Author: admin
ಮಂಡ್ಯ ಜಿಲ್ಲೆಯ ಶ್ರಿ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯ ಸಾಂಪ್ರದಾಯಿಕ ವಿಭಾಗದಲ್ಲಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಾಸ್ಯ ಮಧ್ಯಸ್ಥ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ವಿಜೇತ ವಿದ್ಯಾರ್ಥಿನಿಯು ಶ್ರೀಯುತ ಅರುಣ ಮಧ್ಯಸ್ಥ ಮತ್ತು ಶ್ರೀಮತಿ ಲತಾ ಮಧ್ಯಸ್ಥರವರ ಪುತ್ರಿ. ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ (SGFI) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆದಿಚುಂಚನಗಿರಿಯಲ್ಲಿ ಇತ್ತೀಚೆಗೆ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ ವಿಜೇತ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ವಿದ್ಯಾರ್ಥಿನಿಗೆ ಮಾರ್ಗದರ್ಶನ ನೀಡಿದ್ದರು. ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಬೋಧಕ ಬೋಧಕೇತರ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ನಾರಾಯಣ ಶೆಟ್ಟಿ ಮತ್ತು ಅವರ ಕಾರ್ಯಕಾರಿ ಸಮಿತಿ, ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ನಿರ್ದೇಶನದಲ್ಲಿ ನವೆಂಬರ್ 04 ರಂದು ಬಂಟ್ಸ್ ಸೆಂಟರ್ ನಲ್ಲಿ ತುಳಸಿ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು. ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ಕೊಟ್ಟರು. ತುಳಸಿ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲಪಕ್ಷದ ಏಕಾದಶಿಯಂದು ವಿಷ್ಣು ತನ್ನ ಯೋಗ ನಿದ್ದೆಯಿಂದ ಎಚ್ಚೆತ್ತು ದ್ವಾದಶಿಯಂದು ತುಳಸಿ ಮಾತೆಯನ್ನು (ಲಕ್ಮೀ ದೇವಿ) ವಿವಾಹವಾಗಿದ್ದರಿಂದ, ತುಳಸಿ ಹಬ್ಬ ಅಥವಾ ತುಳಸಿ ಪೂಜೆ ಎಂದು ಆಚರಿಸಲಾಗುತ್ತದೆ. ಆದ್ದರಿಂದ ತುಳಸಿ ಪೂಜೆಯನ್ನು ಆಚರಿಸಿ, ತುಳಸಿಯನ್ನು ಪೂಜಿಸುವುದರಿಂದ ಮನೆಗೆ ಸುಖ, ಶಾಂತಿ, ನೆಮ್ಮದಿ ಲಭಿಸುವುದರ ಜೊತೆಗೆ ಮನಸ್ಸಿನ ಇಷ್ಚಾರ್ಥವು ಸಿದ್ದಿಯಾಗುತ್ತದೆ ಎಂಬ ಬಲವಾದ ನಂಬಿಕೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಅದಲ್ಲದೆ ಆ ದಿನ ಮನೆಮಂದಿಯೆಲ್ಲಾ ಶುಚಿರ್ಭೂತರಾಗಿ ತುಳಸಿಕಟ್ಚೆಯನ್ನು ಸ್ವಚ್ಚಗೊಳಿಸಿ ತುಳಸಿಗಿಡದ ಜತೆ ನೆಲ್ಲಿಕಾಯಿಯ ಗಿಡವನ್ನು ನೆಟ್ಚು ತುಳಸಿಕಟ್ಟೆಯ…
