Author: admin

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರನ್ನು ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ‌, ಮಹಾ ನಿರ್ದೇಶಕರಾದ ತೋನ್ಸೆ ಆನಂದ್ ಎಂ ಶೆಟ್ಟಿ, ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ರವಿರಾಜ್ ಶೆಟ್ಟಿ, ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಪಾಲ್ಗೊಂಡಿದ್ದರು.

Read More

“ರಂಗಚಾವಡಿ” ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ ಫೇರ್‌ ಅಸೋಸಿಯೇಶನ್ ಸುರತ್ಕಲ್ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ ಹಾಗೂ ರಂಗಚಾವಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಖ್ಯಾತ ರಂಗಕರ್ಮಿ, ನಾಟಕ ರಚನೆಕಾರ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ದಂಪತಿಯನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರಿಗೆ “ರಂಗಚಾವಡಿ-2023” ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಹೇರಂಭ ಇಂಡಸ್ಟ್ರೀಸ್ ಮುಂಬಯಿ ಇದರ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರು, “ರಂಗಚಾವಡಿ ಸಂಘಟನೆ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ವಿಚಾರ. ಇಂದು ಸನ್ಮಾನಿಸಲ್ಪಟ್ಟಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸಾಧನೆ ಹಾಗೂ ಮಹಾ ವ್ಯಕ್ತಿತ್ವ ಮೆಚ್ಚುವಂತದ್ದು. ರಂಗಚಾವಡಿ ಮಂಗಳೂರು ಸಂಸ್ಥೆ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿದೆ. ಅತ್ಯಂತ ಯೋಗ್ಯ ವ್ಯಕ್ತಿಯನ್ನು ಸನ್ಮಾನಿಸಿರುವುದು ಖುಷಿ ತಂದಿದೆ. ದೇವರು ಕೊಡಿಯಾಲ್ ಬೈಲ್ ರ ಕಲೆಯನ್ನು ಇನ್ನಷ್ಟು ಆಶೀರ್ವದಿಸಲಿ” ಎಂದರು. ಸನ್ಮಾನ ಸ್ವೀಕರಿಸಿ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.) ಮಂಗಳೂರು ಇದರ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ ವಿಶ್ವ ಬಂಟರ ಸಮ್ಮೇಳನ -2023 ರ ಪ್ರಯುಕ್ತ ಅಕ್ಟೋಬರ್ 28 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾಕೂಟ” ಹಾಗೂ ಅಕ್ಟೋಬರ್ 29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ಕರಪತ್ರವನ್ನು ದುಬೈಯಲ್ಲಿ ಬಿಡುಗಡೆಗೊಳಿಸಲಾಯಿತು. ದುಬೈನಲ್ಲಿ ಅಕ್ಟೋಬರ್ 8 ರಂದು ನಡೆದ ತ್ರಿರಂಗ ಸಂಗಮ ಮುಂಬಯಿಯ ಪ್ರಥಮ ವಾರ್ಷಿಕೋತ್ಸವ ಮತ್ತು ಯಶಸ್ವಿ ಸಂಘಟಕ ಕರ್ನೂರು ಮೋಹನ್ ರೈಯವರ ಗಲ್ಫ್ ರಾಷ್ಟ್ರದ 50 ನೇ ಕಾರ್ಯಕ್ರಮ “ತ್ರಿರಂಗ ಸುವರ್ಣ ಮೋಹನ ಸಂಭ್ರಮ”ದ ಶುಭ ಸಮಾರಂಭದ ವೇದಿಕೆಯಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಯು.ಎ.ಇ.ಬಂಟ್ಸ್ ನ ಅಧ್ಯಕ್ಷರಾದ ಸರ್ವೋತಮ ಶೆಟ್ಟಿ ಹಾಗೂ…

