Author: admin

ತೀರ್ಥಹಳ್ಳಿ ಸಮೀಪ ಮಂಜುನಾಥ ಮತ್ತು ಸುಶೀಲ ದಂಪತಿಗಳ ಎರಡನೇ ಮಗನಾಗಿ ಶರತ್ ಏಪ್ರಿಲ್ 17 1989 ರಂದು ಜನಿಸಿದರು.ಅತ್ಯಂತ ಎಳವೆಯಲ್ಲೇ ತನ್ನ ತಂದೆತಾಯಿಯನ್ನು ಕಳೆದುಕೊಂಡ ಇವರು ಕನ್ನಂಗಿ ಸಮೀಪ ಹೊನ್ನಾಸ್‌ಗದ್ದೆ ಎಂಬ ಹಳ್ಳಿಯಲ್ಲಿ ತನ್ನ ಅಜ್ಜಿ ಮನೆಯಲ್ಲಿ ಬೆಳೆದರು.ಸ್ಥಳೀಯ ಶಾಲೆಯಲ್ಲಿ ಏಳನೇ ತರಗತಿ ತನಕದ ವಿದ್ಯಾಭ್ಯಾಸ.ಕಡುಬಡತನದ ಕಾರಣದಿಂದ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು ತೀರ್ಥಹಳ್ಳಿಯಲ್ಲಿ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದರು. ಬಾಲ್ಯದಿಂದಲೇ ಮಂದಾರ್ತಿ ಮೇಳದ ಯಕ್ಷಗಾನ ನೋಡುತ್ತಾ ಬೆಳೆದ ಇವರಿಗೆ ಯಕ್ಷಗಾನ ಕಲಾವಿದ ಆಗಬೇಕೆಂಬ ಆಸೆ ಚಿಕ್ಕಂದಿನಿಂದಲೇ ಇತ್ತು. ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಬೇಕೆಂಬ ಆಸೆ ನಾಟ್ಯ ಕಲಿಯದ ಕಾರಣ ಈಡೇರಲಿಲ್ಲ. ಅದೇ ಸಮಯದಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಜಾಹೀರಾತು ನೋಡಿ ಭಾಗವತಿಕೆ ಕಲಿಯಲು ಅರ್ಜಿ ಸಲ್ಲಿಸಿದರು. ಕೇಂದ್ರಕ್ಕೆ ಹೋಗಿ ಸಂದರ್ಶನ ಎದುರಿಸಿದ ಇವರನ್ನು ಯಕ್ಷಗಾನದ ಗಂಧಗಾಳಿ ಗೊತ್ತಿಲ್ಲದ ಕಾರಣದಿಂದ ಪಾಸ್‌ ಮಾಡಲಿಲ್ಲ. ಇವರ ಆಸಕ್ತಿಯನ್ನು ಗಮನಿಸಿದ ದಿ.ಅಡೂರ್ ಗಣೇಶ ರಾವ್‌ರವರು ಕೇಂದ್ರಕ್ಕೆ ಸೇರ್ಪಡೆಗೊಳಿಸಿದರು. ಆಗ ಭಾಗವತಿಕೆ ಗುರುಗಳಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ 15…