ಮುಂದಿನ ದಿನಗಳಲ್ಲಿ ರಂಗಚಾವಡಿ ಅಕಾಡೆಮಿಯನ್ನಾಗಿ ರಚಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ – ಅಜಿತ್ ಕುಮಾರ್ ರೈ ಮಾಲಾಡಿ
ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಂಬೈ ವಿ.ಕೆ ಸಮೂಹ ಸಂಸ್ಥೆಯ ಛೇರ್ಮನ್ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ರಂಗಚಾವಡಿ ಸಂಸ್ಥೆ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸಂಸ್ಥೆ. ಅನೇಕ ಕಲಾವಿದರನ್ನು ಗುರುತಿಸಿ ನಾಡಿಗೆ ಪರಿಚಯಿಸಿದ ಕೀರ್ತಿ ರಂಗಚಾವಡಿ ಸಂಸ್ಥೆಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ರಂಗಚಾವಡಿ ಅಕಾಡೆಮಿಯನ್ನಾಗಿ ರಚಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಮಾತನಾಡಿ, ರಂಗಚಾವಡಿ ಸಂಸ್ಥೆ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಇದರ ಕಾರ್ಯಚಟುವಟಿಕೆ…
ಆಕೆ ಮನೆಯ ಯಜಮಾನಿ. 60ರ ಹರೆಯ. ಬಂದಾಕೆ ತೋರಿಸಿದ್ದು ತನ್ನ ಕೈಯ ಬೆರಳುಗಳನ್ನು. ಬಲದ ಕೈಯ ಮೂರು ಉಗುರುಗಳು ಕಪ್ಪಾಗಿದ್ದವು. ಅದರ ಸುತ್ತ ಬಾತುಕೊಂಡಿತ್ತು. ಒಂದರಲ್ಲಿ ಸ್ವಲ್ಪ ಕೀವು. ತುಂಬಾ ನೋವು ಯಾಕೆ ಹೀಗೆ? ಎಂದು ಕೇಳಿದಳು. ಇದೊಂದು ಸಾಮಾನ್ಯ ತೊಂದರೆ ಮತ್ತು ಸಾಮಾನ್ಯ ಪ್ರಶ್ನೆ. ಪಾತ್ರೆ ತೊಳೆಯುವ ಸಾಬೂನು ಬದಲಾಯಿಸಿದೆ. ವ್ಯತ್ಯಾಸವಿಲ್ಲ. ಈ ಸಂಭಾಷಣೆಯ ಮುಂದುವರಿದ ಭಾಗ ಹೀಗೆಯೇ ಇರುತ್ತದೆ. ಉಗುರು ಸುತ್ತು ಎನ್ನುವ ಹೆಸರಿನಲ್ಲಿ ಹಲವು ಅಂಶಗಳು ಅಡಗಿವೆ. ಉಗುರಿನ ಸುತ್ತ ಬರುವ ಸೋಂಕು ಇದು. ಉಗುರಿನ ಸುತ್ತಲಿನ ಚರ್ಮ ಮತ್ತು ಅಂಗಾಂಶ ದಪ್ಪವಾಗಿ ಕೆಂಪಾಗುತ್ತದೆ. ಕೀವು ತುಂಬಿಕೊಂಡು ಬಹಳ ವೇದನೆ ಇರಬಹುದು. ಉಗುರಿನ ಬಣ್ಣ ಕ್ರಮೇಣ ಬದಲಾಗಿ ಹಳದಿ ಅಥವಾ ಬದಿಗಳಲ್ಲಿ ಆಕಾರವೇ ಬದಲಾಗಿ ಸೊಟ್ಟಗಾಗಿ ಬಿಡಬಹುದು. ಹೆಚ್ಚಾಗಿ ಇದು ಕಂಡುಬರುವುದು ಮಹಿಳೆಯರಲ್ಲಿ ಮತ್ತು ಹೋಟೆಲಿನ ಮಾಣಿಗಳಲ್ಲಿ. ಕಾರಣ? : ಉಗುರು ಸುತ್ತಿನ ಮುಖ್ಯ ಕಾರಣವೇ ಬೆರಳುಗಳಲ್ಲಿ ಸದಾ ನೀರಿನ ಪಸೆ ಇರುವುದು. ಮನೆಯಲ್ಲಿ ಮಹಿಳೆಯರ ಅತ್ಯಂತ…
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ: ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಜೇಶ್ ಶೆಟ್ಟಿ
