Author: admin
ಮಾತೃಮೂಲ ಪದ್ಧತಿಯ ಶಕ್ತಿಯ ಪ್ರಭಾವವನ್ನು ಅರ್ಥ ಮಾಡಿದ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕುಟುಂಬದ ಯಜಮಾನನ ಹಕ್ಕನ್ನು ಸ್ತ್ರೀಗಳಿಗೆ ನೀಡಿತು. ಇದರಿಂದಾಗಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಯಿತು. ಪ್ರತೀ ಮನೆಯ ರೇಷನ್ ಕಾರ್ಡಿನಲ್ಲಿ ಯಜಮಾನನ ಸ್ಥಾನದಲ್ಲಿ ಮನೆಯೊಡತಿಗೆ ಸ್ಥಾನ ನೀಡಲಾಯಿತು. ಅವಳೇ ಕುಟುಂಬದ ಪ್ರಧಾನಿಯಾದಳು. ಪಡಿತರ ವ್ಯವಸ್ಥೆ ಮಾತ್ರವಲ್ಲ ಆ ಕುಟುಂಬಕ್ಕೆ ಸರಕಾರದಿಂದ ನೀಡುವ ಯಾವುದೇ ಪರಿಹಾರ ಸಹಾಯಧನ ಇದ್ದರೂ ಅವಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಇಂದು ಜಮೆಯಾಗುತ್ತಿದೆ. ಇದ್ದ ಆದಾಯದಲ್ಲಿ ಕುಟುಂಬವನ್ನು ಹೇಗೆ ವ್ಯವಸ್ಥಿತವಾಗಿ ನಡೆಸಿಕೊಳ್ಳಬೇಕೆಂಬ ಬುದ್ಧಿವಂತಿಗೆ ಮಾತೆಯರಿಗೆ ಇದ್ದೇ ಇದೆ. ನಮ್ಮ ದೇಶದಾದ್ಯಂತ ಪಡಿತರ ಚೀಟಿಯನ್ನು ಮನೆಯ ಒಡತಿಯ ಭಾವಚಿತ್ರ ರಾರಾಜಿಸಲು ಮೂಲ ಕಾರಣ ತುಳುನಾಡಿನ ಮಾತೃ ಪ್ರಧಾನ ಪದ್ಧತಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ತುಳುನಾಡಿನಲ್ಲಿ ಮಾತ್ರ ಜಾರಿಯಲ್ಲಿ ಅಳಿಯ ಕಟ್ಟು ಸಂಪ್ರದಾಯಕ್ಕೆ ಅದೆಷ್ಟು ಶತಮಾನಗಳ ಇತಿಹಾಸವಿದೆ. ಬಾರ್ಕೂರು ಸಂಸ್ಥಾನವನ್ನು ಆಳಿದ ಭೂತಾಳ ಪಾಂಡ್ಯನು, ತನ್ನೆಲ್ಲಾ ಆಸ್ತಿಯನ್ನು ತಂಗಿಯ ಮಗನಿಗೆ ಕೊಟ್ಟಂದಿನಿಂದ ಇದು ಜಾರಿಯಾಯಿತು ಎನ್ನುತ್ತಾರೆ. ಸಮುದ್ರ…
ನಾನು ಅಲೆಮಾರಿ! ಹಿಂದಿನ ಜನ್ಮದಲ್ಲೆಲ್ಲೋ ನಾನು ಊರೂರು ಅಲೆದೇ ಬದುಕಿದ್ದ ಬರಿಗಾಲ ಪಕೀರನೋ? ಜೋಳಿಗೆಯ ಜೋಗಿಯೋ ಆಗಿರಬೇಕೇನೊ! ಸಂಚಾರವೇ ನನ್ನ ಚೈತನ್ಯಶೀಲತೆ. ಮೊನ್ನೆ ಹಾಗೆ ಹೋದದ್ದು ಧಾರವಾಡಕ್ಕೆ. ಅಲ್ಲಿನ ಎಸ್.ಡಿ.ಎಂ. ಅಂಗಳಕ್ಕೆ ಹೋದೆ. ಉತ್ತರಕ್ಕೆ ಹೋಗಲಿಕ್ಕೆ ಕೆಲಸವೂ ಇತ್ತು. ಅದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯ! ಪೂಜ್ಯ ಖಾವಂದರ ಕನಸು. ಅಲ್ಲಿ ಡಾ. ನಿರಂಜನ್ ಇದ್ದಾರೆ. ಅವರು ಅದರ ವೈಸ್ ಚಾನ್ಸಲರ್. ಜಗತ್ತಿನ ಸರ್ವಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಸಾಲಿನಲ್ಲಿ ಅವರೂ ಒಬ್ಬರಾಗಿ ನಿಂತಿದ್ದರು. ಅವರು ಯು.ಕೆಯಲ್ಲಿ ಅತ್ಯಂತ ಪ್ರಸಿದ್ದ ವೈದ್ಯರಾಗಿದ್ದವರು, ಜಗತ್ತಿನ ನಾನಾ ದೇಶಗಳು ಅವರನ್ನ ಆಹ್ವಾನಿಸುತ್ತಿದ್ದವು. ಡಾಕ್ಟರು 1993 ರ ಹೊತ್ತಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಬಂದದ್ದೇ ಸುದ್ದಿಯಾಗಿತ್ತು! ಆಗಲೇ ಅವರು ಸೆಲೆಬ್ರಿಟಿ ಪ್ಲಾಸ್ಟಿಕ್ ಸರ್ಜನ್! 2003 ರಲ್ಲಿ ನಿರಂಜನ್ ಸರ್ ಧಾರವಾಡಕ್ಕೆ ಬಂದಿಳಿದರು. ಅಲ್ಲಿ ವೀರೆಂದ್ರ ಹೆಗ್ಗಡೆಯವರು ಮೆಡಿಕಲ್ ಕಾಲೇಜು ಕಟ್ಟಿಸುವ ಕನಸು ಕಂಡಿದ್ದರು, ಅದಕ್ಕೆ ಕಸುವು ತುಂಬಲು, ಹೆಗಲು ನೀಡಲು ಡಾ.ನಿರಂಜನ್ ಬೇಕಿತ್ತು. ಇಂದು ಧಾರವಾಡದ ಸತ್ತೂರಿನ…
ಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಇವರ ಆಶ್ರಯದಲ್ಲಿ ಹಾಗೂ ಎಜೆ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ನಡೆಯಿತು. ದೇವಳದ ಪ್ರಧಾನ ಅರ್ಚಕ ಶ್ರೀ ರಾಮದಾಸ್ ಆಚಾರ್ಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀ ಸುರೇಂದ್ರ ಶೆಟ್ಟಿ ಕೋರಿಬೆಟ್ಟುಗುತ್ತು ಹಾಗೂ ಬ್ಲಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲಕೃಷ್ಣ, ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಫಲಿಗ, ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಹರೀಶ ಸಫಲಿಗ, ನಮ್ಮ ಜವನೆರ್ ಅಧ್ಯಕ್ಷ ಗುರುತಿಲಕ್, ನಿತ್ಯಾನಂದ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶನ್ ಶೆಟ್ಟಿ ಹಾಗೂ ಜಯರಾಮ ಪೊಸ್ರಾಲ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಶೆಟ್ಟಿ ಸಚ್ಚರಪರಾರಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು ಐವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ದಾನಿಗಳು ರಕ್ತದಾನ ಮಾಡಿದರು.
ಕಾವೂರು ಬೊಂದೇಲ್ ಮುಖ್ಯ ರಸ್ತೆಯ ಮೆಸ್ಕಾಂ ಕಚೇರಿಯ ಹಿಂಬದಿ ಇತ್ತೀಚೆಗೆ ಉದ್ಘಾಟನೆಗೊಂಡ ಗಿರೀಶ್ ಎಂ. ಶೆಟ್ಟಿ ಕಟೀಲು ಮಾಲಕತ್ವದ “ಶ್ರೀ ಹಿಲ್ ಸೈಡ್” ವಸತಿ ಸಂಕೀರ್ಣಕ್ಕೆ ಖ್ಯಾತ ಚಲನಚಿತ್ರ ನಟ ಸುದೀಪ್ ಅವರು ಆದಿತ್ಯವಾರ ಮಧ್ಯಾಹ್ನ ಭೇಟಿ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ಹಿಲ್ ಸೈಡ್ ಸಂಕೀರ್ಣದಲ್ಲಿ ವಿಶ್ರಾಂತಿ ಪಡೆದು, ವಸತಿ ಸಂಕೀರ್ಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾವೂರಿನ ಸುಂದರ ತಾಣದಲ್ಲಿ ಶ್ರೀ ಹಿಲ್ ಸೈಡ್ ನಿರ್ಮಾಣಗೊಂಡಿದ್ದು ಪೀಠೋಪಕರಣ, ಇಂಟೀರಿಯರ್, ವಿನ್ಯಾಸ, ವಾಸ್ತು ಶಿಲ್ಪದ ಬಗ್ಗೆ ಸುದೀಪ್ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ಗಿರೀಶ್ ಶೆಟ್ಟಿ ಅವರು ವಸತಿ ಸಂಕೀರ್ಣದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಂಬಯಿ ಉದ್ಯಮಿ ಆದರ್ಶ್ ಶೆಟ್ಟಿ ಹಾಲಾಡಿ ಜೊತೆಗಿದ್ದರು.