Read More

ಭಾರತದಲ್ಲಿ ಸಂವಿಧಾನವೇ ಪರಮೋಚ್ಚ. ಈ ದೇಶದ ಬುನಾದಿಯೇ ಸಂವಿಧಾನ. ಉಳಿದೆಲ್ಲವೂ ಕೂಡ ಸಂವಿಧಾನದ ಮೇಲೆಯೇ ಅವಲಂಬಿತವಾಗಿದೆ. ಈ ಸಂವಿಧಾನಕ್ಕೆ ಆಧಾರ ಸ್ಥಂಭಗಳಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಿವೆ. ಈ ಮೂರೂ ಅಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಯಾಗುತ್ತದೆ. ಆದರೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಮಧ್ಯೆ ಹೊಂದಾಣಿಕೆಯ ಕೊರತೆಯಿಂದಾಗಿ ದೇಶದ ಆಡಳಿತಕ್ಕೆ ಧಕ್ಕೆ ಬರುವ ಸಾಧ್ಯತೆಯೇ ಹೆಚ್ಚು. ಶಾಸಕಾಂಗ ಅತೀ ಕಡಿಮೆ ಅವಧಿಗೆ ಕಾರ್ಯಾಚರಿಸುವ ಅಂಗ. ಪ್ರತೀ ವರ್ಷಗಳಿಗೊಮ್ಮೆ ಇದು ಬದಲಾಗುವ ಸಂಭವ ಇರುತ್ತದೆ. ಅದಕ್ಕಿಂತ ಸ್ವಲ್ಪ ಹೆಚ್ಚಿನ ದಿನಗಳ ಅವಕಾಶ ನ್ಯಾಯಾಂಗ ದಲ್ಲಿ ಚುನಾಯಿತರಾದ ನ್ಯಾಯಾಧೀಶರಿಗೆ ದೊರೆಯುತ್ತದೆ. ಇದ್ದುದರಲ್ಲಿ ಕಾರ್ಯಾಂಗದಲ್ಲಿರುವ ಅಧಿಕಾರಿಗಳಿಗೆ ಹೆಚ್ಚಿನ ವರ್ಷಗಳ ಸೇವಾವಧಿ ಸಿಗುತ್ತದೆ. ಹಾಗಾಗಿಯೇ ಕಾರ್ಯಾಂಗದ ಮೇಲೆ ನ್ಯಾಯಾಂಗಕ್ಕೂ, ಶಾಸಕಾಂಗಕ್ಕೂ ಒಂದಿಷ್ಟು ಹೆಚ್ಚಿನ ಅಧಿಕಾರ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಶಾಸಕಾಂಗದ ಪ್ರಭಾವ ಹೆಚ್ಚುತ್ತಿದೆ. ನ್ಯಾಯಾಂಗದ ಆಗುಹೋಗುಗಳಲ್ಲಿ ಶಾಸಕಾಂಗ ಕೈಹಾಕಬಾರದು. ಆದರೆ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿಯ, ಅದರಲ್ಲೂ…

Read More

ಕನ್ನಡ ಸಾಹಿತ್ಯಕ್ಕೆ ನಾನು ಬಂದಿದ್ದು ಆಕಸ್ಮಿಕ. ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ನನಗೆ ಎಂಎಸ್ಸಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ಸೀಟು ಸಿಗಲಿಲ್ಲ. ಹಾಗಾಗಿ ಐಚ್ಛಿಕ ಕನ್ನಡ ತೆಗೆದುಕೊಂಡು ಎಂಎ ಪದವಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಬಿ.ಎ.ವಿವೇಕ ರೈ ಹೇಳಿದರು.ಬಿಎಂಶ್ರೀ ಪ್ರತಿಷ್ಠಾನ ಎನ್‌ಆರ್‌ ಕಾಲನಿಯ ಎಂವಿಸಿ ಸಭಾಂಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಶ್ರೀ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ ಮಾತನಾಡಿ, ವಿವೇಕ ರೈ ಅವರು ಜರ್ಮನಿಯಲ್ಲಿ ಕೂಡ ಕನ್ನಡ ಸಾಹಿತ್ಯದ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಮುಂದಿನ 500 ವರ್ಷಗಳಲ್ಲಿ ಕನ್ನಡ ಸಾಹಿತ್ಯದ ವೈಶಿಷ್ಟ ಏನು ಎಂಬುದು ತಿಳಿಯಲಿದೆ ಎಂದರು. ಶಾ ಬಾಲುರಾವ್‌ ನೆನಪುಗಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ| ಬೈರಮಂಗಲ ರಾಮೇಗೌಡ, ನಿಕಟಪೂರ್ವ ಅಧ್ಯಕ್ಷ ಡಾ| ಆರ್‌.ಲಕ್ಷ್ಮಿನಾರಾಯಣ, ಗೌರವಾಧ್ಯಕ್ಷ ಡಾ| ಪಿ.ವಿ.ನಾರಾಯಣ, ಕಮಲಿನಿ ಬಾಲುರಾವ್‌ ಮತ್ತಿತರರು ಉಪಸ್ಥಿತರಿದ್ದರು.