Read More

ಕುಡುಂಬೂರು ಗುತ್ತು ಪಿಲಿಚಾಮುಂಡಿ, ಧೂಮಾವತಿ ಜಾರಂದಾಯ ಮತ್ತು ಪರಿವಾರ ದೈವಗಳಿಗೆ ಜ.19 ರಂದು ಧರ್ಮ ನೇಮವು ಸುರತ್ಕಲ್ ಸಮೀಪದ ಕೋಡಿಕೆರೆಯ ಕುಡುಂಬೂರು ಗುತ್ತು ದೈವಸ್ಥಾನ ವಠಾರದಲ್ಲಿ ಜರಗಲಿದೆ. ಜ.17 ರಂದು ಬೆಳಿಗ್ಗೆ 8.30 ಕ್ಕೆ ಉಗ್ರಾಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನಾಗದೇವರಿಗೆ ತಂಬಿಲ ಮತ್ತು ಆಶ್ಲೇಷಾ ಬಲಿ ನಡೆದಿದೆ. ಪಣಂಬೂರು ಮಾಗಣೆಯ ಕನಿಲ ದೈವಸ್ಥಾನದಲ್ಲಿ ನವಕ ಕಲಶ ಮತ್ತು ಕುಡುಂಬೂರು ಗುತ್ತು ದೈವದ ಚಾವಡಿಯಲ್ಲಿ ನವಕ ಕಲಶ ಹಾಗೂ ಶುದ್ಧ ಕಲಶ ಸೇವೆ ನಡೆಯಲಿದೆ. 18 ರಂದು ಭೋಜನ ಶಾಲೆಯಲ್ಲಿ ಶುದ್ಧ ಮುದ್ರಿಕೆ ಮಾಡಿ ಕೊಪ್ಪರಿಗೆ ಏರಿಸುವುದು, ಜ.19 ರಂದು ಬೆಳಗ್ಗೆ ಶುದ್ಧ ಕಳಶದ ಅನಂತರ 10 ಗಂಟೆಗೆ ಧರ್ಮದೈವಗಳ ಭಂಡಾರ ಏರಿಸುವುದು,12.30 ಕ್ಕೆ ಮಹಾ ಅನ್ನಸಂತರ್ಪಣೆ,1 ಗಂಟೆಗೆ ಹರಿಕಥೆ, ಸಂಜೆ 4 ಕ್ಕೆ ಮೂಲ ಮೈಸಂದಾಯ ದೈವದ ಧರ್ಮನೇಮ, ಸಂಜೆ 6.30 ಕ್ಕೆ ಕಾಂತೇರಿ ಧೂಮಾವತಿ ಬಂಟ, ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ಮತ್ತು ಬಬ್ಬರ್ಯ…

Read More

ಆಧುನಿಕ ಕಾಲಘಟ್ಟದಲ್ಲಿ ಬದಲಾವಣೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಾನೂನು ಪಾಲನೆ ಮಾಡುವುದು ಬಹು ಮುಖ್ಯವಾಗಿದೆ. ಬದಲಾದ ಆಧುನೀಕತೆಯಿಂದ ಕಾನೂನು ವ್ಯವಸ್ಥೆಯು ಡಿಜಿಟಲೀಕರಣ ತಂತ್ರಜ್ಞಾನಕ್ಕೆ ಕಾಲಿಟ್ಟಿದ್ದು ನ್ಯಾಯವನ್ನು ತ್ವರಿತವಾಗಿ ಜನರಿಗೆ ದೊರಕಲು ಸುಗುಮವಾಗಿ ಅನುಕೂಲ ಮಾಡಿಕೊಡುತ್ತದೆ. ಡಿಜಿಟಲೀಕರಣ ತಂತ್ರಜ್ಞಾನದ ಕಾನೂನು ವ್ಯವಸ್ಥೆಯ ಕಡೆಗೆ ವಕೀಲರು ಸಾಗುತ್ತಿದ್ದು, ಇ ಕೋರ್ಟ್‌ ಬಗ್ಗೆ ಮಹತ್ವದ ಕುರಿತು ಉಡುಪಿಯ ವಕೀಲರಾದ ಆರೂರು ಸುಕೇಶ್‌ ಶೆಟ್ಟಿ ವಿಶೇಷ ಬರಹವಾಗಿದೆ. ಡಿಜಿಟಲ್ ಕ್ರಾಂತಿಯಿಂದ ಕಾನೂನು ಪ್ರಕ್ರಿಯೆ ವೇಗವಾಗಿ ವಿಲೇವಾರಿ ಆಗುತ್ತಿದ್ದು, ವಕೀಲರಿಗೆ ಕಾರ್ಯ ನಿರ್ವಹಿಸಲು ಹೊಸ ವಿಷಯಗಳನ್ನು ಪಡೆಯಲು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಲು ತುಂಬಾ ಸಹಕಾರಿಯಾಗಿದೆ. ನ್ಯಾಯಾಲಯಗಳ ಡಿಜಿಟಲೀಕರಣವು ಇಕೋರ್ಟ್ಸ್ ಪ್ರೊಜೆಕ್ಟ್ ಅಡಿಯಲ್ಲಿ ಆನ್‌ಲೈನ್ ವೇದಿಕೆಯಾಗಿ ರಚಿಸಲಾಗಿದೆ. ಇದು ದೇಶದ ಎಲ್ಲಾ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ಆದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತಾರೆ. ಇಕೋರ್ಟ್ಸ್ ಯೋಜನೆಯನ್ನು ಇ ಸಮಿತಿ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಮತ್ತು ಜಸ್ಟೀಸ್ ಇಲಾಖೆಯ ಸಹಯೋಗದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ. ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣವು ಆಯಾ…