ಎಲ್ಲೂರು ಮಾಣಿರು ದಿವಂಗತ ಬಾಬು ಶೆಟ್ಟಿ ಮತ್ತು ಕಾಪು ಕಲ್ಯ ದೇವಸ್ಯ ಗೋಪಿ ಶೆಟ್ಟಿ ದಂಪತಿಗೆ ಪುತ್ರರಾಗಿ ಜನಿಸಿದ ವಸಂತ ಶೆಟ್ಟಿ ಅವರು ಬಾಲ್ಯದ ದಿನಗಳಿಂದಲೇ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದರು. ಎಲ್ಲೂರು ಅದಮಾರು ಮತ್ತು ಮೂಲ್ಕಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಶೆಟ್ಟರು ವಾಣಿಜ್ಯ ಶಾಸ್ತ್ರ ಪದವಿಧರರು. ಮುಂದೆ ಸಮಯ ಸಂಧರ್ಭ ಅನುಕೂಲ ಕೂಡಿ ಬರಲು ತನ್ನ ಶಿಕ್ಷಣ ಮುಂದುವರಿಸಿ ಧಾರವಾಡ ವಿಶ್ವವಿದ್ಯಾಲಯ ಮೂಲಕ ಸ್ನಾತಕೋತ್ತರ ಶಿಕ್ಷಣ ಪಡೆದು ಎಂ.ಕಾಂ. ಪದವಿ ಸಂಪಾದಿಸಿಕೊಂಡರು. ತನ್ನ ವಿದ್ಯಾರ್ಜನೆಯ ದಾಹ ಅಲ್ಲಿಗೆ ಕೊನೆಗೊಳ್ಳದೇ ಮುಂದೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಮೂಲಕ ಮೂರು ವರ್ಷಗಳ ಆರ್ಟಿಕಲ್ಸ್ ಅಧ್ಯಯನ ಮುಗಿಸಿದ ಬಳಿಕ ಎರ್ಮಾಳು, ಪಡುಬಿದ್ರಿ ಹಾಗೂ ಮೂಲ್ಕಿ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಅನುಭವ ಹೊಂದಿರುವ ವಸಂತ ಶೆಟ್ಟಿಯವರು ನಾಲ್ಕೂವರೆ ದಶಕಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಜೆಪ್ಪು ಬಂಟರ ಸಂಘದ ನೂತನ ಅಧ್ಯಕ್ಷರಾಗಿ…
ಬಾಲ್ಯವಿವಾಹ ಪದ್ಧತಿ ಇನ್ನೂ ರೂಢಿಯಲ್ಲಿದೆಯಾ? ಬಾಲ್ಯ ವಿವಾಹ ಪದ್ಧತಿ ಇವತ್ತಿಗೂ ಜೀವಂತವಾಗಿದೆಯಾ? ಬಾಲ್ಯ ವಿವಾಹಕ್ಕೆ ಅಕ್ಷಯ ತೃತೀಯಾ ವೇದಿಕೆ ಆಗಿದ್ದು ಹೌದಾ? ಬಾಲ್ಯ ವಿವಾಹ ನಿಷೇಧಿಸಲಾಗಿದ್ದು, ಕಠಿಣ ಕಾನೂನು ಇದೆ. ಈ ಪದ್ಧತಿ ನಿರ್ಬಂಧಿಸಿ ಅದಾಗಲೇ ಕೆಲವು ವರುಷಗಳೇ ಉರುಳಿ ಹೋಗಿದೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲವೆ? ಸಾಮೂಹಿಕ ವಿವಾಹ ಮತ್ತು ಅಕ್ಷಯ ತೃತೀಯದಂತಹ ಶುಭ ದಿನಗಳು ಶಾಲಾ ರಜಾ ಸಮಯದಲ್ಲಿ ಬರುವ ಕಾರಣ ದುರ್ಬಳಕೆ ಮಾಡಿಕೊಂಡು ಮಕ್ಕಳ ಪಾಲಕರು ಸಮಾಜದ ಹಾಗೂ ಸರ್ಕಾರದ ಕಣ್ಣು ತಪ್ಪಿಸಿ ಅಪ್ರಾಪ್ತ ಮಕ್ಕಳ ವಿವಾಹ ಸದ್ದಿಲ್ಲದೆ ನಡೆಸುತ್ತಿದ್ದು ತೆರೆಮರೆಯಲ್ಲಿ ಬಾಲ್ಯವಿವಾಹ ಪದ್ಧತಿ ನಡೆಯುತ್ತಿದೆ ಅನ್ನುವುದನ್ನು ಅರಗಿಸಿಕೊಳ್ಳಲು ನನಗಂತೂ ಕೆಲ ಹೊತ್ತು ಬೇಕಾಯಿತು. ಕೆಲ ದಿನಗಳ ಹಿಂದೆ ಒಂದಲ್ಲ ಎರಡಲ್ಲ 6 ದಿನಪತ್ರಿಕೆ ತಿರುವಿ ಹಾಕಿದರೂ ಎಲ್ಲದರಲ್ಲೂ ಶುಭ ಸಮಾರಂಭಕ್ಕೆ ಅತ್ಯಂತ ಪ್ರಶಸ್ತವೆನಿಸಿರುವ ಅಕ್ಷಯ ತೃತೀಯ ದಿನದಂದು ನಡೆಯಲಿರುವ ಸಹಸ್ರಾರು ಮದುವೆ ಸಮಾರಂಭಗಳಲ್ಲಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆ ಬಗ್ಗೆ ಕೆಲವು ರಾಜ್ಯ ಸರಕಾರಗಳು ಶಂಖಿಸಿದ್ದು, ಅದರಲ್ಲಿ…