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ತಾಭಾರತಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್, ಸಜ್ಜನ ಸಹೃದಯಿ ಪುಷ್ಪರಾಜ್ ಶೆಟ್ಟಿ ಬಿ.ಎನ್ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 2025-28ನೆ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಪುಷ್ಪರಾಜ್ 187 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ವಿಜಯವಾಣಿ ಪತ್ರಿಕೆಯ ವರದಿಗಾರ ಯುವ ಫೈಯರ್ ಬ್ರಾಂಡ್ ಹೆಸರಾದ ಶ್ರವಣ್ ಕುಮಾರ್ ನಾಳ ಕೊನೆಯ ದಿನ ನಾಮಪತ್ರ ಸಲ್ಲಿಸಿದರೂ ತೀವ್ರ ಸ್ಪರ್ಧೆ ನೀಡಿ 144 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಅತ್ಯಧಿಕ ಮತಗಳನ್ನು ಪಡೆದ ವಿಜಯ ಕರ್ನಾಟಕದ ಮುಹಮ್ಮದ್ ಆರೀಫ್, ವಿಲೈಡ್ ಡಿ ಸೋಜ ಮತ್ತು ರಾಜೇಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಅತೀ ಹೆಚ್ಚಿನ ಮತಗಳನ್ನು ಪಡೆದ ಉದಯವಾಣಿಯ ಸತೀಶ್ ಇರಾ, ಹೊಸ ದಿಗಂತದ ಸುರೇಶ್ ಪಳ್ಳಿ, ಪುತ್ತೂರಿನ ಸಿದ್ದೀಕ್ ನೀರಾಜೆ ಗೆಲುವು ಸಾಧಿಸಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅತಿ ಹೆಚ್ಚಿನ ಮತಗಳನ್ನು ಪಡೆದ ಕನ್ನಡಪ್ರಭ ದ ಸಂದೀಪ ವಾಗ್ಲೇ, ದಿವಾಕರ ಪದ್ಮುಂಜ, ಸಂದೇಶ್…
ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ (ರಿ.) ಮತ್ತು ಸ್ಫೋರ್ಟ್ಸ್ ಎಂಡ್ ಆರ್ಟ್ಸ್ ಅಸೋಸಿಯೇಷನ್ (ರಿ.) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್ (ಬಾಲಕ ಬಾಲಕಿಯರು), ಸೀನಿಯರ್ (ಪುರುಷ ಮತ್ತು ಮಹಿಳೆಯರು) ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. ಜೂನಿಯರ್ ವಿಭಾಗದ ಬಾಲಕ ಬಾಲಕಿಯರ, ಸಬ್ ಜೂನಿಯರ್ ಬಾಲಕ ಬಾಲಕಿಯರ ಮತ್ತು ಮಹಿಳೆಯರ ಹೀಗೆ ಒಟ್ಟು ಎಲ್ಲಾ 6 ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದು ಸಮಗ್ರ ಚಾಂಪಿಯನ್ ಆಗಿ ಆಳ್ವಾಸ್ ಹೊರಹೊಮ್ಮಿತು. ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ ಆಳ್ವಾಸ್ ನ ಮಾನಸ, ಮಹಿಳಾ ವಿಭಾಗದಲ್ಲಿ ಆಳ್ವಾಸ್ ನ ತನುಷ ಬೆಸ್ಟ್ ಲಿಪ್ಟ್ ರ್ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