Read More

ಮಂಗಳೂರು : ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಆಯ್ಕೆಯಾಗಿದ್ದಾರೆ. ಇವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಮಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿದ್ದಾರೆ.

Read More

ಮೊನ್ನೆ ಸಂಬಂಧಿಕರೊಬ್ಬರು ತಾವು ಹೊಸತಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶಕ್ಕೆ ಆಹ್ವಾನ ಕೊಡಲು ಬಂದಿದ್ದರು. ಆಮಂತ್ರಣ ಪತ್ರಿಕೆ ನೋಡುವಾಗ ಮನೆಯೊಡತಿಯ ಮೊಗದಲ್ಲಿ ಸಣ್ಣ ಸಂಭ್ರಮ! ‘ಹೋ..! ಇದು ಪುತ್ತೂರು ಆಗಿಯೇ ಹೋಗಬೇಕು. ಹೇಗೂ ಹೋಗಲಿಕ್ಕುಂಟಲ್ಲ, ಹಾಗೆ ಒಂದು ಸೀರೆ ಖರೀದಿಸಿ ಬರಬೇಕು’ ಅವರ ಉವಾಚ! ಕಾರಿನ ಪೆಟ್ರೋಲ್ ಜೊತೆಗೆ ನಾರಿಯ ಸಾರಿಯ ಡಬ್ಬಲ್ ಖರ್ಚಿಗೆ ದಾರಿಯಾಯಿತು. ಆದರೆ ಅನಿರೀಕ್ಷಿತವಾಗಿ ಗೃಹಪ್ರವೇಶದವರಿಗೆ ಸೂತಕ ವಕ್ರಿಸಿ ಗೃಹಪ್ರವೇಶ ಮುಂದೂಡಲ್ಪಟ್ಟಿತು. ಸದ್ಯಕ್ಕೆ ಡಬ್ಬಲ್ ಉಳಿತಾಯ! ಇನ್ನೊಮ್ಮೆ ಮಕ್ಕಳಿಗೆ ರಜೆಯಿದ್ದ ಕಾರಣ ಧರ್ಮಸ್ಥಳ, ಸುಬ್ರಹ್ಮಣ್ಯ ಯಾತ್ರೆಗೆ ಹೋಗುವುದು ಅಂತ ನಿಶ್ಚಯವಾಯಿತು. ಹೇಗೂ ವಾಹನ ಮಾಡಿಕೊಂಡು ಹೋಗುವುದು ಪಕ್ಕದ ಮನೆಯವರೂ ಬರಲಿ ಎಂಬ ಉದಾರ ಭಾವ. ಜಾಮ್ ಟೈಟ್ ಆಗಿ ಮಿಸುಕಾಡಲೂ ಆಗದೆ ಕುಳಿತಾಗಲೂ ಹೀಗೆಲ್ಲ ಒಟ್ಟಿಗೆ ಹೋಗುವುದು ಒಂಥರಾ ಖುಷಿ ಅಲ್ವಾ ಅಂತ ಹೇಳಿಕೊಂಡು ಹೇಗೂ ಸಮಾಧಾನಿಸಿಕೊಂಡದ್ದಾಯಿತು. . ದಾರಿ ಮಧ್ಯೆ ಯಾರೋ ಒಬ್ಬರು ‘ನಾವು ಸೌತಡ್ಕಕ್ಕೆ ಕೂಡ ಹೋಗುವ, ಹೇಗೂ ಹೊರಟಿದ್ದೇವೆ ಅಲ್ವಾ’ ಅಂದ್ರು. ಸರಿ, ಇಲ್ಲೇ…