ಪೋವಾಯಿ 2023-24 ಸಾಲಿನ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಪೊವಾಯಿಯ ಎಸ್ ಎಂ ಶೆಟ್ಟಿ ಜೂನಿಯರ್ ಕಾಲೇಜಿನ ವಿಧ್ಯಾರ್ಥಿನಿ ಜೀವಿಕಾ ವಿಶ್ವನಾಥ ಶೆಟ್ಟಿ ಪೇತ್ರಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 92 ಅಂಕಗಳೊಂದಿಗೆ ಕಾಲೇಜಿಗೆ ತೃತೀಯಳಾಗಿದ್ದಾಳೆ. ಚಿಣ್ಣರ ಬಿಂಬದ ಪ್ರತಿಭಾವಂತ ವಿಧ್ಯಾರ್ಥಿನಿ ಆಗಿರುವ ಜೀವಿಕಾ ರಂಗ ಕಲಾವಿದೆಯಾಗಿ, ನಿರೂಪಕಿಯಾಗಿ ಗುರುತಿಸಿಕೊಡಿರುವಳು. ನಾಟಕ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದಿರುವಳು. ಕರ್ನಾಟಕ ತುಳು ಅಕಾಡೆಮಿಯ ವತಿಯಿಂದ ವಿಷೇಶ ಬಾಲ ಕಲಾವಿದೆ ಪ್ರಶಸ್ತಿ, ಕನ್ನಡ ಕಲಾ ಕೇಂದ್ರದ ಸುವರ್ಣ ಶ್ರೀ ಪ್ರಶಸ್ತಿಗಳಿಗೆ ಭಾಜನಳಾಗಿರುವಳು. ಇದೀಗ ತುಳು ಲಿಪಿಯನ್ನೂ ಕಲಿಯುತ್ತಿರುವ ಜೀವಿಕಾ ಮೊದಲ ಪರೀಕ್ಷೆಯಲ್ಲಿಯೂ 92 ಅಂಕಗಳೊಂದಿಗೆ ತೇರ್ಗಡೆಯಾಗಿರುವಳು. ಶಿಸ್ತಿನ ವಿಧ್ಯಾರ್ಥಿ ಎಂಬ ಮೆಚ್ಚುಗೆಯೊಂದಿಗೆ ಕಾಲೇಜಿನಲ್ಲಿ ಕೊಡ ಮಾಡುವ 2022-23 ರ ಪ್ರಶಸ್ತಿಯನ್ನೂ ಪಡೆದಿರುವಳು.ಚಿಣ್ಣರ ಬಿಂಬದ ರೂವಾರಿ ಪ್ರಕಾಶ ಭಂಡಾರಿ, ಸುರೇಂದ್ರ ಕುಮಾರ ಹೆಗ್ಡೆ, ಗೀತಾ ಹೇರಳ ಸಂಸ್ಥೆಯ ಪರವಾಗಿ ಅಭಿನಂದಿಸಿರುವರು. ಈಕೆ ಲೇಖಕ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ…
‘ವ್ಯಕ್ತಿಯೊಬ್ಬ ದೊಡ್ಡ ಶಕ್ತಿಯಾಗುವುದು ತನ್ನ ಸಾಧನೆಯ ಬಲದಿಂದ. ಭಾಸ್ಕರ ರೈ ಕುಕ್ಕುವಳ್ಳಿಯವರು ಕೇವಲ ಯಕ್ಷಗಾನಕ್ಕಾಗಿ ಸೀಮಿತರಾದವರಲ್ಲ. ಅವರು ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಕವಿ ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ ವಿಶೇಷ ಸಾಧನೆ ಮಾಡಿದ ಸಾಹಸಿ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 30 ಕೃತಿಗಳನ್ನು ಹೊರ ತಂದ ಪ್ರಬುದ್ಧ ಲೇಖಕ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಮತ್ತು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಮತ್ತು ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಬಿಲ್ವಶ್ರೀ’ ಸಭಾಂಗಣದಲ್ಲಿ ಕ್ಷೇತ್ರದ ಪತ್ತನಾಜೆ ಉತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘವು ಏರ್ಪಡಿಸಿದ ಹುಟ್ಟೂರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ದೇಶ ವಿದೇಶಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ಕರಾವಳಿಯ ಸಾಂಸ್ಕೃತಿಕ ಹರಿಕಾರರಾಗಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾದ ಭಾಸ್ಕರ ರೈ ಅವರು ನಿರಂತರ ಕ್ರಿಯಾಶೀಲರಾಗಿರುವ ವಿಶಿಷ್ಟ ಪ್ರತಿಭಾವಂತ. ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಧೀಮಂತ’ ಎಂದವರು…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಮೇ 26 ರಂದು ಭಾನುವಾರ ಅಡ್ಯಾರ್ ನಲ್ಲಿರುವ “ಯಕ್ಷಧ್ರುವ ಪಟ್ಲ ಸಮಾರಂಭ 2024” ಜರಗಲಿದೆ. ಸಮಾರಂಭದಲ್ಲಿ ಬೆಳಿಗ್ಗೆ 7.45 ಕ್ಕೆ ಚೌಕಿಪೂಜೆ, ಅಬ್ಬರ ತಾಳ, ಬಳಿಕ ಮಹಿಳಾ ಯಕ್ಷಗಾನ ನಡೆಯಲಿದೆ. ಬಳಿಕ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಮುಂಬೈ ಹೇರಂಭ ಕೆಮಿಕಲ್ಸ್ ಇಂಡಸ್ಟ್ರಿಸ್ ಸಂಸ್ಥೆಯ ಸಿಎಂಡಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಶುಭಶಂಸನೆಗೈಯಲಿದ್ದಾರೆ. ಆರೋಗ್ಯ ಶಿಬಿರದ ಉದ್ಘಾಟನೆಯನ್ನು ಡಾ. ರವೀಶ್ ತುಂಗಾ ನೆರವೇರಿಸಲಿದ್ದಾರೆ. ರಕ್ತದಾನ ಶಿಬಿರವನ್ನು…
ಬ್ರಹ್ಮಾವರ ಮೇ 25: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಂಸ್ಥೆಯ ಶಿಕ್ಷಕವೃಂದ ಹಾಗೂ ಪೋಷಕರಿಗೆ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮದ ಕುರಿತು ಒರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಎಸಿಎನ ರಾಯಭಾರಿಗಳು ಕುಮಾರಿ ಅಬಿಧಾ ಹಾಗೂ ಕುಮಾರಿ ಸಿರೀನಾ ಸ್ಕರಿಯಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಮಕ್ಕಳು ದೇವರ ಅಮೂಲ್ಯ ಕೊಡುಗೆ, ಅವರು ಮುಗ್ಧರಾಗಿದ್ದು, ಅವರಿಗೆ ಉತ್ತಮ ಮೌಲ್ಯ ಶಿಕ್ಷಣದ ಜೊತೆಗೆ ಬಾಲ್ಯದಲ್ಲಿ ಎದುರಾಗುವ ಕಿರುಕುಳ, ದೌರ್ಜನ್ಯವನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೌಶಲ್ಯ ಜ್ಞಾನವನ್ನು ಪೋಷಕರು ಮತ್ತು ಶಿಕ್ಷಕರು ನೀಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಜಿ ಎಮ್ ಮೇಲೆ ನಂಬಿಕೆಯಿಟ್ಟು ನಿಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದ್ದೀರಿ, ಅವರ ಸಂಪೂರ್ಣ ಜವಾಬ್ದಾರಿ ನಮ್ಮದು. ಈ ವರ್ಷ ಶಾಲೆ 20ನೇ ಸಂಭ್ರಮವನ್ನು ಆಚರಿಸುತ್ತಿದ್ದು ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.…















