Author: admin
ತುಳು ಚಿತ್ರರಂಗದ ಭರವಸೆಯ ಯುವನಟ, ಪಿಲಿ ತುಳು ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ಚಿತ್ರದ ಕಥೆಯನ್ನೂ ಬರೆದ ಭರತ್ ಭಂಡಾರಿ ನಟನೆಯ ಪಿಲಿ ತುಳು ಸಿನಿಮಾ ಮುಂಬಯಿಯಾದ್ಯಂತದ 9ನೇ ಪ್ರದರ್ಶನವು ಜೂನ್ 18 ರಂದು ಕನಕಿಯ ಮೂವಿಮೆಕ್ಸ್ ಥಿಯೇಟರ್ ನಲ್ಲಿ ತೆರೆ ಕಂಡಿತು. ಬಹು ಜನರ ಬೇಡಿಕೆಯಂತೆ ಏಕ ಕಾಲಕ್ಕೆ 2 ಪರದೆಯಲ್ಲಿ ಪ್ರದರ್ಶನ ಕಂಡ ಸಾಹಸ, ಪ್ರೇಮ, ಹಾಸ್ಯ, ಲವಲವಿಕೆಯಿಂದ ಕೂಡಿದ ಈ ಪಿಲಿ ಪ್ರದರ್ಶನದ ಶುಭಾರಂಭದ ನಿಮಿತ್ತ ನಡೆದ ಸರಳ ಸಮಾರಂಭಕ್ಕೆ ವಿಶೇಷ ಗಣ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಮಾತನಾಡುತ್ತಾ ನಾಯಕ ನಟ ಭರತ್ ಭಂಡಾರಿಯವರ ಇದು ಮೊದಲ ತುಳು ಸಿನೆಮಾ. ಯುವ ಹಾಗೂ ಪ್ರತಿಭಾವಂತನ ಈ ಸಾಹಸಕ್ಕೆ ಇನ್ನೂ ಹೆಚ್ಚಿನ ಜನಮನ್ನಣೆ ಪ್ರಾಪ್ತಿಯಾಗಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ವಿವಿಧ ಚಲನಚಿತ್ರಗಳು ತೆರೆ ಕಾಣಲಿ ಎಂದು ಶುಭ ಹಾರೈಸಿದರು. ಗಣ್ಯ ಅತಿಥಿಯಾಗಿ ಆಗಮಿಸಿದ ಐಕಳ ಹರೀಶ್ ಶೆಟ್ಟಿಯವರು ಚಿತ್ರರಂಗದಲ್ಲಿ…
ಮುಂಬಯಿ (ಆರ್ಬಿಐ), ಮೇ. 27: ಬರಹಗಾರರಿಗೆ ಅಸಕ್ತಿ ಮತ್ತು ಸೃಜನಶೀಲತೆ ಇದ್ದರೆ ಉತ್ತಮ ಬರಹಗಾರ ಆಗಲು ಸಾಧ್ಯ. ಇದನ್ನು ತರಬೇತಿ ಪಡೆದು ಗಳಿಸಲು ಸಾಧ್ಯವಿಲ್ಲ. ಇಂತಹ ಕಲೆ ದೈವದತ್ತವಾಗಿ ಬಂದಿರುತ್ತದೆ ಅದಕ್ಕೆ ಪ್ರೋತ್ಸಾ ನೀಡುವ ಕಾರ್ಯ ಎಳವೆಯಲ್ಲಿ ಹೆತ್ತವರಿಂದ ಆಗಬೇಕು ಅಶ್ವಿತಾ ಶೆಟ್ಟಿ ಇಂತಹ ಅವಕಾಶವನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬರಹಗಾರ್ತಿಯಾಗಿ ಬೆಳೆಯಲು ಅವಕಾಶವಿದ್ದು, ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಕರ್ನಾಟಕ ಹೈಕೋರ್ಟ್ನ ನ್ಯಾಯಾದೀಶ ಎಸ್.ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟರು. ಬೆಂಗಳೂರಿನ ಟೋಟಲ್ ಕನ್ನಡ ಮತ್ತು ಐಲೇಸಾ ದಿ ವಾಯ್ಸ್ ಆಫ್ ಓಸಿಯನ್ ಸಂಸ್ಥೆಯ ಸಹಯೋಗದಲ್ಲಿ ಮುಂಬಯಿಯ ಯುವ ಲೇಖಕಿ ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ `ಮರ್ಸಿಡಿಸ್ ಬೆಂಜ್ನ ಹಿಂದೆ“ಶನಿವಾರ ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿ ಯುವ ಬರಹಗಾರ್ತಿಯ ಚೊಚ್ಚಲ ಕೃತಿ ದೇವಸ್ಥಾನದಲ್ಲಿ ಬಿಡುಗಡೆ ಶ್ಲಾಘನೀಯ ಎಂದ ಅವರು ಸಾಹಿತಿಗಳ ಕೊಡುಗೆ ಸಮಾಜ ಗುರುತಿಸದಿರುವುದು ಖೇದಕರ ಎಂದರು. ಮಂಗಳೂರು…