Read More

ಮರೆಯಲಾಗದ ಬಂಟ ಸಮಾಜ ಸೇವಾ ಸಾಧಕರು ಶೀರ್ಷಿಕೆಯಡಿ ಬಂಟರವಾಣಿಯಲ್ಲಿ ಪ್ರಕಟವಾದ ವಿವಿಧ ಕ್ಷೇತ್ರದಲ್ಲಿ ಮಿಂಚಿ‌ ಮರೆಯಾದ ಮಹನೀಯರ ಸಾಧನೆಯ ಹೆಜ್ಜೆಯ ಗುರುತುಗಳು ಅಳಿದರೂ ಉಳಿದವರು ಈ ಕೃತಿ. ಕಾಯ ಅಳಿದರೂ ಕಾಯಕದ ಕೀರ್ತಿ ಉಳಿಯುವುದು ‌ಹೇಗೆ?ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಂಬ‌ ಅರಿವನ್ನು ಈ ಕೃತಿ ಓದುಗರಿಗೆ ನೀಡಲಿದೆ. ಬಂಟ ಸಮುದಾಯದ ‌ಹಿರಿಯರು ನಮಗೆ ನಾವೇ ಶಿಲ್ಪಿಗಳು ಆದ ಪರಿಯನ್ನು, ಉನ್ನತಿಯ ಮೆಟ್ಟಿಲೇರಿದ ಶ್ರಮಜೀವಿಗಳ ಬದುಕಿನ ವಿವಿಧ ಮಗ್ಗುಲುಗಳ ಚಿತ್ರಣ ಈ ಕೃತಿಯಲ್ಲಿದೆ. ಸಮಾಜದ ಜನರ ಮನದಲ್ಲಿ ಕುಟುಂಬಿಕರ‌ ಹೃದಯದಲ್ಲಿ ಸದಾ ನೆಲೆ ನಿಂತ ಮಹಾ‌‌ ಸಾಧಕರ ಜೀವನದ ಎತ್ತರ‌ ಬಿತ್ತರಗಳನ್ನು ಅಕ್ಷರ ರೂಪಕ್ಕಿಳಿಸಿದಾಗ ಮೂಡಿ ಬಂದ ಕೃತಿ ಬಂಟರ ಸಂಘ ಮುಂಬಯಿ ಬಂಟರವಾಣಿಯ ಸಾಹಿತ್ಯ ಸಂಭ್ರಮದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಹಾಸ ಕೆ ಶೆಟ್ಟಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು. ಮರೆಯಾದ ಮಹನೀಯರ ಪರಿಚಯ ಲೇಖನ ರೂಪದಲ್ಲಿ ಬಂಟರವಾಣಿಯ ಕೈ ಸೇರಿದ್ದನ್ನು ಒಂದುಗೂಡಿಸಿ ಕೃತಿರೂಪ ಕೊಟ್ಟು ಬಂಟರ ಸಂಘ ಮುಂಬಯಿ ಈ ಕೃತಿಯನ್ನು ಪ್ರಕಾಶಿಸಿದೆ.…