Read More

ಪುಣೆ ಬಂಟರ ಸಂಘದ ಯುವ ವಿಭಾಗದ ವತಿಯಿಂದ ಬಾಕ್ಸ್ ಕ್ರಿಕೆಟ್ ಪಂದ್ಯಾಟವು (ಬಂಟ್ಸ್ ಬಾಕ್ಸ್ ಕ್ರಿಕೆಟ್ ಲೀಗ್ ) ಜ .7 ರಂದು ನಗರದ ಗ್ರೀನ್ ಬಾಕ್ಸ್ ಟರ್ಫ್ ,ಭಂಡಾರ್ಕರ್ ಇನ್ಸ್ಟಿಟ್ಯೂಟ್ ,ಲಾ ಕಾಲೇಜು ರೋಡ್ ,ಪುಣೆ ಇಲ್ಲಿ ನಡೆಯಿತು. ಒಟ್ಟು 16 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು ಅಂತಿಮವಾಗಿ ವೈಷ್ಣವಿ ತಂಡ ಹಾಗೂ ದೇಹು ರೋಡೀಸ್ ತಂಡಗಳು ಫೈನಲ್ ನಲ್ಲಿ ಸೆಣಸಿದ್ದು ವೈಷ್ಣವಿ ತಂಡ ವಿಜೇತ ಟ್ರೋಫಿ ಹಾಗೂ ರೂ 11,111/- ನಗದನ್ನು ಪಡೆದುಕೊಂಡರೆ ರನ್ನರ್ಸ್ ಆಪ್ ತಂಡವಾದ ದೇಹು ರೋಡೀಸ್ ರೂ .7,777/- ನಗದು ಹಾಗೂ ಟ್ರೋಫಿಯನ್ನು ಗಳಿಸಿಕೊಂಡಿತು . ಸುಶಾಂತ್ ಶೆಟ್ಟಿ ಮ್ಯಾನ್ ಆಪ್ ದ ಸೀರಿಸ್ ಪ್ರಶಸ್ತಿ ಗಳಿಸಿದರೆ ನಿಧಿ ಅಜಿತ್ ಹೆಗ್ಡೆ ವಿಮೆನ್ ಆಪ್ ದ ಸೀರೀಸ್ ,ಆರ್ಯನ್ ಕಿಶೋರ್ ಶೆಟ್ಟಿ ಬೆಸ್ಟ್ ಬ್ಯಾಟ್ಸ್ ಮೆನ್ ಹಾಗೂ ಶ್ವೇತಾ ಶೆಟ್ಟಿ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ…

Read More

ಮೊದಲಿಗೆ ಹೇಳುತ್ತೇನೆ ನಾನು ಚಿತ್ರ ವಿಮರ್ಶಕನಲ್ಲ ಆದರೆ ಕಾಂತಾರ ಚಲನಚಿತ್ರದ ಸಫಲತೆ ಎಂದರೆ ಬೌದ್ಧಿಕ ಮಟ್ಟದ ಅಧಃಪತನದ ಕಾರಣದಿಂದ ತಮ್ಮ ಮೂಲ ಮರೆತ ಯುವ ತುಳುವ ಜನಾಂಗಕ್ಕೆ ಕಾಂತಾರ ಚಲನಚಿತ್ರ ಅವರ ಮೂಲವನ್ನು ನೆನಪಿಸಿತು. ಕುಟುಂಬದ ಮೂಲಮನೆಯ ಕಡೆಗೆ ತಲೆಹಾಕಿ ಮಲಗದ ಎಷ್ಟೋ ತುಳುವ ಯುವಜನರನ್ನು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ.ಆದೂ ಅಲ್ಲದೆ ತನ್ನ ಮೂಲದ ಶಕ್ತಿಯ ಮೇಲಿನ ನಂಬಿಕೆಯನ್ನು ಬಿಟ್ಟು ಇನ್ಯಾವುದೋ ಶಕ್ತಿಯ ಮೇಲಿನ ಭಕ್ತಿಯ ಪರಾಕಾಷ್ಠೆಗೆ ಹೋದವರನ್ನು ಕಂಡಿದ್ದೇನೆ. ಈ ಎಲ್ಲಾ ಏರಿಳಿತಗಳ ನಡುವೆ ಕಾಂತಾರ ಸಿನಿಮಾ ಕತ್ತಲೆಯ ಕಾಡಿನಲ್ಲಿ ದಾರಿ ತಪ್ಪಿದ ತುಳುವರಿಗೆ ಸತ್ಯ ಜೀಟಿಗೆಯಾಗಿ ಮರೆತು ಹೋದ ಮೂಲದ ಮನೆಯ ದಾರಿ ತೋರಿಸಿದ್ದಂತು ಸತ್ಯ. ತುಳುವರ ಕುಟುಂಬದ ತರವಾಡು ಮನೆಯು ಐದು ಸಮೂಹ ಶಕ್ತಿಗಳ ಆರಾಧನಾ ಕೇಂದ್ರ. ಆ ಶಕ್ತಿಗಳೇ ಕುಟುಂಬದ ಸದಸ್ಯರ ಆಗುಹೋಗುಗಳ ಕಾರಣೀಕರ್ತರು ಎಂದು ತೌಳವ ಸಂಪ್ರದಾಯದ ಅನನ್ಯ ನಂಬಿಕೆ. ಆ ಐದು ಶಕ್ತಿಗಳೇ ನಾಗ, ಮುಡಿಪು, ಪಂಜುರ್ಲಿ, ಗತಿಸಿ ಹೋದ ಗುರು…