ಕುಂದಾಪುರ ತಾಲ್ಲೂಕಿನ ಕಂಡ್ಲೂರು ಸರಕಾರಿ(ಕನ್ನಡ) ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ ಇವರು BAS ಕಂಪೆನಿಯ ಶೂ ವಿತರಿಸಿದರು. ಈ ಸಂದರ್ಭ ಶ್ರೀ ಕನ್ನಿಕಾ ಎಜ್ಯುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷ ಗೌರಿ ಶ್ರೀಯಾನ್, ಅಂಪಾರು ವಲಯದ ಸಿ.ಆರ್.ಪಿ ರಾಘವೇಂದ್ರ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ಮೊಗವೀರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನಾ ಶೆಟ್ಟಿ, ಶಿಕ್ಷಕ ವರ್ಗದ ರೇಖಾ, ವೀಣಾ, ಜ್ಯೋತಿ, ಜ್ಯೋತಿ ಗ್ಲಾಡಿಸ್, ರವಿ, ನಾಗರಾಜ್, ಸುನೀತಾ, ಲಲಿತಾ, ಚಂದ್ರ, ಬಸವ ನಾಯಕ್, ಹರ್ಷ ಕೋಟೇಶ್ವರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಪುಣೆ : ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಮಹಿಳಾ ವಿಭಾಗದ ವತಿಯಿಂದ ನಿಗ್ಡಿಯಲ್ಲಿರುವ ಹೋಟೆಲ್ ಪುಣೆ ಗೇಟ್ ಸಭಾಂಗಣದಲ್ಲಿ “ಆಟಿಡೊಂಜಿ ತಮ್ಮನ” ಎನ್ನುವ ವಿಶಿಷ್ಟ ತುಳುನಾಡ ಸಂಪ್ರದಾಯವನ್ನು ಸಾರುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಇವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ ಶೆಟ್ಟಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಯಲ್ ಕೊನೊಟ್ ಬೋಟ್ ಕ್ಲಬ್ ಅಧ್ಯಕ್ಷರಾದ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ,ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಬಹಳ ಕಷ್ಟದ ದಿನಗಳಾಗಿತ್ತು. ಆಟಿ ತಿಂಗಳಲ್ಲಿ ವಿಶೇಷವಾಗಿ ಆರೋಗ್ಯಕ್ಕೆ ಪೂರಕವಾದ ಪ್ರಕೃತಿದತ್ತವಾದ ಆಹಾರ ಪದಾರ್ಥಗಳನ್ನು ಸೇವಿಸುವ ಪರಿಪಾಠವಿತ್ತು. ಅಂತಹ…
ಮೂಡಬಿದ್ರೆ ಯುವ ಕಾಂಗ್ರೆಸ್ ವತಿಯಿಂದ ಬೆಳುವಾಯಿ ಅಂಬೂರಿ ನಿವಾಸಿಗಳಾದ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನಾಗರಾಜ್ ಶೆಟ್ಟಿ ಅವರಿಗೆ ದೆಹಲಿಯ ಎಂಪೈರ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನವಾಗಿದ್ದು ಮತ್ತು ಇವರ ಸಹೋದರರಾದ ಮಧ್ವರಾಜ್ ಶೆಟ್ಟಿ ಇವರು ಕೂಡ ಮಂಗಳೂರು ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಿ ಮತ್ತು ಗೌರವ ಡಾಕ್ಟರೇಟ್ ಪ್ರದಾನವನ್ನು ಪಡೆದುಕೊಂಡ ಇಬ್ಬರು ಸಾಧಕರನ್ನು ಗುರುತಿಸಿ ಅವರ ಸ್ವಗೃಹದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು ಹಾಗೂ ಅವರ ಸಾಧನೆಗೆ ಮತ್ತಷ್ಟು ದೇವರ ಆಶೀರ್ವಾದ ಒದಗಿ ಬರಲಿ ಎಂದು ಹಾರೈಸಲಾಯಿತು.