ಒಬ್ಬೊಬ್ಬರ ಮನುಷ್ಯನ ವ್ಯಕ್ತಿತ್ವ ಸರಳತೆ ಕೆಲವರನ್ನು ಸಹಜವಾಗಿಯೇ ಆಕರ್ಷಿಸುತ್ತದೆ. ಅದು ಸ್ವಾಭಾವಿಕ. ಕೆಲವರು ತಮ್ಮ ಮಾತುಗಳಿಂದಾಗಲಿ, ಕೆಲಸಗಳಿಂದಾಗಲಿ ಅಥವಾ ಗೌರವಪೂರ್ಣ ನಡವಳಿಕೆಯಿಂದಾಗಲಿ ಇತರರ ಮನ ಗೆದ್ದುಕೊಳ್ಳುತ್ತಾರೆ. ಅವರ ವ್ಯಕ್ತಿತ್ವವೇ ಅವರಿಗೆ ಎತ್ತರದ ಸ್ಥಾನವನ್ನು ನೀಡುತ್ತದೆ. ಅದೇ ರೀತಿಯ ಒಬ್ಬ ಸ್ನೇಹಿತನಾಗಿದ್ದನು ಪುನೀತ್ ಶೆಟ್ಟಿ. ಹೃದಯಾಘಾತದಿಂದ ಅವನು ಅಕಾಲಿಕವಾಗಿ ನಿಧನರಾದರು ಎಂಬುದು ಮನಸ್ಸಿಗೆ ತುಂಬಾ ನೋವು ತಂದ ಸಂಗತಿ. ಕೇವಲ 37ನೇ ವಯಸ್ಸಿನಲ್ಲೇ ಬದುಕು ಮುಗಿದರೂ, ಅವನ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಪುನೀತ್ ಶೆಟ್ಟಿ ಸೆಲ್ಕೋ ಸೊಲಾರ್ನಲ್ಲಿ ಉದ್ಯೋಗದಲ್ಲಿದ್ದು, ಹೆಬ್ರಿ ಕಾರ್ಕಳ ಪ್ರದೇಶದಲ್ಲಿ ನಿಜಕ್ಕೂ ಕ್ರಾಂತಿ ಮೂಡಿಸಿದ್ದ. ಸೋಲಾರ್ ಕ್ಷೇತ್ರದಲ್ಲಿ ಅವನು ಮಾಡಿದ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದವು. ಗುಡ್ಡದ ಮೇಲಿನ ನಾರಾಯಣಣ್ಣನ ಮನೆಗೆ ಸೋಲಾರ್ ಲೈಟ್ ಅಳವಡಿಸಿ ಮನೆಗೆ ಬೆಳಕು ಕೊಟ್ಟದ್ದು ಅವನೇ. ಕಳೆದ ವರ್ಷ ನಕ್ಸಲ್ ವಿಕ್ರಂ ಗೌಡ ನ ಎನ್ಕೌಂಟರ್ ನಡೆದ ಪೀತಬೈಲಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಿ ಹಲವಾರು ಮನೆಗಳಿಗೆ ಬೆಳಕು ಚೆಲ್ಲಿದ್ದವನು ಕೂಡ ಅವನೇ. ಇವು…
ಬ್ರಹ್ಮಾವರ ನ. 8: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ಸುಸಜ್ಜಿತ ಕ್ರೀಡಾಂಗಣ ಜಿ ಎಮ್ ಅರೆನಾದಲ್ಲಿ 21ನೇ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ಜರಗಿತು. ಶ್ರೀಯುತ ಸೋಮಶೇಖರ ಪಡುಕರೆ, ಕರ್ನಾಟಕದ ಪ್ರಸಿದ್ಧ ಸ್ಪೋರ್ಟ್ಸ್ ಜರ್ನಲಿಸ್ಟ್, ಉಡುಪಿ ಇವರು ಕ್ರೀಡಾಜ್ಯೋತಿಯನ್ನು ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ತಂದು ಕೊಟ್ಟಿದ್ದು ಹಾಕಿ ಕ್ರೀಡೆ ಎಂದು ತಿಳಿಸಿದರು. ಹಾಗೆಯೇ ಜಿ ಎಮ್ ವಿದ್ಯಾಸಂಸ್ಥೆಯಿಂದ ಅಂತರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರುಗಳನ್ನು ಗುರುತಿಸಿದರು. ವಿದ್ಯಾರ್ಥಿಗಳಿಗೆ ನಿಮ್ಮ ಜೀವನಕ್ಕಾಗಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ ಆದರೆ ನಿಮ್ಮ ಬದುಕಿನ ಅಂತರಾತ್ಮದಲ್ಲಿ ಒಬ್ಬ ಕ್ರೀಡಾಪಟುವಿರಲಿ ಎಂದು ಕರೆನೀಡಿದರು. ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಜಗದೀಶ್ ಕೆ. ದೈಹಿಕ ಶಿಕ್ಷಣ ನಿರ್ದೇಶಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ. ಇವರು ಮಾತನಾಡಿ ಕ್ರೀಡೆಯು ನಮ್ಮಲ್ಲಿ ಜೀವನ ಕೌಶಲ, ನಾಯಕತ್ವ ಗುಣ, ಮನೋಲ್ಲಾಸ ಮತ್ತು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು. ಶಾಲಾ…