Read More

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಗುಂಬೆ ವಲಯ ಮತ್ತು ಹರಿಹರಪುರ ವಲಯವನ್ನೊಳಗೊಂಡ ಕಮ್ಮರಡಿ ಘಟಕವನ್ನು ಮಾ.9 ರಂದು ತೀರ್ಥಹಳ್ಳಿ ಬಾಳೇಬೈಲಿನ ರಾಕ್ ವೀವ್ ಹೋಟೆಲ್‌ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಯಿತು. ಕಮ್ಮರಡಿ ಘಟಕ ಟ್ರಸ್ಟ್ ನ 38 ನೇ ಘಟಕವಾಗಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನಾಗತೀರ್ಥ ಚಿಟ್ಸ್ ನ ಆಡಳಿತ ನಿರ್ದೇಶಕರು ಹಾಗೂ ರಾಕ್ ವೀವ್ ಹೋಟೆಲಿನ ಮಾಲೀಕರಾದ ಕಿಮ್ಮನೆ ಆದಿತ್ಯ, ತೀರ್ಥಹಳ್ಳಿಯ ಶ್ರೀ ಮಾರಿಕಾಂಬ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ, ಖ್ಯಾತ ಯಕ್ಷಗಾನ ಭಾಗವತ ಮತ್ತು ಪಟ್ಲ ಫೌಂಡೇಶನ್ ನ ಸತೀಶ್ ಶೆಟ್ಟಿ ಪಟ್ಲ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯ, ತೀರ್ಥಹಳ್ಳಿ ಪ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಪಟ್ಲ ಟ್ರಸ್ಟ್ ನ ಪುರುಷೋತ್ತಮ ಭಂಡಾರಿ, ರವಿ ಶೆಟ್ಟಿ , ಪ್ರದೀಪ್ ಆಳ್ವ…

Read More

ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯ ಇದರ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ ಕಾರ್ಯಕ್ರಮ ಬಂಟರ ಸಭಾಂಗಣದಲ್ಲಿ ನಡೆಯಿತು. ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತೃ ಸಂಘದ ನಿರ್ದೇಶಕ ಭೂತುಗುಂಡಿ ಕರುಣಾಕರ ಶೆಟ್ಟಿ, ಪ್ರಮೋದಾ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್, ಸೇವಾದಾರರಾದ ಸುಧಾಕರ ಶೆಟ್ಟಿ ಶಿರಂಗೂರು, ಗುಣರತ್ನ ಎಸ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ವಾದಿರಾಜ್ ಶೆಟ್ಟಿ ಚಾರ, ಕುಂಠಿನಿ ಭಾಸ್ಕರ್ ಶೆಟ್ಟಿ, ಆಶಾ ಬಿ.ಶೆಟ್ಟಿ, ಮುಟ್ಲಪಾಡಿ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ, ಜ್ಯೋತಿ ಕೆ. ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕೆ. ಅಡ್ಯಂತಾಯ, ಪ್ರಕಾಶ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು, ಇದರ ಬಹರೈನ್ ಸೌದಿ ಘಟಕದ ತೃತೀಯ ವಾರ್ಷಿಕೋತ್ಸವ “ಪಟ್ಲ ಸಂಭ್ರಮ – 2023” ಅಕ್ಟೋಬರ್ 20 ರಂದು ಸ್ಥಳೀಯ ಕನ್ನಡ ಭವನ ಸಭಾಂಗಣದಲ್ಲಿ ವಿಜೃಂಬಣೆಯಿಂದ ನೆರವೇರಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್, ಕತಾರ್ ಘಟಕದ ಗೌರವಾಧ್ಯಕ್ಷರಾದ ಡಾ. ಮೂಡಂಬೈಲು ರವಿ ಶೆಟ್ಟಿ, ಅಭ್ಯಾಗತರಾಗಿ ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜ, ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿ ಪಾಲ್ಗೊಂಡಿದ್ದರು‌. ಅತಿಥಿ ಗಣ್ಯರರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು. ಈ ಬಾರಿಯ ಪಟ್ಲ ಸಂಭ್ರಮದಲ್ಲಿ ಅಭಿನವ ವಾಲ್ಮೀಕಿ‌ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣೆಯನ್ನು ಹಮ್ಮಿಕೊಂಡಿದ್ದು, ತಾಯ್ನಾಡಿಂದ ಆಗಮಿಸಿದ್ದ ಪೂಂಜರ ಶಿಷ್ಯ ಶ್ರೀ ದೀವಿತ್ ಕೋಟ್ಯಾನ್ ರವರು ಪೂಂಜರಿಗೆ ನುಡಿನಮನ ಸಲ್ಲಿಸಿದರು. ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜರನ್ನು ಶಾಲು ಸ್ಮರಣಿಕೆ, ಹಣ್ಣುಹಂಪಲು, ಸಮ್ಮಾನ ಪತ್ರದ ಮೂಲಕ ಗೌರವಿಸಲಾಯಿತು. ಮುಖ್ಯ ಅತಿಥಿ ಡಾ.ಮೂಡಂಬೈಲು ರವಿ ಶೆಟ್ಟಿಯವರನ್ನು…

Read More

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಶಿರ್ವದ ವಿದ್ಯಾವರ್ಧಕ ಸಂಘದ ಕ್ಯಾಂಪಸ್ ನಲ್ಲಿ 2 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿ ನಿರ್ವಹಿಸಲ್ಪಡುವ ಜಸ್ಟಿಸ್ ಕೆ. ಎಸ್. ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದ ಉದ್ಘಾಟನೆ ಅ.20 ರಂದು ಬೆಳಗ್ಗೆ 10 ಗಂಟೆಗೆ ಜರಗಲಿದೆ. ಸರ್ವೋಚ್ಚ ನ್ಯಾಯಾಲಯದ ನಿವೃತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಲಿದ್ದು ನಿಟ್ಟೆ ವಿ. ವಿ. ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಶಾಸಕ ಸುರೇಶ್ ಪಿ. ಶೆಟ್ಟಿ ಗುರ್ಮೆ, ನಿಟ್ಟೆ ವಿ. ವಿ. ಸಹಕುಲಾಧಿಪತಿಗಳಾದ ಡಾ. ಎಂ. ಶಾಂತಾರಾಮ ಶೆಟ್ಟಿ, ವಿಶಾಲ್ ಹೆಗ್ಡೆ, ಕುಲಪತಿ ಡಾ. ಎಂ. ಎಸ್. ಮೂಡಿತ್ತಾಯ, ಉಪಾಧ್ಯಕ್ಷ (ಸಿಆರ್ ಎಲ್ ಮತ್ತು ಐ ಎಸ್ ಆರ್) ಡಾ. ಸತೀಶ್ ಕುಮಾರ್ ಭಂಡಾರಿ ಹಾಗೂ ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್ ಭಾಗವಹಿಸಲಿದ್ದಾರೆ. ಗ್ರಾಮೀಣ ಅರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯ ಸೇವೆಗಳು ಲಭಿಸಿದ್ದು, ಕೆಲವು ಸೇವೆಗಳು ಮತ್ತು…

Read More

ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ 17 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದ ಯಶಸ್ಸಿನ ಹಿನ್ನಲೆಯಲ್ಲಿ ಬಂಟ್ಸ್ ಹಾಸ್ಟೇಲ್ ಓಂಕಾರ ನಗರದಲ್ಲಿ ಧನ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಗಣೇಶೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಅಹರ್ನಿಶಿಯಾಗಿ ದುಡಿದ ಸಮಾಜ ಬಾಂಧವರನ್ನು ಅಜಿತ್ ಕುಮಾರ್ ರೈ ಮಾಲಾಡಿ ಅವರು ಅಭಿನಂದಿಸಿದರು. ಕಾರ್ಯಕರ್ತರ ದುಡಿಮೆ, ಶ್ರಮಕ್ಕೆ ಭಗವಂತನ ಆಶೀರ್ವಾದ ಇದೆ. ಬಂಟರ ಮಾತೃ ಸಂಘ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ನಿರಂತರವಾಗಿ ಪಾಲ್ಗೊಳ್ಳಿ ಎಂದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಪ್ರತಿಷ್ಠಾನದ ಟ್ರಸ್ಟಿ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಡಾ ಆಶಾಜ್ಯೋತಿ ರೈ, ಸಂಚಾಲಕರಾದ ಮಿಥುನ್ ರೈ, ಪ್ರವೀಣ್…

Read More