ದಿನಾಂಕ 31-12-2023 ರಂದು ಸುಳ್ಯ ಬಂಟರ ಭವನದಲ್ಲಿ ಬಂಟರ ಯಾನೆ ನಾಡವರ ಸಂಘ (ರಿ.)ಸುಳ್ಯ ಇದರ ವತಿಯಿಂದ ಆಯೋಜಿಸಲಾದ “ಬಂಟರ ಸಮಾವೇಶ” ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು. ಶ್ರೀ ಗುರುದೇವದತ್ತ ಸಂಸ್ಥಾಪನಮ್ ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಾ. ಎ ಸದಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು. ನಂತರ ಶಾಸಕಿ ಭಾಗೀರತಿ ಮುರುಳ್ಯ, ಶ್ರೀ ಪ್ರದೀಪ್ ಕುಮಾರ್ ರೈ ಐಕಳಬಾವ ಹಾಗೂ ಇತರ ಸಾಧಕ ಗಣ್ಯರಾದ ಧೀರಜ್ ರೈ, ಪ್ರಖ್ಯಾತ ಶೆಟ್ಟಿ, ದೇವಿಪ್ರಸಾದ್ ರೈ, ಸನತ್ ಕುಮಾರ್ ಆಳ್ವ, ಸಂದೇಶ್ ರೈ ಹಾಗೂ ಕುಂಟುಪುಣಿ ಪ್ರಮೋದ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಆರ್ಗುಂಡಿ, ರಾಮಕೃಷ್ಣ ರೈ ಮಾಳೆಂಗ್ರಿ, ರಾಮದಾಸ್ ರೈ ಮೊರಂಗಲ್ಲು, ಉದಯ ಕುಮಾರ್ ರೈ ಬಾಳಿಲ, ಸುವರ್ಣ ರೈ ಕೊಂಕಣಿ ಮೂಲೆ, ಗೀತಾ ಉದಯ್ ಕುಮಾರ್ ರೈ…
ಮೂಡುಬಿದಿರೆ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಸಂಸ್ಥೆ (ರಿ.) ಆಶ್ರಯದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಯೂತ್, ಜೂನಿಯರ್ ಮತ್ತು ಸೀನಿಯರ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ಶಿಫ್ನ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಎಲ್ಲಾ ಆರು ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಆಳ್ವಾಸ್ ಪಡೆದುಕೊಂಡಿತು. ಪುರುಷರ ವಿಭಾಗದ ಯೂತ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಹಾಗೂ ಮಹಿಳಾ ವಿಭಾಗದ ಯೂತ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆದಿದೆ. ಪುರುಷರ ವಿಭಾಗದ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಜೂನಿಯರ್ ವಿಭಾಗದಲ್ಲಿ ಆಳ್ವಾಸ್ನ ಶಿವಾನಂದ ಪಡೆದುಕೊಂಡರು. ಮಹಿಳಾ ವಿಭಾಗದ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪಡೆದುಕೊಂಡರು. ಕ್ರೀಡಾಪಟುಗಳ ಉತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಒಂದು ಸಮಾಜದ ಸರ್ವತೋಮುಖ ಏಳಿಗೆಯಾಗಬೇಕಾದರೆ ಆ ಸಮಾಜದ ಶ್ರೀಮಂತ ವರ್ಗ ಆರ್ಥಿಕ ಬೆಂಬಲವನ್ನು ದುರ್ಬಲರ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕುಂದಾಪುರದ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ದಶಮ ಸಂಭ್ರಮದ ಪ್ರಯುಕ್ತ ನಡೆದ ವಿವಿಧ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ ಸಮಾಜದಲ್ಲಿ ಶೇ.80 ರಷ್ಟು ಬಡವರಿದ್ದಾರೆ. ಅವರ ಆರೋಗ್ಯ, ಶಿಕ್ಷಣ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಶ್ರೀಮಂತರು ಸಹಾಯ ಹಸ್ತ ಚಾಚಬೇಕು. ಕೋಟ್ಯಾಧೀಶರನ್ನು ಹುಡುಕಿ ಅವರ ಮನವೊಲಿಸಿ ಸಂಘಟನೆಗೆ ಆರ್ಥಿಕ ಬೆಂಬಲ ಪಡೆಯಬೇಕು. ಪ್ರತಿಭಾನ್ವಿತರಿಗೆ ಬೆಂಬಲ ನೀಡುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು. ಸಾಧಕರು ನಮಗೆ ಮಾರ್ಗದರ್ಶಕರಾಗುತ್ತಾರೆ. ಅವರ ದಾರಿಯಲ್ಲಿ ಯುವಕರು, ವಿದ್ಯಾರ್ಥಿಗಳು ಸಾಗಬೇಕು. ಸಂಘದಿಂದ ಸಹಾಯ ಪಡೆದವರು ಅದರ ನೂರು ಪಟ್ಟು ಸಾಧನೆ ಮಾಡಿ ಸಂಘಟನೆ ಮತ್ತು ಸಮಾಜದ ಋಣ ತೀರಿಸಬೇಕು. ಸಂಘಟನೆಗಳ ನಾಯಕತ್ವ ತೆಗೆದುಕೊಳ್ಳುವವರು ಸಮಾಜವನ್ನು ಮುನ್ನಡೆಸುವ ಜವಾಬ್ಧಾರಿ ತೆಗೆದುಕೊಳ್ಳಬೇಕು ಎಂದು…
ಬಂಟ ಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ, ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕು – ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ
“ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಬೇಕು. ತನ್ನ ಸಾಮರ್ಥ್ಯವನ್ನು ಸಮಾಜಕ್ಕೆ ಧಾರೆ ಎರೆಯುವ ರೀತಿ ಅವಳಿಗೆ ವಿದ್ಯಾಭ್ಯಾಸ ದೊರೆಯಬೇಕು. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಹೆತ್ತವರು ಮುಂದಾಗಬೇಕು. ಸರಕಾರಿ ಹುದ್ದೆಯಲ್ಲಿ ಬಂಟರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಐಎಎಸ್ ಪರೀಕ್ಷೆ ಬರೆಯಲು ಹಿಂದುಳಿದ ವರ್ಗಗಳ ಮೀಸಲಾತಿ ಕೇಂದ್ರ ಸರಕಾರದಿಂದ ಇದೆ ಆದರೆ ನಮ್ಮ ಬಂಟ ಸಮುದಾಯಕ್ಕೆ ಲಭ್ಯವಿಲ್ಲ. ಇದು ಅಗತ್ಯವಾಗಿ ಬೇಕಾಗಿದೆ. ಅದಕ್ಕಾಗಿ ನಮ್ಮ ಬಂಟ ಸಮಾಜ ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತಾಡಿದರು. ವೇದಿಕೆಯಲ್ಲಿ ಮಂಗಳೂರು…
ನಾವು ತುಳುನಾಡಿನಿಂದ ಬಂದವರು. ನಮ್ಮ ಜನ್ಮಭೂಮಿಯ ಪರಂಪರೆ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಕರ್ಮಭೂಮಿಯ ಮುಂಬಯಿಯ ನಮ್ಮ ಕಲಾಭಿಮಾನಿಗಳು ಕಲೆಗೆ ಬೆಲೆ ನೀಡುವ ಆದರ್ಶಮಯ ವಿಚಾರವಂತರು. ಸಾಂಸ್ಕೃತಿಕ ಪರಂಪರೆಯನ್ನು, ಧಾರ್ಮಿಕ ಲೋಕವನ್ನು ಪ್ರತಿಬಿಂಬಿಸುವಂತಹ ಯಕ್ಷಗಾನದ ಅರಿವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮವರು ಇಂತಹ ಕಾರ್ಯಕ್ರಮಕ್ಕೆ ಬರುವಾಗ ಮಕ್ಕಳೊಂದಿಗೆ ಬಂದರೆ ಅಧ್ಯಾತ್ಮಿಕ ಚಿಂತನೆಗಳ ಸ್ವರೂಪದ ಯಕ್ಷಗಾನದ ಕಲೆಯು ಅಜರಾಮವಾಗಿರಲು ಸಾಧ್ಯ ಎಂದು ಪೊವಾಯಿ ಕನ್ನಡ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್. ಜಿ. ಶೆಟ್ಟಿಯವರು ನುಡಿದರು. ಅವರು ಮೀರಾ ರೋಡ್ ಪೂರ್ವದ ಪೂನಮ್ ಸಾಗರ್ ಕಾಂಪ್ಲೆಕ್ಸ್ ನ ರಾಧಾಕೃಷ್ಣ ಬ್ಯಾಂಕೆಟ್ ಹಾಲ್ ನ ಸಭಾಂಗಣದಲ್ಲಿ ಅ.11ರಂದು ಸಂಜೆ ಸ್ವರ್ಗೀಯ ಶೇಖರ್ ವಿ. ಶೆಟ್ಟಿ ಬೆಳ್ಮಣ್ ಸಂಸ್ಮರಣಾ ಸಮಿತಿ ಆಯೋಜಿಸಿದ್ದ, ಡಿ. ಮನೋಹರ್ ಕುಮಾರ್ ಸಂಯೋಜನೆಯ, ದಿ. ಹರೀಶ್ ಜೆ.ಶೆಟ್ಟಿ ನಿಂಜೂರು ವೇದಿಕೆಯಲ್ಲಿ ಬೆಂಕಿನಾಥೇಶ್ವರ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು ಮಂಗಳೂರು ಮತ್ತು ಯಕ್ಷ ತುಳು ಪರ್ಬ ಇವರ…