ಜಿಲ್ಲಾಮಟ್ಟದ ಯೋಗ ಸ್ಪರ್ಧೆಯು ಉಡುಪಿಯ ವಿದ್ಯೋದಯ ಪಿ.ಯು ಕಾಲೇಜಿನಲ್ಲಿ 7-11- 2025ರಂದು ಜರುಗಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಇವರು ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಜಾಹ್ನವಿ ಜೆ. ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಅರ್ಥಮ್ ಎ. ಶೆಟ್ಟಿ ರವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದಾರೆ. ಪ್ರಥಮ ಸ್ಥಾನಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡರವರು ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಅಶೋಕ ಇದ್ದಲ್ಲಿ ಶೋಕವಿಲ್ಲ. ಈ ವ್ಯಕ್ತಿಯ ಹೆಸರಿನಲ್ಲೇ ಸಾಮರಸ್ಯ ಅಡಗಿದೆ ಅದಕ್ಕೆ ಇವರ ವ್ಯಕ್ತಿತ್ವವೂ ಪೂರಕವಾಗಿದೆ. ಲೆಕ್ಕ ಹಾಕಿದರೆ ನಾನಿವರನ್ನು ಮುಖತಃ ಭೇಟಿಯಾಗಿದ್ದು 4-5 ಸಲವಷ್ಟೇ. ಮೊದಲ ಬಾರಿಗೆ ನೋಡಿದಾಗಲೇ ಇವರ ವರ್ಚಸ್ಸಿಗೆ, ಕ್ಷಾತ್ರ ತೇಜಸ್ಸಿಗೆ, ನಿಷ್ಕಲ್ಮಶ ನಗುವಿಗೆ, ಎಲ್ಲಕ್ಕಿಂತ ಮಿಗಿಲಾಗಿ ಅಹಂಕಾರವೇ ಇಲ್ಲದ ಸರಳತೆಗೆ ಅಭಿಮಾನಿಯಾಗಿದ್ದೆ. ಅಂತಃಕರಣದಲ್ಲೊಂದು ಅಶೋಕಣ್ಣನ ಕುರಿತಾಗಿ ಅಪರಿಮಿತ ಆಸಕ್ತಿ ಪುಟಿದೆದ್ದಿತ್ತು. ಮೈರ್ಮಾಡಿ ಅಶೋಕ್ ಶೆಟ್ರು ಅಪರಂಜಿ ಅಂತಹ ವ್ಯಕ್ತಿ ಎಂದು ಅದೆಷ್ಟೋ ಜನರ ಬಾಯಲ್ಲಿ ಕೇಳಿದ ಮಾತು ಇವರ ಮನೆಯಲ್ಲಿ ಕುಳಿತು ಇವರೊಡನೆ ಮಾತನಾಡುವಾಗ ದಿಟವೆನಿಸಿತು. ಎಂಥವರಿಗೂ ಕೂಡ ಇವರನ್ನು ವಿರೋಧಿಸಬೇಕು ಇವರ ಅಮೂಲ್ಯವಾದ ಸ್ನೇಹವನ್ನು ಕೈಚೆಲ್ಲಬೇಕೆನ್ನುವ ಬಯಕೆ ಮೂಡುವುದಿಲ್ಲ, ಇಂತಹ ಒಬ್ಬ ವ್ಯಕ್ತಿ ನಮ್ಮ ಜೊತೆ ಇದ್ದರೆ ಸಾಕು ಎನ್ನುವ ಅನುರಾಗ ಅರಳುತ್ತೆ ಇವರನ್ನು ಅಪ್ಪಿ ಹಿಡಿಯಬೇಕೆನಿಸುತ್ತೆ. ಮಾಸ್ಟ್ರೇ ನಿಮ್ಮೂರು ಯಾವುದು ಅಂತ ನಾನು ಕರ್ತವ್ಯ ನಿರ್ವಹಿಸುವ ಕಾರ್ಕಳ ತಾಲೂಕಿನಲ್ಲಿ ಅದೆಷ್ಟೋ ಜನ ಕೇಳಿದಾಗ ಬ್ರಹ್ಮಾವರ ಸಮೀಪ ನೀಲಾವರದ ಎಳ್ಳಂಪಳ್ಳಿ ಅಂದಾಗ ಮರುಕ್ಷಣ ಅವರು…















