇವರಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭಹಾರೈಸಿದ್ದಾರೆ.
ಮುಂಬೈ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ಆಯೋಜನೆಯಲ್ಲಿ ನವಿ ಮುಂಬೈಯ ಜೂಹಿನಗರದ ಬಂಟ್ಸ್ ಸೆಂಟರ್ ನಲ್ಲಿ ವಸ್ತ್ರಾಭರಣಗಳ ಪ್ರದರ್ಶನ ಮತ್ತು ಮಾರಾಟವು ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ ಅವರ ನೇತೃತ್ವ ಹಾಗೂ ಅಧ್ಯಕ್ಷತೆಯಲ್ಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ ಅವರ ನೇತೃತ್ವ ಹಾಗೂ ಪದಾಧಿಕಾರಿಗಳ ಮುಂದಾಳತ್ವದೊಂದಿಗೆ ಅಕ್ಟೋಬರ್ 11 ರಂದು ನಡೆಯಿತು. ಕಾರ್ಯಕ್ರಮವನ್ನು ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಹೇಮಲತಾ ಡಿ.ಕೆ ಶೆಟ್ಟಿ, ಶಾಲಿನಿ ಸತೀಶ್ ಶೆಟ್ಟಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ ಅವರು ಮಾತನಾಡಿ, ಅಸೋಸಿಯೇಷನ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚಲಿತವಾಗಿದೆ. ಮಹಿಳಾ ವಿಭಾಗದ ಶಾಂತ ಎನ್ ಶೆಟ್ಟಿ ಮತ್ತು ಅವರ ತಂಡದಿಂದ ವಿವಿಧ ಪ್ರಕಾರಗಳ ಸೀರೆಗಳು, ವಜ್ರಾಭರಣಗಳು ಹಾಗೂ ದಿನೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು…
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಎಲ್ಲಾ ಕಾರ್ಯಕರ್ತರು ತಮ್ಮ ಜವಾಬ್ಧಾರಿಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ. ಮುಂಬಯಿ ಸಮಿತಿ ಹಾಗೂ ಜಿಲ್ಲೆಗಳ ಸಮಿತಿಯ ಎಲ್ಲರೂ ಅವರವರ ಕಾರ್ಯವನ್ನು ಸಮಿತಿಯ ಹೆಸರಿಗೆ ಧಕ್ಕೆಯಾಗದ ರೀತಿಯಲ್ಲಿ ಯಶಸ್ವಿಯಾಗಿ ನೆರವೇರಿಸುತ್ತಿರುವುದು ಅಭಿನಂದನೀಯ. ಇದೇ ರೀತಿ ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಒಗ್ಗಟ್ಟಿನಿಂದ ನಮ್ಮ ಸಂಘಟನೆಯನ್ನು ಮುನ್ನಡೆಸೋಣ. ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಕೆಲವು ನಿರ್ಧಾರವನ್ನು ಸಂಸ್ಥಾಪಕರ ಮಾರ್ಗದರ್ಶನದಂತೆ ಕೈಗೊಂಡಿರುವ ಸಾಧ್ಯತೆಯಿದೆ. ಆದರೂ ನಮಗೆ ನಮ್ಮ ಹಿರಿಯ ಸದಸ್ಯರು ಸಲಹೆ ಸೂಚನೆ ನೀಡುವುದಾದರೆ ಸ್ವಾಗತಾರ್ಹ. ಕಳೆದ 25 ವರ್ಷಗಳಿಂದ ಸಮಿತಿಯು ಜಿಲ್ಲೆಗಳಿಗೆ ವಿದ್ಯುತ್, ಹೆದ್ದಾರಿ, ರೈಲು, ಉದ್ಯೋಗಾವಕಾಶ ನೀಡಿದ್ದು, ಜನರು ಇದನ್ನು ಗಮನಿಸಬೇಕಾಗಿದೆ. ನಮ್ಮ ಕಾರ್ಯಚಟುವಟಿಕೆಗಳು ಹೆಚ್ಚುತ್ತಿದ್ದು ಸಮಿತಿಯ ಸಂಘಟನೆಯ ತಿದ್ದುಪಡಿಯ ಅಗತ್ಯವಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ನುಡಿದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ವಾರ್ಷಿಕ ಮಹಾಸಭೆಯು ಮುಂಬಯಿ ಸಾಕಿನಾಕಾದ ಪೆನಿನ್ಸುಲಾ ಗ್ರಾಂಡ್ ಹೋಟೆಲು ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ…
ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ತೃತೀಯ ವಾರ್ಷಿಕೋತ್ಸವ ಸಮಾರಂಭ ಅಕ್ಟೋಬರ್ 18 ಶನಿವಾರ ಸಂಜೆ 4 ಗಂಟೆಗೆ ಸುರತ್ಕಲ್ ಬಂಟರ ಭವನದ ವಠಾರದಲ್ಲಿ ನಡೆಯಲಿದೆ. ಸುರತ್ಕಲ್ ಗೋವಿಂದದಾಸ ಕಾಲೇಜ್ ನ ಆಡಳಿತಾತ್ಮಕ ನಿರ್ದೇಶಕರಾದ ರಮೇಶ್ ಭಟ್ ಎಸ್ ಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಡಬ್ಯೂಡಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೇಶ್ ರೈ, ಉದ್ಯಮಿ ಸಮಾಜ ಸೇವಕ ಸತೀಶ್ ಮುಂಚೂರು, ದ.ಕ ಜಿಲ್ಲಾ ಬಿಜೆಪಿ ವಕ್ತಾರ ರಾಜ್ ಗೋಪಾಲ್ ರೈ, ದ.ಕ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಾಮಂಜೂರು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಶ್ರೀಮತಿ ಸೀಮಾ ಶೆಟ್ಟಿ ಸುಭಾಷಿತನಗರ, ಶ್ರೀಮತಿ ಮಮತ ಪ್ರೇಮನಾಥ್ ಹೆಗ್ಡೆ ಭಾಗವಹಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗುರು ರಾಕೇಶ್ ರೈ ಅಡ್ಕ, ಸುರತ್ಕಲ್ ಬಂಟರ ಸಂಘದ ಮಾಜಿ…