Read More

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಧಾನಸಭಾ ಚುನಾವಣೆಗೆ ಅರ್ಜಿ ಆಹ್ವಾನಿಸಿದ್ದ ಮಾದರಿಯಲ್ಲಿಯೇ ವಿಧಾನ ಪರಿಷತ್ತಿಗೆ ನಡೆಯಲಿರುವ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ವರ್ಧಾ ಆಕಾಂಕ್ಷಿಗಳು ಕೆಪಿಸಿಸಿಗೆ ಎರಡು ಲಕ್ಷ ರೂಪಾಯಿ ಮತ್ತು ಅರ್ಜಿ ಶುಲ್ಕ ಐದು ಸಾವಿರ ರೂ ಪಾವತಿಸಬೇಕಿದೆ. ಕೆಪಿಸಿಸಿಗೆ ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ. ಪಕ್ಷದೊಳಗೆ ಆಕಾಂಕ್ಷಿಗಳ ನಡುವೆ ಭಾರೀ ಸ್ವರ್ಧೆ ಏರ್ಪಟ್ಟಿದ್ದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ವ್ಯಾಪ್ತಿಯನ್ನು ಹೊಂದಿರುವ ನೈಋತ್ಯ ಪದವೀಧರರ ಕ್ಷೇತ್ರದಿಂದ ಮೂಲತಃ ಕೋಡಿಂಬಾಡಿಯ ಮಠಂತಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಹರಿಪ್ರಸಾದ್ ರೈ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೆಚ್. ಪಿ. ಆರ್. ಫೌಂಡೇಶನ್ ಮುಖ್ಯಸ್ಥರಾಗಿರುವ ಹರಿಪ್ರಸಾದ್ ರೈ ಅವರು ಪುತ್ತೂರು, ಮಂಗಳೂರು, ಸೊರಬ ಮತ್ತು ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.…

Read More

ಪ್ರತಿಯೊಬ್ಬರೂ ಸೇವಕರಾಗಿದ್ದು, ಕೆಲಸ ಕಾರ್ಯಕ್ಕಾಗಿ ಸಮಿತಿಗಳನ್ನು ಮಾಡಲಾಗಿದೆ. ಎಲ್ಲರೂ ನಮ್ಮವರೆಂದು ಭಾವಿಸಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ಸೇವಕತನದ ರುಚಿ ಲಕ್ಷ್ಮೀ ಹನುಮಂತನಿಗೆ ಮಾತ್ರ ಗೊತ್ತು. ಎಲ್ಲರೂ ಒಂದಾಗಿ ರಥವನ್ನು ಎಳೆಯುವ ಕೆಲಸವಾಗಲಿ. ಗ್ರಾಮ ಗ್ರಾಮದಲ್ಲಿ ಜಾಗೃತಿಯ ಕಾರ್ಯ ರಥೋತ್ಸವದ ಮೂಲಕ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಜ.14 ರಂದು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಫೆ.18 ಮತ್ತು ಫೆ.19 ರಂದು ನಡೆಯುವ ಶ್ರೀ ಸಂಸ್ಥಾನದ ವಾರ್ಷಿಕ ಉತ್ಸವವಾದ ತುಳುನಾಡ ಜಾತ್ರೆ, ಶ್ರೀ ಒಡಿಯೂರು ರಥೋತ್ಸವದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು. ಜವಾಬ್ದಾರಿಗಳನ್ನು ಸೇವಾ ಮನೋಭಾವದಲ್ಲಿ ನಡೆಸುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕು. ಜಾತ್ರೆ ಯಾತ್ರೆಯಲ್ಲಿ ತುಳುವಿನ ಮಂಥನ ನಡೆಯಲಿದೆ. ಪ್ರತಿಯೊಬ್ಬರು ಸಹಾಯಕರಾದಾಗ ಉತ್ತಮ ರೀತಿಯ ಕಾರ್ಯಕ್ರಮ ನಡೆಯಲು ಸಾಧ್ಯ. ರಾಮಾಯಣದ ಜೀವಾಳ ಹನುಮಂತನಾಗಿದ್ದು, ಸೇವೆಗೆ ಇನ್ನೊಂದು ಹೆಸರಾಗಿದ್ದಾನೆ. ರಾಮಾಯಣ, ಮಹಾಭಾರತ ನಮ್ಮ ಬದುಕನ್ನು ಉತ್ತಮವಾಗಿಸುತ್ತದೆ. ರಾಮಮಂದಿರ ನಿರ್ಮಾಣ ರಾಜಕೀಯವಲ್ಲ.…

Read More